👍 ನಮ್ಮ ಬದುಕು ನಮಗೆ🌺
👉 ಅದೊಂದು ಬೆಟ್ಟದ ದಾರಿ. ದಾರಿಯ ಪಕ್ಕದಲ್ಲಿ ದೊಡ್ಡ ದೊಡ್ಡ ಬಂಡೆಗಳು. ಒಂದು ಬಂಡೆಯ ಸುತ್ತ ನೂರಾರು ಹೂವಿನ ಗಿಡಗಳು, ಬಳ್ಳಿಗಳು. ಅದಾರು ಈ ಗಿಡಗಳಿಗೆ ಬೀಜ ಹಾಕಿದ್ದರೋ. ಹೂ ಅರಳುವ ದಿನಗಳು ಬಂದಾಗ ಬಂಡೆಯನ್ನಪ್ಪಿಕೊಂಡು ಹೂವಿನ ಬಳ್ಳಿಗಳು ಕುಣಿಯುತ್ತಿದ್ದವು.
👉 ದಾರಿಹೋಕರಿಗೆ ಅವುಗಳನ್ನು ಕಂಡರೆ ತುಂಬ ಸಂತೋಷ. ಕೆಲವರು ಹೂಗಳನ್ನು ಆಯ್ದುಕೊಂಡು ಹೋಗುತ್ತಿದ್ದರು. ಹೂಗಳಿಗೆ ತಮ್ಮ ಬಣ್ಣಗಳ ಬಗ್ಗೆ, ಸುಗಂಧದ ಬಗ್ಗೆ ಬಲು ಹೆಮ್ಮೆ. ಅದಲ್ಲದೇ ಬಂಡೆಯ ನೀರಸ ಬದುಕಿನ ಬಗ್ಗೆ ತಾತ್ಸಾರ. ಬಂಡೆ ಕುರಿತು ಹೀಯಾಳಿಕೆಯ ಮಾತುಗಳನ್ನಾಡುತ್ತಿದ್ದವು.
👉 ಏನು ನಿನ್ನ ಹಣೆಯಬರಹ. ಹುಟ್ಟಿದಾಗಿನಿಂದ ಹೀಗೆಯೇ ಬಿದ್ದುಕೊಂಡಿದ್ದಿ. ಒಂದಿಂಚು ಬೆಳೆಯಲಿಲ್ಲ, ಯಾರಿಗೂ ಸಂತೋಷ, ಸುಖ ಕೊಡಲಿಲ್ಲ. ನಿನ್ನ ಜೀವನಕ್ಕೆ ಏನಾದರೂ ಅರ್ಥವಿದೆಯೇ. ಬಂಡೆ ಬಲು ಬೇಜಾರಿನಿಂದ ಮನಸ್ಸು ಕುಗ್ಗಿಸಿಕೊಂಡು ಒಳಗೊಳಗೇ ನೋಯುತ್ತಿತ್ತು. ಕಾಲ ಹಾಗೆಯೇ ಇರುವುದಿಲ್ಲ.
👉 ಬೆಟ್ಟದ ಹತ್ತಿರದ ಊರಿನಲ್ಲಿ ಶ್ರೀಮಂತರೊಬ್ಬರು ಇದ್ದರು. ದೇವಸ್ಥಾನ ಕಟ್ಟಿಸಲು ತೀರ್ಮಾನಿಸಿದರು. ಕಟ್ಟಡದ ಕೆಲಸ ಭರದಿಂದ ಸಾಗಿತು. ಅವರೊಬ್ಬ ಪ್ರಖ್ಯಾತ ಶಿಲ್ಪಿಯನ್ನು ಗೊತ್ತುಮಾಡಿ ವಿಗ್ರಹ ನಿರ್ಮಿಸಲು ಕೇಳಿದರು. ಆತ ಬೆಟ್ಟವನ್ನೆಲ್ಲ ಸುತ್ತಾಡಿ ಬಂದ.
👉 ಅವನಿಗೆ ಹೂವಿನ ಗಿಡಗಳ ನಡುವೆ ಕಾಲುಚಾಚಿ ಬಿದ್ದಿದ್ದ ಈ ಬಂಡೆ ಇಷ್ಟವಾಯಿತು. ಸರಿ, ಜನರನ್ನು ಕರೆದುಕೊಂಡು ಬಂದು ಬಂಡೆಯನ್ನು ಅಲ್ಲಿಂದ ಎತ್ತಿದರು. ಹೀಗೆ ಎತ್ತುವಾಗ ಸುತ್ತಲಿದ್ದ ಹೂವಿನ ಗಿಡ ಬಳ್ಳಿಗಳೆಲ್ಲ ಜನರ ಕಾಲಿನ ತುಳಿತಕ್ಕೆ ಸಿಕ್ಕು ನುಗ್ಗಾಗಿ ಹೋದವು. ಅಳಿದುಳಿದ ಕೆಲ ಗಿಡಬಳ್ಳಿಗಳು ಮಳೆಗಾಲದಲ್ಲಿ ಮತ್ತೆ ಚಿಗುರಿಕೊಂಡವು.
👉 ಶಿಲ್ಪಿ ಕೆತ್ತನೆ ಪ್ರಾರಂಭಿಸಿದ. ಬಂಡೆ ನರಳಿತು. ಇಷ್ಟು ಶತಮಾನಗಳ ಕಾಲ ಹಾಗೆಯೇ ಬಿದ್ದುಕೊಂಡಿದ್ದ ಬಂಡೆಗೆ ಉಳಿ, ಸುತ್ತಿಗೆಗಳ ಹೊಡೆತ ವಿಪರೀತ ನೋವು ಕೊಟ್ಟಿತು. ಅಯ್ಯೋ ಈ ಹೊಡೆತಗಳಿಗಿಂತ ಆ ಗಿಡಬಳ್ಳಿಗಳ ಟೀಕೆಯ ಮಾತುಗಳೇ ಚೆನ್ನಾಗಿತ್ತಲ್ಲ ಎನ್ನಿಸಿತು. ತಾನು ಪಡೆಯುವ ಹೊಡೆತಗಳಿಗೆ ಮಿತಿಯೇ ಇಲ್ಲ ಎಂದು ಕೊರಗಿತು.
👉 ಅಂತೂ ಒಂದು ದಿನ ಈ ನೋವಿಗೆ ಮುಕ್ತಿ ದೊರಕಿತು. ನಂತರ ಅದಕ್ಕೆ ರಾಜೋಪಚಾರ. ಅದನ್ನು ಯಾರೋ ನೀರಿನಿಂದ ಚೆನ್ನಾಗಿ ತೊಳೆದರು, ಕೆಲವರು ಎಣ್ಣೆ ಹಾಕಿ ಮಾಲೀಶು ಮಾಡಿದರು. ಕೆಲದಿನ ನೀರಿನಲ್ಲಿ ಮುಳುಗಿಸಿ ತಂಪು ಮಾಡಿ, ನಂತರ ಧಾನ್ಯಗಳಲ್ಲಿ ಮುಳುಗಿಸಿಟ್ಟರು.
👉 ಒಂದು ವಿಶೇಷ ದಿನ ದೇವರ ವಿಗ್ರಹವಾಗಿ ನಿಂತ ಬಂಡೆಯನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ದೇವಸ್ಥಾನದ ಪೀಠದ ಮೇಲಿಟ್ಟರು. ಅದಕ್ಕೆ ನೀರಿನ, ಹಾಲಿನ, ಗಂಧದ ಎಳೆನೀರಿನ, ಜೇನುತುಪ್ಪದ, ಸಕ್ಕರೆಯ, ಹಣ್ಣಿನ ಅಭಿಷೇಕ. ಅದಾದ ನಂತರ ಬಂಗಾರದ ಆಭರಣಗಳನ್ನು ತೊಡಿಸಿದರು.
👉 ಚೆಂದದ ಹೂಗಳ ಹಾರಗಳನ್ನು ಹಾಕಿದರು. ಅತ್ಯಂತ ಸುಂದರವಾದ ಹೂಗಳನ್ನು ವಿಗ್ರಹದ ಪಾದದಲ್ಲಿಟ್ಟರು. ಆ ಹೂಗಳು ತಲೆ ಎತ್ತಿ ನೋಡಿದವು. ಅದೇ, ತಮ್ಮ ಪಕ್ಕದಲ್ಲಿದ್ದ ಬಂಡೆ ಅದು. ತಾವು ಟೀಕೆ ಮಾಡುತ್ತಿದ್ದ, ಯಾರಿಗೂ ಸಂತೋಷ ನೀಡುವುದಿಲ್ಲ ಎಂದುಕೊಂಡಿದ್ದ ಬಂಡೆ!
👉 ಆ ಬಂಡೆಯ ಮುಂದೆ ತಮ್ಮ ಅಪೇಕ್ಷೆಗಳನ್ನು ಪೂರೈಸಿಕೊಳ್ಳಲು ಸಾವಿರಾರು ಜನ ಕೈಮುಗಿದುಕೊಂಡು ನಿಂತಿದ್ದಾರೆ! ದೇವರಾದ ಬಂಡೆ ಹೇಳಿತು, ಬೇಜಾರು ಮಾಡಿಕೊಳ್ಳಬೇಡಿ. ಯಾರಿಗೆ ಯಾವಾಗ ಯಾವ ಭಾಗ್ಯ ತೆರೆದುಕೊಳ್ಳುತ್ತದೆ ಎಂಬುದನ್ನು ಹೇಳುವುದು ಅಸಾಧ್ಯ. ನಾನು ಶತಮಾನಗಳ ಕಾಲ ಅಪ್ರಯೋಜಕವಾಗಿ ಬಿದ್ದಿದ್ದೆ.
👉 ಇನ್ನು ಮುಂದೆ ಶತಮಾನಗಳ ಕಾಲ ಜನರ ಶ್ರದ್ಧಾಕೇಂದ್ರವಾಗಿ ನಿಲ್ಲುತ್ತೇನೆ. ನಿಮ್ಮದು ಎಂದಿದ್ದರೂ ಒಂದು ದಿನದ ಬದುಕು. ಆದರೆ, ಆ ಒಂದು ದಿನವನ್ನೇ ಸಂಭ್ರಮದಿಂದ ಮತ್ತೊಬ್ಬರನ್ನು ಟೀಕಿಸದೇ ಬದುಕಿದರೆ ಅದು ಶತಮಾನದ ಬದುಕಿನಷ್ಟೇ ಸಾರ್ಥಕ.
👉 ನಮ್ಮ ಬದುಕನ್ನು ಮತ್ತೊಬ್ಬರ ಬದುಕಿನೊಡನೆ ಹೋಲಿಸಿ ಹಿಗ್ಗುವ, ಕುಗ್ಗುವ ಅವಶ್ಯಕತೆ ಇಲ್ಲ. ನಮ್ಮ ಜೀವನ ನಮಗೆ. ಅದನ್ನು ಸಂಭ್ರಮದಿಂದ ಇರುವಷ್ಟರಲ್ಲೆೀ ಸಂತೋಷದಿಂದ ಎಲ್ಲರೊಡನೆ ಹಂಚಿ ಬದುಕಿದಾಗ ಸಾರ್ಥಕ ಬದುಕಾಗುತ್ತದೆ.
🌺ನಿರೂಪಣೆ: ಡಾ. ಗುರುರಾಜ ಕರ್ಜಗಿ, ‘ಕರುಣಾಳು ಬಾ ಬೆಳಕೆ’,
➡ವಿಷಯ ಸಂಗ್ರಹ:-->ಪ್ರಜಾ ವಾಣಿ📰
👉 ಅದೊಂದು ಬೆಟ್ಟದ ದಾರಿ. ದಾರಿಯ ಪಕ್ಕದಲ್ಲಿ ದೊಡ್ಡ ದೊಡ್ಡ ಬಂಡೆಗಳು. ಒಂದು ಬಂಡೆಯ ಸುತ್ತ ನೂರಾರು ಹೂವಿನ ಗಿಡಗಳು, ಬಳ್ಳಿಗಳು. ಅದಾರು ಈ ಗಿಡಗಳಿಗೆ ಬೀಜ ಹಾಕಿದ್ದರೋ. ಹೂ ಅರಳುವ ದಿನಗಳು ಬಂದಾಗ ಬಂಡೆಯನ್ನಪ್ಪಿಕೊಂಡು ಹೂವಿನ ಬಳ್ಳಿಗಳು ಕುಣಿಯುತ್ತಿದ್ದವು.
👉 ದಾರಿಹೋಕರಿಗೆ ಅವುಗಳನ್ನು ಕಂಡರೆ ತುಂಬ ಸಂತೋಷ. ಕೆಲವರು ಹೂಗಳನ್ನು ಆಯ್ದುಕೊಂಡು ಹೋಗುತ್ತಿದ್ದರು. ಹೂಗಳಿಗೆ ತಮ್ಮ ಬಣ್ಣಗಳ ಬಗ್ಗೆ, ಸುಗಂಧದ ಬಗ್ಗೆ ಬಲು ಹೆಮ್ಮೆ. ಅದಲ್ಲದೇ ಬಂಡೆಯ ನೀರಸ ಬದುಕಿನ ಬಗ್ಗೆ ತಾತ್ಸಾರ. ಬಂಡೆ ಕುರಿತು ಹೀಯಾಳಿಕೆಯ ಮಾತುಗಳನ್ನಾಡುತ್ತಿದ್ದವು.
👉 ಏನು ನಿನ್ನ ಹಣೆಯಬರಹ. ಹುಟ್ಟಿದಾಗಿನಿಂದ ಹೀಗೆಯೇ ಬಿದ್ದುಕೊಂಡಿದ್ದಿ. ಒಂದಿಂಚು ಬೆಳೆಯಲಿಲ್ಲ, ಯಾರಿಗೂ ಸಂತೋಷ, ಸುಖ ಕೊಡಲಿಲ್ಲ. ನಿನ್ನ ಜೀವನಕ್ಕೆ ಏನಾದರೂ ಅರ್ಥವಿದೆಯೇ. ಬಂಡೆ ಬಲು ಬೇಜಾರಿನಿಂದ ಮನಸ್ಸು ಕುಗ್ಗಿಸಿಕೊಂಡು ಒಳಗೊಳಗೇ ನೋಯುತ್ತಿತ್ತು. ಕಾಲ ಹಾಗೆಯೇ ಇರುವುದಿಲ್ಲ.
👉 ಬೆಟ್ಟದ ಹತ್ತಿರದ ಊರಿನಲ್ಲಿ ಶ್ರೀಮಂತರೊಬ್ಬರು ಇದ್ದರು. ದೇವಸ್ಥಾನ ಕಟ್ಟಿಸಲು ತೀರ್ಮಾನಿಸಿದರು. ಕಟ್ಟಡದ ಕೆಲಸ ಭರದಿಂದ ಸಾಗಿತು. ಅವರೊಬ್ಬ ಪ್ರಖ್ಯಾತ ಶಿಲ್ಪಿಯನ್ನು ಗೊತ್ತುಮಾಡಿ ವಿಗ್ರಹ ನಿರ್ಮಿಸಲು ಕೇಳಿದರು. ಆತ ಬೆಟ್ಟವನ್ನೆಲ್ಲ ಸುತ್ತಾಡಿ ಬಂದ.
👉 ಅವನಿಗೆ ಹೂವಿನ ಗಿಡಗಳ ನಡುವೆ ಕಾಲುಚಾಚಿ ಬಿದ್ದಿದ್ದ ಈ ಬಂಡೆ ಇಷ್ಟವಾಯಿತು. ಸರಿ, ಜನರನ್ನು ಕರೆದುಕೊಂಡು ಬಂದು ಬಂಡೆಯನ್ನು ಅಲ್ಲಿಂದ ಎತ್ತಿದರು. ಹೀಗೆ ಎತ್ತುವಾಗ ಸುತ್ತಲಿದ್ದ ಹೂವಿನ ಗಿಡ ಬಳ್ಳಿಗಳೆಲ್ಲ ಜನರ ಕಾಲಿನ ತುಳಿತಕ್ಕೆ ಸಿಕ್ಕು ನುಗ್ಗಾಗಿ ಹೋದವು. ಅಳಿದುಳಿದ ಕೆಲ ಗಿಡಬಳ್ಳಿಗಳು ಮಳೆಗಾಲದಲ್ಲಿ ಮತ್ತೆ ಚಿಗುರಿಕೊಂಡವು.
👉 ಶಿಲ್ಪಿ ಕೆತ್ತನೆ ಪ್ರಾರಂಭಿಸಿದ. ಬಂಡೆ ನರಳಿತು. ಇಷ್ಟು ಶತಮಾನಗಳ ಕಾಲ ಹಾಗೆಯೇ ಬಿದ್ದುಕೊಂಡಿದ್ದ ಬಂಡೆಗೆ ಉಳಿ, ಸುತ್ತಿಗೆಗಳ ಹೊಡೆತ ವಿಪರೀತ ನೋವು ಕೊಟ್ಟಿತು. ಅಯ್ಯೋ ಈ ಹೊಡೆತಗಳಿಗಿಂತ ಆ ಗಿಡಬಳ್ಳಿಗಳ ಟೀಕೆಯ ಮಾತುಗಳೇ ಚೆನ್ನಾಗಿತ್ತಲ್ಲ ಎನ್ನಿಸಿತು. ತಾನು ಪಡೆಯುವ ಹೊಡೆತಗಳಿಗೆ ಮಿತಿಯೇ ಇಲ್ಲ ಎಂದು ಕೊರಗಿತು.
👉 ಅಂತೂ ಒಂದು ದಿನ ಈ ನೋವಿಗೆ ಮುಕ್ತಿ ದೊರಕಿತು. ನಂತರ ಅದಕ್ಕೆ ರಾಜೋಪಚಾರ. ಅದನ್ನು ಯಾರೋ ನೀರಿನಿಂದ ಚೆನ್ನಾಗಿ ತೊಳೆದರು, ಕೆಲವರು ಎಣ್ಣೆ ಹಾಕಿ ಮಾಲೀಶು ಮಾಡಿದರು. ಕೆಲದಿನ ನೀರಿನಲ್ಲಿ ಮುಳುಗಿಸಿ ತಂಪು ಮಾಡಿ, ನಂತರ ಧಾನ್ಯಗಳಲ್ಲಿ ಮುಳುಗಿಸಿಟ್ಟರು.
👉 ಒಂದು ವಿಶೇಷ ದಿನ ದೇವರ ವಿಗ್ರಹವಾಗಿ ನಿಂತ ಬಂಡೆಯನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ದೇವಸ್ಥಾನದ ಪೀಠದ ಮೇಲಿಟ್ಟರು. ಅದಕ್ಕೆ ನೀರಿನ, ಹಾಲಿನ, ಗಂಧದ ಎಳೆನೀರಿನ, ಜೇನುತುಪ್ಪದ, ಸಕ್ಕರೆಯ, ಹಣ್ಣಿನ ಅಭಿಷೇಕ. ಅದಾದ ನಂತರ ಬಂಗಾರದ ಆಭರಣಗಳನ್ನು ತೊಡಿಸಿದರು.
👉 ಚೆಂದದ ಹೂಗಳ ಹಾರಗಳನ್ನು ಹಾಕಿದರು. ಅತ್ಯಂತ ಸುಂದರವಾದ ಹೂಗಳನ್ನು ವಿಗ್ರಹದ ಪಾದದಲ್ಲಿಟ್ಟರು. ಆ ಹೂಗಳು ತಲೆ ಎತ್ತಿ ನೋಡಿದವು. ಅದೇ, ತಮ್ಮ ಪಕ್ಕದಲ್ಲಿದ್ದ ಬಂಡೆ ಅದು. ತಾವು ಟೀಕೆ ಮಾಡುತ್ತಿದ್ದ, ಯಾರಿಗೂ ಸಂತೋಷ ನೀಡುವುದಿಲ್ಲ ಎಂದುಕೊಂಡಿದ್ದ ಬಂಡೆ!
👉 ಆ ಬಂಡೆಯ ಮುಂದೆ ತಮ್ಮ ಅಪೇಕ್ಷೆಗಳನ್ನು ಪೂರೈಸಿಕೊಳ್ಳಲು ಸಾವಿರಾರು ಜನ ಕೈಮುಗಿದುಕೊಂಡು ನಿಂತಿದ್ದಾರೆ! ದೇವರಾದ ಬಂಡೆ ಹೇಳಿತು, ಬೇಜಾರು ಮಾಡಿಕೊಳ್ಳಬೇಡಿ. ಯಾರಿಗೆ ಯಾವಾಗ ಯಾವ ಭಾಗ್ಯ ತೆರೆದುಕೊಳ್ಳುತ್ತದೆ ಎಂಬುದನ್ನು ಹೇಳುವುದು ಅಸಾಧ್ಯ. ನಾನು ಶತಮಾನಗಳ ಕಾಲ ಅಪ್ರಯೋಜಕವಾಗಿ ಬಿದ್ದಿದ್ದೆ.
👉 ಇನ್ನು ಮುಂದೆ ಶತಮಾನಗಳ ಕಾಲ ಜನರ ಶ್ರದ್ಧಾಕೇಂದ್ರವಾಗಿ ನಿಲ್ಲುತ್ತೇನೆ. ನಿಮ್ಮದು ಎಂದಿದ್ದರೂ ಒಂದು ದಿನದ ಬದುಕು. ಆದರೆ, ಆ ಒಂದು ದಿನವನ್ನೇ ಸಂಭ್ರಮದಿಂದ ಮತ್ತೊಬ್ಬರನ್ನು ಟೀಕಿಸದೇ ಬದುಕಿದರೆ ಅದು ಶತಮಾನದ ಬದುಕಿನಷ್ಟೇ ಸಾರ್ಥಕ.
👉 ನಮ್ಮ ಬದುಕನ್ನು ಮತ್ತೊಬ್ಬರ ಬದುಕಿನೊಡನೆ ಹೋಲಿಸಿ ಹಿಗ್ಗುವ, ಕುಗ್ಗುವ ಅವಶ್ಯಕತೆ ಇಲ್ಲ. ನಮ್ಮ ಜೀವನ ನಮಗೆ. ಅದನ್ನು ಸಂಭ್ರಮದಿಂದ ಇರುವಷ್ಟರಲ್ಲೆೀ ಸಂತೋಷದಿಂದ ಎಲ್ಲರೊಡನೆ ಹಂಚಿ ಬದುಕಿದಾಗ ಸಾರ್ಥಕ ಬದುಕಾಗುತ್ತದೆ.
🌺ನಿರೂಪಣೆ: ಡಾ. ಗುರುರಾಜ ಕರ್ಜಗಿ, ‘ಕರುಣಾಳು ಬಾ ಬೆಳಕೆ’,
➡ವಿಷಯ ಸಂಗ್ರಹ:-->ಪ್ರಜಾ ವಾಣಿ📰
No comments:
Post a Comment