*ಕತ್ತಲೆಯಿಂದಾಗಿಯೇ ಬೆಳಕಿಗೆ ಅರ್ಥ*
[ಸದ್ಗುರು ಜಗ್ಗಿ ವಾಸುದೇವ್ ]
ನಾವು ವಾಸ್ತವದಲ್ಲಿ ಎಲ್ಲಿದ್ದೆವೆಯೋ ಅದಕ್ಕೆ ಬದ್ಧರಾಗಿರಬೇಕು . ನಕಾರಾತ್ಮಕತೆಯ [negetive] ಆಯಾಮವನ್ನೇ ಯೋಚಿಸದ ಕೇವಲ ಸಕಾರಾತ್ಮಕ[ positive] ಚಿಂತನೆಯು ಜನರಲ್ಲಿ ಅನೇಕ ಸಾಧ್ಯತೆಗಳನ್ನು ನಾಶ ಪಡಿಸಿದೆ . ಜೀವನವನ್ನು ಅದರ ಯಥಾ ಸ್ಥಿತಿಯಲ್ಲಿ ನೋಡಲು ಇಚ್ಚಿಸದಿದ್ದಲ್ಲಿ ಮುಂದೆ ಹೆಜ್ಜೆ ಇಡಲಾಗದು , ಏನೂ ಮಾಡಲಾಗದು .
*ಪಾಸಿಟಿವ್ ಥಿಂಕಿಂಗ್ ಎನ್ನುವುದು ಒಂದು ದೊಡ್ಡ ರೋಗವಾಗಿಬಿಟ್ಟಿದೆ . ಸದಾ ಸಕಾರಾತ್ಮಕವಾಗಿಯೇ ಏಕೆ ಇರಬೇಕು ? ಈ ಸಮಸ್ತ ಅಸ್ತಿತ್ವವು ಸದಾ ದ್ವಂದ್ವಗಳ ನಡುವೆ ಸಂಭವಿಸುತ್ತದೆ . ಅವಿವೇಕದಿಂದ ಕೂಡಿದ ಮನಸ್ಸುಗಳು ಮಾತ್ರವೇ ಎರಡರಲ್ಲಿ ಒಂದನ್ನು ಇಷ್ಟ ಪಡುತ್ತವೆ .*
*ನೀವು ಸಕಾರಾತ್ಮಕ ಹಾಗೂ ನಕಾರಾತ್ಮಕ ವೆಂದು ಯಾವುದಕ್ಕೆ ಅನ್ವಯಿಸಿ ಯೋಚಿಸುತ್ತಿರುವಿರೋ ಅದು ಪುರುಷ ಹಾಗೂ ಸ್ತ್ರೀ , ಬೆಳಕು ಮತ್ತು ಕತ್ತಲು , ಹಗಲು ಮತ್ತು ರಾತ್ರಿಗಳು , ಸುಖ ದುಃಖಗಳು ಇಂತಹ ದ್ವಂದ್ವಗಳಿಂದ ಕೂಡಿವೆ ಇವುಗಳಿಲ್ಲದ ಜೀವನವು ಹೇಗೆ ತಾನೇ ಸಾಧ್ಯ ? ಪ್ರಪಂಚದಲ್ಲಿ ವಾಸ್ತವ ಜ್ಞಾನವಿಲ್ಲದ ಮನಸ್ಸು-ಬುದ್ಧಿಗಳು ಸದಾ ಸಕಾರಾತ್ಮಕ ಚಿಂತನೆಗಳ ಕುರಿತು ಚರ್ಚಿಸುತ್ತವೆ .*
*ವಿದ್ಯುತ್ ಶಕ್ತಿ ಯಲ್ಲಿ ಋಣಾತ್ಮಕ ಮತ್ತು ಧನಾತ್ಮಕ ಗುಣಗಳಿರುವುದರಿಂದಲೇ ಬೆಳಕು ಮೂಡಿ ಬರುತ್ತದೆ . ಧನಾತ್ಮಕ ಫಲಿತಾಂಶಗಳನ್ನು ಬಯಸುವುದರಿಂದ ನಾವು ಋಣಾತ್ಮಕತೆಯನ್ನು ಗಮನಿಸುವುದಿಲ್ಲ , ಅಲ್ಲವೇ ? ಪುರುಷ ಮತ್ತು ಸ್ತ್ರೀ ಇಬ್ಬರಿಂದಲೂ ನಮಗೆ ಸಂತೋಷ ವುಂಟಾಗುತ್ತಿದ್ದ್ದರೆ ಆಗ ನಾವು ಅದು ಸ್ತ್ರೀಯಿಂದಲೋ ಪುರುಷನಿಂದಲೋ ಎಂಬುದರ ಕುರಿತು ಯೋಚಿಸುವುದಿಲ್ಲ ಆದರೆ ವಿವಾಹವಾಗಿ ಸಾಕಷ್ಟು ಸಮಯವಾದ ನಂತರ ನಕಾರಾತ್ಮಕ ಫಲಿತಾಂಶಗಳನ್ನು ಸೃಷ್ಟಿಸುತ್ತಿದ್ದಾರೆ , ಆಗ ಅವರು ನಮಗೆ ಸಮಸ್ಯೆ ಯಾಗಿರುವರೆಂದು ಭಾವಿಸುತ್ತೇವೆ . ಹೀಗೆ ಇಲ್ಲಿ ಸಕಾರಾತ್ಮಕತೆ ಅಥವಾ ನಕಾರಾತ್ಮಕತೆ ಎಂಬುದು ಸಮಸ್ಯೆ ಅಲ್ಲ ಆದರೆ ಕೊನೆಯಲ್ಲಿ ನೀವು ಸೃಷ್ಟಿಸುವ ಫಲಿತಾಂಶವೇ ಮುಖ್ಯವಾಗುತ್ತದೆ*
*ನಕಾರಾತ್ಮಕ ಸಂಗತಿಗಳನ್ನು ಕಡೆಗಣಿಸಿದರೆ ಎಲ್ಲವೂ ಸರಿ ಹೋಗುತ್ತದೆ ಎಂದು ನೀವು ಯೋಚಿಸಬಹುದು . ಅದಕ್ಕೆ ಕೆಲವು ಮಾನಸಿಕ ಹಾಗೂ ಸಾಮಾಜಿಕ ಪ್ರಸ್ತುತತೆ ಇರಬಹುದು ಆದರೆ ಅಸ್ತಿತ್ವದ ಪ್ರಸ್ತುತತೆ ಎಂದಿಗೂ ಇರುವುದಿಲ್ಲ .*
ಜೀವನದಲ್ಲಿ ಇದು ಒಳ್ಳೆಯದು ಇದು ಕೆಟ್ಟದ್ದು ಎಂಬುದರ ಪ್ರಶ್ನೆಯಲ್ಲ . ನಮ್ಮ ಜೀವನಕ್ಕೆ ಯಾವುದು ಅಗತ್ಯ ಯಾವುದು ಅಗತ್ಯವಲ್ಲ ಎಂಬುದು ಮುಖ್ಯವಾಗುತ್ತದೆ . ನಿಮ್ಮಲ್ಲಿ ಮಾನವೀಯತೆ ಪೂರ್ಣತಃ ವಿಕಾಸವಾಗಿದ್ದರೆ ಇದು ಒಳ್ಳೆಯದು ಇದು ಕೆಟ್ಟದ್ದು ಎಂದು ಬೇರೆಯವರು ನಿಮಗೆ ಹೇಳಿಕೊಡಬೇಕೆ ?ಸಹಜವಾಗಿಯೇ ನೀವು ಸಮಾಜಕ್ಕೆ ಅಗತ್ಯವಾದುದನ್ನು ಮಾಡುವಿರಿ . ನಿಮ್ಮೊಳಗಿನ ಮಾನವತ್ವದ ಜೀವಂತಿಕೆಯಲ್ಲಿ ಬದುಕು ನಡೆಸಿದರೆ ಸಕಾರಾತ್ಮಕ ನಕಾರಾತ್ಮಕ ಗಳ ಕುರಿತು ಯೋಚನೆಯೇ ಇರುವುದಿಲ್ಲ .
[ಸದ್ಗುರು ಜಗ್ಗಿ ವಾಸುದೇವ್ ]
ನಾವು ವಾಸ್ತವದಲ್ಲಿ ಎಲ್ಲಿದ್ದೆವೆಯೋ ಅದಕ್ಕೆ ಬದ್ಧರಾಗಿರಬೇಕು . ನಕಾರಾತ್ಮಕತೆಯ [negetive] ಆಯಾಮವನ್ನೇ ಯೋಚಿಸದ ಕೇವಲ ಸಕಾರಾತ್ಮಕ[ positive] ಚಿಂತನೆಯು ಜನರಲ್ಲಿ ಅನೇಕ ಸಾಧ್ಯತೆಗಳನ್ನು ನಾಶ ಪಡಿಸಿದೆ . ಜೀವನವನ್ನು ಅದರ ಯಥಾ ಸ್ಥಿತಿಯಲ್ಲಿ ನೋಡಲು ಇಚ್ಚಿಸದಿದ್ದಲ್ಲಿ ಮುಂದೆ ಹೆಜ್ಜೆ ಇಡಲಾಗದು , ಏನೂ ಮಾಡಲಾಗದು .
*ಪಾಸಿಟಿವ್ ಥಿಂಕಿಂಗ್ ಎನ್ನುವುದು ಒಂದು ದೊಡ್ಡ ರೋಗವಾಗಿಬಿಟ್ಟಿದೆ . ಸದಾ ಸಕಾರಾತ್ಮಕವಾಗಿಯೇ ಏಕೆ ಇರಬೇಕು ? ಈ ಸಮಸ್ತ ಅಸ್ತಿತ್ವವು ಸದಾ ದ್ವಂದ್ವಗಳ ನಡುವೆ ಸಂಭವಿಸುತ್ತದೆ . ಅವಿವೇಕದಿಂದ ಕೂಡಿದ ಮನಸ್ಸುಗಳು ಮಾತ್ರವೇ ಎರಡರಲ್ಲಿ ಒಂದನ್ನು ಇಷ್ಟ ಪಡುತ್ತವೆ .*
*ನೀವು ಸಕಾರಾತ್ಮಕ ಹಾಗೂ ನಕಾರಾತ್ಮಕ ವೆಂದು ಯಾವುದಕ್ಕೆ ಅನ್ವಯಿಸಿ ಯೋಚಿಸುತ್ತಿರುವಿರೋ ಅದು ಪುರುಷ ಹಾಗೂ ಸ್ತ್ರೀ , ಬೆಳಕು ಮತ್ತು ಕತ್ತಲು , ಹಗಲು ಮತ್ತು ರಾತ್ರಿಗಳು , ಸುಖ ದುಃಖಗಳು ಇಂತಹ ದ್ವಂದ್ವಗಳಿಂದ ಕೂಡಿವೆ ಇವುಗಳಿಲ್ಲದ ಜೀವನವು ಹೇಗೆ ತಾನೇ ಸಾಧ್ಯ ? ಪ್ರಪಂಚದಲ್ಲಿ ವಾಸ್ತವ ಜ್ಞಾನವಿಲ್ಲದ ಮನಸ್ಸು-ಬುದ್ಧಿಗಳು ಸದಾ ಸಕಾರಾತ್ಮಕ ಚಿಂತನೆಗಳ ಕುರಿತು ಚರ್ಚಿಸುತ್ತವೆ .*
*ವಿದ್ಯುತ್ ಶಕ್ತಿ ಯಲ್ಲಿ ಋಣಾತ್ಮಕ ಮತ್ತು ಧನಾತ್ಮಕ ಗುಣಗಳಿರುವುದರಿಂದಲೇ ಬೆಳಕು ಮೂಡಿ ಬರುತ್ತದೆ . ಧನಾತ್ಮಕ ಫಲಿತಾಂಶಗಳನ್ನು ಬಯಸುವುದರಿಂದ ನಾವು ಋಣಾತ್ಮಕತೆಯನ್ನು ಗಮನಿಸುವುದಿಲ್ಲ , ಅಲ್ಲವೇ ? ಪುರುಷ ಮತ್ತು ಸ್ತ್ರೀ ಇಬ್ಬರಿಂದಲೂ ನಮಗೆ ಸಂತೋಷ ವುಂಟಾಗುತ್ತಿದ್ದ್ದರೆ ಆಗ ನಾವು ಅದು ಸ್ತ್ರೀಯಿಂದಲೋ ಪುರುಷನಿಂದಲೋ ಎಂಬುದರ ಕುರಿತು ಯೋಚಿಸುವುದಿಲ್ಲ ಆದರೆ ವಿವಾಹವಾಗಿ ಸಾಕಷ್ಟು ಸಮಯವಾದ ನಂತರ ನಕಾರಾತ್ಮಕ ಫಲಿತಾಂಶಗಳನ್ನು ಸೃಷ್ಟಿಸುತ್ತಿದ್ದಾರೆ , ಆಗ ಅವರು ನಮಗೆ ಸಮಸ್ಯೆ ಯಾಗಿರುವರೆಂದು ಭಾವಿಸುತ್ತೇವೆ . ಹೀಗೆ ಇಲ್ಲಿ ಸಕಾರಾತ್ಮಕತೆ ಅಥವಾ ನಕಾರಾತ್ಮಕತೆ ಎಂಬುದು ಸಮಸ್ಯೆ ಅಲ್ಲ ಆದರೆ ಕೊನೆಯಲ್ಲಿ ನೀವು ಸೃಷ್ಟಿಸುವ ಫಲಿತಾಂಶವೇ ಮುಖ್ಯವಾಗುತ್ತದೆ*
*ನಕಾರಾತ್ಮಕ ಸಂಗತಿಗಳನ್ನು ಕಡೆಗಣಿಸಿದರೆ ಎಲ್ಲವೂ ಸರಿ ಹೋಗುತ್ತದೆ ಎಂದು ನೀವು ಯೋಚಿಸಬಹುದು . ಅದಕ್ಕೆ ಕೆಲವು ಮಾನಸಿಕ ಹಾಗೂ ಸಾಮಾಜಿಕ ಪ್ರಸ್ತುತತೆ ಇರಬಹುದು ಆದರೆ ಅಸ್ತಿತ್ವದ ಪ್ರಸ್ತುತತೆ ಎಂದಿಗೂ ಇರುವುದಿಲ್ಲ .*
ಜೀವನದಲ್ಲಿ ಇದು ಒಳ್ಳೆಯದು ಇದು ಕೆಟ್ಟದ್ದು ಎಂಬುದರ ಪ್ರಶ್ನೆಯಲ್ಲ . ನಮ್ಮ ಜೀವನಕ್ಕೆ ಯಾವುದು ಅಗತ್ಯ ಯಾವುದು ಅಗತ್ಯವಲ್ಲ ಎಂಬುದು ಮುಖ್ಯವಾಗುತ್ತದೆ . ನಿಮ್ಮಲ್ಲಿ ಮಾನವೀಯತೆ ಪೂರ್ಣತಃ ವಿಕಾಸವಾಗಿದ್ದರೆ ಇದು ಒಳ್ಳೆಯದು ಇದು ಕೆಟ್ಟದ್ದು ಎಂದು ಬೇರೆಯವರು ನಿಮಗೆ ಹೇಳಿಕೊಡಬೇಕೆ ?ಸಹಜವಾಗಿಯೇ ನೀವು ಸಮಾಜಕ್ಕೆ ಅಗತ್ಯವಾದುದನ್ನು ಮಾಡುವಿರಿ . ನಿಮ್ಮೊಳಗಿನ ಮಾನವತ್ವದ ಜೀವಂತಿಕೆಯಲ್ಲಿ ಬದುಕು ನಡೆಸಿದರೆ ಸಕಾರಾತ್ಮಕ ನಕಾರಾತ್ಮಕ ಗಳ ಕುರಿತು ಯೋಚನೆಯೇ ಇರುವುದಿಲ್ಲ .
No comments:
Post a Comment