Wednesday, 15 February 2017

ಸರ್ಕಾರಿ ಕಾರ್ನರ್

ಸರ್ಕಾರಿ ಕಾರ್ನರ್

 Wednesday, 15.02.2017, 9:05 AM    ವಿಜಯವಾಣಿ ಸುದ್ದಿಜಾಲ


ದಿನದ ಪ್ರಶ್ನೆ

ನಾನು 1985ರಲ್ಲಿ ಸಹ ಶಿಕ್ಷಕನಾಗಿ ನೇಮಕ ಗೊಂಡಿದ್ದು. 2011 ರಲ್ಲಿ ಬಡ್ತಿ ಮುಖ್ಯ ಶಿಕ್ಷಕರ ಹುದ್ದೆಗೆ ಕೌನ್ಸಿಲಿಂಗ್ ನಡೆದಾಗ ಮಗಳ ತುರ್ತು ಚಿಕಿತ್ಸೆ ಕಾರಣದಿಂದ ಕೌನ್ಸಿಲಿಂಗ್​ಗೆ ಗೈರುಹಾಜರಾಗಿದ್ದೆ. ತದನಂತರ ನನಗೆ ವಾರ್ಷಿಕ ಬಡ್ತಿಗಳನ್ನು ತಡೆಹಿಡಿದು, ಕಾರಣ ಬಡ್ತಿ ನಿರಾಕರಿಸಿದ್ದೀರಿ ಎಂದು ಸೇವಾ ಪುಸ್ತಕದಲ್ಲಿ ನಮೂದಿಸಿದ್ದಾರೆ. ಆದರೆ ನಾನು ಬಡ್ತಿ ನಿರಾಕರಿಸುತ್ತೇನೆ ಎಂದು ಎಲ್ಲಿಯೂ ಬರೆದು ಕೊಟ್ಟಿರುವುದಿಲ್ಲ. ಪರಿಶಿಷ್ಟ ಜಾತಿಗೆ ಸೇರಿದ ನನಗೆ ಬಡ್ತಿ ನಿಯಮಾವಳಿ ಪ್ರಕಾರ ಮತ್ತೆ ಬಡ್ತಿ ಸಿಗುತ್ತದೆಯೇ?

|ಆರ್. ತಿಪ್ಪೇಸ್ವಾಮಿ, ದಾವಣಗೆರೆ

ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೌಕರಿ ಬಡ್ತಿ ) ನಿಯಮಗಳು 1977ರ ನಿಯಮ 4ಎ ರಂತೆ ನೀವು ಲಿಖಿತವಾಗಿ ಬಡ್ತಿಯನ್ನು ನಿರಾಕರಿಸದೆ ಇರುವುದರಿಂದ ಹಾಗೂ ಸಕಾರಣವನ್ನು ನೀಡಿರುವುದರಿಂದ ನಿಮ್ಮ ವಾರ್ಷಿಕ ವೇತನ ಬಡ್ತಿಗಳನ್ನು ತಡೆಹಿಡಿಯುವುದು, ನೀವು ಬಡ್ತಿಯನ್ನು ನಿರಾಕರಿಸಿದ್ದೀರಿ ಎಂದು ಸೇವಾಪುಸ್ತಕದಲ್ಲಿ ನಮೂದಿಸಿರುವುದು ಕ್ರಮಬದ್ಧವಾಗಿರುವುದಿಲ್ಲ. ಆದುದರಿಂದ ನೀವು ಮತ್ತೆ ನಿಮ್ಮ ನೇಮಕ ಪ್ರಾಧಿಕಾರಕ್ಕೆ ಮನವರಿಕೆ ಮಾಡಿಸಿ ಬಡ್ತಿ ನೀಡಲು ವಿನಂತಿಸಬಹುದು.



*ಸರ್ಕಾರಿ ಕಾರ್ನರ್*

 Tuesday, 14.02.2017, 8:33 AM     ವಿಜಯವಾಣಿ ಸುದ್ದಿಜಾಲ  


ದಿನದ ಪ್ರಶ್ನೆ

ನಾನು ಪ್ರಾಥಮಿಕ ಶಾಲಾ ಶಿಕ್ಷಕಿ. 22 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದೇನೆ. ನನಗೆ ಇಬ್ಬರು 13 ವರ್ಷದ ಹೆಣ್ಣು ಮಗಳು, 18 ವರ್ಷದ ಗಂಡು ಮಗ ಇದ್ದು, ಮಗ ಆಕಸ್ಮಿಕ ಮರಣ ಹೊಂದಿದ್ದಾನೆ. ನಾನು ಪುನಃ ಗರ್ಭಿಣಿಯಾಗಿದ್ದು, ಹೆರಿಗೆ ರಜೆ ಪಡೆಯಬಹುದೇ?

|ಸುಭದ್ರಮ್ಮ ಡಿ.ಆರ್. ಭದ್ರಾವತಿ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಮಯ 135ರಂತೆ ಎರಡು ಜೀವಂತ ಮಕ್ಕಳಿಗೆ ಹೆರಿಗೆ ರಜೆ ಪಡೆಯಲು ಅವಕಾಶವಿದೆ. ನಿಮಗೆ ಈ ರಜೆ ನೀಡಲು ಅವಕಾಶವಿಲ್ಲವೆಂದು ನಿರಾಕರಿಸುವುದು ಸ್ವಾಭಾವಿಕ ನ್ಯಾಯಕ್ಕೆ ತಕ್ಕುದ್ದಲ್ಲವಾಗಿರುತ್ತದೆ. ಆದುದರಿಂದ ನೀವು ನಿಯಮಾವಳಿ ರೀತ್ಯ ಪ್ರಸೂತಿ ರಜೆಯನ್ನು ಪಡೆಯಲು ಅರ್ಹರಾಗಿರುತ್ತೀರಿ.

No comments:

Post a Comment