*ಸರ್ಕಾರಿ ಕಾರ್ನರ್*
Monday, 30.01.2017, 6:21 AM ವಿಜಯವಾಣಿ ಸುದ್ದಿಜಾಲ
ದಿನದ ಪ್ರಶ್ನೆ
ದಿನಾಂಕ1980ರ ಮಾರ್ಚ್ 27 ರಂದು ಸ್ಟೈಪಂಡರಿ ಸೇವೆಗೆ ಸೇರಿದ್ದು, 1986ರ ಡಿಸೆಂಬರ್ ದಿನಾಂಕ 22ರಂದು ಸೇವೆಯಿಂದ ವಿಮುಕ್ತಿ ಹೊಂದಿ, ಮೀಸಲಾತಿಯಡಿಯಲ್ಲಿ ರೇಷ್ಮೆ ಇಲಾಖೆಯ ರೇಷ್ಮೆ ಪ್ರವರ್ತಕರ ಹುದ್ದೆಗೆ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ಆಗ ನನ್ನ ವಯಸ್ಸು 33 ವರ್ಷ. ನಾನು ಸರ್ಕಾರಿ ಸೇವೆಯಿಂದ 2013ರ ಮಾರ್ಚ್ 31 ರಂದು ವಯೋನಿವೃತ್ತಿ ಹೊಂದಿರುತ್ತೇನೆ. ನನಗೆ ಹೆಚ್ಚುವರಿ 3 ವರ್ಷ ಸೇವೆ ಸಿಗುತ್ತದೆಯೇ?
|ಗಜೇಂದ್ರ ಹೆಚ್.ಎಸ್. ಚಿಕ್ಕಮಗಳೂರು
ದಿನಾಂಕ 8.9.2016ರ ಸರ್ಕಾರಿ ಆದೇಶ ಸಂಖ್ಯೆ ಆಇ 9, ಎಸ್ಆರ್ಎ 2012ರ ಪ್ರಕಾರ ದಿನಗೂಲಿ ಅಥವಾ ಸ್ಟೈಪಂಡರಿ ಪದವೀಧರರಾಗಿ ಸೇವೆ ಸಲ್ಲಿಸಿ ತದನಂತರ ಸೇವೆಯಲ್ಲಿ ಕ್ರಮಬದ್ಧಗೊಳಿಸಲಾದ ಎಲ್ಲಾ ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 247ಎರಂತೆ ನಿವೃತ್ತಿ ಸಂದರ್ಭದಲ್ಲಿ ಹೆಚ್ಚುವರಿ ಅರ್ಹತಾದಾಯಕ ಸೇರ್ಪಡೆ ಮಾಡಬೇಕೆಂದು ಸೂಚಿಸಲಾಗಿದೆ. ಆದರೆ 2012ರ ಫೆ.15ರ ನಂತರ ನಿವೃತ್ತಿ ಹೊಂದಿದ ನೌಕರರಿಗೆ ಈ ಸೌಲಭ್ಯಗಳು ಲಭ್ಯವಾಗುವುದಿಲ್ಲ
*ಸರ್ಕಾರಿ ಕಾರ್ನರ್*
Sunday, 29.01.2017, 6:26 AM ವಿಜಯವಾಣಿ ಸುದ್ದಿಜಾಲ
ದಿನದ ಪ್ರಶ್ನೆ
ಕಿರಿಯ ಆರೋಗ್ಯ ಸಹಾಯಕಿಯಾಗಿದ್ದ ನನ್ನ ತಾಯಿ ಸೇವೆ ಸಲ್ಲಿಸುತ್ತಿರುವಾಗಲೇ ಸಾವನ್ನಪ್ಪಿದ್ದಾರೆ. ನಮ್ಮ ತಾಯಿಯವರ ನೌಕರಿ ನೀಡಲು ನಾನು ನೇಮಕ ಪ್ರಾಧಿಕಾರಿಯವರಿಗೆ ಅರ್ಜಿ ಸಲ್ಲಿಸಿದಾಗ ನಿಮ್ಮ ತಂದೆಯವರು ವಾಹನ ಚಾಲಕರಾಗಿದ್ದು ಅವರಿಗೆ 16000 ರೂ. ಹಾಗೂ ನಿಮ್ಮ ತಾಯಿಯ ಕುಟುಂಬ ಪೆನ್ಷನ್ ಸೇರಿ ವಾರ್ಷಿಕ ಆದಾಯ 3 ಲಕ್ಷ ಆಗುವುದರಿಂದ ನಿಮಗೆ ನೌಕರಿ ಕೊಡಲು ಬಾರದೆಂದು ನನ್ನ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಇದು ನಿಯಮಾವಳಿ ರೀತ್ಯ ಸರಿಯಾಗಿದೆಯೇ?
|ಐಶ್ವರ್ಯ ಯಾದಗಿರಿ
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996ರ ನಿಯಮ 3ರ ಮೇರೆಗೆ ಮೃತ ಸರ್ಕಾರಿ ನೌಕರನ ಕುಟುಂಬದ ವರಮಾನ ಪ್ರಥಮ ದರ್ಜೆ ಸಹಾಯಕರ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ಮತ್ತು ಗರಿಷ್ಠ ವೇತನಕ್ಕೆ ಕಡಿಮೆ ಇದ್ದರೆ ಅನುಕಂಪದ ಆಧಾರದ ನೌಕರಿ ನೀಡಬೇಕಾಗುತ್ತದೆ. ನಿಮ್ಮ ತಂದೆಯವರ ವೇತನವು ಸೇರಿ ನಿಮ್ಮ ಆದಾಯ 4.5 ಲಕ್ಷ ಮೀರದಿರುವುದರಿಂದ ನೀವು ಅನುಕಂಪದ ಮೇರೆಗೆ ನೇಮಕಾತಿ ಹೊಂದಲು ಅರ್ಹರಾಗಿರುತ್ತೀರಿ.
Monday, 30.01.2017, 6:21 AM ವಿಜಯವಾಣಿ ಸುದ್ದಿಜಾಲ
ದಿನದ ಪ್ರಶ್ನೆ
ದಿನಾಂಕ1980ರ ಮಾರ್ಚ್ 27 ರಂದು ಸ್ಟೈಪಂಡರಿ ಸೇವೆಗೆ ಸೇರಿದ್ದು, 1986ರ ಡಿಸೆಂಬರ್ ದಿನಾಂಕ 22ರಂದು ಸೇವೆಯಿಂದ ವಿಮುಕ್ತಿ ಹೊಂದಿ, ಮೀಸಲಾತಿಯಡಿಯಲ್ಲಿ ರೇಷ್ಮೆ ಇಲಾಖೆಯ ರೇಷ್ಮೆ ಪ್ರವರ್ತಕರ ಹುದ್ದೆಗೆ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ಆಗ ನನ್ನ ವಯಸ್ಸು 33 ವರ್ಷ. ನಾನು ಸರ್ಕಾರಿ ಸೇವೆಯಿಂದ 2013ರ ಮಾರ್ಚ್ 31 ರಂದು ವಯೋನಿವೃತ್ತಿ ಹೊಂದಿರುತ್ತೇನೆ. ನನಗೆ ಹೆಚ್ಚುವರಿ 3 ವರ್ಷ ಸೇವೆ ಸಿಗುತ್ತದೆಯೇ?
|ಗಜೇಂದ್ರ ಹೆಚ್.ಎಸ್. ಚಿಕ್ಕಮಗಳೂರು
ದಿನಾಂಕ 8.9.2016ರ ಸರ್ಕಾರಿ ಆದೇಶ ಸಂಖ್ಯೆ ಆಇ 9, ಎಸ್ಆರ್ಎ 2012ರ ಪ್ರಕಾರ ದಿನಗೂಲಿ ಅಥವಾ ಸ್ಟೈಪಂಡರಿ ಪದವೀಧರರಾಗಿ ಸೇವೆ ಸಲ್ಲಿಸಿ ತದನಂತರ ಸೇವೆಯಲ್ಲಿ ಕ್ರಮಬದ್ಧಗೊಳಿಸಲಾದ ಎಲ್ಲಾ ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 247ಎರಂತೆ ನಿವೃತ್ತಿ ಸಂದರ್ಭದಲ್ಲಿ ಹೆಚ್ಚುವರಿ ಅರ್ಹತಾದಾಯಕ ಸೇರ್ಪಡೆ ಮಾಡಬೇಕೆಂದು ಸೂಚಿಸಲಾಗಿದೆ. ಆದರೆ 2012ರ ಫೆ.15ರ ನಂತರ ನಿವೃತ್ತಿ ಹೊಂದಿದ ನೌಕರರಿಗೆ ಈ ಸೌಲಭ್ಯಗಳು ಲಭ್ಯವಾಗುವುದಿಲ್ಲ
*ಸರ್ಕಾರಿ ಕಾರ್ನರ್*
Sunday, 29.01.2017, 6:26 AM ವಿಜಯವಾಣಿ ಸುದ್ದಿಜಾಲ
ದಿನದ ಪ್ರಶ್ನೆ
ಕಿರಿಯ ಆರೋಗ್ಯ ಸಹಾಯಕಿಯಾಗಿದ್ದ ನನ್ನ ತಾಯಿ ಸೇವೆ ಸಲ್ಲಿಸುತ್ತಿರುವಾಗಲೇ ಸಾವನ್ನಪ್ಪಿದ್ದಾರೆ. ನಮ್ಮ ತಾಯಿಯವರ ನೌಕರಿ ನೀಡಲು ನಾನು ನೇಮಕ ಪ್ರಾಧಿಕಾರಿಯವರಿಗೆ ಅರ್ಜಿ ಸಲ್ಲಿಸಿದಾಗ ನಿಮ್ಮ ತಂದೆಯವರು ವಾಹನ ಚಾಲಕರಾಗಿದ್ದು ಅವರಿಗೆ 16000 ರೂ. ಹಾಗೂ ನಿಮ್ಮ ತಾಯಿಯ ಕುಟುಂಬ ಪೆನ್ಷನ್ ಸೇರಿ ವಾರ್ಷಿಕ ಆದಾಯ 3 ಲಕ್ಷ ಆಗುವುದರಿಂದ ನಿಮಗೆ ನೌಕರಿ ಕೊಡಲು ಬಾರದೆಂದು ನನ್ನ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಇದು ನಿಯಮಾವಳಿ ರೀತ್ಯ ಸರಿಯಾಗಿದೆಯೇ?
|ಐಶ್ವರ್ಯ ಯಾದಗಿರಿ
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996ರ ನಿಯಮ 3ರ ಮೇರೆಗೆ ಮೃತ ಸರ್ಕಾರಿ ನೌಕರನ ಕುಟುಂಬದ ವರಮಾನ ಪ್ರಥಮ ದರ್ಜೆ ಸಹಾಯಕರ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ಮತ್ತು ಗರಿಷ್ಠ ವೇತನಕ್ಕೆ ಕಡಿಮೆ ಇದ್ದರೆ ಅನುಕಂಪದ ಆಧಾರದ ನೌಕರಿ ನೀಡಬೇಕಾಗುತ್ತದೆ. ನಿಮ್ಮ ತಂದೆಯವರ ವೇತನವು ಸೇರಿ ನಿಮ್ಮ ಆದಾಯ 4.5 ಲಕ್ಷ ಮೀರದಿರುವುದರಿಂದ ನೀವು ಅನುಕಂಪದ ಮೇರೆಗೆ ನೇಮಕಾತಿ ಹೊಂದಲು ಅರ್ಹರಾಗಿರುತ್ತೀರಿ.
No comments:
Post a Comment