Wednesday, 1 February 2017

ಜೀವನದಲ್ಲಿ ಸಾಮರಸ್ಯವನ್ನು ಅರಿತುಕೊಳ್ಳಿ(osho)

 *ಜೀವನದಲ್ಲಿ ಸಾಮರಸ್ಯವನ್ನು ಅರಿತುಕೊಳ್ಳಿ*
[osho]


*ಸದಾ ಸಾಮರಸ್ಯತೆಯಲ್ಲಿ ನಿನ್ನಿಂದ ಇರಲಾಗುವುದಿಲ್ಲ . ಸಾಮರಸ್ಯತೆಯ ಅರಿವು ಆಗಬೇಕೆಂದರೆ , ಆಗಾಗ ಸಾಮರಸ್ಯತೆಯ ಹಿಂದೆ ಪುನಃ ಪುನಃ ಅಸಾಮರಸ್ಯ ಬರುತ್ತಿರಬೇಕು . ಸಂತೋಷದ ಹಿಂದೆ ಅಸಂತೋಷ , ಅಸಂತೋಶದ ಹಿಂದೆ ಸಂತೋಷ ಬರುತ್ತಿರಬೇಕು . ಪ್ರತಿಯೊಂದು ಸಂತೋಷದಲ್ಲೂ ಅದರದ್ದೇ ಆದ ನೋವಿದೆ . ಅದೇ ತರಹ ಪ್ರತಿ ನೋವಿನಲ್ಲೂ ಸಂತೋಷವಿದೆ* .


*ಅಖಂಡತೆಯನ್ನು ಅದರ ನೋವು ನಲಿವುಗಳೆಲ್ಲದರ ಸಮೇತ ವಾಗಿ ಪೂರ್ತಿಯಾಗಿ ಸ್ವೀಕರಿಸು. ಅಸಾಧ್ಯಕ್ಕಾಗಿ ಹಾತೊರೆಯಬೇಡ . ಜೀವನ ಪೂರ್ತಿ ಸಂತೋಷವೇ ಇರಬೇಕು , ನೋವು ದುಃಖ ಇರಬಾರದು ಎಂಬ ಆಸೆಯಲ್ಲಿ ಆಕಾಂಕ್ಷೆಯಲ್ಲಿ ತೊಳಲಾಡಬೇಡ . ಆನಂದ ಮಾತ್ರ ಇರಲು ಸಾಧ್ಯವಿಲ್ಲ . ಅದಕ್ಕೆ ವಿಪರೇತವಾದುದೂ ಇರಬೇಕಾಗುವುದು . ವ್ಯಸನ ಕಪ್ಪು ಹಲಗೆಯಾದಾಗಲೇ ಹರ್ಷ ಎಂಬುದು ಸ್ಪಷ್ಟವಾಗಿ ಹೊಳೆಯುವುದು , ಕಾರ್ಗತ್ತಲ ಆಗಸದಲ್ಲಿ ನಕ್ಷತ್ರಗಳು ಹೊಳೆದಂತೆ , ಕತ್ತಲು ದಟ್ಟವಾದಷ್ಟೂ ನಕ್ಷತ್ರಗಳು ಮಿರಮಿರನೆ ಮಿಂಚುವುದು . ಹಗಲಿನಲ್ಲಿ ನಕ್ಷತ್ರಗಳು ಮಾಯವಾಗಿಬಿಡುವುದಿಲ್ಲ . ಅವು ಅಗೋಚರವಾಗಿ ಇರುತ್ತವೆಯಷ್ಟೇ*




*ಸಾವೇ ಇಲ್ಲದ ಜೀವನವನ್ನು ಊಹಿಸಿಕೋ , ಆಗ ಅದು ತಡೆಯಲಾಗದ ಯಾತನೆ , ಅಸಹನೀಯ ಇರುವಿಕೆ ಆಗುವುದು . ಸಾವು ಇಲ್ಲದೆ ಜೀವಿಸುವುದು ಅಸಾಧ್ಯವಾಗುವುದು . ಸಾವು ಜೀವನವನ್ನು ರೂಪಿಸುತ್ತದೆ . ಅದಕ್ಕೊಂದು ತೀಕ್ಷ್ಣತೆಯನ್ನು ತೀವ್ರತೆಯನ್ನು ಕೊಡುತ್ತದೆ . ಜೀವನ ಕಳೆದು ಹೋಗುತ್ತಿದೆ ಆದ್ದರಿಂದ ಪ್ರತಿ ಕ್ಷಣ ಅಮೂಲ್ಯ ಆಗುವುದು . ಪ್ರತಿಯೊಬ್ಬರ ಜೀವನ ಶಾಶ್ವತ ಆಗಿದ್ದಿದ್ದರೆ ಆಗ ಯಾರು ತಾನೇ ಜೀವನಕ್ಕೆ ಮೌಲ್ಯ ಕೊಡುತ್ತಿದ್ದರು ? ನಾಳೆಗಾಗಿ ನೀವು ನಿರಂತರ ಕಾದಿರಬಹುದಿತ್ತು . ಆಗ ಯಾರು ತಾನೇ ಈಗ-ಇಲ್ಲಿ ಜೀವಿಸುತ್ತಿದ್ದರು ? ನಾಳೆ ಸಾವು ಇದೆ ಎಂಬುದು ಈಗ-ಇಲ್ಲಿ ಜೀವಿಸಲು ಒತ್ತಾಯಿಸುವುದು . ನೀನು ಈ ಕ್ಷಣದಲ್ಲಿ ಧುಮುಕಬೇಕಾಗುವುದು ಅದರ ಅತ್ಯಾಳಕ್ಕೆ ಇಳಿಯಬೇಕು. ಯಾಕೆಂದರೆ ಯಾರಿಗೆ ಗೊತ್ತು ಮುಂದಿನ ಕ್ಷಣ ಬರಬಹುದು. ಬಾರದೆಯೂ ಇರಬಹುದು .*


 *ನೋವು , ದುಃಖ , ದುಗುಡಗಳು ಬಂದಾಗ ಅದನ್ನು ಸ್ವೀಕರಿಸಿ ಅಚಲ ಮೌನದಿಂದ ಯಾರು ಇರಬಲ್ಲರೋ , ಅವರ ದುಃಖದ ಗುನಾತ್ಮಕತೆ ಸಂಪೂರ್ಣವಾಗಿ ಪರಿವರ್ತನೆ ಆಗಿಬಿಡುವುದು . ಅಂಥವರಿಗೆ ಸಂಕಷ್ಟಗಳು ಸಂಪತ್ತಾಗುವುದು . ನೋವೆಂಬುದು ಅವರನ್ನು ತೀಕ್ಷ್ಣ ಗೊಳಿಸುವುದು . ಅಂಥವರಿಗೆ ಕಾರ್ಗತ್ತಲೂ ಸಹಾ ಅದರದ್ದೇ ಆದ ಸೌಂದರ್ಯ ಆಳ ಇರುತ್ತದೆ . ಅಂಥವರಿಗೆ ಸಾವೂ ಸಹಿತ ಅಂತ್ಯ ಆಗಿರುವುದಿಲ್ಲ , ಬದಲಿಗೆ ಅಜ್ಞಾತದ  ಆದಿ ಆಗಿರುತ್ತದೆ*.

No comments:

Post a Comment