ಶ್ರೀವಾಣಿ
🔶 *ವಿಸ್ಮರಣೆ* 🔶
ಒಮ್ಮೆ ವಿಶ್ವಾಮಿತ್ರನಿಗೆ ಬ್ರಹ್ಮರ್ಷಿ ಎಂಬ ಪದವಿಯನ್ನು ಪಡೆಯುವ ಪ್ರಬಲವಾದ ಇಚ್ಛೆಯಾಯಿತು. ಆತನಿಗೆ ಆ ಪದವಿಯನ್ನು ವಶಿಷ್ಠ ಮಹರ್ಷಿಗಳು ಕೊಡಬೇಕಾಗಿತ್ತು. ಆದರೆ ವಶಿಷ್ಠರು ರಾಜರ್ಷಿಯಾದ ವಿಶ್ವಾಮಿತ್ರನಿಗೆ ಬ್ರಹ್ಮರ್ಷಿ ಪದವಿ ಕೊಡಲು ಒಪ್ಪಲಿಲ್ಲ. ಅದರಿಂದ ಕೋಪಗೊಂಡ ವಿಶ್ವಾಮಿತ್ರನು ವಶಿಷ್ಠರ ಮಕ್ಕಳನ್ನು ಕೊಂದು ಹಾಕಿದ. 'ಅಪುತ್ರಸ್ಯ ಗತಿರ್ನಾಸ್ತಿ' ಎಂದರೆ 'ಮಕ್ಕಳಿಲ್ಲದವರಿಗೆ ಮೋಕ್ಷವಿಲ್ಲ-ಸದ್ಗತಿಯಿಲ್ಲ!' ಈ ಮಾತನ್ನು ನೆನೆದು ವಶಿಷ್ಠನಿಗೆ ಅಪಾರ ದುಃಖವಾಯಿತು. ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧನಾದ! 'ತಾವು ನಿರ್ಗುಣ-ನಿರ್ವಿಶೇಷನಾದ ಬ್ರಹ್ಮ!' ಎಂಬುದನ್ನು ವಶಿಷ್ಠ ಮಹರ್ಷಿಗಳು ಅದು ಹೇಗೆ ಮರೆತರೋ ಏನೋ! ಸ್ವ ಸ್ವರೂಪದ ವಿಷ್ಮರಣೆಯೇ ಸಕಲ ದುಃಖಕ್ಕೆ ಕಾರಣ!
ಶ್ರೀ ಸಿದ್ಧೇಶ್ವರ ಸ್ವಾಮೀಜಿ, ವಿಜಯಪುರ
🔶 *ವಿಸ್ಮರಣೆ* 🔶
ಒಮ್ಮೆ ವಿಶ್ವಾಮಿತ್ರನಿಗೆ ಬ್ರಹ್ಮರ್ಷಿ ಎಂಬ ಪದವಿಯನ್ನು ಪಡೆಯುವ ಪ್ರಬಲವಾದ ಇಚ್ಛೆಯಾಯಿತು. ಆತನಿಗೆ ಆ ಪದವಿಯನ್ನು ವಶಿಷ್ಠ ಮಹರ್ಷಿಗಳು ಕೊಡಬೇಕಾಗಿತ್ತು. ಆದರೆ ವಶಿಷ್ಠರು ರಾಜರ್ಷಿಯಾದ ವಿಶ್ವಾಮಿತ್ರನಿಗೆ ಬ್ರಹ್ಮರ್ಷಿ ಪದವಿ ಕೊಡಲು ಒಪ್ಪಲಿಲ್ಲ. ಅದರಿಂದ ಕೋಪಗೊಂಡ ವಿಶ್ವಾಮಿತ್ರನು ವಶಿಷ್ಠರ ಮಕ್ಕಳನ್ನು ಕೊಂದು ಹಾಕಿದ. 'ಅಪುತ್ರಸ್ಯ ಗತಿರ್ನಾಸ್ತಿ' ಎಂದರೆ 'ಮಕ್ಕಳಿಲ್ಲದವರಿಗೆ ಮೋಕ್ಷವಿಲ್ಲ-ಸದ್ಗತಿಯಿಲ್ಲ!' ಈ ಮಾತನ್ನು ನೆನೆದು ವಶಿಷ್ಠನಿಗೆ ಅಪಾರ ದುಃಖವಾಯಿತು. ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧನಾದ! 'ತಾವು ನಿರ್ಗುಣ-ನಿರ್ವಿಶೇಷನಾದ ಬ್ರಹ್ಮ!' ಎಂಬುದನ್ನು ವಶಿಷ್ಠ ಮಹರ್ಷಿಗಳು ಅದು ಹೇಗೆ ಮರೆತರೋ ಏನೋ! ಸ್ವ ಸ್ವರೂಪದ ವಿಷ್ಮರಣೆಯೇ ಸಕಲ ದುಃಖಕ್ಕೆ ಕಾರಣ!
ಶ್ರೀ ಸಿದ್ಧೇಶ್ವರ ಸ್ವಾಮೀಜಿ, ವಿಜಯಪುರ
No comments:
Post a Comment