Wednesday, 15 February 2017

ನಿಮ್ಮ ಮನೆಯಲ್ಲಿ ಈ ದೀಪವನ್ನು ಹಚ್ಚಿದರೆ ಸಾಕು, ಸಕಲ ಐಶ್ವರ್ಯ ಪ್ರಾಪ್ತಿಯಾಗುತ್ತದೆ..!

*ನಿಮ್ಮ ಮನೆಯಲ್ಲಿ ಈ ದೀಪವನ್ನು ಹಚ್ಚಿದರೆ ಸಾಕು, ಸಕಲ ಐಶ್ವರ್ಯ ಪ್ರಾಪ್ತಿಯಾಗುತ್ತದೆ..!*

Sruji 10 February,2017

ಹಿಂದೂಗಳ ಸಂಪ್ರದಾಯದಲ್ಲಿ ಅತೀ ಮುಖ್ಯವಾದುದು, ದೀಪಾರಾಧನೆ. ದೀಪ ಇಲ್ಲದ ಮನೆಯನ್ನು ಹಿಂದೂ ಧರ್ಮ ಒಪ್ಪುವುದಿಲ್ಲ. ಅಂತಹ ದೀಪ ಸಹ ನಮ್ಮ ಅನೇಕ ಒಳಿತನ್ನು ಮಾಡುತ್ತದೆ. ಅದರಲ್ಲಿ ಹಸುವಿನ ತುಪ್ಪದಲ್ಲಿ ದೀಪ ಬೇಳಗಿಸಿದರೆ ತುಂಬಾ ಶುಭದಾಯಕ. ಹಾಗಾದರೆ ಹಸುವಿನ ತುಪ್ಪದಲ್ಲಿ ಹೇಗೆ ದೀಪ ಹೇಗೆ ಹಚ್ಚಬೇಕು ಎಂದು ಈಗ ನೋಡೋಣ…


*ಹಸುವಿನ ತುಪ್ಪದ ದೀಪ ಹೇಗೆ ಹಚ್ಚಬೇಕು:*

ಮೊದಲು ದೀಪಸ್ತಂಭವನ್ನು ಸ್ವಚ್ಛಗೊಳಿಸಿಕೊಂಡು ಕುಂಕುಮವನ್ನು ಇಡಬೇಕು. ನಂತರ ಹಸುವಿನ ತುಪ್ಪ ಹಾಕಿ ಹತ್ತಿಯ ಬತ್ತಿಯನ್ನು ಹಾಕಬೇಕು. ಹಾಕಿದ ಮೇಲೆ ಕೇವಲ ಉದುಬತ್ತಿಯಿಂದ ದೀಪವನ್ನು ಹಚ್ಚಬೇಕು. ಬೆಂಕಿಕಡ್ಡಿಯನ್ನು ಹಚ್ಚಬಾರದು. ಹಚ್ಚಿದ ದೀಪದಿಂದ ಇನ್ನೊಂದು ದೀಪವನ್ನು ಹಚ್ಚಬಾರದು(ತಾಕಿಸಬಾರದು).

*ಈ ದೀಪದಿಂದ ಆಗುವ ಲಾಭಗಳು…*

ಈ ದೀಪದಿಂದ ಆರ್ಥಿಕಾಭಿವೃದ್ಧಿಯಾಗುವುದಲ್ಲದೇ, ಸಾಲದ ಸುಳಿಯಿಂದ ಹೊರಬರುತ್ತವೆ. ಸಂಜೆ ಸಮಯದಲ್ಲಿ ಈ ದೀಪವನ್ನು ಲಕ್ಷ್ಮೀದೇವಿಗೆ ಹೆಚ್ಚುವುದರಿಂದ ನಿಮಗೆ ಬರಬೇಕಾಗಿರುವ ಹಣ ಯಾವುದೇ ತೊಂದರೆಯಿಲ್ಲದೇ ಬರುತ್ತವೆ. ಈ ದೀಪ ತಾಯಿ ಮಕ್ಕಳ ಜ್ಞಾನ ಅಭಿವೃದ್ಧಿಗೆ ಹಾಗೂ ಒಳ್ಳೆಯ ವಿದ್ಯಾವಂತರಾಗಲು ಸರಸ್ವತಿ ದೇವಿಯ ಮುಂದೆ ಹಚ್ಚಿದರೆ ಒಳ್ಳೆಯ ಫಲಿತಾಂಶ ಲಭಿಸುವುದು.

ಹೆಚ್ಚಾಗಿ ಹಸುವಿನ ತುಪ್ಪದ ದೀಪನ್ನು ಲಕ್ಷ್ಮಿ ಹಚ್ಚುತ್ತಾರೆ. ಯಾಕೆಂದರೆ ಆ ತಾಯಿಗೆ ಹಸುವಿನ ತುಪ್ಪ ಯ ಎಂದರೆ ತುಂಬಾ ಇಷ್ಟ.

ಗ್ಯಾಸ್ ಸಿಲಿಂಡರ್ ಗಳ ಮೇಲೆ A,B,C,D ಗುರುತುಗಳು ಏಕೆಂದು ನಿಮಗೆ ಗೊತ್ತಾ…?

*ಗ್ಯಾಸ್ ಸಿಲಿಂಡರ್ ಗಳ ಮೇಲೆ A,B,C,D ಗುರುತುಗಳು ಏಕೆಂದು ನಿಮಗೆ ಗೊತ್ತಾ…?*


ಅಡುಗೆ ತಯಾರಿಸಲು ಒಂದು ಕಾಲದಲ್ಲಿ ಕಟ್ಟಿಗೆ ಒಲೆಗಳನ್ನು ಉಪಯೋಗಿಸುತ್ತಿದ್ದರು…. ಈಗ ಕಾಲ ಬದಲಾಗಿದೆ. ಕುಗ್ರಾಮಗಳಲ್ಲೂ ಸಹ ಬಹಳ ಸುಲಭವಾಗಿ ಅಡುಗೆ ಅನಿಲ ಸಿಲಿಂಡರ್ ಗಳನ್ನು ಉಪಯೋಗಿಸಿ ಅಡುಗೆ ಮಾಡುವುದನ್ನು ನಮ್ಮ ಗ್ರಾಮೀಣ ಪ್ರಜೆಗಳು ಕಲಿತುಕೊಂಡಿದ್ದಾರೆ. ನಾವು ಉಪಯೋಗಿಸುವ ಬಹಳಷ್ಟು ವಸ್ತುಗಳಿಗೆ ಎಕ್ಸ್ಪೈರಿ ದಿನಾಂಕ ವಿರುವ ಹಾಗೆಯೇ ಗ್ಯಾಸ್ ಸಿಲಿಂಡರ್ ಗಳಿಗೂ ಸಹ ಎಕ್ಸ್ಪೈರಿ ದಿನಾಂಕ ಇರುತ್ತದೆ. ಈ ವಿಷಯ ಬಹಳಷ್ಟು ಜನರಿಗೆ ತಿಳಿದಿಲ್ಲ. ಹಾಗಾದರೆ, ಗ್ಯಾಸ್ ಸಿಲಿಂಡರ್ ಎಕ್ಸ್ಪೈರಿ ದಿನಾಂಕವನ್ನು ಗುರುತಿಸುವುದು ಹೇಗೆಂದು ತಿಳಿಯೋಣ ಬನ್ನಿ…

ಅಡುಗೆ ಅನಿಲ ಸಿಲಿಂಡರ್ ಮೇಲೆ A,B,C,D  ಮತ್ತು ಅವುಗಳ ಸಂಯುಕ್ತಗಳೊಂದಿಗೆ ಕೊನೆಯಲ್ಲಿ ಯಾವುದಾರೊಂದು ಸಂಖ್ಯೆ ಇರುವ ಹಾಗೆ ಗುರುತಿರುತ್ತದೆ. ಆದರೆ,ಆ ಗುರುತುಗಳಲ್ಲಿ ಇರುವ A,B,C,D ಗಳು ತಿಂಗಳುಗಳನ್ನು ಸೂಚಿಸುತ್ತವೆ. ಉದಾ: A ಅಂದರೆ ಜನವರಿಯಿಂದ ಮಾರ್ಚ್ ವರೆಗೆ ಎಂದರ್ಥ. ಅದೇ ರೀತಿ B ಅಂದರೆ ಏಪ್ರಿಲ್ ನಿಂದ ಜೂನ್ ವರೆಗೆ, C ಅಂದರೆ ಜುಲೈ ಯಿಂದ ಸೆಪ್ಟೆಂಬರ್ ವರೆಗೆ, D ಅಂದರೆ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಎಂದು ತಿಳಿಯಬೇಕು. ಈರೀತಿ ಸಿಲಿಂಡರ್ ಮೇಲಿರುವ ಅಕ್ಷರಗಳನ್ನು ಆಯಾ ತಿಂಗಳುಗಳಿಗೆ ಸಮೀಕರಿಸಿ ಓದಿಕೊಳ್ಳಬೇಕು.
ಆದರೆ, ಈ ಅಕ್ಷರಗಳ ಪಕ್ಕದಲ್ಲಿರುವ ಸಂಖ್ಯೆಗಳು ಮಾತ್ರ ವರುಷವನ್ನು ಸೂಚಿಸುತ್ತದೆ. ಉದಾ ;B. 25 ಎಂದರೆ, ಆ ಸಿಲಿಂಡರನ್ನು ಜೂನ್ 2025 ವರೆಗೂ ಉಪಯೋಗಿಸ ಬಹುದೆಂದು ಅರ್ಥ. ಅಲ್ಲಿಯ ವರೆಗೂ ಆ ಸಿಲಿಂಡರನ್ನು ಯಾವುದೇ ಹೆದರಿಕೆಯಿಲ್ಲದೆ ಉಪಯೋಗಿಸಬಹುದು. ಆ ದಿನಾಂಕ ಮುಗಿದನಂತರ ಅದನ್ನು ಉಪಯೋಗಿಸಬಾರದು. ಒಂದು ವೇಳೆ ಹಾಗೆ ಮಾಡಿದರೆ, ಅಧಿಕ ಪ್ರಮಾಣದಲ್ಲಿರುವ ಒತ್ತಡದಿಂದ ಆ ಸಿಲಿಂಡರ್ ಒಡೆದುಹೋಗುವ ಅವಕಾಶವಿರುತ್ತದೆ. ಆದುದರಿಂದ ಇನ್ನು ಮುಂದೆ ನೀವು   ಗ್ಯಾಸ್ ಸಿಲಿಂಡರನ್ನು  ಕೊಂಡುಕೊಳ್ಳುವಾಗ  ಅದರ ದಿನಾಂಕವನ್ನೊಮ್ಮೆ ಗಮನಿಸುವುದನ್ನು ಮರೆಯಬೇಡಿ.

ನಿಮ್ಮ ಜೀವನಶೈಲಿಯಿಂದ ಈ 12 ಅಭ್ಯಾಸ ಬಿಟ್ಟುಬಿಟ್ಟರೆ ಸಂತೋಷ ನಿಮ್ನ ಹುಡುಕ್ಕೊಂಡ್ ಬರುತ್ತೆ

💎 *ನಿಮ್ಮ ಜೀವನಶೈಲಿಯಿಂದ ಈ 12 ಅಭ್ಯಾಸ ಬಿಟ್ಟುಬಿಟ್ಟರೆ ಸಂತೋಷ ನಿಮ್ನ ಹುಡುಕ್ಕೊಂಡ್ ಬರುತ್ತೆ* 💎

ಬದುಕಿನಲ್ಲಿ ಖುಷಿಯಾಗಿರೋದೇ ಎಲ್ಲರ ಗುರಿ. ಆದರೆ ಒಂದೇ ರೀತಿ ಯೋಚನೆ ಮಾಡೋದ್ರಿಂದ ನಾವೇನು ಮಾಡ್ಬೇಕು, ಬದುಕಿನಲ್ಲಿ ನಾವು ಎಲ್ಲಿ ಹೋಗ್ಬೇಕು ಅನ್ನೋದು ನಮ್ಗೆ ಮರ್ತು ಹೋಗಿ ನಾವು ಪ್ರತಿಯೊಂಂದಕ್ಕೂ ರಾಜಿ ಮಾಡ್ಕೊಳೋಕೆ ಶುರು ಮಾಡ್ತೀವಿ. ಬೇರೆಯವ್ರ ಜೊತೆ ನಮ್ಮನ್ನ ಹೋಲಿಸಿ ನೋಡ್ಕೊಳ್ಳೋದ್ರಿಂದ, ಬದುಕಿನಲ್ಲಿ ನಾವು ಮಾಡ್ಬೇಕಿರೋದು ಇನ್ನೂ ತುಂಬಾ ಇದೆ ಅಂದ್ಕೊಳ್ತಾ, ನಾವು ಏನು ಮಾಡಿದ್ರೂ ಎಷ್ಟು ಮಾಡಿದ್ರೂ ಅದು ತುಂಬಾ ಕಡಿಮೆ ಆಯ್ತು ಅನ್ನೋ ಕೊರಗಿನಲ್ಲೇ ಇರ್ತೀವಿ. ಆದರೆ, ಯಾವಾಗ್ಲಾದ್ರೂ ಒಮ್ಮೆ ಅವ್ರಿವ್ರು ಹೇಳೋ ಮಾತೆಲ್ಲ ಮರ್ತು, ನಮಗೆ ನಿಜಕ್ಕೂ ಖುಷಿ ಕೊಡೋದು ಯಾವ್ದು ಅನ್ನೋದನ್ನ ಅರ್ಥ ಮಾಡ್ಕೋಬೇಕಾಗುತ್ತೆ. ನಿಮ್ಮ ಖುಷಿ ಯಾವುದ್ರಲ್ಲಿ ಇದೆ ಅನ್ನೋದನ್ನ ಅರ್ಥ ಮಾಡ್ಕೊಳ್ಳೋಕೆ ಕೆಳಗಿರೋ 12 ವಿಷಯಾನ ನಿಮ್ ಬದುಕಿಂದ ತೆಗ್ದು ಹಾಕಿದ್ರೆ ಅರ್ಥ ಆಗತ್ತೆ...


*1. ನಿಮ್ ಸುತ್ತ ಇರೋರ್ ಬದುಕನ್ನ ನೀವು ಬದುಕೋಕೆ ಹೋಗೋದು*

ನಿಮ್ ಸ್ನೇಹಿತ್ರು, ಕಲೀಗ್ಸ್, ಅಥವಾ ನಿಮ್ ಒಡಹುಟ್ಟಿದೋರು ಏನಾದ್ರೂ ಸಾಧನೆ ಮಾಡಿದಾಗ, ನೀವು ಯಾಕಿನ್ನೂ ಏನೂ ಕಡಿದು ಗುಡ್ಡೆ ಹಾಕೋಕಾಗಿಲ್ಲ ಅಂತ ಅನ್ಸೋದು ಸಹಜ. ಬೇರೆಯವ್ರ ಸಾಧನೆ ನೋಡಿ ನೀವು ಅಸೂಯೆಯ ಗುಂಡಿಗೆ ಬೀಳ್ತೀರಿ. ಅವ್ರ ವೈಭವ, ಫೇಮ್ ನಿಮ್ಗೂ ಬೇಕು ಅನ್ಸುತ್ತೆ. ಅವ್ರ ಶ್ರೀಮಂತಿಕೆ, ಆಡಂಬರ ನಿಮ್ಗೆ ಯಾಕಿಲ್ಲ ಅನ್ನೋ ಯೋಚನೆ ನಿಮ್ಮನ್ನ ನುಂಗಿ ಹಾಕುತ್ತೆ. "ನಂಗ್ಯಾಕಿಲ್ಲ?" ಅನ್ನೋ ಪ್ರಶ್ನೆ ಕಾಡುತ್ತೆ. ಈ ಪ್ರಶ್ನೆಗೆ ಉತ್ತರ ಸುಲಭ : ನಿಮ್ ಟೈಮ್ ಇನ್ನೂ ಬಂದಿಲ್ಲ. ನೀವು ಮಾಡ್ತಿರೋದನ್ನ ಏಕಾಗ್ರತೆಯಿಂದ ಮಾಡಿ, ನಿಮ್ಮ ಗುರಿ ಮೇಲಿಂದ ಕಣ್ಣು ತೆಗೀಬೇಡಿ. ನಿಮ್ ಬದುಕನ್ನ ಬದುಕಿ, ಬೇರೆಯವರ್ನ ನೋಡಿ ಉರ್ಕೊಬೇಡಿ, ಹೊಟ್ಟೆಕಿಚ್ಚು ಪಡ್ಬೇಡಿ.


*2. ತುಂಬಾ ತುಂಬಾ ತುಂಬಾ ಕಷ್ಟಪಟ್ಟು ಕೆಲ್ಸ ಮಾಡೋದು*

"ಕೈ ಕೆಸರಾದ್ರೆ ಬಾಯಿ ಮೊಸರು.", ಅನ್ನೋ ಗಾದೆ ಮಾತು ಇದೆ. ಪರಿಶ್ರಮ ಮುಖ್ಯ ಹೌದು, ಆದ್ರೆ ಅಗತ್ಯಕ್ಕಿಂತ ಜಾಸ್ತಿ ಕಷ್ಟ ಪಡೋದು ಕೂಡ ತಪ್ಪು. ನಿಮ್ ದೇಹ ಮತ್ತು ಮನಸ್ಸು ಬಸವಳಿಯೋವರೆಗೆ ಕೆಲಸ ಮಾಡೋದ್ರಿಂದ ಅದು ನಿಮ್ ಕೆಲಸದ್ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಯಾವಾಗ್ಲೂ ಸುಸ್ತು ಹೊಡಿಯೋದ್ರಿಂದ ನಿಮ್ಮ ಆರೋಗ್ಯ ಹಾಳಾಗುತ್ತೆ. ನಿಮ್ ಎನರ್ಜೀನ ಸರಿಯಾಗಿ ಉಪಯೋಗಿಸ್ಕೊಳ್ಳಿ. ಒಂದು ಸಲಕ್ಕೆ ಒಂದೇ ಕೆಲಸಕ್ಕೆ ಕೈ ಹಾಕಿ. ಕೆಲಸದ ಸಮಯದಲ್ಲಿ ಆಗಾಗ ಬ್ರೇಕ್ ತೆಗೊಳ್ಳಿ, ಇದರಿಂದ ನಿಮ್ ಮೆದುಳಿಗೆ ಸ್ವಲ್ಪ ಹಾಯಾಗಿ ಉಸಿರಾಡೋಕೆ ಪುರುಸೊತ್ತು ಸಿಗುತ್ತೆ.


*3. ಸ್ಪಷ್ಟ ಗುರಿ ಇಟ್ಕೊಳ್ಳೋಕೆ ಭಯ ಪಡೋದು*

ನಿಮ್ ಗುರಿ ಮುಟ್ಟೋಕೆ ಬೇಕಾದ ಪ್ರತಿಭೆ ನಿಮ್ಮಲ್ಲಿದ್ಯಾ ಇಲ್ವಾ ಅನ್ನೋದು ಮೊದ್ಲೇ ಗೊತ್ತಾಗೊಲ್ಲ. ಆದರೆ ಆ ಗುರಿ ಮುಟ್ಟೋಕೆ ನೀವು ಏನೆಲ್ಲ ಮಾಡ್ಬೇಕೋ, ಅದನ್ನೆಲ್ಲ ನೀವು ಹಿಂದೆ ಮುಂದೆ ನೋಡದೆ ಮಾಡೋಕೆ ತಯಾರಿದ್ದೀರಿ ಅಂತ ಆದ್ರೆ, ನೀವು ನಿಮ್ ಗುರಿ ಕಡೆಗೆ ನಡೀತಾ ಇದ್ದೀರಿ ಅಂತಾನೆ ಅರ್ಥ. ಕೂತಲ್ಲೇ ಕೂತು, "ನನ್ ಕೈನಲ್ಲಿ ಇದೆಲ್ಲ ಆಗುತ್ತಾ?" ಅಂತ ಚಿಂತೆ ಮಾಡ್ಕೊಂಡು ಟೈಮ್ ವೇಸ್ಟ್ ಮಾಡ್ಬೇಡಿ. ನಿಮ್ಮ ಗುರಿಗಳ್ನ ಪಟ್ಟಿ ಮಾಡ್ಕೊಂಡು, ಅದರ ಕಡೆಗೆ ಪುಟ್ಟ ಹೆಜ್ಜೆ ಇಡ್ತಾ ಹೋಗಿ. ನಿಮ್ ಗುರಿಗೆ ನೀವು ಎಷ್ಟು ಹತ್ತಿರ ಅಥವಾ ದೂರ ಇದ್ದೀರಾ ಅಂತ ಅಳಿಯೋಕೆ ಇದೊಂದೇ ದಾರಿ.


*4. ಕೆಲಸ ಮುಂದ್-ಮುಂದಕ್ಕೆ ಹಾಕೋದು*

ಎಲ್ಲಾರ್ಗೂ 'ಸ್ಟಾರ್ಟಿಂಗ್ ಪ್ರಾಬ್ಲಂ' ಇರುತ್ತೆ. ಆದ್ರೆ ಒಮ್ಮೆ ಶುರು ಮಾಡಿದ್ರೆ, ಗಾಡಿ ತಾನಾಗಿಯೇ ಮುಂದೆ ಹೋಗುತ್ತೆ. ನಾವಿನ್ನೂ ಪೂರ್ತಿ ತಯಾರಾಗಿಲ್ಲ ಅನ್ನೋ ಭಯ ನಮ್ಮನ್ನ ಕುಗ್ಗೋ ಹಾಗೆ ಮಾಡುತ್ತೆ. ಆದ್ರೆ ನಿಜ ಏನಪ್ಪಾ ಅಂದ್ರೆ, ಯಾರೂ ಯಾವ ಕೆಲಸಕ್ಕೂ ಪೂರ್ತಿ ತಯಾರಾಗಿರೊಲ್ಲ. ನಾವು ಹೋಗ್ಬೇಕಿರೋ ದಾರಿಯಲ್ಲಿ ತಪ್ಪು ತಪ್ಪಾಗಿಯಾದ್ರೂ ಕೆಲವು ಹೆಜ್ಜೆಗಳನ್ನ ಇಟ್ರೆ, ನಮ್ ಪ್ಲಸ್ಸು-ಮೈನಸ್ಸು ನಮ್ಗೇ ಗೊತ್ತಾಗುತ್ತೆ. ಮನೇಲಿ ಕೂತು ಚಿಂತೆ ಮಾಡೋದ್ರಿಂದ ಫಲ ಇಲ್ಲ.


*5. ನಿನ್ನೆಯಲ್ಲಿ ಬದುಕೋದು*

ನಿನ್ನೆ ಹಾಗೆ ಮಾಡ್ಬೇಕಿತ್ತು, ಮಾಡ್ಬಹುದಿತ್ತು, ಮಾಡ್ಬಿಟ್ರೆ ಆಗ್ತಿತ್ತು ಅಂತ ಯೋಚಿಸಿ ಪ್ರಯೋಜನ ಇಲ್ಲ. ನಿನ್ನೆ ಏನೋ ತಪ್ಪಾಗಿರುತ್ತೆ, ಇವತ್ತು ಅದನ್ನ ತಿದ್ಕೋಬಹುದು. "ನಿನ್ನೆ ನಿನ್ನೆಗೆ, ನಾಳೆ ನಾಳೆಗೆ, ಇಂದು ನಮ್ಮದೇ!" - ನೆನಪಿಡಿ.


*6. ನಾಳೆಗಳಲ್ಲಿ ಬದುಕೋದು*

ನಾಳೆಯ ಯೋಚನೆ ಭಯ ತರೋದು ಸಹಜ. ನನ್ ಗುರಿ ಮುಟ್ಟೋವರ್ಗೂ ಬದುಕು ನಡ್ಸೋ ಅಷ್ಟು ವರಮಾನ ಬರುತ್ತಾ? ನಾನೇನಾದ್ರೂ ಎಡವಿದ್ರೆ, ನನ್ ಮನೆಯವ್ರು, ಸ್ನೇಹಿತ್ರು ನಂಗೆ ಆಸರೆ ಆಗ್ತಾರಾ? - ಅನ್ನೋದೆಲ್ಲ ಯೋಚನೆ ಮಾಡ್ಬೇಕಾದ ವಿಷಯಗಳೇ, ಆದರೆ ಅಗತ್ಯಕ್ಕಿಂತ ಹೆಚ್ಚು ಯೋಚನೆ ಮಾಡ್ಬಾರ್ದು. ಮುಂದೆ ಏನು ಕಾದಿದೆ ಅನ್ನೋದು ಯಾರಿಗೂ ಗೊತ್ತಿಲ್ಲ, ಅದು ನಮ್ಮಲ್ಲಿ ಅಳುಕು ಹುಟ್ಸೋದು ಸಹಜ. ನಾಳೆಯ ಬಗ್ಗೆ ಉಡಾಫೆ ಇರ್ಬಾರ್ದು, ಆದ್ರೆ ನಾಳೆ ಚಿಂತೆ ಮಾಡೀನೂ ಫಲ ಇಲ್ಲ. ನಿಮ್ ಗುರಿಗಳಿಗೆ ನೀವು ಕಮಿಟ್ ಆಗಿದ್ದು, ಸಣ್ಣ-ಪುಟ್ಟ ಹೊಂದಾಣಿಕೆಗಳ್ನ ್ ಮಾಡ್ಕೊಳ್ತಾ ಹೋದ್ರೆ ಎಲ್ಲ ಸರಿ ಇರುತ್ತೆ. "ಇವತ್ತು ಬಹಳ ಮುಖ್ಯ ದಿನ." - ಪ್ರತಿದಿನವೂ ಹೇಳ್ಕೊಳ್ಳಿ. "ನಿನ್ನೆನಿನ್ನೆಗೆ, ನಾಳೆ ನಾಳೆಗೆ, ಇಂದು ನಮ್ಮದೇ!" - ಆಗ್ಲೇ ಮರ್ತು ಹೋದ್ರಾ ಹೇಗೆ?


*7. ನೀವು ಪರ್ಫೆಕ್ಟ್ ಆಗಿರ್ಬೇಕು ಅಂತ ಬಯಸೋದು*

ಸಂತೋಷವಾಗಿರೋಕೆ ನೀವು ಪರ್ಫೆಕ್ಟ್ ಆಗಿರ್ಬೇಕು ಅಂತ ಏನೂ ಇಲ್ಲ. ನೀವು ಪರ್ಫೆಕ್ಟ್ ಆಗ್ಬಿಟ್ರೆ, ಅಲ್ಲಿಗೆ ಎಲ್ಲ ಮುಗಿದ್ ಹಾಗೆ ಲೆಕ್ಕ. ನಿಮ್ಗೆ ಮಾಡೋಕೆ ಏನ ಇರೋಲ್ಲ. ಸಂತೋಷ ನಿಮ್ಮ ಗುರಿ, ಪರ್ಫೆಕ್ಟ್ ಆಗಿರೋದಲ್ಲ - ನೆನಪಿಡಿ.


*8. ನಿಮ್ ಸಂಬಂಧಗಳು ಪರ್ಫೆಕ್ಟ್ ಆಗಿರ್ಬೇಕು ಅಂತ ಬಯಸೋದು*

ಪ್ರೀತಿ ಪರ್ಫೆಕ್ಟ್ ಅಲ್ಲ. ಸಂಬಂಧಗಳು ಚೆನ್ನಾಗಿರ್ಬೇಕಾದ್ರೆ, ನೀವು ಅದನ್ನ ಚೆಂದ ಮಾಡೋಕೆ ತುಂಬಾ ಕೆಲಸ ಮಾಡ್ಬೇಕು. ನಿಮ್ಗೆ ಪರ್ಫೆಕ್ಟ್ ಆಗಿರೋ ಗಂಡ ಅಥವಾ ಹೆಂಡತಿ ಸಿಗೋಕೆ ಸಾಧ್ಯ ಇಲ್ಲ. ಯಾಕಂದ್ರೆ ಯಾರೂ ಪರ್ಫೆಕ್ಟ್ ಅಲ್ಲ. ನಿಮ್ಗೆ ಸಿಕ್ಕಿರೋ ಪ್ರೀತಿಯನ್ನ ಅನುಭವಿಸಿ. ಮತ್ತೊಬ್ರ ತಪ್ಪನ್ನ ಎತ್ತಿ ತೋರಿಸ್ಬೇಡಿ. ಅವ್ರನ್ನ ಪೂರ್ತಿಯಾಗಿ ಒಪ್ಕೊಳ್ಳಿ, ಅವ್ರು ಹೇಗಿದ್ದಾರೋ ಹಾಗೆಯೇ ಒಪ್ಕೊಳ್ಳಿ. ಬದುSantosh Savadi:
ಕಿನ ಬಗ್ಗೆ ಅವರ ದೃಷ್ಟಿಕೋನ ಏನು, ಅವ್ರು ಹೇಗೆ ತಮ್ಮನ್ನ ತಾವೇ ಇಂಪ್ರೂ ಮಾಡ್ಕೊಳ್ಳೋಕೆ ನೋಡ್ತಿದ್ದಾರೆ - ಅನ್ನೋದನ್ನೆಲ್ಲ ತಿಳ್ಕೊಳ್ಳಿ. ನಿಮ್ಗೆ ಅವ್ರೂ ಇದನ್ನೆಲ್ಲ ಮಾಡ್ತಾರೆ.


*9. ನಿಮ್ ದೇಹ ಪರ್ಫೆಕ್ಟ್ ಆಗಿರ್ಬೇಕು ಅಂತ ಬಯಸೋದು*

"ಜಿಮ್ ಬಾಡಿ", "ಝೀರೋ ಫಿಗರ್" - ಅನ್ನೋ ಮಾತೆಲ್ಲ ಕೇಳಿರ್ತೀರಿ. ನಿಮ್ಗೂ ಅಂಥ ದೇಹ ಬೇಕು ಅಂತ ತುಂಬ ಸಲ ಅಂದ್ಕೊಂಡಿರ್ತೀರಿ. ನೀವು ಯಾವ ಬಟ್ಟೆ ಹಾಕ್ಕೊಬೇಕು, ಎಷ್ಟು ದಪ್ಪ ಇರ್ಬೇಕು ಅನ್ನೋದನ್ನೆಲ್ಲ ಯಾರ್ಯಾರೋ ಹೇಳೋ ಸ್ಟ್ಯಾಂಡರ್ಡ್ಸಿಗೆ ಹೋಲಿಸಿ ನೋಡೋದು ಅನಾವಶ್ಯಕ ತಲೆನೋವಿಗೆ ಮೂಲ. ನಮ್ಮ ಟೀವಿ, ಸಿನಿಮಾ ಎಲ್ಲ ಕಡೆ ಇದೇ ಜಿಮ್ ಬಾಡಿ, ಝೀರೊ ಫಿಗರ್ಗಳು ಇರೋದ್ರಿಂದ ಇದನ್ನ ತಲೆಯಿಂದ ತೆಗ್ದು ಹಾಕೋದು ಸ್ವಲ್ಪ ಕಷ್ಟ ಆದ್ರೂ ಅಸಾಧ್ಯ ಏನಲ್ಲ. ನೀವು ಹೇಗಿರ್ಬೇಕು ಅಂತ ನೀವು ತೀರ್ಮಾನ್ ಮಾಡಿ. ನಿಮ್ಮ ಸ್ಟ್ಯಾಂಡರ್ಡ್ ನೀವೇ ಆಯ್ಕೆ ಮಾಡ್ಕೊಳ್ಳಿ. ಯಾರಾದ್ರೂ ಅಡ್ಡ ಮಾತಾಡಿದ್ರೆ, "ನೀನು ನೀನೇ, ಇಲ್ಲಿ ನಾನು ನಾನೇ!", ಅಂತ ಹೇಳಿ.


*10. "ಇಲ್ಲ, ಬೇಡ, ಆಗೊಲ್ಲ" ಅನ್ನೋ ಪದಗಳ್ನ ಒಪ್ಕೊಳ್ಳೋಕೆ ಆಗ್ದೆ ಇರೋದು*

ನಿಮ್ಮ ಮಾತನ್ನ, ಆಸೆಗಳ್ನ ಬೇರೆಯವ್ರು ಒಪ್ಕೊಳ್ಳೋದಕ್ಕಿಂತ, ಒಪ್ಕೊಳ್ಳದೇ ಇರೋ ಚಾನ್ಸ್ ಹೆಚ್ಚು. ಹಾಗಾದಾಗ ನೀವು ಕುಗ್ಗಿ ಹೋಗ್ಬಹುದು. ಆದ್ರೆ ಪ್ರತಿ ಸಲ ಈ ರೀತಿ ಆದಾಗ್ಲೂ ಮುಂದೆ ಎಲ್ಲೋ ನಿಮಗೆ ಒಪ್ಪಿಗೆ, ಸ್ವೀಕಾರ ಕಾದಿದೆ ಅಂತ ನೆನಪಿಟ್ಕೊಳ್ಳಿ. "ಇಲ್ಲ, ಆಗೊಲ್ಲ, ಬೇಡ", ಅಂತ ಯಾರಾದ್ರೂ ಹೇಳ್ದಾಗ ತುಂಬ ಪರ್ಸನಲ್ ಆಗಿ ತೆಗೋಬೇಡಿ. ಬಿಟ್ಟಾಕಿ ಮುಂದಕ್ ಹೋಗಿ.


*11. ಕುಂಟುನೆಪ ಹುಡ್ಕೋದು*

ಜವಾಬ್ದಾರಿಯಿಂದ ತಪ್ಪಿಸ್ಕೊಳ್ಳೋಕೆ ಸುಳ್ಳು, ಪರದೂಷಣೆ, ಕಟ್ಟುಕತೆಗಳ್ನ ಹೇಳೋದು - ಇದೆಲ್ಲ ಒಳ್ಳೇದಲ್ಲ. ಹೀಗೆ ಮಾಡ್ತಾ ಇದ್ರೆ, ನೀವು ಸ್ವತಃ ಈ ಸುಳ್ಳುಗಳ್ನ ನಂಬೋಕೆ ಶುರು ಮಾಡ್ತೀರಿ. ನಿಮ್ಮಲ್ಲಿರೋ ತಪ್ಪುಗಳನ್ನ ನೀವು ಸರಿಯಾಗಿ ನೋಡ್ಕೊಂಡು ತಿದ್ಕೊಳ್ಳೋಕೆ ಸಾಧ್ಯ ಆಗೊಲ್ಲ. ಕುಂಟುನೆಪ ಹುಡುಕ್ಬೇಡಿ, ತಪ್ಪು ನಿಮ್ದಿದ್ರೆ ಒಪ್ಕೊಳ್ಳಿ.


*12. ತೀರ ಜಾಸ್ತಿ ನಿರೀಕ್ಷೆ / ಅಪೇಕ್ಷೆ ಮಾಡೋದು*

ಬದುಕಿನ ಬಗ್ಗೆ ನಿಮ್ ನಿರೀಕ್ಷೆಗಳು ಏನು? ಅದನ್ನ ನೀವೇ ಆಯ್ಕೆ ಮಾಡ್ಕೊಂಡ್ರಾ ಅಥವಾ ನಿಮ್ ತಂದೆ-ತಾಯಿ ಹೇಳಿ ಕೊಟ್ರಾ? ಅಥವಾ ಯಾವುದೋ ಸೆಲ್ಫ್-ಹೆಲ್ಪ್ ಪುಸ್ತಕ ಓದಿ ಅದರಲ್ಲಿ ಹೇಳಿದೆ ಅಂತ ಈ ನಿರೀಕ್ಷೆಗಳು ನಿಮಗೆ ಬಂತಾ? ಬೇರೆಯವ್ರಿಂದ ಬಂದಿದ್ದಾದ್ರೆ, ಅದನ್ನ ಈಗ್ಲೇ ತೆಗ್ದು ಹಾಕಿ. ಬೇರೆಯವ್ರು ಹೇಳಿದ್ ಹಾಗೆ ಬದುಕಿದ್ರೆ ಸಂತೋಷವಾಗಿರ್ಲಿಕ್ಕೆ ಸಾಧ್ಯಾನೇ ಇಲ್ಲ. ನಿಮ್ ಮನಸಿನ ಮಾತು ನೀವು ಕೇಳೋದ್ರಿಂದ ಮಾತ್ರ ಸಂತೋಷವಾಗಿರ್ಲಿಕ್ಕೆ ಸಾಧ್ಯ. ಸುತ್ತಲೂ ಜೋರು ಗದ್ದಲ ಇದ್ರೆ ನಿಮ್ ಮಾತು ನಿಮ್ಗೇ ಕೇಳ್ಸೊಲ್ಲ. ಬೇರೆಯವ್ರು ಹೇಳೋದೆಲ್ಲ ಈ ರೀತಿ ಅನಾವಶ್ಯಕ ಗದ್ದಲ ಇದ್ದ ಹಾಗೆ. ಅದನ್ನೆಲ್ಲ ಮರ್ತು, ನಿಮ್ಮ ಮನಸಿನ ಮಾತಿಗೆ ಕಿವಿ ಕೊಡಿ. ಅದು ಏನು ಪಿಸುಗುಡ್ತಾ ಇದೆ ಅನ್ನೋದನ್ನ ಕೇಳಿಸ್ಕೊಳ್ಳಿ. ಇದೇ ನಿಜವಾಗ್ಲೂ ಖುಷಿ ಕೊಡೋದು.

ಸಣ್ಣೊರಿಂದ ಹಿಡಿದು ದೊಡ್ಡೊರು, ಮುದುಕರಿಗೂ ಒಳ್ಳೆ ವ್ಯಾಯಾಮ ಅಂದ್ರೆ ಓಡೋದು

*ಸಣ್ಣೊರಿಂದ ಹಿಡಿದು ದೊಡ್ಡೊರು, ಮುದುಕರಿಗೂ ಒಳ್ಳೆ ವ್ಯಾಯಾಮ ಅಂದ್ರೆ ಓಡೋದು.*

 ಇದು ಎಲ್ಲಾರ್ಗೂ ಗೊತ್ತು ಆದ್ರೂ ಮಾಡಲ್ಲ. ಮಾಡಕ್ಕೆ ಹೋಗ್ಬೇಕು ಅನ್ನೋರು ಮತ್ತೆ ಮಾಡಲ್ಲ. ಮನಸ್ಸು ಹಿಂದೇಟಾಕತ್ತೆ. ಓಡೋದ್ರಿಂದ ಏನೇಣನ್ ಲಾಭ ಇದೆ ಇಲ್ಲಿ ಮುಂದೆ ಓದಿ ಆಗ ನೀವು ರೆಡಿ ನಿಮ್ ಮನಸ್ಸು ರೆಡಿಯಾಗತ್ತೆ. ಯಾಕಂದ್ರೆ ಓಡೋದು ಬರೀ ದೇಹಕ್ಕಲ್ಲ, ಮನಸ್ಸಿಗೂ ಕೂಡ.

ದೇಹದ ಎಲ್ಲಾ ಭಾಗಕ್ಕೂ ಒಮ್ಮೇನೇ ಎಕ್ಸರ್ಸೈಸ್ ಆಗ್ಬೇಕು ಅಂದ್ರೆ ದಿನಾ ನಿಗದಿಯಾಗಿ ಇಷ್ಟೋತ್ತು ಅಂತ ಓಡಿ...ಆಮೇಲೆ ಏನ್ ಬೇಕಾದ್ರೂ ಮಾಡಿ

*1. ಹೃದಯಕ್ಕೆ ಶಕ್ತಿ ಬರತ್ತೆ...ಓಡಿ*

ವಾರಕ್ಕೆ ಒಂದೇ ಗಂಟೆ ಓಡಿದ್ರೂ ಸಾಕು ಹೃದಯದ ಆಚೆ ಈಚೆ, ಒಳಗೆಲ್ಲಾ ರಕ್ಸ್ತ ಸಂಚಾರ ಚೆನ್ನಾಗಿ ಆಗೋದ್ರೀಂದ ನಿಮಗೆ ಬಿ.ಪಿ, ಕೊಲೆಸ್ಟ್ರಾಲ್ ಹಾಗೇ ಇನ್ನ್ಯಾವುದೇ ಹೃದಯದ ಖಾಯಿಲೆ ಬರೋ ಸಾಧ್ಯತೆ ಕಡಿಮೆ.

*2. ಬೇರೆ ಬೇರೆ ವ್ಯಾಯಾಮಕ್ಕಿಂತ ಒಳ್ಳೆ ರಿಸಲ್ಟ್ ಸಿಗತ್ತೆ*

ಓಡೋದಕ್ಕೆ ವಾಕ್ ಮಾಡೊಕ್ಕಿಂತ ಹೆಚ್ಚು ಎನರ್ಜಿ ಖರ್ಚಾಗತ್ತೆ. ಒಂದು ಘಂಟೆ ಓಡಿದ್ರೆ 800 ಕ್ಯಾಲೊರಿ ವ್ಯಯ ಆಗತ್ತೆ, ಅದೇ ವಾಕ್ ಮಾಡಿದ್ರೆ ಬರೀ 300 ಕ್ಯಾಲೊರಿ ವ್ಯಯ ಆಗತ್ತೆ! ಅಂದ್ರೇ ಒಡೋ ಬದ್ಲು ವಾಕ್ ಮಾಡಿದ್ರೆ ಡಬಲ್ ಮಾಡ್ಬೇಕಾಗತ್ತೆ.


*3. ಬೇಗ ಸಣ್ಣ ಆಗಿ ತುಂಬಾ ದಿನ ಅದೇ ಮೈಕಟ್ಟು ಇರತ್ತೆ*

ನೀವು ಓಡೋದ್ರಿಂದ ದೇಹದ ಕೊಬ್ಬು ಬೇಗ ಕರಗೋದ್ರಿಂದ ಬೇಗ ಸಣ್ಣ ಆಗ್ತೀರಿ. ಹಾಗೆ ಅದೇ ಮೈಕಟ್ಟು ಓಡೋದನ್ನ ನಿಲ್ಲಿಸಿದ ಮೇಲೂ ಹೆಚ್ಚು ದಿನ ಇರತ್ತೆ. ಬೇರೆ ವ್ಯಾಯಾಮ ಮಾಡಿದ್ರೆ ಎಷ್ಟ್ ಬೇಗ ಸಣ್ಣ್ ಆಗ್ತೀರೋ ಅಷ್ಟೇ ಬೇಗ ಬಿಟ್ತ ಮೇಲೆ ದಪ್ಪಾನೂ ಆಗ್ತೀರಿ ಆಲ್ವಾ?


*4. ಕಡಿಮೆ ಊಟ ಮಾಡಿ ಸ್ಟ್ರಾಂಗ್ ಆಗಿರಕ್ಕೆ ಓಡಿ*

ಸಾಮಾನ್ಯವಾಗಿ ವ್ಯಾಯಮ ಮಾಡಿದ್ಮೇಲೆ ಹಸಿವು ಹೆಚ್ಚಾಗುತ್ತೆ, ಆದ್ರೆ ಸಂಶೋಧನೆಗಳ ಪ್ರಕಾರ ಓಡೋದ್ರಿಂದ ಹಸಿವು ಹುಟ್ಟಿಸೋ ಹಾರ್ಮೋನ್ "ಘ್ರೆಲಿನ್" ಉತ್ಪತ್ತಿ ಕಡಿಮೆ ಆಗೋದ್ರಿಂದ ಓಡೋರು ಕಡಿಮೆ ತಿಂತಾರಂತೆ. ತಿಂದಿದ್ದು ಅಷ್ಟೂ ಸರ್ಯಾಗಿ ಜೀರ್ಣ ಆಗಿ ಜೀವಕೋಶದ ತನಕ ಸರ್ಯಾಗಿ ತಲುಪತ್ತೆ. ಅಗ ನಾವು ಕಡಿಮೆ ತಿಂದ್ವಿ ಅಂತ ಅನ್ನಿಸಿದ್ರೂ ನಮ್ಗೇನು ಸುಸ್ತು ಸಂಕಟ ಆಗಲ್ಲ. ಯಾಕಂದ್ರೆ ತಿಂದಿದ್ದೆಲಾ ಮೈಗೆ ಹತ್ತಿರತ್ತೆ.

*5. ಮೂಳೆ, ಮಾಂಸಖಂಡ ಬಲವಾಗತ್ತೆ*

ನಿಮ್ಮ ದೇಹದ ತೂಕ ಪೂರ್ತಿ ಹೊತ್ತು ವ್ಯಾಯಾಮ ಮಾಡೊದ್ರಿಂದ ಮೂಳೆ ಹಾಗು ಮಾಂಸಖಂಡಗಳಿಗೆ ಶಕ್ತಿ ಹೆಚ್ಚು ಸಿಗುತ್ತೆ. ಹಾಗೆ ದೇಹಕ್ಕೆ ಬ್ಯಾಲನ್ಸ್ ಜಾಸ್ತ್ ಆಗತ್ತೆ.


*6. ಬೆಟ್ಟ ಗುಡ್ಡ ಕಾಡು ಮೇಡು ಎಲ್ಲಿ ಬೇಕಾದ್ರೂ ಸುಲಭವಾಗಿ ಓಡಕ್ಕೆ ದಿನಾ ನಿಮ್ ಮನೆ ಹತ್ರ ಓಡಿ*

ಓಡೋದ್ರಿಂದ ನಮ್ ಸೋಂಟದ ಭಾಗದ ಮೂಳೆ ಮಾಂಸಖಂಡಗಳು ಗಟ್ಟಿ ಆಗತ್ತೆ. ಸೊಂಟ ಗಟ್ಟಿ ಆದ್ರೆ ಎಲ್ಲಿ ನಡೀಬೇಕಾದ್ರೂ ಓಡ್ಬೇಕಾದ್ರೂ ನಮ್ ಮೈ ನಮ್ಗೇ ಭಾರ ಅನ್ಸಲ್ಲ.

*7. ಒಳ್ಳೆ ನಿದ್ದೆ ಮಾಡಕ್ಕೆ ಚೆನ್ನಾಗಿ ಓಡಿ*

ಓಡೋವಾಗ ದೇಹದ ತಾಪ ಹೆಚ್ಚುತ್ತೆ, ಈ ತಾಪ ಓಡಿದ ನಂತರ ಕಡಿಮೆ ಆಗೋದ್ರಿಂದ ನಿದ್ದೆ ಚೆನ್ನಾಗ್ ಬರುತ್ತೆ. ಇದೆ ಕಾರಣಕ್ಕೆ ಆತಂಕ ಅಥವಾ ಖಿನ್ನತೆ ಕೂಡ ಕಾಡಲ್ಲ.


*8. ಬೆಳಗ್ಗಿಂದ ಸಂಜೆ ತನಕ ಕೆಲ್ಸ ಮಾಡಿದ್ರೂ ಸುಸ್ಸ್ತಾಗಬಾರ್ದು ಅಂದ್ರೆ ಓಡಿ*

ದಿನ ಓಡೋದ್ರಿಂದ ಕಾಲಿನ ಮಾಂಸ ಖಂಡಗಳು ಗಟ್ಟಿ ಆಗುತ್ತೆ, ಅದಕ್ಕೆ ದಿನದಿಂದ ದಿನಕ್ಕೆ ಹೆಚ್ಚು ಓಡೋಕೆ ಶಕ್ತಿ ಬರತ್ತೆ.

ಯಾವ ಕೆಲ್ಸ ಬೇಕಾದ್ರೂ ಬೆಳಗ್ಗಿಂದ ಸಂಜೆ ತನಕ ಒಂಚೂರು ಸುಸ್ತಿಲ್ಲದೆ ನಿಭಾಯ್ಸ್ತೀರಿ ಆಗ.


*9. ಮೈ ಚರ್ಮಕ್ಕೆ ಸಿಕ್ಕಾಪಟ್ಟೆ ಕಾಂತಿ ಬರ್ಬೇಕು ಅಂದ್ರೇ ಓಡಿ*

ಓಡೋದ್ರಿಂದ ನಿಮ್ಮ ಚರ್ಮ ಬೆವರುತ್ತೆ, ಜಿಡ್ಡಿನಂಶ ಉತ್ಪತ್ತಿ ಚೆನ್ನಾಗಾಗುತ್ತೆ, ಅದಕ್ಕೆ ನಿಮ್ಮ ಚರ್ಮ ಹೊಳೆಯುತ್ತೆ. ಯಾವ ಫೇಶಿಯಲ್ ಬೇಕು ಇದರ ಮುಂದೆ?


*10. ನೆನಪಿನ ಶಕ್ತಿ ಹೆಚ್ಚತ್ತೆ*

ಓಡೋರಲ್ಲಿ ಮೈ ಮನಸ್ಸು ಎರಡು ಅಲರ್ಟ್ ಆಗಿರತ್ತೆ. ಮರೆವು ಅನ್ನೋ ಪದಾನೇ ನುಸುಳಲ್ಲ. ಮುದುಕ್ರಾದ ಮೇಲೂ ಮರೆವಿನ ಖಾಯಿಲೆ ಬರಲ್ಲ.


*11. ಕ್ಯಾನ್ಸರ್ ತರಹ ದೊಡ್ದ ಖಾಯಿಲೆಗಳಿಂದ ರಕ್ಷಣೆ ಮಾಡತ್ತೆ*

ಓಡೋ ಮಹಿಳೆಯರಲ್ಲಿ ಕರುಳಿನ ಹಾಗೆ ಸ್ಥನದ ಕಾನ್ಸರ್ 30 % ಕಡಿಮೆ ಸಾಧ್ಯತೆ.


*12. ಟೆನ್ಶನ್ ಕಡಿಮೆ ಮಾಡ್ಕೊಂಡು ಸದಾ ಖುಷಿಯಾಗಿರಕ್ಕೆ ಓಡಿ*

ಸ್ವಲ್ಪ ಹೊತ್ತು ಓಡಿದ ನಂತರ ದೇಹದಲ್ಲಿ ಎಂಡಾರ್ಫಿನ್ ಅನ್ನೋ ಹಾರ್ಮೋನ್ ಉತ್ಪತ್ತಿ ಆಗೋದ್ರಿಂದ ಟೆನ್ಶನ್ ರಿಲೀಸ್ ಆಗತ್ತೆ. ಮನಸ್ಸಿಗೂ ಖುಶಿ ಆಗತ್ತೆ.

*13. ಓಡೋದು ಶ್ವಾಸಕೋಶಕ್ಕೂ ಒಳ್ಳೇದು*

ಓಡೋದ್ರಿಂದ ನಿಮ್ಮ ಕೈಕಾಲುಗಳಿಗೆ ಹೆಚ್ಚು ರಕ್ತ ಸಂಚಾರ ಬೇಕಾಗುತ್ತೆ ಇದಕ್ಕೆ ನಿಮ್ಮ ಹೃದಯ ಹೆಚ್ಚು ಬಡಿಯುತ್ತೆ, ಇದಕ್ಕೆ ನಿಮ್ಮ ಶ್ವಾಸಕೋಶ ಹೆಚ್ಚು ಉಸಿರಾಡುತ್ತೆ. ರಕ್ತ ಶುದ್ಧ ಆಗತ್ತೆ. ಇನ್ನೇನ್ ಬೇಕು?ನಮ್ ಆಯುಸ್ಸು ಹತ್ತು ವರ್ಷ ಜಾಸ್ತಿ ಆಗತ್ತೆ :-)

*14. ಓಡೋದ್ರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ*

ನಿಮ್ಮ ದೇಹಕ್ಕೆ ಓಡೋದ್ರಿಂದ ರೋಗಾಣುಳ ಜೊತೆ ಫೈಟ್ ಮಾಡಕ್ಕೆ ಬೇಕಾಗಿರೋ ಅಂಟಿಜೆನ್ಸ್ ಸಾಕಷ್ಟು ಉತ್ಪತ್ತಿ ಆಗತ್ತೆ.

ನಮ್ಮೊಳಗೆ ಶೋಧನೆ

*ನಮ್ಮೊಳಗೆ ಶೋಧನೆ*


ಮಹಾವೀರನ ಸಾಧನೆ ಆಶರಣ ಸಾಧನೆ. ಯಾರಿಗೂ ಶರಣಾಗಬಾರದು. ನಿನ್ನಲ್ಲೇ ನೀನು ಶರಣಾಗಬೇಕು. ಈ ಮೌಲಿಕ ಕ್ರಾಂತಿಕಾರಿ ಬಿಂದುವನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಅವಶ್ಯಕ. ಇದನ್ನು ಅರ್ಥ ಮಾಡಿಕೊಂಡರೆ, ಮಹಾವೀರನ ಸಾಧನೆಯ ಕ್ರಾಂತಿಯನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗುತ್ತದೆ.

ನಾನು ಹೇಳಲು ಬಯಸುವುದು-ನಾವು ಮಹಾವೀರನನ್ನು ಭಗವಂತನ ರೂಪದಲ್ಲಿ ಸ್ಥಾಪಿಸುವ ಮೂಲಕ ಆತನಿಗೆ ತುಂಬಾ ಅನ್ಯಾಯ ಮಾಡುತ್ತಿದ್ದೇವೆ. ಮಹಾವೀರ ನೀವೇ ಭಗವಂತ ಎಂಬುದನ್ನು ಅನುಭವಕ್ಕೆ ತಂದುಕೊಳ್ಳಬೇಕು ಎಂದು ಹೇಳುತ್ತಿದ್ದ. ಮಹಾವೀರ ಬಯಸಿದ್ದುದು, ಆತನನ್ನು ಪರಮಾತ್ಮನೆಂದು ಭಾವಿಸಬೇಕು ಎಂದಲ್ಲ. ಬದಲಿಗೆ ನಿಮ್ಮೊಳಗೆ ಪರಮಾತ್ಮ ಇರುವನು ಎಂಬುದನ್ನು ಅನುಭವಕ್ಕೆ ತಂದುಕೊಳ್ಳಬೇಕು. ಮಹಾವೀರನು ಹೇಳುತ್ತಿರುವ ವಿಚಾರವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ. ಪರಮಾತ್ಮ ಎಂದು ಕರೆಯಲ್ಪಡುತ್ತಿರುವ ಯಾವುದು ನಮ್ಮೊಳಗೆ ಇದೆ? ನಾವು ತಿಳಿದಿರುವ ದೇಹದಲ್ಲಿ ನಮಗೆ ಯಾವುದೇ ಪರಮಾತ್ಮನೂ ಕಾಣಿಸದೇ ಇರಬಹುದು. ಈ ಮನಸ್ಸಿನಲ್ಲಿ ಯಾವುದೇ ಪರಮಾತ್ಮನೂ ಕಾಣಿಸದೇ ಇರಬಹುದು. ದೇಹ ನಮಗೆ ಪಶುವಿನಂತೆ ಕಾಣಬಹುದು. ದೇಹದಲ್ಲಿ ಎಲ್ಲವೂ ಪಶುವಿನಂತೆಯೇ ಇದೆ. ಒಂದು ಮನುಷ್ಯನ ದೇಹಕ್ಕೂ, ಪಶುವಿನ ದೇಹಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಮಾನವನ ದೇಹದ ನಿಯಮವೂ ಪಶುವಿನ ದೇಹದ ನಿಯಮವೂ ಒಂದೇ ಆಗಿದೆ. ದೇಹದ ದೃಷ್ಟಿಯಿಂದ ನಿಮಗೂ ಪಶೂವಿಗೂ ಯಾವುದೇ ಭಿನ್ನತೆ ಇಲ್ಲ. ನಾವು ದೇಹ ಮಾತ್ರವೇ ಆಗಿದ್ದರೆ, ಶರೀರ ಮಾತ್ರವೇ ಆಗಿದ್ದರೆ ಆಗ ನಾವು ಪಶುಗಳೇ ಆಗಿರುತ್ತಿದ್ದೆವು. ದೇಹದಲ್ಲಂತೂ ಯಾವುದೇ ಪರಮಾತ್ಮನ ಸಾಧ್ಯತೆ ಇಲ್ಲ. ಅಂದ ಮೇಲೆ ಪರಮಾತ್ಮ ಮನಸ್ಸಿನಲ್ಲಿ ಇರಬಹುದು.

ಸ್ವಲ್ಪಮನಸ್ಸಿನ ಒಳಗೂ ಹೊಕ್ಕು ನೋಡೋಣ. ಅಲ್ಲಿ ಪಶುವಿಗಿಂತಲೂ ಮಿಗಿಲಾದುದು ಯಾವುದಾದರೂ ಇರಬಹುದು. ಆದರೆ ನೀವು ಸರಿಯಾಗಿ ಮನಸ್ಸನ್ನು ಹೊಕ್ಕು ನೋಡಿದರೆ ತಿಳಿಯುತ್ತದೆ. ಅಲ್ಲಿ ಪಶುವಿಗಿಂತಲೂ ಮಿಗಿಲಾದುದು ಯಾವುದೂ ಇಲ್ಲ. ಈ ಜಗತ್ತಿನಲ್ಲಿ ಯಾವುದೇ ಪಶುವೂ ಮನುಷ್ಯನ ಮನಸ್ಸಿನಷ್ಟು ಕೆಳಗಿಳಿದಿಲ್ಲ. ಅಲ್ಲಿ ಎಷ್ಟೊಂದು ಪಾಪ, ತಿರಸ್ಕಾರ, ದ್ವೇಷ, ಹಿಂಸೆ ವ್ಯಾಪಿಸಿದೆ. ಒಬ್ಬ ದೊಡ್ಡ ಮನೋವೈಜ್ಞಾನಿಕನೇ ಹೇಳಿರುವಂತೆ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನ ದಾಖಲೆಗಳ ಎಲ್ಲ ಪುಟಗಳನ್ನೂ ತಿರುವಿಹಾಕಿದರೆ ತನ್ನ ಬದುಕಿನಲ್ಲಿ ಹಲವರನ್ನು ಹತ್ಯೆ ಮಾಡಬೇಕೆಂದು ಸಂಚು ಹೂಡಿರದ ವ್ಯಕ್ತಿ ಸಿಗುವುದು ತುಂಬಾ ಕಠಿಣ. ತನ್ನ ಮನಸ್ಸಿನಲ್ಲೇ ಹಲವು ದರೋಡೆಗಳನ್ನು ಮಾಡಿರದ ವ್ಯಕ್ತಿ ಸಿಗುವುದು ತುಂಬಾ ಕಠಿಣ. ಮನಸ್ಸಿನಲ್ಲಿ ಒಂದೆರಡು ಪಾಪಿಗಳಲ್ಲ ಅನೇಕ ಪಾಪಿಗಳು ಒಂದೆಡೆ ಸೇರಿದ್ದಾರೆ. ಮನಸ್ಸಿಲ್ಲೂ ಪರಮಾತ್ಮ ಕಾಣುವುದಿಲ್ಲ. ಆದರೆ ಪರಮಾತ್ಮ ನಿಮ್ಮೊಳಗೇ ಇದ್ದಾನೆ ಎನ್ನುತ್ತಾನೆ ಮಹಾವೀರ. ಅಲ್ಲಿ ಎಲ್ಲಿ ಇದ್ದಾನೆ? ದೇಹ ಪಶುವಿನದು, ಅದರೊಳಗಡೆ ಮನಸ್ಸಿರುವುದು. ಅದು ಪಶುವಿಗಿಂತಲೂ ಕೀಳಾಗಿರುವುದು. ಈ ದೇಹ ಮತ್ತು ಮನಸ್ಸು ಎರಡರಲ್ಲೂ ಪರಮಾತ್ಮನಿರುವ ಸಾಧ್ಯತೆ ಇಲ್ಲ.

ಆದರೆ ನಮ್ಮ ತಿಳಿವಳಿಕೆಯು ನಮ್ಮ ಪರಿಚಯ, ನಮ್ಮ ಜ್ಞಾನ ನಮ್ಮ ಶರೀರ ಮತ್ತು ಮನಸ್ಸಿನ ಆಚೆ ಹೋಗುವುದಿಲ್ಲ. ನಮಗೆ ನಮ್ಮ ಶರೀರ ಗೊತ್ತು. ನಮ್ಮ ಮನಸ್ಸು ಗೊತ್ತು. ಇವೆರಡರ ಹಿಂದೆ ಇರುವುದರ ಅಂತಃ ದರ್ಶನ ನಿಮಗೆ ಆಗಿರುವುದಿಲ್ಲ. ಅಂತಹಾ ಅಂತಃದರ್ಶನ ಲಭ್ಯವಾಗದೇ, ಯಾವುದು ಈ ಶರೀರ ಮತ್ತು ಮನಸ್ಸುಗಳ ಹಿಂದೆ ಇರುವುದೋ, ನಮ್ಮೊಳಗೆ ಪರಮಾತ್ಮ ಇರುವನು ಎಂಬ ಸತ್ಯವನ್ನು ಯಾವುದೇ ವ್ಯಕ್ತಿ ಅರಿಯುವುದು ಸಾಧ್ಯವಿಲ್ಲ.

🍀Your mind is never in the present, and time is always in the present; so time and mind never meet. This is the misery — that you are missing the train every moment; and you will go on missing your whole life.🍀

Osho




*Use the mind, but don’t become it. Use it as you use other machines. Mind is a beautiful machine. If you can use it, it will serve you; if you cannot use it and it starts using you, it is destructive, it is dangerous. It is bound to take you into some trouble, into some calamity, into some suffering and misery, because a machine is a blind thing. It has no eyes, it has no insight. Mind cannot see; it can only go on repeating that which has been fed into it. It is like a computer; first you have to feed it.*

Osho

ಯಾರಾದರೂ ಸಾವನ್ನಪ್ಪಿದ ಸುದ್ದಿ ತಿಳಿದರೆ RIP ಎಂದು ಕಾಮೆಂಟ್ ಮಾಡುತ್ತೆವೆ. ಹಾಗೆ ಕಾಮೆಂಟ್ ಮಾಡಬಾರೆಂದು ನಿಮಗೆ ಗೊತ್ತಾ...?

*ಯಾರಾದರೂ ಸಾವನ್ನಪ್ಪಿದ ಸುದ್ದಿ ತಿಳಿದರೆ RIP ಎಂದು ಕಾಮೆಂಟ್ ಮಾಡುತ್ತೆವೆ. ಹಾಗೆ ಕಾಮೆಂಟ್ ಮಾಡಬಾರೆಂದು ನಿಮಗೆ ಗೊತ್ತಾ...?*

Sruji

ಒಬ್ಬ ವ್ಯಕ್ತಿ ಮರಣಹೊಂದಿದ ಸುದ್ದಿ Facebook ಅಥವಾ twitter ನಂತಹ ಸಾಮಾಜಿಕ ತಾಣಗಳಲ್ಲಿ ಕಂಡ ತಕ್ಷಣ RIP ಎಂದು ಕಾಮೆಂಟ್ ಮಾಡುವುದು ನಮಗೆಲ್ಲ ಅಭ್ಯಾಸವಾಗಿಬಿಟ್ಟಿದೆ. ಆದರೆ ಯಾವುದೇ ಕಾರಣಕ್ಕೂ ಆ ಪದವನ್ನು ಬಳಸಬಾರದಂತೆ. RIP ಎಂದರೆ Rest in peace ಎಂದು. ಆತ್ಮ ಪ್ರಶಾಂತವಾಗಿ ವಿಶ್ರಾಂತಿ ಪಡೆಯಲಿ ಎಂಬುದು ಈ RIP ನ ಅರ್ಥ.

ಹಾಗೆ ನೋಡಿದರೆ ನಮ್ಮ ಸನಾತನ ಧರ್ಮದ ಪ್ರಕಾರ ಆತ್ಮಕ್ಕೆ ಸಾವು ಎಂಬುದಿಲ್ಲ. ಆತ್ಮಗೆ ಆಯಾಸವೆಂಬುದು ಆಗುವುದಿಲ್ಲ. ಅಂತಹದರಲ್ಲಿ ವಿಶ್ರಾಂತಿ ಎಲ್ಲಿರುತ್ತದೆ..? ಹಾಗೆಯೇ ಮರಣಾನಂತರ ಜೀವಿಯ ಪಾಪಪುಣ್ಯದ ಆಧಾರದ ಮೇಲೆ, ನಂತರದ ಜನ್ಮ ಹೊಂದುವುದೋ ಅಥವಾ ಸ್ವರ್ಗ ಇಲ್ಲವೇ ನರಕಕ್ಕೆ ಹೋಗುವುದೋ ಅಥವಾ ಮೋಕ್ಷ ಪಡೆಯುವುದೋ ಎಂದಿರುತ್ತದೆ. ಮೋಕ್ಷ ಸಿಗುವ ತನಕ ಇದು ಒಂದು ಚಕ್ರದಂತೆ ಸುತ್ತುತ್ತಿರುತ್ತದೆ. ಇದು ನಮ್ಮ ನಿರೀಕ್ಷೆಯಂತೆ ಇರುವುದಿಲ್ಲ.

RIP ಎಂಬುದು ಪಾಶ್ಚಿಮಾತ್ಯವಾಗಿದ್ದು, ನಮ್ಮ ಸನಾತನ ಧರ್ಮದಲ್ಲಿ ಹೀಗೆ ಹೇಳುವುದು ತಪ್ಪು. ಮರಣಹೊಂದಿದ ವ್ಯಕ್ತಿಗೆ ಮುಕ್ತಿ ದೊರೆಯಬೇಕೆಂದೋ, ಇಲ್ಲವೇ ಸ್ವರ್ಗಕ್ಕೆ ಹೋಗಬೇಕೆಂದು ಪ್ರಾರ್ಥನೆ ಮಾಡಬೇಕೆ ಹೊರತು, RIP ಎಂದು ಪ್ರಾರ್ಥಿಸವುದು ಸನಾತನ ಧರ್ಮಕ್ಕೆ ವಿರುದ್ಧವಾದುದು ಎಂಬುದನ್ನು ನೆನಪಿಡಿ. ಸ್ವರ್ಗ ಪ್ರಾಪ್ತಿರಸ್ತು ಎಂದು ಬಯಸಬೇಕು ಹೊರತು RIP ಹಾಕಬಾರದಂತೆ. ಇನ್ನುಮುಂದೆಯಾದರೂ ಹಾಗೆ ಕಾಮೆಂಟ್ ಮಾಡಬೇಡಿ.

ಮಧುಮೇಹ, ಹೃದಯ ರೋಗಗಳು, ಇನ್ಫೆಕ್ಷನ್’ಗಳಿಗೆ ಪವರ್ ಫುಲ್ ಮೆಡಿಸಿನ್ ಈ ಹಣ್ಣು…!*


*ಮಧುಮೇಹ, ಹೃದಯ ರೋಗಗಳು, ಇನ್ಫೆಕ್ಷನ್’ಗಳಿಗೆ ಪವರ್ ಫುಲ್ ಮೆಡಿಸಿನ್ ಈ ಹಣ್ಣು…!*



ಸೋಡಿಯಂ, ಪೋಟಾಷಿಯಂ, ಕಾಲ್ಷಿಯಂ, ಮೆಗ್ನಿಷಿಯಂ, ಐರನ್, ನಾರಿನಪದಾರ್ಥಗಳು, ಜಿಂಕ್, ಕಾಪರ್, ಪೊಲೆಟ್, ವಿಟಮಿನ್ ಎ,ಸಿ,ಡಿ,ಕೆ೧,ಬಿ೧೨,ಬಿ೬ ಯಾಂಟಿ ಅಕ್ಸಿಡೆಂಟ್ ಗಳು, ಒಮೆಗಾ,3,6 ಫ್ಯಾಟಿ ಯಾಸಿಡ್ ಗಳು…. ಏನಿವೆಲ್ಲಾ ಅಂದುಕೊಳ್ಳುತ್ತಿದ್ದಿರಾ? ಅವೆ ಕಣ್ರೀ, ದಿನ ನಿತ್ಯವೂ ನಾವು ತಿನ್ನುವ ವಿವಿಧ ತರಹದ ಆಹಾರ ಪಧಾರ್ಥಗಳಲ್ಲಿರುವ ಪೋಷಕಾಂಶಗಳು. ಇವುಗಳ ಬಗ್ಗೆ ನಿಮಗೆ ತಿಳಿದೇ ಇರುತ್ತದೆ. ಯಾವ ಯಾವ ಆಹಾರ ಪದಾರ್ಥಗಳನ್ನು ತೆಗೆದುಕೊಂಡರೆ ಎಂತಹ ಲಾಭಗಳು ದೊರೆಯುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಮೇಲೆ  ಹೇಳಿರುವ ಪೋಷಕಾಂಶಗಳೆಲ್ಲವೂ, ನಾವು ತಿನ್ನುವ  ಯಾವುದೊ ಒಂದು ಆಹಾರ ಪದಾರ್ಥದಿಂದ  ಲಭಿಸುತ್ತದೆ. ಆದರೆ ಅವುಗಳೆಲ್ಲಾ ಒಂದೇ ಪಧಾರ್ಥದಲ್ಲಿ ಲಭಿಸಿದರೆ…? ಅದಕ್ಕಿಂತ  ಮಿಗಿಲಾದ, ಅದ್ಭುತವಾದ,  ಪೋಶಕವಾದ ಆಹಾರ ಇನ್ನೇನಿರುತ್ತದೆ. ಅಂತಹ ಆಹಾರ ಪಧಾರ್ಥವೇ ಕೀವಿ. ಕೀವಿ ಹಣ್ಣು ನ್ಯೂಜಿಲ್ಯಾಂಡ್ ನಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಈ ಕೀವಿಹಣ್ಣು ನಮ್ಮ ಹತ್ತಿರ ಈಗ ಹೆಚ್ಚಾಗಿ ಸಿಗುತ್ತಿದೆ. ಡೆಂಗ್ಯೂ ಬಂದಿರುವ ರೋಗಿಗಳು ಇವುಗಳನ್ನು ಈಗ ಹೆಚ್ಚಾಗಿ ತಿನ್ನುತ್ತಿದ್ದಾರೆ. ಅದಕ್ಕೆ ಕಾರಣವೇನೆಂದರೆ, ಈ ಹಣ್ಣಿನಲ್ಲಿರುವ ಯಾಂಟಿ ಆಕ್ಸಿಡೆಂಟ್’ಗಳು. ಆದರೆ ಕೇವಲ ಡೆಂಗಿಜ್ವರಕ್ಕೆ ಮಾತ್ರವೇ ಅಲ್ಲ ಕೀವಿ ಹಣ್ಣುಗಳು ತಿನ್ನುವುದರಿಂದ ನಮಗೆ ಯಾವ ಯಾವ ತರಹದ ಲಾಭಗಳಿವೆ. ಅವುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ…

ಕಣ್ಣಿಗೆ ಸಂಬಂಧಿಸಿದ ರೋಗಿಗಳಿಗೆ…

ದಿನಕ್ಕೆ ಎರಡು, ಮೂರು ಕೀವಿ ಹಣ್ಣುಗಳನ್ನು ತಿಂದರೆ ಕಣ್ಣಿಗೆ ಸಂಭಂಧಿಸಿದ ರೋಗಗಳು ಬರದಹಾಗೆ ನೋಡಿಕೊಳ್ಳಬಹುದು. ವಯಸ್ಸು ಹೆಚ್ಚಾಗುವುದರಿಂದ ಬರುವ ಕಣಗಳ ಕ್ಷೀಣತೆಯನ್ನು ಈ ಹಣ್ಣುಗಳು ತಡೆಗಟ್ಟುತ್ತವೆ.

ಕ್ಯಾನ್ಸರ್  ಬರುವುದಿಲ್ಲ…..

ಶರೀರದಲ್ಲಿ ಆಗುವ ನೈಟ್ರೇಟ್ ಫ್ರೀ ರಾಡಿಕಲ್ಸ್ ಪರಿಣಾಮವನ್ನು ಇವು ಕಡಿಮೆ ಗೊಳಿಸುತ್ತವೆ. ಕ್ಯಾನ್ಸರ್ ಉಂಟುಮಾಡುವ ಜನ್ಯೂನ್ ಬದಲಾವಣೆಗಳನ್ನು ನಿರೋಧಿಸುವ ಪದಾರ್ಥ ಕೀವಿಹಣ್ಣುಗಳಲ್ಲಿ ಇರುತ್ತದೆಯೆಂದು ತಜ್ಞರು ಮಾಡಿರುವ ಪರಿಶೊಧನೆಗಳಲ್ಲಿ ತಿಳಿದುಬಂದಿದೆ. ಚರ್ಮ, ಪಿತ್ತಕೋಶ, ಪ್ರೋಸ್ಟಟ್ ಕ್ಯಾನ್ಸರ್ ಗಳು ಬರದ ಹಾಗೆ ತೆಡೆಕಟ್ಟುತ್ತವೆ.

ಜೀರ್ಣ ಕ್ರಿಯೆ ಸಮಸ್ಯೆಗಳಿಗೆ…….

ರಕ್ತ ನಾಳಗಳಲ್ಲಿ ಗಡ್ಡೆಕಟ್ಟದಂತೆ ನೋಡಿಕೊಳ್ಳುತ್ತವೆ. ಕಿವಿ ಹಣ್ಣಿನಲ್ಲಿ ಫೈಬರ್ ಹೆಚ್ಚಾಗಿರುವುದರಿಂದ ಜೀರ್ಣಕ್ರಿಯೆಯನ್ನು ವೇಗವಾಗಿ  ಕೆಲಸ ಮಾಡುವ ಹಾಗೆ ಮಾಡುತ್ತದೆ. ಯಾಂಟಿ ಆಕ್ಸಿಡೆಂಟ್ ಗುಣಗಳು ಇವುಗಳಲ್ಲಿ ಹೆಚ್ಚಾಗಿ ಇರುತ್ತವೆ.  ಮಾನಸಿಕ ರೊಗಗಳನ್ನು ಕಡಿಮೆ ಮಾಡಿವುದಕ್ಕೆ ಉಪಯೋಗಕರವಾದವು.

ಇನ್ಫೆಕ್ಷನ್’ಗಳು, ರೋಗಗಳನ್ನು ದೂರಮಾಡುತ್ತದೆ…

ರಕ್ತ ಸರಬರಾಜು ಹೆಚ್ಚಾಗುತ್ತದೆ. ಉಸಿರಾಟ, ಆಸ್ತಮಾಗಳಂತಹ ಸಮಸ್ಯೆಗಳನ್ನು ತೊಲಗಿಸುತ್ತದೆ. ಮಕ್ಕಳಿಗೆ ಕನಿಷ್ಟ ಅಂದರೂ ವಾರಕ್ಕೆ ಒಂದುಸಾರಿ ಕೀವಿ ಹಣ್ಣುಗಳನ್ನು ತಿನ್ನಿಸಿದರೆ ಕೆಮ್ಮು, ನೆಗಡೆಗಳಂತಹ ಅನಾರೋಗ್ಯಗಳಿಂದ ದೂರವಿರುವಂತೆ ಮಾಡಬಹುದು.

ಹೃದಯ ರೋಗಿಗಳಿಗೆ….

ಹೃದಯಕ್ಕೆ ಉಪಯೋಗಕಾರಿ ಈ ಹಣ್ಣು. ರಕ್ತದೊತ್ತಡ ನಿಯಂತ್ರಿಸುವುದಕ್ಕೆ ಸಹಾಯಕಾರಿಯಾದುದು. ಗರ್ಭಿಣಿ ಸ್ತ್ರೀರಿಗೆ ಕೀವಿ ಹಣ್ಣುಗಳನ್ನು ತಿನ್ನಿಸಿದರೆ ಒಳ್ಳೆಯ ಪೌಷ್ಟಿಕ ಆಹಾರ  ಲಭಿಸುತ್ತದೆ. ಅಲ್ಲದೆ ಮಗುವಿನ ಬೆಳವಣಿಗೆಗೂ ಸಹಾ ಸಹಾಯವನ್ನುಂಟುಮಾಡುತ್ತದೆ.

ಶುಗರ್, ಅಧಿಕ ತೂಕದ ಸಮಸ್ಯೆಗಳಿಗೆ….

ರಕ್ತದಲ್ಲಿನ ಶುಗರ್ ಮಟ್ಟವನ್ನು ಕಡಿಮೆ ಮಾಡುವ ಗುಣ ಕೀವಿ ಹಣ್ಣಿಗೆ ಇದೆ. ಷುಗರ್ ಇರುವ ರೋಗಿಗಳಿಗೆ ಈ ಹಣ್ಣು ಹೆಚ್ಚು ಉಪಯುಕ್ತವಾಗಿದೆ. ಇವುಗಳನ್ನು ತಿಂದರೆ ಹೊಟ್ಟೆತುಂಬಿದ ಭಾವನೆ ಉಂಟುಮಾಡಿ ಬಹಳ ಸಮಯ ಇದ್ದರೂ ಹಸಿವು ಆಗುವುದಿಲ್ಲ. ಇದರಿಂದ ತೂಕ ಕಡಿಮೆ ಮಡುವುದಕ್ಕೆ ಸಹಾಯವಾಗುತ್ತದೆ.



ಪುರುಷರ ಅರೋಗ್ಯಕ್ಕೋಸ್ಕರ…

ಕಿವಿ ಹಣ್ಣುನಲ್ಲಿ ಇರುವ ಜಿಂಕ್  ಪುರುಷರಲ್ಲಿ ಟೆಸ್ಟೊಸ್ಪಿರಾನ್ ಹಾರ್ಮೊನನ್ನೂ ಉತ್ಪತ್ತಿಮಾಡುತ್ತದೆ. ಚರ್ಮ, ಕೂದಲು, ಹಲ್ಲು, ಉಗುರು ಮತ್ತಿತರ ಬೆಳವಣಿಗೆಗೆ ಜಿಂಕ್ ಸಹಾಯ ಮಾಡುತ್ತದೆ.

ಮೋಹ ಮಿತಿಯಲ್ಲಿರಲಿ

*ಮೋಹ ಮಿತಿಯಲ್ಲಿರಲಿ*

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೨.೦೬.೨೦೦೩ರಂದು ಪ್ರಕಟವಾಗಿತ್ತು)

ಸ್ವಾಮೀಜಿಯೊಬ್ಬರು ಕಾನ್ಪುರದಲ್ಲಿ ಒಬ್ಬರ ಮನೆಗೆ ಅತಿಥಿಯಾಗಿ ಹೋಗಿದ್ದಾಗ ನಡೆದ ಘಟನೆ ಇದು. ಸಂಸಾರದಲ್ಲಿ ವಿಪರೀತ ಮೋಹ ಇಟ್ಟುಕೊಂಡಿದ್ದ ಆ ಮನೆಯ ಹಿರಿಯರಾದ ವಯೋವೃದ್ಧರ ಮನಃಸ್ಥಿತಿಯನ್ನು ಬಿಂಬಿಸುವಂತಿದೆ ಈ ಪ್ರಸಂಗ.

ಆ ಹಿರಿಯರ ಕುಟುಂಬದಲ್ಲಿ ಅವರ ಮಗ ಸೊಸೆ ಇಬ್ಬರೂ ನೌಕರಿಯಲ್ಲಿದ್ದರು. ಮನೆಯಲ್ಲಿ ಕಸಗುಡಿಸುವುದರಿಂದ ಮೊಮ್ಮಕ್ಕಳ ಪಾಲನೆಯವರೆಗೆ ಎಲ್ಲಾ ಕೆಲಸವನ್ನೂ ಆ ಹಿರಿಯರು ವಹಿಸಿಕೊಂಡು ಮಾಡುತ್ತಿದ್ದರು. ಇಷ್ಟೆಲ್ಲಾ ಮಾಡಿದರೂ ಆ ವೃದ್ಧರಿಗೆ ಅವರ ಮುಂಗೋಪಿಯಾದ ಮಗನಿಂದ ಸಿಕ್ಕಾಪಟ್ಟೆ ಬೈಗುಳ ಕೇಳುವುದು ತಪ್ಪಿರಲಿಲ್ಲ!

ಒಂದು ಸಲ ಆ ಮಗ ತನ್ನ ತಂದೆಗೆ ಈ ಸ್ವಾಮೀಜಿ ಎದುರಿಗೇ ಕಪಾಳಕ್ಕೆ ಹೊಡೆದುಬಿಟ್ಟನಂತೆ!ಸ್ವಾಮೀಜಿಗೆ ತುಂಬಾ ಕರುಣೆಯುಂಟಾಗಿ, ನಂತರ ಆ ಹಿರಿಯರಿಗೆ, "ಏನಪ್ಪಾ, ನೀನ್ಯಾಕೆ ಈ ವಯಸ್ಸಿನಲ್ಲಿ ಇಷ್ಟು ಕಷ್ಟ ಪಡ್ತೀಯ. ನನಗೆ ತುಂಬಾ ಪರಿತಾಪವಾಗುತ್ತೆ. ನಾಲ್ಕೈದು ಆಶ್ರಮವಿದೆ. ನಮ್ಮ ಆಶ್ರಮಕ್ಕೆ ಬಂದುಬಿಡು. ನಿನ್ನನ್ನು ತುಂಬಾ ಚೆನ್ನಾಗಿ ನೋಡ್ಕೋತೀನಿ. ಈ ವಯಸ್ಸಿನಲ್ಲಿ ವದೆಗಿದೆ ತಿನ್ಕೊಂಡು ಯಾಕಿರ್ತೀರ ಈ ಮಕ್ಕಳ ಜೊತೆ! ಯಾಕಿಂಥ ಜೀವನ ಮಾಡಬೇಕು ಬಂದುಬಿಡು" ಅಂದರಂತೆ.

ಇಲ್ಲಿಯತನಕ ತನ್ನ ಕೊರಗನ್ನೆಲ್ಲಾ ಹೇಳಿಕೊಳ್ಳುತ್ತಿದ್ದ ಆ ಮನುಷ್ಯ ಒಂದೇ ಸಲ ಕಣ್ಣೆಲ್ಲಾ ಕೆಂಪು ಮಾಡಿಕೊಂಡು ಸ್ವಾಮೀಜೀನ ಕೇಳಿದರಂತೆ "ಏನು, ನಿಮಗೆ ಹಾಳು ಮಾಡೋಕೆ ಬೇರೆ ಯಾವುದೂ ಮನೆ ಸಿಕ್ಕಲಿಲ್ಲವಾ? ನಮ್ಮನೇನೇ ಆಗಬೇಕಾ? ಹೋಗಿ, ಬೇರೆ ಯಾವುದಾದರೂ ಮನೆ ಹುಡುಕಿಕೊಳ್ಳಿ, ಹಾಳುಮಾಡಿ. ನಾನು ಈ ಮನೆ ಬಿಟ್ಟು ಹೋಗಿಬಿಟ್ಟರೆ ಮಕ್ಕಳ  ಮೊಮ್ಮಕ್ಕಳ ಗತಿ ಏನಾಗಬೇಕು? ಮಗ ಸೊಸೆ ಇಬ್ಬರೂ ಕೆಲ್ಸಕ್ಕೆ ಹೋಗಿಬಿಟ್ಟರೆ, ಮನೆಯ ಎಲ್ಲಾ ಕೆಲಸ ಮಾಡೋರು ಯಾರು? ಸುಮ್ಮನೆ ನಮ್ಮನೆ ಹಾಳುಮಾಡಬೇಡಿ. ನಿಮ್ಮ ದಾರಿ ನೋಡ್ಕೊಂಡು ಹೋಗಿ" ಅಂದರಂತೆ. ಸ್ವಾಮೀಜಿಗೆ ಏಕ್ದಂ ಗಾಬರಿಯಾಗಿ ಹೋಯ್ತು!!...

’ಮೋಹ’! ಆ ಮೋಹದಲ್ಲಿ ವದೆ ತಿಂದುಕೊಂಡಾದ್ರೂ ಅಲ್ಲೇ ಇರಬೇಕು. ಸತ್ತರೂ ಪರವಾಗಿಲ್ಲ, ಅಲ್ಲೇ ಇರಬೇಕು.
ಕೆಲವರು ಹಾಗೇ ತಮ್ಮ ಹಳೇಮನೆ ಬಿಟ್ಟು ಬೇರೆ ಮನೆಗೆ ಹೋಗಲ್ಲ. ’ನಾನು ಸತ್ತರೂ ಪರವಾಗಿಲ್ಲ, ಇದೇ ಮನೇಲಿರ್ತೀನಿ’, ಅಥವಾ ’ಇದೇ ಊರಲ್ಲಿರುತ್ತೀನಿ’ ಅಂತಾರೆ! ಊರಿನ ಬಗ್ಗೆ ಮೋಹ, ವ್ಯಕ್ತಿಗಳ ಬಗ್ಗೆ ಮೋಹ! ಈ ಮೋಹ ಒಂದು ಮಿತಿಯಲ್ಲಿ ಇದ್ದರೆ ಸಿದ್ಧಿಯುಂಟಾಗುತ್ತದೆ. ಅದೇ ಮೋಹ ಮಿತಿಮೀರಿದಾಗ, ಅತೀವ ದುಖಕ್ಕೆ ಕಾರಣವಾಗುತ್ತೆ. "ಮೋಹಾವರಣಾತ್ ಸಿದ್ಧಿಃ"

* * * * *

ಸರ್ಕಾರಿ ಕಾರ್ನರ್

*ಸರ್ಕಾರಿ ಕಾರ್ನರ್*

 Monday, 13.02.2017, 4:00 AM

ದಿನದ ಪ್ರಶ್ನೆ

ನನ್ನ ಜನ್ಮದಿನಾಂಕ 1-6-1955. ನಾನು ಉಪನ್ಯಾಸಕನಾಗಿ ಸೇವೆಗೆ ಸೇರಿದ ದಿನಾಂಕ 15-7-1985. 30 ವರ್ಷ ವಯಸ್ಸಿನ ನಂತರ ನೇಮಕಗೊಂಡಿರುತ್ತೇನೆ. ದಿನಾಂಕ 2015 ಮೇ 31ರಂದು ನಿವೃತ್ತಿ ಹೊಂದಿರುತ್ತೇನೆ. ಪ್ರಯುಕ್ತ ನಿವೃತ್ತಿಯ ಸಂದರ್ಭದಲ್ಲಿ ಅರ್ಹ ಸೇವೆಗೆ ಎಷ್ಟು ವರ್ಷ ಸೇವಾ ಅಧಿಕ್ಯ ಸೇರಿಸಲಾಗುತ್ತದೆ?

|ಶಂಕರ ಹುಣಸಗಿ ಯಾದಗಿರಿ.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 247ಎ ರಂತೆ ದಿನಾಂಕ 15-2-2012ರ ನಂತರ ನಿವೃತ್ತಿ ಹೊಂದುವ ಪ್ರಕರಣಗಳಿಗೆ ಸಂಬಂಧಿಸಿದಂತೆ 30 ವರ್ಷ ದಾಟಿ ಸರ್ಕಾರಿ ಸೇವೆಗೆ ಸೇರಿದ್ದರೆ ಪಿಂಚಣಿಯ ಉದ್ದೇಶಕ್ಕಾಗಿ 2 ವರ್ಷಗಳ ಹೆಚ್ಚುವರಿ ಅರ್ಹತಾದಾಯಕ ಸೇವೆಯನ್ನು ವಿಶೇಷ ಸೇರ್ಪಡೆಯಾಗಿ ಸೇರಿಸಲಾಗುತ್ತದೆ. ಈ ನಿಯಮದ ತಿದ್ದುಪಡಿ ನೇರ ನೇಮಕಾತಿ ಪ್ರಕರಣಗಳಿಗೆ ಮಾತ್ರ ಅನ್ವಯವಾಗುತ್ತದೆ. ಆದುದರಿಂದ ನೀವು ಸೇವಾ ಅಧಿಕ್ಯ ಸೇರಿಸಲು ನಿಮ್ಮ ನೇಮಕಾತಿ ಪ್ರಾಧಿಕಾರದ ಮೂಲಕ ಮಹಾಲೇಖಪಾಲರಿಗೆ ಮನವಿಯನ್ನು ಸಲ್ಲಿಸಬಹುದು.

ಮೇಕೆ ಹಾಲಿನಲ್ಲಿ ಈ ಎರಡು ಮಿಕ್ಸ್ ಮಾಡಿಕೊಂಡು ಕುಡಿದರೆ ಮಂಡಿ ನೋವು ಶಾಶ್ವತವಾಗಿ ಕಡಿಮೆಯಾಗುತ್ತದೆ

*ಮೇಕೆ ಹಾಲಿನಲ್ಲಿ ಈ ಎರಡು ಮಿಕ್ಸ್ ಮಾಡಿಕೊಂಡು ಕುಡಿದರೆ ಮಂಡಿ ನೋವು ಶಾಶ್ವತವಾಗಿ ಕಡಿಮೆಯಾಗುತ್ತದೆ.*


ದಿನ ಪರಿಸ್ಥಿತಿಯಲ್ಲಿ ಮೊಣಕಾಲು(ಮಂಡಿ) ನೋವು ಎಂಬುದು ತೀವ್ರವಾದ ಅನಾರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಒಮ್ಮೆ ಈ ಸಮಸ್ಯೆ ಬಂದಿದೆ ಎಂದರೆ ಅದರ ನೋವು ಅನುಭವಿಸಿದವರಿಗೇ ಗೊತ್ತು. ಎಷ್ಟೇ ಔಷಧಗಳನ್ನು ಬಳಸಿದರೂ ತಾತ್ಕಾಲಿಕ ಹೊರತು ಉಪಶಮನ ಹೊರತು ಶಾಶ್ವತ ಪರಿಷ್ಕಾರ ಇರುವುದಿಲ್ಲ. 40-45 ವಯಸ್ಸು ಆದಮೇಲೆ ತುಂಬಾ ಜನರಿಗೆ ಮೊಣಕಾಲು ನೋವು ಕಾಣಿಸಿಕೊಳ್ಳುತ್ತವೆ. ಇನ್ನೂ ಫ್ಲೋರೈಡ್ ಸಮಸ್ಯೆಯಿಂದ ಎಲ್ಲಾ ವಯಸ್ಸಿನವರಲ್ಲೂ ಮೊಣಕಾಲು ನೋವು, ಕೀಲುಗಳ ನೋವು ಕಾಣಿಸಿಕೊಳ್ಳುತ್ತದೆ. ಮಂಡಿ ನೋವಿಗೆ ನಮ್ಮ ಸಂಪ್ರದಾಯಿಕ ಪದ್ದತಿಯಲ್ಲಿ ತುಂಬಾ ಜನರಿಗೆ ತಿಳಿಯದ ಪರಿಷ್ಕಾರವಿದೆ.ಅದೇ ಮೇಕೆಯ ಹಾಲು… ಇಷ್ಟಕ್ಕೂ ಮೇಕೆ ಹಾಲು ಹೇಗೆ ಸೇವಿಸಿದರೆ ಮೊಣಕಾಲು ನೋವು ಕಡಿಮೆಯಾಗುತ್ತದೆ ಎಂದು ತಿಳಿದುಕೊಳ್ಳೋಣ…

*ಹೀಗೆ ತಯಾರಿಸಿಕೊಳ್ಳಬೇಕು:*
ಪ್ರತಿದಿನ ಬೆಳಗ್ಗೆ, ಸಂಜೆ ಒಂದು ಗ್ಲಾಸ್ ಪ್ರಮಾಣದಲ್ಲಿ ಉಗುರು ಬೆಚ್ಚಗಿನ ಮೇಕೆ ಹಾಲಿನಲ್ಲಿ ಒಂದು ಸ್ಪೂನ್ ಎಳ್ಳುಪುಡಿ, ಸಣ್ಣ ಬೆಲ್ಲದ ಚೂರು ಸೇರಿಸಿ ಕುಡಿಯಬೇಕು.

*ಉಪಯೋಗಗಳು:*

ಹೀಗೆ ನಿಯಮಿತವಾಗಿ ಕುಡಿಯುತ್ತಿದ್ದರೆ ಒಂದು ತಿಂಗಳಲ್ಲಿ ಮಂಡಿ ನೋವು ಕಡಿಮೆಯಾಗುವುದನ್ನು ಅನುಭವಪೂರ್ವಕವಾಗಿ ತಿಳಿಯುತ್ತದೆ.

ಮೇಕೆ ಹಾಲಿನಲ್ಲಿ ಮಂಡಿ ನೋವನ್ನು ಕಡಿಮೆ ಮಾಡುವ ಔಷಧೀಯ ಗುಣಗಳಿವೆ ಎಂದು ಸಂಶೋಧನೆಗಳು ಹೇಳಿವೆ. ಮೇಕೆ ಹಾಲಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.

ವಿಟಮಿನ್ ಡಿ ಹಾಗೂ ಇತರೆ ಪೋಷಕಾಂಶಗಳು ದೇಹಕ್ಕೆ ಸಮೃದ್ಧವಾಗಿ ಸಿಗುತ್ತವೆ. ಕರಗಿದ ಕಾರ್ಟಿಲೆಜ್ ಪುನರ್ ಉತ್ಪತ್ತಿಯಾಗುತ್ತದೆ.

ಒಂದು ಲೀಟರ್ ಹಾವಿನ ವಿಷದ ಬೆಲೆ 27 ಲಕ್ಷ, ಅದೇ ಚೇಳಿನ ವಿಷವಾದರೆ 26 ಕೋಟಿ..! ಯಾಕೆಂದು ತಿಳಿದರೆ ಆಶ್ಚರ್ಯಪಡುತ್ತೀರ…!

*ಒಂದು ಲೀಟರ್ ಹಾವಿನ ವಿಷದ ಬೆಲೆ 27 ಲಕ್ಷ, ಅದೇ ಚೇಳಿನ ವಿಷವಾದರೆ 26 ಕೋಟಿ..! ಯಾಕೆಂದು ತಿಳಿದರೆ ಆಶ್ಚರ್ಯಪಡುತ್ತೀರ…!*

Sruji



ಒಂದು ಲೀಟರ್ ಹಾವಿನ ವಿಷದ ಬೆಲೆ 27 ಲಕ್ಷ, ಅದೇ ಚೇಳಿನ ವಿಷವಾದರೆ 130 ರಷ್ಟು ಜಾಸ್ತಿ 26 ಕೋಟಿ ಬೆಲೆ ಇದೆಯಂತೆ. ನಂಬಿಕೆ ಬರುತ್ತಿಲ್ವಾ… ಆದರೂ ಇದು ನಿಜ… ಪ್ರಪಂಚದ ಅತ್ಯಂತ ಬೆಲೆಬಾಳುವ ದ್ರವ ಪದಾರ್ಥ ಚೇಳಿನ ವಿಷ ಎಂದು ಪರಿಗಣಿಸಲಾಗುತ್ತದೆ. ಸಾಧಾರಣವಾಗಿ ಚೇಳು ತನ್ನ ಆಹಾರಕ್ಕಾಗಿ ಇತರೆ ಕೀಟಗಳನ್ನು ಕೊಲ್ಲಲು, ತನ್ನನ್ನು ಶತ್ರುಗಳಿಂದ ರಕ್ಷಿಸಿಕೊಳ್ಳಲು ತನ್ನ ಕೊಂಡಿಯಲ್ಲಿನ ವಿಷವನ್ನು ಬಳಸುತ್ತದೆ. ಆದರೆ ಅದೇ ವಿಷ ಮನುಷ್ಯರ ಎಷ್ಟೋ ರೋಗಗಳು, ಕಾಯಿಲೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ.

ಚೇಳುಗಳಲ್ಲಿ ಸಾವಿರಾರು ಜಾತಿಯ ಚೇಳುಗಳಿದ್ದರೂ 25 ಜಾತಿಯ ಚೇಳುಗಳು ಮಾತ್ರ ವಿಷವನ್ನು ಹೊಂದಿರುತ್ತವೆ. ಚೇಳಿನ ವಿಷದಲ್ಲಿರುವ ಪ್ರೋಟೀನ್ ಅಂಶ ಹೆಚ್ಚಿನ ಪ್ರಮಾಣದಲ್ಲಿದ್ದು, ಔಷಧಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದರ ವಿಷ ಚರ್ಮರೋಗ ವಿಜ್ಞಾನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಚೇಳಿನ ವಿಷದಲ್ಲಿರುವ ಕ್ಲೊರೊಟಾಕ್ಸಿನ್‌ ಮೆದುಳಿನ ಕ್ಯಾನ್ಸ್‌ರ್‌ನಿಂದ ಹಾಳಾದ ಕೋಶಗಳನ್ನು ಸರಿ ಪಡಿಸುತ್ತದೆ. ಕೀಲು ನೋವು, ಕಣ್ಣಿನ ಪೊರೆ ನಿವಾರಣೆ ಮತ್ತು ಶಕ್ತಿವರ್ಧಕವಾಗಿಯೂ ಚೇಳಿನ ವಿಷ ಬಳಕೆಯಾಗುತ್ತದೆ. ಅದಕ್ಕಾಗಿ ಚೇಳಿನ ವಿಷಕ್ಕೆ ಅಷ್ಟೊಂದು ಬೆಲೆ ಇರುವುದು.

ಮಕ್ಕಳ ಕನಸು

*ಮಕ್ಕಳ ಕನಸು*

ಸಾಮಾನ್ಯವಾಗಿ ಎಲ್ಲಾ ತಂದೆತಾಯಿಯರು ತಮ್ಮ ಮಕ್ಕಳ ಬಗ್ಗೆ ಅಪಾರವಾದ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ತಮ್ಮ ಮಕ್ಕಳು ಹೀಗಾಗಬೇಕು,  ಹಾಗಾಗಬೇಕು ಎಂಬ ಹಲವಾರು ಆಸೆ ಆಕಾಂಕ್ಷೆಗಳನ್ನು ಇರಿಸಿಕೊಂಡು ತಮ್ಮ ಮಕ್ಕಳನ್ನು ಆ ದಿಸೆಯಲ್ಲಿ ನಡೆಸಲು ಶ್ರಮ ಹಾಕುತ್ತಾರೆ.  ತಮ್ಮ ಮಕ್ಕಳು  ತಮಗಿಂತ ಹೆಚ್ಚು ಪುರೋಭಿವೃದ್ಧಿಗೆ  ಬರಬೇಕೆಂದು ತಮ್ಮ ಅಮೂಲ್ಯವಾದ ಸಮಯವನ್ನು ತೊಡಗಿಸಿಕೊಂಡು ಮಕ್ಕಳಿಗೆ ಶಿಕ್ಷಣವನ್ನು ಹಲವಾರು ಪ್ರಾಕಾರಗಳಲ್ಲಿ ಕೊಡಿಸುತ್ತಾರೆ, ಕೊಡುತ್ತಾರೆ. ತಮ್ಮ ಮಕ್ಕಳ ಸ್ವಲ್ಪ ಯಶಸ್ಸು ಕೂಡಾ,  ಅಪ್ಪ ಅಮ್ಮರಿಗೆ ಅಪಾರ ಸುಖವನ್ನು ನೀಡುತ್ತದೆ.  ಆದರೆ, ಕೆಲವೊಮ್ಮೆ ಮಕ್ಕಳ ಮನಸ್ಸು ಬೇರೆಡೆಗೆ ಹೋದಾಗ, ಅಥವಾ ತಂದೆತಾಯಿಯರ ಆಸೆ ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾದಾಗ, ಅಥವಾ ತಮ್ಮ ಕನಸುಗಳು ವಿಭಿನ್ನವಾದಾಗ, ಇನ್ನಿತರ ಯಾವುದೋ ಕಾರಣದಿಂದ ನಿರೀಕ್ಷಿತ ಫಲಿತಾಂಶ ಸಿಗದಾದಾಗ ಮಕ್ಕಳ ಮೇಲೆ ಅಪ್ಪ ಅಮ್ಮರ ನಿರಾಸೆ ಹೆಚ್ಚಾಗುತ್ತದೆ.  ಕೆಲವೊಮ್ಮೆ ಅಸಡ್ಡೆ, ತಿರಸ್ಕಾರ ಮತ್ತು ಸಿಟ್ಟು ಇವುಗಳು ಮಕ್ಕಳ ಮೇಲೆ ದುಬಾರಿಯಾದ ಪರಿಣಾಮ ಬೀರುತ್ತವೆ.     ಇಂತಹ ಜಟಿಲವಾದ  ಸಮಸ್ಯೆಗಳು ಬರುವ ಮುಂಚೆ ಮಕ್ಕಳ ಮನಸನ್ನು ಅರ್ಥಮಾಡಿಕೊಳ್ಳುವುದು ಅವಶ್ಯಕ.  ಮಕ್ಕಳ ಕನಸು, ವಿಚಾರ ಮತ್ತು ಆಸೆಗಳು ತೀರಾ ಬಾಲಿಶವಾಗಿದೆಯೆಂದು ನಮಗೆ ಅನ್ನಿಸಬಹುದು,  ಆದರೆ,ಆ ಚಿಂತನೆಯಲ್ಲೂ  ಸರಿಯಾದ ದಿಕ್ಕು ಇರುತ್ತೆ  ಎಂಬುದನ್ನು   ತಂದೆ ತಾಯಿಯರು ಮರೆಯಬಾರದು.

ನರೇಂದ್ರ ಚಿಕ್ಕ ಹುಡುಗನಾಗಿದ್ದಾಗ ತನ್ನ ತಂದೆ ತಾಯಿಯ ಜೊತೆ ಎರಡು ಕುದುರೆಗಳ ಸಾರೋಟಿನ ಪ್ರಯಾಣವನ್ನು ಬಹಳ ಇಷ್ಟ ಪಡುತ್ತಿದ್ದ.  ಕಲ್ಕೊತ್ತ ನಗರ ಸಂಚಾರ ಮಾಡುವಾಗ ಕುದುರೆಯ ಕಾಲಿನ ಟಕ್ ಟಕ್ ಸದ್ದು, ಕಟ್ಟಿದ ಗೆಜ್ಜೆಯ ನಿನಾದ, ತಂಪಾದ ಗಾಳಿ ಇವೆಲ್ಲವೂ ನರೆಂದ್ರನಿಗೆ ಬಹಳ ಆಪ್ಯಾಯಮಾನವಾಗಿತ್ತು.  ಇಂತಹ ನಗರ ಪ್ರದಕ್ಷಿಣೆ ಮುಗಿಸಿ ಬಂದ ನರೇಂದ್ರನ ತಂದೆ " ನೀನು ದೊಡ್ಡವನಾದ ಮೇಲೆ ಏನು ಆಗಲು ಬಯಸುತ್ತೀ? " ಎಂದು ಪ್ರಶ್ನೆ ಹಾಕಿದರು.  ನರೇಂದ್ರ ಕ್ಷಣ ಮಾತ್ರವೂ ತಡಮಾಡದೆ " ನಾನು ಜೋಡಿ ಕುದರೆಯ ಸಾರೋಟಿನ ಸವಾರನಾಗುತ್ತೀನಿ " ಎಂದು ಉತ್ತರಿಸಿದ.  ಈ ಮಾತು ನರೇಂದ್ರನ ತಂದೆಗೆ ಅತ್ಯಂತ ಸಿಟ್ಟು ಮತ್ತು ನಿರಾಸೆ ಒಮ್ಮೆಲೇ ಆಯಿತು.  ಇದನ್ನು ಗಮನಿಸಿದ ತಾಯಿ ನರೇಂದ್ರನ ಕೈ ಹಿಡಿದುಕೊಂಡು ನೇರಾ ದೇವರಮನೆಗೆ ಕರೆದುಕೊಂಡು ಹೋಗಿ ದೇವರಮುಂದೆ ನಿಲ್ಲಿಸಿ ಅಲ್ಲಿ ಇರಿಸಲಾಗಿದ್ದ ಶ್ರೀ ಕೃಷ್ಣನ ಭಗವದ್ಗೀತಾ ಉಪದೇಶದ ಫೋಟೋ ತೋರಿಸುತ್ತ " ಈ ರೀತಿಯ ಸವಾರನಾಗಲು ಬಯಸಿರುವೆ ಅಲ್ಲವೇ? " ಎಂದು ಕೇಳಿದರು.  ನರೇಂದ್ರನ ಬಾಯಿಂದ ಮಾತು ಬರಲಿಲ್ಲ.  " ನೀನು ಜೋಡಿ ಕುದುರೆಗಳ ಸಾರೋಟಿನ ಸವಾರನೇ ಆಗುವುದಾದರೆ ಶ್ರೀಕೃಷ್ಣನ ತರಹ ಜಗತ್ತಿಗೆ ಬೆಳಕು ಕೊಡುವ ಸವಾರನಾಗು." ಎಂದು ಹುರಿದುಂಬಿಸಿದರು.  ಮುಂದೆ ಆ ಪುಟ್ಟ ನರೇಂದ್ರನೆ,   ಸ್ವಾಮಿ   ವಿವೇಕಾನಂದನಾಗಿ ಜಗತ್ತಿಗೆ ಬೆಳಕು ತೋರಿದ ಸವಾರನಷ್ಟೇ ಅಲ್ಲ ಸರದಾರನು   ಆದರು.

*ಮಕ್ಕಳ ಮನಸಿನಲ್ಲಿ ಇರುವ ಆಸೆಗಳು ಅಸ್ಪಷ್ಟವಾಗಿರಬಹುದು, ಕನಸುಗಳು ಬಾಲಿಶ ಎನಿಸಬಹುದು, ವಿಚಾರಗಳು ಅಸಂಬದ್ಧ ಎನಿಸಬಹುದು.  ಆದರೆ ಸ್ವಲ್ಪ ತಾಳ್ಮೆ ವಹಿಸಿ, ಮಕ್ಕಳ ಕನಸಿಗೆ, ಆಸೆಗಳಿಗೆ, ವಿಚಾರಗಳಿಗೆ ಹೇಗೆ ನೀರೆರೆದು ಪೋಷಿಸಿ ಬೆಳೆಸೆಬಹುದು ಎಂಬುದರ ಬಗ್ಗೆ ಚಿಂತಿಸಿದರೆ ಸಾಕು ಮಕ್ಕಳು ಹೆಚ್ಚು ಸಬಲರಾಗುತ್ತಾರೆ.  ತಮ್ಮ  ಮಕ್ಕಳು ಪ್ರತಿಭಾಶಾಲಿಗಳು ಆಗಬೇಕೆಂಬುದು ಪ್ರತಿ ತಂದೆತಾಯರ ಉದ್ದೇಶವು ಅದೇ ತಾನೇ!*

ಹೆಚ್ ಏನ್ ಪ್ರಕಾಶ್
🌹🌺🌹🌺🌹🌺🌹🌺🌹

*“If you love a flower, don’t pick it up.*
*Because if you pick it up it dies and it ceases to be what you love.*
*So if you love a flower, let it be.*
*Love is not about possession.*
*Love is about appreciation.”*

― Osho
🌹🌺🌹🌺🌹🌺🌹
*"किसी से किसी भी तरह की प्रतिस्पर्धा की आवश्यकता नहीं है. आप स्वयं में जैसे हैं एकदम सही हैं. खुद को स्वीकारिये."*



*"There is no need of any competition with anybody. You are yourself, and as you are, you are perfectly good. Accept yourself."*

 - Osho



Look at the trees, look at the birds, look at the clouds, look at the stars… and if you have eyes you will be able to see that the whole existence is joyful. Everything is simply happy. Trees are happy for no reason; they are not going to become prime ministers or presidents and they are not going to become rich and they will never have any bank balance. Look at the flowers – for no reason. It is simply unbelievable how happy flowers are.”*

osho

ನಿಮಗಿದು ಗೊತ್ತೇ?

*"ನಿಮಗಿದು ಗೊತ್ತೇ??? "*


👉ನಿಂತುಕೊಂಡು ನೀರು ಕುಡಿಯುವವರ ಕೀಲು ನೋವನ್ನು ಪ್ರಪಂಚದ ಯಾವುದೇ ವೈದ್ಯರಿಂದ ಸರಿಪಡಿಸಲಾಗುವುದಿಲ್ಲ.


👉ವೇಗವಾಗಿ ತಿರುಗುವ fan ಅಥವಾ A.C ಯ ಅಡಿಯಲ್ಲಿ ಮಲಗುವವರಿಗೆ ಸ್ಥೂಲಕಾಯ ತಪ್ಪಿದ್ದಲ್ಲ.



👉 *70% ಶರೀರದ ನೋವನ್ನು ಯಾವುದೇ Pain Killer ಗಿಂತಲೂ ವೇಗವಾಗಿ ಕಡಿಮೆ ಮಾಡುವ ಶಕ್ತಿ ಒಂದು ಗ್ಲಾಸ್ ಬಿಸಿ ನೀರಿಗಿದೆ.


👉ಕುಕ್ಕರ್ನಲ್ಲಿ ಬೇಳೆ ಕರಗುತ್ತದೆ, ಬೇಯುವುದಿಲ್ಲ. ಇದರಿಂದ ಆ್ಯಸಿಡಿಟಿ ಉಂಟಾಗುತ್ತದೆ.



👉ಅಲ್ಯೂಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ.



👉ಷರಬತ್ತು ಹಾಗೂ ಎಳನೀರು ಬೆಳಗ್ಗೆ 11 ಗಂಟೆಯವರೆಗೆ ಮಾತ್ರ ಅಮೃತವಿದ್ದಂತೆ.



👉ಲಕ್ವ ಹೊಡೆದ ತಕ್ಷಣ ರೋಗಿಯ ಮೂಗಿನಲ್ಲಿ ದೇಸೀ ಹಸುವಿನ ತುಪ್ಪ ಹಾಕುವುದರಿಂದ ಕೇವಲ 15 ನಿಮಿಷದಲ್ಲಿ ಲಕ್ವ ಹತೋಟಿಗೆ ಬರುತ್ತದೆ.



👉ದೇಸೀ ಹಸುವಿನ ಮೇಲೆ ಕೇವಲ ಕೈ ಆಡಿಸುವುದರಿಂದ BP ಹತ್ತು ದಿನಗಳಲ್ಲಿ ಸಹಜ ಸ್ಥಿತಿಗೆ ಮರಳುತ್ತದೆ.


*ಒಳ್ಳೆಯ ವಿಷಯ. ಅಲ್ಲವೆ*

ಚಲನಚಿತ್ರದಲ್ಲಿ ರಾಷ್ಟ್ರಗೀತೆ ಪ್ರಸಾರವಾದರೆ ವೀಕ್ಷಕರು ಎದ್ದು ನಿಲ್ಲುವ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್

*ಚಲನಚಿತ್ರದಲ್ಲಿ ರಾಷ್ಟ್ರಗೀತೆ ಪ್ರಸಾರವಾದರೆ ವೀಕ್ಷಕರು ಎದ್ದು ನಿಲ್ಲುವ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್*

Published: 14 Feb 2017 01:32 PM IST | Updated: 14 Feb 2017 03:16 PM IST


ನವದೆಹಲಿ: ಚಲನಚಿತ್ರ ಅಥವಾ ಸಾಕ್ಷ್ಯಚಿತ್ರದ ಭಾಗವಾಗಿ ರಾಷ್ಟ್ರಗೀತೆ ಪ್ರಸಾರವಾಗುವಾಗ ವೀಕ್ಷಕರು ಎದ್ದುನಿಲ್ಲುವ ಅವಶ್ಯಕತೆಯಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಸ್ಪಷ್ಟಪಡಿಸಿದೆ. ದೇಶಾದ್ಯಂತ ಇರುವ ಎಲ್ಲಾ ಚಲನಚಿತ್ರ ಮಂದಿರಗಳಲ್ಲಿ ಚಿತ್ರ ಪ್ರಸಾರಕ್ಕೆ ಮುನ್ನ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಕೆಲ ತಿಂಗಳ ಹಿಂದೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಇಂದು ಈ ಸ್ಪಷ್ಟನೆ ನೀಡಿದೆ. ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಸಭಾಂಗಣದಲ್ಲಿರುವ ಎಲ್ಲರೂ ಎದ್ದುನಿಂತು ಗೌರವ ಸೂಚಿಸಬೇಕು ಎಂದು ಕೂಡ ಹೇಳಿತ್ತು.

ಇಂದು ಸ್ಪಷ್ಟನೆ ನೀಡಿರುವ ಸುಪ್ರೀಂ ಕೋರ್ಟ್, ರಾಷ್ಟ್ರಗೀತೆಯನ್ನು ಚಲನಚಿತ್ರ ಆರಂಭಕ್ಕೆ ಮುನ್ನ ಪ್ರಸಾರ ಮಾಡುವಾಗ ರಾಷ್ಟ್ರಧ್ವಜವನ್ನು ಪರದೆ ಮೇಲೆ ತೋರಿಸಬೇಕು, ಇಡೀ ರಾಷ್ಟ್ರಗೀತೆಯನ್ನು ಚಲನಚಿತ್ರ ಆರಂಭಕ್ಕೆ ಮುನ್ನ ಪ್ರಸಾರ ಮಾಡಬೇಕು ಮತ್ತು ರಾಷ್ಟ್ರಗೀತೆಯನ್ನು ಚಲನಚಿತ್ರದ ಮಧ್ಯದಲ್ಲಿ ಯಾವುದೇ ವಾಣಿಜ್ಯ ಉಪಯೋಗಕ್ಕೆ ಪ್ರಸಾರ ಮಾಡಬಾರದು. ಜನರು ಕಡ್ಡಾಯವಾಗಿ ರಾಷ್ಟ್ರಗೀತೆಯನ್ನು ಹಾಡುವ ಅಗತ್ಯವಿಲ್ಲ ಎಂದು ಕೂಡ ಹೇಳಿದೆ.

ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಅಮಿತಾವ ರಾಯ್ ಅವರಿದ್ದ ನ್ಯಾಯಪೀಠ, ಜನರಿಗೆ ಇದು ನನ್ನ ದೇಶ, ನನ್ನ ತಾಯ್ನಾಡು ಎಂಬ ಭಾವನೆ ಮೂಡಬೇಕು. ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜಕ್ಕೆ ಗೌರವ ನೀಡುವುದು ಈ ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದು ಹೇಳಿದೆ. ರಾಷ್ಟ್ರಗೀತೆಗೆ ಗೌರವ ನೀಡುವುದೆಂದರೆ ರಾಷ್ಟ್ರದ ಗುರುತು, ಐಕ್ಯತೆ ಮತ್ತು ಸಾಂವಿಧಾನಿಕ ದೇಶಭಕ್ತಿಗೆ ಗೌರವ ನೀಡಿದಂತೆ ಎಂದು ನ್ಯಾಯಪೀಠ ಹೇಳಿದೆ.



ಈ ಆದೇಶವನ್ನು ಇನ್ನೊಂದು ವಾರದಲ್ಲಿ ಜಾರಿಗೆ ತಂದು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮುಖ್ಯ ಕಾರ್ಯದರ್ಶಿಗಳ ಮೂಲಕ ಹಂಚಬೇಕು ಎಂದು ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.

ರಾಷ್ಟ್ರಗೀತೆಯನ್ನು ವಾಣಿಜ್ಯ ಲಾಭಕ್ಕಾಗಿ ಬಳಸಬಾರದು ಎಂದು ಹೇಳಿರುವ ನ್ಯಾಯಾಲಯ ಇದರಲ್ಲಿ ನಾಟಕೀಯತೆ ಪ್ರದರ್ಶಿಸಬಾರದು. ಅನಪೇಕ್ಷಿತ ವಸ್ತುಗಳ ಮೂಲಕ ರಾಷ್ಟ್ರಗೀತೆಯನ್ನು ಮುದ್ರಿಸುವುದಾಗಲಿ, ಪ್ರದರ್ಶಿಸುವುದಾಗಲಿ ಮಾಡಬಾರದು.

ನ್ಯಾಯಾಲಯದ ಆದೇಶವನ್ನು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರ ಮಾಡಬೇಕು ಎಂದು ಕೂಡ ನ್ಯಾಯಾಲಯ ಹೇಳಿದೆ.

Posted by: SUD | Source: Online Desk

*ನಿಮಗೆ ಈ 15 ರಹಸ್ಯಗಳು ಗೊತ್ತಿದ್ದರೆ ನಿಮ್ಮ ದೇಹ ನೀವು ಹೇಳಿದಂಗೆ ಕೇಳುತ್ತೆ*

*ನಿಮಗೆ ಈ 15 ರಹಸ್ಯಗಳು ಗೊತ್ತಿದ್ದರೆ ನಿಮ್ಮ ದೇಹ ನೀವು ಹೇಳಿದಂಗೆ ಕೇಳುತ್ತೆ*

ಮನುಷ್ಯನ ದೇಹಕ್ಕಿಂತ ಬೇರೊಂದು ವಿಸ್ಮಯ ಇಲ್ಲ. ಈ ವಿಸ್ಮಯದ ಬಗ್ಗೆ ಕೆಲವೊಂದು ವಿಷಯಗಳನ್ನ ತಿಳ್ಕೊಂಡ್ರೆ ನಿಮ್ಮ ದೇಹ ನೀವು ಅನ್ಕೊಂಡಿರೋದಕ್ಕಿಂತ ಹೆಚ್ಚು ಸಾಧಿಸತ್ತೆ, ನೀವು ಹೇಳಿದಂಗೆ ಕೇಳುತ್ತೆ.

ಇಲ್ಲಿ ಅಂತೆಕಂತೆ ನಿಮಗೋಸ್ಕರ ಒಂದಿಷ್ಟು ದಿನ ನಿತ್ಯ ಬರೋ ತೊಂದ್ರೆಗಳಿಗೆ ಸಿಂಪಲ್ ಉಪಾಯಗಳನ್ನ ಕೊಟ್ಟಿದೆ.

*1. ಗಂಟಲಲ್ಲಿ ಕೆರೆತ ಇದ್ದಾಗ ಕಿವಿ ಕೆರ್ಕೊಳ್ಳಿ*

ಸರಿ ಹೋಗುತ್ತೆ. ಯಾಕಂದ್ರೆ ಆ ಕೆರೆತ ಉಂಟು ಮಾಡಿರೋ ನರಗಳು ಸಡಿಲವಾಗತ್ತೆ.


*2. ಮಾತು ಸರ್ಯಾಗಿ ಕೇಳಿಸ್ತಿಲ್ಲಾ ಅಂದ್ರೆ ಬಲಗಡೆ ಕಿವಿ ಕೊಟ್ಟು ಕೇಳಿ, ಸಂಗೀತಕ್ಕೆ ಎಡಗಡೆ ಕಿವಿ*

 ಬಲಗಡೆ ಕಿವಿಗೆ ಶಬ್ದ ಮತ್ತೆ ವಾಕ್ಯಗಳನ್ನ ಗ್ರಹಿಸೋ ಶಕ್ತಿ ಜಾಸ್ತಿ ಇದ್ಯಂತೆ. ಹಾಗೆ ಎಡಗಡೆ ಕಿವಿಗೆ ರಾಗ, ಲಯಗಳನ್ನ ಗ್ರಹಿಸೋ ಶಕ್ತಿ ಇದೆ.


*3. ಇಂಜೆಕ್ಷನ್ ಭಯಾ ಆದ್ರೆ ಸೂಜಿ ಚುಚ್ಚೋ ಹೊತ್ತಿಗೆ ಕೆಮ್ಮಿ*

ಇಂಜೆಕ್ಷನ್ ನೋವಿನ ಭಯ ಕಾಡಿದ್ರೆ ಸೂಜಿ ಚುಚ್ಚೋ ಹೊತ್ತಿಗೆ ಕೆಮ್ಮೊ ಅಭ್ಯಾಸ ಮಾಡ್ಕೊಳ್ಳಿ. ಹೀಗೆ ಮಾಡೋದ್ರಿಂದ ನಿಮ್ಮ ರಕ್ತದೊತ್ತಡ ಹೆಚ್ಚಾಗಿ ಬೆನ್ನು ಹುರಿಯಲ್ಲಿರೋ ನರಗಳಿಗೆ ನೋವು ಗೊತ್ತಾಗದೇರೋ ಹಾಗೆ ಮಾಡುತ್ತೆ.


*4. ಮೂಗು ಕಟ್ಟಿದ್ರೆ ನಾಲಿಗೇನಾ ಬಾಯಿಯೊಳಗಡೆ ಮೇಲ್ಭಾಗಕ್ಕೆ ಮುಟ್ಟಿಸಿ ಅಮೇಲೆ ಹುಬ್ಬು ಮಧ್ಯ ಒತ್ತಿ*

ಹೀಗೆ ಒಂದಾದ ಮೇಲೆ ಒಂದನ್ನ ಮಾಡಿದ್ರೆ ಇಪ್ಪತ್ತು ಸೆಕೆಂಡಲ್ಲೇ ನಿಮ್ಮ ಮೂಗು ಸರಿ ಹೋಗುತ್ತೆ.


*5.  ಇನ್ನೇನು ಮಲಗೋ ಹೊತ್ತಲ್ಲಿ ಹೆಚ್ಚು ತಿಂದು ಒದ್ದಾಡ್ತಿದ್ರೆ ಎಡಕ್ಕ ತಿರುಗಿ ಮಲಗಿ*

ಇದರಿಂದ ನಿಮ್ಮ ಹೊಟ್ಟೇಲಿ ಆಸಿಡ್ ಉತ್ಪತ್ತಿ ಚೆನ್ನಾಗಿ ಆಗಿ ಜೀರ್ಣ ಚೆನ್ನಾಗಾಗುತ್ತೆ.

*6. ಹಲ್ಲು ನೋವು ಕಮ್ಮಿ ಮಾಡ್ಕೊಳಕ್ಕೆ ಹೆಬ್ಬೆಟ್ಟು ಮತ್ತೆ ತೊರ್ಬೆರಳಿನ ಮಧ್ಯೆ  ಐಸ್ ಇಟ್ಟು ಉಜ್ಜಿ*

ನಿಮ್ಮ ಹಲ್ಲಿನ ಡಾಕ್ಟರ್ ಸಿಗ್ಲಿಲ್ಲ ಅಂದ್ರೆ ಹಿಂಗೆ ಮಾಡಿ, ನಿಮ್ಮ ನೋವು ಅರ್ಧಕ್ಕೆ ಬರುತ್ತೆ.


*7. ಮೂಗಲ್ಲಿ ರಕ್ತ ಬರ್ತಿದ್ರೆ ಮೂಗು ಮತ್ತೆ ತುಟಿ ಸೇರೋ ಜಾಗದಲ್ಲಿ ಒತ್ತಿ ಹಿಡಿರಿ*

ಮೂಗಿಗೆ ಹೋಗೊ ರಕ್ತನಾಳನ ತಡೆಗಟ್ಟಿದಹಾಗೆ ಆಗೋದ್ರಿಂದ ರಕ್ತ ಬರೋದು ನಿಲ್ಲುತ್ತೆ.


*8. ಸುಟ್ಟ ಗಾಯಕ್ಕೆ ತಣ್ಣೀರೇ ಮದ್ದು*

ಅದೇ ಹಳೆ ಉಪಾಯ ಸಹಾಯ ಮಾಡುತ್ತೆ.


*9. ನಿಮಗೆ ತುಂಬಾ ಭಯ ಆದಾಗ ಹೆಬ್ಬೆಟ್ಟು ಊದ್ಕೊಳಿ*

ಹೀಗೆ ಮಾಡೋದ್ರಿಂದ ರಕ್ತದೊತ್ತಡ ಕಡಿಮೆ ಆಗಿ ಭಯ ಆಗೋದಿಲ್ಲ.

*10. ಐಸ್ ಕೋಲ್ಡ್ ತಿಂದು ತಲೆಯೆಲ್ಲಾ ಕೋಲ್ಡ್ ಆಗ್ತಿದ್ರೆ ನಾಲಿಗೆಯಿಂದ ಬಾಯಿ ಮೇಲ್ಭಾಗಾನ ಒತ್ತಿಟ್ಟುಕೊಳ್ಳಿ*

ಬೇಸಿಗೇಲಿ ಅಥವಾ ತುಂಬ ಬಿಸಿಲಿದ್ದಾಗ ನೀವು ತಣ್ಣಗಿರೋ ಐಸ್ ಕ್ರೀಂ ಅಥವಾ ಜ್ಯುಸ್ ಕುಡಿದ್ರೆ ಹೀಗಾಗುತ್ತೆ. ಇದು ಮುಂದುವರೆದ್ರೆ ನಿಮ್ಮ ಮೈ ಬಿಸಿಯಾಗಿ ತಲೆನೋವು ಬರಬಹುದು. ಇದರಿಂದ ಪಾರಾಗೋಕೆ ನಿಮ್ಮ ನಾಲಿಗೆಯಿಂದ ಬಾಯಿಯ ಮೇಲಿನ ಭಾಗಾನ ಒತ್ತಿಟ್ಟುಕೊಳ್ಳಿ.


*11. ನಿಮ್ಮ ಕೈ ಸೋತಿದ್ರೆ ಕತ್ತಾಡಿಸಿ*

ನಿಮ್ಮ ಕೈಗಳು ಎತ್ತೋಕಾಗದೆ ಸೋತಿದ್ರೆ ಆಗ ನಿಮ್ಮ ಕೈಗಳ ನರದಲ್ಲಿ ತಡೆಯಾಗಿದೆ ಅಂತರ್ಥ. ಆಗ ನಿಮ್ಮ ಕುತ್ತಿಗೆ ಹೀಗೆ ಆಡಿಸಿದ್ರೆ ಅವು ಸಡಿಲ ಆಗುತ್ವೆ.


*12. ಬೇಗ ನಿದ್ದೆ ಮಾಡೋಕೆ ಏನು ಮಾಡಬೇಕು ಗೊತ್ತಾ?*

ಬೆಳಗ್ಗೆ ಎದ್ದ ತಕ್ಷಣ ಹಾಸಿಗೆ ಇಂದ ಹೊರ ಬಂದ್ರೆ ಮತ್ತೆ ಮಲಗೋ ವರೆಗೂ ಹಾಸಿಗೆಗೆ ಹೋಗಬೇಡಿ. ಹೀಗೆ ಮಾಡೋದ್ರಿಂದ ನಿಮ್ಮ ದೇಹಕ್ಕೆ ಹಾಸಿಗೆಗೆ ತಲೆ ಕೊಟ್ಟ ತಕ್ಷಣ ಮಲಗೋ ಅಭ್ಯಾಸ ಆಗುತ್ತೆ.


*13. ಬೇಗ ಏನನ್ನಾದ್ರೂ ನೆನಪಿಟ್ಟುಕೊಳ್ಳೋಕೆ ಹೀಗೆ ಮಾಡಿ*

ಬೇಗ ನೆನಪಿಟ್ಟಿ ಕೊಳ್ಳಬೇಕು ಅದೂ ತುಂಬಾ ದಿನಗಳವರೆಗೆ ಅಂತಿದ್ರೆ ರಾತ್ರಿ ಮಲಗೋ ಹೊತ್ತಲ್ಲಿ ಆ ವಿಷಯದ ಬಗ್ಗೆ ಆಲೋಚಿಸಿ, ಆಗ ನಿಮ್ಮ ಮೆದುಳು ಅದನ್ನ ಸುಲಭವಾಗಿ ಮರೆಯಲ್ಲ.


*14. ಓಡೋವಾಗ ನಿಮ್ಮ ಎಡಗಾಲು ಮುಂದಿಟ್ಟಾಗಲೆಲ್ಲಾ ಉಸಿರನ್ನ ಹೊರಗೆ ಬಿಡಿ*

ಇದ್ರಿಂದ ನಿಮ್ಮ ದೇಹದ ಎಡಭಾಗಕ್ಕೆ ನೋವಾಗಲ್ಲ. ನಿಮ್ಮ ಲಿವೆರ್ ಒತ್ತಡ ಹೇರೋದ್ರಿಂದ ಓಡೋವಾಗ ದೇಹದ ಎಡಭಾಗಕ್ಕೆ ನೋವಾಗೋದು. ಇದನ್ನ ತಡೆಯೋಕೆ ಎಡಗಾಲು ಮುಂದಿಟ್ಟಾಗಲೆಲ್ಲಾ ಉಸಿರನ್ನ ಹೊರಗೆ ಬಿಡ್ಬೇಕು


*15. ಈಜೋಕೆ ನೀರಿಗೆ ಜಿಗಿದಾಗ ತುಂಬ ಆಳಕ್ಕೆ ಇಳಿಬೇಕು ಅಂದ್ರೆ ಮುಂಚೇನೆ ಕೆಲವು ಬಾರಿ ಬೇಗ ಉಸಿರಾಡಿ*

ನೀರಿಗೆ ಜಿಗಿಯೋಕೆ ಮುಂಚೆ ಕೆಲವು ಬಾರಿ ಬೇಗ ಉಸಿರಾಡಿ ಹೇಗೆ ಮಾಡೋದ್ರಿಂದ ನಿಮಗೆ ಹೆಚ್ಚು ಹೊತ್ತು ಉಸಿರು ಹಿಡಿದಿಟ್ಟುಕೊಳ್ಳೋಕೆ ಸಾಧ್ಯ ಆಗುತ್ತೆ. ಆಗ ನೀವು ಆಳಕ್ಕೆ ಜಿಗಿಬಹುದು.


ಏನು ಆಶ್ಚರ್ಯ ಆಗ್ತಿದ್ಯಾ? ವಿಚಿತ್ರ ಅನ್ಸಿದ್ರೂ ಇವೆಲ್ಲ ನಿಜಾ... ಬೇಕಾದ್ರೆ ಟ್ರೈ ಮಾಡಿ ನೋಡಿ

*ನಿಮ್ಮ ಶರೀರದಲ್ಲಿರುವ ಕೊಬ್ಬನ್ನು ಕರಗಿಸಲು ಈ ‘ಟೀ’ ಯನ್ನು ತಿಂಗಳಿಗೊಮ್ಮೆ ಕುಡಿದರೆ ಸಾಕು… ಇನ್ನೂ ಹತ್ತು ಉಪಯೋಗಗಳು.!*

*ನಿಮ್ಮ ಶರೀರದಲ್ಲಿರುವ ಕೊಬ್ಬನ್ನು ಕರಗಿಸಲು ಈ ‘ಟೀ’ ಯನ್ನು ತಿಂಗಳಿಗೊಮ್ಮೆ ಕುಡಿದರೆ ಸಾಕು… ಇನ್ನೂ ಹತ್ತು ಉಪಯೋಗಗಳು.!*


ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುವ ಸೀಬೆ(ಪೇರಲೆ) ಹಣ್ಣು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ರುಚಿಕರವಾದ ಸೀಬೆ ಹಣ್ಣು ಅಥವಾ ಸೀಬೆ ಕಾಯಿಗಳನ್ನು ನಾವು ತಿನ್ನುತ್ತೇವೆ. ಆದರೆ, ಸೀಬೆ ಎಲೆಗಳ ಬಗ್ಗೆ ಎಂದಾದರೂ ಆಲೋಚಿಸಿದ್ದೀರಾ? ಅವುಗಳಲ್ಲಿರುವ ಪೋಷಕಾಂಶಗಳ ಬಗ್ಗೆ ತಿಳಿದುಕೊಂಡಿದ್ದೀರಾ? ಈ ಎಲೆಗಳಲ್ಲಿ ,ಹಲವು ರೋಗಗಳನ್ನು ಗುಣಪಡಿಸಲು ಬೇಕಾಗುವ ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿವೆ. ಹೇಳಬೇಕೆಂದರೆ, ಸೀಬೆ ಕಾಯಿಗಿಂತಲೂ ಎಲೆಗಳಲ್ಲಿ ಹೆಚ್ಚು ಪ್ರಯೋಜನಕಾರಿ ಅಂಶಗಳಿವೆಯೆಂದು ಆಹಾರ ತಜ್ಞರು ಹೇಳುತ್ತಾರೆ. ಸೀಬೆ ಎಲೆಗಳಲ್ಲಿ ನೋವು ಹಾಗೂ ಬಾವುಗಳನ್ನು ಗುಣಪಡಿಸುವ ಗುಣಗಳು ಹೆಚ್ಚಾಗಿವೆ ! ಸೀಬೆ ಎಲೆಗಳ ಟೀ ಕುಡಿದರೆ,ಶ್ವಾಸ ಸಂಬಂಧಿ ಸಮಸ್ಯೆಗಳು ಕಡಿಮೆಯಾಗುತ್ತವೆ. ನೆಗಡಿ,ಕೆಮ್ಮು ಹತೋಟಿಗೆ ಬರುತ್ತವೆ. ಚೆನ್ನಾಗಿ ತೊಳೆದ ಎಲೆಗಳನ್ನು ಜಗಿಯುವುದರಿಂದ ಹಲ್ಲಿನ ನೋವು ದೂರವಾಗುತ್ತದೆ. ವಸಡುಗಳ ಊತ, ಬಾಯಿ ಹುಣ್ಣು ಕಡಿಮೆಯಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇಷ್ಟೆಲ್ಲಾ ಪ್ರಯೋಜನಗಳಿಗೆ ಮುಖ್ಯವಾದ ಕಾರಣ ಎಲೆಗಳಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಮತ್ತು ವಿಟಮಿನ್ ಸಿ. ಎಲೆಗಳಲ್ಲಿರುವ ಕ್ವರ್ಸಿಟಿನ್,ಫ್ಲಾವನೋಲ್ ಎಂಬ ಶರೀರಕ್ಕೆ ಉಪಯುಕ್ತವಾದ ಫ್ಲಾವನಾಯಿಡ್ ಗಳು ಇದರಲ್ಲಿ ಪುಷ್ಕಳವಾಗಿವೆ. ಸೀಬೆ ಎಲೆ ಹಾಗೂ ತೊಗಟೆಯಿಂದ ತಯಾರಿಸಿದ ಪದಾರ್ಥಗಳು ಕ್ಯಾನ್ಸರ್,ಬ್ಯಾಕ್ಟೀರಿಯಾಗಳಿಂದ ಬರುವ ಅಂಟುರೋಗಗಳು , ಬಾವು ಮತ್ತು ನೋವುನಿವಾರಿಸುತ್ತದೆ. ಸೀಬೆ ಎಲೆಗಳಿಂದ ತಯಾರಿಸಲಾದ ಎಣ್ಣೆ ಕ್ಯಾನ್ಸರ್ ಗೆ ವಿರುದ್ಧವಾಗಿ ಕೆಲಸಮಾಡುತ್ತದೆ. ಸೀಬೆ ಎಲೆಗಳನ್ನು ಡಯೇರಿಯಾಗೆ ನಾಟೀ ಔಷದವಾಗಿ ಉಪಯೋಗಿಸುತ್ತಾರೆ. ತೊಗಟೆ ಆಂಟಿ ಮೈಕ್ರೋಬಿಯಲ್, ಆಸ್ಟ್ರಿಂಜೆಂಟ್ ಗುಣಗಳನ್ನು ಹೊಂದಿದೆ. ಸಕ್ಕರೆ ವ್ಯಾಧಿ ನಿವಾರಣೆಯಲ್ಲೂ ಎಲೆಗಳನ್ನು ಉಪಯೋಗಿಸುತ್ತಾರೆ. ಕೆಲವು ದೇಶಗಳಲ್ಲಿ , ಸೀಬೆ ಹಣ್ಣಿನ ಸಿಪ್ಪೆತೆಗೆದು ಸಕ್ಕರೆ ಪಾಕದಲ್ಲಿ ಅದ್ದಿ,ಕೆಂಪು ಬಣ್ಣ ಹಾಕಿ, ರೆಡ್ ಗೋವಾ ಎಂಬ ಹೆಸರಿನಲ್ಲಿ ಮಾರಾಟಮಾಡುತ್ತಾರೆ. ಎಲೆಗಳನ್ನು ಟೀ ರೂಪದಲ್ಲಿ ಸೇವಿಸದರೆ ಹೆಚ್ಚು ಪರಿಣಾಮಕಾರಿ.


*ಸೀಬೆ ಎಲೆಗಳ ಟೀ ತಯಾರಿಸುವ ವಿಧಾನ :*

ಚೆನ್ನಾಗಿ ತೊಳೆದ ಎಲೆಗಳನ್ನು ನೀರಿನಲ್ಲಿ ಹಾಕಿ ಕುದಿಸಿ ಆರಿಸಿದರೆ ಟೀ ತಯಾರಾಗುತ್ತದೆ.ಇದಕ್ಕೆ ಸ್ವಲ್ಪ ಸಕ್ಕರೆ ಅಥವಾ ಜೇನನ್ನು ಸೇರಿಸಿ ಕುಡಿದರೆ, ರಕ್ತದಲ್ಲಿರುವ ಸಕ್ಕರೆ ನಿಯಂತ್ರಣದಲ್ಲಿರುತ್ತದೆ. ಇದರಲ್ಲಿರುವ ಪೋಷಕಾಂಶಗಳು ತೂಕವನ್ನು ಕಡಿಮೆಮಾಡುವ ಗುಣಗಳನ್ನು ಹೊಂದಿವೆ. ಕೆಟ್ಟ ಕೊಲೆಸ್ಟ್ರಾಲ್ ಇರುವವರು ಈ ಟೀ ಯನ್ನು ತಿಂಗಳಿಗೆ ಒಂದು ಸಲ ಕುಡಿದರೂ ಒಳ್ಳೆಯ ಫಲಿತಾಂಶ ಕಾಣುತ್ತದೆ.

1. *ತೂಕ ಕಡಿಮೆಮಾಡಲು :*
ಸೀಬೆ ಎಲೆಗಳಲ್ಲಿ,ಕೊಬ್ಬು,ಕ್ಯಾಲರಿಗಳು ಕಡಿಮೆಯಿರುತ್ತವೆ. ಆದುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಯಸುವವರಿಗೆ ಇದೊಂದು ಅತ್ಯತ್ತಮ ಔಷಧ. ಎಲೆಗಳಿಂದ ತೆಗೆದ ರಸವನ್ನು ಸೇವಿಸುವುದರಿಂದ ತೂಕ ಕಡಿಮೆಮಾಡಿಕೊಳ್ಳಬಹುದು
ಪೋಷಕಾಂಶಗಳು,ವಿಟಮಿನ್ನುಗಳು,ನಾರು ಪದಾರ್ಥ ಹೆಚ್ಚಾಗಿರುವುದರಿಂದ ಸಕ್ಕರೆ ವ್ಯಾಧಿ ಇರುವವರಿಗೆ ಒಳ್ಳೆಯದು.

2.  *ಕೊಲೆಸ್ಟ್ರಾಲ್ ಕಡಿಮೆಯಾಗುತ್ತೆ:*
ಸೀಬೆ ಹಣ್ಣಿನ ಜ್ಯೂಸ್ ಲಿವರ್ ಗೆ ಒಂದೊಳ್ಳೆಯ ಟಾನಿಕ್. ಈ ಜ್ಯೂಸನ್ನು ಕುಡಿದರೆ ಎಂತಹ ಅಡ್ಡಪರಿಣಾಮಗಳು ಇಲ್ಲದೆ ಬ್ಲಡ್ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

3. *ಸಕ್ಕರೆ ಕಾಯಿಲೆ ನಿವಾರಣೆಗೆ :*
ನಿಮ್ಮ ಕುಟುಂಬ ದಲ್ಲಿ ಯಾರಿಗಾದರೂ ಸಕ್ಕರೆ ಕಾಯಿಲೆಯಿದ್ದಲ್ಲಿ ಸೀಬೆ ಎಲೆಗಳ ಟೀ ಯನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ,ರಕ್ತದಲ್ಲಿ ಸಕ್ಕರೆ ಅಂಶ ಗಣನೀಯವಾಗಿ ಕಡಿಮೆಯಾಗುತ್ತದೆ. ಇನ್ಸುಲಿನ್ ಉತ್ಪತ್ತಿಮಾಡದೆಯೇ ಸಕ್ಕರೆ ಅಂಶವನ್ನು ಕಡಿಮೆಗೊಳಿಸುತ್ತದೆ.

4. *ಡಯೇರಿಯಾ :*
ಸೀಬೆ ಗಿಡದ ಬೇರುಗಳನ್ನು ನೀರಿನಲ್ಲಿ ಹಾಕಿ ಕುದಿಸಿ ಸೇವಿಸಿದರೆ, ಡಯೇರಿಯಾ ಹಾಗೂ ಹೊಟ್ಟೆಗೆ ಸಂಬಂಧಿಸಿದ ಇತರೆ ಸಮಸ್ಯೆಗಳು ನಿವಾರಣೆಯಾಗುತ್ತವೆ.

5.  *ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ:*
ಸೀಬೆ ಎಲೆಗಳ ಟೀ ಯನ್ನು ನಿಯಮಿತವಾಗಿ ಸೇವಿಸಿದರೆ, ಜೀರ್ಣಕ್ರಿಯೆಗೆ ಸಹಾಯವಾಗುವ ರಸವನ್ನು ಉತ್ಪತ್ತಿಮಾಡಲು ಸಹಕಾರಿಯಾಗುತ್ತದೆ. ಇದರಿಂದ ಫುಡ್ ಪಾಯಿಜನ್ ಸಮಸ್ಯೆಗಳೂ ನಿವಾರಣೆಯಾಗುತ್ತವೆ.

6. *ಹಲ್ಲುಗಳ ಸಮಸ್ಯೆ :*
ಎಲೆಗಳನ್ನು ಜಗಿಯುವುದರಿಂದ ಹಲ್ಲುನೋವು ಕಡಿಮೆಯಾಗುವುದಲ್ಲದೆ, ಗಂಟಲು ನೋವು,ವಸಡಿನ ವ್ಯಾಧಿಗಳು ಕಡಿಮೆಯಾಗುತ್ತವೆ. ಹಸಿವು ಹೆಚ್ಚಾಗುತ್ತದೆ. ಎಲೆಗಳನ್ನು ನುಣ್ಣಗೆ ರುಬ್ಬಿಕೊಂಡು ಹಲ್ಲು ಹಾಗು ವಸಡುಗಳ ಮೇಲೆ ಹಚ್ಚುವುದರಿಂದ ಒಳ್ಳೆಯ ಫಲಿತಾಂಶ ಕಾಣಬಹುದು.

7. *ಡೆಂಗ್ಯೂ ಜ್ವರದಿಂದ ರಕ್ಷಣೆ :*
ಸೀಬೆ ಎಲೆಗಳ ರಸವನ್ನು ಕುಡಿದರೆ, ಶರೀರದಲ್ಲಿರುವ ಕ್ರಿಮಿಗಳು ನಾಶವಾಗುತ್ತವೆ.

8. *ಪ್ರೋಸ್ಟ್ರೇಟ್ ಕ್ಯಾನ್ಸರ್*
ಸೀಬೆ ಎಲೆಗಳ ಜ್ಯೂಸ್ ಕುಡಿದರೆ,ಪ್ರೋಸ್ಟ್ರೇಟ್ ಕ್ಯಾನ್ಸರ್ ಮತ್ತು ಪ್ರೋಸ್ಟ್ರೇಟ್ ಗ್ರಂಥಿ ದೊಡ್ಡದಾಗುವುದನ್ನು ತಡೆಯಬಹುದು.

9. *ಸೀಬೆ ಎಲೆಗಳ ರಸವನ್ನು ನಿಯಮಿತವಾಗಿ ಸೇವಿಸಿದರೆ, ವೀರ್ಯಕಣಗಳ ಉತ್ಪತ್ತಿ ಹೆಚ್ಚಾಗುತ್ತದೆ.*


10. *ಅಲರ್ಜಿ* ನಿವಾರಣೆಯಾಗುತ್ತದೆ.
ಸಾಮಾನ್ಯವಾಗಿ ಮಕ್ಕಳಲ್ಲಿ ಉಂಟಾಗುವ ಅಲರ್ಜಿಯನ್ನು ಬಹಳ ಚೆನ್ನಾಗಿ ನಿವಾರಿಸುತ್ತದೆ.

10. *ಮಲಬದ್ಧತೆ :*
ಸೀಬೆ ಎಲೆಗಳಲ್ಲಿರುವ ನಾರಿನಂಶವು ಮಲಬದ್ಧತೆಯನ್ನು ನಿವಾರಿಸುತ್ತದೆ. ಪಪ್ಪಾಯಿ,ಆಪಲ್, ನೇರಣೆಹಣ್ಣು ಗಳಿಗಿಂತಲು ಹೆಚ್ಚು ನಾರು ಪದಾರ್ಥವಿರುವುದರಿಂದ ಸಕ್ಕರೆ ವ್ಯಾಧಿಗೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

12. *ಚರ್ಮವ್ಯಾಧಿಗೆ:*
ಚರ್ಮವನ್ನು ಆರೋಗ್ಯಕರವಾಗಿರಿಸಲು ಅಗತ್ಯವಿರುವ ‘ಕೊಲಾಜನ್’ ಉತ್ಪತಿಯಲ್ಲಿ ಮುಖ್ಯ ಪಾತ್ರವಹಿಸುತ್ತದೆ. ನೀರಿನಲ್ಲಿ ಕರಗುವ ಬಿ.ಸಿ ವಿಟಮಿನ್ನುಗಳು, ಕೊಬ್ಬಿನಲ್ಲಿ ಕರಗುವ ವಿಟಮಿನ್ ಎ ಇವು ಸೀಬೆ ಹಣ್ಣಿನಲ್ಲಿ ದೊರೆಯುವ ಪ್ರಮುಖ ಪೋಷಕಾಂಶಗಳು. ಹಣ್ಣಿನ ಹೊರ ಸಿಪ್ಪೆಯಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ..

Believe in YOURSELF….

🍁✨🍁✨🍁✨🍁✨🍁


*If   you   see   the   moon ….. You   see    the    beauty    of    God …..   If    you   see    the   Sun ….. You   see    the    power   of    God …..   And ….    If   you   see   the   Mirror ….. You   see     the    best    Creation of   GOD ….*

 So    .Believe   in     YOURSELF….

🍁✨🍁✨🍁✨🍁✨🍁

Proud to Be an India


🇮🇳 *Proud to Be an India*🇮🇳

An American visited India and went back to America
Where he met his Indian friend who asked him
How did u find my Country
The American said it is a great country
With solid ancient history
And immensely rich with natural resources.
The Indian friend then asked.
How did u find Indians??
Indians??
Who Indians??
I didn’t find or met a single Indian there in India.
What nonsense??
Who else could u met in India then??
The American said..
In Kashmir, I met a Kashmiri…
In Punjab a Panjabi,
In Bihar a bihari,
In Karnataka Kannadiga,
in Maharashtra Marathi,
in Rajasthan Marwadi,
in Bengal Begali,
in TamilNadu Tamilian,
in Kerala Malayali,
Then i met
A Hindu,
A Muslim,
A Christian,
A Jain,
A Buddhist,
A Sikh
And many many many more……
But nøt a single Indian did i mèét
Think höw serious this joke is..

The day would not be far when indeed we would
Become a collection of polarized states as some
Regional anti-national politicians want…
Fight back –

*Always say i am Indian*







*Everyone wants happiness. No one wants, pain . But you cant have a rainbow without a little rain .*

Such a lovely quote. No one is perfect. Accept the imperfections. Be ready to change.

Keep saying “All is well” in times of trouble. Believe in “This too shall pass away”. Keep yourself prepared and ready to respond to situations and moments which are out of your control. Once the storm passes by, enjoy the calmness and peace. This is what life is all about. Don’t search for happiness. It is always there. Just learn to respond …. and respond well to difficult situations & voila LIFE becomes wonderful , joyful, vibrant & HAPPY package…..

ತಾಯಿಯ ಹಾಲಿನ ನಂತರ ಅಧಿಕ ಪೋಷಕಾಂಶಗಳನ್ನು ಸ್ಪಿರುಲಿನಾ ಹೊಂದಿದೆಯಂತೆ…!

ಆರೋಗ್ಯ ವೃದ್ಧಿಗಾಗಿ ಉಪಯೋಗಿಸಿರಿ:

ತಾಯಿಯ ಹಾಲಿನ ನಂತರ ಅಧಿಕ ಪೋಷಕಾಂಶಗಳನ್ನು ಸ್ಪಿರುಲಿನಾ ಹೊಂದಿದೆಯಂತೆ…!

ಹೌದು ನೀವು ಕೇಳುತ್ತಿರುವುದು ನಿಜ. ಸ್ಪಿರುಲಿನಾ(Spirulina) ಎಂಬ ಹೆಸರಿನ ಈ ಸಸ್ಯದ ಎಲೆಗಳನ್ನು ಪುಡಿ ಮಾಡಿ, ಪ್ರತಿನಿತ್ಯ ಸ್ವಲ್ಪಪ್ರಮಾಣದಲ್ಲಿ ಸೇವಿಸಿದರೆ ಸಾಕು ಅದರಿಂದ ಉತ್ತಮ ಆರೋಗ್ಯನಿಮ್ಮದಾಗುತ್ತದೆ. ಅಷ್ಟೇ ಅಲ್ಲ ಅದನ್ನು ಕ್ರಮಾವಾಗಿ ತೆಗೆದುಕೊಳ್ಳುತ್ತಿದ್ದರೆ, ಇತರೆ ಯಾವ ಪೋಷಕ ಪದಾರ್ಥಗಳನ್ನು ಸೇವಿಸುವ ಅಗತ್ಯವಿರುವುದಿಲ್ಲ. ಏಕೆಂದರೆ ಇದರಲ್ಲಿ ಇರುವ ಪೋಷಕಾಂಶಗಳು ಅಂತಹ ಗುಣವನ್ನೊಂದಿರುತ್ತವೆ. ತಾಯಿಯ ಹಾಲಿನಲ್ಲಿರುವಷ್ಠು ಪೌಷ್ಠಿಕತೆ ಇದರಲ್ಲಿರುತ್ತದೆ. ಹೌದು ಅದಕ್ಕಾಗಿಯೇ WHO (ವಿಶ್ವ ಆರೋಗ್ಯ ಸಂಘಟನೆ) ಇದನ್ನು ಅತ್ಯಧಿಕ ಪೌಷ್ಠಿಕಾಂಶಗಳಿರುವ ಅಹಾರದಲ್ಲಿ ತಾಯಿಯ ಹಾಲಿನ ನಂತರದ ಸ್ಥಾನ ಪಡೆದಿದೆ. 1975 ರಲ್ಲಿಯೇ ಆ ಸಂಸ್ಥೆಯು ಈ ಸಸ್ಯದ ಎಲೆಗಳ ಪುಡಿಯು ಅಧಿಕ ಪೋಷಕಾಂಶಗಳನ್ನೊಂದಿದೆ ಎಂದು ನಿರ್ಧರಿಸಿತ್ತು. ಆದರೆ ನಿಮಗೆ ಆಶ್ಚರ್ಯಮೂಡಿಸುವ ವಿಷಯ ಮತ್ತೊಂದಿದೆ. ಈ ಗಿಡದ ಉತ್ಫತ್ತಿಯು ನಮ್ಮ ದೇಶದಲ್ಲೇ ಅಧಿಕವಾಗಿರುವುದು. ಹಾಗಿದ್ದರೂ ಇದರ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ. ಆದರೆ ಈ ಗಿಡದ ಎಲೆಗಳ ಪುಡಿಯನ್ನು ನಿತ್ಯವೂ ಸೇವಿಸುವುದರಿಂದ ನಮಗೆ ಎಂತಹ ಲಾಭಗಳು ಬರುತ್ತವೆ ಎಂದು ತಿಳಿಯೋಣ…

 ಸ್ಪಿರುಲಿನಾ ಸಸ್ಯದ ಎಲೆಗಳ ಪುಡಿಯಲ್ಲಿ ಕ್ಯಾಲ್ಷಿಯಂ ಅಧಿಕವಾಗಿರುತ್ತದೆ. ಎಷ್ಟೆಂದರೆ ಸಾಧಾರಣ ಹಾಲಿಗಿಂತ 26 ಪಟ್ಟು ಅಧಿಕವಾಗಿರುತದೆ. ಆದ್ದರಿಂದ ಇದು ಮೂಳೆಗಳಿಗೆ ಬಲವನ್ನೊದಗಿಸುತ್ತದೆ.

ದೇಹದ ನಿರ್ಮಾಣಕ್ಕೆ, ಕಣಗಳ ಪುನರುತ್ಪಾದನೆ, ಹೊಸಕಣಗಳ ಬೆಳವಣಿಗೆಗೆ ಪ್ರೋಟೀನ್’ಗಳು ಅವಶ್ಯಕವಾಗಿರುತ್ತವೆ ಎಂದು ಎಲ್ಲರಿಗೂ ತಿಳಿದಿದ್ದೆ. ಆದರೆ ಸ್ಪಿರುಲಿನಾ ಪುಡಿಯಲ್ಲಿ ಸುಮಾರು 60% ರಷ್ಟು ಪ್ರೋಟಿನ್’ಗಳಿದ್ದು ನಮಗೆ ಲಭಿಸುತ್ತವೆ. ಎಲ್ಲಾ ಆಹಾರಪದಾರ್ಥಗಳಲ್ಲಿಯೂ ಅತ್ಯಂತ ಗರಿಷ್ಠ ಪ್ರೋಟೀನ್’ಗಳನ್ನೊಂದಿರುವ ಆಹಾರ ಇದೆ. ನಾನ್ ವೆಜ್(ಮಾಂಸಾಹಾರ) ತಿನ್ನದಂತವರಿಗೆ ಇದನ್ನು ತಿಂದರೆ ಸಾಕು ಎಷ್ಟೋ ಪ್ರೋಟಿನ್’ಗಳು ಲಭಿಸುತ್ತವೆ.

ಶರೀರದ ಬೆಳವಣಿಗೆಗೆ ಅವಶ್ಯಕವಾದ ಅಮೈನೊಯಾಸಿಡ್’ಗಳು, ಐರನ್, ಯಾಂಟಿ ಆಕ್ಸಿಡೇಂಟ್’ಗಳು, ಕ್ಲೋರೊಫಿಲ್ ಸಮೃದ್ದಿಯಾಗಿರುತ್ತವೆ. ರಕ್ತವನ್ನು ಶುದ್ದಿಮಾಡುವುದರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಕ್ಲೊರಿಫಿಲ್ ಚೆನ್ನಾಗಿ ಕೆಲಸ ಮಾಡುತ್ತದೆ.

ಕೆಲವು ತರಹದ ಕ್ಯಾನ್ಸರ್ ಗಳು ಬರದಂತೆ ನೊಡಿಕೊಳ್ಳಬಹುದು. ನರಗಳ ಬಲಹೀನತೆ ಹೋಗುತ್ತದೆ.

ಲಿವರನ್ನು ಶುದ್ದಿ ಮಾಡುತ್ತದೆ. ಮಧುಮೇಹವಿದ್ದವರಿಗೆ ಒಳಿತು ಮಾಡುತ್ತದೆ. ಅವರ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.

ಹೃದಯಕ್ಕೆ ಸಂಬಂಧಿಸಿದ ರೋಗಗಳು ಬರುವುದಿಲ್ಲ. ಎಲ್ಲಾ ರೀತಿಯ ನೋವುಗಳು ಕಡಿಮೆಯಾಗುತ್ತವೆ.

ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಜೀರ್ಣಕ್ರಿಯೆಯು ಉತ್ತಮ ವಾಗುತ್ತವೆ.

ಶರೀರದಲ್ಲಿನ ಹಾರ್ಮೋನ್’ಗಳ ಕಾರ್ಯ ಉತ್ತಮಗೊಳಿಸುತ್ತದೆ.

ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ. ಅಧಿಕವಾಗಿರುವ ಕೊಬ್ಬನ್ನು ಕರಗಿಸುತ್ತದೆ. ಇದು ಅಧಿಕ ಭಾರವನ್ನು ಕಡಿಮೆ ಮಾಡಿಕೊಳ್ಳುವವರಿಗೆ ಉತ್ತಮವಾದ ಔಷಧವಾಗಿ ಕೆಲಸಮಾಡುತ್ತದೆ.

ಶರೀರದಲ್ಲಿರುವ ವ್ಯರ್ಥ ಪದಾರ್ಥಗಳು ಹೊರಗೆ ಹೋಗುತ್ತವೆ.

ವಿಟಮಿನ್ ಎ, ಕೆ1, ಕೆ2, ಬಿ12, ಐರನ್, ಮೆಗ್ನಿಷಿಯಂ ಕ್ರೋಮಿಯಂ, ಪೈಟೋ ನ್ಯೂಟ್ರಿಯೆಂಟ್’ಗಳು, ಕೆರೋಟಿನಾಯಿಡ್ಸ್, ಜಿ ಎಲ್ ಎ, ಎಸ್ ವೊ ಡಿ, ಹೀಗೆ ಹೇಳುತ್ತಾ ಹೋದರೆ ಎಷ್ಟೋ ತರಹದ ಪೋಷಕಾಂಶಗಳು ಸ್ಫಿರುಲಿನಾದಲ್ಲಿವೆ.

ಕ್ಯಾರೆಟ್’ಗಿಂತ 2800 ರಷ್ಟು ಬೀಟಾಕೆರೋಟಿನ್, ಪಾಲಕ್’ಸೊಪ್ಪುಗಿಂತ 3900 ರಷ್ಟು ಅಧಿಕ ಐರನ್, ಬ್ಲೂಬೆರ್ರಿಗಳಿಗಿಂತ 280 ರಷ್ಟು ಅಧಿಕ ಯಾಂಟಿಮಕ್ಸಿಡೇಂಟ್’ಗಳು ಸ್ಫಿರುಲೀನಾದಲ್ಲಿರುತ್ತವೆ .

ಆದ್ದರಿಂದ ಮೇಲೆ ಹೇಳಿದ್ದು, ಇದನ್ನು ನಿತ್ಯವೂ ಸ್ವಲ್ಪ ಪುಡಿಯ ರೂಪದಲ್ಲಿ ತೆಗೆದುಕೊಂಡರೆ ಸಾಕು ಅದರಿಂದ ಎಂತಹ ಪೋಷಕಾಂಶಗಳು ಅವಶ್ಯಕತೆ ಇಲ್ಲದಂತೆಯೇ. ಸ್ಫಿರುಲೀನಾ ಪುಡಿ, ಟ್ಯಾಬ್ಲೆಟ್ಸ್ ರೂಪದಲ್ಲಿ ಮಾರುಕಟ್ಟೆಯಲ್ಲಿ ನಮಗೆ ದೊರೆಯುತ್ತವೆ. ಅದನ್ನು ಹೇಗಾದರೂ ಬಳಸಬಹುದು.

ಸರ್ಕಾರಿ ಕಾರ್ನರ್

ಸರ್ಕಾರಿ ಕಾರ್ನರ್

 Wednesday, 15.02.2017, 9:05 AM    ವಿಜಯವಾಣಿ ಸುದ್ದಿಜಾಲ


ದಿನದ ಪ್ರಶ್ನೆ

ನಾನು 1985ರಲ್ಲಿ ಸಹ ಶಿಕ್ಷಕನಾಗಿ ನೇಮಕ ಗೊಂಡಿದ್ದು. 2011 ರಲ್ಲಿ ಬಡ್ತಿ ಮುಖ್ಯ ಶಿಕ್ಷಕರ ಹುದ್ದೆಗೆ ಕೌನ್ಸಿಲಿಂಗ್ ನಡೆದಾಗ ಮಗಳ ತುರ್ತು ಚಿಕಿತ್ಸೆ ಕಾರಣದಿಂದ ಕೌನ್ಸಿಲಿಂಗ್​ಗೆ ಗೈರುಹಾಜರಾಗಿದ್ದೆ. ತದನಂತರ ನನಗೆ ವಾರ್ಷಿಕ ಬಡ್ತಿಗಳನ್ನು ತಡೆಹಿಡಿದು, ಕಾರಣ ಬಡ್ತಿ ನಿರಾಕರಿಸಿದ್ದೀರಿ ಎಂದು ಸೇವಾ ಪುಸ್ತಕದಲ್ಲಿ ನಮೂದಿಸಿದ್ದಾರೆ. ಆದರೆ ನಾನು ಬಡ್ತಿ ನಿರಾಕರಿಸುತ್ತೇನೆ ಎಂದು ಎಲ್ಲಿಯೂ ಬರೆದು ಕೊಟ್ಟಿರುವುದಿಲ್ಲ. ಪರಿಶಿಷ್ಟ ಜಾತಿಗೆ ಸೇರಿದ ನನಗೆ ಬಡ್ತಿ ನಿಯಮಾವಳಿ ಪ್ರಕಾರ ಮತ್ತೆ ಬಡ್ತಿ ಸಿಗುತ್ತದೆಯೇ?

|ಆರ್. ತಿಪ್ಪೇಸ್ವಾಮಿ, ದಾವಣಗೆರೆ

ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೌಕರಿ ಬಡ್ತಿ ) ನಿಯಮಗಳು 1977ರ ನಿಯಮ 4ಎ ರಂತೆ ನೀವು ಲಿಖಿತವಾಗಿ ಬಡ್ತಿಯನ್ನು ನಿರಾಕರಿಸದೆ ಇರುವುದರಿಂದ ಹಾಗೂ ಸಕಾರಣವನ್ನು ನೀಡಿರುವುದರಿಂದ ನಿಮ್ಮ ವಾರ್ಷಿಕ ವೇತನ ಬಡ್ತಿಗಳನ್ನು ತಡೆಹಿಡಿಯುವುದು, ನೀವು ಬಡ್ತಿಯನ್ನು ನಿರಾಕರಿಸಿದ್ದೀರಿ ಎಂದು ಸೇವಾಪುಸ್ತಕದಲ್ಲಿ ನಮೂದಿಸಿರುವುದು ಕ್ರಮಬದ್ಧವಾಗಿರುವುದಿಲ್ಲ. ಆದುದರಿಂದ ನೀವು ಮತ್ತೆ ನಿಮ್ಮ ನೇಮಕ ಪ್ರಾಧಿಕಾರಕ್ಕೆ ಮನವರಿಕೆ ಮಾಡಿಸಿ ಬಡ್ತಿ ನೀಡಲು ವಿನಂತಿಸಬಹುದು.



*ಸರ್ಕಾರಿ ಕಾರ್ನರ್*

 Tuesday, 14.02.2017, 8:33 AM     ವಿಜಯವಾಣಿ ಸುದ್ದಿಜಾಲ  


ದಿನದ ಪ್ರಶ್ನೆ

ನಾನು ಪ್ರಾಥಮಿಕ ಶಾಲಾ ಶಿಕ್ಷಕಿ. 22 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದೇನೆ. ನನಗೆ ಇಬ್ಬರು 13 ವರ್ಷದ ಹೆಣ್ಣು ಮಗಳು, 18 ವರ್ಷದ ಗಂಡು ಮಗ ಇದ್ದು, ಮಗ ಆಕಸ್ಮಿಕ ಮರಣ ಹೊಂದಿದ್ದಾನೆ. ನಾನು ಪುನಃ ಗರ್ಭಿಣಿಯಾಗಿದ್ದು, ಹೆರಿಗೆ ರಜೆ ಪಡೆಯಬಹುದೇ?

|ಸುಭದ್ರಮ್ಮ ಡಿ.ಆರ್. ಭದ್ರಾವತಿ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಮಯ 135ರಂತೆ ಎರಡು ಜೀವಂತ ಮಕ್ಕಳಿಗೆ ಹೆರಿಗೆ ರಜೆ ಪಡೆಯಲು ಅವಕಾಶವಿದೆ. ನಿಮಗೆ ಈ ರಜೆ ನೀಡಲು ಅವಕಾಶವಿಲ್ಲವೆಂದು ನಿರಾಕರಿಸುವುದು ಸ್ವಾಭಾವಿಕ ನ್ಯಾಯಕ್ಕೆ ತಕ್ಕುದ್ದಲ್ಲವಾಗಿರುತ್ತದೆ. ಆದುದರಿಂದ ನೀವು ನಿಯಮಾವಳಿ ರೀತ್ಯ ಪ್ರಸೂತಿ ರಜೆಯನ್ನು ಪಡೆಯಲು ಅರ್ಹರಾಗಿರುತ್ತೀರಿ.

ಸಾಮಾಜಿಕ ಜಾಲತಾಣ ಬಳಕೆದಾರರೇ ಎಚ್ಚರ..!

*ಸಾಮಾಜಿಕ ಜಾಲತಾಣ ಬಳಕೆದಾರರೇ ಎಚ್ಚರ..!*

 Wednesday, 15.02.2017, 9:10 AM    ವಿಜಯವಾಣಿ ಸುದ್ದಿಜಾಲ


ಬೆಂಗಳೂರು: ಫೇಸ್​ಬುಕ್, ಟ್ವಿಟರ್, ವಾಟ್ಸ್​ಆಪ್ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸಂದೇಶ, ಅವಹೇಳನಕಾರಿ ಹೇಳಿಕೆ ಹಾಗೂ ಪ್ರಚೋದನಕಾರಿ ಸ್ಟೇಟಸ್ ಬಿತ್ತರಿಸುವವರಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಸಮಾಜದ ಸ್ವಾಸ್ಥ್ಯ್ಕೆ ಧಕ್ಕೆ ತರುವಂಥ, ಸಂಘ ಸಂಸ್ಥೆಗಳ ಹಾಗೂ ವ್ಯಕ್ತಿಗತ ನಿಂದನೆ ಮಾಡುವಂಥ ಸಂದೇಶ, ಫೋಟೊ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್ ಮಾಡುವವರ ವಿರುದ್ಧ ಐಪಿಸಿ ಸೆಕ್ಷನ್ 153(ಎ) ಹಾಗೂ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಪಶ್ಚಿಮ ವಲಯ (ಮಂಗಳೂರು) ಐಜಿಪಿ ಪಿ. ಹರಿಶೇಖರನ್ ಎಚ್ಚರಿಕೆ ನೀಡಿದ್ದಾರೆ. ಇದೇ ಮಾದರಿಯಲ್ಲಿ ಎಲ್ಲ ಪೊಲೀಸ್ ಅಧಿಕಾರಿ ಗಳೂ ಶಿಸ್ತು ಕ್ರಮಕ್ಕೆ ಮುಂದಾಗಿದ್ದಾರೆ. ಮಂಗಳೂರು ಭಾಗದಲ್ಲಿ ಜಾಲತಾಣಗಳ ದುರುಪಯೋಗ ಹೆಚ್ಚಿದೆ. ಈ ಪ್ರಕರಣಗಳಿಗೆ ತಾಂತ್ರಿಕ ಸಾಕ್ಷ್ಯಾಧಾರ ಲಭ್ಯವಾಗಲಿದೆ. ಆರೋಪಿಗಳು ಕಾನೂನು ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಆರೋಪ ಸಾಬೀತಾದರೆ *ಕನಿಷ್ಠ 3 ವರ್ಷ ಸಜೆ ಮತ್ತು ದಂಡ ವಿಧಿಸಲು ಕೋರ್ಟ್​ಗೆ ಅವಕಾಶ ಇರುವುದಾಗಿ ಹರಿಶೇಖರನ್ ‘ವಿಜಯವಾಣಿ’ಗೆ ತಿಳಿಸಿದರು.* ತಪ್ಪಿತಸ್ಥರ ವಿರುದ್ಧ ಸ್ವಯಂ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಲಾಗುವುದು ಎಂದೂ ಹೇಳಿದರು.

ವಿಸ್ಮರಣೆ

ಶ್ರೀವಾಣಿ

🔶 *ವಿಸ್ಮರಣೆ* 🔶

  ಒಮ್ಮೆ ವಿಶ್ವಾಮಿತ್ರನಿಗೆ ಬ್ರಹ್ಮರ್ಷಿ ಎಂಬ ಪದವಿಯನ್ನು ಪಡೆಯುವ ಪ್ರಬಲವಾದ ಇಚ್ಛೆಯಾಯಿತು. ಆತನಿಗೆ ಆ ಪದವಿಯನ್ನು ವಶಿಷ್ಠ ಮಹರ್ಷಿಗಳು ಕೊಡಬೇಕಾಗಿತ್ತು. ಆದರೆ ವಶಿಷ್ಠರು ರಾಜರ್ಷಿಯಾದ ವಿಶ್ವಾಮಿತ್ರನಿಗೆ ಬ್ರಹ್ಮರ್ಷಿ ಪದವಿ ಕೊಡಲು ಒಪ್ಪಲಿಲ್ಲ. ಅದರಿಂದ  ಕೋಪಗೊಂಡ ವಿಶ್ವಾಮಿತ್ರನು ವಶಿಷ್ಠರ ಮಕ್ಕಳನ್ನು ಕೊಂದು ಹಾಕಿದ. 'ಅಪುತ್ರಸ್ಯ ಗತಿರ್ನಾಸ್ತಿ' ಎಂದರೆ 'ಮಕ್ಕಳಿಲ್ಲದವರಿಗೆ ಮೋಕ್ಷವಿಲ್ಲ-ಸದ್ಗತಿಯಿಲ್ಲ!' ಈ ಮಾತನ್ನು ನೆನೆದು ವಶಿಷ್ಠನಿಗೆ ಅಪಾರ ದುಃಖವಾಯಿತು. ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧನಾದ! 'ತಾವು ನಿರ್ಗುಣ-ನಿರ್ವಿಶೇಷನಾದ ಬ್ರಹ್ಮ!' ಎಂಬುದನ್ನು ವಶಿಷ್ಠ ಮಹರ್ಷಿಗಳು ಅದು ಹೇಗೆ ಮರೆತರೋ ಏನೋ! ಸ್ವ ಸ್ವರೂಪದ ವಿಷ್ಮರಣೆಯೇ ಸಕಲ ದುಃಖಕ್ಕೆ ಕಾರಣ!

ಶ್ರೀ ಸಿದ್ಧೇಶ್ವರ ಸ್ವಾಮೀಜಿ, ವಿಜಯಪುರ

ಖಾಲಿ ಹೊಟ್ಟೆಯಲ್ಲಿ ಹುರಿದ ಬೆಳ್ಳುಳ್ಳಿ ಸೇವನೆ ಮಾಡುವುದು ಅಮೃತಕ್ಕೆ ಸಮಾನ

*ಖಾಲಿ ಹೊಟ್ಟೆಯಲ್ಲಿ ಹುರಿದ ಬೆಳ್ಳುಳ್ಳಿ ಸೇವನೆ ಮಾಡುವುದು ಅಮೃತಕ್ಕೆ ಸಮಾನ*
Posted By: Mangalore Corespondent


ಮಂಗಳೂರು: ಆಹಾರದ ರುಚಿ ಹೆಚ್ಚಿಸಲು ನಾವು ಬೆಳ್ಳುಳ್ಳಿಯನ್ನು ಉಪಯೋಗಿಸ್ತೇವೆ. ಇದ್ರ ಬಳಕೆಯಿಂದ ಆಹಾರದ ರುಚಿ ಬದಲಾಗುತ್ತದೆ. ಆದ್ರೆ ಈ ಬೆಳ್ಳುಳ್ಳಿಯ ಒಂದು ಮೊಗ್ಗು, ರುಚಿ ಹೆಚ್ಚಿಸುವ ಜೊತೆಗೆ ನಮ್ಮ ದೇಹದಲ್ಲಿರುವ ಅನೇಕ ರೋಗಗಳನ್ನು ಹೊಡೆದೋಡಿಸಲು ನೆರವಾಗುತ್ತದೆ.

ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವನೆ ಮಾಡುವುದು ಅಮೃತಕ್ಕೆ ಸಮಾನ. ಮೂಲವ್ಯಾಧಿ, ಮಲಬದ್ಧತೆ, ಕಿವಿನೋವು, ರಕ್ತದೊತ್ತಡ ಇತ್ಯಾದಿ ಅನೇಕ ಕಾಯಿಲೆಗಳಿಗೆ ಇದು ರಾಮಬಾಣ. ಹಸಿವನ್ನು ಹೆಚ್ಚಿಸುವ ಕೆಲಸವನ್ನೂ ಇದು ಮಾಡುತ್ತದೆ. ಇತ್ತೀಚೆಗೆ ನಡೆದ ಸಂಶೋಧನೆಯೊಂದು ಬೆಳ್ಳುಳ್ಳಿ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬ ವಿಷಯವನ್ನು ಬಿಚ್ಚಿಟ್ಟಿದೆ ಅದರ ಪ್ರಕಾರ ಪ್ರತಿದಿನ 5-6 ಬೆಳ್ಳುಳ್ಳಿ ಮೊಗ್ಗನ್ನು ತಿನ್ನುವ ವ್ಯಕ್ತಿಗೆ ಕೆಲವೇ ಗಂಟೆಗಳಲ್ಲಿ ಅದರ ಪರಿಣಾಮ ಕಾಣುತ್ತದೆ.

ದೇಹಕ್ಕೆ ಹೋದ ಬೆಳ್ಳುಳ್ಳಿ ಒಂದು ಗಂಟೆಯಲ್ಲಿ ಜೀರ್ಣವಾಗಿ ಅದು ಆರೋಗ್ಯ ವೃದ್ಧಿ ಕೆಲಸ ಶುರುಮಾಡುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಶರೀರದಲ್ಲಿರುವ ವಿಷ ಪದಾರ್ಥವನ್ನು ಮಲ ಹಾಗೂ ಮೂತ್ರದ ಮೂಲಕ ಹೊರ ಹಾಕುತ್ತದೆ. ಶರೀರಕ್ಕೊಂದು ವಿಶೇಷ ಶಕ್ತಿ ಬರುತ್ತದೆ. ಇದರಿಂದ ನಿಮ್ಮ ದೇಹದ ಆಲಸ್ಯ ಕಡಿಮೆಯಾಗುತ್ತದೆ. ಹುರಿದ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಕ್ಯಾನ್ಸರ್ ಕೋಶಗಳು ಶಕ್ತಿ ಕಳೆದುಕೊಳ್ಳುತ್ತವೆ.

ಪ್ರತಿದಿನ ಹುರಿದ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಚಯಾಪಚಯ ಸುಲಭವಾಗಿ ಬೊಜ್ಜು ಕರಗುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಶ್ವಾಸನಾಳಕ್ಕೆ ಬಹಳ ಪ್ರಯೋಜನಕಾರಿ. ಅಸ್ತಮಾ, ಕೆಮ್ಮು, ಕಫ ಕಡಿಮೆ ಮಾಡುವ ಗುಣ ಬೆಳ್ಳುಳ್ಳಿಗಿದೆ.

ಮೊಬೈಲ್‌ನಲ್ಲಿಯೇ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ? ಫುಲ್ ಡೀಟೆಲ್ಸ್!

*ಮೊಬೈಲ್‌ನಲ್ಲಿಯೇ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ? ಫುಲ್ ಡೀಟೆಲ್ಸ್!!*
Written By: Bhaskar

ಸರ್ಕಾರದ ಬಹುತೇಕ ಎಲ್ಲ ಕೆಲಸಗಳು ಸಹ ಆನ್‌ಲೈನ್‌ನಲ್ಲಿಯೇ ನಡೆಯುವಾಗ ನಾವು ಇದರ ಹೆಚ್ಚಿನ ಉಪಯೋಗ ಪಡೆದುಕೊಳ್ಳಬಹುದು. ಸರ್ಕಾರಿ ಕಾರ್ಯ ಎಂದರೆ ಕಷ್ಟ ಎನ್ನುವ ಜನರು ಈ ಆನ್‌ಲೈನ್ ವ್ಯವಸ್ಥೆಯನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಸರ್ಕಾರಿ ಕಾರ್ಯಗಳು ಬಹುಬೇಗ ಆಗುತ್ತವೆ.

ಡಿಎಲ್, ವೋಟರ್ ಐಡಿ ಮತ್ತು ಇತರ ಸರ್ಕಾರಿ ಡಾಕ್ಯುಮೆಂಟ್‌ಗಳನ್ನು ಆನ್‌ಲೈನ್ ಮೂಲಕ ಹೇಗೆ ಮಾಡಿಸಿಕೊಳ್ಳುವುದು ಎಂಬುದನ್ನು ನಾವು ಈಗಾಗಲೇ ತಿಳಿಸಿಕೊಟ್ಟಿದ್ದೇವೆ. ಈ ಲೇಖನಗಳ ನಂತರ ಹಲವು ಜನರು ರೇಷನ್ ಕಾರ್ಡಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡಿ ಎಂದು ಕೇಳಿದ್ದರು.



ಹಾಗಾಗಿ, ನಾವು ಇಂದು ಮೊಬೈಲ್ ಮೂಲಕವೇ ರೇಷನ್‌ ಕಾರ್ಡ್ಗೆ ಅರ್ಜಿ ಸಲ್ಲಿಸಿ ಬಹುಬೇಗ ಮತ್ತು ಸರಳವಾಗಿ ರೇಷನ್ ಕಾರ್ಡ್ ಪಡೆಯುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

    # 1 *9212357123 ನಂಬರ್‌ಗೆ ಮೆಸೇಜ್ ಸೆಂಡ್ ಮಾಡಿ.*

    ಮೊಬೈಲ್‌ನಿಂದ 'RCNEW' ಎಂದು ಟೈಪ್ ಮಾಡಿ ನಂತರ ಒಂದು ಸ್ಪೇಸ್‌ ಬಿಟ್ಟು ನಿಮ್ಮ ಹೆಸರನ್ನು ಟೈಪ್ ಮಾಡಿ ( ಉದಾ: RCNEW Bhaskar )ನಂತರ 9212357123 ನಂಬರ್‌ಗೆ ಮೆಸೇಜ್ ಸೆಂಡ್ ಮಾಡಿ. 9212357123 ನಂಬರ್‌ಗೆ ಮೆಸೇಜ್ ಸೆಂಡ್ ಮಾಡಿದ ತಕ್ಷಣವೇ ನಿಮ್ಮ ಮೊಬೈಲ್‌ಗೆ ಪ್ರವೇಶ ಸಂಖ್ಯೆ/ ಟೋಕನ್ ಸಂಖ್ಯೆ ಮತ್ತು ಸೆಕ್ಯುರೆಟಿ ಕೋಡ್ ಬರುತ್ತದೆ.

    # *2 ಪರಿಚಯಸ್ಥರನ್ನು ಜೊತೆಗೆ ಕರೆದೊಯ್ಯಿರಿ*

    ನಂತರ ನಿಮಗೆ ಪರಿಚಯಯಿರುವ ಖಾಯಂ ರೇಷನ್ ಕಾರ್ಡ್ ಹೊಂದಿರುವ ವ್ಯಕ್ತಿಯನ್ನು ನಿಮ್ಮ ಹತ್ತಿರದ ಪಡಿತರ ಸೇವಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ( ನೀವು ಕರೆದುಕೊಂಡು ಹೋಗುವ ವ್ಯಕ್ತಿ ಅವರ ವಿದ್ಯುತ್ ಆರ್‌. ಆರ್ ನಂಬರ್ ಮತ್ತು ಅವರ ರೇಷನ್ ಕಾರ್ಡ್ ಎರಡನ್ನು ಹೊಂದಿರಬೇಕು)

    # *3 ಅರ್ಜಿ ಸಲ್ಲಿಕೆ ಪ್ರಾರಂಭ*

    ಸೇವಾಕೆಂದ್ರಕ್ಕೆ ಭೇಟಿ ನೀಡಿ ನಿಮ್ಮ ಮೊಬೈಲ್‌ಗೆ ರವಾನೆಯಾದ ಪ್ರವೇಶ ಸಂಖ್ಯೆಯನ್ನು ಅಲ್ಲಿನ ಕಾರ್ಯನಿರ್ವಹಣಾ ವ್ಯಕ್ತಿಗೆ ನೀಡಿ. ನಂತರ ನಿಮ್ಮ ಸೆಕ್ಯುರಿಟಿ ಕೋಡ್ ಬಳಸಿ ಅರ್ಜಿ ಸಲ್ಲಿಕೆಯನ್ನು ಅವರು ಪ್ರಾರಂಭಿಸುತ್ತಾರೆ. ( ಸರ್ಕಾರದ ನಿಯಮದಂತೆ ಅರ್ಜಿ ಸಲ್ಲಿಕೆಗಾಗಿ ಪೂರ್ಣ ಒಂದು ಗಂಟೆ ಸಮಯ ಬೇಕಾಗುತ್ತದೆ)

    # *4 ಬೆರಳಚ್ಚು ಮತ್ತು ಭಾವಚಿತ್ರ ದೃಡೀಕರಣ*

    ಅರ್ಜಿ ಸಲ್ಲಿಕೆ ಪ್ರಾರಂಭವಾದ ಮೇಲೆ ನೀವು ಕರೆದುಕೊಂಡು ಹೋಗಿರುವ ವ್ಯಕ್ತಿಯ ಬೆರಳಚ್ಚು ಮತ್ತು ಭಾವಚಿತ್ರವನ್ನು ದೃಡೀಕರಣದ ನಂತರ ನಿಮ್ಮ ಹಾಗೂ ನಿಮ್ಮ ಕುಟುಂಬದ ಬೆರಳಚ್ಚು ಮತ್ತು ಭಾವಚಿತ್ರವನ್ನು ಸಂಗ್ರಹಿಸುತ್ತಾರೆ.
    # *5 ರೇಷನ್ ಕಾರ್ಡ್ ನಿಮ್ಮ ಮನೆಗೆ!!*

    ನಂತರ ನೀವು ನೀಡುವ ವಿಳಾಸ ಮತ್ತು ನೀವು ಸಲ್ಲಿಸುವ ಯಾವುದಾದರೂ ಎರಡು ದಾಖಲೆಗಳನ್ನು ಅವರು ಅಪ್‌ಲೋಡ್ ಮಾಡಿ ನಮಗೆ ರಶೀದಿಯನ್ನು ನೀಡುತ್ತಾರೆ. ಇಷ್ಟು ಆದ ನಂತರ ನಿಮಗೆ ರೇಷನ್ ಕಾರ್ಡ್ ನೀಡಲು ಲಭ್ಯವಿದ್ದಲ್ಲಿ, 20 ದಿವಸಗಳ ಒಳಗಾಗಿ ರೇಷನ್ ಕಾರ್ಡ್ ನಿಮ್ಮ ಮನೆಗೆ ಪೋಸ್ಟ್ ಮೂಲಕ ಬಂದು ಸೇರುತ್ತದೆ.

ಮನುಷ್ಯ ನಿಸ್ವಾರ್ಥಿಯಾದಾಗ

✨ *ಮನುಷ್ಯ ನಿಸ್ವಾರ್ಥಿಯಾದಾಗ* ✨


ಒಮ್ಮೆ ಮರುಭೂಮಿಯಲ್ಲಿ ಒಂದಷ್ಟು ಸಜ್ಜನರ ಗುಂಪು ಸಾಗಿತ್ತು. ಇದ್ದಕ್ಕಿದ್ದಂತೆ ಬಿರುಗಾಳಿ ಬೀಸಿ ಗುಂಪಿನ ಸದಸ್ಯರೆಲ್ಲ ದಿಕ್ಕಾಪಾಲಾಗಿ ಒಬ್ಬೊಬ್ಬರೂ ಒಂದೊಂದು ದಿಕ್ಕಿಗೆ ಚದುರಿದರು. ಅವರಲ್ಲಿ ಒಬ್ಬಾತ ಮಾತ್ರ ನಡೆಯಲು ಕೂಡ ತ್ರಾಣವಿಲ್ಲದೆ ಹೆಜ್ಜೆ ಇಡಲಾರಂಭಿಸಿದ. ಸ್ವಲ್ಪ ದೂರ ನಡೆಯುವಷ್ಟರಲ್ಲಿ ಅವನಿಗೆ ಜೀವವೇ ಹೋದ ಅನುಭವವಾಯಿತು. ಸರಿ ಇನ್ನೇನು ಮಾಡುವುದೆಂದು ಅಲ್ಲಿಯೇ ಭಗವಂತನ ಧ್ಯಾನ ಮಾಡಲಾರಂಭಿಸಿದ ಸ್ವಲ್ಪ ಸಮಯದ ನಂತರ ಸುತ್ತಮುತ್ತಲಿನ ದೂಳಿನ ವಾತಾವರಣ ಶುಭ್ರವಾಗಿ ಕನ್ನಡಿಯಂತೆ ಹೊಳೆಯತೊಡಗಿತು. ಆತನ ಕಣ್ಣಿಗೆ ಅರ್ಧ ಕಿ.ಮೀ ದೂರದಲ್ಲಿ ಒಂದು ಹಾಳಾದಂತೆ ಇರುವ ಮರದ ದಿಂಬುಗಳಿಂದ ರಚಿತವಾದ ಒಂದು ಹಳೆಯ ಬಿಡಾರ ಕಂಡಿತು.

ಅಲ್ಲೇನಾದರೂ ಸಿಗಬಹುದೆಂಬ ಆಶ್ವಾಸನೆಯಿಂದ ತೆವಳುತ್ತ, ತೆವಳುತ್ತ ಅದರ ಹೊಳಹೊಕ್ಕವನಿಗೆ ನೇರವಾಗಿ ಕಂಡಿದ್ದು ಕೊಳವೆಯಿಂದ ನೀರೆತ್ತುವ ಯಂತ್ರ. ನೇರವಾಗಿ ಅಲ್ಲಿಗೆ ಧಾವಿಸಿ ಅದನ್ನು ತಿರುಗಿಸಲು ಶರುಮಾಡಿದ. ಉಸಿರು ಬಿಗಿಹಿಡಿದು ಅಯ್ಯೋ! ಇನ್ನಾಗದು ಸತ್ತೇ… ಎಂದು ಏದುಸಿರು ಬಿಡುತ್ತ ಹಾಗೆಯೇ ಪಕ್ಕಕ್ಕೆ ಕುಸಿದು ಬಿದ್ದ. ತಕ್ಷಣ ಅಲ್ಲಿಯೇ ಇದ್ದ ಒಂದು ಬಾಟಲಿ ಅವನ ಕಣ್ಣಿಗೆ ಬಿತ್ತು, ಒಂದೇ ಉಸಿರಿನಲ್ಲಿ ಅದನ್ನು ಎತ್ತಿ ಗಟಗಟ ನೀರು ಕುಡಿಯಬೇನ್ನುವಷ್ಟರಲ್ಲಿ ಅದರ ಜೊತೆಗಿದ್ದ ಮರದ ತಿಳಿಯಾದ ಹಲಗೆಯ ಮೇಲೆ ಬರೆದುದನ್ನು ಓದಿದ ಅದು ಹೀಗಿತ್ತು. “ ಈ ನೀರನ್ನು ನೀರೆತ್ತುವ ಯಂತ್ರದ ರಂಧ್ರಕ್ಕೆ ಹಾಕಿ ಮತ್ತೆ ಜೋರಾಗಿ ತಿರುಗಿಸಿ ಬೇಕಾಗುವಷ್ಟು ನೀರು ಬರುತ್ತದೆ, ನಂತರ ಈ ಬಾಟಲಿಗೆ ಮರೆಯದೆ ನೀರು ತುಂಬಿಸಿ ಅಲ್ಲಿಯೇ ಇಡಿ, ನಿಮ್ಮಂತೆ ಬಳಲಿ ಬಂದವರಿಗೆ ನೆರವಾಗುತ್ತದೆ” ಎಂದು.

ಈಗಾಗಲೇ ರೋಸಿ ಹೋಗಿದ್ದ ಅವನು ಈಗ ಗೊಂದಲಕ್ಕೊಳಗಾದ, ನಂತರ ಆಲೋಚನೆ ಮಾಡಿದ ‘ ಒಂದು ವೇಳೆ ನಾನು ಈ ನೀರನ್ನು ಕುಡಿದು ನಡೆಯಲಾರಂಭಿಸದರೆ ಎಷ್ಟು ದೂರ ಸಾಗಬಹುದು, ಬಹುಷಃ ಮಾರ್ಗಮಧ್ಯದಲ್ಲಿಯೇ ಜೀವಹೋಗಬಹುದು, ಈಗ ಈ ನೀರನ್ನು ಕುಡಿಯದಿದ್ದರೆ ಸ್ವಲ್ಪ ಹೊತ್ತಿನಲ್ಲೇ ಜೀವ ಹೋಗಬಹುದು, ಏನಾದರೂ ನನ್ನ ಜೀವ ಹೋಗುವುದೇ ಆಗಿದೆ, ಇರಲಿ ಈ ನೀರನ್ನು ಆ ಯಂತ್ರದ ರಂಧ್ರಕ್ಕೆ ಹಾಕಿ ತಿರುಗಿಸೋಣ’ ಎಂದು ಆ ಬಾಟಲಿಯಲ್ಲಿದ್ದ ನೀರನ್ನು ಭಗವಂತನ ನಾಮ ಸ್ಮರಣೆ ಮಾಡುತ್ತ ಆ ರಂಧ್ರಕ್ಕೆ ಹಾಕಿ ತನ್ನೆಲ್ಲ ಭಲ ಪ್ರಯೋಗಿಸಿ ಯಂತ್ರವನ್ನು ತಿರುಗಿಸಿದ, ನಾಲ್ಕೈದು ಬಾರಿ ತಿರುಗುತ್ತಲೇ ಗುಕ್ ಎಂದು ಶಬ್ಧ ಮಾಡಿ ನೀರು ಬುಗ್ ಎಂದು ಮೇಲೆದ್ದು ಇವನನ್ನು ಸಂಪೂರ್ಣ ತೋಯಿಸಿತು. ತಕ್ಷಣ ಹುಮ್ಮಸ್ಸಿನಲ್ಲಿ ಅಲ್ಲಿಯೇ ಇದ್ದ ಗುಡಾರದಲ್ಲಿ ನೀರನ್ನು ತುಂಬಿ ಬೇಕಾಗುವಷ್ಟು ನೀರನ್ನು ಕುಡಿದು ಶಕ್ತಿ ತುಂಬಿಕೊಂಡ, ಖುಷಿಯಿಂದ ಸ್ನಾನವನ್ನೂ ಮಾಡಿ ಮತ್ತಷ್ಟು ಚೈತನ್ಯ ತಂದುಕೊಂಡ.

ನಂತರ ಅಲ್ಲಿಂದ ಹೊರಡಲನುವಾದಾಗ ಅವನಿಗೆ ಆ ಬಾಟಲಿಗೆ ಮರೆಯದೆ ನೀರು ತುಂಬಿ ಇಲ್ಲಿಯೇ ಇಡಿ ಎಂದಿದ್ದ ಹೇಳಿಕೆ ನೆನಪಾಗಿ, ಆ ಬಾಟಲಿ ತುಂಬ ನೀರು ತುಂಬಿಸಿ ಮತ್ತೆ ಆ ಹೇಳಿಕೆಯ ಕೆಳಗೆ ಹೀಗೆ ಬರೆದ “ ಈ ಮೇಲಿನ ಹೇಳಿಕೆ ಪಾಲಿಸಿದರೆ ಖಂಡಿತ ಫಲಿತಾಂಶ ಸಿಗುತ್ತದೆ, ನಿರ್ಲಕ್ಷಿಸದಿರಿ, ಇದನ್ನು ನಾನೂ ಪರೀಕ್ಷಿಸಿದ್ದೇನೆ” ಎಂದು, ನಂತರ ಅದರ ಜಾಗದಲ್ಲಿಟ್ಟು ಬಾಗಿಲ ಬಳಿ ಬಂದ. ತಕ್ಷಣ ಅವನಿಗೆ ಇನ್ನೊಂದು ಕುತೂಹಲ ಕಾದಿತ್ತು, ಅದೇನೆಂದರೆ; ಆ ಬಾಗಿಲ ಹಿಂದೆ ಹೀಗಿತ್ತು “ ಈ ಕೆಳಗಿನ ನಕ್ಷೆಯನ್ನು ಅನುಸರಿಸಿ ನಡೆದರೆ, ನೀವು ಜನವಸತಿಯಿರುವ ಪ್ರದೇಶವನ್ನು ತಲುಪುತ್ತೀರಿ” ಎಂದು. ಇದರಿಂದ ಆತನಿಗೆ ಆದ ಆನಂದ ಅಷ್ಟಿಷ್ಟಲ್ಲ. ಆತ ಭಗವಂತನ ನಾಮಸ್ಮರಣೆ ಮಾಡುತ್ತ ಜನವಸತಿ ಇರುವ ಪ್ರದೇಶ ಸೇರಿಕೊಂಡ. ಅನಂತರ ಆತನ ಮನಸ್ಸಿಗೆ ಬಂದ ಆಲೋಚನೆ ಇದು “ ನಾವು ಹತಾಶರಾಗಿ ಸ್ವಾರ್ಥಿಗಳಾದರೆ ನಮ್ಮ ಜೀವನ ಕ್ಷಣಿಕ ಸುಖದಲ್ಲಿ ಕೊನೆಯಾಗುತ್ತದೆಯೇ ವಿನಃ ಈ ರೀತಿ ನೊಂದು ಬೆಂದವರಿಗೆ ಆಶವಾದವನ್ನು ತುಂಬುವಂತಾಗಲು ಸಾಧ್ಯವಿಲ್ಲ” ಎಂದು.

*ನಾವು ಸ್ವಾರ್ಥಿಗಳಾದರೆ ನಮ್ಮ ಬದುಕು ಸಾರ್ಥಕತೆ ಪಡೆಯುವಲ್ಲಿ ವಿಫಲವಾಗಬಹುದು, ನಿಸ್ವಾರ್ಥಿಗಳಾದರೆ ಇತರರಿಗೆ ನೆರವಾಗಿ ಸಾರ್ಥಕತೆ ಪಡೆಯಬಹುದು.*



ಪೃಥ್ವಿರಾಜ ಎಲ್

ಶಾಂತವಾಗುವುದೆಂದರೆ..

*ಶಾಂತವಾಗುವುದೆಂದರೆ....*


*ಸಿದ್ದೇಶ್ವರ ಶ್ರೀಗಳ ಸಂದೇಶ*

ಮನಶಾಂತಿಯ ಸುಂದರ ಸಾಧನವೇ ಧ್ಯಾನ. ಮನಸ್ಸು ಶಾಂತವಾದರೆ ಬದುಕು ಆಪ್ಯಾಯಮಾನವಾಗುತ್ತದೆ, ಆನಂದಮಯವಾಗುತ್ತದೆ. ನಮ್ಮ ಬದುಕಿನ ಉದ್ದೇಶವಾದರೂ ಅದೇ ಆಗಿದೆ. *ನಾವು ಈ ಜಗತ್ತಿಗೆ ಬಂದುದು, ಸುಂದರವಾದ, ಸಂತಸದಾಯಕವಾದ, ಪ್ರಶಾಂತ ಜೀವನವನ್ನು ಕಟ್ಟಿಕೊಳ್ಳಲು*. ನಮ್ಮ ಬದುಕು ಒಂದು ಜ್ಞಾನದ ದೀವಿಗೆಯಾಗಿ ಬೆಳಗಬೇಕು. ಎಲ್ಲರಿಗೂ ಸಂತಸದ ಬೆಳಕನ್ನು ನೀಡಬೇಕು. ಅದು ಸಾರ್ಥಕ ಜೀವನ.

ಈ ಜಗತ್ತು ಸವಿಸ್ತಾರವಾಗಿದೆ, ಸಮೃದ್ಧವಾಗಿದೆ. ಇಲ್ಲಿ ನಾವು ಹೊಸದಾಗಿ ಏನೂ ಮಾಡಬೇಕಾಗಿಲ್ಲ. ಇರುವುದನ್ನು ಅನುಭವಿಸಬೇಕು, ಆನಂದಿಸಬೇಕು ಅಷ್ಟೆ. ಬರಿ ವಸ್ತುಗಳನ್ನು ಸಂಗ್ರಹಿಸುವುದರಿಂದ ಬದುಕು ಸಮೃದ್ಧವಾಗುವುದಿಲ್ಲ. ಪ್ರಾಪಂಚಿಕ ವಿಷಯ ವಸ್ತುಗಳನ್ನು ಅನುಭವಿಸುವುದರ ಜೊತೆಗೆ ಈ ಪ್ರಪಂಚಕ್ಕೆ ಪರಮಾಧಾರವಾಗಿರುವ ಪರಮಸತ್ಯ ಪರಮಾತ್ಮನನ್ನೂ ನಾವು ಅರಿತು, ಅನುಭವಿಸಿ, ಆನಂದಿಸಬೇಕು. ಇದುವೆ ಬದುಕಿನ ಪರಮೋದ್ದೇಶ.

ನಮ್ಮ ಋುಷಿಮುನಿಗಳು ಸಾವಿರಾರು ವರುಷಗಳ ಹಿಂದೆಯೇ ಈ ವಿಶ್ವದ ಮೂಲಾಧಾರವಾದ ವಿಶ್ವಾತ್ಮನ ಕುರಿತು ಆಳವಾಗಿ ಚಿಂತನ ಮಂಥನ ಮಾಡಿದರು. ಪ್ರಾಪಂಚಿಕ ವ್ಯಹಾರಗಳನ್ನೆಲ್ಲ ಒಂದು ಕ್ಷ ಣ ಬದಿಗಿಟ್ಟು ಪರಮಸತ್ಯ ಪರಮಾತ್ಮನ ಚಿಂತನದಲ್ಲಿ ಮಗ್ನರಾದರು. ನಿರಂತರ ಸಾಧನೆಯಲ್ಲಿ ತೊಡಗಿದರು. ಅವರ ಪ್ರಯತ್ನ ಫಲಿಸಿತು. ಸತ್ಯದ ಬೆಳಕನ್ನು ಕಂಡು, ಸಂತಸದ ಕಡಲಲ್ಲಿ ತೇಲಾಡಿದರು. ಆ ಕ್ಷ ಣದಲ್ಲಿ ಅವರ ಮುಖದಿಂದ ಹೊರಹೊಮ್ಮಿದ ಅಮೃತವಾಣಿಯೇ ವೇದೋಪನಿಷತ್ತು, ವಚನ, ಅಭಂಗ, ಪದ, ಪದ್ಯಗಳಾಗಿ ಆಧ್ಯಾತ್ಮಿಕ ಕ್ಷೇತ್ರವನ್ನು ಸಂಪದ್ಭರಿತಗೊಳಿಸಿದೆ.

ತಾತ್ತ್ವಿಕ ಶಬ್ಧಗಳ ಮೇಲೆ ಚಿಂತನ ಮಾಡುತ್ತ ಪರಮಸತ್ಯ ಪರಮಾತ್ಮನನ್ನು ಅರಿಯುವುದು ವೈಚಾರಿಕ ಧ್ಯಾನವಾಗಿದೆ. ಶಿವಂ ಶಾಂತಂ ಇವೆರಡು ಆ ಪರಮಾತ್ಮನ ಸುಂದರ ಲಕ್ಷ ಣಗಳು. ಶಿವಂ ಎಂದರೆ ಶುದ್ಧ, ಶುಭ್ರ. ಶಾಂತಂ ಎಂದರೆ ನಿಶ್ಯಬ್ಧ, ನೀರವ, ಬಯಲು, ಬಟಾಬಯಲು, ಶೂನ್ಯ ನಿಶ್ಯೂನ್ಯ ಎಂದೆಲ್ಲಾ ಅರ್ಥೈಸಬಹುದು. ಅದೇರೀತಿ ಈ ಜಗತ್ತಿನಲ್ಲಿರುವ ಚರಾಚರ ವಸ್ತುಗಳೆಲ್ಲವೂ ಒಂದುದಿನ ಮರೆಯಾಗಿ ಬಯಲೊಳಗೆ ಬಯಲಾಗಿ ಎಲ್ಲವೂ ಶಾಂತವಾಗಲಿವೆ. ಉರಿಯುವ ದೀಪವು ಎಣ್ಣೆತೀರಿ, ಬತ್ತಿ ಸುಟ್ಟುಹೋದಮೇಲೆ ಆರಿಹೋಗಲೇಬೇಕು, ಶಾಂತವಾಗಲೇಬೇಕು. ಹಾಗೇ ಈ ಜಗತ್ತಿನಲ್ಲಿರುವ ಜೀವದೀಪಗಳೆಲ್ಲವೂ ಒಂದುದಿನ ಆರಿಹೋಗಲಿವೆ, ಶಾಂತವಾಗಲಿವೆ, ತೋರಿದ ತೆರೆಗಳು ಮರೆಯಾಗಲೇಬೇಕು. ವಸ್ತು, ವ್ಯಕ್ತಿ, ವಿಚಾರ, ಭಾವನೆ ಯಾವುದೇ ಇರಲಿ, ಅದು ಎಷ್ಟೇ ದೊಡ್ಡದಿರಲಿ ಸಣ್ಣದಿರಲಿ ಒಂದುದಿನ ಅದು ಮರೆಯಾಗಿ ಶಾಂತವಾಗಲೇಬೇಕು. ಇತಿಹಾಸದಲ್ಲಿ ಎಂಥ ದೊಡ್ಡ ಚಾರಿತ್ರಿಕ ಪುಟವಿದ್ದರೂ ಅದು ಒಂದುದಿನ ಮುಚ್ಚಿ ಹೋಗಲೇಬೇಕು, ಶಾಂತವಾಗಲೇಬೇಕು. ಶಾಂತವಾಗುವುದೆಂದರೆ ನಾಶವಾಗುವುದೆಂದಲ್ಲ. *ನೀರ ಮೇಲೆ ತೋರಿದ ತೆರೆಗಳು ಅಡಗಿದರೂ ಆ ತೆರೆಯೊಳಗಿನ ನೀರು ನಾಶವಾಗುವುದಿಲ್ಲ. ಹಾಗೆಯೆ ಈ ಜಗತ್ತಿನಲ್ಲಿರುವ ಚರಾಚರ ವಸ್ತುಗಳು ಕಾಣದಂತೆ ಆಗಿರುತ್ತವೆ ವಿನಾ ನಾಶವಾಗಿರುವುದಿಲ್ಲ.*

ಅಮವಾಸ್ಯೆಯಿಂದ ಹುಣ್ಣಿಮೆಯವರೆಗೆ ಚಂದಿರನು ಬೆಳೆಯುತ್ತಾ ಹೋಗುತ್ತಾನೆ. ಮತೆ ಹುಣ್ಣಿಮೆಯಿಂದ ಅಮವಾಸ್ಯೆಯವರೆಗೆ ಇಳಿಯುತ್ತಾ ಬರುತ್ತಾನೆ. ಹೀಗೆ *ಈ ಜಗತ್ತಿನಲ್ಲಿರುವ ಎಲ್ಲ ವಸ್ತುಗಳೂ ಒಮ್ಮೆ ಬೆಳೆಯುತ್ತವೆ, ಮತ್ತೊಮ್ಮೆ ಅಳಿಯುತ್ತವೆ. ಕೊನೆಗೆ ಶಾಂತಿ, ಪ್ರಶಾಂತಿ ರೂಪದಲ್ಲಿರುವ ಸತ್ಯಶಿವನೊಬ್ಬನೇ ಉಳಿಯುತ್ತಾನೆ. ಪರಶಿವ ಪರಮಾತ್ಮನು ಎಂದೂ ನಾಶವಾಗುವುದಿಲ್ಲ. ಏಕೆಂದರೆ ಅವನು ಅಮೃತರೂಪನು.* ಈ ಜಗತ್ತಿನಲ್ಲಿರುವುದೆಲ್ಲದ್ದಕ್ಕೂ ಆ ಪರಮಾತ್ಮನೇ ಜನ್ಮದಾತನು ಆಶ್ರಯದಾತನು. ಆದುದರಿಂದ ಅವನಿಗೆ ಬ್ರಹ್ಮಯೋನಿ ಎಂದು ಕರೆದಿರುವರು. ಈ ಪ್ರಪಂಚದಲ್ಲಿರುವ ಯಾವುದೇ ವಸ್ತುವೂ ಮೊದಲು ಇರುವುದಿಲ್ಲ. ಕೊನೆಯಲ್ಲಿಯೂ ಇರುವುದಿಲ್ಲ. ಮಧ್ಯದಲ್ಲಿ ಮಾತ್ರ ಸ್ವಲ್ಪ ಸಮಯ ತೋರಿ ಮರೆಯಾಗಿ ಹೋಗುತ್ತದೆ. ಈ ಪ್ರಾಪಂಚಿಕ ವಸ್ತುಗಳಿಗೆ ಆದಿ, ಮಧ್ಯ, ಅಂತ್ಯ ಮೂರು ಅವಸ್ಥೆಗಳಿವೆ. ಆದರೆ ಪರಶಿವ ಪರಮಾತ್ಮನು ಆದಿಮಧ್ಯಾಂತ- ವಿಹೀನನಾಗಿದ್ದಾನೆ.

ಆಧಾರ : ಕೈವಲ್ಯ ಕುಸುಮ
🍁✨🍁✨🍁✨🍁✨🍁

ಏನಿದು ಪ್ರೀತಿ ಅಂದ್ರೆ....?

Happy valantain day...

*ಏನಿದು ಪ್ರೀತಿ ಅಂದ್ರೆ....?*

ಯಾವಾಗ ನಿಮ್ಮ ತಾಯಿ ಮುತ್ತನಿತ್ತು ನನ್ನ ಮಗ ಲಕ್ಷಕ್ಕೆ ಒಬ್ಬ ಅಂತಾಳಲ್ವಾ? ಅದು ಪ್ರೀತಿ ...

ಯಾವಾಗ ಕೆಲಸ ಮುಗಿಸಿ ಮನೆಗೆ ಬಂದಾಗ ಅಪ್ಪ ಏನು ಮಗನೇ ತುಂಬಾ ಸುಸ್ತಾದಂತೆ ಕಾಣ್ತಾ ಇದೀಯಾ? ಅಂತಾರಲ್ವಾ ಅದು ಪ್ರೀತಿ...

ಯಾವಾಗ ತನ್ನ ತಮ್ಮ ಯಾಕೆ tension ಮಾಡ್ಕೊಂಡಿದಿಯಾ ನಾನಿಲ್ವ ನಿನ್ ಜೊತೇಲಿ ಅಂತಾನಲ್ವಾ ಅದು ಪ್ರೀತಿ...

ಯಾವಾಗ ಗೆಳೆಯರು  ನೀನು ನನ್ ಜೊತೆ ಇರ್ಲಿಲ್ಲ ಅಂದ್ರೆ ಮಜಾನೆ ಇಲ್ಲ ಕಣೋ ಅಂತಾರಲ್ವಾ ಅದು ಪ್ರೀತಿ...

*ಇದು ನಿಜವಾದ ಪ್ರೀತಿ, ಇಂತಹ ಪ್ರೀತಿಯನ್ನು ಕಳಕೊಳ್ಳಬೇಡಿ....*

ಪ್ರೀತಿ ಅನ್ನೋದು ಕೇವಲ ಪ್ರೇಮಿಗಳ ನಡುವೆ ಇರುವಂತದ್ದಲ್ಲ...

ಯಾರು ನಿಮ್ಮ ಜೊತೆಯಲ್ಲಿ ಸದಾ ಇರ್ತಾರೋ ಅವರೆಲ್ಲರೂ ಕೂಡ ನಿಮ್ಮ ಪ್ರೀತಿಯಲ್ಲಿ ವಿಶೇಷವಾಗಿರೊರು..
*_ಇದು ಪ್ರೀತಿ..._*

ಯಾವಾಗ ಚಿಕ್ಕ ಮಗಳು ತನ್ನೆಲ್ಲ ಶಕ್ತಿಯನ್ನು ಹಾಕಿ ತಂದೆಯ ತಲೆಗೆ ಮಸಾಜ್ ಮಾಡುತ್ತಾಳೋ...

ಯಾವಾಗ ತನ್ನ ಹೆಂಡತಿ ಗಂಡನಿಗೊಸ್ಕರ ಮಾಡಿದ ಕಾಫಿಯನ್ನು ಒಂದು ಸಿಪ್ ಕುಡಿದು ಕೊಡುತ್ತಾಳೋ...

ಯಾವಾಗ ತಾಯಿ ಕೇಕ್ ನ ವಿಶೇಷವಾದ ಭಾಗವನ್ನ ತನ್ನ ಮಗನಿಗೆ ತೆಗೆದಿರಿಸುತ್ತಾಳೋ...

ಯಾವಾಗ ತನ್ನ ಗೆಳೆಯ ಜಾರಿ ಬಿಳುತ್ತಾನೋ ಅನ್ನೋ ಕಾಳಜಿಯಿಂದ ಕೈಯನ್ನು ಗಟ್ಟಿಯಾಗಿ ಹಿಡಿದು ಕೊಳ್ಳುತ್ತಾನೋ..

ಯಾವಾಗ ತನ್ನ ತಮ್ಮ ಮೆಸೇಜ್ ಮಾಡಿ ಯಾವಾಗ ಮನೆಗೆ ಬರ್ತಾ ಇದೀಯಾ ಅಂತಾ ಕೇಳ್ತಾನಲ್ವಾ?

ಇದು ಪ್ರೀತಿ ಅಂದ್ರೆ.....

*_ಪ್ರೀತಿಯಂದ್ರೆ ಕೇವಲ ಒಂದು ಹುಡುಗ ಅಥವಾ ಹುಡ್ಗಿನಾ ಪಾರ್ಕು, ಬೀಚ್, ಸಿನಿಮಾ ಅಂತಾ ತಿರುಗೊದಲ್ಲ ...._*

ಪ್ರೀತಿಯ ನಿಜವಾದ ಅರ್ಥ " *ಕಾಳಜಿ* " ಅಂತ.

Wednesday, 1 February 2017

●●●1940ರಿಂದ 1990ರ ಮಧ್ಯೆ ಹುಟ್ಟಿದ ಮಂದಿ, ನಾವೇ ಭಾಗ್ಯಶಾಲಿಗಳು●●●
●●●● ನಾವು ಅದ್ಭುತವಾದ ಮಂದಿ. ನಮ್ಮ ಬದುಕೇ ಇದಕ್ಕೆ ಜೀವಂತ ಸಾಕ್ಷಿ
■ಶಾಲೆಗೆ ಪ್ರಾಣಿಗಳಂತೆ ನಾವು ಹೆಣಭಾರದ ಪುಸ್ತಕಗಳನ್ನು ಹೊತ್ತು ಹೋಗಲಿಲ್ಲ.
■ಆಟ ಆಡುವಾಗ, ಸೈಕಲ್ ಸವಾರಿ ಮಾಡುವಾಗ ನಮಗೆ ಹೆಲ್ಮೆಟ್ ಧರಿಸಿಕೊಳ್ಳುವ ಧಾವಂತವಿರಲಿಲ್ಲ.
■ಶಾಲೆ ಮುಗಿದ ಮೇಲೆ ಮುಸ್ಸಂಜೆಯಾಗುವವರೆಗೂ ನಾವು ಆಟವಾಡುತ್ತಿದ್ದೆವು. ನಮಗೀ ಟಿವಿ, ಕಂಪ್ಯೂಟರುಗಳ ಗೊಡವೆಯಿರಲಿಲ್ಲ.
■ನಮ್ಮ ನಿಜವಾದ ಗೆಳೆಯರೊಂದಿಗಷ್ಟೇ ನಾವು ಆಡಿದೆವು, ಕುಣಿದಾಡಿದೆವು, ಜಗಳಾಡಿದೆವು, ಮಾತಾಡಿದೆವು. ನಾವು ಮೊಕ ಮೋರೆ ನೋಡದ, ಎದುರುಬದುರು ಭೇಟಿಯಾಗದ ಆನ್‌ಲೈನ್ ಗೆಳೆಯರೊಂದಿಗಲ್ಲ.
■ಬಾಯಾರಿಕೆಯಾದಾಗ ಧಾರಾಳವಾಗಿ ನಲ್ಲಿ ನೀರನ್ನೋ, ಹಳ್ಳದ ನೀರನ್ನೋ, ಕೆರೆಬಾವಿಗಳ ನೀರನ್ನೋ ಕುಡಿದೆವು. ಬಾಟಲ್ ನೀರಿಗಾಗಿ ಹುಡುಕಾಡಲಿಲ್ಲ.
■ಒಂದೇ ಹಣ್ಣನ್ನು ನಾಲ್ಕು ಮಂದಿ ಕಚ್ಚಿ ತಿಂದಾಗಲೂ, ಒಂದೇ ಗ್ಲಾಸಿನಲ್ಲಿ ನಾಲ್ಕು ಮಂದಿ ಕಚ್ಚಿ ಕುಡಿದಾಗಲೂ ನಮಗೆ ರೋಗ ಬರಲಿಲ್ಲ. ಆ ಭೀತಿಯೂ ಇರಲಿಲ್ಲ.
■ತಟ್ಟೆ ತುಂಬಾ ಸಿಹಿತಿಂಡಿಗಳನ್ನು ತಿಂದರೂ, ಧಂಡಿಧಂಡಿ ಅನ್ನ ಉಂಡರೂ ನಮ್ಮ ‘ತೂಕ’ ಹೆಚ್ಚಾಗಲಿಲ್ಲ.
■ಬರಿಗಾಲಲ್ಲೇ ಊರು ಸುತ್ತಿದರೂ ನಮ್ಮ ಪಾದಗಳಿಗೆ ಏನೂ ಆಗಲಿಲ್ಲ. ಕ್ರಿಮಿಕೀಟಗಳು ಹತ್ತಿಕೊಳ್ಳಲಿಲ್ಲ.
■ವಿಟಮಿನ್ನು, ಪ್ರೊಟೀನು, ಕಬ್ಬಿಣ, ಕ್ಯಾಲ್ಸಿಯಂ, ಸೋಡಿಯಂ, ಪೊಟ್ಯಾಸಿಯಂ, ಮಣ್ಣುಮಸಿ ಮಣ್ಣಾಂಗಟ್ಟಿ ಅಂತ ನಾವು ಮಾತ್ರೆ ನುಂಗಲಿಲ್ಲ. ಸಿರಪ್ಪು ಕುಡಿಯಲಿಲ್ಲ. ಆದರೂ ನಾವು ಆರೋಗ್ಯವಾಗೇ ಇದ್ದೆವು.
■ನಮ್ಮ ಆಟಿಕೆಗಳನ್ನು ನಾವೇ ತಯಾರು ಮಾಡಿಕೊಂಡು ಆಡಿದವರು ನಾವು. ಅದಕ್ಕಾಗಿ ನಮ್ಮಪ್ಪ, ಅಮ್ಮ, ಆಂಟಿ ಅಂಕಲ್ಲುಗಳು ಸಾವಿರಾರು ರೂಪಾಯಿ ಸುರಿಯಲಿಲ್ಲ.
■ನಮ್ಮ ಅಪ್ಪ, ಅಮ್ಮ ಅಸಹ್ಯ ಹುಟ್ಟಿಸುವಷ್ಟು ಶ್ರೀಮಂತರಾಗಿರಲಿಲ್ಲ. ಅವರು ಹಣ ಮತ್ತು ಸಂಪತ್ತನ್ನು ಸಂಗ್ರಹಿಸುವುದಕ್ಕಾಗೇ ಬದುಕಿರಲಿಲ್ಲ. ಅವರು ಈ ಭೋಗವಸ್ತುಗಳಿಗಿಂತಲೂ ಹೆಚ್ಚಾದ ‘ಪ್ರೀತಿ’ ಕೊಟ್ಟರು.
■ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು ನಾವು ಮೊಬೈಲ್ ಫೋನುಗಳನ್ನು ಉಪಯೋಗಿಸಲಿಲ್ಲ. ಆ ಸಂಕೇತಗಳನ್ನೂ ಬಳಸಲಿಲ್ಲ.
■ಯಾರೋ ಬರೆದದ್ದನ್ನು ನಾವು ಫಾರ್ವರ್ಡ್ ಮಾಡಲಿಲ್ಲ. ನಾವೇ ಬರೆದೆವು. ನೇರವಾಗಿ ಹೇಳಿದೆವು.
■ನಮ್ಮ ಬಳಿ ಸೆಲ್ಫೋನ್, ಡಿವಿಡಿ, ಪೆನ್‌ಡ್ರೈವ್, ಪ್ಲೇಸ್ಟೇಷನ್, ವಿಡಿಯೋ ಗೇಮ್, ಲ್ಯಾಪ್‌ಟಾಪ್, ಇಂಟರ್‌ನೆಟ್‌ಗಳಿರಲಿಲ್ಲ; ಗೆಳೆಯರಿದ್ದರು.
■ನಮ್ಮ ನೆಂಟರಿಷ್ಟರ ಮನೆಗೆ, ಅಜ್ಜಿ ಮನೆಗೆ ನಮಗೆ ಬೇಕುಬೇಕಾದಾಗಲೆಲ್ಲಾ ಹೋಗಿ ಬರುತ್ತಿದ್ದೆವು. ಕಾಲ್ ಮಾಡಿ ಪರ್ಮಿಷನ್ ಕೇಳುತ್ತಿರಲಿಲ್ಲ.
■ನಮಗೆ ನೆಂಟರಿಷ್ಟರಿದ್ದರು, ಹಿತೈಷಿಗಳಿದ್ದರು. ಇನ್ಷೂರೆನ್ಸ್ ಇಲ್ಲದೆಯೂ ನಾವು ಬದುಕಬಹುದಿತ್ತು.
■ನಮ್ಮ ಫೋಟೋಗಳು ಬರೀ ಬ್ಲ್ಯಾಕ್ ಆಂಡ್ ವೈಟ್ ಇರಬಹುದು; ನಮ್ಮ ನೆನಪುಗಳು ವರ್ಣರಂಜಿತವಾಗಿವೆ.
■ನಮ್ಮಪ್ಪ, ಅಮ್ಮನಿಗಿಂತ ನಾವೇ ತಿಳಿದವರೆನ್ನುವ ಭಾವ ನಮಗೆಂದೂ ಬರಲಿಲ್ಲ. ಆದರೆ ನಮ್ಮ ಮಕ್ಕಳು ನಮಗಿಂತ ಬುದ್ಧಿವಂತರೆಂದು ಹೆಮ್ಮೆಪಡುತ್ತಿದ್ದೇವೆ.
ಒಟ್ಟಿನಲ್ಲಿ ನಾವು ಭಾಗ್ಯಶಾಲಿಗಳು, ಪುಣ್ಯವಂತರು. ಹೌದಾ?

ಪ್ರತಿಫಲ

ಪ್ರತಿಫಲ

*ಕೋಪದಿಂದ ಮಾತನಾಡಿದರೆ ಗುಣವನ್ನು ಕಳೆದುಕೊಳ್ಳುವೆ.*

*ಹೆಚ್ಚಾಗಿ ಮಾತನಾಡಿದರೆ "ಶಾಂತಿ"ಯನ್ನು ಕಳೆದುಕೊಳ್ಳುವೆ.*

*ಅನಗತ್ಯವಾಗಿ ಮಾತನಾಡಿದರೆ ಕೆಲಸವನ್ನು ಕಳೆದುಕೊಳ್ಳುವೆ.*

*ಅಹಂಕಾರದಿಂದ ಮಾತನಾಡಿದರೆ* *ಪ್ರೀತಿಯನ್ನು ಕಳೆದುಕೊಳ್ಳುವೆ.*

*ಸುಳ್ಳು ಸುಳ್ಳು ಮಾತನಾಡಿದರೆ* *ಹೆಸರು ಕಳೆದುಕೊಳ್ಳುವೆ.*

*ವೇಗವಾಗಿ ಮಾತನಾಡಿದರೆ* *ಅರ್ಥವನ್ನು ಕಳೆದುಕೊಳ್ಳುವೆ*

*ಪ್ರೀತಿಯಿಂದ ಮಾತನಾಡಿದರೆ* *ಎಲ್ಲವನ್ನು ಗಳಿಸಿಕೊಳ್ಳುವೆ*.

🍁🍁🍁🍁🍁🍁🍁🍁🍁
*‘ಮುಂಗಾರು ಕತಾಸ್ಪರ್ಧೆ’ಯಲ್ಲಿ ಮೊದಲ ಬಹುಮಾನ ಪಡೆದ ಕತೆ*

ನಿದ್ರೆಯ ಮಂಪರಿನಲ್ಲಿ ಯಾವುದೋ ಅಸ್ಪಷ್ಟ ಸದ್ದು. ನೆನ್ನೆ ತಡರಾತ್ರಿಯಲ್ಲಿ ಓದುತ್ತಿದ್ದ ಇಂಗ್ಲಿಷ್ ಕಾದಂಬರಿಯ ಪುಟಗಳು ಫ್ಯಾನ್ ಗಾಳಿಗೆ ಟೇಬಲ್ಲಿನ ಮೇಲೆ ಪಟಪಟಿಸುತ್ತಿರಬೇಕು. ಅದೇ ಸದ್ದು ಎಂದುಕೊಂಡು ಹಾಯಾಗಿ ಮಲಗಿದ್ದ ನನ್ನನ್ನು ಮತ್ತೊಂದು ಸದ್ದು ಥಟ್ಟನೆ ಎಚ್ಚರಿಸಿತು.
ಅದಾವ ಸದ್ದು??   -ಅಜಯ್ ವರ್ಮ ಅಲ್ಲೂರಿ

http://bit.ly/2iT7B5N
ಬದುಕೇ ಶಾಶ್ವತವಲ್ಲ, ಇನ್ನು ಪ್ರೀತಿ ಕೈತಪ್ಪಿದರೆ ಯಾಕೆ ಚಿಂತೆ?


Read more at http://www.udayavani.com/kannada/news/modern-spirituality/141419/baduke-permanent-kaitappidare-no-love-why-bother#RXe4qYmxXheWOVLF.99


ಕೇಳದೆ ನಿಮಗೀಗ ದೂರದಲ್ಲಿ ಯಾರೋ ..

ಚಿತ್ರ: ಗೀತ
ಹಾಡಿದವರು: ಎಸ್ ಪಿ ಬಾಲಸುಬ್ರಮಣ್ಯ

Download

http://kannadamasti.net/music/down/19844663/2615977/ZWU1MDhkMlI5VGp2WXpZazlnakkzZ1NNS0hDbFE4T2JEdEQ3MndrbjRrdjdGWnFYQXc=/Geetha_-_kelade_nimageega+%5BKannadaMasti.Net%5D.mp3
*ಸರ್ಕಾರಿ ಕಾರ್ನರ್*

ದಿನದ ಪ್ರಶ್ನೆ

 Tuesday, 24.01.2017, 7:18 AM     ವಿಜಯವಾಣಿ ಸುದ್ದಿಜಾಲ


ನಾನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ವಾರ್ಡನ್ ಆಗಿ 2 ತಿಂಗಳ ಹಿಂದೆ ಕತ್ಯರ್ವಕ್ಕೆ ಹಾಜರಾಗಿದ್ದು ನನ್ನ ಮೂಲ ವೇತನ ರೂ. 14,550-00. ಪ್ರಸ್ತುತ ನಾನು ಕೆಪಿಎಸ್​ಸಿ ಅಂತಿಮ ಪಟ್ಟಿಯಲ್ಲಿ ಸಚಿವಾಲಯದ ಸಹಾಯಕ ಹುದ್ದೆಗೆ ಆಯ್ಕೆಯಾಗಿದ್ದು ಈ ಹುದ್ದೆಗೆ ಸೇರಲು ವಾರ್ಡನ್ ಹುದ್ದೆಗೆ ರಾಜೀನಾಮೆ ನೀಡಬೇಕಾ? ಅಥವಾ ನಾನು ಸಲ್ಲಿಸಿದ್ದ ಹುದ್ದೆಯ ಸೇವಾ ಭದ್ರತೆ ಲಭ್ಯವಾಗುತ್ತದೆಯೇ?

|ಆನಂದ್ ತುಮಕೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ನಿಯಮ 252ಬಿ ರಂತೆ ನಿಮ್ಮ ವಾರ್ಡನ್ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಹೊಸ ಸಹಾಯಕರ ಹುದ್ದೆಗೆ ಕರ್ತವ್ಯಕ್ಕೆ ಹಾಜರಾಗಬೇಕಾಗುತ್ತದೆ. ಆಗ ನಿಮ್ಮ ರಾಜೀನಾಮೆಯು ಸರ್ಕಾರಿ ಸೇವೆಗೆ ನೀಡಿದ ರಾಜೀನಾಮೆಯಾಗಿರದೇ ನಿಮಗೆ ಸೇವಾ ಭದ್ರತೆ ಲಭ್ಯವಾಗುತ್ತದೆ. ನೀವು ಪ್ರಸ್ತುತ ಮಾಡಿಸಿರುವ ಕೆಜೆಡಿ, ಎನ್​ಪಿಎಸ್ ಮುಂತಾದವು ಮುಂದುವರೆದು ಅದೇ ಸೇವಾ ಪುಸ್ತಕವು ಸಹಾಯಕ ಹುದ್ದೆಗೂ ಮುಂದುವರಿಯುತ್ತದೆ.

ತಿಳಿವಿನ ದಾರಿಗಳು

*ತಿಳಿವಿನ ದಾರಿಗಳು*


ಜೆ. ಕೃಷ್ಣಮೂರ್ತಿ

 ನಾವು ಸಂಬಂಧಗಳನ್ನು ಅಥವಾ ಸಂಭಾಷಣೆ ಸಂಪರ್ಕಗಳು ಮತ್ತು ಸಂಸ್ಥೆಗಳನ್ನು ಬೋಧನೆಗಾಗಿ, ಸಹಾಯಕ್ಕಾಗಿ, ವಿಷಯಗಳನ್ನು ಸ್ಪಷ್ಟಪಡಿಸಲಿಕ್ಕಾಗಿ ಅವಲಂಬಿಸಿದರೆ ನಾವು ಈಗ ಏನಾಗಿದ್ದೇವೋ ಅದೇ ಆಗುತ್ತೇವೆ. ನಾವು ಅವಲಂಭಿಗಳಾಗುತ್ತೇವೆ. *ಬೇರೆಯವರನ್ನು ಅವಲಂಬಿಸಿದರೆ ನಾವೇನು ಕಲಿಯಬಹುದು?* ಹಾಗಿದ್ದರೆ ಕಲಿಕೆ ಎಂದರೇನು? - ಇದು ಗಂಭೀರ ಪ್ರಶ್ನೆ.


ನಾವು ತಿಳಿದಿರುವಂತೆ ಕಲಿಕೆ ಎಂದರೆ ಜ್ಞಾನ ಸಂಗ್ರಹ. ನಾನ ನನ್ನ ಬಗ್ಗೆ ಕಲಿತಿದ್ದೇನೆ- ಈ ಎಲ್ಲ ನೋವು, ಯಾತನೆ, ಗೊಂದಲ ಜೀವನದ ಕ್ಷುದ್ರತೆಗಳು - ನಾನು ಇದನ್ನು ಕಲಿತಿದ್ದೇನೆ. ಹೀಗಾಗಿ ಕಲಿಕೆ ಎಂದರೆ ಈಗ ನಮಗೆ ತಿಳಿದಿರುವಂತೆ, ನಮ್ಮ ಬಗೆಗಿನ ಜ್ಞಾನ ಸಂಪಾದನೆ. ಅವ್ಯವಸ್ಥೆಯ ಮೂಲವೇ ಜ್ಞಾನ. ನಿಧಾನವಾಗಿ ಮುಂದುವರಿಯಿರಿ.ತಂತ್ರಜ್ಞಾನದ ಕ್ಷೇತ್ರದಲ್ಲಿ, ನಿತ್ಯಜೀವನದಲ್ಲಿ ಜ್ಞಾನವು ಅತ್ಯವಶ್ಯಕ; ಆದರೆ ಮಾನಸಿಕವಾಗಿ ಜ್ಞಾನವು ಅವ್ಯವಸ್ಥೆಯ ಮೂಲ. ಏಕೆಂದರೆ ಜ್ಞಾನವು ಗತಕಾಲ. ಜ್ಞಾನವು ಸದಾ ಸೀಮಿತ; ಏಕೆಂದರೆ ಅದು ಅನುಭವ, ಊಹಾಕಲ್ಪನೆ, ತೀರ್ಮಾನಗಳು, ಇತ್ಯಾದಿಗಳ ಸರಪಣಿಯನ್ನು ಆದರಿಸಿದೆ. ಅದು ಇದೆಲ್ಲದರ ನಿರಂತರ ಸೇರ್ಪಡೆ.


 ಹೀಗಾಗಿ, ಅದು ಸೀಮಿತ. ಆದುದರಿಂದ ನನ್ನ ಪೂರ್ವಜ್ಞಾನ ಅಥವಾ ತೀರ್ಮಾನಗಳಿಲ್ಲದೆ ನನ್ನನ್ನು ನಾನು ನೋಡಿಕೊಳ್ಳಬಹು¨ದೆ ನಿಮಗೆ ನನ್ನ ಪ್ರಶ್ನೆ ಅರ್ಥವಾಯಿತೇ ನಾನು ನಿನ್ನೆ ಅಥವಾ ನಿನ್ನೆ ಕೆಲಗಂಟೆಗಳ ಕಾಲ ನನ್ನನ್ನು ನಾನು ನೋಡಿಕೊಂಡೆ. *ನಾನು ಇದು, ನಾನು ಅದು ಎಂಬುದನ್ನು ಈ ನೋಟದಲ್ಲಿ ಕಂಡುಕೊಂಡೆ. ನನಗೆ ಇದರಿಂದ ಬೇಸರವಾಗಿದೆ ಅಥವಾ ತುಂಬಾ ಖುಷಿಯಾಗಿದೆ. ಇದೆಲ್ಲ ನಡೆಯುತ್ತಿರುತ್ತದೆ*. ಇದೆಲ್ಲ ನಿನ್ನೆಯ ಜ್ಞಾನವಾಗುತ್ತದೆ. ಈ ಜ್ಞಾನದೊಂದಿಗೆ ನಾನು ನನ್ನನ್ನು ಮತ್ತೊಮ್ಮೆ ಅವಲೋಕಿಸುತ್ತೇನೆ. ಹೀಗಾಗಿ ಜ್ಞಾನವು ನಿರಂತರವಾಗಿ ಯಾಂತ್ರಿಕವಾದ ಪುನರಾವರ್ತನೆಯನ್ನುಂಟು ಮಾಡುತ್ತದೆ.


ವಿಜ್ಞಾನಿಗಳ ಜೊತೆ ನೀವು ಈ ವಿಷಯವನ್ನು ಚರ್ಚಿಸಿದರೆ, ಅವರು ಕೂಡ ಸಂಶೋಧನೆಯ ಕೆಲವು ಕ್ಷ ತ್ರಗಳಲ್ಲಿ ಜ್ಞಾನವು ತಡೆಗೋಡೆಯಾಗಿದೆ ಎಂಬುದನ್ನು ಕಂಡುಕೊಳ್ಳುತ್ತಿದ್ದಾರೆ. ಹೀಗಾಗಿ ನೀವು ಕೃಷ್ಣಮೂರ್ತಿ ಅವರಿಂದ ಏನನ್ನೂ ಕಲಿಯುತ್ತಿಲ್ಲ ಅಥವಾ ಕಂಡುಕೊಳ್ಳುತ್ತಿಲ್ಲ. ನೀವು ಗತಕಾಲದ ಇತಿಹಾಸದ ಉಗ್ರಾಣ. ಇದು ವಾಸ್ತವ. ನೀವು ಮನುಕುಲದ ಇತಿಹಾಸ. ಪುಸ್ತಕವೊಂದನ್ನು ಓದುವುದು ಹೇಗೆ ಎಂಬುದು ನಿಮಗೆ ತಿಳಿದಿದ್ದರೆ, ನೀವು ಯಾರನ್ನೂ ಅವಲಂಬಿಸಬೇಕಾಗಿಲ್ಲ. ಚರ್ಚೆಗಳನ್ನು, ಸಂಬಂಧಗಳನ್ನು ಅಥವಾ ಸಂಘಟಿತ ಗುಂಪುಗಳನ್ನು ಅಥವಾ ಅಂಥದ್ದನ್ನೆಲ್ಲ ಅವಲಂಬಿಸಬೇಕಾಗಿಲ್ಲ- ನೀವು ಚರ್ಚೆ ಮಾಡಬಾರದು, ಸಂಬಂಧ ಹೊಂದಿರಬಾರದು ಎಂದೆಲ್ಲ ನಾನು ನಿಮಗೆ ಹೇಳುತ್ತಿಲ್ಲ. *ನಿಮ್ಮನ್ನು ನೀವು ತಿಳಿಯಲು ಬೇರೆಯವರನ್ನು ಅವಲಂಬಿಸಿದರೆ ನೀವು ಇರುವುದಿಲ್ಲ.* ನಿಮ್ಮ ಮುಂದೆ ನೇತಾರರಿದ್ದರಲ್ಲವೇ? ನೀವೇನು ಮಾಡಬೇಕು, ಮಕ್ಕಳನ್ನು ಹೇಗೆ ಸಾಕಿಸಲಹಬೇಕು, ಕಾಮ ಸುಖವನ್ನು ಹೇಗೆ ಗಳಿಸಬೇಕು ಎಂಬುದನ್ನೇಲ್ಲ ಧಾರ್ಮಿಕ ಮುಖಂಡರು, ರಾಜಕೀಯ ಧುರೀಣರು ಹಾಗೂ ನಾನಾ ಬಗೆಯ ತಜ್ಞರು ನಿಮಗೆ ಹೇಳಿಲ್ಲವೆ?


ಕಳೆದ ನೂರು ಸಾವಿರ ವರ್ಷಗಳಲ್ಲಿ ಎಲ್ಲ ತೆರನಾದ ಮುಖಂಡರು ಬಂದು ಹೋಗಿದ್ದಾರೆ. ಇದೆಲ್ಲದರ ಕೊನೆಯಲ್ಲಿ ನೀವೆಲ್ಲಿದ್ದೀರಿ? ದಯವಿಟ್ಟು ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ. ನಾವು ಇಂದು ಏನಾಗಿದ್ದೇವೋ ಅದಕ್ಕೆ ನಾವು ಅನ್ಯರನ್ನು ಅವಲಂಬಿಸಿದ್ದೇ ಕಾರಣ, ನಾವೇನು ಮಾಡಬೇಕು, ಹೇಗೆ ಯೋಚಿಸಬೇಕು ಎಂದು ನಮಗೆ ಯಾರಾದರೂ ಹೇಳಬೇಕು. ಅಂದರೆ ಉದ್ದಕ್ಕೂ ನಾವು ಕಾರ‍್ಯಕ್ರಮಾನುಬಂತರಾಗಿದ್ದೇವೆ. ಸಂಬಂಧಗಳು, ಚರ್ಚೆಗಳು, ಇತ್ಯಾದಿಗಳ ಮೂಲಕ ನಮ್ಮನ್ನು ನಾವು ಗ್ರಹಿಸಲು ಎಲ್ಲ ಅವಕಾಶಗಳಿವೆ. ಆದರೆ ಅನ್ಯರನ್ನು ಅವಲಂಬಿಸಿದರೆ ನೀವು ಇರುವುದಿಲ್ಲ. ಈ ಪ್ರಶ್ನೆ ಈಗ ನಿಚ್ಚಳವಾಯಿತೆ? ನೀವು ಈ ಪ್ರವನಕಾರನ ಮಾತುಗಳನ್ನು ಅನುಮೋದಿಸಬೇಕಾಗಿಲ್ಲ. ಆದರೆ ಪರಾವಲಂಬನದ ಪರಿಣಾಮಗಳನ್ನು ನೋಡಿ. ಈ ಗೊಂದಲಮಯ ಪ್ರಪಂಚದಲ್ಲಿ ಸುವ್ಯವಸ್ಥೆ ಸ್ಥಾಪಿಸಲು ಸರಕಾರಗಳನ್ನು ಅವಲಂಬಿಸುವುದರ ಪರಿಣಾಮಗಳನ್ನು, ಗುರು, ಪುರೋಹಿತ, ಪೋಪ್‌, ಪೂಜಾರಿ ಇತ್ಯಾದಿಯನ್ನು ಅವಲಂಬಿಸಿದ್ದರ ಪರಿಣಾಮಗಳನ್ನು ಗುರುತಿಸಿ.

ದಿ ಮ್ಯಾಟರ್ನಿಟಿ ಬೆನೆಫಿಟ್ಸ್ ಆಕ್ಟ್ (The Maternity Benefit Act), 1961*

*ಉದ್ಯೋಗ ಸ್ಥಳದಲ್ಲಿ ತಾಯಿ ಹಾಗೂ ಶಿಶುವಿಗೆ ಸೌಕರ್ಯ*


ಉದ್ಯೋಗಸ್ಥ ಮಹಿಳೆಯ ಜೀವನದಲ್ಲಿ ತಾಯ್ತನದ ಅವಧಿಯು ಬಹಳ ಮಹತ್ವದ ಸಮಯವಾಗಿರುತ್ತದೆ. ಪೂರ್ಣಾವಧಿಯ ಕೆಲಸದಲ್ಲಿರುವ ಭಾವೀ ತಾಯಂದಿರಿಗೆ ತಮ್ಮ ಸಂಸ್ಥೆಯಿಂದ ಹೆರಿಗೆ ರಜೆ (maternity leave) ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಬೆಂಬಲದ ಅವಶ್ಯಕತೆಯಿರುತ್ತದೆ. ಸಂಸ್ಥೆಗಳ ಮಾನವ ಸಂಪನ್ಮೂಲ ವಿಭಾಗದ ಕಾರ್ಯನೀತಿಗಳಿಗೆ ಅನುಗುಣವಾಗಿ ಬೇರೆ ಬೇರೆ ಸಂಸ್ಥೆಗಳಲ್ಲಿ ವಿಭಿನ್ನ ರೀತಿಯ ಸೌಲಭ್ಯಗಳು ಲಭ್ಯವಿರಬಹುದು. ಆದರೆ ಕೆಲವು ಕನಿಷ್ಠ ಸೌಲಭ್ಯಗಳನ್ನು ಒದಗಿಸುವುದು ಕಾನೂನಿನ ಪ್ರಕಾರ ಕಡ್ಡಾಯವಾಗಿದೆ.

*ದಿ ಮ್ಯಾಟರ್ನಿಟಿ ಬೆನೆಫಿಟ್ಸ್ ಆಕ್ಟ್ (The Maternity Benefit Act), 1961*

ಈ ಕಾನೂನಿನ ಪ್ರಕಾರ ಭಾವೀ ತಾಯಂದಿರಿಗೆ 12 ವಾರಗಳ ಸಂಬಳ ಸಹಿತ ಹೆರಿಗೆ ರಜೆಯನ್ನು ನೀಡಬೇಕಾಗುತ್ತದೆ: ಹೆರಿಗೆಗೆ ಮೊದಲು 6 ವಾರ ಮತ್ತು ಹೆರಿಗೆಯ ನಂತರ 6 ವಾರಗಳು. ಈ ಕಾನೂನಿನ ಪ್ರಕಾರ ಸಂಸ್ಥೆಗಳು ಗರ್ಭಿಣಿ ಮಹಿಳೆಯರಿಗೆ ಯಾವುದೇ ರೀತಿಯ ತಾರತಮ್ಯ ತೋರಿಸುವುದನ್ನು ನಿಷೇಧಿಸಲಾಗಿದೆ. ಯಾವುದೇ ಸಂಸ್ಥೆಯು ಗರ್ಭಿಣಿಯೆಂಬ ಕಾರಣಕ್ಕೆ ಮಹಿಳಾ ನೌಕರರನ್ನು ಕೆಲಸದಿಂದ ತೆಗೆದುಹಾಕುವಂತಿಲ್ಲ. ಗರ್ಭಿಣಿ ಮಹಿಳೆಯು ತನ್ನ ಹೆರಿಗೆ ರಜೆಯ ಅವಧಿಯನ್ನು ಲಿಖಿತವಾಗಿ ಬರೆದು ಸಂಸ್ಥೆಗೆ ಸೂಚಿಸಬೇಕಾಗುತ್ತದೆ.

ಜೊತೆಗೆ, ಗರ್ಭಿಣಿಯರು ತಮ್ಮ ತಾಯ್ತನದ ಕಾರಣದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರೆ, ಸೂಕ್ತವಾದ ದಾಖಲೆಗಳನ್ನು ಒದಗಿಸಿ, ಒಂದು ತಿಂಗಳು ಹೆಚ್ಚಿನ ಅನಾರೋಗ್ಯದ ರಜೆಯನ್ನು ಪಡೆಯಬಹುದು. ಗರ್ಭಪಾತದಂತಹ ಸಂದರ್ಭದಲ್ಲಿ ಮಹಿಳೆಯರು ಗರ್ಭಪಾತವಾದ ದಿನದಿಂದ 6 ವಾರಗಳವರೆಗೆ ರಜೆಯನ್ನು ಪಡೆಯಬಹುದು.

*ಮಾನವ ಸಂಪನ್ಮೂಲ ವಿಭಾಗದ ಕಾರ್ಯನೀತಿಗಳು*

ಈ ಕಡ್ಡಾಯ ಸೌಲಭ್ಯಗಳ ಜೊತೆಗೆ ಮಾನವ ಸಂಪನ್ಮೂಲ ವಿಭಾಗವು, ತನ್ನ ಸಂಸ್ಥೆಯು ಅನುಮೋದಿಸಿದಂತೆ, ತನ್ನದೇ ಆದ ಉದಾರವಾದ ನೀತಿಗಳನ್ನು ಹೊಂದಿರಬಹುದು. ಗರ್ಭಿಣಿ ಮಹಿಳೆಯರಲ್ಲಿ ಉಂಟಾಗುವ ಒತ್ತಡವು ಕಾಲಾಂತರದಲ್ಲಿ ತಾಯಿ ಹಾಗೂ ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಉಂಟುಮಾಡುವ ದುಷ್ಪರಿಣಾಮಗಳ ಬಗ್ಗೆ ಈಗೀಗ ಎಲ್ಲಾ ಕಡೆ ಜಾಗೃತಿ ಮೂಡುತ್ತಿದೆ. ಇದರಿಂದಾಗಿ ಹಲವು ಸಂಸ್ಥೆಗಳು, ಭಾವಿ ತಾಯಂದಿರ ವಿಷಯದಲ್ಲಿ ಮೃದು ನೀತಿಯನ್ನು ಅನುಸರಿಸುತ್ತಿವೆ. ಹೆಚ್ಚಿನ ಹೆರಿಗೆ ರಜೆಯ ಜೊತೆಗೆ, ಮೆಟರ್ನಿಟಿ ಕ್ಲೇಮ್ ಮತ್ತು ಪ್ರಯಾಣ ಭತ್ಯೆ, ಅನುಕೂಲಕರ ಕೆಲಸದ ಅವಧಿ ಹಾಗೂ ಡೇ-ಕೇರ್ ನಂತಹ ಸೌಲಭ್ಯಗಳನ್ನು ಒದಗಿಸುತ್ತಿವೆ.

THE WAY YOU ARE LIVING CREATES YOUR DISEASE

*THE WAY YOU ARE LIVING CREATES YOUR DISEASE*

Happiness is man’s nature. *You need not worry about happiness at all, it is already there. It is in your heart* – you just have to stop being unhappy, you have to stop the mechanism functioning that creates unhappiness.


*Health is not something to be attained somewhere, it is not an object.*

Health is a totally different way of living. The way you are living creates disease, the way you are living creates misery.


Now people want happiness – but just by wanting, you cannot get it. Wanting is not enough. You will have to see into the phenomenon of your misery, how you create it – how in the first place you became miserable, how you go on becoming miserable every day – what is your technique?


*osho zen*

ದುಃಖಕ್ಕೆ ಕಾರಣವೇನು?

*ದುಃಖಕ್ಕೆ ಕಾರಣವೇನು?*


-ಡಾ. ಡಿ. ವೀರೇಂದ್ರ ಹೆಗ್ಗಡೆ,

 ಧರ್ಮಸ್ಥಳ ನಮ್ಮ ಮನೆ, ನಮ್ಮ ವಸ್ತುಗಳು, ಅದರಲ್ಲೂ ನಮಗೆ ಉಡುಗೊರೆಯಾಗಿ ಸಿಕ್ಕಿದ್ದು, ಯಾರೋ ಪ್ರೀತಿಯಿಂದ ಕೊಟ್ಟ ವಸ್ತುಗಳ ಬಗ್ಗೆ ನಮಗೆ ವಿಶೇಷವಾದ ಅಕ್ಕರೆ, ಪ್ರೀತಿ ಇರುತ್ತದೆ. ಅದರಲ್ಲೂ ಒಂದು ವಿಶೇಷವಾದ, ಅಮೂಲ್ಯ ವಸ್ತುವಿದೆ ಎಂದರ ಅದರ ಬಗ್ಗೆ ನಾವು ವಿಶೇಷವಾದ ಪ್ರೀತಿ-ಸ್ನೇಹ ಹೊಂದಿರುತ್ತೇವೆ. ಒಂದೊಮ್ಮೆ ಆಕಸ್ಮಿಕವಾಗಿ ಅದು ಕಳೆದು ಹೋದರೆ, ಯಾರೋ ಕಳ್ಳರು ಬಂದು ಅದನ್ನು ಕದ್ದೊಯ್ದರೆ ನಮಗೆ ತುಂಬ ದುಖವಾಗುತ್ತದೆ. ಕೂಡಲೇ ಪೊಲೀಸರಿಗೆ ದೂರು ಕೊಡುತ್ತೇವೆ, ಕಂಡ ಕಂಡಲ್ಲೆಲ್ಲ ಅಲೆದು ಹುಡುಕಾಡುತ್ತೇವೆ. ಯಾಕೆ ಹೀಗೆ?


 ಪ್ರೀತಿಯ ವಸ್ತು ಕಳೆದು ಹೋದಾಗ ಇಷ್ಟೊಂದು ದುಃಖ-ವೇದನೆಯುಂಟಾಗಲು ಕಾರಣವೇನು? ಎಂಬುದನ್ನು ಹೃದಯಸ್ಪರ್ಶಿ ವಿಧಾನದಿಂದ ವಿಶ್ಲೇಷಿಸುವ ಪ್ರಸಂಗವೊಂದು ಇಲ್ಲಿದೆ.


ನಾಗಪುರದಲ್ಲಿ ನರೇಂದ್ರ ಸೇಠ್‌ ಎಂಬ ಧನಿಕರ ಮನೆಯೊಂದಿತ್ತು. ಆ ಮನೆಯಲ್ಲಿ ಪ್ಯಾರೇಲಾಲ್‌ ಎಂಬ ಒಬ್ಬ ಪ್ರಾಮಾಣಿಕ ಸೇವಕನಿದ್ದರು. ಮನೆ ಮಂದಿಗೆ ಪ್ರೀತಿ ಪಾತ್ರರಾಗಿ, ಸರ್ವ ರೀತಿಯ ಸೇವೆಯಲ್ಲಿ ತಲ್ಲೀನರಾಗಿದ್ದರು. ಒಮ್ಮೆ ಸಂಜೆ ವೇಳೆಗೆ ಸೇಠ್‌ಜೀ ನೋಡುತ್ತಾರೆ- ಅವರ ಹಜಾರದಲ್ಲಿದ್ದ ಸುಂದರವಾದ ಗೋಡೆ ಗಡಿಯಾರ ನೆಲಕ್ಕೆ ಬಿದ್ದು ಪುಡಿಪುಡಿಯಾಗಿದೆ. ತಕ್ಷ ಣವೇ ನೌಕರನನ್ನು ಕರೆದು 'ಇದೇಕೆ ಹೀಗಾಯ್ತು?' ಎಂದು ಪ್ರಶ್ನಿಸಿದರು. ಆಗ ಪ್ಯಾರೇಲಾಲ್‌,- 'ಧಣಿಗಳೇ, ಗಡಿಯಾರವನ್ನು ಸ್ವಚ್ಛ ಮಾಡುತ್ತಿರುವಾಗ ಜಾರಿ ಕೆಳಗೆ ಬಿತ್ತು. ನನ್ನನ್ನು ಮನ್ನಿಸಿರಿ' ಎಂದು ವಿನಂತಿಸಿದರು. ಕ್ರುದ್ಧರಾದ ಸೇಠ್‌ಜೀ ಹೇಳಿದರು- 'ನನಗೆ ಅತ್ಯಂತ ಪ್ರಿಯವಾದ ಗಡಿಯಾರವಾಗಿತ್ತು. ನೀನು ಅದನ್ನು ಬೀಳಿಸಿ ತಪ್ಪು ಮಾಡಿದ್ದೀಯಾ'. ಸೇಠ್‌ಜೀಗೆ ಎಷ್ಟೊಂದು ಬೇಸರವಾಗಿತ್ತೆಂದರೆ ಆ ರಾತ್ರಿ ಇಡೀ ಅವರಿಗೆ ನಿದ್ದೆಯೇ ಬರಲಿಲ್ಲ. ಹಾಸಿಗೆಯ ಮೇಲೆ ಅತ್ತಿಂದಿತ್ತ ಹೊರಳಾಡುತ್ತಿದ್ದರು. ಅಕಸ್ಮಾತ್ತಾಗಿ ಅವರ ದೃಷ್ಟಿ ನೌಕರ ಪ್ಯಾರೇಲಾಲನ ಕಡೆ ಹೋಯಿತು. ಆತ ನಿಶ್ಚಿಂತೆಯಿಂದ ಗಾಢ ನಿದ್ರಾ ಮಗ್ನನಾಗಿದ್ದ. ಇಡೀ ರಾತ್ರಿ ನಿದ್ರಿಸದ ಸೇಠ್‌ಜೀ ಮರುದಿನ ಬೆಳಗ್ಗೆ ನೌಕರ ಪ್ಯಾರೇಲಾಲ್‌ನನ್ನು ಕರೆದು ಹೇಳಿದರು- 'ನಿನ್ನೆ ನನಗೆ ಗಡಿಯಾರ ಪುಡಿಯಾದ್ದರಿಂದ ಬೇಸರವಾಗಿತ್ತು. ಇಂದು ಬಹಳ ಪ್ರಸನ್ನನಾಗಿದ್ದೇನೆ. ನಿನ್ನ ಸೇವೆಗೆ ಪ್ರತಿಫಲವಾಗಿ ಆ ಗೋಡೆ ಗಡಿಯಾರವನ್ನು ಕೊಡಬೇಕೆಂದಿದ್ದೆ. ಆದರೆ ನಿನ್ನ ಕೈಯಿಂದಲೇ ಬಿದ್ದು ಪುಡಿಯಾಯ್ತಲ್ಲ. ಏನು ಮಾಡೋಣ? ತುಂಬಾ ಬೇಸರವಾಗುತ್ತಿದೆ'. ಇದನ್ನು ಹೇಳಿದ ಸೇಠ್‌ಜೀ ಆನಂದದಿಂದ ಮಲಗಿ ನಿದ್ರಿಸಿದರು. ಆದರೆ ಪ್ಯಾರೇಲಾಲ್‌ನಿಗೆ ಮಾತ್ರ ಆವತ್ತು ನಿದ್ರೆಯೇ ಸುಳಿಯಲಿಲ್ಲ. 'ಎಂಥ ಸದವಕಾಶ! ಎಷ್ಟೊಂದು ಸುಂದರ ಗಡಿಯಾರ! ನನ್ನ ತಪ್ಪಿಂದಾಗಿಯೇ ಸದವಕಾಶ ತಪ್ಪಿಹೋಯ್ತಲ್ಲ ಎಂದು ಪ್ಯಾರೇಲಾಲ್‌ಗೆ ತುಂಬ ಬೇಸರವಾಯಿತು.


ಒಂದು ವಸ್ತುವಿನ ಬಗ್ಗೆ ಸ್ನೇಹ-ಪ್ರೇಮವಿದ್ದಾಗ, ಅದು ಕಳೆದು ಹೋದರೆ ನಮಗೆ ಅಪಾರ ದುಃಖವುಂಟಾಗುತ್ತದೆ. ಈ ಥರದ ದುಃಖಕ್ಕೆ ಮೂಲ ಕಾರಣ ಆ ವಸ್ತುವಿನ ಬಗೆಗಿರುವ ಅಪರಿಮಿತ ಮೋಹ. ಇಂತಹ ಮೋಹವನ್ನು ಮರೆತಾಗ ನಮ್ಮಿಂದ ದುಃಖವೂ ದೂರವಾಗಲು ಸಾಧ್ಯ. ಮೋಹ ನಿವಾರಣೆಗೆÜ ಸುಲಭೋಪಾಯವೆಂದರೆ ಆ ಮೋಹದ ತ್ಯಾಗವೇ ಸರಿ. ಸೇಠ್‌ಜಿ ಆ ವಸ್ತುವಿನ ಮೇಲಿದ್ದ ಮೋಹವನ್ನು ತ್ಯಜಿಸುವ ಮೂಲಕ ತನ್ನೊಳಗೆ ಶಾಂತಿಯನ್ನು ಸ್ಥಾಪಿಸಿಕೊಂಡರು. ಅದೇ ಪ್ಯಾರೇಲಾಲ್‌ ತನ್ನದಲ್ಲದ ವಸ್ತುವಿನ ಮೇಲೆ ಮೋಹವನ್ನು ಬೆಳೆಸಿಕೊಂಡು ನಿದ್ದೆಯಿಲ್ಲದ ಒದ್ದಾಡಿದ. ಇದರಿಂದ ನಾವು ಕಲಿಯಬಹುದಾದ ಪಾಠ ತುಂಬ ದೊಡ್ಡದು ಅಲ್ಲವೇ?

ಕತ್ತಲೆಯಿಂದಾಗಿಯೇ ಬೆಳಕಿಗೆ ಅರ್ಥ

*ಕತ್ತಲೆಯಿಂದಾಗಿಯೇ ಬೆಳಕಿಗೆ ಅರ್ಥ*
 [ಸದ್ಗುರು ಜಗ್ಗಿ ವಾಸುದೇವ್ ]


ನಾವು ವಾಸ್ತವದಲ್ಲಿ ಎಲ್ಲಿದ್ದೆವೆಯೋ ಅದಕ್ಕೆ ಬದ್ಧರಾಗಿರಬೇಕು . ನಕಾರಾತ್ಮಕತೆಯ [negetive] ಆಯಾಮವನ್ನೇ ಯೋಚಿಸದ ಕೇವಲ ಸಕಾರಾತ್ಮಕ[ positive] ಚಿಂತನೆಯು ಜನರಲ್ಲಿ ಅನೇಕ ಸಾಧ್ಯತೆಗಳನ್ನು ನಾಶ ಪಡಿಸಿದೆ . ಜೀವನವನ್ನು ಅದರ ಯಥಾ ಸ್ಥಿತಿಯಲ್ಲಿ ನೋಡಲು ಇಚ್ಚಿಸದಿದ್ದಲ್ಲಿ ಮುಂದೆ ಹೆಜ್ಜೆ ಇಡಲಾಗದು , ಏನೂ ಮಾಡಲಾಗದು .

*ಪಾಸಿಟಿವ್ ಥಿಂಕಿಂಗ್ ಎನ್ನುವುದು ಒಂದು ದೊಡ್ಡ ರೋಗವಾಗಿಬಿಟ್ಟಿದೆ . ಸದಾ ಸಕಾರಾತ್ಮಕವಾಗಿಯೇ ಏಕೆ   ಇರಬೇಕು ? ಈ ಸಮಸ್ತ ಅಸ್ತಿತ್ವವು ಸದಾ ದ್ವಂದ್ವಗಳ ನಡುವೆ ಸಂಭವಿಸುತ್ತದೆ . ಅವಿವೇಕದಿಂದ ಕೂಡಿದ ಮನಸ್ಸುಗಳು ಮಾತ್ರವೇ ಎರಡರಲ್ಲಿ ಒಂದನ್ನು ಇಷ್ಟ ಪಡುತ್ತವೆ .*


*ನೀವು ಸಕಾರಾತ್ಮಕ ಹಾಗೂ ನಕಾರಾತ್ಮಕ ವೆಂದು ಯಾವುದಕ್ಕೆ ಅನ್ವಯಿಸಿ ಯೋಚಿಸುತ್ತಿರುವಿರೋ ಅದು ಪುರುಷ ಹಾಗೂ ಸ್ತ್ರೀ , ಬೆಳಕು ಮತ್ತು ಕತ್ತಲು  , ಹಗಲು ಮತ್ತು ರಾತ್ರಿಗಳು , ಸುಖ ದುಃಖಗಳು ಇಂತಹ ದ್ವಂದ್ವಗಳಿಂದ ಕೂಡಿವೆ  ಇವುಗಳಿಲ್ಲದ ಜೀವನವು ಹೇಗೆ ತಾನೇ ಸಾಧ್ಯ ? ಪ್ರಪಂಚದಲ್ಲಿ ವಾಸ್ತವ ಜ್ಞಾನವಿಲ್ಲದ ಮನಸ್ಸು-ಬುದ್ಧಿಗಳು ಸದಾ ಸಕಾರಾತ್ಮಕ ಚಿಂತನೆಗಳ ಕುರಿತು ಚರ್ಚಿಸುತ್ತವೆ .*


*ವಿದ್ಯುತ್ ಶಕ್ತಿ ಯಲ್ಲಿ ಋಣಾತ್ಮಕ ಮತ್ತು ಧನಾತ್ಮಕ ಗುಣಗಳಿರುವುದರಿಂದಲೇ  ಬೆಳಕು ಮೂಡಿ  ಬರುತ್ತದೆ . ಧನಾತ್ಮಕ ಫಲಿತಾಂಶಗಳನ್ನು ಬಯಸುವುದರಿಂದ ನಾವು ಋಣಾತ್ಮಕತೆಯನ್ನು ಗಮನಿಸುವುದಿಲ್ಲ , ಅಲ್ಲವೇ ? ಪುರುಷ ಮತ್ತು ಸ್ತ್ರೀ ಇಬ್ಬರಿಂದಲೂ  ನಮಗೆ ಸಂತೋಷ ವುಂಟಾಗುತ್ತಿದ್ದ್ದರೆ ಆಗ ನಾವು ಅದು ಸ್ತ್ರೀಯಿಂದಲೋ ಪುರುಷನಿಂದಲೋ ಎಂಬುದರ ಕುರಿತು ಯೋಚಿಸುವುದಿಲ್ಲ ಆದರೆ ವಿವಾಹವಾಗಿ ಸಾಕಷ್ಟು ಸಮಯವಾದ ನಂತರ ನಕಾರಾತ್ಮಕ ಫಲಿತಾಂಶಗಳನ್ನು ಸೃಷ್ಟಿಸುತ್ತಿದ್ದಾರೆ , ಆಗ ಅವರು ನಮಗೆ ಸಮಸ್ಯೆ ಯಾಗಿರುವರೆಂದು ಭಾವಿಸುತ್ತೇವೆ . ಹೀಗೆ ಇಲ್ಲಿ ಸಕಾರಾತ್ಮಕತೆ ಅಥವಾ ನಕಾರಾತ್ಮಕತೆ ಎಂಬುದು ಸಮಸ್ಯೆ ಅಲ್ಲ ಆದರೆ ಕೊನೆಯಲ್ಲಿ ನೀವು ಸೃಷ್ಟಿಸುವ ಫಲಿತಾಂಶವೇ ಮುಖ್ಯವಾಗುತ್ತದೆ*

 *ನಕಾರಾತ್ಮಕ ಸಂಗತಿಗಳನ್ನು ಕಡೆಗಣಿಸಿದರೆ ಎಲ್ಲವೂ ಸರಿ ಹೋಗುತ್ತದೆ ಎಂದು ನೀವು ಯೋಚಿಸಬಹುದು . ಅದಕ್ಕೆ ಕೆಲವು ಮಾನಸಿಕ ಹಾಗೂ ಸಾಮಾಜಿಕ ಪ್ರಸ್ತುತತೆ  ಇರಬಹುದು ಆದರೆ ಅಸ್ತಿತ್ವದ ಪ್ರಸ್ತುತತೆ ಎಂದಿಗೂ ಇರುವುದಿಲ್ಲ .*

ಜೀವನದಲ್ಲಿ ಇದು ಒಳ್ಳೆಯದು ಇದು ಕೆಟ್ಟದ್ದು ಎಂಬುದರ ಪ್ರಶ್ನೆಯಲ್ಲ . ನಮ್ಮ ಜೀವನಕ್ಕೆ ಯಾವುದು ಅಗತ್ಯ ಯಾವುದು ಅಗತ್ಯವಲ್ಲ ಎಂಬುದು ಮುಖ್ಯವಾಗುತ್ತದೆ . ನಿಮ್ಮಲ್ಲಿ ಮಾನವೀಯತೆ ಪೂರ್ಣತಃ ವಿಕಾಸವಾಗಿದ್ದರೆ ಇದು ಒಳ್ಳೆಯದು ಇದು ಕೆಟ್ಟದ್ದು ಎಂದು ಬೇರೆಯವರು ನಿಮಗೆ ಹೇಳಿಕೊಡಬೇಕೆ ?ಸಹಜವಾಗಿಯೇ ನೀವು ಸಮಾಜಕ್ಕೆ ಅಗತ್ಯವಾದುದನ್ನು ಮಾಡುವಿರಿ . ನಿಮ್ಮೊಳಗಿನ ಮಾನವತ್ವದ ಜೀವಂತಿಕೆಯಲ್ಲಿ ಬದುಕು ನಡೆಸಿದರೆ ಸಕಾರಾತ್ಮಕ ನಕಾರಾತ್ಮಕ ಗಳ ಕುರಿತು ಯೋಚನೆಯೇ ಇರುವುದಿಲ್ಲ .  

ಆಂತರಿಕ ಸ್ವಾತಂತ್ರ್ಯ ಗಳಿಸುವುದು ಹೇಗೆ

*ಆಂತರಿಕ ಸ್ವಾತಂತ್ರ್ಯ ಗಳಿಸುವುದು ಹೇಗೆ?*



ಆಂತರಿಕ ಸ್ವಾತಂತ್ರ್ಯ ಮತ್ತು ಪ್ರಶಾಂತ ಮನಸ್ಸು ಇವು ನಾವು ಗಳಿಸಬೇಕಾದ ಅಮೂಲ್ಯ ಆಧ್ಯಾತ್ಮಿಕ ಸಂಪದ. ಇವುಗಳನ್ನು ಗಳಿಸಿದವರೇ ಸಂತರು, ಶರಣರು. ಎಲ್ಲಿ ಸ್ವಾತಂತ್ರ್ಯವಿದೆ, ಶಾಂತಿ ಇದೆ, ಅಲ್ಲೇ ಸಂತಸವಿದೆ. ಅವೆರಡರಲ್ಲಿ ಅವಿನಾಭಾವ ಸಂಬಂಧವಿದೆ. ಒಂದನ್ನು ಬಿಟ್ಟು ಇನ್ನೊಂದು ಇರುವುದೇ ಇಲ್ಲ. ಸ್ವಾತಂತ್ರ್ಯವಿರುವಲ್ಲಿಯೇ ಶಾಂತಿ ಇದೆ. ಶಾಂತಿ ಇರುವಲ್ಲಿಯೇ ಸ್ವಾತಂತ್ರ್ಯವಿದೆ. *ಬಂಧನ ಇರುವಲ್ಲಿ ಶಾಂತಿಯಾಗಲಿ, ಅಶಾಂತಿ ಇರುವಲ್ಲಿ ಸ್ವಾತಂತ್ರ್ಯವಾಗಲಿ, ಮುಕ್ತಿಯಾಗಲಿ ಇರಲು ಸಾಧ್ಯವಿಲ್ಲ.*

ಬಾಹ್ಯ ಬಂಧನದಿಂದ ಮುಕ್ತಿ ಪಡೆಯುವುದು ಸುಲಭ. ಒಬ್ಬ ವ್ಯಕ್ತಿಯನ್ನು ಹಗ್ಗದಿಂದ ಬಂಧಿಸಿದ್ದರೆ, ಯಾರಾದರೂ ಬಂದು ಬಿಡಿಸಬಹುದು. ಆದರೆ ನಮ್ಮೊಳಗಿರುವ ಬಯಕೆಗಳ ಬಂಧನದಿಂದ ಬಿಡುಗಡೆ ಹೊಂದುವುದು ಅಷ್ಟು ಸುಲಭವಲ್ಲ. ಇದಕ್ಕೆ ಹೊರಗಿನವರ ಸಹಾಯ ದೊರೆಯದು. ಇದನ್ನು ನಾವೇ ಬಿಡಿಸಿಕೊಳ್ಳಬೇಕು. ಆದರೆ ನಮ್ಮೊಳಗಿರುವ ಈ ಬಯಕೆಗಳು ಒಂದೇ, ಎರಡೇ? ಅಸಂಖ್ಯ. ಕಾಮ ಕ್ರೋಧಗಳಲ್ಲಿಯೇ ಮುಳುಗಿರುವ ಜನರು ನೂರಾರು ಆಶೆಯ ಹಗ್ಗದಿಂದ ಬಂಧಿಸಲ್ಪಟ್ಟವರಾಗಿ ತಮ್ಮ ಆಶೆಗಳನ್ನು ಪೂರೈಸುವುದಕ್ಕಾಗಿ ಅನ್ಯಾಯದ ಮಾರ್ಗದಿಂದ ಸಂಪತ್ತನ್ನು ಗಳಿಸಲು ಹೋಗುತ್ತಾರೆ.


ನಮ್ಮ ಕಣ್ಣಿಗೆ ಕಾಣದ, ಕೈಗೆ ಸಿಗದ ಈ ಆಶಾಪಾಶಗಳ ಬಂಧನದಿಂದ ಬಿಡುಗಡೆ ಹೊಂದಿದಾಗ ಮಾತ್ರ ಮನುಷ್ಯನು ಪರಮಶಾಂತಿಯನ್ನು ಪರಮಾನಂದವನ್ನು ಅನುಭವಿಸುತ್ತಾನೆ. ಪ್ರಶಾಂತ ಪರಿಸರದಲ್ಲಿ, ಸುಖಾಸನದಲ್ಲಿ ಅತ್ಯಾಶ್ರಮಿಯಾಗಿ ಕುಳಿತು ಎಲ್ಲ ಇಂದ್ರಿಯಗಳನ್ನು ನಿರೋಧಿಸಿ-ನಿಗ್ರಹಿಸಿ, ಸದ್ಗುರುಗಳನ್ನು ಭಕ್ತಿಯಿಂದ ವಂದಿಸಿ, ಹೃದಯ ಕಮಲದಲ್ಲಿರುವ ಪರಿಶುದ್ಧವೂ, ಪ್ರಶಾಂತವೂ ಆದ ಪರವಸ್ತು, ಪರಮಾತ್ಮನ ಚಿಂತನೆ, ಧ್ಯಾನ ಸಾಧಕನು ಮಾಡಬೇಕು. ಕಣ್ಮನಗಳನ್ನು ಅರಳಿಸುವ ಪವಿತ್ರ ಸ್ಥಳದಲ್ಲಿ ಸುಖಾಸನದಲ್ಲಿ ಬೆನ್ನು ಕುತ್ತಿಗೆ ನೇರವಾಗಿಟ್ಟುಕೊಂಡು ಕಣ್ಮುಚ್ಚಿ ಹೃನ್ಮಂದಿರದಲ್ಲಿರುವ ಪರಿಶುದ್ಧ ಪ್ರಶಾಂತ ಪರವಸ್ತು ಪರಮಾತ್ಮನ ಸ್ಮರಣೆಯನ್ನು ಮಾಡುವ ಆ ಧ್ಯಾನಯೋಗವು ಅನನ್ಯ ಅದ್ವಿತೀಯ!'ಅತ್ಯಾಶ್ರಮಿ' ಎಂದರೆ ಎಲ್ಲ ಆಶ್ರಮಗಳ ಭಾವಬಂಧನ ಮೀರಿ ನಿಲ್ಲುವುದು.


ನಮ್ಮ ಮನಸ್ಸು ಯಾವಾಲೂ ಯಾವುದಾದರೂ ಒಂದಕ್ಕೆ ಅಂಟಿಕೊಂಡಿರುತ್ತದೆ.ಆದರೆ ಚಂಚಲವಾದ ಈ ಮನಸ್ಸನ್ನು ಒಂದೆಡೆ ಸ್ಥಿರವಾಗಿ ನಿಲ್ಲಿಸುವುದೆಂದರೆ ಅಷ್ಟು ಸುಲಭವಾದುದಲ್ಲ.

 ಒಬ್ಬ ಸಿರಿವಂತನು ಒಂದು ನಾಯಿಯನ್ನು ಸಾಕಿದ್ದ. ತನ್ನ ಜೊತೆಗೆ ಅದಕ್ಕೆ ಸ್ನಾನ, ಊಟ, ತಿಂಡಿ ಎಲ್ಲವನ್ನೂ ಮಾಡಿಸುತ್ತಿದ್ದ. ಒಂದು ದಿನ ಈ ನಾಯಿಯು ಬೀದಿಯ ನಾಲ್ಕು ನಾಯಿಗಳ ಜೊತೆ ಸೇರಿಕೊಂಡು ವಿಹಾರಕ್ಕೆ ಹೋಯಿತು. ಅದನ್ನು ಸ್ಮಶಾನಕ್ಕೆ ಕರೆದುಕೊಂಡು ಹೋಗಿ ನೋಡು ನಾವಿಲ್ಲಿ ಎಂಥೆಂಥ ಆಹಾರ ಪದಾರ್ಥಗಳನ್ನು ಸಂಗ್ರಹಿಸಿದ್ದೇವೆ? ಎಂದು ಕೊಳೆತು ನಾರುವ ಎಲುಬಿನ ರಾಶಿಯನ್ನು ಅವು ತೋರಿಸಿದವು. 'ನಮ್ಮ ಯಜಮಾನ ಒಂದು ದಿನವೂ ನನಗಿದನ್ನು ತೋರಿಸಲಿಲ್ಲ!' ಎಂದಿತು ಸಿರಿವಂತ ನಾಯಿ. ಹುಳುಗಳಿಂದ ಮೆತ್ತಿದ, ಒಣಗಿ ಹೋಗಿದ್ದ, ದುರ್ಗಂಧದಿಂದ ಕೂಡಿದ್ದ ಆ ಎಲುವಿನ ರುಚಿಯನ್ನು ಈ ಸಿರಿವಂತನ ನಾಯಿಯು ನೋಡಿ ಮನೆಗೆ ಬಂದು ಮಲಗಿತು. ಕನಸಿನಲ್ಲಿ ಆ ಎಲುವಿನ ರಾಶಿಯನ್ನೇ ಕಂಡು ಖುಷಿ ಪಟ್ಟಿತು. ಬೆಳಿಗ್ಗೆ ಎದ್ದಾಗ ಸಿರಿವಂತನು ಆ ನಾಯಿಗೆ ಸ್ನಾನ ಮಾಡಿಸಿ ಒಂದು ತಟ್ಟೆಯಲ್ಲಿ ಹಾಲನ್ನ ತಂದಿಟ್ಟ. ನಾಯಿಯ ಮನಸ್ಸೆಲ್ಲ ಸ್ಮಶಾನದಲ್ಲಿ ಕೊಳೆತು ನಾರುವ ಎಲುವಿನಲ್ಲಿದ್ದಾಗ ಈ ಹಾಲನ್ನ ಹೇಗೆ ರುಚಿಸುತ್ತದೆ? ಇಂಥ ನಮ್ಮ ನಾಯಿ ಮನಸ್ಸನ್ನು ಪರವಸ್ತು ಪರಮಾತ್ಮನ ನೆನಹಿನಲ್ಲಿ ಸ್ಥಿರಗೊಳಿಸುವುದೇ ದೇವಧ್ಯಾನ!

ಶ್ರೀ ಸಿದ್ದೇಶ್ವರ ಸ್ವಾಮೀಜಿ
 ಆಧಾರ : ಕೈವಲ್ಯ ಕುಸುಮ.

*ಆತ್ಮಶೋಧನೆಯೇ ಉತ್ತಮ ಗೆಳೆಯ*

*ಆತ್ಮಶೋಧನೆಯೇ ಉತ್ತಮ ಗೆಳೆಯ*


ಆತ್ಮಶೋಧನೆಯೇ ಉತ್ತಮ ಗೆಳೆಯ... ನಮ್ಮನ್ನು ನಾವು ರೂಪಿಸಿಕೊಳ್ಳುವ ದಾರಿ ಯಾವುದು? ನಮ್ಮ ಬಗೆಗಿನ ಒಂದು ಟೀಕೆ, ವಿಮರ್ಶೆ, ಭಿನ್ನ ಅಭಿಪ್ರಾಯ ಯಾವುದನ್ನೂ ಸಹಿಸಿಕೊಳ್ಳದ ಮನಸ್ಥಿತಿಗೆ ತಲುಪಿರುವ ನಮ್ಮನ್ನು ಅವಲೋಕಿಸಿಕೊಳ್ಳುವ ವಿಧಾನ ಯಾವುದು? ಇದು ಬಹಳ ಮುಖ್ಯವಾದ ಸಂಗತಿ ಅನಿಸುತ್ತದೆ.

 ನೀವು ಯಾರೊಬ್ಬರ ಕುರಿತು ಇಂದು ನೇತ್ಯಾತ್ಮಕವಾದ ಯಾವುದೇ ಅಭಿಪ್ರಾಯವನ್ನೂ ಹೇಳುವಂತಿಲ್ಲ. ಅವರು ತಪ್ಪು ಮಾಡಿದಾಗಲೂ ಕೂಡಾ. ಇಂತಹ ಸಂದಿಗ್ಧ ಎಲ್ಲ ಕಡೆ ಎದುರಾಗುತ್ತಿದೆ. ಅದು ಕುಟುಂಬವಾಗಿರಬಹುದು, ರಾಜಕೀಯ ಪಕ್ಷವಾಗಿರಬಹುದು, ಸಂಘ ಸಂಸ್ಥೆಯಾಗಿರಬಹುದು, ಧಾರ್ಮಿಕ ಪೀಠಗಳಾಗಿರಬಹುದು. ಎಲ್ಲ ಕಡೆ ಈ ಸಮಸ್ಯೆ ಇದೆ. ಇಂತಹ ವೇಳೆ ಆತ್ಮಶೋಧನೆ ನೆರವಿಗೆ ಬರುವ ಉತ್ತಮ ಗೆಳೆಯ. ಗಾಂಧೀಜಿ ಆತ್ಮಶೋಧನೆಯಿಂದ ಹಲವು ಸರಳ ಸತ್ಯ ಕಂಡುಕೊಂಡಿದ್ದರು. ಅವರ ಸರಳ ಜೀವನ, ಧಾರ್ಮಿಕತೆಯೇ ತಳಹದಿ. ಇದೇ ಕಾರಣಕ್ಕೆ ಇರಬೇಕು, ಅವರ ಸತ್ಯ ಶೋಧನೆಯ ಮಾರ್ಗ ಬಹಳಷ್ಟು ಸಾಧಕರಿಗೆ ಮಾರ್ಗದರ್ಶಿ. ಈಗ ಗಾಂಧೀಜಿ ಚಿಂತನೆಯ ನೆಲೆ ಕುರಿತು ಮಾತನಾಡುವುದು ಅವಾಸ್ತವ ಅನ್ನಿಸಬಹುದು. ಆದರೆ, ಈ ಮನುಕುಲದ ನಾಗಾಲೋಟ, ಎಣೆಯಿಲ್ಲದ ಆಕಾಂಕ್ಷೆಗಳು ಒಂದು ಸಂಕೀರ್ಣ ಸ್ಥಿತಿ ನಿರ್ಮಿಸಿಬಿಟ್ಟಿವೆ. ಆ ದೃಷ್ಟಿಯಿಂದ ನೋಡಿದಾಗ ವ್ಯಕ್ತಿಗೆ ಮಾತ್ರವಲ್ಲ, ಈ ವ್ಯವಸ್ಥೆಗೂ ಒಂದು ಆತ್ಮಶೋಧನೆಯ, ಸತ್ಯ ಶೋಧನೆಯ, ಸ್ವಯಂ ಅವಲೋಕನದ ಅಗತ್ಯ ಇದೆ ಎಂದು ಅನ್ನಿಸದಿರದು.

ಒಂದು ಸಮಾಜ 'ವ್ಯಕ್ತಿ'ಯನ್ನು ತನ್ನಿಷ್ಟದಂತೆ ಬದುಕಲು ಬಿಡುವುದಿಲ್ಲ. ಅಥವಾ ಸಮಾಜದ ನಿರೀಕ್ಷೆಯಂತೆಯೇ ಎಲ್ಲ ವ್ಯಕ್ತಿಗಳು ಬದುಕುತ್ತಾರೆಂದು ಭಾವಿಸುವಂತೆಯೂ ಇಲ್ಲ. ಸಮಾಜದ ಪ್ರಭಾವನ್ನೂ ಮೀರಿ ಸ್ವಯಂ ನೆಲೆಯಲ್ಲಿ ನಿಂತು ಬದುಕುವವರು, ಸ್ವಯಂ ಚಿಂತನೆಯ ಪಸೆಯೇ ಇಲ್ಲದೇ ಸಮಾಜ ಹೇರುವ ಪ್ರಭಾವಳಿ, ಮೌಲ್ಯಗಳ ಹಾದಿಯಲ್ಲಿ ಸುಮ್ಮನೆ ಈಜಿಕೊಂಡು ಹೋಗುವವರು, ಇಬ್ಬರನ್ನೂ ನಾವು ಕಾಣುತ್ತೇವೆ.

 ಒಬ್ಬ ವ್ಯಕ್ತಿ ನಿಜವಾದ ಆತ್ಮಶೋಧನೆಗಿಳಿದಾಗ ತನ್ನ ಬಗೆಗೆ ಯಾರೊಬ್ಬರೂ ಹೇಳಲಾರದ ಸತ್ಯಗಳು, ತನ್ನ ಬಗೆಗೆ ಹೇಳಿದ ಮಿಥ್ಯೆಗಳು, ತನ್ನ ವ್ಯಕ್ತಿತ್ವದ ಬಗ್ಗೆ ಇರುವ ಕಟ್ಟುಕತೆಗಳು ಎಲ್ಲದರ ಪರದೆ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಇದು ಸಹಜವಾಗಿ ಅವನ ವ್ಯಕ್ತಿತ್ವದ ನಿಜವಾದ ಮುಖವನ್ನೂ ಪರಿಚಯಿಸುತ್ತಾ ಹೋಗುತ್ತದೆ. ಆಗ ಅವನಿಗೆ ನಾನೆಲ್ಲಿದ್ದೇನೆ, ಏನು ಮಾಡುತ್ತಿದ್ದೇನೆ, ಏನು ಮಾಡಬೇಕಿತ್ತು ಎಂಬ ಅರಿವಿನ ದಾರಿ ಗೋಚರಿಸುತ್ತಾ ಹೋಗುತ್ತದೆ. ಈ ಅರಿವಿನ ದಾರಿ ವ್ಯಕ್ತಿಯಾಗಿ ಅವನನ್ನು ಸುಧಾರಿಸುವುದಲ್ಲದೇ, ಸಮಾಜದಲ್ಲಿ ಆತನನ್ನು ಸರಿಯಾಗಿ ಗುರುತಿಸಿಕೊಳ್ಳಲು, ಸಮೀಕರಿಸಿಕೊಳ್ಳಲು ಪ್ರೇರೇಪಿಸುತ್ತದೆ. ಸಮಾಜದಲ್ಲಿ ಇಂತಹ ಉತ್ತಮ ವ್ಯಕ್ತಿಗಳ ಪಾಲ್ಗೊಳ್ಳುವಿಕೆ ಒಂದು ಸಮೂಹ ಶಕ್ತಿಯನ್ನು ಸಂಚಯಿಸಲು, ಅದು ಚಾಲಕ ಶಕ್ತಿಯಾಗಿ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ. ನಾವು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಮಾಡುವ ಆತ್ಮಾವಲೋಕನ ಈ ಸಮಾಜವನ್ನ ಮುನ್ನಡೆಸುವ ಆತ್ಮಾವಲೋಕನವೂ ಆಗಿರುತ್ತದೆ.


 ಆದರೆ, ನಾವಾಗಿಯೇ ಆತ್ಮಾವಲೋಕನಕ್ಕೆ ಒಡ್ಡಿಕೊಳ್ಳುವುದು ಕಷ್ಟ. ಅಹಂನ ಉತ್ತುಂಗದಲ್ಲಿರುವ ಮನಸ್ಸಿಗೆ ಈ ಪ್ರವೃತ್ತಿ ಒಗ್ಗುವುದಿಲ್ಲ. ಹಾಗಾಗಿ, ಯಾರಾದರೂ ನಿಮ್ಮನ್ನು ಟೀಕೆ ಟಿಪ್ಪಣಿ ಮಾಡಿದಾಗ ಅದರ ಬಗ್ಗೆ ಒಂದಿಷ್ಟು ಆಳವಾಗಿ ಯೋಚಿಸಿ. ಅವರು ಹೇಳಿದ್ದು ತಪ್ಪಾಗಿರಬಹುದು. ಆ ನೆಪದಲ್ಲಿ ನಿಮ್ಮನ್ನು ನೀವು ಕಂಡು ಕೊಳ್ಳಲು ನಡೆಸುವ ಅವಲೋಕನ ನೀವೇ ಅರಿಯದ ನಿಮ್ಮ ವ್ಯಕ್ತಿತ್ವ ಪರಿಚಯಿಸುತ್ತದೆ. ಅದು ನಿಮ್ಮ ವ್ಯಕ್ತಿತ್ವ ಬೆಳಗಿಸುವ ಸನ್ಮಾರ್ಗವೂ ಆಗಿರುತ್ತದೆ.

-ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

just open your eyes

*just open your eyes*
[osho]

I know that many things I am saying are almost nonsense to because to see them you will have to attain different eyes, you will have to clarify your being; to see them you will have to pacify your turmoil within. *I know you cannot see the green that I am seeing in the trees.* Your green is bound to be very dusty because your eyes are full of dust.


It happened once, that a man was staying with a friend at somebody's house. The host and the guest were standing near the window -- the window was closed -- and in the neighbor's house, clothes were hanging out to be dried.
The host said, 'These people are very dirty. Look at their clothes.'
The man looked, he came closer to the window and he said, 'Those clothes are not dirty.
Your window glass is covered with dust.'
They opened the windows and it was so. Those clothes were not dirty. *Life is tremendously beautiful.It is Divine.* When we say 'Life is God' we simply say that life is so tremendously beautiful that one feels a reverence for it. That's all. Life is so tremendously beautiful that one feels like worshipping it. That's all we mean when we say 'Life is God.' When we say 'Life is God' we only mean, *'Don't see that life is ordinary. It is extraordinary. There is tremendous potentiality.  Just open your eyes.'*

🍁🌿🍁🌿🍁🌿🍁🌿🍁

ಈ ಹಸಿರು ಸಿರಿಯಲಿ ಮನಸು ಮೆರೆಯಲಿ

ಸಂಗೀತ: ಸಿ.ಅಶ್ವಥ್
ಗಾಯನ: ರತ್ನಮಾಲ ಪ್ರಕಾಶ್

*ಈ ಹಸಿರು ಸಿರಿಯಲಿ ಮನಸು ಮೆರೆಯಲಿ*
*ನವಿಲೇ...*
*ನಿನ್ನಾಂಗೆಯೆ ಕುಣಿವೆ*
*ನಿನ್ನಂತೆಯೆ ನಲಿವೆ*
*ನವಿಲೇ.. ನವಿಲೆ*

ಈ ನೆಲದ ನೆಲೆಯಲಿ ಮನಸು ಕುಣಿಯಲಿ
ನವಿಲೇ...
ನೀನೇನೆ ನಾನಾಗುವೆ
ಗೆಲುವಾಗಿಯೆ ಒಲಿವೆ
ನವಿಲೇ.. ನವಿಲೆ

ತಂಗಾಳಿ ಬೀಸಿ ಬರದೆ
ಸೌಗಂಧಾ ಸುಖವ ತರದೇ
ಚಿಗುರೆಲೆಯು ಎಲ್ಲಿ ಮರವೆ
ನಿನ್ನ ಗೆಳತಿ ನಾನು ಮೊರೆವೆ
ತಂಗಾಳಿ ಬೀಸಿ ಬರದೇ
ಸೌಗಂಧಾ ಸುಖವ ತರದೇ
ಚಿಗುರೆಲೆಯು ಎಲ್ಲಿ ಮರವೇ
ನಿನ್ನ ಗೆಳತಿ ನಾನು ಮೊರೆವೆ
ಮತ್ಯಾಕೆ ಮೌನ ಗಿಳಿಯೇ
ಸಿಟ್ಯಾಕೆ ಎಂದು ತಿಳಿಯೆ
ಹೊತ್ಯಾಕೆ ಹೇಳು ಅಳಿಲೇ
ಗುಟ್ಯಾಕೆ ನನ್ನ ಬಳಿಯೆ
ಹೇಳೀರೆ ನಿಮ್ಮನ್ನ ನಾ ಹ್ಯಾಂಗ ಮರೆಯಲೇ ತೊಳೆಯಲೇ

ಈ ಹಸಿರು ಸಿರಿಯಲಿ ಮನಸು ಮೆರೆಯಲಿ
ನವಿಲೇ...
ನಿನ್ನಾಂಗೆಯೆ ಕುಣಿವೆ
ನಿನ್ನಂತೆಯೆ ನಲಿವೆ
ನವಿಲೇ ನವಿಲೆ

ಏನಂಥಾ ಮುನಿಸು ಗಿರಿಯೆ
ಮಾತನ್ನ ಮರೆತೆ ಸರಿಯೇ
ಜೇನಂಥಾ ಪ್ರೀತಿ ಸುರಿದೇ
ನನ್ನ ಜೀವ ಜೀವ ನದಿಯೇ
ಏನಂಥಾ ಮುನಿಸು ಗಿರಿಯೆ
ಮಾತನ್ನ ಮರೆತೆ ಸರಿಯೇ
ಜೇನಂಥಾ ಪ್ರೀತಿ ಸುರಿದೇ
ನನ್ನ ಜೀವ ಜೀವ ನದಿಯೇ
ಸುರಲೋಕಾ ಇದನು ಬಿಡಲೇ
ತವರೀಗೆ ಸಾಟಿ ಇದೆಯೇ
ಚಿರಕಾಲ ಇಲ್ಲೆ ಇರಲೇ
ನಗುತಿರು ನೀಲಿ ಮುಗಿಲೇ
ನಾನಿನ್ನು ನಿಮ್ಮಿಂದ ಬಹುದೂರ ಸಾಗುವೇ ಹರಸಿರೇ

ಈ ಹಸಿರು ಸಿರಿಯಲಿ ಮನಸು ಮೆರೆಯಲಿ
ನವಿಲೇ...
ನಿನ್ನಾಂಗೆಯೆ ಕುಣಿವೆ
ನಿನ್ನಂತೆಯೆ ನಲಿವೆ
ನವಿಲೇ ನವಿಲೆ
ನವಿಲೇ ನವಿಲೆ
ನವಿಲೇ ನವಿಲೆ


http://f13.wapka-files.com/download/9/8/3/1989212_983de3650d1091da261bab0b.mp3/ff97f6cc5ff26c4d91fe/EeHasiruSiriyaliManasu.mp3

ವಚನಗಳು

 http://lingayatreligion.com/K/VachanaSahitya/BasavaVachana.htm


http://lingayatreligion.com/K/VachanaSahitya/AkkamahadeviVacana.htm


http://vitandavada.blogspot.in/2013/04/blog-post.html?m=1

 http://sarvagnana-vachanagalu.blogspot.in/?m=1

https://honalu.net/tag/ವಚನಗಳು/

16 Famous quotes by Dr. Babasaheb Ambedkar you ought to know

*16 Famous quotes by Dr. Babasaheb Ambedkar you ought to know*


1. “They cannot make history who forget history”.

2. “Be Educated, Be Organised and Be Agitated”


3. “I like the religion that teaches liberty, equality and fraternity”

4. “Life should be great rather than long”.

5. “If I find the constitution being misused, I shall be the first to burn it.”

6. “Cultivation of mind should be the ultimate aim of human existence”.


7. “If you believe in living a respectable life, you believe in self-help which is the best help”.

8. “We must stand on our own feet and fight as best as we can for our rights. So carry on your agitation and organize your forces. Power and prestige will come to you through struggle”.

9. “The history of India is nothing but a history of a mortal conflict between Buddhism and Brahminism”.

10. “I measure the progress of a community by the degree of progress which women have achieved.”

11. “Men are mortal. So are ideas. An idea needs propagation as much as a plant needs watering. Otherwise both will wither and die.”



12. “Every man who repeats the dogma of Mill that one country is no fit to rule another country must admit that one class is not fit to rule another class.”


13. “The relationship between husband and wife should be one of closest friends.”



14. “Political tyranny is nothing compared to the social tyranny and a reformer who defies society is a more courageous man than a politician who defies Government.”



15. “A great man is different from an eminent one in that he is ready to be the servant of the society.”



16. “Law and order are the medicine of the body politic and when the body politic gets sick, medicine must be administered.”
*ಒಂದು ಸಣ್ಣ ಕಥೆ*: ( ಓದಿ ಚೆನ್ನಾಗಿದೆ )



ಒಬ್ಬ ರಾಜ.. ಅವನ ಸೇನೆಯಲ್ಲಿ ನೂರಾರು ಕುದುರೆ, ಒಂಟೆ, ಆನೆ, ಕಾಲಾಳುಗಳು..

ರಾಜನಿಗೆ ಒಂದು ಆನೆಯ ಮೇಲೆ ಬಲು ಪ್ರೀತಿ. ಪ್ರತಿ ಯುದ್ಧವೇ ಆಗಲಿ ಮತ್ತೇನೇ ಆಗಲಿ ತಾಳ್ಮೆಯಿಂದ ಶ್ರದ್ಧೆಯಿಂದ ತನ್ನ ಕೆಲಸ ಮಾಡಿಕೊಂಡು ಬರುತ್ತಾ ಇತ್ತು..

ಹೀಗೆ ಇರುವಾಗ ಆನೆಗೆ ಕೂಡ ವಯಸ್ಸಾಗ್ತಾ ಬಂತು.. ಕೆಲ್ಸ ಮಾಡೋ ಕ್ಷಮತೆ ಕುಂದಿದಂತೆ ಕಾಣ ತೊಡಗಿತು.

ರಾಜ ಇನ್ನು ಈ ಆನೆಗೆ ತೊಂದರೆ ಕೊಡುವುದು ಬೇಡ ಎಂದು ಅದನ್ನ ಕೆಲಸಕ್ಕೆ ಹಚ್ಚುವುದ ನಿಲ್ಲಿಸಲು ಹೇಳಿದ. ಆನೆ ಮಂಕಾಗತೊಡಗಿತು..
ಒಮ್ಮೆ ನೀರು ಕುಡಿಯಲು ಹೋದ ಆನೆ ಕೆಸರಿನಲ್ಲಿ ಸಿಕ್ಕಿಕೊಂಡು ಬಿಟ್ಟಿತು.. ಎಷ್ಟೇ ಪ್ರಯತ್ನ ಪಟ್ಟರೂ ಹೊರ ಬರಲು ಸಾಧ್ಯವಾಗದೆ ಘಿಳಿಡಲು ತೊಡಗಿತು.. ರಾಜ ಸೈನಿಕರ ಜೊತೆ ಬಂದು ಎಷ್ಟೇ ಪ್ರಯತ್ನ ಪಟ್ಟರೂ ಆನೆ ಕೆಸರಲ್ಲಿ ಹೂತುಕೊಳ್ಳುತ್ತಲೇ ಹೋಯ್ತು .. ರಾಜ ನೊಂದುಕೊಂಡ .. ಮಂತ್ರಿಗಳ ಮುಖ ನೋಡಿದ .. ಒಬ್ಬ ಮಂತ್ರಿ ಸೈನಿಕರ ಕರೆದು ಯುದ್ಧ ಕಹಳೆಯ ದನಿ ಹೊರಡಿಸಲು ಹೇಳಿದ .. ಕಹಳೆಯ ದನಿ ಮೊಳಗಿದಂತೆಲ್ಲಾ ಆನೆ ಕಿವಿ ನಿಮಿಸಿರಿ ಕಣ್ಣರಳಿಸಿ ನೋಡಿ ತನ್ನೆಲ್ಲ ಶಕ್ತಿಯನ್ನು ಹಾಕಿ ಹೊರ ಬಂತು ..ಎಲ್ಲರೂ ಹರ್ಷೋದ್ಘಾರ ಮಾಡಿದರು ...

ಮಂತ್ರಿ ಹೇಳಿದ *'ಶರೀರ ಬಲವೊಂದೇ ಬದುಕಲ್ಲ ಪ್ರಭು, ಬದುಕಲು ಒಳಗಿನಿಂದ ಒಂದು ಸ್ಪೂರ್ತಿ ಬೇಕು.. ನನ್ನ ಅವಶ್ಯಕತೆ ಈ ಜಗತ್ತಿಗಿದೆ ಎಂಬ ಭಾವದ ಪ್ರೇರಣೆ ಬೇಕು...ಆ ಸ್ಪೂರ್ತಿ ಬದುಕಲು ಪ್ರೇರೇಪಿಸಿದಾಗ ಮಾತ್ರ ಬದುಕಲು ಛಲ ಬರುತ್ತದೆ . ಆ ಸ್ಫೂರ್ತಿ    ನಮ್ಮ ಮೇಲೆ ನಮ್ಮವರು ಇಟ್ಟಿರುವ ಭರವಸೆ, ಪ್ರೀತಿಗಳಿಂದ ಸಿಗುತ್ತದೆ ..... '*

*ಒಂದು ಸಣ್ಣ ಒಳ್ಳೆಯ ಮಾತು,ಸ್ಪರ್ಶ, ನಗು ಬದುಕಿನ ಹಾದಿಯ ಬದಲಿಸಬಲ್ಲುದು...*

*ಪ್ರೀತಿ ಅಷ್ಟೇ ಸಾಕು....... ಬದುಕಲು, ಬದುಕಿಸಲು, ಬದುಕನ್ನ ಬದುಕಿಸಲು.*

ನಾವು ನಮ್ಮೊಳಗೆ ದುಃಖಿ

*ನಾವು ನಮ್ಮೊಳಗೆ ದುಃಖಿ*


ಓಶೋ

ಮಹಾವೀರನ ಅಹಿಂಸೆ ನೈತಿಕ ಅಹಿಂಸೆಯಲ್ಲ. ಮಹಾವೀರನ ಅಹಿಂಸೆ ಯೌಗಿಕ ಅಹಿಂಸೆ. ಮಹಾವೀರ ಹೇಳುವುದು ಸ್ವಯಂನಲ್ಲಿ ಪ್ರತಿಷ್ಠಿತವಾಗಿ, ಸ್ವಯಂ ಜ್ಞಾನಕ್ಕೆ ಉಪಲಬ್ಧವಾಗಿ ಎಂದು. ಅದು ಅಸಾಧ್ಯವಾದರೆ ಆಗ ಬೇರೆಯವರಿಗೆ ದುಃಖ ನೀಡುವುದೇ ಅಸಂಭವವಾಗಿ ಬಿಡುವುದು. ಏಕೆಂದರೆ *ಯಾರೊಳಗೆ ದುಃಖ ಇರುವುದಿಲ್ಲವೋ ಅವರು ಮತ್ತೊಬ್ಬರಿಗೆ ದುಃಖ ನೀಡಲು ಹೇಗೆ ಸಾಧ್ಯ.* ಯಾರ ಒಳಗೆ ಆತ್ಮಜ್ಞಾನದ ಪ್ರಕಾಶ ಹರಡಿರುವುದೋ ಅವರು ಬೇರೆಯವರಿಗೆ ದುಃಖವೆಂಬ ಕತ್ತಲೆಯನ್ನು ನೀಡಲು ಸಾಧ್ಯವಿಲ್ಲ. ಅನಾಯಾಸವಾಗಿ ಅವರ ಆನಂದವೂ ಹೆಚ್ಚುವುದು. ಪ್ರಕಾಶವೂ ಹೆಚ್ಚುವುದು. ಅವರ ಒಳಗಿನ ಆನಂದ ಹೊರಗೆ ಉಕ್ಕಿ ಹರಿಯಲು ಬೇರೇ ಯಾವುದೇ ಮಾರ್ಗವೂ ಇರುವುದಿಲ್ಲ.

ನೀವು ಪ್ರಾಮಾಣಿಕವಾಗಿ ವಿಚಾರ ಮಾಡಿದರೆ ತಿಳಿಯುವುದು; *ನಾವು ಬೇರೆಯವರಿಂದ ದುಃಖವನ್ನು ಹೊಂದಲು ಕಾರಣ ನಾವು ನಮ್ಮೊಳಗೆ ದುಃಖಿಯಾಗಿರುವುದು.* ನಾವು ಇನ್ನೊಬ್ಬರ ಕುರಿತು ಹಿಂಸಕರಾಗಲು ಕಾರಣ ನಾವು ನಮ್ಮ ಕುರಿತೇ ಹಿಂಸಕರಾಗಿರುವುದು ಹಾಗೂ ನಮ್ಮೊಳಗೂ ಹಿಂಸೆಯಿಂದಲೇ ತುಂಬಿ ಹೋಗಿರುವುದು. ಇಲ್ಲಿ ಬೇರೆಯವರ ಪ್ರಶ್ನೆಯೇ ಇರುವುದಿಲ್ಲ. ಅಂತಿಮವಾಗಿ ಅಹಿಂಸೆಯ ಪ್ರಶ್ನೆ ವೈಯುಕ್ತಿಕ ಜಾಗರಣೆಯ ಪ್ರಶ್ನೆಯಾಗಿರುವುದು. ಮನುಷ್ಯ ತನ್ನೊಳಗೆ ಸಾಗಿ ಹೋಗಿ ಅಂತರ್ಯವನ್ನು ಅನುಭವಿಸಿದರೆ ಆಗ ಅಲ್ಲಿ ಕುಳಿತಿರುವ ಹಿಂಸೆ ವಿಸರ್ಜಿತವಾಗುವುದು.


 ಪಶ್ಚಿಮದಲ್ಲಿ ಪದಾರ್ಥ ವಿಶ್ಲೇಷಣೆ, ಅದನ್ನು ವಿಭಜಿಸಿ ಒಳಹೊಕ್ಕು ಅದರ ಆಂತರಿಕ ರಹಸ್ಯವನ್ನು ಹುಡುಕುವ ಮೂಲಕ ಅಣುವನ್ನು ಕಂಡು ಹಿಡಿಯಲಾಗಿದೆ. ಅಣುವು ಲಭ್ಯವಾಗುತ್ತಿದ್ದಂತೆಯೇ ಅದರಲ್ಲಿದ್ದ ವಿರಾಟ್‌ ಶಕ್ತಿ ಕೈಗೆ ದೊರೆಯಿತು. ವಿನಾಶದ ಅದ್ಭುತ ಶಕ್ತಿಯ ಮೇಲೆ ನಿಯಂತ್ರಣ ಸಾಧಿಸುವುದು ಸಾಧ್ಯವಾಯಿತು. ಪೂರ್ವವೂ ತನ್ನ ಪ್ರಯೋಗಗಳನ್ನು ನಡೆಸಿತು. ಪಶ್ಚಿಮವು ಪದಾರ್ಥದ ಆಸ್ತಿತ್ವದ ಕುರಿತು ಪ್ರಯೋಗಗಳನ್ನು ನಡೆಸಿದರೆ, ಪೂರ್ವವು ಮನುಷ್ಯನ ಚೇತನದ ಅಸ್ತಿತ್ವದ ಕುರಿತು ಪ್ರಯೋಗಗಳನ್ನು ನಡೆಸಿತು.


ಮಹಾವೀರನ ಪ್ರಯೋಗ ಮನುಷ್ಯನ ಚೇತನದ ಅಸ್ತಿತ್ವದ ಕುರಿತು ವಿಶ್ಲೇಷಣೆ ಮಾಡಲಾದ ಪ್ರಯೋಗವಾಗಿತ್ತು. ಪದಾರ್ಥದ ವಿಶ್ಲೇಷಣೆಯಿಂದ ಯಾವ ಅಣು ಲಭ್ಯವಾಯಿತೋ ಅದು ವಿನಾಶಕಾರಿ ಎಂಬುದು ಸಾಬೀತಾಯಿತು. ಪದಾರ್ಥದ ಸಮಸ್ತ ಶಕ್ತಿಯೂ ಅಂಧಕಾರವಿದ್ದಂತೆ. ಅದು ಅಂಧವ್ಯಕ್ತಿಗಳ ಕೈಯಲ್ಲಿ ಸಿಕ್ಕಾಗ ಅದರ ದುಷ್ಪರಿಣಾಮವಾಗುವುದು ಸ್ವಾಭಾವಿಕ. ಚೈತನ್ಯದ ವಿಶ್ಲೇಷಣೆಯಿಂದ, ಚೈತನ್ಯದ ಜಾಗರಣೆಯಿಂದ ಪ್ರತ್ಯಕ್ಷ ವಾದ ಆತ್ಮ ನಮ್ಮ ಸಮಸ್ತ ಬದುಕಿನ ದೃಷ್ಟಿಕೋನವನ್ನೆ ಬದಲಿಸುವ ಸಾಮರ್ಥ್ಯ‌ ಉಳ್ಳದ್ದು.

 ಮಹಾವೀರನು ಹೇಳಿದ್ದಾನೆ-ಯಾರು ಅಭಯಕ್ಕೆ ಉಪಲಬ್ಧಿಯಾಗುವನೋ ಅವನೇ ಅಹಿಂಸಕನಾಗುತ್ತಾನೆ ಎಂದು. ಯಾರು ಅಭಯಕ್ಕೆ ಲಭ್ಯವಾಗುತ್ತಾನೆ? ಯಾರೂ ಆತ್ಮಜ್ಞಾನಿ ಅಲ್ಲವೋ ಅವನು ಅಭಯಕ್ಕೆ ಉಪಲಬ್ಧಿಯಾಗುವುದು ಸಾಧ್ಯವೇ? ಭಯವನ್ನು ಬಲವಂತದಿಂದ ಓಡಿಸುವ ಮೂಲಕ ಯಾರಾದರೂ ಅಭಯವನ್ನು ಹೊಂದಲು ಸಾಧ್ಯವೇ. ಅದು ಖಂಡಿತಾಗಿಯೂ ಅಸಂಭವ. ಭಯವನ್ನು ಹೊಡೆದೋಡಿಸುವುದು ಯಾರಿಂದಲೂ ಸಾಧ್ಯವಿಲ್ಲ. ಭಯ ಇರುವುದು ಮೃತ್ಯುವನ್ನು ಕುರಿತಾಗಿ, ಮೂಲಭೂತ ಭಯದ ಹಿಂದೆ ಮೃತ್ಯು ಕುಳಿತಿರುವುದು. ಪ್ರತಿಕ್ಷ ಣವೂ ನಾಲ್ಕೂ ದಿಕ್ಕಿನಲ್ಲಿ ಬದುಕು ಮೃತ್ಯುವಿನಿಂದ ಕುಸಿಯುತ್ತಿರುವುದು.


 ಎಲ್ಲಿಯವರೆಗೆ ಅಮೃತವು ಕಾಣುವುದಿಲ್ಲವೋ, ಅಲ್ಲಿಯವರೆಗೂ ನನ್ನ ಒಳಗೆ ಮರಣವೇ ಇರದ ಯಾವುದೋ ಒಂದು ಇದೆ ಎಂಬುದು ನಮ್ಮ ಅರಿವಿಗೆ ಬರುವುದೇ ಇಲ್ಲ. ಅದು ಎಂದಿಗೂ ಸಾಯುವುದೇ ಇಲ್ಲ ಎಂಬುದು ಅರಿವಿಗೆ ಬರುವ ತನಕವೂ ವ್ಯಕ್ತಿ ಅಭಯಕ್ಕೆ ಉಪಲಬ್ಧವಾಗುವುದಿಲ್ಲ. ಎಲ್ಲಿಯವರೆಗೆ ನಾವು ಮೃತ್ಯುವಿನ ಭಯದಿಂದ ಕುಸಿಯುತ್ತಿರುವೆವೋ ಅಲ್ಲಿಯವರೆಗೂ ನಮ್ಮ ಆಸುಪಾಸಿನಲ್ಲಿ ಯಾವುದು ಇರುವುದೋ ಎಲ್ಲವೂ ಮೃತ್ಯುವಿನಲ್ಲಿ ಸಮಾಪ್ತಾಗುವುದು ಎಂದೇ ಭಾವಿಸುತ್ತೇವೆ.

🍁🌿🍁🌿🍁🌿🍁🌿🍁

ಜೀವನದಲ್ಲಿ ಸಾಮರಸ್ಯವನ್ನು ಅರಿತುಕೊಳ್ಳಿ(osho)

 *ಜೀವನದಲ್ಲಿ ಸಾಮರಸ್ಯವನ್ನು ಅರಿತುಕೊಳ್ಳಿ*
[osho]


*ಸದಾ ಸಾಮರಸ್ಯತೆಯಲ್ಲಿ ನಿನ್ನಿಂದ ಇರಲಾಗುವುದಿಲ್ಲ . ಸಾಮರಸ್ಯತೆಯ ಅರಿವು ಆಗಬೇಕೆಂದರೆ , ಆಗಾಗ ಸಾಮರಸ್ಯತೆಯ ಹಿಂದೆ ಪುನಃ ಪುನಃ ಅಸಾಮರಸ್ಯ ಬರುತ್ತಿರಬೇಕು . ಸಂತೋಷದ ಹಿಂದೆ ಅಸಂತೋಷ , ಅಸಂತೋಶದ ಹಿಂದೆ ಸಂತೋಷ ಬರುತ್ತಿರಬೇಕು . ಪ್ರತಿಯೊಂದು ಸಂತೋಷದಲ್ಲೂ ಅದರದ್ದೇ ಆದ ನೋವಿದೆ . ಅದೇ ತರಹ ಪ್ರತಿ ನೋವಿನಲ್ಲೂ ಸಂತೋಷವಿದೆ* .


*ಅಖಂಡತೆಯನ್ನು ಅದರ ನೋವು ನಲಿವುಗಳೆಲ್ಲದರ ಸಮೇತ ವಾಗಿ ಪೂರ್ತಿಯಾಗಿ ಸ್ವೀಕರಿಸು. ಅಸಾಧ್ಯಕ್ಕಾಗಿ ಹಾತೊರೆಯಬೇಡ . ಜೀವನ ಪೂರ್ತಿ ಸಂತೋಷವೇ ಇರಬೇಕು , ನೋವು ದುಃಖ ಇರಬಾರದು ಎಂಬ ಆಸೆಯಲ್ಲಿ ಆಕಾಂಕ್ಷೆಯಲ್ಲಿ ತೊಳಲಾಡಬೇಡ . ಆನಂದ ಮಾತ್ರ ಇರಲು ಸಾಧ್ಯವಿಲ್ಲ . ಅದಕ್ಕೆ ವಿಪರೇತವಾದುದೂ ಇರಬೇಕಾಗುವುದು . ವ್ಯಸನ ಕಪ್ಪು ಹಲಗೆಯಾದಾಗಲೇ ಹರ್ಷ ಎಂಬುದು ಸ್ಪಷ್ಟವಾಗಿ ಹೊಳೆಯುವುದು , ಕಾರ್ಗತ್ತಲ ಆಗಸದಲ್ಲಿ ನಕ್ಷತ್ರಗಳು ಹೊಳೆದಂತೆ , ಕತ್ತಲು ದಟ್ಟವಾದಷ್ಟೂ ನಕ್ಷತ್ರಗಳು ಮಿರಮಿರನೆ ಮಿಂಚುವುದು . ಹಗಲಿನಲ್ಲಿ ನಕ್ಷತ್ರಗಳು ಮಾಯವಾಗಿಬಿಡುವುದಿಲ್ಲ . ಅವು ಅಗೋಚರವಾಗಿ ಇರುತ್ತವೆಯಷ್ಟೇ*




*ಸಾವೇ ಇಲ್ಲದ ಜೀವನವನ್ನು ಊಹಿಸಿಕೋ , ಆಗ ಅದು ತಡೆಯಲಾಗದ ಯಾತನೆ , ಅಸಹನೀಯ ಇರುವಿಕೆ ಆಗುವುದು . ಸಾವು ಇಲ್ಲದೆ ಜೀವಿಸುವುದು ಅಸಾಧ್ಯವಾಗುವುದು . ಸಾವು ಜೀವನವನ್ನು ರೂಪಿಸುತ್ತದೆ . ಅದಕ್ಕೊಂದು ತೀಕ್ಷ್ಣತೆಯನ್ನು ತೀವ್ರತೆಯನ್ನು ಕೊಡುತ್ತದೆ . ಜೀವನ ಕಳೆದು ಹೋಗುತ್ತಿದೆ ಆದ್ದರಿಂದ ಪ್ರತಿ ಕ್ಷಣ ಅಮೂಲ್ಯ ಆಗುವುದು . ಪ್ರತಿಯೊಬ್ಬರ ಜೀವನ ಶಾಶ್ವತ ಆಗಿದ್ದಿದ್ದರೆ ಆಗ ಯಾರು ತಾನೇ ಜೀವನಕ್ಕೆ ಮೌಲ್ಯ ಕೊಡುತ್ತಿದ್ದರು ? ನಾಳೆಗಾಗಿ ನೀವು ನಿರಂತರ ಕಾದಿರಬಹುದಿತ್ತು . ಆಗ ಯಾರು ತಾನೇ ಈಗ-ಇಲ್ಲಿ ಜೀವಿಸುತ್ತಿದ್ದರು ? ನಾಳೆ ಸಾವು ಇದೆ ಎಂಬುದು ಈಗ-ಇಲ್ಲಿ ಜೀವಿಸಲು ಒತ್ತಾಯಿಸುವುದು . ನೀನು ಈ ಕ್ಷಣದಲ್ಲಿ ಧುಮುಕಬೇಕಾಗುವುದು ಅದರ ಅತ್ಯಾಳಕ್ಕೆ ಇಳಿಯಬೇಕು. ಯಾಕೆಂದರೆ ಯಾರಿಗೆ ಗೊತ್ತು ಮುಂದಿನ ಕ್ಷಣ ಬರಬಹುದು. ಬಾರದೆಯೂ ಇರಬಹುದು .*


 *ನೋವು , ದುಃಖ , ದುಗುಡಗಳು ಬಂದಾಗ ಅದನ್ನು ಸ್ವೀಕರಿಸಿ ಅಚಲ ಮೌನದಿಂದ ಯಾರು ಇರಬಲ್ಲರೋ , ಅವರ ದುಃಖದ ಗುನಾತ್ಮಕತೆ ಸಂಪೂರ್ಣವಾಗಿ ಪರಿವರ್ತನೆ ಆಗಿಬಿಡುವುದು . ಅಂಥವರಿಗೆ ಸಂಕಷ್ಟಗಳು ಸಂಪತ್ತಾಗುವುದು . ನೋವೆಂಬುದು ಅವರನ್ನು ತೀಕ್ಷ್ಣ ಗೊಳಿಸುವುದು . ಅಂಥವರಿಗೆ ಕಾರ್ಗತ್ತಲೂ ಸಹಾ ಅದರದ್ದೇ ಆದ ಸೌಂದರ್ಯ ಆಳ ಇರುತ್ತದೆ . ಅಂಥವರಿಗೆ ಸಾವೂ ಸಹಿತ ಅಂತ್ಯ ಆಗಿರುವುದಿಲ್ಲ , ಬದಲಿಗೆ ಅಜ್ಞಾತದ  ಆದಿ ಆಗಿರುತ್ತದೆ*.

ಸ್ವಾತಂತ್ರ್ಯ ಒಂದು ಮನಸ್ಥಿತಿ

*ಸ್ವಾತಂತ್ರ್ಯ ಒಂದು ಮನಸ್ಥಿತಿ*


ಜೆ. ಕೃಷ್ಣಮೂರ್ತಿ


ಯಾವುದೋ ಒಂದರಿಂದ ಬಿಡುಗಡೆ ಎಂಬುದು ಬಿಡುಗಡೆಯಲ್ಲ. ನೀವು ಕೋಪದಿಂದ ಮುಕ್ತರಾಗಲು ಪ್ರಯತ್ನಿಸುತ್ತಿದ್ದೀರಿ. ನೀವು ಕೋಪದಿಂದ ಮುಕ್ತರಾಗಬಾರದೆಂದು ನಾನು ಹೇಳುತ್ತಿಲ್ಲ. ಆದರೆ ಆ ರೀತಿಯ ಬಿಡುಗಡೆ ಬಿಡುಗಡೆಯಲ್ಲ ಎಂದು ಹೇಳುತ್ತಿದ್ದೇನೆ. ನಾನು ಆಸೂಯೆ, ಕ್ಷ ುದ್ರತೆ, ಹೊಟ್ಟೆಕಿಚ್ಚು ಹಾಗೂ ಇನ್ನಿತರ ಹಲವಾರು ಸಂಗತಿಗಳಿಂದ ಬಿಡುಗಡೆ ಹೊಂದಿರಬಹುದಾದರೂ ನಾನು ಬಿಡುಗಡೆ ಹೊಂದಿಲ್ಲ. ಸ್ವಾತಂತ್ರ್ಯವೆಂಬುದು ಮನಸ್ಸಿನ ಗುಣ. ಆ ಗುಣವು ಜಾಗರೂಕವಾದ, ಆದರಣೀಯವಾದ ಹುಡಕಾಟ, ಶೋಧನೆಯಿಂದ, ಎಚ್ಚರದ ವಿಶ್ಲೇಷಣೆಯಿಂದ ಅಥವಾ ವಿಚಾರಗಳ ಸಂಗ್ರಹದಿಂದ ಒದಗಿಬರುವುದಿಲ್ಲ.


 ಆದುದರಿಂದಲೇ ಸ್ವಾತಂತ್ರ್ಯವೆಂದರೆ ಬಿಡುಗಡೆ ಎಂಬ ರೀತಿಯಲ್ಲಿ ನಾವು ಸತತವಾಗಿ ಯಾವುದೋ ಒಂದರಿಂದ ಬಿಡುಗಡೆ ಪಡೆಯಲೆಂದು ಹುಡುಕಾಟ ನಡೆಸಿದ್ದೇವೆ ಎಂಬ ಸತ್ಯವನ್ನು ಕಾಣುವುದು ತುಂಬ ಮುಖ್ಯ; ದುಃಖದಿಂದ ಬಿಡುಗಡೆ ಇಲ್ಲಎಂದಲ್ಲ. ಆದರೆ ಅದರಿಂದ ಬಿಡುಗಡೆ ಪಡೆಯಬೇಕೆಂಬ ಬಯಕೆಯು ಕೇವಲ ಒಂದು ಪ್ರತಿಕ್ರಿಯೆ. ಹೀಗಾಗಿ ಅದು ನಿಮ್ಮನ್ನು ದುಃಖದಿಂದ ಮುಕ್ತಗೊಳಿಸುವುದಿಲ್ಲ. ನನ್ನ ಮಾತು ನಿಮಗೆ ಸ್ಪಷ್ಟವಾಗುತ್ತಿದೆ ತಾನೆ.


ಬಗೆ ಬಗೆಯ ಕಾರಣಗಳಿಂದಾಗಿ ನಾನು ದುಃಖದಲ್ಲಿದ್ದೇನೆ. ನಾನು ಅದರಿಂದ ಮುಕ್ತವಾಗಬೇಕು. ದುಃಖದಿಂದ ಬಿಡುಗಡೆ ಆಗಬೇಕೆಂಬ ತುಡಿತ ಇದೆಯಲ್ಲ ಅದು ನೋವಿನಿಂದ ಹುಟ್ಟಿಕೊಳ್ಳುತ್ತದೆ. ನನ್ನ ಗಂಡ ಅಥವಾ ನನ್ನ ಮಗ ಅಥವಾ ಇನ್ನೇನೋ ಒಂದರಿಂದಾಗಿ ನಾನು ಕಷ್ಟಪಡುತ್ತೇನೆ. ನಾನಿರುವ ಪರಿಸ್ಥಿತಿ ನನಗಿಷ್ಟವಿಲ್ಲ. ನಾನು ಅದರಿಂದ ಹೊರಗೆ ಬರಲು ಬಯಸುತ್ತೇನೆ. ಸ್ವಾತಂತ್ರ್ಯದ ಬಗೆಗಿನ ಈ ಬಯಕೆಯು ಒಂದು ಪ್ರಕ್ರಿಯೆಯೇ ಹೊರತು ಸ್ವಾತಂತ್ರ್ಯವಲ್ಲ. ಈಗ ಏನು ಸ್ಥಿತಿ ಇದೆಯೋ ಅದಕ್ಕೆ ವ್ಯತಿರಿಕ್ತವಾದ ನನ್ನ ಅಪೇಕ್ಷೆಯ ಒಂದು ಸ್ಥಿತಿ ಅದು. ಕೈತುಂಬ ದುಡ್ಡಿರುವ ವ್ಯಕ್ತಿ ಪ್ರಪಂಚ ಸುತ್ತುತ್ತಾನೆ ಅಂದ ಮಾತ್ರಕ್ಕೆ ಆತ ಮುಕ್ತನೇನೂ ಅಲ್ಲ ಅಥವಾ ಚಾಣಾಕ್ಷ ನಾದ ದಕ್ಷ ನಾದ ವ್ಯಕ್ತಿಯ ಸ್ವಾತಂತ್ರ್ಯದ ಅಪೇಕ್ಷೆ ಕೂಡ ಒಂದು ಪ್ರತಿಕ್ರಿಯೆಯಷ್ಟೆ. ಆದುದರಿಂದ ಆ ಸ್ವಾತಂತ್ರ್ಯವನ್ನು, ಮುಕ್ತಿಯನ್ನು ಯಾವುದೇ ರೀತಿಯಲ್ಲೂ ಕಲಿಯಲು ಅಥವಾ ಸಂಪಾದಿಸಲು ಸಾಧ್ಯವಿಲ್ಲ. ಯಾವುದೇ ಪ್ರತಿಕ್ರಿಯೆಯ ಮುಖೇನ ಅದನ್ನು ಪಡೆಯಲು ಸಾಧ್ಯವಿಲ್ಲ ಎಂಬುದನ್ನು ನಾನು ಕಾಣಬಲ್ಲೆನೆ?

ಹೀಗಾಗಿ ನಾನು ಆ ಪ್ರತಿಕ್ರಿಯೆಯನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಸಂಕಲ್ಪಬಲದ ಪ್ರಯತ್ನದ ಮೂಲಕ ಸ್ವಾತಂತ್ರ್ಯ ಸಿದ್ಸುವುದಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಸಂಕಲ್ಪ ಮತ್ತು ಸ್ವಾತಂತ್ರ್ಯ ಪರಸ್ಪರ ವಿರುದ್ಧ ಸಂಗತಿಗಳು; ಆಲೋಚನೆ ಮತ್ತು ಸ್ವಾತಂತ್ರ್ಯ ಹೇಗೆ ವಿರುದ್ಧ ಸಂಗತಿಗಳೋ ಹಾಗೆ. ಆಲೋಚನೆಯು ಅನುಬಂತವಾಗಿರುವುದರಿಂದ ಅದು ಸ್ವಾತಂತ್ರ್ಯವನ್ನು ಸೃಷ್ಟಿಸಲಾರದು. ಆರ್ಥಿಕವಾಗಿ ಮನುಷ್ಯ ಹೆಚ್ಚು ಸುಖಿಯಾಗಿರುವಂತೆ, ಹೆಚ್ಚಿನ ಅಶನ ವಸನ ವಸತಿಸೌಕರ‍್ಯ ಗಳಿಸುವಂತೆ ಮಾಡಬಹುದು ಮತ್ತು ಇದೇ ಸ್ವಾತಂತ್ರ್ಯ ಎಂದು ನೀವು ಭಾವಿಸಬಹುದು. ಅವೆಲ್ಲ ಅವಶ್ಯಕ ವಸ್ತುಗಳು; ಆದರೆ ಅದೆಲ್ಲ ಸ್ವಾತಂತ್ರ್ಯದ ಪೂರ್ಣತೆಯಲ್ಲ. ಸ್ವಾತಂತ್ರ್ಯವೆಂಬುದು ಒಂದು ಮನಸ್ಥಿತಿ ಮತ್ತು ಮನಸ್ಸಿನ ಗುಣ. ನಾವು ಪರಿಶೋಸುತ್ತಿರುವುದು ಈ ಗುಣವನ್ನೇ. ಈ ಗುಣದ ಹೊರತಾಗಿ, ನೀವೇನು ಮಾಡಿದರೂ ಜಗತ್ತಿನಲ್ಲಿರುವ ಸಕಲ ಸದ್ಗುಣಗಳನ್ನು ರೂಢಿಸಿದರೂ ನಿಮಗೆ ಸ್ವಾತಂತ್ರ್ಯ ದಕ್ಕುವುದಿಲ್ಲ.

ತಟ್ಟೆಯನ್ನು ತೊಡೆಯ ಮೇಲೆ ಇಟ್ಟುಕೊಂಡು ಏಕೆ ಊಟವನ್ನು ಮಾಡಬಾರದು

*ತಟ್ಟೆಯನ್ನು ತೊಡೆಯ ಮೇಲೆ ಇಟ್ಟುಕೊಂಡು ಏಕೆ ಊಟವನ್ನು ಮಾಡಬಾರದು?*

೧. ಅನ್ನವು ‘ಪೂರ್ಣಬ್ರಹ್ಮ’ವಾಗಿರುವುದರಿಂದ ಅದಕ್ಕೆ ದೇವತ್ವದ ಗೌರವವನ್ನು ಕೊಡಬೇಕು. ತೊಡೆಯ ಮೇಲೆ ಅನ್ನವನ್ನಿಟ್ಟುಕೊಂಡು ಊಟ ಮಾಡಿದರೆ ಅನ್ನದಲ್ಲಿನ ದೇವತ್ವಕ್ಕೆ ಅಗೌರವ ತೋರಿದಂತಾಗಿ ಅನ್ನಬ್ರಹ್ಮದಲ್ಲಿನ ಸಾತ್ತ್ವಿಕತೆಯ ಲಾಭವು ಅಪೇಕ್ಷಿತ ರೀತಿಯಲ್ಲಾಗುವುದಿಲ್ಲ.


೨. ತೊಡೆಯ ಮೇಲೆ ತಟ್ಟೆಯನ್ನಿಟ್ಟು ಅನ್ನವನ್ನು ಸೇವಿಸಿದರೆ, ಶರೀರದ ಸಂಪರ್ಕವು ಅನ್ನದೊಂದಿಗೆ ಹೆಚ್ಚಿನ ಪ್ರಮಾಣದಲ್ಲಾಗುತ್ತದೆ. ಇದರಿಂದ ಜೀವದ ಅಂತರ್ಮನಸ್ಸಿನ ವಾಸನೆಯ ವಿಚಾರಗಳಿಗನುಸಾರ ಪ್ರಕ್ಷೇಪಿತವಾಗುವ ಲಹರಿಗಳು ಅನ್ನದ ಮೂಲಕ ದೇಹದಲ್ಲಿ ಸಂಕ್ರಮಿತವಾಗುತ್ತವೆ. ಈ ಪ್ರಕ್ರಿಯೆಯಲ್ಲಿ ಜೀವವು ತನ್ನ ರಜ-ತಮಾತ್ಮಕ ಲಹರಿಯುಕ್ತ ಕೋಶದಲ್ಲಿ ಅನ್ನವನ್ನಿಟ್ಟುಕೊಂಡು ಸೇವಿಸುತ್ತಿರುತ್ತದೆ. ಇದರಿಂದ ಜೀವವು ಅನ್ನದಿಂದ ಸಿಗುವ ಭೂಮಿ ಲಹರಿಗಳ ಲಾಭದಿಂದ ವಂಚಿತವಾಗುತ್ತದೆ.


೩. ಪಾದಗಳ ಸ್ಪರ್ಶದಿಂದ ಪಾತಾಳದಿಂದ ಬರುವ ತೊಂದರೆದಾಯಕ ಸ್ಪಂದನಗಳು ಹೆಚ್ಚಾಗಿ ಮಂಡಿಗಳ ಟೊಳ್ಳಿನಲ್ಲಿ ತಮ್ಮ ಸ್ಥಾನವನ್ನು ಮಾಡಿಕೊಳ್ಳುತ್ತವೆ. ತೊಡೆಯ ಮೇಲೆ ತಟ್ಟೆಯನ್ನಿಟ್ಟು ಊಟವನ್ನು ಮಾಡುವುದರಿಂದ ಸ್ಪರ್ಶದ ಮಾಧ್ಯಮದಿಂದ ಕಾಲು, ಮಂಡಿ ಮತ್ತು ತೊಡೆಗಳಲ್ಲಿ ಸುಪ್ತವಾಗಿರುವ ಸ್ಪಂದನಗಳು ಕಾರ್ಯನಿರತವಾಗಿ ಅನ್ನವು ಅಪವಿತ್ರವಾಗಬಹುದು, ಆದುದರಿಂದ ಊಟದ ತಟ್ಟೆಯನ್ನು ತೊಡೆಗಳ ಮೇಲೆ ಇಟ್ಟುಕೊಂಡು ಊಟವನ್ನು ಮಾಡಬಾರದು.



(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ಭೋಜನಕ್ಕೆ ಸಂಬಂಧಿಸಿದ ಆಚಾರಗಳು’)



*ಹೊಸ್ತಿಲಿನ ಮೇಲೆ ಕುಳಿತುಕೊಂಡು ಏಕೆ ಸೀನಬಾರದು?*

ಹೊಸ್ತಿಲಿನ ಮೇಲೆ ಕುಳಿತುಕೊಂಡು ಸೀನುವುದರಿಂದ ಉತ್ಪನ್ನವಾಗುವ ನಾದಶಕ್ತಿಯಿಂದ ಹೊಸ್ತಿಲಿನಲ್ಲಿನ ರಜ-ತಮಾತ್ಮಕ ಲಹರಿಗಳು ಕಾರ್ಯನಿರತವಾಗುತ್ತವೆ, ಹಾಗೆಯೇ ಸೀನುವುದರಿಂದ ಪ್ರಕ್ಷೇಪಿತವಾಗುವ ವಾಯುತತ್ತ್ವದ ಲಹರಿಗಳಿಂದ ಹೊಸ್ತಿಲಿನಲ್ಲಿನ ರಜ-ತಮಾತ್ಮಕ ಲಹರಿಗಳು ಕೆಳಗಿನ ದಿಕ್ಕಿನಲ್ಲಿ (ಭೂಮಿಯ ಕಡೆಗೆ) ಪ್ರಕ್ಷೇಪಿತವಾಗದೆ ಮೇಲಿನ ದಿಕ್ಕಿನಲ್ಲಿ (ಆಕಾಶದೆಡೆಗೆ) ಪ್ರಕ್ಷೇಪಿತವಾಗುತ್ತವೆ. ಇದರಿಂದ ವಾಸ್ತುವಿನಲ್ಲಿ ತೊಂದರೆದಾಯಕ ಲಹರಿಗಳ ಸಂಚಾರವು ಹೆಚ್ಚಾಗುತ್ತದೆ; ಆದುದರಿಂದ ಹೊಸ್ತಿಲಿನ ಮೇಲೆ ಕುಳಿತುಕೊಂಡು ಸೀನಬಾರದು.

ಒಂದು ವೇಳೆ ಹೊಸ್ತಿಲಿನ ಮೇಲೆ ಕುಳಿತುಕೊಂಡು ಸೀನಿದರೆ ಹೊಸ್ತಿಲಿನ ಮೇಲೆ ನೀರನ್ನು ಹಾಕಬೇಕೆಂದು ಹೇಳುತ್ತಾರೆ, ಇದರ ಕಾರಣವೇನು?

ಹೊಸ್ತಿಲಿನ ಮೇಲೆ ನೀರನ್ನು ಹಾಕುವುದೆಂದರೆ ಒಂದು ರೀತಿಯಲ್ಲಿ ಮೇಲಿನ ದಿಕ್ಕಿನಲ್ಲಿ ಪ್ರಕ್ಷೇಪಿತವಾಗುವ ರಜ-ತಮಾತ್ಮಕ ಲಹರಿಗಳನ್ನು ಶಾಂತ ಮಾಡುವುದಾಗಿದೆ. ನೀರಿನಲ್ಲಿನ ಪೃಥ್ವಿ ಮತ್ತು ಆಪತತ್ತ್ವಗಳ ಲಹರಿಗಳಿಂದ, ವಾಯುತತ್ತ್ವದ ಆಧಾರದಿಂದ ಮೇಲಿನ ದಿಕ್ಕಿನಲ್ಲಿ ಚಲಿಸುತ್ತಿರುವ ಲಹರಿಗಳಿಗೆ ಜಡತ್ವವು ಪ್ರಾಪ್ತವಾಗುತ್ತದೆ. ಇದರಿಂದ ಆ ಲಹರಿಗಳು ಮತ್ತೆ ಭೂಮಿಯ ಕಡೆಗೆ ಚಲಿಸತೊಡಗುತ್ತವೆ. ಆದುದರಿಂದ ಒಂದು ವೇಳೆ ಹೊಸ್ತಿಲಿನ ಮೇಲೆ ಕುಳಿತುಕೊಂಡು ಸೀನಿದರೆ ಕೂಡಲೇ ಅದರ ಮೇಲೆ ನೀರು ಹಾಕಿ ರಜ-ತಮಾತ್ಮಕ ಲಹರಿಗಳ ಶಮನ ಮಾಡಬೇಕು.

ಸರ್ಕಾರಿ ಕಾರ್ನರ್

*ಸರ್ಕಾರಿ ಕಾರ್ನರ್*

 Monday, 30.01.2017, 6:21 AM     ವಿಜಯವಾಣಿ ಸುದ್ದಿಜಾಲ


ದಿನದ ಪ್ರಶ್ನೆ

ದಿನಾಂಕ1980ರ ಮಾರ್ಚ್ 27 ರಂದು ಸ್ಟೈಪಂಡರಿ ಸೇವೆಗೆ ಸೇರಿದ್ದು, 1986ರ ಡಿಸೆಂಬರ್ ದಿನಾಂಕ 22ರಂದು ಸೇವೆಯಿಂದ ವಿಮುಕ್ತಿ ಹೊಂದಿ, ಮೀಸಲಾತಿಯಡಿಯಲ್ಲಿ ರೇಷ್ಮೆ ಇಲಾಖೆಯ ರೇಷ್ಮೆ ಪ್ರವರ್ತಕರ ಹುದ್ದೆಗೆ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ಆಗ ನನ್ನ ವಯಸ್ಸು 33 ವರ್ಷ. ನಾನು ಸರ್ಕಾರಿ ಸೇವೆಯಿಂದ 2013ರ ಮಾರ್ಚ್ 31 ರಂದು ವಯೋನಿವೃತ್ತಿ ಹೊಂದಿರುತ್ತೇನೆ. ನನಗೆ ಹೆಚ್ಚುವರಿ 3 ವರ್ಷ ಸೇವೆ ಸಿಗುತ್ತದೆಯೇ?

|ಗಜೇಂದ್ರ ಹೆಚ್.ಎಸ್. ಚಿಕ್ಕಮಗಳೂರು

ದಿನಾಂಕ 8.9.2016ರ ಸರ್ಕಾರಿ ಆದೇಶ ಸಂಖ್ಯೆ ಆಇ 9, ಎಸ್​ಆರ್​ಎ 2012ರ ಪ್ರಕಾರ ದಿನಗೂಲಿ ಅಥವಾ ಸ್ಟೈಪಂಡರಿ ಪದವೀಧರರಾಗಿ ಸೇವೆ ಸಲ್ಲಿಸಿ ತದನಂತರ ಸೇವೆಯಲ್ಲಿ ಕ್ರಮಬದ್ಧಗೊಳಿಸಲಾದ ಎಲ್ಲಾ ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 247ಎರಂತೆ ನಿವೃತ್ತಿ ಸಂದರ್ಭದಲ್ಲಿ ಹೆಚ್ಚುವರಿ ಅರ್ಹತಾದಾಯಕ ಸೇರ್ಪಡೆ ಮಾಡಬೇಕೆಂದು ಸೂಚಿಸಲಾಗಿದೆ. ಆದರೆ 2012ರ ಫೆ.15ರ ನಂತರ ನಿವೃತ್ತಿ ಹೊಂದಿದ ನೌಕರರಿಗೆ ಈ ಸೌಲಭ್ಯಗಳು ಲಭ್ಯವಾಗುವುದಿಲ್ಲ




*ಸರ್ಕಾರಿ ಕಾರ್ನರ್*

 Sunday, 29.01.2017, 6:26 AM     ವಿಜಯವಾಣಿ ಸುದ್ದಿಜಾಲ


ದಿನದ ಪ್ರಶ್ನೆ

ಕಿರಿಯ ಆರೋಗ್ಯ ಸಹಾಯಕಿಯಾಗಿದ್ದ ನನ್ನ ತಾಯಿ ಸೇವೆ ಸಲ್ಲಿಸುತ್ತಿರುವಾಗಲೇ ಸಾವನ್ನಪ್ಪಿದ್ದಾರೆ. ನಮ್ಮ ತಾಯಿಯವರ ನೌಕರಿ ನೀಡಲು ನಾನು ನೇಮಕ ಪ್ರಾಧಿಕಾರಿಯವರಿಗೆ ಅರ್ಜಿ ಸಲ್ಲಿಸಿದಾಗ ನಿಮ್ಮ ತಂದೆಯವರು ವಾಹನ ಚಾಲಕರಾಗಿದ್ದು ಅವರಿಗೆ 16000 ರೂ. ಹಾಗೂ ನಿಮ್ಮ ತಾಯಿಯ ಕುಟುಂಬ ಪೆನ್​ಷನ್ ಸೇರಿ ವಾರ್ಷಿಕ ಆದಾಯ 3 ಲಕ್ಷ ಆಗುವುದರಿಂದ ನಿಮಗೆ ನೌಕರಿ ಕೊಡಲು ಬಾರದೆಂದು ನನ್ನ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಇದು ನಿಯಮಾವಳಿ ರೀತ್ಯ ಸರಿಯಾಗಿದೆಯೇ?

|ಐಶ್ವರ್ಯ ಯಾದಗಿರಿ

ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996ರ ನಿಯಮ 3ರ ಮೇರೆಗೆ ಮೃತ ಸರ್ಕಾರಿ ನೌಕರನ ಕುಟುಂಬದ ವರಮಾನ ಪ್ರಥಮ ದರ್ಜೆ ಸಹಾಯಕರ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ಮತ್ತು ಗರಿಷ್ಠ ವೇತನಕ್ಕೆ ಕಡಿಮೆ ಇದ್ದರೆ ಅನುಕಂಪದ ಆಧಾರದ ನೌಕರಿ ನೀಡಬೇಕಾಗುತ್ತದೆ. ನಿಮ್ಮ ತಂದೆಯವರ ವೇತನವು ಸೇರಿ ನಿಮ್ಮ ಆದಾಯ 4.5 ಲಕ್ಷ ಮೀರದಿರುವುದರಿಂದ ನೀವು ಅನುಕಂಪದ ಮೇರೆಗೆ ನೇಮಕಾತಿ ಹೊಂದಲು ಅರ್ಹರಾಗಿರುತ್ತೀರಿ.

ಜೀವನದಲ್ಲಿ ಸಾಮರಸ್ಯವನ್ನು ಅರಿತುಕೊಳ್ಳಿ

*ಜೀವನದಲ್ಲಿ ಸಾಮರಸ್ಯವನ್ನು ಅರಿತುಕೊಳ್ಳಿ*
[osho]


*ಸದಾ ಸಾಮರಸ್ಯತೆಯಲ್ಲಿ ನಿನ್ನಿಂದ ಇರಲಾಗುವುದಿಲ್ಲ . ಸಾಮರಸ್ಯತೆಯ ಅರಿವು ಆಗಬೇಕೆಂದರೆ , ಆಗಾಗ ಸಾಮರಸ್ಯತೆಯ ಹಿಂದೆ ಪುನಃ ಪುನಃ ಅಸಾಮರಸ್ಯ ಬರುತ್ತಿರಬೇಕು . ಸಂತೋಷದ ಹಿಂದೆ ಅಸಂತೋಷ , ಅಸಂತೋಶದ ಹಿಂದೆ ಸಂತೋಷ ಬರುತ್ತಿರಬೇಕು . ಪ್ರತಿಯೊಂದು ಸಂತೋಷದಲ್ಲೂ ಅದರದ್ದೇ ಆದ ನೋವಿದೆ . ಅದೇ ತರಹ ಪ್ರತಿ ನೋವಿನಲ್ಲೂ ಸಂತೋಷವಿದೆ* .


*ಅಖಂಡತೆಯನ್ನು ಅದರ ನೋವು ನಲಿವುಗಳೆಲ್ಲದರ ಸಮೇತ ವಾಗಿ ಪೂರ್ತಿಯಾಗಿ ಸ್ವೀಕರಿಸು. ಅಸಾಧ್ಯಕ್ಕಾಗಿ ಹಾತೊರೆಯಬೇಡ . ಜೀವನ ಪೂರ್ತಿ ಸಂತೋಷವೇ ಇರಬೇಕು , ನೋವು ದುಃಖ ಇರಬಾರದು ಎಂಬ ಆಸೆಯಲ್ಲಿ ಆಕಾಂಕ್ಷೆಯಲ್ಲಿ ತೊಳಲಾಡಬೇಡ . ಆನಂದ ಮಾತ್ರ ಇರಲು ಸಾಧ್ಯವಿಲ್ಲ . ಅದಕ್ಕೆ ವಿಪರೇತವಾದುದೂ ಇರಬೇಕಾಗುವುದು . ವ್ಯಸನ ಕಪ್ಪು ಹಲಗೆಯಾದಾಗಲೇ ಹರ್ಷ ಎಂಬುದು ಸ್ಪಷ್ಟವಾಗಿ ಹೊಳೆಯುವುದು , ಕಾರ್ಗತ್ತಲ ಆಗಸದಲ್ಲಿ ನಕ್ಷತ್ರಗಳು ಹೊಳೆದಂತೆ , ಕತ್ತಲು ದಟ್ಟವಾದಷ್ಟೂ ನಕ್ಷತ್ರಗಳು ಮಿರಮಿರನೆ ಮಿಂಚುವುದು . ಹಗಲಿನಲ್ಲಿ ನಕ್ಷತ್ರಗಳು ಮಾಯವಾಗಿಬಿಡುವುದಿಲ್ಲ . ಅವು ಅಗೋಚರವಾಗಿ ಇರುತ್ತವೆಯಷ್ಟೇ*




*ಸಾವೇ ಇಲ್ಲದ ಜೀವನವನ್ನು ಊಹಿಸಿಕೋ , ಆಗ ಅದು ತಡೆಯಲಾಗದ ಯಾತನೆ , ಅಸಹನೀಯ ಇರುವಿಕೆ ಆಗುವುದು . ಸಾವು ಇಲ್ಲದೆ ಜೀವಿಸುವುದು ಅಸಾಧ್ಯವಾಗುವುದು . ಸಾವು ಜೀವನವನ್ನು ರೂಪಿಸುತ್ತದೆ . ಅದಕ್ಕೊಂದು ತೀಕ್ಷ್ಣತೆಯನ್ನು ತೀವ್ರತೆಯನ್ನು ಕೊಡುತ್ತದೆ . ಜೀವನ ಕಳೆದು ಹೋಗುತ್ತಿದೆ ಆದ್ದರಿಂದ ಪ್ರತಿ ಕ್ಷಣ ಅಮೂಲ್ಯ ಆಗುವುದು . ಪ್ರತಿಯೊಬ್ಬರ ಜೀವನ ಶಾಶ್ವತ ಆಗಿದ್ದಿದ್ದರೆ ಆಗ ಯಾರು ತಾನೇ ಜೀವನಕ್ಕೆ ಮೌಲ್ಯ ಕೊಡುತ್ತಿದ್ದರು ? ನಾಳೆಗಾಗಿ ನೀವು ನಿರಂತರ ಕಾದಿರಬಹುದಿತ್ತು . ಆಗ ಯಾರು ತಾನೇ ಈಗ-ಇಲ್ಲಿ ಜೀವಿಸುತ್ತಿದ್ದರು ? ನಾಳೆ ಸಾವು ಇದೆ ಎಂಬುದು ಈಗ-ಇಲ್ಲಿ ಜೀವಿಸಲು ಒತ್ತಾಯಿಸುವುದು . ನೀನು ಈ ಕ್ಷಣದಲ್ಲಿ ಧುಮುಕಬೇಕಾಗುವುದು ಅದರ ಅತ್ಯಾಳಕ್ಕೆ ಇಳಿಯಬೇಕು. ಯಾಕೆಂದರೆ ಯಾರಿಗೆ ಗೊತ್ತು ಮುಂದಿನ ಕ್ಷಣ ಬರಬಹುದು. ಬಾರದೆಯೂ ಇರಬಹುದು .*