Thursday, 29 December 2016

ಮೂಗುತಿ ಧರಿಸುವುದರಿಂದಾಗುವ ಲಾಭಗಳು

*ಮೂಗುತಿ ಧರಿಸುವುದರಿಂದಾಗುವ ಲಾಭಗಳು*


೧. ‘ಮೂಗುತಿಯನ್ನು ಧರಿಸುವುದರಿಂದ ಮೂಗಿನ ಬಿಂದುವಿನ ಮೇಲೆ ಒತ್ತಡವು ನಿರ್ಮಾಣವಾಗಿ ‘ಬಿಂದುಒತ್ತಡದ (ಆಕ್ಯುಪ್ರೆಶರ್)’ ಉಪಚಾರವಾಗುವುದರಿಂದ ಅಲ್ಲಿನ ಕಪ್ಪು ಶಕ್ತಿಯು ಕಡಿಮೆಯಾಗುತ್ತದೆ.

 ೨. ಕೆಟ್ಟ ಶಕ್ತಿಗಳಿಂದ ಉಸಿರಾಟದ ಮಾರ್ಗದಿಂದ ಹಲ್ಲೆಯಾಗದಂತೆ ಮೂಗುತಿಯು ಮೂಗು ಮತ್ತು ಶ್ವಾಸಮಾರ್ಗವನ್ನು ರಕ್ಷಿಸುತ್ತದೆ.’ ೩. ‘ಮೂಗುತಿಯಲ್ಲಿರುವ ಸಾತ್ತ್ವಿಕತೆ ಮತ್ತು ಚೈತನ್ಯದಿಂದ ಮೂಗಿನ ಸುತ್ತಲೂ ಚೈತನ್ಯದ ವಲಯವು ನಿರ್ಮಾಣವಾಗುತ್ತದೆ ಮತ್ತು ಮೂಗಿನ ಸುತ್ತಲಿನ ವಾಯುಮಂಡಲವು ಶುದ್ಧವಾಗುತ್ತದೆ. ಇದರಿಂದ ಶ್ವಾಸಮಾರ್ಗದಿಂದ ಶುದ್ಧಗಾಳಿಯು ದೇಹವನ್ನು ಪ್ರವೇಶಿಸಬಲ್ಲದು.’

*ಸ್ತ್ರೀಯರಿಗೆ ಮಾತ್ರ ಮೂಗುತಿ ಹಾಕಲು ಹೇಳಿರುವುದರ ಹಿಂದೆಯೂ ಶಾಸ್ತ್ರವಿದೆ.*

ಸ್ತ್ರೀಯರ ಮನಸ್ಸು ಚಂಚಲವಾಗಿರುತ್ತದೆ. ಮೂಗುತಿಯನ್ನು ಧರಿಸುವುದರಿಂದ ಸ್ತ್ರೀಯರ ಚಂದ್ರನಾಡಿ ಕಾರ್ಯನಿರತವಾಗಿ ಮನಸ್ಸು ಸ್ಥಿರವಾಗುತ್ತದೆ. ಸ್ತ್ರೀಯರು ಯಾವುದೇ ಕಾರ್ಯವನ್ನು ಮಾಡುವಾಗ ಯೋಗ್ಯ ನಿರ್ಣಯ ತೆಗೆದುಕೊಳ್ಳಲು ಅನುಕೂಲವಾಗುತ್ತದೆ.


 ಇದರಿಂದಲೇ ಹಿಂದೂ ಧರ್ಮದ ಮಹಾನತೆಯು ಗಮನಕ್ಕೆ ಬರುತ್ತದೆ! ಹಿಂದೂ ಧರ್ಮವು ಪ್ರತಿಯೊಂದು ವಿಷಯದಿಂದ ಅಂದರೆ ಆಚಾರಧರ್ಮದಿಂದ ಮಾನವನಿಗೆ ಆಧ್ಯಾತ್ಮಿಕ, ಶಾರೀರಿಕ ಮತ್ತು ಮಾನಸಿಕವಾಗಿ ಯೋಗ್ಯವಾದ ಕೃತಿಯನ್ನೇ ಮಾಡಲು ಕಲಿಸುತ್ತದೆ. ಮನುಷ್ಯನಿಗೆ ಅದರ ಶಾಸ್ತ್ರ ತಿಳಿಯದಿದ್ದರೂ, ಶ್ರದ್ಧೆಯಿಂದ ಅದೇ ರೀತಿ ಪಾಲನೆ ಮಾಡಿದರೆ ಅವನ ಐಹಿಕ ಮತ್ತು ಪಾರಮಾರ್ಥಿಕ ಜೀವನವು ಆನಂದದಲ್ಲಿರುವುದು. ಇದಕ್ಕೆ ಸಂದೇಹವೇ ಇಲ್ಲ. 

Monday, 14 November 2016

ಸರ್ಕಾರಿ ಕಾರ್ನರ್





































Karma ;

 Thought of the Day


karma ; No need for revenge. Just sit back and wait .Those who hurt you will screw up themselves and if you are lucky . God will let you watch .

🔸🔹🔸🔹🔸🔹🔸🔹🔸
Always ask God what you deserve … And not what you desire….

Because your desires may be few ….

But you deserve a lot more …….

ನಾವೇಕೆ ಹೀಗೆ ... ?

☘ನಾವೇಕೆ ಹೀಗೆ ... ?☘


ಮನುಷ್ಯನ ಮನಸ್ಸು ಎಂಬುದು ಅತೀ ಸೂಕ್ಷ್ಮ. ನಾವು ಮಾನಸಿಕವಾಗಿ ಸದೃಡವಾಗಿದ್ದೇವೆ ಎಂದು ಏನೇ ಹೇಳಿಕೊಂಡು ಓಡಾಡಬಹುದು. ಆದರೆ ಜೀವನದಲ್ಲಿ ಬರುವ ಘಟನೆಗಳು, ವ್ಯಕ್ತಿಗಳು, ಸಂಧರ್ಭಗಳು ನಮ್ಮ ಮನೋಸ್ಥೈರ್ಯವನ್ನು ನಿರ್ಧರಿಸುತ್ತದೆ. ಅದಾವುದೋ ಒಂದು ಸಂಧರ್ಭದಲ್ಲಿ ಮಾನಸಿಕವಾಗಿ ನಾವು ಕುಗ್ಗಬಹುದು ಅಥವಾ ಹಿಗ್ಗಿ ಮಹತ್ವವಾದದ್ದನ್ನು ಸಾಧಿಸಬಹುದು.
ನಾನಿಲ್ಲಿ ಹೇಳಲು ಹೊರಟಿರುವ ವಸ್ತುವೆಂದರೇ ನಮ್ಮ ಈ ಎರಡು ರೀತಿಯ ಬದಲಾವಣೆ ಜೊತೆಗೆ ಬದಲಾಗುವ ಸಮಾಜದ ಪ್ರತಿಕ್ರಿಯೆ.

ವ್ಯಕ್ತಿಯೊಬ್ಬ ಮಹತ್ವವಾದದನ್ನು ಸಾಧಿಸಿ ಪ್ರಸಿದ್ದಿಹೊಂದಿದಾಗ ಸಮಾಜ ಆ ವ್ಯಕ್ತಿಯೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡುತ್ತದೆ. ವ್ಯಕ್ತಿಯ ಹೆಸರನ್ನು ಉಪಯೋಗಿಸಿಕೊಂಡು ಲಾಭಹೊಂದುವವರೂ ಇದ್ದಾರೆ. ಅದೇ ಅಮಲಿನಲ್ಲಿ ತನ್ನ ಹಿನ್ನಲೆಯಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ಗಮನಿಸದಿದ್ದರೆ ಅವನು ಮತ್ತೆ ಅಧಃಪತನಕ್ಕೆ ಇಳಿಯುತ್ತಾನೆ. ಆ ಸಂಧರ್ಭದಲ್ಲಿ ಇದೇ ಸಮಾಜ ಆ ವ್ಯಕ್ತಿಯನ್ನು ಧೂಷಿಸುತ್ತದೆ.

ಅದೇ ವ್ಯಕ್ತಿ ಮಾನಸಿಕವಾಗಿ ಕುಗ್ಗಿದಾಗ, ಅವನೊಂದಿಗೆ ಯಾರು ಬರುವುದಿಲ್ಲ, ಅವನಾಗೆ ತಿಳಿದುಕೊಂಡು ಮನಸ್ಸನ್ನು ಕಲ್ಲಾಗಿಸಿಕೊಂಡು ಒಬಂಟಿಗನಾಗಿ ಹೊರಬಂದರೆ ಅವನಿಗೆ ಸಮಾಜದಲ್ಲಿ ಗೌರವ. ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು, ಪರಸ್ಪರ ಸಹಾಯಕವಾಗಿ ಮುಂದೆಬರಲು ನಾವೇಕೆ ಒಪ್ಪಿಕೊಳ್ಳುವುದಿಲ್ಲ ?
ನಮ್ಮ ಮನಸ್ಸು ಬಯಸುವಂತೆ, ನಾವು ಯರನ್ನಾದರೂ ಅರ್ಥಮಾಡಿಕೊಳ್ಳುವುದರಲ್ಲಾಗಲಿ, ನಮ್ಮನ್ನು ಅರ್ಥಮಾಡಿಕೊಳ್ಳಬೇಕು ಎಂದು ಬಯಸುವುದರಲ್ಲಿ ಎನು ತಪ್ಪಿದೆ ? ನಾನು, ನನ್ನಿಂದ ಎನುವುದಕ್ಕಿಂತ ನಾವು, ನಮ್ಮಿಂದ, ನಮ್ಮೊಟ್ಟಿಗೆ ಎಂದು ಹೇಳಿಕೊಳ್ಳುವುದರಲ್ಲಿರುವ ಸುಖ ನಮಗೆ ಯಾಕೆ ಅರ್ಥವಾಗುತ್ತಿಲ್ಲ ?

ಮನೋರೋಗಿಯ ಸ್ಥಿತಿ ಸಹಜವಾಗಲು ಹಲವು ಕಾರಣವಿರುತ್ತದೆ. ಅವರು ಇರುವ ಪರಿಸರ, ಅವರನ್ನು ನೋಡಿಕೊಳ್ಳುವ ರೀತಿ, ಅವರ ಸುತ್ತ ನಡೆಯುವ ಘಟನೆಗಳು, ಹೀಗೆ ವಿವರಿಸಬಹುದು. ಹುಷಾರಾಗಿ ಬಂದ ವ್ಯಕ್ತಿಗೆ ತಾನು ಹುಷಾರಾಗಲು ಪ್ರಭಾವ ಬೀರಿದ ಕೊನೆಯ ವ್ಯಕ್ತಿ ಅಥವ ಘಟನೆ ಮಾತ್ರವೇ ಮನಸ್ಸಿನಲ್ಲಿ ನಿಲ್ಲುತ್ತದೆ. ಆ ವ್ಯಕ್ತಿ / ಘಟನೆಯನ್ನು ಪದೇ, ಪದೇ ಮೆಲಕುಹಾಕಬಹುದು. ಅದರ ಬಗ್ಗೆಯೇ ಹೆಚ್ಚು ಮಾತಾಡಲೂಬಹುದು. ಅದು ತಪ್ಪಾ ?
ಆದರೆ ಯಾವುದಾದರು ಕಾರಣದಿಂದ ಆತ ಸರಿಹೋದ ಎಂದು ಯೋಚಿಸಿ ಸಂತೋಷಪಡುವ ಬದಲು, ನನ್ನ ಕಾರಣದಿಂದ ಯಾಕೆ ಸರಿಹೋಗಲಿಲ್ಲ ಎಂದು ಯೋಚಿಸುತ್ತಾರಲ್ಲ ಯಾಕೆ ?
ಸಮಾಜಕ್ಕೆ ವ್ಯಕ್ತಿಯೊಬ್ಬ ಸರಿಹೋಗುವುದು ಮುಖ್ಯವೋ ಅಥವ ತಮ್ಮ ದೆಸೆಯಿಂದ ಎಂಬ ಪ್ರತಿಷ್ಟೆ ಮುಖ್ಯವೋ ತಿಳಿಯುತ್ತಿಲ್ಲ. ನಾನು, ನನ್ನಿಂದ ಎಂಬುದು ಸ್ವಾರ್ಥ ಭಾವ ಎಂದು ಈ ಸಮಾಜಕ್ಕೆ ಯಾಕೆ ಅರ್ಥವಾಗುತ್ತಿಲ್ಲ ?
ಇಂತಹ ಸ್ವಾರ್ಥ ಭಾವ ನನ್ನಲ್ಲಿ ಬೆಳೆಯಕೂಡದು ಎಂದೆನ್ನಿಸಿ "ಎಲ್ಲರೊಳಗೊಂದಾಗು ಮಂಕುತಿಮ್ಮ" ಅಂತಲ್ಲದಿದ್ದರೂ ಕಡೇ ಪಕ್ಷ ಯಾರಾದರು ಒಬ್ಬರಿಗೆ ನನನ್ನು ನಾನು ಅರ್ಪಿಸಿಕೊಳ್ಳೋಣವೆಂದರೇ ಸಮಾಜ ನನ್ನನ್ನು ಯಾಕೆ ಒಪ್ಪಿಕೊಳ್ಳುತ್ತಿಲ್ಲ ?

ಬಹುದಿನಗಳಿಂದ ನನ್ನನ್ನು ಕಾಡುತ್ತಿರುವ ಪ್ರಶ್ನೆ ನಾವ್ಯಾಕೆ ಹೀಗೆ ?

Karthik Kashyap
💫💫💫💫💫💫💫💫💫

ಶ್ರೀ ಕನಕ ದಾಸರು

ಶ್ರೀ ಕನಕ ದಾಸರು

ಶ್ರೀ ಕನಕದಾಸರು[ತಿಮ್ಮಪ್ಪನಾಯಕ] (1509-1609) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರು ದಂಡನಾಯಕರಾಗಿದ್ದು ಯುದ್ದವೊಂದರಲ್ಲಿ ಸೋತ ಅವರಿಗೆ ಉಪರತಿ/ವೈರಾಗ್ಯ ಉಂಟಾಗಿ, ಹರಿಭಕ್ತರಾದರಂತೆ.


ಜೀವನ

ಜನನ

ಕನಕದಾಸರು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ 1487ರಲ್ಲಿ ಕುರುಬ ಗೌಡ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು.

ಸಾಧನೆ

ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಯದಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಇವರ ಕೀರ್ತನೆಗಳ ಅಂಕಿತ ಕಾಗಿನೆಲೆಯ ಆದಿಕೇಶವರಾಯ. ===ಕನಕನ ಕಿಂಡಿ

ಅನೇಕರ ನಂಬಿಕೆಯಂತೆ ಉಡುಪಿಯ ದೇವಸ್ಥಾನದಲ್ಲಿ ಅವರಿಗೆ ಪ್ರವೇಶ ದೊರೆಯದೆ ಹೋದಾಗ ದೇವಸ್ಥಾನದ ಹಿಂದೆ ನಿಂತು ಹಾಡತೊಡಗಿದರಂತೆ ("ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ"). ಆಗ ಹಿಂಭಾಗದ ಗೋಡೆ ಒಡೆದು ಕೃಷ್ಣನ ವಿಗ್ರಹ ಹಿಮ್ಮುಖವಾಗಿ ತಿರುಗಿತಂತೆ. (ಈಗಲೂ ಉಡುಪಿ ಕೃಷ್ಣನ ದೇವಸ್ಥಾನದ ಹಿಂದುಗಡೆಯ ಗೋಡೆಯಲ್ಲಿರುವ ಬಿರುಕಿನಲ್ಲಿ ಶ್ರೀಕೃಷ್ಣನ ಕಾಣಬಹುದು. ಇಲ್ಲಿ ಒಂದು ಕಿಟಕಿಯನ್ನು ನಿರ್ಮಿಸಿ ಅದನ್ನು 'ಕನಕನ ಕಿಂಡಿ' ಎಂದು ಕರೆಯಲಾಗಿದೆ).

ಉಡುಪಿಯ ಕನಕನ ಕಿಂಡಿಯ ಬಗ್ಗೆ ಸ್ವತಃ ಕನಕದಾಸರ ಕೃತಿಗಳಲ್ಲಾಗಲೀ ಇತರೆ ಕೃತಿಗಳಲ್ಲಾಗಲೀ ಮಠದ ದಾಖಲೆಗಳಲ್ಲಾಗಲೀ ಚರಿತ್ರೆಯ ಪುಟಗಳಲ್ಲಾಗಲೀ ಶಾಸನಗಳಲ್ಲಾಗಲೀ ಎಲ್ಲಿಯೂ ಪ್ರಸ್ತಾಪವಾಗಿಲ್ಲ.ಇನ್ನು ಉಡುಪಿಯ ಆ ದೇವಾಲಯವಾದರೋ ಆಗಮಾದಿಗಳಲ್ಲಿ ಹೇಳಿರುವ ವಾಸ್ತುವಿನ್ಯಾಸದನ್ವಯ ಕಟ್ಟಿಯೂ ಇಲ್ಲ. ಅಲ್ಲಿ ಬಲಿಕಲ್ಲು, ಧ್ವಜಸ್ತಂಭ, ಅಂತರಾಳ, ಅರ್ಧಮಂಟಪ, ಪ್ರದಕ್ಷಿಣಾಪಥಗಳೂ ಇಲ್ಲ. ಇನ್ನು ಪ್ರಾಣದೇವರ ಪ್ರತಿಷ್ಠಾಪನೆಯೂ ವಿಭಿನ್ನವೇ.ಉಡುಪಿಯ ಶ್ರೀಕೃಷ್ಣ ವಿಗ್ರಹವನ್ನು ಮಧ್ವಾಚಾರ್ಯರು ಕ್ರಿಸ್ತ ಶಕ ೧೨೩೮ (ಶಕವರ್ಷ ೧೧೬೦ ಹೇವಿಳಂಬಿ ಸಂವತ್ಸರ ಮಾಘ ಶುದ್ಧ ತದಿಗೆ) ನೇ ವರ್ಷದಲ್ಲಿ ಪಶ್ಚಿಮಾಭಿಮುಖಿಯಾಗಿ ಪ್ರತಿಷ್ಠೆ ಮಾಡಿದ್ದರಾಗಲೀ ಪೂರ್ವಾಭಿಮುಖವಾಗಿ ಅಲ್ಲ. ತಮಗೆ ಪಶ್ಚಿಮ ಸಮುದ್ರದಿಂದ ಲಭ್ಯವಾದ ಆ ಮೂರ್ತಿಯನ್ನು ಪಶ್ಚಿಮಕ್ಕೇ ಮುಖ ಮಾಡಿ ಪ್ರತಿಷ್ಠಾಪಿಸಿ ಪಶ್ಚಿಮ ಸಮುದ್ರಾಧೀಶ್ವರನನ್ನಾಗಿ ಕರೆದರೆನ್ನುವುದೇ ಸತ್ಯಸ್ಯ ಸತ್ಯ. ಇದಕ್ಕೆ ದಾಖಲೆಯಾಗಿ ಕನಕದಾಸರ ಸಮಕಾಲೀನರಾದ ಸುರೋತ್ತಮ ತೀರ್ಥರ ಹೇಳಿಕೆ.ಅದರ ತಾತ್ಪರ್ಯ ಹೀಗಿದೆ: 'ದೇವತಾ ವಿಗ್ರಹಗಳನ್ನು ಪೂರ್ವಾಭಿಮುಖಿಯಾಗಿಯೇ ಸ್ಥಾಪಿಸಬೇಕೆಂಬ ನಿಯಮ ಏನೂ ಇಲ್ಲ. ಆದ್ದರಿಂದಲೇ ಮಧ್ವರು ಈ ಕೃಷ್ಣನ ಪ್ರತಿಮೆಯನ್ನು ಪಶ್ಚಿಮಾಭಿಮುಖಿಯಾಗಿ ಸ್ಥಾಪಿಸಿದ್ದಾರೆ". ಮಧ್ವರು ಶ್ರೀಕೃಷ್ಣಪಾದಾಂಬುಜಾರ್ಚಕರಾಗಿ ತಮ್ಮ ಮತ್ತು ತಮ್ಮ ಎಂಟು ಮಂದಿ ಶಿಷ್ಯರು ಮತ್ತು ಅವರ ಪರಂಪರೆಯವರ ನಿತ್ಯಾರ್ಚನೆಗಾಗಿ ಸ್ಥಾಪಿಸಿದ ಮೂರ್ತಿ ಇದು. ಈ ಮೂರ್ತಿ ಮತ್ತು ಅದರ ಅರ್ಚನೆ ಮಠದ ಖಾಸಗಿ ಕ್ರಿಯೆಗಳಾಗಿದ್ದು ಸಾರ್ವಜನಿಕರಿಗೆ ತೆರೆದಿಟ್ಟದ್ದಲ್ಲ.ವಾದಿರಾಜರು, ಪುರಂದರದಾಸರು, ಕನಕದಾಸರು ತ್ರಿವೇಣೀ ಸಂಗಮದಂತೆ. ಅವರು ಮೂರು ಮಂದಿಯೂ ಒಂದೇ ಓರಗೆಯವರು, ಒಂದೇ ಮನಸ್ಸಿನವರು, ಸಮಕಾಲೀನರು, ಪರಸ್ಪರ ಗೌರವಾದರಗಳನ್ನು ಹೊಂದಿದ್ದವರು. ಪ್ರತಿಯೊಬ್ಬರಿಗೂ ಇನ್ನಿಬ್ಬರ ಪ್ರೌಢಿಮೆ ಔನ್ನತ್ಯಗಳ ಅರಿವಿ ತ್ತು. ೧೨೦ ವರ್ಷಗಳ ಕಾಲ ಬದುಕಿದ್ದ ವಾದಿರಾಜ(೧೪೮೦-೧೬೦೦)ರಿಗೆ ತಮ್ಮ ಮಠದಲ್ಲಿ ಸರ್ವಾಂಗೀಣ ಸುಧಾರಣೆ ತರುವ ತವಕ ಇತ್ತಾದರೂ ಅಲ್ಲಿ ಭದ್ರವಾಗಿ ಬೇರೂರಿದ್ದ ಮಡಿವಂತಿಕೆಯನ್ನು ಹೋಗಲಾಡಿಸಲು ಅವರಿಂದಾಗಿರಲಿಲ್ಲ. ವಾದಿರಾಜರೊಂದಿಗೆ ತಮಗಿದ್ದ ಸ್ನೇಹವನ್ನು ದುರುಪಯೋಗ ಪಡಿಸಿಕೊಂಡು ಮಠದಲ್ಲಿ ಪ್ರವೇಶ ಪಡೆಯುವ ಧಾರ್ಷ್ಟ್ಯವೂ ಕನಕರಿಗಿರಲಿಲ್ಲ.ಹೀಗೆ ಕನಕದಾಸರ ಸಾಹಿತ್ಯಕೃತಿಗಳು, ಅವರ ಬಗೆಗಿನ ಐತಿಹ್ಯಗಳು, ಅವರ ಕುರಿತು ಇತರೇ ಸಾಹಿತ್ಯಗಳಲ್ಲಿ ಅಥವಾ ಶಾಸನಗಳಲ್ಲಿನ ಮಾಹಿತಿಗಳನ್ನು ಕ್ರೋಢೀಕರಿಸಿ ಕನಕದಾಸರ ಸ್ಥೂಲ ಜೀವನ ಚಿತ್ರಣವನ್ನು ರಚಿಸಬಹುದಲ್ಲದೆ ಪರಿಪೂರ್ಣ ಜೀವನಚರಿತ್ರೆಯ ನಿರೂಪಣೆ ಸಾಧ್ಯವಿಲ್ಲದ ಮಾತು. ಆದರೆ ವಿದ್ವತ್ ನೆಲೆಯಲ್ಲಿ ವಿದ್ವತ್ಸಂಪನ್ನ ಕನಕದಾಸರು ಕುಲಾತೀತರಾಗಿ ಕಾಲಾತೀತರಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಅದ್ವೀತಿಯ ಸ್ಥಾನಗಳಿಸಿ, ಚಿರಸ್ಮರಣೀಯರಾಗಿದ್ದಾರೆ.



ಸಾಹಿತ್ಯ ರಚನೆ

ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ. ಅವರ ಐದು ಮುಖ್ಯ ಕಾವ್ಯಕೃತಿಗಳು ಇಂತಿವೆ:

ಮೋಹನತರಂಗಿಣಿನಳಚರಿತ್ರೆರಾಮಧಾನ್ಯ ಚರಿತೆಹರಿಭಕ್ತಿಸಾರನೃಸಿಂಹಸ್ತವ (ಉಪಲಬ್ದವಿಲ್ಲ)

ಮೋಹನತರಂಗಿಣಿ

ಮೋಹನತರಂಗಿಣಿಯು 42 ಸಂಧಿಗಳಿಂದ ಕೂಡಿದ್ದು ಸಾಂಗತ್ಯದಲ್ಲಿ ರಚಿತವಾಗಿರುವ 2700 ಪದ್ಯಗಳಿವೆ. ಮೋಹನತರಂಗಿಣಿಯಲ್ಲಿ ಕನಕದಾಸರು ಕೃಷ್ಣಚರಿತ್ರೆಯನ್ನು ಹೇಳುತ್ತಾ ತಮ್ಮ ಅಧಿರಾಜ ಕೃಷ್ಣದೇವರಾಯನನ್ನೇ ಕೃಷ್ಣನಿಗೆ ಹೋಲಿಸುತ್ತಾರೆ. ಅವರ ದ್ವಾರಕಾಪುರಿ ಸ್ವಯಂ ವಿಜಯನಗರವೇ ಆಗಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಮೋಹನತರಂಗಿಣಿ ಅಥವಾ ಕೃಷ್ಣಚರಿತೆ ಎಂಬ ಈ ಕಾವ್ಯದಲ್ಲಿ ಕನಕದಾಸರ ಸಮಕಾಲೀನ ಜೀವನ ಚಿತ್ರಗಳು ಹಾಗೂ ಪೌರಾಣಿಕ ಕಥೆಗಳು ಅಚ್ಚಗನ್ನಡದಲ್ಲಿ ನಿರೂಪಿತವಾಗಿವೆ. ದಣ್ಣಾಯಕನಾಗಿ ಕನಕ ಆಗಾಗ್ಗೆ ರಾಜಧಾನಿ ವಿಜಯನಗರಕ್ಕೆ ಹೋಗಬೇಕಾಗಿತ್ತು. ವಿಜಯನಗರ ಸಾಮ್ರಾಜ್ಯದ ರಾಜವೈಭವ, ರಾಜಸಭೆ, ರಾಜಪರಿವಾರದ ಸರಸ ಸುಮ್ಮಾನ, ಶೃಂಗಾರ ಜೀವನ, ಜಲಕ್ರೀಡೆ, ಓಕುಳಿಯಾಟ, ನವರಾತ್ರಿ, ವಿಜಯನಗರದ ಪುರರಚನೆ, ಉದ್ಯಾನವನ, ಪ್ರಜೆಗಳ ವೇಷಭೂಷಣ, ರಾಜ್ಯದ ಯುದ್ಧ ವಿಧಾನ ಇತ್ಯಾದಿಗಳು ಅವನ ಮನಸೂರೆಗೊಂಡಿದ್ದವು. ಕವಿ ಮನಸಿನ ಕನಕ ತನ್ನ ಅನುಭವವನ್ನೆಲ್ಲ ಬರಹ ರೂಪಕ್ಕೆ ತಂದ. ಆ ಬರಹವೇ ಇಂದು ನಮಗೆ ಲಭ್ಯವಿರುವ ಮೋಹನತರಂಗಿಣಿ. ಕನಕನ ಯೌವನ ಕಾಲದಲ್ಲಿ ರಚಿತವಾದ ತರಂಗಿಣಿಯ ಒಡಲಲ್ಲಿ ಯುದ್ಧದ ವರ್ಣನೆಗಳು ಹೆಚ್ಚೆನ್ನಬಹುದು. ಏಕೆಂದರೆ ಕನಕ ಸ್ವತಃ ಕಲಿಯಾಗಿದ್ದವನೇ ತಾನೇ? ಶಂಬರಾಸುರ ವಧೆ, ಬಾಣಾಸುರ ವಧೆ, ಹರಿಹರ ಯುದ್ಧ ಹೀಗೆ ವೀರರಸ, ರೌದ್ರರಸ ಕಾವ್ಯದಲ್ಲಿ ಮೇಳೈಸಿವೆ.

ಸೋಮಸೂರಿಯ ವೀಥಿಯ ಇಕ್ಕೆಗಳಲಿಹೇಮ ನಿರ್ಮಿತ ಸೌಧದೋಳಿರಮಣೀಯತೆವೆತ್ತ ಕಳಸದಂಗಡಿಯಿರ್ದುಂವಾ ಮಹಾ ದ್ವಾರಕಾಪುರದೇಓರಂತೆ ಮರಕಾಲರು ಹಡಗಿನ ವ್ಯವಹಾರದಿ ಗಳಿಸಿದ ಹಣವಭಾರ ಸಂಖ್ಯೆಯಲಿ ತೂಗುವರು ಬೇಡಿದರೆ ಕುಬೇರಂಗೆ ಕಡವ ಕೊಡುವರು
ಕೀರ್ತನೆಗಳು

ಕನಕದಾಸರು 316 ಕೀರ್ತನೆಗಳನ್ನು ರಚಿಸಿದ್ದಾರೆ. ಕನಕದಾಸರ ಭಕ್ತಿ ಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಶ್ರೀಹರಿಯನ್ನು ತಮ್ಮ ಧಣಿಯಾಗಿ, ಇನಿಯನಾಗಿ, ಅಣೋರಣೀಯನಾಗಿ, ಮಹತೋಮಹೀಮನಾಗಿ ಅವರು ಕಂಡಿದ್ದಾರೆ. 'ಬಾ ರಂಗ ಎನ್ನ ಮನಕೆ ಎಂದು ಹೃದಯ ಸದನಕ್ಕೆ 'ಎಂದು ಕರೆದು ನೆಲೆ ನಿಲ್ಲಿಸಿಕೊಂಡ ಅನುಭಾವ ಅವರದು. ಒಳಗಣ್ಣಿನಿಂದ ಅವನ ಕಂಡು- 'ಕಂಡೆ ನಾ ತಂಡ ತಂಡ ಹಿಂಡು ದೈವ ಪ್ರಚಂಡ ರಿಪು ಗಂಡ ಉದ್ಧಂಡ ನರಸಿಂಹನ' ಎಂದು ಸಂತೋಷಪಟ್ಟಿದ್ದಾರೆ. 'ಎಲ್ಲಿ ನೋಡಿದರಲ್ಲಿ ರಾಮ' ಎಂಬ ಅನುಭೂತಿಯಲ್ಲಿ ಹರಿಯನ್ನು ಕಂಡ ಬಳಿಕ 'ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು' ಎಂಬ ಧನ್ಯತಾಭಾವ. 'ದಾಸದಾಸರ ಮನೆಯ ದಾಸಿಯರ ಮಗ ಮಂಕುದಾಸ ಮರುಳುದಾಸ ನರಜನ್ಮಹುಳು ಪರಮಪಾಪಿ' ಎಂದು ಕರೆದುಕೊಂಡಿದ್ದ ಅವರು ಜೀವ ಮಾಗಿ ಹಣ್ಣಾದಂತೆ ಪರಮಾತ್ಮನ ಸಾಕ್ಷಾತ್ಕಾರವಾದಂತೆ 'ಆತನೊಲಿದ ಮೇಲೆ ಇನ್ಯಾತರ ಕುಲವಯ್ಯಾ' ಎಂದುಕೊಳ್ಳುತ್ತಾರೆ.

ಜೈನ, ವೀರಶೈವರ ಕಿತ್ತಾಟ, ಮುಸಲ್ಮಾನ ಪ್ರಾಬಲ್ಯ ಇವುಗಳಿಂದ ಸೊರಗಿ ಹೋಗಿದ್ದ ವೈದಿಕ ಧರ್ಮಕ್ಕೆ ಪುನಶ್ಚೇತನ ನೀಡಲು ವ್ಯಾಸರಾಯರಂಥವರು ಶ್ರಮಿಸುತ್ತಿದ್ದ ಕಾಲವದು. ವೈದಿಕ ಸಂಸ್ಕೃತಿಯ ಉತ್ಥಾನಕ್ಕೆಂದು ಹುಟ್ಟು ಹಾಕಲಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಅಳಿವಿನ ನಂತರ ಪತನದ ಹಾದಿ ಹಿಡಿದಿತ್ತು. ಇಂಥಲ್ಲಿ ಕನಕದಾಸರಂಥವರ ಕಾವ್ಯಕೃಷಿ ಹಾಗೂ ಸಾರ್ವಜನಿಕ ಜೀವನ ವ್ಯಾಸರಾಯರಿಗೆ ಬೆಂಬಲದ ಶ್ರೀರಕ್ಷೆಯಾಗಿದ್ದವು.

'ನಾವು ಕುರುಬರು ನಮ್ಮ ದೇವರು ಬೀರಯ್ಯ ಕಾವ ನಮ್ಮಜ್ಜ ನರಕುರಿ ಹಿಂಡುಗಳ' ಎಂದು ವಿನೀತ ಜಾತಿ ಭಾವನೆ ತೋರಿದ್ದ ಕನಕದಾಸರು ವ್ಯಾಸರಾಯರ ಸಂಪರ್ಕದ ನಂತರ 'ಕುಲಕುಲಕುಲವೆಂದು ಹೊಡೆದಾಡದಿರಿ' ಎಂದು ಜಂಕಿಸಿ ಕೇಳುವ ಹಾಗಾದರು.

ಇಂಥ ನಡವಳಿಕೆಗಳಿಂದ ವೈದಿಕ ಧರ್ಮದ ಗುತ್ತಿಗೆ ತಮ್ಮದು ಎಂದು ಭಾವಿಸಿದ್ದ ಬ್ರಾಹ್ಮಣರಿಗೆ ಕನಕದಾಸರು ಬಿಸಿ ತುಪ್ಪವಾದರು. ಹಿಂದೂ ಸಮಾಜದಲ್ಲಿ ಈ ಬ್ರಾಹ್ಮಣಬ್ರಾಹ್ಮಣೇತರ ಕಂದರ/ಕ ದೊಡ್ಡದಾಗುತ್ತಾ ಹೋದಂತೆ ವ್ಯಾಸಪೀಠದ ಜೊತೆಗೆ ದಾಸಕೂಟದ ರಚನೆಯೂ ಆಗಬೇಕಾದಂತಹ ಅನಿವಾರ್ಯತೆ ಮೂಡಿತು. ಉಚ್ಚಕುಲದ ಮಾಧ್ವ ಬ್ರಾಹ್ಮಣರು ಶಾಸ್ತ್ರಾಧ್ಯಯನ-ತರ್ಕ-ವ್ಯಾಕರಣಾದಿ ವಿಶಿಷ್ಟ ಜ್ಞಾನಸಂಪನ್ನರಾಗಿ ಶಬ್ದ ಶಬ್ದಗಳನ್ನು ತಿಕ್ಕಿ ತೀಡಿ ನಿಷ್ಪತ್ತಿ ಹಿಡಿದು ಸಿದ್ಧಾಂತ ಪ್ರಮೇಯಗಳನ್ನು ಮಂಡಿಸುವುದೇ ಮುಂತಾದ ಪ್ರಕ್ರಿಯೆಗಳನ್ನು ವ್ಯಾಸಪೀಠದಲ್ಲಿ ನಡೆಯಿಸುತ್ತಿದ್ದರು. ಪುರಂದರದಾಸ, ಕನಕದಾಸ, ಜಗನ್ನಾಥದಾಸ ಮೊದಲಾದವರ ಪ್ರಾತಿನಿಧಿಕ ಸಂಘಟನೆಯೇ ದಾಸಕೂಟ. ಇವರೂ ಮಾಧ್ವ ಮತ ಪ್ರಮೇಯಗಳನ್ನೇ ಪಸರಿಸುತ್ತಾ ಆಚರಿಸುತ್ತಿದ್ದರಾದರೂ ಅವುಗಳನ್ನು ಅರಿಯಲು ಸಂಸ್ಕೃತ ಜ್ಞಾನದ ಅನಿವಾರ್ಯತೆಯನ್ನು ನಿರಾಕರಿಸಿ, ಜಾತಿ ಮತಗಳ ಕಟ್ಟು ಪಾಡಿಲ್ಲದ ಇವರು ಶಾಸ್ತ್ರಾಧ್ಯಯನದ ಅನಿವಾರ್ಯತೆ ಇಲ್ಲದೆ ತಮ್ಮ ಅನುಭಾವದಿಂದ ಹೊರಹೊಮ್ಮುವ ಭಕ್ತಿಭಾವನೆಗಳನ್ನು ತಮ್ಮ ತಾಯ್ನುಡಿಯಲ್ಲಿ ಹಾಡಿ ಲೋಕಪಾವನವನ್ನೂ ಆತ್ಮೋದ್ಧಾರವನ್ನೂ ಮಾಡ ಬೇಕೆನ್ನುವವರು. ಇಂಥಾ ದಾಸಕೂಟವನ್ನು ಹುಟ್ಟುಹಾಕಿ ಪೋಷಿಸಿ ಬೆಳೆಸಿದವರು ವ್ಯಾಸರಾಯರು ಹಾಗೂ ವಾದಿರಾಜರು. ಇಷ್ಟಿದ್ದರೂ ದಾಸಕೂಟ ವ್ಯಾಸಪೀಠಗಳ ನಡುವೆ ಆಗಿಂದಾಗ್ಗೆ ಘರ್ಷಣೆಗಳು ನಡೆದೇ ಇದ್ದವು. ಈ ಕುರಿತು ಕನಕ ಪುರಂದರರ ಕೀರ್ತನೆಗಳೇ ನಮಗೆ ಸೂಚ್ಯವಾಗಿ ಹೇಳುತ್ತವೆ.

ಕುಲಕುಲವೆನ್ನುತಿಹರು ಕುಲವಾವುದು ಸತ್ಯ ಸುಖವುಳ್ಳ ಜನರಿಗೆ .ತೀರ್ಥವನು ಪಿಡಿದವರು ತಿರುನಾಮಧಾರಿಗಳೇಜನ್ಮ ಸಾರ್ಥಕವಿರದವರು ಭಾಗವತರಹುದೇಆವ ಕುಲವಾದರೇನು ಆವನಾದರೇನು ಆತ್ಮಭಾವವರಿತ ಮೇಲೆ .

ಅವರ ಕೀರ್ತನೆಗಳಲ್ಲಿ ಅವರ ಸಂದೇಶ ನೇರ ಮತ್ತು ಖಚಿತ. ಹಾಗೆಯೇ ಅಮೂರ್ತವಾದ ಪ್ರತಿಮಾ ನಿರೂಪಣೆಯಲ್ಲಿ ಪರಿಣತಿ, ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತ ಸಾಹಿತ್ಯಗಳ ಪರಿಚಯವನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು.

ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ

ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊನೀ ದೇಹದೊಳಗೊ, ನಿನ್ನೊಳು ದೇಹವೂಬಯಲು ಆಲಯದೊಳಗೊ, ಆಲಯವು ಬಯಲೊಳಗೊಬಯಲು ಆಲಯವೆರಡು ನಯನದೊಳಗೊನಯನ ಬುದ್ಧಿಯೊಳಗೊ, ಬುದ್ಧಿ ನಯನದೊಳಗೊನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆಸವಿಯು ಸಕ್ಕರೆಯೊಳಗೊ, ಸಕ್ಕರೆಯು ಸವಿಯೊಳಗೊಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊಜಿಹ್ವೆ ಮನಸಿನೊಳಗೊ, ಮನಸು ಜಿಹ್ವೆಯೊಳಗೊಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆಕುಸುಮದೊಳು ಗಂಧವೊ, ಗಂಧದೊಳು ಕುಸುಮವೊಕುಸುಮ ಗಂಧಗಳೆರಡು ಘ್ರಾಣದೊಳಗೊಅಸಮಭವ ಕಾಗಿನೆಲೆಯಾದಿಕೇಶವರಾಯಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೆ

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ

ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ


ಒಡಲು ಹಸಿಯಲು ಅನ್ನವಿಲ್ಲದಲೇ ಇರಬಹುದು

ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು

ಮಡದಿ ಮಕ್ಕಳನೆಲ್ಲಾ ತೊಲಗಿಸಿ ಬಿಡಬಹುದು

ಕಡಲೊಡೆಯ ನಿನ್ನ ಅರೆಘಳಿಗೆ ಬಿಡಲಾಗದು /೧/


ತಾಯಿ ತಂದೆಯ ಬಿಟ್ಟು ತಪವ ಮಾಡಲೂ ಬಹುದು

ದಾಯಾದಿ ಬಂಧುಗಳ ಬಿಡಲೂ ಬಹುದು

ರಾಯ ತಾ ಮುನಿದರೆ ರಾಜ್ಯವನೇ ಬಿಡಬಹುದು

ಕಾಯಜ ಪಿತ ನಿನ್ನ ಅರೆಘಳಿಗೆ ಬಿಡಲಾಗದು /೨/


ಪ್ರಾಣವ ಪರರು ಬೇಡಿದರೆತ್ತಿ ಕೊಡಬಹುದು

ಮಾನದಲಿ ಮನವ ತಗ್ಗಿಸಬಹುದು

ಜಾಣ ನಾಯಕನಾದ ಆದಿಕೇಶವರಾಯ

ಜಾಣ ಶ್ರೀಕೃಷ್ಣಾ ನಿನ್ನ ಅರೆಘಳಿಗೆ ಬಿಡಲಾಗದು /೩/

ರಾಷ್ಟ್ರೀಯ ಶಿಕ್ಷಣ ದಿನಾಚರಣೆ

*ರಾಷ್ಟ್ರೀಯ ಶಿಕ್ಷಣ ದಿನಾಚರಣೆ* ೧೧-೧೧-೨೦೧೬

*TeachersTent*
– ಅಬುಲ್ ಕಲಾಂ ಆಜಾದ್ ರ ಜನ್ಮದಿನವನ್ನು ರಾಷ್ಟ್ರಾದ್ಯಂತ  ಇಂದು ರಾಷ್ಟ್ರೀಯ ಶಿಕ್ಷಣ ದಿನ ಎಂದು ಆಚರಿಸಲಾಗುತ್ತಿದೆ.

-: *ಮೌಲಾನಾ ಅಬುಲ್ ಕಲಾಂ ಆಝಾದ್ :*-

ಯುವಕ ಆಝಾದ್‌ರ ಪ್ರತಿಭೆ ಸಾಧನೆಗಳನ್ನು ಗಮನಿಸಿ ಹುಟ್ಟಿದ ದಿನದಂದೇ ಆಝಾದ್‌ರಿಗೆ ಐವತ್ತು ವರ್ಷ ವಯಸ್ಸು ಆಗಿತ್ತು ಎಂದು ಸರೋಜಿನಿ ನಾಯ್ಡು ಹೇಳಿದ್ದರು. ಆಝಾದ್‌ರ ಕುಟುಂಬ ಭಾರತೀಯ ಮೂಲದ್ದೇ ಆದರೂ ತಂದೆ ಅರೇಬಿಯಾಕ್ಕೆ ಹೋಗಿ ಅಲ್ಲಿಂದಲೇ ಮದುವೆಯಾದ್ದರಿಂದ ಆಝಾದ್‌ರ ಹುಟ್ಟು ಅಲ್ಲೇ ಆಯಿತು. ಭಾರತೀಯ ಖೈರುದ್ದೀನ್ ಹಾಗೂ ಅರೇಬಿಯನ್ ಮಹಿಳೆ ಆಲಿಯಾರ ಪುತ್ರನಾಗಿ ೧೮೮೮ರ ನವೆಂಬರ್ ಮೋಹಿದ್ದೀನ್ ಅಹ್ಮದ್ ಮುಂದೆ ಧಾರ್ಮಿಕ ವಿದ್ವತ್ತಿನಿಂದಾಗಿ ’ಮೌಲಾನಾ’ ಎಂಬುದಾಗಿ ಬಹುಭಾಷೆಗಳ ಪರಿಣಿತಿಯಿಂದಾಗಿ ’ಅಬುಲ್ ಕಲಾಂ’ (ಭಾಷೆಗಳ ಪಿತ) ಎಂಬುದಾಗಿ ತೀವ್ರ ಸ್ವಾತಂತ್ರ್ಯ ವಾಂಛೆಯಿಂದ ’ಆಝಾದ್’ ಎಂಬುದು ಸೇರಿಕೊಂಡು ’ಮೌಲಾನಾ ಅಬುಲ್ ಕಲಾಂ ಆಝಾದ್’ ಎಂದು ಖ್ಯಾತಿವೆತ್ತರು.

        ಆಝಾದ್‌ಗೆ ಹತ್ತು ವರ್ಷವಾದಾಗಲೇ ಕುಟುಂಬ ಕಲ್ಕತ್ತೆಗೆ ಬಂತು. ಚಿಕ್ಕಂದಿನಿಂದಲೇ ಧಾರ್ಮಿಕ ಜ್ಞಾನವನ್ನು ಪಡೆದರು. ಅರಬ್ಬೀ, ಉರ್ದು, ಪರ್ಷಿಯನ್, ಇಂಗ್ಲೀಷ್ ಭಾಷೆಗಳನ್ನು ಗಣಿತ, ಸಾಹಿತ್ಯ, ಯುನಾನಿ ವೈದ್ಯ ವಿಜ್ಞಾನಗಳನ್ನು ಕರಗತ ಮಾಡಿಕೊಂಡು ಬಹುಶ್ರುತರಾಗಿದ್ದರು. ಅದ್ಭುತ ಪ್ರತಿಭೆಯಾಗಿ ಬೆಳೆದ ಅವರು ಬರೀ ೧೬ನೇ ವಯಸ್ಸಿನಲ್ಲೇ ಪ್ರಚಂಡ ವಾಗ್ಮಿಯೂ, ಪ್ರಸಿದ್ಧ ಬರಹಗಾರರೂ ಆದರು. ಉರ್ದು ವಿದ್ವಾಂಸರ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ, ಬೇಟಿ ತೆಗೆದು ಸಿಕ್ಕಿದ (ಆಶುಭಾಷಣ/ Piಛಿಞ ಚಿಟಿಜ Sಠಿeeಛಿh) ವಿಷಯದಲ್ಲಿ ಎರಡೂ ಗಂಟೆಗೂ ಹೆಚ್ಚು ಕಾಲ ನಿರರ್ಗಳವಾಗಿ ಮಾತನಾಡಿ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದಾಗಲೂ ’ಲಿಸಾನುಸ್ಸಿದ್‌ಖ್’ ಬರಹಗಳ ಮೂಲಕ ಬ್ರಿಟೀಷರನ್ನು ನಡುಗಿಸುವಾಗಲೂ ಆಝಾದರ ವಯಸ್ಸು ೧೬ ಮಾತ್ರ !

        ೧೯೦೮ರಲ್ಲಿ ಅವರ ರಾಜಕೀಯ ವಿಚಾರಧಾರೆ ಕ್ರಾಂತಿಕಾರಿ ಚಟುವಟಿಕೆಗಳ ಕಡೆಗೆ ತಿರುಗಿತು. ಇರಾಕ್, ಸಿರಿಯಾ, ಈಜಿಪ್ಟ, ಮತ್ತು ತುರ್ಕಿ ದೇಶಗಳನ್ನು ಸಂದರ್ಶಿಸಿದರು. ದೇಶದ ರಾಜಕೀಯ ವಿಮೋಚನೆಯಲ್ಲಿ ಮುಸ್ಲಿಮರು ಸಕ್ರೀಯ ಪಾತ್ರ ವಹಿಸಬೇಕು ಎಂಬ ಚಿಂತನೆ ಬಲಗೊಂಡಿತು. ಈ ಚಿಂತನೆಯೇ ಉತ್ಕೃಷ್ಟವಾದ ನವೀನ ಶೈಲಿಯ, ಮನಸೂರೆಗೊಳ್ಳುವಂತಹ ಪತ್ರಿಕೆ ’ಅಲ್-ಹಿಲಾಲ್’ ಪ್ರಕಟಣೆಗೆ ಕಾರಣವಾಯಿತೆಂದು ಡಬ್ಲ್ಯೂ.ಸಿ.ಸ್ಮಿತ್(W.ಅ.Smiಣh) ಹೇಳುತ್ತಾರೆ. ’ಅಲ್-ಹಿಲಾಲ್’ ಇಸ್ಲಾಮಿನ ಬೋಧನೆಗಳನ್ನು ಮತ್ತು ದೇಶದ ಸ್ವಾತಂತ್ರ್ಯವನ್ನು ಏಕಕಾಲದಲ್ಲಿ ಪ್ರಚುರಗೊಳಿಸುತ್ತಿತ್ತು. ಆಝಾದ್‌ರಿಗೆ ಇವೆರಡರಲ್ಲಿ ಯಾವ ವಿರೋಧಭಾಸವೂ ಕಾಣಲಿಲ್ಲ. ಗುಲಾಮತನ್ದ ವಿರಿದ್ಧ ಹೋರಾಟಕ್ಕೆ ಮತ್ತು ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ’ಕುರ್‌ಆನ್’ ಆಜ್ಞಾಪಿಸುತ್ತದೆ ಎಂದರು. ಪ್ರಕಟಣೆಯ ಮೂರು ತಿಂಗಳುಗಳಲ್ಲಿಯೇ ಈ ಪತ್ರಿಕೆಯ ಸಂಚಿಕೆಗಳನ್ನು ಪುನಃ ಮುದ್ರಣಗೊಳಿಸಬೇಕಾಯಿತು. ಏಕೆಂದರೆ ಪ್ರತಿ ಹೊಸ ಓದುಗ ಪತ್ರಿಕೆಯ ಎಲ್ಲಾ ಪ್ರತಿಗಳನ್ನು ಓದ ಬಯಸುತ್ತಿದ್ದ. ಪ್ರಕಟಣೆಯ ಎರಡು ವರ್ಷಗಳಲ್ಲಿಯೇ ೨೬೦೦೦ ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗುತ್ತಿದ್ದವು.

        ೧೯೧೨ರಲ್ಲಿ ಆರಂಭವಾದ ’ಆಲ್-ಲಾಲ್’ ಪತ್ರಿಕೆ ತನ್ನ ಕ್ರಾಂತಿಕಾರಕ ಬರಹಗಳಿಂದ ಬ್ರಿಟೀಷರ ಕೆಂಗೆಣ್ಣಿಗೆ ಗುರಿಯಾಯಿತು. ಸರಕಾರದ ಆದೇಶದ ಮೇರೆಗೆ ಒಮ್ಮೆ ರೂ.೨೦೦೦/- ಮತ್ತೊಮ್ಮೆ ರೂ.೧೦೦೦೦/- ಠೇವಣಿ ಕಟ್ಟಬೇಕಾಯಿತು. ಎರಡೂ ಸಲ ಈ ಮೊತ್ತವನ್ನು ಮುಟ್ಟುಗೋಲು ಹಾಕಲಾಯಿತು. ೧೯೧೪ರಲ್ಲಿ ಪತ್ರಿಕೆ ಮುಚ್ಚಿಹೋಯಿತು. ಪತ್ರಿಕೆ ನಿಷೇಧಿಸಿದಾಗ ಜಗ್ಗದ ಆಝಾದ್ ೧೯೧೫ರಲ್ಲಿ ’ಅಲ್‌ಬಲಾಗ್’ ಪತ್ರಿಕೆ ಆರಂಭಿಸಿದರು. ಆದರೆ, ’ಡಿಫೆನ್ಸ್ ಆಫ್ ಇಂಡಿಯಾ ರೂಲ್ಸ್’ ಆಡಿಯಲ್ಲಿ ಆಝಾದ್‌ರನ್ನು ಕಲ್ಕತ್ತಾದಿಂದ ಹೊರಹಾಕಲಾದಾಗ ಈ ಪತ್ರಿಕೆಯನ್ನು ನಿಷೇಧಿಸಲಾಯಿತು. ಜೊತೆಗೆ ಇವರನ್ನು ಬಿಹಾರದ ರಾಂಚಿಯ ಜೈಲಿನಲ್ಲಿ ನಾಲ್ಕು ವರ್ಷಗಳ ಕಾಲ ಬಂಧಿಸಿಡಲಾಯಿತು.

        ಗಾಂಧೀಜಿಯವರು ಅಹಿಂಸೆ ಮತ್ತು ಅಸಹಕಾರವನ್ನು ಬ್ರಿಟೀಷರ ವಿರುದ್ಧ ಅಸ್ತ್ರವನ್ನಾಗಿ ಪ್ರಯೋಗಿಸಿದಾಗ, ಆಝಾದ್ ಇದರಿಂದ ಪ್ರಭಾವಿತರಾಗಿ ತಮ್ಮನ್ನು ಗಾಂಧೀಜಿಯವರೊಡನೆ ಗುರುತಿಸಿಕೊಂಡರು. ಹಿಂದೂ-ಮುಸ್ಲಿಂ ಮೈತ್ರಿ ನಿರ್ಮಾಣ ಕಾರ್ಯದಲ್ಲಿ ತೀವ್ರವಾಗಿ ಗಿರಿತಿಸಿಕೊಂಡ ಆಝಾದ್ ತಮ್ಮ ೩೫ನೇ ವಯಸ್ಸಿನಲ್ಲೇ ಪ್ರತಿಷ್ಠಾಪಿತ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷತೆಯನ್ನು ಅಲಂಕರಿಸಿದರು. ಆವೇಶ ಪೂರ್ಣ ಬರಹಗಳು ಮತ್ತು ರೋಮಾಂಚನಕಾರಿ ಭಾಷಣಗಳ ಮೂಲಕ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯನ್ನು, ಕೋಮು ಸೌಹಾರ್ದತೆ, ರಾಷ್ಟ್ರೀಯ ಭಾವೈಕ್ಯತೆಗಳ ಅನಿವಾರ್ಯತೆಯನ್ನು ಜನ-ಮನಸ್ಸುಗಳಿಗೆ ತಲುಪಿಸಿದರು.

        ೧೯೩೯ರಲ್ಲಿ ಮತ್ತೊಮ್ಮೆ ಕಾಂಗ್ರೆಸ್ಸಿನ ಅಧ್ಯಕ್ಷರಾಗುವ ಮೂಲಕ ಎರಡನೇ ಬಾರಿ ಈ ಘನ ಹುದ್ದೆ ನಿರ್ವಹಿಸಿ  ತಮ್ಮ ನಾಯಕತ್ವ ಸಾಮಾರ್ಥ್ಯವನ್ನು ಮೆರೆದ ಆಝಾದ್ ೧೯೩೯-೪೫ರ ನಿರ್ಣಾಯಕ ಅವಧಿಯನ್ನು ಸಮರ್ಥವಾಗಿ ನಿರ್ವಹಿಸಿದರು. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ’ಮೌಲಾನಾ ಅಬುಲ್ ಕಲಾಂ ಆಝಾದ್’ ೧೯೪೨ರ ಆಗಷ್ಟ್ ೯ರ ’ಕ್ವಿಟ್ ಇಂಡಿಯಾ’ (ಬ್ರಿಟೀಷರೇ ಭಾರತ ಬಿಟ್ಟು ತೊಲಗಿ) ಚಳವಳಿಗೆ ನಾಯಕತ್ವ ನೀಡಿ ಅಹ್ಮದ್‌ನಗರ ಕೋಟೆ ಜೈಲಿನಲ್ಲಿ ಬಂಧಿತರಾದರು. ಆಝಾದರ  ಬಿಡುವಿಲ್ಲದ ರಾಜಕೀಯ ಕಾರ್ಯಕ್ರಮಗಳು, ದೀರ್ಘ ಸೆರೆಮನೆವಾಸದ ಕಾರಣಗಳಿಂದ ಅವರ ಪತ್ನಿ ಝಲೇಖ ಬೇಗಂರೊಂದಿಗೆ ಇರಲು ಸಾಧ್ಯವಾಗಲಿಲ್ಲ. ಇವರ ಏಕೈಕ ಮಗು ನಾಲ್ಕನೇಯ ವರ್ಷದಲ್ಲಿಯೇ ನಿಧನ ಹೊಂದಿತ್ತು. ೧೯೪೪ರಲ್ಲಿ ಆಝಾದ್ ಪುನಃ ಜೈಲಿನಲ್ಲಿದ್ದರು. ಅವರ ಪತ್ನಿ ೧೫೦೦ ಕಿ.ಮೀ. ದೂರದಲ್ಲಿದ್ದರು. ’ಗುಆರ್-ಏ-ಖಾತಿರ್’ ಕೃತಿಯಲ್ಲಿ ಆಝಾದ್ ಈ ರೀತಿ ಬರೆದಿದ್ದಾರೆ.

        ಮಾರ್ಚ್ ೨೩ ರಂದು ಟೆಲಿಗ್ರಾಮ್ ಮುಖಾಂತರ ಅವಳು ತೀವ್ರ ಅಸ್ವಸ್ಥಳಾಗಿರುವುದು ತಿಳಿಯಿತು. ಪತ್ರಿಕೆಗಳಲ್ಲೂ ಅದೇ ವಿಷಯವಿತ್ತು. ಈ ಸಂಬಂಧ ಸರ್ಕಾರಕ್ಕೆ ಏನಾದರೂ ಮನವಿ ಮಾಡ ಬಯಸಿದ್ದರೆ, ಅದನ್ನು ಬಾಂಬೆಗೆ ಕಳುಹಿಸಿ ಕೊಡುವುದಾಗಿ ಜೇಲ್ ಸೂಪರಿಂಟೆಂಡೆಂಟ್ ತಿಳಿಸಿದರು. ನಾನು ಸರ್ಕಾರಕ್ಕೆ ಯಾವುದೇ ಮನವಿ ಮಾಡುವುದಿಲ್ಲವೆಂದು ಅವನಿಗೆ ದೃಢವಾಗಿ ತಿಳಿಸಿದೆ.

        ಕೊನೆಗೂ ನನ್ನ ಕಷ್ಟಗಳ ಬಟ್ಟಲು ತುಂಬಿತು. ಏಪ್ರಿಲ್ ೯ರಂದು ಸೂಪರಿಂಟೆಂಡೆಂಟ್ ದುಃಖದ ವಾರ್ತೆ ಇರುವ ಟಿಲಿಗ್ರಾಮ್ ನನ್ನ ಕೈಗೆ ಕೊಟ್ಟ. ಈ ರೀತಿ ೩೬ವರ್ಷಗಳ ನಮ್ಮ ವೈವಾಹಿಕ ಜೀವನ ಕೊನೆಗೊಂಡಿತು. ನನ್ನ ಆತ್ಮವಿಶ್ವಾಸ ಕೈ ಕೊಡದಿದ್ದರೂ ಕಾಲ ಕೆಳಗಿನ ಭೂಮಿ ಕುಸಿದಂತಾಯಿತು.

        “ಆಝಾದ್‌ರ ದೇಶನಿಷ್ಠೆ ಅವರ ಧರ್ಮನಿಷ್ಠೆಯಷ್ಟೇ ಅಚಲ ಎಂದಿದ್ದರೂ ಗಾಂಧೀಜಿ.” ೧೯೪೭ ಮಾರ್ಚ್ ವೇಳೆಗೆ ಸರ್ದಾರ್ ಮತ್ತು ನೆಹರೂ ದೇಶ ವಿಭಜನೆಯನ್ನು ಒಪ್ಪಿಕೊಂಡಿದ್ದರು. ’ನಾವು ಇಷ್ಟಪಟ್ಟರೂ, ಪಡದಿದ್ದರೂ ಭಾರತದಲ್ಲಿ ಎರಡು ರಾಷ್ಟ್ರಗಳಿವೆ’ ಎಂದು ಪಟೇಲರು ನುಡಿದಾಗ ಆಝಾದ್ ಬಹಳ ನೊಂದುಕೊಂಡಿದ್ದರು. ವಿಭಜನೆಗೆ ನಿಮ್ಮ ವಿರೋದವನ್ನು ತ್ಯಜಿಸಿ ಎಂದು ಕೇಳಿಕೊಂಡಿದ್ದರು. ೩೧ಮಾರ್ಚ್ ಆಝಾದ್ ಗಾಂಧೀಜಿಯನ್ನು ಭೇಟಿಮಾಡಿದರು. ಆಝಾದ್‌ರ ಹೇಳಿಕೆಯ ಪ್ರಕಾರ, ಗಾಂಧೀಜಿ ಅವರಿಗೆ ಈ ರೀತಿ ಹೇಳಿದರು: “ದೇಶದ ವಿಭಜನೆ ಈಗ ಒಂದು ದೊಡ್ಡ ಬೆದರಿಕೆಯಾಗಿದೆ. ವಲ್ಲಭಭಾಯಿ ಮತ್ತು ನೆಹರೂ ಶರಣಾಗತರಾಗಿದ್ದಾರೆಂದು ಹೇಳಲಾಗುತ್ತಿದೆ. ನೀವು ನನ್ನೊಡನೆ ಇರುವಿರಾ ಅಥವಾ ನೀವೂ ಬದಲಾಗುವಿರಾ?”

        ಆಝಾದ್ ಉತ್ತರಿಸಿದರು, “ದೇಶ ವಿಭಜನೆಗೆ ನನ್ನ ವಿರೋಧ ಇಂದು ಇರುವಷ್ಟು ಎಂದೂ ಉಗ್ರವಾಗಿರಲಿಲ್ಲ… ನನ್ನ ಭರವಸೆ ಈಗ ಉಳಿದಿರುವುದು ನಿಮ್ಮಲ್ಲೇ ನೀವೂ ದೇಶ ವಿಭಜನೆಯನ್ನು ಒಪ್ಪಿಕೊಂಡರೆ, ದೇಶ ಕೈ ಬಿಟ್ಟು ಹೋದಂತೆಯೆ.” ಇದಕ್ಕೆ ಗಾಂಧೀಜಿ ಉತ್ತರಿಸಿದರು: “ಎಂತಹ ಪ್ರಶ್ನೆಯನ್ನು ಕೇಳುತಿದ್ದೀರಿ! ಕಾಂಗ್ರೆಸ್ ದೇಶ ವಿಭಜನೆಯನ್ನು ಒಪ್ಪ ಬಯಸಿದರೆ ಅದು ನನ್ನ ಮೃತದೇಹದ ಮೇಲಷ್ಟೇ ಆದರೆ ಕೇವಲ ಎರಡು ತಿಂಗಳ ಅವಧಿಯಲ್ಲಿ ಗಾಂಧೀಜಿ ನಿಲುವನ್ನು ಬದಲಾಯಿಸಿದ್ದರು. ’ ದೇಶ ಇಬ್ಭಾಗವಾಗದೇ ಈಗ ಗತ್ಯಂತರವಿಲ್ಲ’ ಎಂದು ಹೇಳಿ ಆಝಾದ್‌ರನ್ನು ಸ್ಥಂಬಿಭೂತಗೊಳಿಸಿದ್ದರು.
ಮಲ್ಲಿಕಾರ್ಜುನ ಹುಲಸೂರ

        ಸ್ವಾತಂತ್ರ್ಯ ವ್ಯಾಪ್ತಿಯ ಜೊತೆ ದೇಶವಿಭಜನೆಯ ಆಘಾತವೆರಗಿದಾಗ ತಮ್ಮ ನೋವನ್ನು ಕೆಲವು ನಾಯಕರ ಕುರಿತ ಟೀಕೆಯನ್ನು ಆತ್ಮಚರಿತ್ರೆ ’India Wins Freedom’’ ನಲ್ಲಿ ದಾಖಲಿಸಿದ್ದಾರೆ. ಉರ್ದು ಭಾಷೆಯಲ್ಲೂ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ.

        ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವರಾಗಿ ಶಾಲಾ ಕಾಲೇಜುಗಳ ಸ್ಥಾಪನೆಯಲ್ಲಿ ತೊಡಗಿಸಿಕೊಂಡ ಅವರು ’ಆಧುನಿಕ ಭಾರತದ ಶಿಕ್ಷಣ ಶಿಲ್ಪಿ’ ಎಂದು ಗುರುತಿಸಲ್ಪಟ್ಟಿದ್ದಾರೆ.

        ೧೯೫೮ರ ಫೆಬ್ರವರಿ ೨೨ರಂದು ತಮ್ಮ ೭೦ನೇ ಪ್ರಾಯದಲ್ಲಿ ಆಝಾದ್ ಕೊನೆಯುಸಿರೆಳೆದರು. ಆ ಬಳಿಕ ಮೂರುವರೆ ದಶಕ ತಡವಾಗಿಯಾದರೂ ೧೯೯೨ರಲ್ಲಿ ಅವರಿಗೆ ಮರಣೋತ್ತರ ’ಭಾರತರತ್ನ’ ಪ್ರಶಸ್ತಿಯಿತ್ತು ಗೌರವಿಸಲಾಯಿತು.

ಆಚರಣೆ ಮತ್ತು ಜ್ಞಾನ

🌿ಆಚರಣೆ ಮತ್ತು ಜ್ಞಾನ🌿



ಆಚರಣೆಗಳನ್ನು ಪಾಲಿಸುವುದು ಮುಖ್ಯವಾಗಿರುವುದಿಲ್ಲ. ಜ್ಞಾನವನ್ನು ಹೊಂದುವುದು ಮುಖ್ಯವಾಗಿದೆ. ಯಾರು ಆಚರಣೆಯ ಮಾರ್ಗದಿಂದ ಆರಂಭಿಸುವರೋ ಅವರು ತಪ್ಪುಮಾರ್ಗದಿಂದ ಆರಂಭಿಸುವರು. ಅವರು ಒಂದು ತುದಿಯಿಂದ ಆರಂಭಿಸುತ್ತಿರುವರು. ಅಜ್ಞಾನದ ಕಾರಣದಿಂದಾಗಿಯೇ ಆಚರಣೆಗಳು ಸಹಜವಾಗಿರುವವು. ಅಜ್ಞಾನದಲ್ಲಿ ಕ್ರೋಧವನ್ನು ಹತ್ತಿಕ್ಕಿ ಕ್ಷ ಮಾಗುಣವನ್ನು ತೋರಿಸಬೇಕಾಗುವುದು. ಆದರೆ ಜ್ಞಾನದಲ್ಲಿ ಕ್ರೋಧ ಉತ್ಪನ್ನವಾಗುವುದೇ ಇಲ್ಲ.

ಯಾರು ಮಹಾವೀರನ ಕುರಿತಾಗಿ ಆತ ದಯಾಶೀಲನೂ, ಕ್ಷ ಮಾಗುಣವುಳ್ಳವನೂ ಆಗಿದ್ದನೆಂದು ಹೇಳುತ್ತಿರುವರೋ ಅವರು ಖಂಡಿತವಾಗಿಯೂ ಅಸತ್ಯವನ್ನಾಡುತ್ತಿರುವರು. ಮಹಾವೀರ ಕ್ಷ ಮಾಗುಣ ಉಳ್ಳವನಾಗಿದ್ದ ಎಂದು ಹೇಳುವುದರ ಅರ್ಥ ಆತನಲ್ಲಿ ಕ್ರೋಧ ಉತ್ಪನ್ನವಾಗುತ್ತಿತ್ತು ಎಂದಾಗುತ್ತದೆ. ಮಹಾವೀರ ಕ್ಷ ಮಾಗುಣ ಉಳ್ಳವನಾಗಿರಲಿಲ್ಲ. ಬದಲಿಗೆ ಆತನಲ್ಲಿ ಕ್ರೋಧವೇ ಉತ್ಪನ್ನವಾಗುತ್ತಿರಲಿಲ್ಲ. ಯಾರಲ್ಲಿ ಕ್ರೋಧವೇ ಇರುವುದಿಲ್ಲವೊ ಅವರಲ್ಲಿ ಕ್ಷ ಮೆ ಅಥವಾ ಕ್ಷ ಮಿಸದೇ ಇರುವುದರ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕ್ಷ ಮಾವಂತ ಆಗಿರುವವನು ಕ್ರೋಧಿ ಆಗಿರುವ ಸಾಧ್ಯತೆ ಇರುತ್ತದೆ. ಯಾರಲ್ಲಿ ಕ್ರೋಧವೇ ಹುಟ್ಟುವುದಿಲ್ಲವೊ ಅವರಲ್ಲಿ ಕ್ಷ ಮಾಗುಣದ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಮನಸ್ಸಿನ ಒಳಗೆ ಸ್ವಯಂನ ಸಾಕ್ಷಾತ್ಕಾರ ಆಗುವುದರೊಂದಿಗೆ ಯಾವ ಜ್ಞಾನ ಉತ್ಪನ್ನವಾಗುವುದೋ ಅದು ಅತ್ಯಂತ ಆಶ್ಚರ್ಯ ಜನಕವಾದುದು ಹಾಗೂ ಅತ್ಯಂತಿಕ ಹೊಳಪುಳ್ಳದ್ದೊ ಆಗಿರುವುದು.

ಜೀವನದಲ್ಲಿ ಮುಕ್ತಿಯ ಮಾರ್ಗ ಆಚರಣೆಯಿಂದ ದೊರೆಯುವುದಿಲ್ಲ. ಅದು ನಮ್ಮೊಳಗೆ ಪ್ರಜ್ಞೆ ಜಾಗರಣವಾಗುವುದರೊಂದಿಗೆ ಆರಂಭವಾಗುವುದು.

ಈ ರೀತಿ ಪ್ರಜ್ಞೆಯ ಜಾಗರಣೆ ಮತ್ತು ಸ್ವಯಂನ ಸಾಕ್ಷಾತ್ಕಾರ ಆಗುವುದಾದರೂ ಹೇಗೆ? ಯಾವ ವಿಧಿ ವಿಧಾನಗಳ ಮೂಲಕ ನಾನು ನನ್ನ ಅಂತರ್ಯದಲ್ಲಿ ಪ್ರವೇಶಿಸಲು ಸಾಧ್ಯವಾಗುವುದು? ಯಾವ ವಿಧಿ ವಿಧಾನಗಳ ಮೂಲಕ ಸ್ವಯಂನ ಮುಖಾಮಖಿ ಸಾಧ್ಯ? ಯಾವುದು ಎಲ್ಲವನ್ನೂ ನೋಡುತ್ತಿರುವುದೋ ಆ ಆಸ್ತಿತ್ವದೊಂದಿಗೆ ನಾನು ಒಂದಾಗುವುದು ಯಾವ ವಿಧಾನದಿಂದ ಸಾಧ್ಯವಾಗುವುದು?

ಆ ವಿಧಿಯನ್ನು ತಿಳಿಯುವ ಮೊದಲು ಯಾವ ರೀತಿಯಿಂದ ನಾನು ನನ್ನಿಂದ ಹೊರಗೆ ಹೋಗಿರುವೆ ಎಂಬುದನ್ನು ಅರಿಯುವುದು ಅತ್ಯಂತ ಅವಶ್ಯಕ. ಹೀಗೆ ನಾನು ಯಾವ ವಿಧಿ ವಿಧಾನಗಳಿಂದ, ಯಾವ ಮಾರ್ಗದಿಂದ ಹೊರಗೆ ಹೋಗಿರುವೆ ಎಂಬುದನ್ನು ಅರಿಯುವುದು ಸಾಧ್ಯವಾದರೆ, ಆಗ ಅದೇ ಮಾರ್ಗದಲ್ಲಿ ಹಿಂತಿರುಗಿ ಬರುವ ಮೂಲಕ ನಾನು ಸ್ವಯಂ ಅನ್ನು ತಲುಪಬಹುದು. ಯಾವ ಮಾರ್ಗ ನನ್ನನ್ನು ಹೊರಗೆ ಕರೆದುಕೊಂಡು ಹೋಗಿರುವುದೋ ಅದೇ ಮಾರ್ಗ ನನಗೆ ಒಳಗೆ ಪ್ರವೇಶಿಸುವ ಅವಕಾಶವನ್ನೂ ಕೊಡಲೇಬೇಕು. ವಿರುದ್ಧ ದಿಕ್ಕಿನಲ್ಲಿ ಸಂಚರಿಸಬೇಕಾಗಬಹುದು. ಯಾವ ಮಾರ್ಗ ನನ್ನನ್ನು ಬಂಧನದ ಕಡೆಗೆ ಕರೆದುಕೊಂಡು ಹೋಗಿರುವುದೋ ಅದೇ ಮಾರ್ಗ ನನ್ನನ್ನು ಮುಕ್ತಿಯ ಕಡೆಗೂ ಕರೆದುಕೊಂಡು ಹೋಗಬಲ್ಲದು. ವಿರುದ್ಧವಾಗಿ ಸಂಚರಿಸಬೇಕು ಅಷ್ಟೇ. ಯಾವ ಮಾರ್ಗ ನನ್ನನ್ನು ಸಂಸಾರದೊಂದಿಗೆ ಜೋಡಿಸಿರುವುದೊ, ಅದೇ ಮಾರ್ಗ ನನ್ನನ್ನು ಪರಮಾತ್ಮನೊಂದಿಗೆ ಜೋಡಿಸಬಲ್ಲದು. ವಿರುದ್ಧವಾಗಿ ಚಲಿಸಬೇಕಷ್ಟೆ.

ನಮ್ಮ ಈ ಮನಸ್ಸು ನಮ್ಮ ವಿಚಾರಗಳೇ ನಮ್ಮನ್ನು ಈ ಜಗತ್ತಿನೊಂದಿಗೆ ಜೋಡಿಸುತ್ತದೆ. ಈಗ ಒಂದು ಕ್ಷ ಣ ನಿಮ್ಮ ಮನಸ್ಸಿನಲ್ಲಿ ಯಾವುದೇ ವಿಚಾರದ ತರಂಗಗಳು ಇಲ್ಲವಾದರೆ, ತರಂಗಗಳಿರದೆ ಮನಸ್ಸು ಶೂನ್ಯವಾಗಿದ್ದರೆ, ವಿಚಾರಗಳಿಂದ ಕ್ಷ ಣ ಕಾಲ ಮನಸ್ಸು ಮುಕ್ತವಾಗಿದ್ದರೆ, ಆ ಕ್ಷ ಣ ನೀವು ಈ ಜಗತ್ತಿನೊಂದಿಗೆ ಯಾವ ರೀತಿಯಲ್ಲಿ ಸಂಬಂಧ ಹೊಂದಿರುವಿರಿ? ಆ ಕ್ಷ ಣ ನಿಮಗೆ ಈ ಜಗತ್ತಿನೊಂದಿಗೆ ಯಾವುದಾದರೂ ಸಂಬಂಧ ಉಳಿದಿರುವುದೇ. ಆ ಕ್ಷ ಣ ಯಾರು ಹೊರಗೆ ಬದುಕುತ್ತಿರುವರೋ ಅವರೊಂದಿಗೆ ಯಾವುದೇ ರೀತಿಯ ಸಂಬಂಧ, ನೆಂಟಸ್ತಿಕೆ ಉಳಿದಿರುವುದೇ? ಯಾವುದೇ ರೀತಿಯ ಬಂಧನ ಉಳಿದಿರುವುದೇ?

* ಓಶೋ
🌴🌴🌴🌴🌴🌴🌴🌴

ಬದುಕುವ ರೀತಿ

   🍁ಬದುಕುವ ರೀತಿ🍁

ಯಾವ ನದಿಯೂ ನೇರವಾಗಿ ಹರಿದು
ಸಾಗರವನ್ನು ಸೇರುವುದಿಲ್ಲ. ತಗ್ಗು-ದಿನ್ನಿ ಹಳ್ಳ
ಕೊಳ್ಳಗಳನ್ನು ದಾಟಿ ಹತ್ತಾರು ಸಲ
ದಿಕ್ಕುಗಳನ್ನು ಬದಲಿಸುತ್ತ, ಪಾತ್ರವನ್ನು ಹಿರಿದು-
ಕಿರಿದು ಮಾಡಿ ಕೊನೆಗೆ ಸಾಗರ ಸೇರುತ್ತದೆ. ಅದೇ
ರೀತಿ ನಮ್ಮ ಜೀವನ ನದಿಯಲ್ಲಿಯೂ ಏರಿಳಿತಗಳು
ಇರುವುದು ಸ್ವಾಭಾವಿಕ. ಮಾನವರು-
ದೇವಮಾನವರು, ರಾಜ-ಮಹಾರಾಜರು ಯಾರೇ
ಇರಲಿ ಎಲ್ಲರ ಜೀವನದಲ್ಲಿಯೂ
ಏರುಪೇರುಗಳಿರುವುದು ಸಹಜ. ದಶರಥ
ಮಹಾರಾಜನು ಸಾಮಾನ್ಯನಲ್ಲ. ಶೂರ-ಧೀರ,
ವೀರ, ಸಾಹಸಿಗ, ಶಕ್ತಿವಂತ! ಆದರೇನು ತನ್ನ ಮಗ
ಶ್ರೀರಾಮನು ಸಿಂಹಾಸನ ಏರಿ
ರಾಜ್ಯವನ್ನಾಳುವುದನ್ನು ನೋಡಲಿಲ್ಲ.
ಸಿಂಹಾಸನ ಏರುವ ಸುವರ್ಣಕ್ಷಣದಲ್ಲೇ
ಶ್ರೀರಾಮನ ಜೀವನ ಪ್ರವಾಹ ಅರಣ್ಯದತ್ತ
ತಿರುಗಿತು. ಸೀತಾದೇವಿ, ಶ್ರೀರಾಮ, ಲಕ್ಷ್ಮಣ
ಎಲ್ಲರೂ ಬರಿಗೈ, ಬರಿಗಾಲಿನಿಂದಲೇ ಅರಣ್ಯದತ್ತ
ಹೆಜ್ಜೆ ಹಾಕಿದರು. ಅರಮನೆ ಸುಖದ
ಸುಪ್ಪತ್ತಿಗೆಯಲ್ಲಿದ್ದವರು ಅರಣ್ಯದ ಗುಡ್ಡು
ಗಾಡಿನಲ್ಲಿ ಗಡ್ಡೆ ಗೆಣಸುಗಳ ಮೇಲಿದ್ದು ಕಾಲ
ಕಳೆಯಬೇಕಾಯಿತು. ಇದು ಕೇವಲ ಶ್ರೀರಾಮನ
ಕಥೆಯಲ್ಲ, ಎಲ್ಲರ ಬದುಕಿನ ರೀತಿ!

✨✨✨✨✨✨✨✨✨

ಮನುಷ್ಯನಲ್ಲಿ ಇರಬೇಕಾದ ಗುಣಗಳು

🔶ಮನುಷ್ಯನಲ್ಲಿ ಇರಬೇಕಾದ
ಗುಣಗಳು🔶

ಜೀವನದಲ್ಲಿ ಶಿಷ್ಟಾಚಾರವೂ ಒಂದು ಕಲೆ.
ಸ್ವರದಲ್ಲಿ ಮಾಧುರ್ಯ, ವಾಣಿಯಲ್ಲಿ ನಮ್ರತೆ.
ಕಾರ್ಯದಲ್ಲಿ ಸ್ವಚತೆ, ವ್ಯವಹಾರದಲ್ಲಿ ಸತ್ಯ
ಸಂದತೆ, ಆಚರಣೆಯಲ್ಲಿ ಉದಾರತೆ.
ಇವೆಲ್ಲಾ ಮನುಷ್ಯನ ಗುಣಗಳು.
ಯಾರೇ ಆದರೂ ಈ ಗುಣಗಳಿಗೆ ಆಕರ್ಷಿಸುತ್ತಾರೆ.
ಪುಷ್ಪಗಳು,ಮೊಗ್ಗು
ಗಳು ಮತ್ತು ದಾನ್ಯವನ್ನು ವಿಕಸಿತಗೊಲಿಸುವ
ಸಾಮರ್ಥ್ಯವಿರುವ ವಸಂತಕ್ಕೆ,
ಮರಗಳನ್ನು ಕಿತ್ತೆಸೆಯುವ,ಮನೆಯನ್ನು ನೆಲಸಮ
ಮಾಡುವ ಬಿರುಗಾಲಿಯನ್ನೆದು
ರಿಸಲು ಸಾದ್ಯವೇ ?
ಪ್ರಾತ;ಕಾಲದ ವಸಂತದ ಬಿಸಿಲನ್ನು ಗ್ರೀಷ್ಮ
ಕಾಲದ ಪ್ರಚಂಡ ಸೂರ್ಯನೊಡನೆ
ಹೋಲಿಸಲು ಸಾದ್ಯವಿಲ್ಲ.
ವ್ಯಕ್ತಿ ಕೂರುವುದು,ಏಳುವುದ
ು,ಮಾತನಾಡುವುದು ದೊಡ್ಡವರನ್ನು ಗೌರವಿಸುವುದು,
ಚಿಕ್ಕವರೊಂದಿಗೆ
ಪ್ರೀತಿಯಿಂದ ವ್ಯವಹರಿಸುವುದು.
ಗುರುಗಳನ್ನು ಆದರಿಸುವುದು. ತನ್ನ
ತಪ್ಪನ್ನು ಒಪ್ಪಿಕೊಳ್ಳುವುದು.
ನಿಜ ಹೇಳುವುದು,ನಮ್ರತೆಯಿಂದ
ನುಡಿಯುವುದು.ಇತ್ಯಾದಿ ಶಿಷ್ಟಾಚಾರದ
ಅಂಗಗಳು.
ಇವು ಚರಿತ್ರೆಯ ಬಾಹ್ಯ
ಅಂಗಗಳಾದರು ಇವುಗಳಿಂದ ವ್ಯಕ್ತಿಯ ಆಂತರಿಕ
ಜೀವನದ ಪರಿಚಯ
ದೊರೆಯುತ್ತದೆ.ಅಸು
ಂದರತೆಯನ್ನು ಸುಂದರಗೊಳಿಸುವುದು,
ಸೌಂದರ್ಯದಲ್ಲಿ ಸುಗಂಧ
ತುಂಬುವುದೇ ಶಿಷ್ಟಾಚಾರದ ಜೀವನದ ಕಲೆ.
ನಮ್ಮ ಮುಖದ ಮೇಲೆ ಸಂತೋಷವಿದ್ದರೆ ನಮ್ಮ
ಮನಸ್ಸು ಮಾತ್ರವಲ್ಲದೆ,
ಮತ್ತೊಬ್ಬರ ಮನಸ್ಸು ಸಂತೋಷಗೊಳ್ಳುತ್ತದೆ.

Posted from WordPress

🌿🌱🌿🌱🌿🌱🌿🌱🌿

ಮಕ್ಕಳ ದಿನಾಚರಣೆ

ಮಕ್ಕಳ ದಿನಾಚರಣೆ



●●●ಮಕ್ಕಳ ದಿನಾಚರಣೆ●●●
ಮಕ್ಕಳ ದಿನಾಚರಣೆ ಜವಾಹರ್‌ಲಾಲ್ ನೆಹರುರವರ ಹುಟ್ಟುಹಬ್ಬದಂದು (ನವೆಂಬರ್ ೧೪ರಂದು) ಆಚರಿಸಲಾಗುತ್ತದೆ.



●ಹಿನ್ನೆಲೆ
ಜವಹಾರ್ಲಾಲ್ ನೆಹೆರುವರಿಗೆ ಮಕ್ಕಳೆಂದರೆ ಬಹಳ ಇಷ್ಟವಂತೆ.ಅವರು ಅನಾಥ ಮಕ್ಕಳು ಕೊಟ್ಟ ಗುಲಾಬಿಯನ್ನು ತಮ್ಮ ಕೋಟಿನ ಜೇಬಿಗೆ ಅಂಟಿಸಿ ಸಂತೋಷ ಪಡುತ್ತಿದ್ದರಂತೆ. ಮಕ್ಕಳ ಮೇಲಿದ್ದ ಇವರ ಅಕ್ಕರೆ, ಪ್ರೀತಿಯ ಸಂಕೇತವಾಗಿ ದೇಶದಾದ್ಯಂತ ಈ ದಿನದಂದು ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ. ಇವರು ಪ್ರಧಾನಿಯಾಗಿದ್ದ ಸಮಯದಲ್ಲಿ ಮಕ್ಕಳ ಅಭಿವೃದ್ಧಿಗೆ ಬಹಳಷ್ಟು ಶ್ರಮಿಸಿದ್ದರಂತೆ. ಇಂದಿನ ಮಕ್ಕಳೇ ಮುಂದಿನ ಜನಾಂಗ.


●ಆಚರಣೆ
ಸಾಧಾರಣವಾಗಿ ಹಾಡು, ಆಟಗಳನ್ನು ಕೂಡಿದ ಈ ದಿನ . ಮಕ್ಕಳ ದಿನಾಚರಣೆಯಂದು ವಿವಿಧೆಡೆ ಕಲಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.


●●ಪಂ. ಜವಾಹರಲಾಲ್ ನೆಹರು●●


ಜನನ: ನವೆಂಬರ್ ೧೪, ೧೮೮೯
ಮರಣ: ಮೇ ೨೭, ೧೯೬೪
ಹುಟ್ಟಿದೂರು: ಅಲಹಾಬಾದ್, ಉತ್ತರ ಪ್ರದೇಶ


●●ಭಾರತದ ಪ್ರಧಾನ ಮಂತ್ರಿ
ಅಧಿಕಾರ ಅವಧಿ: ಮೊಟ್ಟ ಮೊದಲ ಪ್ರಧಾನ ಮಂತ್ರಿ
ರಾಜಕೀಯ ಪಕ್ಷ: ಭಾರತ ರಾಷ್ಟ್ರೀಯ ಕಾಂಗ್ರೆಸ್
ಅಧಿಕಾರ ವಹಿಸಿಕೊಂಡಿದ್ದು: ಆಗಸ್ಟ್ ೧೫, ೧೯೪೭
ಅಧಿಕಾರ ಬಿಟ್ಟುಕೊಟ್ಟಿದ್ದು: ಮೇ ೨೭, ೧೯೬೪
ಇವರ ಉತ್ತರಾಧಿಕಾರಿ: ಗುಲ್ಜಾರಿಲಾಲ್ ನಂದ

●'ಮಹಾತ್ಮಗಾಂಧಿಯೊಂದಿಗೆ ನೆಹರು'
'ರಾಷ್ಟ್ರಕ್ಕೆ ಸಮರ್ಪಿಸಿದ ನೆಹರೂ ವಂಶದ ಮನೆ'
ಜವಾಹರಲಾಲ್ ನೆಹರು (ನವೆಂಬರ್ ೧೪, ೧೮೮೯ - ಮೇ ೨೭, ೧೯೬೪) - ಭಾರತದ ಮೊದಲ ಪ್ರಧಾನ ಮಂತ್ರಿ, ಸ್ವಾತಂತ್ರ್ಯ ಹೋರಾಟಗಾರರು. ಆಗಸ್ಟ್ ೧೫, ೧೯೪೭ ರಿಂದ ಪ್ರಾರಂಭಿಸಿ ಇವರು ಮರಣಕಾಲದವರೆಗೂ ಭಾರತದ ಪ್ರಧಾನಿಯಾಗಿದ್ದರು.

●ನೆಹರುರವರ ಸಾರ್ವಜನಿಕ ಜೀವನ೧೮೮೯-೧೯೧೮
ಪಂ, ಜವಹರಲಾಲ್ ನೆಹರು, ಆಗಿನ ಕಾಲದ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದ ಮೋತಿಲಾಲ್ ನೆಹರು ಅವರ ಮಗ. ನೆಹರೂ ಇಂಗ್ಲೆಂಡ್‌ನ ಹ್ಯಾರ್ರೊ ಸ್ಕೂಲ್ ಹಾಗು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಓದು ಮುಗಿಸಿ, ತಂದೆಯೊಂದಿಗೆ ರಾಜಕೀಯದಲ್ಲಿ ಸಕ್ರಿಯರಾದರು.
ಇಂಗ್ಲೆಂಡ್‌ನಲ್ಲಿದ್ದಾಗ ನೆಹರು ಅವರು ಫೇಬಿಯನ್ ಸಾಮಾಜಿಕ ವಿಧಾನಗಳನ್ನು ಬಹುವಾಗಿ ಮೆಚ್ಚಿದ್ದರು. ೧೯೧೬ರ ವಸಂತ ಪಂಚಮಿಯ ದಿನದಂದು ನೆಹರು ಅವರು ಕಮಲಾ ಕೌಲ್‌ರವರನ್ನು ಮದುವೆಯಾದರು.

●ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷ ೧೯೧೮-೧೯೩೭
೧೯೧೯ ರಲ್ಲಿ ಮಗಳು ಇಂದಿರಾ ಪ್ರಿಯದರ್ಶಿನಿ ಜನಿಸಿದಳು. ರಾಜಕೀಯದಲ್ಲಿ, ಮಹಾತ್ಮ ಗಾಂಧಿಯವರ ಶಿಷ್ಯನಾದ ಇವರು, ಮೊದಲ ಬಾರಿಗೆ ೧೯೨೯ ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಮೇಲೇರಿದರು. ಈ ದಿನಗಳನ್ನು ಇವರು ಬಹುವಾಗಿ ಕಾರಾಗೃಹವಾಸ ದಲ್ಲಿ ಪುಸ್ತಕಗಳು, ಪತ್ರಗಳನ್ನು ಬರೆಯುತ್ತಾ ಕಳೆದರು.

●ಕ್ವಿಟ್ ಇಂಡಿಯ ಆಂದೋಲನದಲ್ಲಿ ೧೯೩೭-೧೯೪೭
'ಭಾರತವನ್ನು ಬಿಟ್ಟು ತೊಲಗಿ' (Quit India Movement) ಪರ್ಯಾಯ ೧೯೪೨ರಲ್ಲಿ ೩೨ ತಿಂಗಳಿಗೆ ಕಾರಾಗೃಹವಾಸ ಅನುಭವಿಸಿದ ಇವರು, ಭಾರತದ ಮೊದಲ ಸರಕಾರವನ್ನು ೧೯೪೬ರಲ್ಲಿ ರಚಿಸಿದರು.

●ಭಾರತದ ಮೊಟ್ಟ ಮೊದಲ ಪ್ರಧಾನಿಯಾಗಿ ೧೯೪೭-೧೯೬೪.
ನೆಹರೂರವರು ೧೮ ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿದ್ದರು. ಇವರು ೧೯೬೪ರ ಮೇ ೨೭ ರಂದು ನಿಧನರಾದರು. ಪಂಡಿತ ಜವಹರಲಾಲ್ ನೆಹರೂರವರು ಆಗಸ್ಟ್ ೧೪ ರ ಮಧ್ಯರಾತ್ರಿ, ಸಂಸತ್ತನ್ನುದ್ದೇಶಿಸಿ ಮಾಡಿದ 'ಎ ಟ್ರಿಸ್ಟ್ ವಿಥ್ ಡೆಸ್ಟಿನಿ ಭಾಷಣದ ಕನ್ನದ ಅನುವಾದ' : "ಹಿಂದೊಮ್ಮೆ ನಾವು ವಿಧಿಗೊಂದು ಮಾತಿತ್ತಿದ್ದೆವು. ಅ ಭಾಷೆಯನ್ನು ಕೇವಲ ಸಂಪೂರ್ಣವಾಗಿಯಲ್ಲದೇ ಮಹತ್ತರವಾಗಿ ಕಾರ್ಯಗತಗೊಳಿಸುವ ಸಮಯವಿಂದೊದಗಿದೆ. ಈ ನಡು ರಾತ್ರಿಯ ವಿಶೇಷ ಘಳಿಗೆಯಲ್ಲಿ, ಇಡೀ ವಿಶ್ವ ನಿದ್ರಿಸುತ್ತಿರುವಾಗ, ಭಾರತ ಸ್ವಾತಂತ್ರ್ಯವನ್ನು ಮೈದಳೆದು ಮೇಲೇಳಲಿದೆ. ಹಳೆತೆಲ್ಲವನ್ನೊದರಿ ಹೊಸತನಕ್ಕೆ ಕಾಲಿಡುವ ಮತ್ತು ಶತಮಾನಗಳಿಂದ ಶೋಷಿಸಲ್ಪಟ್ಟ ನಾಡಿನಾತ್ಮ ಧ್ವನಿದಳೆವ ಈ ಘಳಿಗೆ, ಇತಿಹಾಸದ ಅಪರೂಪದ ಮುಹೂರ್ತಗಳಲ್ಲೊಂದು. ಈ ಶುದ್ಧ ಸಮಯದಲ್ಲಿ ಭಾರತದ ಮತ್ತು ಭಾರತಾಂಬೆ ಯ ಸತ್ಪ್ರಜೆಗಳ ಸೇವೆಗಾಗಿ, ಹೆಚ್ಚೇನು ವಿಶ್ವದೊಳಿತಿಗಾಗಿ ನಮ್ಮದೆಲ್ಲವನ್ನು ಮುಡಿಪಿಡುವುದಾಗಿ ಮಾಡುವ ಪ್ರತಿಜ್ಞೆ ಅತೀ ಸಮರ್ಪಕವೆನಿಸುತ್ತದೆ."

●ನೆಹರೂ ಅವರ ಅಂತಿಮ ಕವನ/ಬಯಕೆ
ಜವಾಹರಲಾಲ್‌ ನೆಹರೂ ಮೃತರಾದಾಗ ಅವರ ಪಕ್ಕದಲ್ಲಿ ಈ ಕವನದ ಸಾಲುಗಳನ್ನು ಗೀಚಿದ ಕಾಗದದ ತುಣುಕು ದೊರಕಿತ್ತು.
ಕಾನು ಸುಂದರವಾಗಿದೆ, ದಟ್ಟ ಕತ್ತಲೆಯಿಂದ ಕೂಡಿದೆ.
ಆದರೆ, ನಾನು ಮಾತುಗಳನ್ನು ಉಳಿಸಿಕೊಳ್ಳ ಬೇಕಿದೆ.

ತಾಮ್ರದ ಪಾತ್ರೆಯಲ್ಲಿನ ನೀರು ಸದೃಢ ಆರೋಗ್ಯಕ್ಕೆ ಸಹಕಾರಿ

🍁ತಾಮ್ರದ ಪಾತ್ರೆಯಲ್ಲಿನ ನೀರು ಸದೃಢ ಆರೋಗ್ಯಕ್ಕೆ ಸಹಕಾರಿ🍁

ಆಹಾರ, ಗಾಳಿಯಂತೆ, ನೀರೂ ಸಹ ನಮ್ಮೆಲ್ಲರ ಬದುಕಿಗೆ ಆಧಾರಸ್ಥಂಭವಾಗಿದೆ. ದಿನದ ಆರಂಭ ಮತ್ತು ಅಂತ್ಯ ನೀರಿನ ಸೇವನೆಯಿಂದಾಗುತ್ತಿದೆ. ಜೀವಜಲ ಎಂದೇ ನಾವೆಲ್ಲ ನಂಬಿದ್ದು, ಸಾಕಷ್ಟು ಪ್ರಮಾಣದಲ್ಲಿ ಶುದ್ಧ ನೀರು ಕುಡಿಯುವುದರಿಂದ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಬಹುದಾಗಿದೆ.
ಶುದ್ಧ ನೀರು ಎಂದಾಕ್ಷಣ, ಅಕ್ವಾಗಾರ್ಡ್, ಫಿಲ್ಟರ್, ಬಾಟಲಿ ನೀರು ಜ್ಞಾಪಕಕ್ಕೆ ಬರುವುದು ಸಹಜ. ಆದರೆ ಹಿಂದೆಲ್ಲಾ ಮಣ್ಣಿನ ಪಾತ್ರೆಗಳಲ್ಲಿ ನೀರು ತುಂಬಿಟ್ಟುಕೊಂಡು ಕುಡಿಯುತ್ತಿದ್ದರು. ಅದು ಆರೋಗ್ಯಕ್ಕೆ ಪೂರಕವಾಗಿರುತ್ತದೆ ಎಂದು ಹಿರಿಯರು ನಂಬಿದ್ದರು. ಈಗ ಅವು ನೇಪಥ್ಯಕ್ಕೆ ಸಂದಿವೆ.
ಅಲ್ಲದೆ, ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿಟ್ಟು ಕುಡಿಯುವ ಪದ್ಧತಿಯೂ ಜಾರಿಯಲ್ಲಿತ್ತು, ಎಲ್ಲರ ಮನೆಗಳಲ್ಲೂ ಇಂತಹ ವ್ಯವಸ್ಥೆ ಇರುವುದಿಲ್ಲ, ಇದ್ದರೆ ಒಳ್ಳೆಯದು.
ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿಡುವ ನೀರನ್ನು ಕುಡಿದರೆ, ಕಫ, ಪಿತ್ತ ಮತ್ತು ವಾತವನ್ನು ಸಮತೋಲನದಲ್ಲಿಡಲಿದೆ ಎಂಬುದನ್ನು ವಿಜ್ಞಾನ ಲೋಕವೇ ಹೇಳಿದೆ.
ಮಾತ್ರವಲ್ಲದೆ, ದೇಹದ ಆರೋಗ್ಯಕ್ಕೆ ಮಾರಕವಾಗುವಂತ ಅಂಶಗಳನ್ನು ನಿಯಂತ್ರಣದಲ್ಲಿಡಲಿದೆ. ತಾಮ್ರದಲ್ಲಿರುವ ಎಲೆಕ್ಟ್ರೋಲೈಟ್‌ಗಳು ನೀರು ಹಾಳಾಗುವುದನ್ನು ತಡೆಗಟ್ಟುತ್ತವೆ. ತಾಮ್ರದ ಪಾತ್ರೆಯಲ್ಲಿನ ನೀರಿನಲ್ಲಿ ತಾಜಾತನವಿರುತ್ತದೆ. ಈ ನೀರು ದೇಹಕ್ಕೆ ದಿವ್ಯಾಮೃತ ಎಂದು ಭಾವಿಸಲಾಗಿದೆ.
ನೀರನ್ನು ಶುದ್ಧೀಕರಿಸುವ ಗುಣಗಳನ್ನು ಹೊಂದಿರುವ ತಾಮ್ರ, ಬ್ಯಾಕ್ಟೀರಿಯಾಗಳ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದ್ದರಿಂದ ತಾಮ್ರದ ಪಾತ್ರೆಯಲ್ಲಿನ ನೀರು ನೈಸರ್ಗಿಕವಾಗಿ ಶುದ್ಧವಾಗಿರುತ್ತದೆ. ಅಲ್ಲದೆ, ಬ್ಯಾಕ್ಟೀರಿಯಾಗಳಿಂದಲೂ ಮುಕ್ತವಾಗಿರುತ್ತದೆ.
ಥೈರಾಯ್ಡ್ ಕಾರ್ಯ ವೈಖರಿಯನ್ನು ಸುಗಮಗೊಳಿಸುವ ಸಾಮರ್ಥ್ಯ ಹೊಂದಿರುವ ತಾಮ್ರವು ಥೈರಾಯ್ಡ್ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲಿದೆ.
ದಿನನಿತ್ಯ ತಾಮ್ರದ ಪಾತ್ರೆಯಲ್ಲಿನ ನೀರು ಕುಡಿಯುವುದರಿಂದ ಅರ್ಥರಿಟೀಸ್ ನೋವನ್ನು ಪರಿಹರಿಸಿ ಉರಿಯೂತದಂತಹ ಸಮಸ್ಯೆಗಳನ್ನು ದೂರ ಮಾಡುವ ಸಾಮರ್ಥ್ಯ ಹೊಂದಿರುತ್ತದೆ.
ತಾಮ್ರದಲ್ಲಿ ಆಂಟಿ ವೈರಲ್ ಮತ್ತು ಆಂಟಿ ಬ್ಯಾಕ್ಟೀರಿಯಾ ಗುಣಗಳಿದ್ದು, ಸೋಂಕು ಉಂಟಾಗದಂತೆ ತಡೆಯುತ್ತವೆ. ಹೊಸ ಜೀವಕೋಶಗಳನ್ನು ಬೆಳೆಯಲು ಮತ್ತು ಗಾಯಗಳಾಗಿದ್ದರೆ ಅವುಗಳನ್ನು ಶೀಘ್ರ ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ.
ಜೀರ್ಣಕ್ರಿಯೆಯನ್ನು ಉತ್ತಮಪಡಿಸಲು ತಾಮ್ರದ ಪಾತ್ರೆ ನೀರು ಸಹಕಾರಿಯಾಗಿದೆ. ದೇಹದಲ್ಲಿ ಕೆಂಪು ರಕ್ತಕಣಗಳನ್ನು ಉತ್ಪಾದಿಸಲು ನೆರವಾಗುತ್ತದೆ.
ಆಯುರ್ವೇದ ತಜ್ಞರ ಅಭಿಪ್ರಾಯದಂತೆ ತಾಮ್ರದ ಪಾತ್ರೆಯಲ್ಲಿ ತುಂಬಿಡುವ ನೀರನ್ನು ನಿಯಮಿತವಾಗಿ ಬೆಳಗಿನ ಜಾವ ಕುಡಿಯುವುದರಿಂದ ಮೊಡವೆ ಮುಕ್ತ ಮತ್ತು ಸುಂದರ ತ್ವಚೆಯನ್ನು ಪಡೆಯಬಹುದಾಗಿದೆ.
ತಾಮ್ರದ ಪಾತ್ರೆಯಲ್ಲಿನ ನೀರಿನ ಸೇವನೆಯಿಂದ ರಕ್ತಹೀನತೆ ಉಂಟಾಗುವುದನ್ನು ತಡೆಯಬಹುದಾಗಿದೆ. ತಾಮ್ರದಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ಮುಖದ ಮೇಲೆ ಕಾಣುವ ಸುಕ್ಕುಗಳು, ಗೆರೆಗಳು ಮತ್ತು ಕಲೆಗಳನ್ನು ನಿವಾರಿಸುತ್ತದೆ.

🍁✨🍁✨🍁✨🍁✨🍁

Wednesday, 19 October 2016

Life Is Very Strange !!!

💫Life Is Very Strange !!!💫

We Wish To Wear High
Brands, But
We Feel Most Comfortable
In Simple Dresses…

We Wish To Sit In A Five
Star Hotel With Elite
People, But
We Enjoy The Roadside
Vendor Food With Friends …

We Wish To Own Big Cars
& Go On Long Drives, Yet
We Talk Our Heart Out Only
While Walking Down A Long
Road …

We Have 64GB iPods Filled
With Songs, But
Sometimes A Song On Radio
Brings A Smile That Cannot Be
Compared …

Life Is Simple Indeed
But
We Make It Complex By
Running After What Never Gives
Us Happiness …

We Shouldn’t Chase Luxuries &
Glamour Blindly,
Lets Focus On The Peace Of
Heart n Soul Also … ♥ ♥

🌿🌱🌿🌱🌿🌱🌿🌱🌿

ಮೂರು ರೀತಿಯ ಸ್ಮೃತಿ

🌱ಮೂರು ರೀತಿಯ ಸ್ಮೃತಿ🌱



ನಾವು ಎರಡು ರೀತಿಯ ಜಗತ್ತುಗಳಲ್ಲಿ ಜೀವಿಸುತ್ತೇವೆ. ಒಂದು ಸ್ಮೃತಿಯ ಜಗತ್ತು, ಮತ್ತೊಂದು ನಿಜವಾದ ಜಗತ್ತು. ಸ್ಮೃತಿಯಲ್ಲಿ ಮೂರು ರೀತಿಯ ಸ್ಮೃತಿಗಳಿವೆ. 1) ಒಂದನೆಯ ರೀತಿಯ ಸ್ಮೃತಿಯಲ್ಲಿ ನಿಮಗೆ ನೆನಪಿದೆ ಆದರೆ ಅದರ ಬಗ್ಗೆ ನೀವೇನನ್ನೂ ಮಾಡಲಾರಿರಿ. ನಿಮ್ಮ ಬಾಲ್ಯದ ನೆನಪು ನಿಮಗಿದೆ, ಆದರೆ ಅದನ್ನು ಮತ್ತೆ ಮರಳಿ ಪಡೆಯಲಾರಿರಿ. 2) ಮತ್ತೊಂದು ರೀತಿಯ ಸ್ಮೃತಿ ಎಂದರೆ, ನೀವು ನೆನಪಿಸಿಕೊಳ್ಳುತ್ತೀರಿ ಮತ್ತು ಅದನ್ನು ಪಡೆದುಕೊಳ್ಳಲು ಬಹಳ ಪ್ರಯತ್ನ ಪಡುತ್ತೀರಿ. ಒಂದು ವೇಳೆ ನಿಮ್ಮ ಬೀಗದ ಕೈಯನ್ನು ಟೊರೊಂಟೊವಿನಲ್ಲೇ ಮರೆತು ನೀವು ಕೆನಡಾಗೆ ಬಂದು ಬಿಟ್ಟಿದ್ದರೆ, ಮತ್ತೆ ಏಳು ಗಂಟೆಗಳ ಕಾಲ ಗಾಡಿಯನ್ನು ಓಡಿಸಿಕೊಂಡು ಬಂದು ನಿಮ್ಮ ಬೀಗದ ಕೈಯನ್ನು ತೆಗೆದುಕೊಳ್ಳಬೇಕು. ಅದನ್ನು ತಕ್ಷ ಣವೇ ಪಡೆಯಲು ಸಾಧ್ಯವಿಲ್ಲ. ನೆನಪಿಸಿಕೊಂಡರೂ, ಬಹಳ ಪ್ರಯತ್ನ ಪಟ್ಟ ನಂತರ ಮಾತ್ರ ಅದನ್ನು ಪಡೆದುಕೊಳ್ಳುತ್ತೀರಿ. 3) ಮೂರನೆಯ ರೀತಿಯ ಸ್ಮೃತಿ ಎಂದರೆ ನೀವು ನೆನಪಿಸಿಕೊಳ್ಳುತ್ತೀರಿ ಮತ್ತು ಅದನ್ನು ತಕ್ಷ ಣವೇ ಪಡೆದುಕೊಳ್ಳುತ್ತೀರಿ. ನಿಮ್ಮ ಕನ್ನಡಕಗಳಿಗಾಗಿ ಹುಡುಕುತ್ತಿರುತ್ತೀರಿ ಮತ್ತು ಯಾರೋ ಬಂದು, ''ನಿನ್ನ ಕನ್ನಡಕ ನಿನ್ನ ತಲೆಯ ಮೇಲೇ ಇದೆಯಲ್ಲ!?'' ಎಂದಾಗ ನೀವು, ''ಓ ಹೌದು, ಅದು ಅಲ್ಲೇ ಇದೆ'' ಎಂದು ನೆನಪಿಸಿಕೊಳ್ಳುತ್ತೀರಿ. ಇಲ್ಲಿ ನೆನಪಿಸಿಕೊಂಡ ತಕ್ಷ ಣವೇ ಸಿಕ್ಕು ಬಿಡುತ್ತದೆ. ಅದನ್ನು ಪಡೆದುಕೊಳ್ಳಲು ಪ್ರಾಯಾಸ ಪಡಬೇಕಿಲ್ಲ. ಆಧ್ಯಾತ್ಮಿಕ ಪಯಣವು ಮೂರನೆಯ ರೀತಿಯ ಸ್ಮೃತಿ. ಅದನ್ನು ತಿಳಿದುಕೊಳ್ಳುವುದು, ಪಡೆದುಕೊಳ್ಳುವುದು, ಎಲ್ಲವೂ ಒಮ್ಮೆಲೇ ಆಗಿಬಿಡುತ್ತದೆ. ನೀವು ಮಾಡಬೇಕಾದದ್ದೆಂದರೆ ಆ ಸಂಬಂಧವನ್ನು ಅನುಭವಿಸುವುದು. ಆ ಸಂಬಂಧವನ್ನು ಅನುಭವಿಸುವುದು ಎಂದರೆ ನಿಜ ಜಗತ್ತಿಗೆ ನಮ್ಮನ್ನು ಸೇರಿಸುವ ಆ ಸ್ಮೃತಿ. ನಾವು ಜೀವಿಸುವ ಕಾಲ್ಪನಿಕ ಸ್ಮೃತಿಗಳ ಜಗತ್ತಿನಿಂದ ನಿಜವಾದ ಜಗತ್ತಿಗೆ ತೆರಳುವುದು. ಆ ಸಂಬಂಧವನ್ನು ಹೇಗೆ ಅನುಭವಿಸುವುದು? ಇಲ್ಲೇ ಗುರು ತತ್ವದ ಪಾತ್ರ ಬರುವುದು, ಏಕೆಂದರೆ ಆ ಸಂಬಂಧ ಉಂಟಾಗುವುದು ಗುರುವಿನಿಂದ ಮಾತ್ರ. ನೀವು ಬೆಂಗಳೂರಿನಲ್ಲಿದ್ದು, ಒಮ್ಮೆ ಅದನ್ನು ತಿಳಿದುಕೊಂಡರೆ ಸಾಕು. ಪದೇ ಪದೇ ಪ್ರಾಯಾಸಪಟ್ಟು ಬೆಂಗಳೂರಿನಲ್ಲಿ ಇದ್ದೀರೆಂದು ನೆನಪಿಸಿಕೊಳ್ಳುತ್ತಲಿರಬೇಕಿಲ್ಲ. ಅದೇ ರೀತಿಯಾಗಿ, ಸಂಬಂಧ ಅನುಭವಿಸಿದ ತಕ್ಷ ಣವೇ ಕಾಲ್ಪನಿಕವಾದ ಸ್ಮೃತಿಯ ಮೋಡಗಳಿಂದ ವಾಸ್ತವ ಜಗತ್ತಿಗೆ ಬಂದು ಬಿಡುತ್ತೀರಿ. ಅದೇ, ''ಓ'' ಎಂಬ ಆಶ್ಚರ್ಯಕರವಾದ, ವಿಸ್ಮಯಕಾರಕವಾದ ಸ್ಥಿತಿ. ಜ್ಞಾನದೊಡನೆ, ಗುರುವಿನೊಡನೆ ಸಂಬಂಧವನ್ನು ಬೆಳೆಸಿಕೊಂಡಾಗ ಚಿಂತಿಸುವ ಅವಶ್ಯಕತೆಯೇ ಇಲ್ಲ. ಚಿಂತೆ, ಆತಂಕ ಅಥವಾ ನಕಾರಾತ್ಮಕವಾದ ಭಾವನೆಗಳಿರಲು ಹೇಗೆ ಸಾಧ್ಯ? ಸಾಧ್ಯವೇ ಇಲ್ಲ! ಎಲ್ಲವೂ ಮಾಯವಾಗಿಬಿಡುತ್ತವೆ. ವಿಶಿಷ್ಟವಾಗಿ ಗುರು ಹುಣ್ಣೆಮೆಯಂದು ಈ ಸಂಬಂಧವನ್ನು ಅನುಭವಿಸಿ, ''ನಾನು ಸಂಬಂಧಪಟ್ಟಿದೆ, ದೈವದೊಡನೆ ಒಂದಾಗಿದ್ದೇನೆ'' ಎಂದು ಸಂತಸದಿಂದಿರುವುದು. ಇದರಿಂದ ತಕ್ಷ ಣವೇ ಸಂಭ್ರಮ, ಸಂತೋಷ ಉಂಟಾಗುತ್ತದೆ. ಸಂಭ್ರಮಿಸಲು ತಯಾರಿ ಮಾಡಿಕೊಳ್ಳಬೇಕಿಲ್ಲ. ಓರ್ವ ಕಡುಬಡವನು ತಾನೇ ರಾಜಕುಮಾರ ಎಂದು ಅರಿತುಕೊಂಡಂತೆ. ತಾನು ರಾಜಕುಮಾರನೆಂದು ಮರೆತು ಕಷ್ಟದಲ್ಲಿ ಸಿಲುಕಿ ಬಳಲುತ್ತಿದ್ದವನಿಗೆ ಯಾರೋ ಬಂದು, ''ಹೇ, ನೀನೇ ರಾಜಕುಮಾರ'' ಎಂದು ಎಬ್ಬಿಸಿದಂತೆ. ಒಂದೇ ವಾಕ್ಯದಿಂದ ಅವನಿಗೆ ನೆನಪು ಬಂದು ರಾಜ್ಯವನ್ನು ತಕ್ಷ ಣವೇ ಮರಳಿ ಪಡೆಯುತ್ತಾನೆ. ಅಲ್ಲಿ ಪ್ರಯತ್ನವೇ ಇಲ್ಲ. ನಿಮ್ಮ ಮನಸ್ಸಿಗೆ ಸದಾ ಶ್ರಮಪಡುವುದೇ ಒಂದು ಅಭ್ಯಾಸವಾಗಿಬಿಟ್ಟಿದೆ. ಮನಸ್ಸನ್ನು ಶಾಂತಗೊಳಿಸಿ, ಪ್ರಯತ್ನ ಮಾಡಲು ಏನೂ ಇಲ್ಲ ಎಂಬ ಅರಿವನ್ನು ಮನಸ್ಸಿಗೆ ಮೂಡಿಸಬೇಕು. ''ನಾನು ಸಂಬಂಧಪಟ್ಟಿದೇನೆ'' ಎಂದು ನೇರವಾದ ಸಂಬಂಧವನ್ನು ಗುರುತಿಸಬೇಕಷ್ಟೆ. ಎಲ್ಲವೂ ಆದಂತೆಯೆ!

* ಶ್ರೀ ಶ್ರೀ ರವಿಶಂಕರ್‌
🍁☘🍁☘🍁☘🍁☘🍁

ಶ್ರೀವಾಣಿ. ☘ಸೇವೆಯೆಂದರೆ ಹೀಗಿರಬೇಕು.....☘

ಶ್ರೀವಾಣಿ


☘ಸೇವೆಯೆಂದರೆ ಹೀಗಿರಬೇಕು.....☘


ಒಂದು ಊರು, ಆ ಊರಿನಿಂದ ಎರಡು ಮೈಲು ಅಂತರದಲ್ಲಿ ಒಂದು ಎತ್ತರದ ಬೆಟ್ಟವಿತ್ತು. ಆ ಬೆಟ್ಟದ ಮೇಲೆ ಒಂದು ವಿಶಾಲ ಸ್ಥಳವಿತ್ತು. ಆ ಊರಿನ ರಾಜನಿಗೆ ಆಲ್ಲಿ ಒಂದು ಸುಂದರ ಗುಡಿಯನ್ನು ಕಟ್ಟುವ ಆಶೆ ಇತ್ತು. ಒಂದು ದಿನ ಗುಡಿಯ ಕಟ್ಟಡ ಪ್ರಾರಂಭವಾಯಿತು.''ಪ್ರಜೆಗಳೆಲ್ಲ ಗುಡಿಗೆ ಯಥಾಶಕ್ತಿ ಉಚಿತ ಸೇವೆ ಮಾಡಬೇಕು,'' ಎಂದು ರಾಜನು ಡಂಗುರ ಸಾರಿಸಿದ. ಜನರು ರಾಜನ ಆಜ್ಞೆಯಂತೆ ಅತ್ಯಂತ ಉತ್ಸಾಹದಿಂದ ಗುಡಿಯ ಸೇವೆಗೆ ಮುಂದಾದರು. ತಮ್ಮ ತಮ್ಮ ಎತ್ತು, ಗಾಡಿಗಳನ್ನು ಹೂಡಿ; ಬೆಟ್ಟದ ಮೇಲೆ ಕಲ್ಲು, ಕಟ್ಟಿಗೆ, ನೀರು, ಮಣ್ಣು ಎಲ್ಲವನ್ನೂ ಸಾಗಿಸಿದರು. ಶ್ರೇಷ್ಠ ಶಿಲ್ಪಿಗಳು ಗುಡಿಯನ್ನು ಕಟ್ಟಲು ತೊಡಗಿದರು. ಆ ಊರಿನ ಬಡ ಮುದುಕಿ ಏನಾದರೂ ದೇವರ ಸೇವೆ ಮಾಡಬೇಕೆಂದು ಬೆಟ್ಟದ ಮೇಲೆ ಹೋದಳು. ಅಪಾರ ಜನರು ಇರುವುದು ಹೋಗುವುದು ಎತ್ತು, ದನಕರುಗಳ ಓಡಾಟ ನಡೆದಿತ್ತು. ಇದರಿಂದಾಗಿ ಗುಡಿಯ ಸುತ್ತಮುತ್ತ ನಿತ್ಯವೂ ವಿಪರೀತ ಕಸ ಬೀಳುತಿತ್ತು. ಮುದುಕಿಗೆ ಒಂದು ಸೇವೆ ಸಿಕ್ಕಂತಾಯಿತು. ಜನರು ಸಂಜೆ ಬೆಟ್ಟದಿಂದ ಕೆಳಗಿಳಿದ ಕೂಡಲೇ ಮುದುಕಿ ಬೇಗ ಎದ್ದು ಮೇಲೆ ಏರುತ್ತಿದ್ದಳು. ಗುಡಿಯ ಆವರಣದಲ್ಲಿ ಒಂದು ಕಡ್ಡಿಯೂ ಉಳಿಯದಂತೆ ಕಸಗುಡಿಸಿ ಬೇಗ ಎದ್ದು ನಸುಕಿನಲ್ಲಿ ಕೆಳಗೆ ಇಳಿದು ಬಿಡುತ್ತಿದ್ದಳು. ಯಾರು ಕಸಗುಡಿಸುತ್ತಾರೆಂದು ಯಾರಿಗೂ ಗೊತ್ತಾಗಲಿಲ್ಲ. ಎರಡು ವರುಷಗಳ ನಿರಂತರ ಪರಿಶ್ರಮದ ನಂತರ ಒಂದು ದಿನ ಗುಡಿಯ ಉದ್ಘಾಟನೆ ವೈಭವದಿಂದ ನೆರವೇರಿತು. ರಾಜನಿಗೆ, ಪ್ರಜೆಗಳಿಗೆ ಎಲ್ಲಿಲ್ಲದ ಹರ್ಷ ! ರಾಜನು ತನ್ನ ಹೆಸರಿನಲ್ಲಿ ಒಂದು ಶಿಲಾಶಾಸನ ಬರೆಯಿಸಿ ಗುಡಿ ಎದುರು ನಿಲ್ಲಿಸಿದ. ಶಿಲ್ಪಿಗಳಿಗೆ ಕೆಲಸಗಾರರಿಗೆಲ್ಲ ಕಾಣಿಕೆ ಕೊಟ್ಟು ಕಳುಹಿಸಿದ. ಅದೇ ದಿನ ರಾತ್ರಿ ರಾಜನ ಕನಸಿನಲ್ಲಿ ದೇವರು ಪ್ರತ್ಯಕ್ಷನಾದ. ರಾಜನು ಸಂತಸದಿಂದ ದೇವರಿಗೆ ವಂದಿಸಿ ಕೇಳಿದ -''ನನ್ನ ಸೇವೆ ನಿನಗೆ ಸಂತೋಷ ನೀಡಿತೇ?,'' ದೇವರು -''ನೀನೆಲ್ಲಿ ಸೇವೆ ಮಾಡಿರುವೆ?,'' ರಾಜ -''ಈ ವಿಶಾಲ ಗುಡಿ ಕಟ್ಟಿಸಿದ್ದು ಸೇವೆಯಲ್ಲವೇ ?,'' ದೇವರು - ''ಅಲ್ಲ, ಅದು ನೀನು ನಿನ್ನ ಶಿಲಾಶಾಸನಕ್ಕಾಗಿ ಮಾಡಿದ ಕೆಲಸವಷ್ಟೇ!,'' ರಾಜ -''ಎರಡು ವರುಷ ನಿರಂತರ ನನ್ನ ಪ್ರಜೆಗಳು, ಶಿಲ್ಪಿಗಳು ಮಾಡಿದ್ದು ಸೇವೆಯಲ್ಲವೇ ?,'' ದೇವರು-''ಪ್ರಜೆಗಳು ನಿನ್ನ ಆಜ್ಞೆಗಾಗಿ ಮಾಡಿದ್ದಾರೆ. ಶಿಲ್ಪಿಗಳೆಲ್ಲ ಸನ್ಮಾನ ಸತ್ಕಾರಗಳಿಗಾಗಿ, ಕಪ್ಪು ಕಾಣಿಕೆಗಾಗಿ, ಮಾಡಿದ್ದಾರೆ ! ಇದಾವುದೂ ಸೇವೆಯಲ್ಲ. ನಿನ್ನ ರಾಜ್ಯದಲ್ಲಿಯೇ ಒಂದೇ ಒಂದು ವ್ಯಕ್ತಿ ಮಾತ್ರ ನನ್ನ ಸೇವೆಯನ್ನು ಮನಮುಟ್ಟಿ ಮಾಡಿದೆ!,'' ರಾಜ-''ಆ ವ್ಯಕ್ತಿ ಯಾರು ?,''ದೇವರು-''ಇನ್ನಾರೂ ಅಲ್ಲ;ಒಂದು ಹಣ್ಣು ಹಣ್ಣಾದ ಮುದುಕಿ -ಈ ಗುಡಿಯ ಆವರಣವನ್ನೆಲ್ಲ ಇವತ್ತಿನವರೆಗೆ ಒಂದು ದಿನವೂ ಬಿಡದೇ ಕಸಗೂಡಿಸಿ ಹಸನ ಮಾಡಿ ಮರೆತು ಎಲೆಯ ಮರೆಯ ಕಾಯಿಯಂತೆ ಉಳಿದು ಬಿಟ್ಟಿದ್ದಾಳೆ. ಆ ಮುದುಕಿಯ ನಿಷ್ಕಾಮ ಸೇವೆಗಾಗಿ ನಾನು ಈ ಗುಡಿಯಲ್ಲಿ ನಿರಂತರ ಉಳಿಯುತ್ತೇನೆ!'' ರಾಜನು ಕನಸು ಒಡೆದು ಎಚ್ಚರವಾದಾಗ ಹಸನಾದ ಹೃದಯದ ಆ ಮುದುಕಿಯ ಗುಡಿಸಲು ಎದುರು ತಲೆಬಾಗಿ ನಿಂತಿದ್ದ. ''ದೇವದರ್ಶನದ ಮತ್ತೊಂದು ಸುಗಮೋಪಾಯವೆಂದರೆ ಈ ರೀತಿ 'ಮಾಡಿಮರೆ' ಯಾಗುವುದು !!

* ಶ್ರೀ ಸಿದ್ದೇಶ್ವರ ಸ್ವಾಮೀಜಿ
🍃🌱🍃🌱🍃🌱🍃🌱🍃

ಸೇವೆಯ ತೃಪ್ತಿ

ಪ್ರಶ್ನೆ: ಸೇವೆಯು ತೃಪ್ತಿಯನ್ನು ತರುತ್ತದೆ, ಪ್ರತಿಯೊಬ್ಬರೂ ಅದನ್ನು ಯಾಕೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಿಲ್ಲ? ಅದು ಯಾಕೆ ಎಲ್ಲರಿಗೂ ಸಹಜವಾಗಿ ಬರುವುದಿಲ್ಲ?



ಶ್ರೀ ಶ್ರೀ ರವಿ ಶಂಕರ್: ಸೇವೆಯನ್ನು ಮಾಡದಿರುವವನೊಬ್ಬನು ಒತ್ತಡದಲ್ಲಿರುವವನಾಗಿರುವುದು, ಅಸುರಕ್ಷಿತ, ಸ್ವಾರ್ಥಪರ ಅಥವಾ ಜ್ಞಾನವಿಲ್ಲದಿರುವವನಾಗಿರುವುದು ಸ್ವಾಭಾವಿಕವೇ. ಸ್ವಲ್ಪವಾದರೂ ಜ್ಞಾನವಿದ್ದರೆ, ಸೇವೆಯು ಸಹಜವಾಗಿರುತ್ತದೆ. ನೀವು ಸುಸಂಸ್ಕೃತರೂ ನಾಗರಿಕರೂ ಆಗಿದ್ದರೆ, ಆಗ ಸೇವೆಯು ಸಹಜವಾಗಿರುತ್ತದೆ. ಸೇವೆ ಮಾಡುವುದನ್ನು ಯಾರೂ ನಿಮಗೆ ಕಲಿಸಬೇಕಾಗಿಲ್ಲ. ಯಾವುದಾದರೂ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯಾರೂ ನಿಮಗೆ ಹೇಳಬೇಕಾಗಿಲ್ಲ.
ಚೆನ್ನೈ ಪ್ರವಾಹದ ಸಂದರ್ಭದಲ್ಲಿ ಏನಾಯಿತು ನೋಡಿ? "ನೀವೆಲ್ಲಾ ಬಂದು ಸಹಾಯ ಮಾಡಿ" ಎಂದು ಯಾರೂ ಜನರನ್ನು ಆಹ್ವಾನಿಸಲಿಲ್ಲ. ಚೆನ್ನೈಯ ಇಡೀ ಯುವಕರು, ಯುವಕರು ಮಾತ್ರವಲ್ಲ, ಚೆನ್ನೈಯ ಜನರೆಲ್ಲಾ ಒಟ್ಟು ಸೇರಿ ಪರಸ್ಪರ ಸಹಾಯ ಮಾಡಿದರು. ಈ ದುರಂತಗಳು ಯಾವುದೋ ವಿಚಿತ್ರವಾದ ರೀತಿಯಲ್ಲಿ ಜನರನ್ನು ಒಂದುಗೂಡಿಸುತ್ತವೆ, ಶತ್ರುಗಳನ್ನು ಒಂದುಗೂಡಿಸುತ್ತವೆ. ತಮ್ಮ ಸಹಜವಾದ ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳಲು ದುರಂತಗಳು ಜನರನ್ನು ವಿವಶರಾಗಿಸುತ್ತವೆ. ನೀವು ಬುದ್ಧಿವಂತರಾಗಿದ್ದರೆ, ನಿಮ್ಮ ಅತ್ಯಂತ ಒಳ್ಳೆಯ ಗುಣವನ್ನು ಹೊರತರುವುದಕ್ಕಾಗಿ ನೀವೊಂದು ದುರಂತಕ್ಕಾಗಿ ಕಾಯುವುದಿಲ್ಲ.  

SHIVA

             ⭐️Shiva⭐️


Everyone experiences life according to his or her individual sensitivities. Some people take great pleasure in food, others in the body, music, art, or some other expression of life. But in their very nature, external pleasures cannot be sustained. The only sustainable pleasure is that of the basis of all life. Unfortunately, very few people experience this fundamental dimension that we refer to as “Shiva.” The dimension of Shiva is the canvas on which everything in existence is painted. The play of life is nice as long as we know its limitations. If we invest our entire lives into the play, we will regret it one day. Some people are fortunate that their illusions are shattered early on in life. Others will only realize on their deathbed that they have wasted their lives.
I want you to look at it before it is too late. Imagine you had only a few minutes left to live. If you look at what you have done from birth until now, has it all been worthwhile? If you are wise enough to look at it now, you can craft your life in a beautiful way. You will know not only the colors of life but that which is the basis of life. Otherwise, ninety-five percent of humanity has some inane thoughts in their minds, all the time. Education teaches you how to conduct yourself in front of other people. Spiritual process is about how to conduct yourself internally. This is about turning inward and knowing the deeper roots of life. The mind is useful if you know when to turn it on, and when to turn it off. If it is out of control – on all the time – it is madness. This is the state the majority of people are in.



The spiritual process is about obliterating all that you ever thought you are – even your gender. It is about being here just as a piece of life. Only human beings, who are supposed to be the pinnacle of evolution, have made such a mess out of themselves. They have been given a mind that they do not know how to handle. All that is happening is the endless psychological drama of their thoughts and emotions. The quality of your life is determined by how beautiful you are within yourself. No one can see this; no one needs to acknowledge this; no one needs to pay attention to this. But this is the most worthwhile thing.
In this context, chanting “Shiva Shambho” can do wonders to you. Do not expect Shiva to come. He will not interfere with your life. This is not a religious process. This is about using sound as a tool to clear the mental nonsense. If you chant “Shiva Shambho” effectively, new energy, boundless Grace, and intelligence will be available to you.


LOVE & GRACE by

SADGURU VASUDEV
🌱☘🌱☘🌱☘🌱☘🌱

ಭಾವನೆಗಳನ್ನು ಮುದಗೊಳಿಸುವ ಹಬ್ಬ☘

☘ಭಾವನೆಗಳನ್ನು ಮುದಗೊಳಿಸುವ ಹಬ್ಬ☘


ಮರದೊಳಗಿನ ಹಣ್ಣನ್ನು ಕಿತ್ತು ತಿಂದರೆ ಪ್ರಕೃತಿ. ಅದೇ ಹಣ್ಣನ್ನು ತಂದು ಮನೆಯೊಳಗೆ ಜ್ಯೂಸ್‌ ಮಾಡಿ ಕುಡಿದರೆ ಸಂಸ್ಕೃತಿ. ಅದೇ ಹಣ್ಣನ್ನು ಕದ್ದು ತಿಂದರೆ ವಿಕೃತಿ. ಮನುಷ್ಯನ ಎಲ್ಲ ಕೃತಿಗಳಿಗೆ ನಾವು ಒಂದೊಂದು ಗುಣಗಳನ್ನು ತೊಡಿಸಿದ್ದೇವೆ. ಅವು ರಜಸ್ಸು, ಸಾತ್ವಿಕ, ತಾಮಸ ಗುಣಗಳು. ಹೀಗಾಗಿ ಸಂಸ್ಕೃತಿ ಒಂದು ಆಚರಣೆಯನ್ನು ಜನಪರವಾದ ಖುಷಿಯನ್ನಾಗಿ ಪರಿವರ್ತಿಸಿ, ಅದಕ್ಕೊಂದು ಚೌಕಟ್ಟನ್ನು ತೊಡಿಸುವುದು. ಹಾಗೆಯೇ ಕಾಲ ಕಾಲಕ್ಕೆ ತಪ್ಪದೇ ಆಚರಿಸುತ್ತಾ ಇತಿಹಾಸದ ಭಾಗವಾಗುವುದು ಕೆಲವರಿಗೆ ಮಾತ್ರ ಸಾಧ್ಯ. ಅದು ವ್ಯಕ್ತಿ, ಸಂಘ ಸಂಸ್ಥೆ, ಮಠ ಯಾವುದೋ ಆಗ ಬಹುದು. ಅದಕ್ಕೆ ಒಂದು ನಿಸ್ವಾರ್ಥತೆ ಇರುತ್ತದೆ. ಸಮೂಹವನ್ನು ಆರೋಗ್ಯಕರವಾಗಿಡುವಂತಹ ಉಮೇದು ಆ ಆಚರಣೆಗೆ ಇರುತ್ತದೆ. ಈ ಉಮೇದು ಹಬ್ಬ ಆಗಬೇಕು. ಹಬ್ಬ ನಮ್ಮ ಭಾವನೆಗಳನ್ನು ಮುದಗೊಳಿಸಬೇಕು. ನಮ್ಮ ವಿಚಾರ ದಾರಿದ್ರ್ಯವನ್ನು ದೂರ ಮಾಡಬೇಕು. ಮನೆಯಲ್ಲಿ ಸಂತೋಷ ಉಕ್ಕಿದರೆ ದೇಶದಲ್ಲಿ ಶಾಂತಿ ಇರುತ್ತದೆ. ಅದು ನಾಡು, ನುಡಿ, ನೆಲ ಜಲ, ಭಾಷೆ ಭಾಗವಾಗಿ ನಳನಳಿಸುತ್ತದೆ. ಆ ರೀತಿಯಿಂದ ಒಂದು ಭಾಗವೇ ಚಿತ್ರದುರ್ಗದ ಶರಣ ಸಂಸ್ಕೃತಿ ಉತ್ಸವ. ಹಬ್ಬದ ಸ್ವರೂಪಕ್ಕೆ ವೈಭವದ ಮೆರುಗು ನೀಡಿ ವಿಚಾರ ವೈಭವ, ಕಲೆಯ ವೈಭವ, ಭೌತಿಕ ಕಸರತ್ತಿನ ವೈಭವ, ಪ್ರಗತಿಯ ವೈಭವ ಈ ರೀತಿಯಾಗಿ ಸೃಜನಶೀಲವಾದ ಸ್ಪರ್ಶವನ್ನು ನೀಡಿದ ಕೀರ್ತಿ ಈ ಉತ್ಸವಕ್ಕೆ ಸಲ್ಲುತ್ತದೆ. ಬಡವರ ದಶಮಿಯಾಗಿರುವ ಇದಕ್ಕೆ ವರ್ಷ ವರ್ಷವೂ ತೋರಿಸುವ ಪ್ರಯತ್ನ ಈ ಉತ್ಸವದ ಉದ್ದೇಶ. ಇಂತಹ ಒಂದು ಉತ್ಸವ ಮತ್ತೆ ಮತ್ತೆ ನಮ್ಮನ್ನು ಸುಸಂಸ್ಕೃತರನ್ನಾಗಿಸಿ ಮಾಡಬೇಕು ಎಂಬುದೇ ಇದರ ಆಶಯ. ಸಂಸ್ಕೃತಿಯ ಜೀವಕಾರುಣ್ಯಕ್ಕೆ ಅಂದು ರಾಜ ಮಹಾರಾಜರು ಚಾಲನೆ ಕೊಟ್ಟು ಪ್ರೋತ್ಸಾಹಿಸುತ್ತಿದ್ದರು. ಧರ್ಮಗುರುಗಳ ಆಶ್ರಯದಲ್ಲಿ ಪೋಷಿಸುತ್ತಿದ್ದರು. ಅವುಗಳನ್ನು ಬದುಕಿನ ಭಾಗವಾಗಿ ಬಳಸುತ್ತಿದ್ದರು. ಎಲ್ಲ ಕಾಲದಲ್ಲೂ ಜಗತ್ತು ಯುದ್ಧ, ಶಾಂತಿ, ಕ್ಷೋಭೆ, ರಾಜ್ಯ ವಿಸ್ತರಣೆ, ಅಧಿಕಾರ ಸ್ಥಾಪನೆ , ಅಧಿಪತ್ಯದ ಹಂಬಲಗಳಲ್ಲಿ ಕೊಲಲ್ಲುವ ಕ್ರಿಯೆಯನ್ನು ಮುಂದುವರಿಸಿಕೊಂಡೇ ಬಂದಿದೆ. ಪಾಪಗಳ ಪ್ರಮಾಣ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಏರಿಕೆಯಾಗುತ್ತಲೇ ನಡೆದಿದೆ. ಭೂಮಿಯ ಮೇಲೆ ಆಡಮ್‌ ಮತ್ತು ಈವ್‌(ಮಾರ ಮತ್ತು ಮಾರಿ) ಈ ಇಬ್ಬರೇ ಇದ್ದಾಗ ಅವರ ಭಾವನೆಗಳು ಜಗತ್ತಿನ ಸೃಷ್ಟಿಯನ್ನು ಹೇಗೆ ಮುಂದುವರಿಸಿದವೋ ಅದೇ ರೀತಿ ಒಳ್ಳೆಯ ಮತ್ತು ಕೆಟ್ಟ ಗುಣಗಳು ಬೆಳೆಯುತ್ತಲೇ ಇವೆ. ಈ ವಿಸ್ತಾರವಾದ ಪ್ರಪಂಚವನ್ನು ಸಲಹುವುದಕ್ಕೆ ಕಾಣದ ಶಕ್ತಿಯ ನಿಯಂತ್ರಣದ ಜತೆ ಜತೆಗೇನೆ ನಾವೇ ರೂಪಿಸಿದ ವ್ಯವಸ್ಥೆಯ ಕಟ್ಟುಪಾಡುಗಳ ಮೂಲಕ ಕಾನೂನು ಕಟ್ಟಳೆ ಮಾಡತಕ್ಕದು, ಮಾಡಬಾರದು ಎಂಬ ಅಭಿಪ್ರಾಯ ಬೇಧಗಳಲ್ಲಿ ಸಂಸ್ಕೃತಿಯನ್ನು ರೂಪಿಸುತ್ತಾ ಬಂದಿದ್ದೇವೆ. ಇದನ್ನು ಆಯಾ ಕಾಲಘಟ್ಟದ ಶರಣರು, ದಾರ್ಶನಿಕರು, ಸಂತರು, ಅವಧೂತರು, ಯೋಗಿಗಳು, ಸಿದ್ಧಾಂತವಾದಿಗಳು ರೂಪಿಸುತ್ತಾ ಬಂದಿದ್ದಾರೆ. ಅಂತಹ ಒಂದು ಸಮಾಜಮುಖಿ ಸಂಸ್ಕೃತಿ ರೂಪಿಸುವ ಪ್ರಯತ್ನವೇ ಡಾ.ಶಿವಮೂರ್ತಿ ಮುರುಘಾ ಶರಣರು ಪ್ರತಿವರ್ಷ ಆಯೋಜಿಸುವ ಶರಣ ಸಂಸ್ಕೃತಿ ಉತ್ಸವ. ಇಂತಹ ಉತ್ಸವಗಳು ಹೆಚ್ಚಿದಷ್ಟು ಸಮಾಜ ಆರೋಗ್ಯ, ಚಿಂತನೆ, ಬೆಳವಣಿಗೆಯ ಗತಿ ಆರೋಗ್ಯಕವಾಗಿರುತ್ತದೆ.

-ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
🍁☘🍁☘🍁☘🍁☘🍁

ಬಾಯಾರಿಕೆ ಮತ್ತು ಚಲನೆ

ಬಾಯಾರಿಕೆ ಮತ್ತು ಚಲನೆ



ಸತ್ಯವು ಕೂಡ ಬೆಳಕಿನಂತೆಯೇ ಯಾವಾಗಲೂ ಲಭ್ಯವಿರುವಂತಹುದು. ಇಲ್ಲಿ ಸತ್ಯ ಮುಖ್ಯವಾದುದಲ್ಲ ಬದಲಿಗೆ ನಾನು ಕಣ್ಣುಗಳನ್ನು ಹೊಂದಿರುವುದು ಅಥವಾ ಆ ಕಣ್ಣುಗಳನ್ನು ತೆರೆದಿರುವುದು ಮುಖ್ಯ. ನೀರು ಯಾವಾಗಲೂ ಲಭ್ಯವಿರುತ್ತದೆ. ಆದರೆ ನೀರಿನ ಅವಶ್ಯಕತೆ ಉಂಟಾಗುವುದು ನನಗೆ ಬಾಯಾರಿಕೆ ಇದ್ದಾಗ ಮಾತ್ರ. ಆದ್ದರಿಂದಲೇ ನೀರಿನ ಕುರಿತು ನನ್ನ ಮಾತುಗಳನ್ನು ಆರಂಭಿಸುವ ಮೊದಲು ನಾನು ನಿಮ್ಮ ಬಾಯಾರಿಕೆಯ ಬಗ್ಗೆ ಚರ್ಚಿಸಲು ಬಯಸುತ್ತೇನೆ. ಮೂರನೆಯದಾಗಿ ನಾನು ನಿಮಗೆ ಹೇಳಲು ಬಯಸುವುದು, ನನ್ನ ತಿಳಿವಳಿಕೆಯಲ್ಲಿ ಧರ್ಮದ ಕುರಿತು ನಿಮ್ಮ ಹಂಬಲವೇ ಅತ್ಯಂತ ಅಮೂಲ್ಯವಾದುದು. ಅಂಥ ಧರ್ಮದ ತೃಷೆ ನಿಮ್ಮಲ್ಲಿ ಉಂಟಾಗಲೆಂದು ಬಯಸುತ್ತೇನೆ. ಏಕೆಂದರೆ ಯಾರಲ್ಲಿ ಧರ್ಮದ ಕುರಿತು ಬಾಯಾರಿಕೆ ಉಂಟಾಗುವುದೋ ಅವರು ದೀರ್ಘಕಾಲ ಧಾರ್ಮಿಕರಾಗದೇ ಹಾಗೇ ಉಳಿದಿರುವುದು ಸಾಧ್ಯವಾಗುವುದಿಲ್ಲ. ಯಾವುದೇ ವ್ಯಕ್ತಿ ವರ್ಷಗಳಿಂದಲೂ ನಾನು ಬಾಯಾರಿದ್ದೇನೆ ಆದರೆ ಈವರೆಗೆ ನಾನು ನೀರನ್ನು ಹುಡುಕಿಕೊಂಡು ಹೊಗಿಲ್ಲ ಎಂದು ಹೇಳುವುದನ್ನು ಕಲ್ಪಿಸಿಕೊಳ್ಳುವುದೂ ನನ್ನಿಂದ ಸಾಧ್ಯವಿಲ್ಲ. ಬಾಯಾರಿದರೂ ಬಾವಿಯನ್ನು ಹುಡುಕಿಕೊಂಡು ಹೋಗದಿರುವುದು ಅಸಾಧ್ಯ. ಆತ ಹೋಗದೇ ಇರಲು ಪ್ರಮುಖವಾದ ಕಾರಣ ಆತನಲ್ಲಿ ಬಾಯಾರಿಕೆಯೇ ಉಂಟಾಗದಿರುವುದು. ಬಾಯಾರಿಕೆ ಉಂಟಾದ ಮೇಲೆ ಕಾಲುಗಳು ತಾವಾಗಿಯೇ ಕರೆದುಕೊಂಡು ಹೋಗುವವು. ಬಾಯಾರಿಕೆ ಉಂಟಾದಾಗ ಉಸಿರು ಸಿಕ್ಕಿ ಹಾಕಿಕೊಳ್ಳುವುದು, ಪ್ರಾಣ ಅತ್ತಲೇ ಓಡಲು ಆರಂಭಿಸುವುದು. ಎಲ್ಲಿ ಬಾಯಾರಿಕೆ ಇರುವುದೊ ಅಲ್ಲಿ ಚಲನೆ ಆರಂಭವಾಗುವುದು. ಎಲ್ಲಿ ಬಾಯಾರಿಕೆ ಇರುವುದಿಲ್ಲವೋ ಅಲ್ಲಿ ಚಲನೆಯೂ, ಹುಡುಕಿಕೊಂಡು ಸಾಗುವಿಕೆಯೂ ಸಂಭವಿಸುವುದಿಲ್ಲ. ಈ ಜಗತ್ತು ಅಧಾರ್ಮಿಕವಾಗಿದೆಯೆಂದು ಜನರು ಹೇಳುವರು. ಜಗತ್ತು ಅಧಾರ್ಮಿಕವಾಗಿಲ್ಲ, ಬದಲಿಗೆ ಧರ್ಮದ ಕಡೆಗೆ ಸಾಗಬೇಕೆಂಬ ಆತುರಕೆ, ತೀವ್ರತೆ, ಹಂಬಲ ಕಡಿಮೆಯಾಗಿದೆ. ಅದರ ಕುರಿತು ಬಯಕೆ ನಾಶವಾಗಿದೆ. ಮಹಾವೀರನಂತಹ ವ್ಯಕ್ತಿ ಹಳ್ಳಿಯ ಮೂಲಕ ಹಾದು ಹೋಗುತ್ತಿದ್ದರೆ, ಆತನ ಆನಂದ, ಆತನ ಶಾಂತಿ, ಆತನ ತೇಜಸ್ಸನ್ನು ನೋಡುವ ಲಕ್ಷಾಂತರ ಮಂದಿಯ ಹೃದಯದಲ್ಲೂ, ಅಂಥ ಶಾಂತಿ, ಅಂಥ ಆನಂದ ನಮಗೆ ಹೇಗೆ ಲಭ್ಯವಾಗಬಹುದು ಎಂದು, ಒಂದು ಬಯಕೆ ಉಂಟಾಗುವುದು, ಮಹಾವೀರ, ಬುದ್ಧನಂತಹ ವ್ಯಕ್ತಿಗಳು ಯಾರಿಗೂ ಉಪದೇಶ ಮಾಡುವುದಿಲ್ಲ. ಅವರ ಉಪದೇಶ ಒಂದೇ, ಅದು ಅತ್ಯಂತ ತೀವ್ರವಾಗಿಯೂ ಇರುತ್ತದೆ. ಅವರು ನಿಮ್ಮ ಸನಿಹದಲ್ಲಿ ಹಾದು ಹೋದರೆ ಸಾಕು ನಿಮ್ಮೊಳಗೆ ಒಂದು ತೀವ್ರತರವಾದ ಅಪೇಕ್ಷೆಯನ್ನು ಹುಟ್ಟು ಹಾಕುತ್ತಾರೆ. ಅವರು ನೀಡುವ ಬೋಧೆಗಳು ಅಷ್ಟು ಮುಖ್ಯವಲ್ಲ. ಏಕೆಂದರೆ ಅವರ ಬೋಧೆಗಳನ್ನು ಪುಸ್ತಕದಲ್ಲಿ ಬರೆದಿಡಬಹುದು. ಆದರಿಂದ ನಿಮಗೆ ಯಾವುದೇ ಉಪಯೋಗ ಆಗುವುದಿಲ್ಲ. ಈ ಜಗತ್ತಿನಲ್ಲಿ ಪ್ರತಿಯೊಬ್ಬ ಶಿಕ್ಷಕ ನಷ್ಟವಾದಾಗಲೂ ಆತನೊಮದಿಗೆ ಆತನ ಶಿಕ್ಷಣವೂ ನಷ್ಟವಾಗುವುದು. ಅವುಗಳಿಗೆ ಯಾವುದೇ ಅರ್ಥ ಇರುವುದಿಲ್ಲ. ಶಿಕ್ಷಕನ ವಿಶೇಷತೆ ಆತ ನೀಡುವ ಶಿಕ್ಷಣದಲ್ಲಿ ಇರುವುದಿಲ್ಲ. ವೈಶಿಷ್ಟ್ಯವು ನಿಮ್ಮೊಳಗೆ ಒಂದು ತೀವ್ರತರವಾದ ಬಯಕೆ ಅಥವಾ ಹಂಬಲವನ್ನು ಹುಟ್ಟುಹಾಕುವುದರ ಮೇಲೆ ಅವಲಂಬಿಸಿರುತ್ತದೆ. ಮೃತ ಶಿಕ್ಷಕ ನಿಮ್ಮಲ್ಲಿ ಅಂಥ ಬಯಕೆ ಅಥವಾ ಹಂಬಲವನ್ನು ಹುಟ್ಟು ಹಾಕುವುದು ಸಾಧ್ಯವಿಲ್ಲ. ಜೀವಂತವಿರುವ ವ್ಯಕ್ತಿ ಮಾತ್ರವೇ ಅಂಥ ಸ್ಥಿತಿಯನ್ನು ಹುಟ್ಟು ಹಾಕಬಲ್ಲ.

- ಓಶೋ
🌿☘🌿☘🌿☘🌿☘🌿

ಬೆಲ್ಲ, ಸಿದ್ಧೌಷಧ ಹಲವು ತೊಂದರೆಗಳಿಗೆಲ್ಲ!

👆 ಬೆಲ್ಲ, ಸಿದ್ಧೌಷಧ ಹಲವು ತೊಂದರೆಗಳಿಗೆಲ್ಲ!

ನಮ್ಮ ಹಳ್ಳಿಗಳಲ್ಲಿ ಕುಡಿಯಲು ನೀರು ಕೇಳಿದರೆ ನೀರಿನ ಜೊತೆ ಬೆಲ್ಲದ ತುಂಡುಗಳನ್ನು ಕೂಡ ತಂದಿಡುತ್ತಾರೆ. ಅ ದೊಂದು ಸಂಪ್ರದಾಯ, ಆದರೆ ಬೆಲ್ಲ ತಿಂದರೆ ಅದ್ಭುತವಾದ ಆರೋಗ್ಯಕರ ಗುಣಗಳನ್ನು ಪಡೆಯಬಹುದೆಂದು ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ.

 ಬೆಲ್ಲವನ್ನು ತಿಂದರೆ ಅನೇಕ ಸಣ್ಣ ಪುಟ್ಟ ಸಮಸ್ಯೆಗಳನ್ನು ಮಾತ್ರವಲ್ಲ, ದೊಡ್ಡ ಸಮಸ್ಯೆಗಳನ್ನೂ ದೂರವಿಡಬಹುದು.

ಬನ್ನಿ, ಬೆಲ್ಲದಲ್ಲಿರುವ ಆರೋಗ್ಯಕರ ಗುಣಗಳೇನು ಎಂದು ನೋಡೋಣ:

೧.ರಕ್ತವನ್ನು ಶುದ್ಧೀಕರಿಸುತ್ತದೆ.   ಈ ಸಿಹಿ ವಸ್ತು ರಕ್ತವನ್ನು ಶುದ್ಧೀಕರಿಸುತ್ತದೆ. ಆದ್ದರಿಂದ ದಿನಾ ಸ್ವಲ್ಪ ಬೆಲ್ಲವನ್ನು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಜೀರ್ಣಕ್ರಿಯೆಗೆ ಒಳ್ಳೆಯದು ಇದು ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಅಜೀರ್ಣವಾದಾಗ ಸ್ವಲ್ಪ ಬೆಲ್ಲವನ್ನು ಈರುಳ್ಳಿ ಜೊತೆ ತಿಂದರೆ ಒಳ್ಳೆಯದು.

೨.ಹೊಟ್ಟೆಯನ್ನು ತಂಪಾಗಿಸುತ್ತದೆ ಬೆಲ್ಲ ಹೊಟ್ಟೆಯನ್ನು ತಂಪಾಗಿಸುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಒಂದು ತುಂಡು ಬೆಲ್ಲವನ್ನು ಬಾಯಿಗೆ ಹಾಕಿಕೊಳ್ಳಿ.

೩.ರಕ್ತ ಹೀನತೆ ಇರುವವರಿಗೆ ಅತ್ಯುತ್ತಮವಾದ ಮನೆಮದ್ದು ಇದಾಗಿದೆ. ಇದರಲ್ಲಿ ಕಬ್ಬಿಣದಂಶ ಅತ್ಯಧಿಕವಾಗಿದೆ. ಹದಿ ಹರೆಯದ ಹೆಣ್ಣು ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರು ಬೆಲ್ಲವನ್ನು ತಿನ್ನುವುದರಿಂದ ರಕ್ತಹೀನತೆ ಸಮಸ್ಯೆಯನ್ನು ತಡೆಗಟ್ಟಬಹುದು.

೪.ತ್ವಚೆಗೆ ತುಂಬಾ ಒಳ್ಳೆಯದು ಬೆಲ್ಲ ತ್ವಚೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೊಡವೆ ಇದ್ದರೆ ಬೆಲ್ಲವನ್ನು ತಿನ್ನಿ, ಮೊಡವೆಯನ್ನು ನಿಯಂತ್ರಿಸಿ ಕಮ್ಮಿಗೊಳಿಸುತ್ತದೆ. ಇದು ತ್ವಚೆಯ ಹೊಳಪನ್ನೂ ಹೆಚ್ಚಿಸುತ್ತದೆ.

೫.ಗಂಟಲು ಕೆರೆತ, ಕೆಮ್ಮು ಕಾಣಿಸಿದರೆ ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಸುಟ್ಟು ಅದನ್ನು ಬೆಲ್ಲದ ಜೊತೆ ತಿನ್ನುವುದು ಒಳ್ಳೆಯದು.

೬.ತುಂಬಾ ದಣಿವಾದಾಗ ದುಬಾರಿ ಖರ್ಚಿನ ಗ್ಲೂಕೋಸ್ ಅಥವಾ ಎನರ್ಜಿ ಡ್ರಿಂಕ್ಸ್ ನ ಅಗತ್ಯವಿಲ್ಲ! ಒಂದು ಬೆಲ್ಲದ ತುಂಡನ್ನು ಬಾಯಿಗೆ ಹಾಕಿ ನೀರು ಕುಡಿದರೆ ಸಾಕು. ದಣಿವು ಕ್ಷಣಾರ್ಧದಲ್ಲಿ ಮಾಯ!

೭.ಬೆಲ್ಲದ ಚೂರನ್ನು ಬಾಯಿಗೆ ಹಾಕಿ ಕೊಂಡರೆ ಉಸಿರಾಟದ ತೊಂದರೆ ಕಡಿಮೆಯಾಗುತ್ತದೆ. ಅಸ್ತಮಾ ಕಾಯಿಲೆ ಇರುವವರು ದಿನಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಲ್ಲವನ್ನು ತಿನ್ನುವುದು ಒಳ್ಳೆಯದು.

೮. ನಿಯಮಿತವಾದ ಬೆಲ್ಲದ ಸೇವನೆ ಸಂಧಿನೋವನ್ನು ಕಡಿಮೆ ಮಾಡುತ್ತದೆ ಮಂಡಿ ನೋವು, ಕೈಕಾಲು ನೋವು ಇವುಗಳನ್ನು ಕಮ್ಮಿ ಮಾಡುವಲ್ಲಿ ಬೆಲ್ಲ ಪ್ರಯೋಜನಕಾರಿಯಾಗಿದೆ.

೯.ಮೈಗ್ರೇನ್(ಅರ್ಧ ತಲೆಶೂಲೆ) ಕಾಯಿಲೆಯನ್ನು ಗುಣಪಡಿಸುವಲ್ಲಿ ಕೂಡ ಬೆಲ್ಲ ಸಹಾಯ ಮಾಡುತ್ತದೆ. ತಲೆನೋವು ಕಾಣಿಸಿಕೊಂಡಾಗ ಒಂದು ಚೂರು ಬೆಲ್ಲ ತಿಂದು ಆರಾಮವಾಗಿರಿ.

೧೦. ಮುಟ್ಟಿನ ಸಮಯದಲ್ಲಿ ಅಧಿಕ ನೋವು ಕಾಣಿಸಿದರೆ ಮಾತ್ರೆ ತೆಗೆದುಕೊಳ್ಳುವ ಬದಲು ಬೆಲ್ಲವನ್ನು ಸೇವಿಸುವದರಿಂದ ನೋವು ಕಡಿಮೆಯಾಗುವುದು.

ಬೆಲ್ಲವನ್ನು ಸೇವಿಸಿ ಉತ್ತಮ ಆರೋಗ್ಯ ಪಡೆಯಿರಿ. ಸಕ್ಕರೆಗಿಂತ ಬೆಲ್ಲ ಎಲ್ಲಾ ರೀತಿಯಿಂದಲೂ ಅತಿ ಉತ್ತಮ.

ನೆನಪಿರಲಿ. ನಾಲ್ಕು ಬಿಳಿ ವಿಷಗಳೆಂದು ಪರಿಗಣಿಸಲ್ಪಟ್ಟ ವಸ್ತುಗಳಲ್ಲಿ ಸಕ್ಕರೆಯೂ ಒಂದು!

ಮೈದಾ, ಸಕ್ಕರೆ, ಬಿಳಿ ಉಪ್ಪು ಹಾಗೂ ಆಶ್ಚರ್ಯಕರ ಎಂಬಂತೆ ಹಾಲು, ಇವೇ ನಾಲ್ಕು ಬಿಳಿವಿಷಗಳು ಎನ್ನಲಾಗಿದೆ. ಇವುಗಳ ಬಳಕೆಯನ್ನು ಪೂರ್ತಿ ನಿಷೇಧ ಮಾಡಲಾಗದಿದ್ದರೂ ಸಾಧ್ಯವಾದಷ್ಟು ಮಿತಗೊಳಿಸಿದರೆ ಅದು ನಮ್ಮ ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗಿದೆ.👆👌👍

Quotes

Luck means who gets the opportunity. Brilliant means who creates the opportunity. Winner means who uses the opportunity..with Brilliancy …!
“Be an Achiever.”


★★★★★
Beautiful Tomorrow Never Comes !When It Comes,Its Already TODAY !In The Search For Beautiful Tomorrow,DON’T Lose Your Wonderful “TODAY”……..

Really, WORRYING does not take away tomorrow’s TROUBLES, It takes away today’s PEACE.  So, Don’t cry for what happened yesterday, don’t  fear what happens today, dont expect anything from tomorrow…. Enjoy the moments….

 Lucky people get opportunities; Brave people create opportunities; And Winners are those that convert problems into opportunities

★★★★—★★★★


 Once a Wise man asked God.What is meaning of Life?God replied,Life itself has no meaning,Life is an opportunity To create a Meaning.

★★★★★★★★★
Rishika Jain 

ಏನಿದೆಯೋ ಅದನ್ನು ತಿಳಿಯುವುದು

ಏನಿದೆಯೋ ಅದನ್ನು ತಿಳಿಯುವುದು



ಜೀವನ ಎನ್ನುವುದು ಸಂಘರ್ಷ. ಸಂಘರ್ಷ ಎಂದರೇನು ಎಂಬುದು ನಮಗೆ ಗೊತ್ತಿದೆ. ಸಂಘರ್ಷ ಅರ್ಥವಾದಾಗ 'ಏನಿದೆಯೋ', ಅದರ ಸತ್ಯ ತಿಳಿಯುತ್ತದೆ. ಈ ಸತ್ಯದ ಅವಲೋಕನದಿಂದಾಗಿ ಮನಸ್ಸು 'ಏನಿದೆಯೋ' ಅದರಿಂದ ಬಿಡುಗಡೆ ಹೊಂದುತ್ತದೆ. ಜೀವನದಲ್ಲಿ ತುಂಬಾ ದುಃಖವಿದೆ. ಆದರೆ ಅದನ್ನು ಪರಿಹರಿಸುವುದು ಹೇಗೆಂದು ತಿಳಿದಿಲ್ಲ. ದುಃದ ಪರಿಹಾರವೇ ವಿವೇಕದ ಉದಯ. ದುಃಖವೆಂದರೇನು? ಅದರ ಸ್ವರೂಪವೇನು? ರಚನೆಯೇನು? ಎಂಬುದನ್ನು ತಿಳಿಯದೆ ಪ್ರೇಮವೆಂದರೇನು? ಎಂಬುದು ನಮಗೆ ತಿಳಿಯದು. ಏಕೆಂದರೆ ನಮ್ಮ ಪಾಲಿಗೆ ಪ್ರೇಮವೆಂಬುದು ದುಃಖ, ನೋವು, ಯೋತನೆ, ಸುಖ ಹಾಗೂ ಅಸೂಯೆ. 'ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂದು ಹೆಂಡತಿಗೆ ಹೇಳುವ ಗಂಡ ಅದೇ ವೇಳೆಗೆ ಮಹತ್ವಾಕಾಂಕ್ಷಿಯು ಆಗಿದ್ದರೆ ಅಂಥ ಪ್ರೀತಿಗೆ ಅರ್ಥವಿದೆಯೇ? ಮಹತ್ವಾಕಾಂಕ್ಷೆ ಇರುವಾಗ ಪ್ರೀತಿಸಲು ಸಾಧ್ಯವೇ? ಪೈಪೋಟಿಯ ಮನುಷ್ಯ ಪ್ರೀತಿಸಬಲ್ಲನೇ? ಆದರೂ ನಾವು ಪ್ರೇಮ, ಮಾರ್ದವತೆ, ಯುದ್ಧಗಳನ್ನು ನಿಲ್ಲಿಸುವ ಬಗ್ಗೆ ಮಾತಾಡುತ್ತೇವೆ. ಇನ್ನೊಂದು ಕಡೆಯಿಂದ ಸ್ಪರ್ಧಾತ್ಮಕವಾಗಿದ್ದೇವೆ, ಮಹತ್ವಾಕಾಂಕ್ಷಿಗಳಾಗಿದ್ದೇವೆ. ನಮ್ಮ ಸ್ಥಾನಗಳ ಬಗ್ಗೆ ಕಾತರರಾಗಿದ್ದೇವೆ ಇತ್ಯಾದಿ. ಇದೆಲ್ಲವೂ ದುಃಖವನ್ನುಂಟುಮಾಡುತ್ತದೆ. ದುಃಖಕ್ಕೆ ಕೊನೆ ಇದೆಯೇ? ನಿಮ್ಮನ್ನು ನೀವು ಅರ್ಥಮಾಡಿಕೊಂಡಾಗ ಅಂದರೆ 'ಏನಿದೆಯೋ' ಅದನ್ನು ತಿಳಿದಾಗ ದುಃಖ ಮಾಯಾವಾಗುತ್ತದೆ. ಆಗ ನಿಮಗೇಕೆ ದುಃಖ ಒದಗಿತು, ಆ ದುಃಖವೆಂಬುದು ಆತ್ಮ ಮರುಕವೆ? ಅಥವಾ ಒಂಟಿತನದ ಭಯವೇ? ನಿಮ್ಮ ಬದುಕಿನ ಖಾಲಿತನವೇ? ಅಥವಾ ಪರರನ್ನು ಅವಲಂಬಿಸುವುದರಿಂದ ಬಂದ ದುಃಖವೇ ಎಂಬುದು ತಿಳಿಯುತ್ತದೆ. ಇದೆಲ್ಲ ನಮ್ಮ ಜೀವನದ ಒಂದು ಭಾಗ. ಇವುಗಳನ್ನು ಅರಿತಾಗ ಬದುಕಿನ ದೊಡ್ಡ ಸಮಸ್ಯೆ ಅದೇ ಸಾವಿನ ಬಗ್ಗೆ ಚಿಂತನೆಗಳು; ನಾವು ಪುನರ್ಜನ್ಮದ ಬಗ್ಗೆ, ಸಾವಿನ ಅನಂತರ ಏನಾಗುತ್ತದೆ ಎಂಬ ಬಗ್ಗೆ ಮಾತನಾಡುತ್ತಿಲ್ಲ ಅಥವಾ ಸಾವಿನ ಬಗ್ಗೆ ಭಯ ಪಡುವವರಿಗೆ ಆ ಬಗ್ಗೆ ಭರವಸೆಯನ್ನು ತುಂಬುತ್ತಿಲ್ಲ. ವೃದ್ಧಾಪ್ಯವಿದೆ ಅದರೊಂದಿಗೆ ಕಾಯಿಲೆ ಕಸಾಲೆ, ಸ್ಮೃತಿನಾಶ, ವಯಸ್ಸಾಗುತ್ತಿದೆ ಎಂಬ ಭಯ ಎಲ್ಲ ಇದೆ. ಈ ದೇಶದಲ್ಲಿ ವಯಸ್ಸಾದವರನ್ನು ತರುಣರೆಂದು ಕರೆಯಲಾಗುತ್ತಿದೆ! ಎಂಬತ್ತರ ಹರೆಯದ ಹೆಂಗಸನ್ನು ತರುಣಿ ಎಂದು ಸಂಬೋಧಿಸಲಾಗುತ್ತದೆ. ಜನರಿಗೆ ಭಯವಿದೆ. ಭಯವಿರುವಲ್ಲಿ ತಿಳಿವಳಿಕೆಯಿಲ್ಲ. ಆತ್ಮ ಮರುಕವಿರುವಲ್ಲಿ ದುಃಖದಿಂದ ಬಿಡುಗಡೆಯಿಲ್ಲ. ಹೀಗಾಗಿ ಸಾಯುವುದು ಎಂದರೇನು? ಜೀವಿಯ ಬದುಕು ಮುಗಿಯುತ್ತದೆ. ಮನುಷ್ಯ ಸುಮಾರು 90 ವರ್ಷ ಬದುಕಬಹುದು. ವಿಜ್ಞಾನಿಗಳು ಏನಾದರೊಂದು ಔಷಧ ಕಂಡು ಹುಡುಕಿದರೆ 150 ವರ್ಷ ಬದುಕಿದರೂ ಬದುಕಬಹುದು. ಈ ನೂರೈವತ್ತು ವರ್ಷ ಏಕೆ ಬದುಕಬೇಕು? ದೇವರಿಗೇ ಗೊತ್ತು! ನೂರೈವತ್ತು ವರ್ಷ ಬದುಕಿದರೂ ನಿಮ್ಮ ದೇಹ ಸವೆಯುತ್ತದೆ. ಏಕೆಂದರೆ ಸಂಘರ್ಷ, ಭಯ, ಉದ್ವಿಗ್ನತೆ, ಮನುಷ್ಯರು ಹಾಗೂ ಪ್ರಾಣಿಗಳನ್ನು ಕೊಲ್ಲುವುದು- ಹೀಗೆ ತೀರ ಕೆಟ್ಟದಾಗಿ ಬದುಕುತ್ತೇವೆ. ನಾವು ನಮ್ಮ ಬದುಕನ್ನು ಎಷ್ಟೊಂದು ಕೆಡೆಸಿಕೊಳ್ಳುತ್ತೇವೆ! ಹೀಗಾಗಿ ವೃದ್ಧಾಪ್ಯವೆಂಬುದು ಭಯಾನಕ ಸಂಗತಿಯಾಗುತ್ತದೆ. ಆದರೂ ಯುವಕರು, ಮಧ್ಯವಯಸ್ಕರು ಪ್ರಾಯದವರು ಸಾಯುತ್ತಾರೆ. ಭೌತಿಕ ಮರಣದ ಹೊರತಾಗಿ ಅನಿವಾರ‍್ಯವಾದ ಸಾಯುವುದು ಎಂದರೇನು? ಚರಮದೇಹದ ಅಂತ್ಯ ಎಂಬುದಕ್ಕಿಂತ ಆಳವಾದ ಅರ್ಥ ಮರಣಕ್ಕಿದೆ.

* ಜೆ. ಕೃಷ್ಣಮೂರ್ತಿ
☘🌿☘🌿☘🌿☘🌿☘

ಕಥೆ

ಒಬ್ಬ ಹುಡ್ಗ ಇದ್ದ. ಅವ್ನಿಗೆ ಮೂಗಿನ ತುದೀಲೇ ಕೋಪ. ಚಿಕ್ಕಚಿಕ್ಕ ವಿಷಯಗಳಿಗೂ ಸಿಕ್ಕಾಪಟ್ಟೆ ಸಿಟ್ಟಾಗಿ ಅನಾಹುತಕಾರಿಯಾಗೆಲ್ಲ ಪ್ರತಿಕ್ರಿಯಿಸಿಬಿಡ್ತಿದ್ದ. ದೊಡ್ಡವನಾಗ್ತಾ ಆಗ್ತಾ ಇದು ಅತಿರೇಕಕ್ಕೆ ಹೋಗಿ ಅವನಿಗೇ ಅಪಾಯ ತಂದೊಡ್ಡಬಹುದು ಅಂತ ಅವನ ಅಪ್ಪನಿಗೆ ಅನಿಸಿತು. ಈಗಲೇ ಇವನನ್ನು ತಿದ್ದಬೇಕು ಎಂದು ನಿರ್ಧರಿಸಿದ. ಅದೊಂದು ದಿನ ಮಗ ತುಂಬ ಆರಾಮಾಗಿ ಇರುವಾಗ ಕರೆದ. ಒಂದು ಪ್ಯಾಕೆಟ್ ಮೊಳೆ ಕೊಟ್ಟ. ಅದರಲ್ಲಿ ಸುಮಾರು ನೂರಿನ್ನೂರು ಮೊಳೆಗಳಿದ್ದವು. ಜತೆಗೊಂದು ಸುತ್ತಿಗೇನೂ ಕೊಟ್ಟ. ಸೀದಾ ಮನೆ ಮುಂದಿದ್ದ ಮರದ ಬೇಲಿಯ ಬಳಿ ಕರೆತಂದು ಮಗನಿಗೆ ಹೇಳಿದ..
'ನೋಡು.. ಯಾಕೆ ಅಂತ ಈಗ ಹೇಳಲ್ಲ. ನೀನೂ ಕೇಳಬೇಡ. ನೀನು ಯಾವಾಗೆಲ್ಲ ತಾಳ್ಮೆ ಕಳೆದುಕೊಂಡು ಕೋಪಗೊಳ್ತೀಯೋ ಅಂಥ ಪ್ರತಿ ಸಂದರ್ಭದಲ್ಲೂ ಈ ಮರದ ಬೇಲಿಗೆ ಒಂದು ಮೊಳೆ ಹೊಡಿ'.  ಮಗನಿಗೆ ವಿಚಿತ್ರ ಅನಿಸಿದರೂ ಅಪ್ಪನ ಮಾತಿಗೆ ಒಪ್ಪಿದ. ಈ ಟಾಸ್ಕ್ ನ ಮೊದಲ ದಿನ, ಒಂದೇ ದಿನಕ್ಕೆ ಬರೋಬ್ಬರಿ ಮೂವತ್ತೇಳು ಮೊಳೆ ಹೊಡೆದ! ನಿಜಕ್ಕೂ ಮೊಳೆ ಹೊಡೆದು ಹೊಡೆದು ಅವನ ಕೋಪ ಹೆಚ್ಚಿತ್ತು ಅನಿಸುತ್ತೆ. ಇನ್ನೂ ಎರಡು ಮೊಳೆ ಹೊಡೆದ. ಕೆಲವು ಮೊಳೆಗಳು ಬೆಂಡಾಗಿದ್ದವು. ಕೆಲವು ಎಷ್ಟು ಹೊಡೆದರೂ ಒಳಗೆ ಹೋಗುತ್ತಿರಲಿಲ್ಲ. ಕೆಲವು ಮೊಳೆ ಹೊಡೆಯುವ ಭರದಲ್ಲಿ ಕೈಗೇ ಏಟು ಬಿದ್ದಿದ್ದವು. ಆದರೆ ಹುಡುಗ ಕೊಟ್ಟಿದ್ದ ಟಾಸ್ಕ್ ನ ನಿಲ್ಲಿಸಲಿಲ್ಲ. ಪ್ರತಿ ದಿನ ಆತ ಕೋಪಗೊಳ್ಳುವುದು ಮೊಳೆ ಹೊಡೆಯುವುದು ಮುಂದುವರಿಯಿತು. ಆದರೆ ಅವನಿಗೇ ಗೊತ್ತಿಲ್ಲದಂತೆ ಎರಡೇ ವಾರದಲ್ಲಿ ಬೇಲಿಗೆ ಹೊಡೆವ ಮೊಳೆಗಳ ಸಂಖ್ಯೆ ಗಣನೀಯ ಇಳಿಕೆ ಕಂಡಿತ್ತು. ಹೀಗೆ ಬೇಲಿಗೆ ಮೊಳೆ ಹೊಡೆಯೋದಕ್ಕಿಂತ ಕೋಪ ಅದುಮಿಟ್ಟುಕೊಳ್ಳೋದೇ ಸಲೀಸು ಎಂದು ಅವನಿಗೆ ಅನಿಸತೊಡಗಿತ್ತು.
ಅದೊಂದು ದಿನ ಖುದ್ದು ಅವಧಿಯಲ್ಲಿ ಅಚ್ಚರಿ ಕಾದಿತ್ತು. ಒಂದಿಡೀ ದಿನ ಆತ ಒಮ್ಮೆಯೂ ಕೋಪಗೊಳ್ಳಲೇ ಇಲ್ಲ. ಬೇಲಿಗೆ ಒಂದು ಮೊಳೆಯೂ ಬೀಳಲಿಲ್ಲ! ಹುಡುಗನಿಗೆ ತನ್ನ ಮೇಲೆ ತನಗೇ ಹೆಮ್ಮೆ ಎನಿಸತೊಡಗಿತು. ಸೀದಾ ಓಡಿ ಹೋಗಿ ಅಪ್ಪನ ಬಳಿ ಹೇಳಿಕೊಂಡ… 'ಅಪ್ಪಾ ಇವತ್ತು ಒಂದೇ ಒಂದು ಮೊಳೆ ಕೂಡಾ ಹೊಡೀಲಿಲ್ಲ. ನಾನೊಂದ್ಸಲಾನೂ ಕೋಪ ಮಾಡ್ಕೊಳ್ಲಿಲ್ಲ!' ಅಪ್ಪನಿಗೆ ತುಂಬ ಖುಷಿಯಾಯ್ತು. 'ಈಗ ಕೋಪಾನೇ ಬರ್ತಿಲ್ವಾ ಮರಿ' ಅಂತ ಕೇಳ್ದ. ಮಗ ಹೇಳ್ದ ಬರುತ್ತೆ ಅಪ್ಪಾ… ಆದರೆ ಅದನ್ನ ಕಂಟ್ರೋಲ್ ಮಾಡ್ಕೊಳೋದನ್ನು ಕಲಿತುಕೊಂಡಿದ್ದೀನಿ ನಿಮ್ಮೀ ಟಾಸ್ಕ್ ನಿಂದ. ಆದರೆ ಟಾಸ್ಕ್ ಇಲ್ಲಿಗೇ ಮುಗಿದಿರಲಿಲ್ಲ. ಬೇಲಿಯ ಬಳಿ ಕರೆದುಕೊಂಡು ಬಂದ ಅಪ್ಪ ಹೇಳಿದ. ಇವತ್ತಿಂದ ನಿನಗೆ ಇನ್ನೊಂದು ಸವಾಲು. 'ಒತ್ತರಿಸಿಬಂದ ಕೋಪವನ್ನು ನೀನು ಯಾವಾಗೆಲ್ಲ ಕಂಟ್ರೋಲ್ ಮಾಡ್ಕೊಳ್ತೀಯೋ ಆಗೆಲ್ಲ ನೀನು ಹೊಡೆದಿರೋ ಒಂದೊಂದೇ   ಮೊಳೆಯನ್ನು ಬೇಲಿಯಿಂದ ಕಿತ್ತು ತೆಗೀತಾ ಬಾ. ಯಾಕೆ ಏನು ಅಂ  ತ ಆಮೇಲೆ ಹೇಳ್ತೀನಿ'. ಮಗನಿಗೆ ವಿಸ್ಮಯ ಎನಿಸಿತು.
ನಾನಾಗಲೇ ಕೋಪ ಕಳ್ಕೊಂಡಿದೀನಿ. ಆದರೂ ಯಾಕೆ ಇನ್ನೊಂದು ಚಾಲೆಂಜು ಅಂತ. ಆದರೆ ಅಪ್ಪನ ಮಾತಿಗೆ ಮರುಮಾತಾಡದೇ ಒಪ್ಪಿಕೊಂಡ. ಒಂದಷ್ಟು ವಾರಗಳಲ್ಲಿ ಬೇಲಿಗೆ ಅವನೇ ಚಚ್ಚಿದ್ದ ಅಷ್ಟೂ ಮೊಳೆಗಳನ್ನೂ ಒಂದೊಂದಾಗಿ ತೆಗೆದು ಮುಗಿಸಿದ್ದ. ಅಪ್ಪನ ಎದುರು ಬಂದು ನಿಂತು 'ಟಾಸ್ಕ್ ಕಂಪ್ಲೀಟ್' ಅಂದ. ಅಪ್ಪ ತುಂಬ ಪ್ರೀತಿಯಿಂದ ಮಗನ ಕೈ ಹಿಡಿದುಕೊಂಡ. ತಲೆನೇವರಿಸುತ್ತಾ ಬೇಲಿಯ ಬಳಿ ಕರೆದೊಯ್ದ. ಒಣಮರದ ಬೇಲಿಯನ್ನು ಗಮನಿಸಿದ. ಒಂದೇ ಒಂದು ಮೊಳೆಯೂ ಇರಲಿಲ್ಲ. 'ಭೇಷ್ ಮಗನೇ..' ಮಗನ ಮುಖದಲ್ಲಿ ತಾನೇನೋ ಯಾವುದೋ ದೊಡ್ಡ ಸಾಧನೆ ಮಾಡಿದ ಖುಷಿ. ಆಗ ತಂದೆ ಬೇಲಿಯನ್ನು ತೋರಿಸಿ ಹೇಳಿದ 'ಈ ಬೇಲಿ ನೀನು ಮೊಳೆ ಹೊಡೆಯೋಕೆ ಮೊದಲು ಹೇಗಿತ್ತು.. ಮೊಳೆ ಹೊಡೆದು ಮತ್ತೆ ಕಿತ್ತು ತೆಗೆದ ಮೇಲೆ ಹೇಗಿದೆ ಅಂತ ಒಮ್ಮೆ ನೋಡು. 'ಮಗ ನೂರಾರು ಮೊಳೆ ಹೊಡೆದು ಕಿತ್ತೆಗೆದಿದ್ದ ಆ ಬೇಲಿಯನ್ನು ಸೂಕ್ಷ್ಮವಾಗಿ ನೋಡ್ತಾ ಹೋದ. ಎಲ್ಲೆಡೆ ತೂತುತೂತುಗಳು. ಅಪ್ಪ ಶಾಂತವಾಗಿ ಹೇಳಲಾರಂಭಿಸಿದ.. ಮಗ ಅಷ್ಟೇ ಶಾಂತ ಚಿತ್ತದಲ್ಲಿ ಕೇಳಿಸಿಕೊಳ್ಳತೊಡಗಿದ… 'ಮಗೂ.. ಕೋಪದಲ್ಲಿ ನೀನಾಡೋ ಮಾತುಗಳು, ನೀನು ನೀಡೋ ಪ್ರತಿಕ್ರಿಯೆಗಳು ಎಂದೂ ಅಳಿಸೋಕಾಗದ ಗಾಯ ಮಾಡಿಬಿಡ್ತವೆ. ಈ ಬೇಲಿಗಾಗಿದೆ ನೋಡು.. ಆ ಥರ. ನೀನೆಷ್ಟೇ ಸಲ ಆಮೇಲೆ ಕ್ಷಮೆ ಕೇಳು, ಗಾಯ ಹುಷಾರಾಗಬಹುದು. ಆದರೆ ಗಾಯದ ಕಲೆ ಮಾಸೋದೇ ಇಲ್ಲ. 'ಮಗ ಪಾಠ ಕಲಿತದ್ದು ಮೊಳೆ ಹೊಡೆದಾಗಲೂ ಅಲ್ಲ, ಮೊಳೆ ತೆಗೆದಾಗಲೂ ಅಲ್ಲ. ಆನಂತರ ಉಳಿದಿದ್ದ ಗಾಯದ ಕಲೆಗಳನ್ನು ಕಂಡ ಮೇಲೆ. ತುಂಬ ಸಾಂದರ್ಭಿಕ ಎಂಬಂತೆ ಈ ಕಿರುಗತೆ ಇಂದು ಕಣ್ಣಿಗೆ ಬಿತ್ತು. 'ಲಾ ಆಫ್ ಸೀಕ್ರೆಟ್ಸ್' ಅಂತೊಂದು ಪುಸ್ತಕ ಇದೆ. ನಾವು ಏನನ್ನು ಯೋಚಿಸ್ತಾ ಇರ್ತೀವೋ ಅದಕ್ಕೆ ಸಂಬಂಧಿಸಿದ್ದು ನಮ್ಮತ್ತ ಸೆಳೆಯಲ್ಪಡ್ತವಂತೆ. ಈ ಕತೆಯೂ ಹಾಗೇ ಬಂದಿರಬಹುದೆನೋ ಗೊತ್ತಿಲ್ಲ.

ವಿಶ್ವಾಸ

ಪ್ರಶ್ನೆ: ನನ್ನ ವಿಶ್ವಾಸವು ಅಲುಗಾಡಿದೆ. ಒಬ್ಬ ವ್ಯಕ್ತಿಯಾಗಿ ನಾನು, ಈ ಆಘಾತದಿಂದ ಹೊರಬರಲು ಇತರರಿಗೆ ಸಹಾಯ ಮಾಡಲು ಸಾಧ್ಯವೇ?




ಶ್ರೀ ಶ್ರೀ ರವಿ ಶಂಕರ್: ಹೇ! ಒಂದು ನೆರೆಯು ನಿನ್ನ ವಿಶ್ವಾಸವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಹಾಗಿದ್ದಲ್ಲಿ ಅದು ವಿಶ್ವಾಸವೇ ಅಲ್ಲ. ಸಂಕಟದ ಪ್ರತಿ ಕ್ಷಣದಲ್ಲೂ ನಿನಗೆ ಸಹಾಯವು ದೊರಕುವುದು ಮತ್ತು ನಿನಗೆ ಸಹಾಯ ಮಾಡಲಾಗುವುದು ಎಂಬುದನ್ನು ಸುಮ್ಮನೇ ತಿಳಿ. ನಿನ್ನೊಂದಿಗೆ ನಿಲ್ಲುವ, ನಿನಗೆ ಸಹಾಯ ಮಾಡುವ ಒಂದು ಶಕ್ತಿಯಿದೆ. ಅಷ್ಟನ್ನೇ ನೀನು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದುದು.

ಒಂದು ಧಾರಾಕಾರ ಮಳೆ ಅಥವಾ ಒಂದು ನೆರೆ ಅಥವಾ ಒಂದು ಕ್ಷಾಮವು ನಿನ್ನ ವಿಶ್ವಾಸವನ್ನು ಅಲುಗಾಡಿಸಬಲ್ಲದಾದರೆ, ಆಗ ಅದು ನಿಜವಾಗಿಯೂ ವಿಶ್ವಾಸವಲ್ಲ. ಅದೊಂದು ಪ್ರಾಸಂಗಿಕ ಪರಿಕಲ್ಪನೆ ಅಷ್ಟೇ. ಇದು ವಿಶ್ವಾಸಕ್ಕಿರುವ ಪರೀಕ್ಷೆಯ ಸಮಯವಾಗಿದೆ, ಹೀಗಾಗಿ ಅದನ್ನು ಅಚಲವಾಗಿರಿಸು

ಪ್ರಶ್ನೆ: ಗುರುದೇವ, ಸಂಕಟಕಾಲದಲ್ಲಿ ಭಾವನೆಗಳನ್ನು ನಿಯಂತ್ರಿಸುವುದು ಹೇಗೆ?



ಶ್ರೀ ಶ್ರೀ ರವಿ ಶಂಕರ್:ಉಸಿರಾಡುವುದು, ಉಸಿರಾಡುವುದು ಮತ್ತು ಉಸಿರಾಡುವುದು.
ಉಸಿರಾಟವೆಂಬುದು ಪ್ರಕೃತಿಯು ನಿಮ್ಮಲ್ಲಿ ಹಾಕಿರುವ ಅತ್ಯಂತ ದೊಡ್ದ ರಹಸ್ಯವಾಗಿದೆ. ಅದು ನಿಮ್ಮ ಭಾವನೆಗಳೊಂದಿಗೆ ಸಂಬಂಧ ಹೊಂದಿದೆ. ಉಸಿರಾಟದ ಅಭ್ಯಾಸದ ತಂತ್ರದ ಮೂಲಕ ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸಬಹುದು. ನಿಮ್ಮಲ್ಲಿ ಹಲವರು ಇದನ್ನು ಅನುಭವಿಸಿರುವಿರಿ ಎಂದು ನನಗನಿಸುತ್ತದೆ, ಅಲ್ಲವೇ?

(ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)

ಯಾರು ಇದನ್ನು ಅನುಭವಿಸಿಲ್ಲವೋ ಅವರು ನಿಯಮಿತವಾಗಿ ಸ್ವಲ್ಪ ಉಸಿರಾಟದ ಅಭ್ಯಾಸಗಳನ್ನು ಮಾಡಬೇಕು. ಆಗ ನಿಮಗೆ ನಿಮ್ಮ ಮನಸ್ಸಿನ ಮೇಲೆ ಹೆಚ್ಚಿನ ಹಿಡಿತವಿರುವುದು.

ನಿಜವಾದ ಸೇವೆ ..


ಪ್ರಶ್ನೆ: ನಿಜವಾದ ಸೇವೆ ಯಾವುದು? ನನ್ನ ಪ್ರತಿಯೊಂದು ಕ್ರಿಯೆಯೂ ಹೇಗೆ ಸೇವೆಯಾಗಬಲ್ಲದು?




ಶ್ರೀ ಶ್ರೀ ರವಿ ಶಂಕರ್: ಸೇವೆಯೆಂದರೆ, ಅವನಂತೆ ಮಾಡುವುದು. ’ಅವನು’ ಎಂದರೆ, ಸೃಷ್ಟಿಕರ್ತ. ಅವನು ನಿಮಗಾಗಿ ಎಲ್ಲವನ್ನೂ ಮಾಡುತ್ತಾನೆ ಮತ್ತು ಅವನು ನಿಮ್ಮಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ಆದುದರಿಂದ, ಪ್ರತಿಫಲವಾಗಿ ಏನನ್ನೂ ನಿರೀಕ್ಷಿಸದೆಯೇ, ನಿಮ್ಮಿಂದ ಏನು ಸಾಧ್ಯವೋ ಅದನ್ನು ಮಾಡುವುದು; ಇದು ಸೇವೆಯೆಂದು ಕರೆಯಲ್ಪಡುತ್ತದೆ.
ಖಂಡಿತವಾಗಿಯೂ ಅಲ್ಲೊಂದು ಪ್ರತಿಫಲವಿದೆ. ನಿಸ್ಸಂಶಯವಾಗಿ ಅದರಿಂದ ಒಂದು ಲಾಭವಿದೆ, ಆದರೆ ನೀವು ಪ್ರತಿಫಲವನ್ನು ನಿರೀಕ್ಷಿಸುವಾಗ, ಅದು ಸೇವೆಯಾಗುವುದಿಲ್ಲ. ಏನನ್ನೂ ನಿರೀಕ್ಷಿಸದೆಯೇ, ಏನನ್ನೂ ಬಯಸದೆಯೇ, ಕೇವಲ ಮಾಡುವುದಕ್ಕೋಸ್ಕರ ಮಾಡುವುದು ಸೇವೆಯೆಂದು ಕರೆಯಲ್ಪಡುತ್ತದೆ.

ಪ್ರಶ್ನೆ: ಗುರುದೇವ, ಯಾರನ್ನೂ ಕೆಟ್ಟವರೆಂದು ಪರಿಗಣಿಸಬಾರದೆಂದು ನೀವು ಈಗಷ್ಟೇ ಹೇಳಿದಿರಿ. ಇತರರು ನಮ್ಮ ಜೊತೆ ಕೆಟ್ಟದಾಗಿ ನಡೆದುಕೊಂಡರೆ, ಅದಕ್ಕೆ ನಾವು ಹೇಗೆ ಪ್ರತಿಕ್ರಿಯಿಸಬೇಕು?



ಶ್ರೀ ಶ್ರೀ ರವಿ ಶಂಕರ್: ಇತರರಿಗೆ ನಿಮ್ಮ ಬಗ್ಗೆ ಒಂದು ನಕಾರಾತ್ಮಕ ಅಭಿಪ್ರಾಯವಿದ್ದರೆ, ಅದು ಅವರ ಸಮಸ್ಯೆ, ನಿಮ್ಮದಲ್ಲ. ನಿಮ್ಮ ಕಡೆಯಿಂದ, ಯಾರನ್ನೂ ಕೆಟ್ಟವರಾಗಿ ಪರಿಗಣಿಸಬೇಡಿ. ಹೀಗೆ ಮಾಡುವುದರಿಂದ, ನಿಮ್ಮ ಮನಸ್ಸು ಸ್ಪಷ್ಟವಾಗಿಯೂ ಆಹ್ಲಾದಕರವಾಗಿಯೂ ಇರುವುದು ಮತ್ತು ನಿಮ್ಮ ಬುದ್ಧಿಯು ತೀಕ್ಷ್ಣವಾಗಿರುವುದು. ಇಲ್ಲದಿದ್ದರೆ, ಯಾವ ಜನರನ್ನು ನೀವು ಕೆಟ್ಟವರೆಂದು ಪರಿಗಣಿಸುವಿರೋ ಅವರು ಒಂದು ಭೂತದಂತೆ ನಿಮ್ಮ ಮನಸ್ಸನ್ನು ಕಾಡಲು ತೊಡಗುವರು. ಅಂತಹ ಯೋಚನೆಗಳು ನಿಮ್ಮ ಮನಸ್ಸನ್ನು ಹೊಕ್ಕಾಗ, ಸೃಜನಾತ್ಮಕವಾದ ಏನನ್ನಾದರೂ ಮಾಡಲು ನಿಮಗೆ ಸಾಧ್ಯವಾಗದು.

ನಾವು ಯಾರು?

#ಮಧುವಿದ್ಯಾ

ನಾವು ಯಾರು?

ಇದನ್ನು ಯಾರೂ ಸರಿಯಾಗಿ,
ಪೂರ್ಣವಾಗಿ ತಿಳಿಯರು.

ಪ್ರಾಸಂಗಿಕವಾಗಿ,
ಸಾಪೇಕ್ಷಿಕವಾಗಿ
ನಾವು ಯಾರು?
ಎಂಬುದನ್ನು ಜಗತ್ತು ಹೇಳುತ್ತದೆ.

ಆದರೆ ನಿಜವಾಗಿ ನಾವು ಯಾರು?
ಯಾರಿಗೂ ತಿಳಿಯದು.
ಎಲ್ಲ ಅಭಿಪ್ರಾಯ ಕಳೆದು ನೋಡಿದಾಗ ಎನು ಸತ್ಯವಾಗಿ ಉಳಿಯುತ್ತದೆಯೋ ಅದೇ "ನಾನು" ಎನ್ನುವುದರ ನಿಜ!

ಅದು ದೇವರು,
ಅದು ನಮ್ಮ ಸ್ವರೂಪ,
ಮಾನವ ತಳೆದ ಎಲ್ಲ ದೈವೀ ಕಲ್ಪನೆಗಳನ್ನು ಕಳೆದುಹಾಕಿದಾಗ ಏನು ಉಳಿಯುತ್ತದೆಯೋ ಅದು ದೇವರು.

ಘನ ಸತ್ಯ.
ಅದಕ್ಕೆ ಯೋಗ್ಯ ಶಬ್ದ
'ಬಯಲು! '
"ಶೂನ್ಯ!"

ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು

ಸಾಮಾನ್ಯ ಜ್ಞಾನಕ್ಕೂ ತಿಳಿಯುವ ವಾಸ್ತು

ಸಾಮಾನ್ಯ ಜ್ಞಾನಕ್ಕೂ ತಿಳಿಯುವ ವಾಸ್ತು




ವಾಸ್ತು ಶಾಸ್ತ್ರವು ಖಂಡಿತವಾಗಿಯೂ ಒಂದು ವಿಜ್ಞಾನ. ಪ್ರಾಚೀನ ಕಾಲದಲ್ಲಿ ಈ ವಿಜ್ಞಾನವನ್ನು ಅಭಿವೃದ್ಧಿಗೊಳಿಸಲಾಯಿತು ಮತ್ತು ಅದು ವೇದದ ಒಂದು ಭಾಗ. ಆದರೆ ಇಂದಿನ ದಿನದಲ್ಲಿ ಆ ವಿಜ್ಞಾನ ನಮಗೆ ಪೂರ್ಣವಾಗಿ ಲಭ್ಯವಾಗಿಲ್ಲ. ತಾಳೆಗರಿಗಳ ಮೇಲೆ ಅದನ್ನು ಬರೆದು ಪ್ರಾಚೀನ ವಿಶ್ವವಿದ್ಯಾಲಯಗಳಲ್ಲಿ ಮತ್ತು ಗ್ರಂಥಾಲಯಗಳಲ್ಲಿ ಅದನ್ನು ಇಡಲಾಗಿತ್ತು. ಆದರೆ ಕ್ರಿಮಿಗಳು ಮತ್ತು ಇಲಿಗಳು ಅವುಗಳನ್ನು ನಾಶ ಮಾಡಿಬಿಟ್ಟವು. ಇದರ ಸಾಕಷ್ಟು ಜ್ಞಾನ ಇಂದು ನಮಗೆ ಲಭ್ಯವಾಗಿಲ್ಲ. ಆದ್ದರಿಂದ ಇಂದಿನ ದಿನದಲ್ಲಿ ಜನರು ವಾಸ್ತು ಶಾಸ್ತ್ರದ ತಮ್ಮದೇ ಬ್ರ್ಯಾಂಡ್‌ಗಳನ್ನು, ಸಿದ್ಧಾಂತಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಒಂದನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳಿ. ಒಬ್ಬರು ವಾಸ್ತುವಿನ ದೋಷಗಳಿಂದ ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿರಲಿ, ಎಲ್ಲದಕ್ಕಿಂತಲೂ ದೊಡ್ಡದಾದದ್ದು ಕೃಪೆ. ''ಓಂ ನಮಃ ಶಿವಾಯ''ದ ಮಂತ್ರೋಚ್ಚಾರಣೆಯಿಂದ ಎಲ್ಲವನ್ನೂ ನಿವಾರಿಸಬಹುದು. ಈ ಮಂತ್ರೋಚ್ಚಾರಣೆಯಿಂದ ಎಲ್ಲಾ ಸಮಸ್ಯೆಗಳು ಮತ್ತು ನಕಾರಾತ್ಮಕತೆಯು ಬಿದ್ದು ಹೋಗುತ್ತದೆ. ವಾಸ್ತುವಿನ ಕೆಲವು ಮೂಲಭೂತ ತತ್ವಗಳು ತಾವೇ ವಿವರಣೆಯನ್ನು ನೀಡುತ್ತವೆ. ಉದಾಹರಣೆಗೆ, ಸೂರ್ಯನು ಪೂರ್ವದಲ್ಲಿ ಉದಯಿಸುತ್ತಾನೆ. ಆದ್ದರಿಂದ ಮನೆಯ ಮುಖ್ಯ ದ್ವಾರವನ್ನು ಪೂರ್ವದೆಡೆಗೆ ಇಡಬೇಕು. ಆಗ ಉದಯಿಸುವ ಸೂರ್ಯನ ಕಿರಣಗಳು ಮನೆಯೊಳಗೆ ಪ್ರವೇಶಿಸುತ್ತದೆ. ಮನೆಯ ಮುಖ್ಯ ದ್ವಾರವನ್ನು ಪೂರ್ವಕ್ಕೆ ಅಥವಾ ಪಶ್ಚಿಮಕ್ಕೆ ಇಡಬಹುದು. ಮನೆಯ ಮುಖ್ಯದ್ವಾರ ದಕ್ಷಿಣಾಭಿಮುಖವಾಗಿ ಇರಬಾರದು. ಇದರ ಕಾರಣವೆಂದರೆ ಹಿಂದಿನ ಕಾಲದಲ್ಲಿ ಸ್ಮಶಾನಭೂಮಿಯು ಸದಾ ದಕ್ಷಿಣ ದಿಕ್ಕಿನಲ್ಲಿ ಇರುತ್ತಿತ್ತು. ಪ್ರತಿ ನಗರದ ಅಥವಾ ಪಟ್ಟಣದ ದಕ್ಷಿಣ ಭಾಗದಲ್ಲಿ ದೊಡ್ಡ ಸ್ಮಶಾನ ಭೂಮಿ ಇರುತ್ತಿತ್ತು ಮತ್ತು ಅದರಲ್ಲಿ ಹೆಣಗಳನ್ನು ಸುಡುತ್ತಿದ್ದರು. ಆ ಗಾಳಿಯು ಬೀಸಿ ಮನೆಯೊಳಗೆ ಬಾರದಿರಲೆಂದು ಮನೆಯ ಮುಖ್ಯದ್ವಾರಗಳನ್ನೆಂದಿಗೂ ದಕ್ಷಿಣ ದಿಕ್ಕಿನಲ್ಲಿ ಇಡುತ್ತಿರಲಿಲ್ಲ. ಇಂದು ವಿಷಯ ಹೀಗಿಲ್ಲ. ಕೆಲವು ನಗರಗಳಲ್ಲಿ ಸ್ಮಶಾನ ಭೂಮಿ ಮನೆಯ ಪೂರ್ವದಲ್ಲಿ ಅಥವಾ ಉತ್ತರ ಭಾಗದಲ್ಲಿದ್ದರೆ, ಮನೆಯ ಮುಖ್ಯದ್ವಾರ ಆ ದಿಕ್ಕುಗಳಲ್ಲಿ ಇರಲು ಸಾಧ್ಯವಿಲ್ಲ. ರಷ್ಯಾದ ಉದಾಹರಣೆಯನ್ನು ತೆಗೆದುಕೊಂಡರೆ, ರಷ್ಯಾದಲ್ಲಿ ಸೂರ್ಯನು ದಕ್ಷಿಣ ದಿಕ್ಕಿನಲ್ಲಿ ಉದಯಿಸುತ್ತಾನೆ. ಆದ್ದರಿಂದ ಆ ದೇಶಗಳಲ್ಲಿ ಮನೆಯ ಮುಖ್ಯ ದ್ವಾರಗಳು ದಕ್ಷಿಣಾಭಿಮುಖವಾಗಿರುತ್ತದೆ. ಆಗ ಅವರ ಮನೆಯೊಳಗೆ ಹೆಚ್ಚು ಬೆಳಕು ಬರುತ್ತದೆ. ಆದ್ದರಿಂದ ರಷ್ಯಾದ ಮನೆಗಳ ವಾಸ್ತುವೇ ಬೇರೆ. ಕೈಲಾಸ ಪರ್ವತವು ಭಾರತದ ಈಶಾನ್ಯ ಭಾಗದಲ್ಲಿದೆ. ಜನರು ಅದನ್ನು ಬಹಳ ಶುದ್ಧ ಮತ್ತು ಪವಿತ್ರ ಎಂದು ಭಾವಿಸುತ್ತಾರೆ ಮತ್ತು ಆ ದಿಕ್ಕಿಗೆ ಈಶಾನ್ಯ ಎಂಬ ದೇವತೆಯನ್ನು ಅಧಿಪತಿಯಾಗಿಸಿದರು. ಮುಸಲ್ಮಾನರಿಗೆ ಮೆಕ್ಕಾ ಮತ್ತು ಮೆಕ್ಕಾ ಇರುವ ದಿಕ್ಕಿನಂತೆಯೇ ಇದುವೂ ಸಹ. ಭಾರತದ ಮುಸಲ್ಮಾನರು ನಮಾಜನ್ನು ಮಾಡುವಾಗ ಪಶ್ಚಿಮ ದಿಕ್ಕಿನಲ್ಲಿ ಮಾಡುತ್ತಾರೆ. ಆದರೆ ಜಾರ್ದನ್‌, ಲೆಬಾನೆನ್‌, ಇತ್ಯಾದಿ ದೇಶಗಳ ಮುಸಲ್ಮಾನರು ಪೂರ್ವ ದಿಕ್ಕಿನಲ್ಲಿ ನಮಾಜ್‌ ಮಾಡುತ್ತಾರೆ, ಏಕೆಂದರೆ ಅವರಿಗೆ ಮೆಕ್ಕ, ಅವರ ಪೂರ್ವದ ದಿಕ್ಕಿನಲ್ಲಿದೆ. ವಾಸ್ತು ಶಾಸ್ತ್ರವು ಸೂರ್ಯ ಮತ್ತು ಸೂರ್ಯನ ದಿಕ್ಕಿನ ಮೇಲೆ ಬಹಳ ಒತ್ತೆಯನ್ನಿಡುತ್ತದೆ. ಈ ತಿಳಿವಳಿಕೆಯನ್ನು ಅನುಸರಿಸಿದಾಗ ಆಸ್ಪ್ರೇಲಿಯ ಅಥವಾ ದಕ್ಷಿಣ ಅಮೆರಿಕದ ವಾಸ್ತು ಪೂರ್ಣವಾಗಿ ಬೇರೆಯಾಗಿರುತ್ತದೆ. ಆ ದೇಶಗಳಲ್ಲಿ ಸೂರ್ಯನ ದಿಕ್ಕು ಪೂರ್ಣವಾಗಿ ಬೇರೆಯಾಗಿರುತ್ತದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಾಸ್ತು ಶಾಸ್ತ್ರವನ್ನು ನಿರೂಪಿಸಲಾಗಿದೆ. ಮತ್ತೊಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಒಂದು ಸಾರ್ವಜನಿಕದ ಸ್ಥಳದ ವಾಸ್ತುವು ಒಂದು ದೇವಸ್ಥಾನ, ಅಂಗಡಿ ಅಥವಾ ಆಶ್ರಮದ ವಾಸ್ತುವಿಗಿಂತಲೂ ಭಿನ್ನವಾಗಿರುತ್ತದೆ.

 ಶ್ರೀ ಶ್ರೀ ರವಿಶಂಕರ್‌ 
When everything seems to be going against you, remember that the airplane takes off against the wind, not with it …

Henry Ford





Best lesson of life is listen to everyone and learn from everyone ,because nobody knows everything  and every one knows something


ಏನಿದೆಯೋ ಅದನ್ನು ತಿಳಿಯುವುದು

ಏನಿದೆಯೋ ಅದನ್ನು ತಿಳಿಯುವುದು



 ಜೀವನ ಎನ್ನುವುದು ಸಂಘರ್ಷ. ಸಂಘರ್ಷ ಎಂದರೇನು ಎಂಬುದು ನಮಗೆ ಗೊತ್ತಿದೆ. ಸಂಘರ್ಷ ಅರ್ಥವಾದಾಗ 'ಏನಿದೆಯೋ', ಅದರ ಸತ್ಯ ತಿಳಿಯುತ್ತದೆ. ಈ ಸತ್ಯದ ಅವಲೋಕನದಿಂದಾಗಿ ಮನಸ್ಸು 'ಏನಿದೆಯೋ' ಅದರಿಂದ ಬಿಡುಗಡೆ ಹೊಂದುತ್ತದೆ. ಜೀವನದಲ್ಲಿ ತುಂಬಾ ದುಃಖವಿದೆ. ಆದರೆ ಅದನ್ನು ಪರಿಹರಿಸುವುದು ಹೇಗೆಂದು ತಿಳಿದಿಲ್ಲ. ದುಃದ ಪರಿಹಾರವೇ ವಿವೇಕದ ಉದಯ. ದುಃಖವೆಂದರೇನು? ಅದರ ಸ್ವರೂಪವೇನು? ರಚನೆಯೇನು? ಎಂಬುದನ್ನು ತಿಳಿಯದೆ ಪ್ರೇಮವೆಂದರೇನು? ಎಂಬುದು ನಮಗೆ ತಿಳಿಯದು. ಏಕೆಂದರೆ ನಮ್ಮ ಪಾಲಿಗೆ ಪ್ರೇಮವೆಂಬುದು ದುಃಖ, ನೋವು, ಯೋತನೆ, ಸುಖ ಹಾಗೂ ಅಸೂಯೆ. 'ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂದು ಹೆಂಡತಿಗೆ ಹೇಳುವ ಗಂಡ ಅದೇ ವೇಳೆಗೆ ಮಹತ್ವಾಕಾಂಕ್ಷಿಯು ಆಗಿದ್ದರೆ ಅಂಥ ಪ್ರೀತಿಗೆ ಅರ್ಥವಿದೆಯೇ? ಮಹತ್ವಾಕಾಂಕ್ಷೆ ಇರುವಾಗ ಪ್ರೀತಿಸಲು ಸಾಧ್ಯವೇ? ಪೈಪೋಟಿಯ ಮನುಷ್ಯ ಪ್ರೀತಿಸಬಲ್ಲನೇ? ಆದರೂ ನಾವು ಪ್ರೇಮ, ಮಾರ್ದವತೆ, ಯುದ್ಧಗಳನ್ನು ನಿಲ್ಲಿಸುವ ಬಗ್ಗೆ ಮಾತಾಡುತ್ತೇವೆ. ಇನ್ನೊಂದು ಕಡೆಯಿಂದ ಸ್ಪರ್ಧಾತ್ಮಕವಾಗಿದ್ದೇವೆ, ಮಹತ್ವಾಕಾಂಕ್ಷಿಗಳಾಗಿದ್ದೇವೆ. ನಮ್ಮ ಸ್ಥಾನಗಳ ಬಗ್ಗೆ ಕಾತರರಾಗಿದ್ದೇವೆ ಇತ್ಯಾದಿ. ಇದೆಲ್ಲವೂ ದುಃಖವನ್ನುಂಟುಮಾಡುತ್ತದೆ. ದುಃಖಕ್ಕೆ ಕೊನೆ ಇದೆಯೇ? ನಿಮ್ಮನ್ನು ನೀವು ಅರ್ಥಮಾಡಿಕೊಂಡಾಗ ಅಂದರೆ 'ಏನಿದೆಯೋ' ಅದನ್ನು ತಿಳಿದಾಗ ದುಃಖ ಮಾಯಾವಾಗುತ್ತದೆ. ಆಗ ನಿಮಗೇಕೆ ದುಃಖ ಒದಗಿತು, ಆ ದುಃಖವೆಂಬುದು ಆತ್ಮ ಮರುಕವೆ? ಅಥವಾ ಒಂಟಿತನದ ಭಯವೇ? ನಿಮ್ಮ ಬದುಕಿನ ಖಾಲಿತನವೇ? ಅಥವಾ ಪರರನ್ನು ಅವಲಂಬಿಸುವುದರಿಂದ ಬಂದ ದುಃಖವೇ ಎಂಬುದು ತಿಳಿಯುತ್ತದೆ. ಇದೆಲ್ಲ ನಮ್ಮ ಜೀವನದ ಒಂದು ಭಾಗ. ಇವುಗಳನ್ನು ಅರಿತಾಗ ಬದುಕಿನ ದೊಡ್ಡ ಸಮಸ್ಯೆ ಅದೇ ಸಾವಿನ ಬಗ್ಗೆ ಚಿಂತನೆಗಳು; ನಾವು ಪುನರ್ಜನ್ಮದ ಬಗ್ಗೆ, ಸಾವಿನ ಅನಂತರ ಏನಾಗುತ್ತದೆ ಎಂಬ ಬಗ್ಗೆ ಮಾತನಾಡುತ್ತಿಲ್ಲ ಅಥವಾ ಸಾವಿನ ಬಗ್ಗೆ ಭಯ ಪಡುವವರಿಗೆ ಆ ಬಗ್ಗೆ ಭರವಸೆಯನ್ನು ತುಂಬುತ್ತಿಲ್ಲ. ವೃದ್ಧಾಪ್ಯವಿದೆ ಅದರೊಂದಿಗೆ ಕಾಯಿಲೆ ಕಸಾಲೆ, ಸ್ಮೃತಿನಾಶ, ವಯಸ್ಸಾಗುತ್ತಿದೆ ಎಂಬ ಭಯ ಎಲ್ಲ ಇದೆ. ಈ ದೇಶದಲ್ಲಿ ವಯಸ್ಸಾದವರನ್ನು ತರುಣರೆಂದು ಕರೆಯಲಾಗುತ್ತಿದೆ! ಎಂಬತ್ತರ ಹರೆಯದ ಹೆಂಗಸನ್ನು ತರುಣಿ ಎಂದು ಸಂಬೋಧಿಸಲಾಗುತ್ತದೆ. ಜನರಿಗೆ ಭಯವಿದೆ. ಭಯವಿರುವಲ್ಲಿ ತಿಳಿವಳಿಕೆಯಿಲ್ಲ. ಆತ್ಮ ಮರುಕವಿರುವಲ್ಲಿ ದುಃಖದಿಂದ ಬಿಡುಗಡೆಯಿಲ್ಲ. ಹೀಗಾಗಿ ಸಾಯುವುದು ಎಂದರೇನು? ಜೀವಿಯ ಬದುಕು ಮುಗಿಯುತ್ತದೆ. ಮನುಷ್ಯ ಸುಮಾರು 90 ವರ್ಷ ಬದುಕಬಹುದು. ವಿಜ್ಞಾನಿಗಳು ಏನಾದರೊಂದು ಔಷಧ ಕಂಡು ಹುಡುಕಿದರೆ 150 ವರ್ಷ ಬದುಕಿದರೂ ಬದುಕಬಹುದು. ಈ ನೂರೈವತ್ತು ವರ್ಷ ಏಕೆ ಬದುಕಬೇಕು? ದೇವರಿಗೇ ಗೊತ್ತು! ನೂರೈವತ್ತು ವರ್ಷ ಬದುಕಿದರೂ ನಿಮ್ಮ ದೇಹ ಸವೆಯುತ್ತದೆ. ಏಕೆಂದರೆ ಸಂಘರ್ಷ, ಭಯ, ಉದ್ವಿಗ್ನತೆ, ಮನುಷ್ಯರು ಹಾಗೂ ಪ್ರಾಣಿಗಳನ್ನು ಕೊಲ್ಲುವುದು- ಹೀಗೆ ತೀರ ಕೆಟ್ಟದಾಗಿ ಬದುಕುತ್ತೇವೆ. ನಾವು ನಮ್ಮ ಬದುಕನ್ನು ಎಷ್ಟೊಂದು ಕೆಡೆಸಿಕೊಳ್ಳುತ್ತೇವೆ! ಹೀಗಾಗಿ ವೃದ್ಧಾಪ್ಯವೆಂಬುದು ಭಯಾನಕ ಸಂಗತಿಯಾಗುತ್ತದೆ. ಆದರೂ ಯುವಕರು, ಮಧ್ಯವಯಸ್ಕರು ಪ್ರಾಯದವರು ಸಾಯುತ್ತಾರೆ. ಭೌತಿಕ ಮರಣದ ಹೊರತಾಗಿ ಅನಿವಾರ‍್ಯವಾದ ಸಾಯುವುದು ಎಂದರೇನು? ಚರಮದೇಹದ ಅಂತ್ಯ ಎಂಬುದಕ್ಕಿಂತ ಆಳವಾದ ಅರ್ಥ ಮರಣಕ್ಕಿದೆ.

* ಜೆ. ಕೃಷ್ಣಮೂರ್ತಿ

☘🍁☘🍁☘🍁☘🍁☘

ನಮ್ಮ ನೈಜ ವ್ಯಕಿತ್ವ ಹೇಳಿಕೊಳ್ಳಬೇಕು

ನಮ್ಮ ನೈಜ ವ್ಯಕಿತ್ವ ಹೇಳಿಕೊಳ್ಳಬೇಕು


ನಮ್ಮ ವ್ಯಕ್ತಿತ್ವವನ್ನು ನಾವು ಹೇಗೆ ಬಿಂಬಿಸಿಕೊಳ್ಳುತ್ತೇವೆ. ಒಮ್ಮೆ ಯೋಚಿಸಿ ನೋಡಿ. ನಮ್ಮಲ್ಲಿರುವ ಸಾಮರ್ಥ್ಯ, ಕೌಶಲ, ಅರ್ಹತೆಗಳನ್ನು ಆಧರಿಸಿ ವ್ಯಕ್ತಿತ್ವ ಪ್ರಕಟಿಸಿಕೊಳ್ಳುತ್ತೇವೆಯೋ, ಇತರರನ್ನು ಹೀಯಾಳಿಸುವ ಮೂಲಕ ನಮ್ಮನ್ನು ನಾವು ಪ್ರಕಟಿಸಿಕೊಳ್ಳುತ್ತೇವೆಯೋ? ಈ ಪ್ರಶ್ನೆ ಏಕೆ ಕೇಳಬೇಕಾಯಿತೆಂದರೆ ಬಹಳಷ್ಟು ಜನ ತಮ್ಮ ಒಳಿತನ್ನು ಹೇಳಿಕೊಳ್ಳುವ ಮುನ್ನ ಬೇರೆಯವರ ಕೆಡುಕನ್ನು ಹೇಳಿಕೊಳ್ಳುವುದು ಒಂದು ಪ್ರವೃತ್ತಿಯೇ ಆಗಿಬಿಟ್ಟಿದೆ. ನಾವು ಉತ್ತಮ ವಾಗ್ಮಿ ಎಂದು ಹೇಳಿಕೊಳ್ಳುವ ಬದಲು ಬೇರೆಯವರಿಗೆ ಪದೋಚ್ಛಾರಣೆಯೇ ಸರಿಯಾಗಿ ಬರುವುದಿಲ್ಲ ಎನ್ನುವುದು. ನಾವು ಮಧುರವಾಗಿ ಹಾಡುತ್ತೇವೆ ಎಂದು ಹೇಳುವುದಕ್ಕಿಂತ ಬೇರೆಯವರು ಕರ್ಕಶವಾಗಿ ಹಾಡುತ್ತಾರೆ ಎಂದು ಮೂದಲಿಸುವುದು. ನಾವು ಚೆನ್ನಾಗಿ ಬರೆಯುತ್ತೇವೆ ಎಂದು ಹೇಳುವ ಬದಲಿಗೆ ಬೇರೆಯವರಿಗೆ ಕಾಗುಣಿತವೇ ಗೊತ್ತಿಲ್ಲ ಎಂದು ಟೀಕಿಸುವುದು. ನಮಗೆ ಬೇಕಾದ ವ್ಯಕ್ತಿ ಸಜ್ಜನ ಎಂದು ಹೇಳುವುದು, ಬೇಡದ ವ್ಯಕ್ತಿಗಳ ಚಾರಿತ್ರ್ಯಹರಣ ಮಾಡುವುದು... ಈ ಪ್ರವೃತ್ತಿ ಹೀಗೆ ಮುಂದುವರಿಯುತ್ತದೆ. ನೆಗಿಟಿವ್‌ ಚಿಂತನೆ, ಕ್ರಿಯೆಗಳಲ್ಲಿ ತಮ್ಮನ್ನು ಕಳೆದುಕೊಂಡವರ ಚಿಂತನೆಯ ದಾಟಿ ಹೀಗೆ ಇರುತ್ತದೆ. ಇದರ ಅಪಾಯ ಏನೆಂದರೆ, ಇವರು ಎಲ್ಲೂ ಪಾಸಿಟಿವ್‌ ಹುಡುಕುವುದಿಲ್ಲ. ನೀವು ಯಾರನ್ನೇ, ಯಾವುದೇ ಕಾರಣಕ್ಕೆ ಪ್ರಸ್ತಾಪಿಸಿ,' ಓ..., ಅವ್ರಾ...!' ಎಂದು ಉದ್ಗರಿಸುತ್ತಾರೆ. ಆ ಉದ್ಗಾರದಲ್ಲಿ ಪ್ರಸ್ತಾಪಿಸಿದ ವ್ಯಕ್ತಿಯ ಘನತೆ, ಸ್ಥಾನಮಾನ ಒಂದಿಷ್ಟು ಕುಗ್ಗುವಂತಿರುತ್ತದೆ. ಇಂಥವರ ಬಾಯಲ್ಲಿ ಎಂಥ ಗಣ್ಯರೂ ನಗಣ್ಯರಾಗಬಲ್ಲರು. ಎಂತಹ ವಿದ್ವಾಂಸರೂ ದಡ್ಡ ಶಿಖಾಮಣಿ ಆಗಬಲ್ಲರು. ಸಮರ್ಥರೂ ಅಸಮರ್ಥರಾಗಬಲ್ಲರು. ಮಾನವೀಯತೆಯ ಒರತೆಯಾಗಿರುವ ವ್ಯಕ್ತಿತ್ವವೊಂದನ್ನು ನಿಷ್ಕರುಣಿ ಎಂಬಂತೆ ಬಿಂಬಿಸುವರು. ನಮ್ಮ ದೈನಂದಿನ ಜೀವನದಲ್ಲಿ ಇಂತಹ ವ್ಯಕ್ತಿಗಳು ಬೇಡವೆಂದರೂ ಎಲ್ಲೋ ಒಂದು ಕಡೆ ಬಂದು ಹೋಗುತ್ತಾರೆ. ಇವರು ತುಂಬಾ ಆಪಾಯಕಾರಿ. ಇವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇವರ ವಾಚಾಳಿತನ, ನೇತ್ಯಾತ್ಮಕ ಅಭಿಪ್ರಾಯ ಹೊರ ಹಾಕುವ ಸನ್ನಿವೇಶ ನಾವು ಸೃಷ್ಟಿಸಬಾರದು. ಸಾಧ್ಯವಾದರೆ, ಅಂತಹ ಕಡೆಯಿಂದ ನಿರ್ಗಮಿಸಿ ಅವರನ್ನು ನಾವು ನಗಣ್ಯ ಗೊಳಿಸುತ್ತಿದ್ದೇವೆ ಎನ್ನುವ ಸೂಚನೆ ಕೊಡುವುದು ಒಳ್ಳೆಯದು. ಇದರಿಂದ ಅವರು ಎಚ್ಚರವಾಗುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಅವರಿಂದ ಪ್ರಭಾವಿತರಾಗುವವರ ಸಂಖ್ಯೆ ಕಡಿಮೆ ಮಾಡಬಹುದು. ಅಷ್ಟರಮಟ್ಟಿಗೆ ನಾವು ಕೂಡಾ ಸಾಮಾಜಿಕ ಸ್ವಾಸ್ಥ್ಯ ಕಾಪಾಡಬಹುದು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ನಮ್ಮ ಸಾಮರ್ಥ್ಯ, ಅರ್ಹತೆ, ಕೌಶಲಗಳ ಕುರಿತು ನಮ್ಮ ಸ್ನೇಹಿತರಿಗೆ, ಹಿತೈಷಿಗಳಿಗೆ ಗೊತ್ತೇ ಇರುತ್ತದೆ. ಆದಾಗ್ಯೂ, ಕೆಲ ಸಂದರ್ಭಗಳಲ್ಲಿ ಇದನ್ನೆಲ್ಲ ಸ್ನೇಹಿತರ ವಲಯದಲ್ಲಿ ಮುಕ್ತವಾಗಿ ಹೇಳಿಕೊಳ್ಳಬೇಕು. ಇದು ಸ್ವಯಂ ಮುಖಸ್ತುತಿ ಎಂದು ಭಾವಿಸುವ ಅಗತ್ಯ ಇಲ್ಲ. ಬಹಳಷ್ಟು ಜನ ದಶಕಗಳ ಕಾಲ ಜತೆಯಲ್ಲಿದ್ದರೂ ಪರಸ್ಪರ ಪರಿಚಯ, ಒಡನಾಟ ಇರುತ್ತದೆಯೇ ಹೊರತು ಅವರವರ ಸಾಮರ್ಥ್ಯದ ಅರಿವು ಇರುವುದಿಲ್ಲ. ನಮ್ಮನ್ನು ಬೇರೆಯವರು ಕೆಟ್ಟದಾಗಿ ಬಿಂಬಿಸುವ ಮೊದಲು ನಮ್ಮ ನೈಜ ವ್ಯಕಿತ್ವ ಏನೆಂದು ನಾವೇ ಸುತ್ತಲಿನವರಿಗೆ ಮನವರಿಕೆ ಮಾಡಿಕೊಡುವುದು ಸೂಕ್ತ.

-ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
A pessimist sees the difficulty in every opportunity;

An optimist sees the opportunity in every difficulty

If you change the way you look at things, the things you look at change.. Maintain Positive Thoughts, Look forward and see hope ….


🌿🍃☘🌿🍃☘🌿🍃☘
Those who bring sunshine to the lives of others cannot keep it from themselves…

Nothing in the nature lives for itself. Rivers don’t drink their own water. Trees don’t eat their own fruit.Sun doesn’t give heat for itself. Flowers don’t spread fragrance for themselves… Living for Others is the Rule of Nature and the path to happiness….

🌿🍃☘🌿🍃☘🌿🍃☘
💥💥💥💥💥💥💥💥💥

Sun rises every where but crop grows only where the farmer has worked hard. Similarly GOD  is everywhere but his grace is  for the one who works hard…

—-

✨💫✨💫✨💫✨💫✨
Collected..

✨ಶ್ರೀವಾಣಿ✨ ಸುಖ-ದುಃಖಗಳ ಸಮ್ಮಿಶ್ರಣ ಈ ಜಗಜೀವನ

✨ಶ್ರೀವಾಣಿ✨


ಸುಖ-ದುಃಖಗಳ ಸಮ್ಮಿಶ್ರಣ ಈ ಜಗಜೀವನ



ಪರಮಸತ್ಯ ಪರಮಾತ್ಮನನ್ನು ಅರಿತವರು ಜ್ಞಾನಿಗಳು. ಅನುಭವಿಸಿದವರು ಅನುಭಾವಿಗಳು, ಸಂತರು, ಶರಣರು, ಋುಷಿಮುನಿಗಳು. ಅವರ ಅನುಭವದ ನುಡಿಗಳನ್ನು ಕೇಳಿದಾಗ ನಮ್ಮ ಪ್ರಪಂಚದ ತಾಪತ್ರಯಗಳೆಲ್ಲ ಮರೆಯಾಗಿ ಮನದಲ್ಲಿ ಪರಮಶಾಂತಿಯು ನೆಲೆಸುತ್ತದೆ. ಅವರ ನುಡಿಗಳು ಅಮೂಲ್ಯ ಅನುಪಮ. ಅವರ ಜೀವನ ಪರಮಪಾವನ ಪರಮಾದರ್ಶ. ಈ ಜಗತ್ತಿನಲ್ಲಿ ಕೇವಲ ಸುಖ, ಅಥವಾ ಕೇವಲ ದುಃಖ ಎಂಬುದು ಎಲ್ಲಿಯೂ ಇಲ್ಲ. ಸುಖ-ದುಃಖಗಳ ಸಮ್ಮಿಶ್ರಣ ಈ ಜಗಜೀವನ. ಒಂದು ಕ್ಷ ಣ ಸುಖದ, ತೆರೆ ಮತ್ತೊಂದು ಕ್ಷ ಣ ದುಃಖದ ತೆರೆ; ಒಂದು ರೀತಿ ತೆರೆಯಾಡಿದಂತೆ. ಈ ಜಗತ್ತಿನಲ್ಲಿ ನಾವು ಯಾರೂ ನೂರಕ್ಕೆ ನೂರು ಸುಖದ ಕನಸನ್ನು ಕಾಣಲಾಗದು. ಬಡವ-ಬಲ್ಲಿದ ಸ್ತ್ರೀ-ಪುರುಷರೆಂಬ ಭೇದ ಭಾವವಿಲ್ಲದೆ ಎಲ್ಲರ ಜೀವನದಲ್ಲಿಯೂ ನೋವು-ನಲಿವು, ಹೂವು-ಮುಳ್ಳು, ಸುಖ-ದುಃಖ ಎರಡೂ ಇರುವುದು ಸ್ವಾಭಾವಿಕ. ಇದಕ್ಕೆ ಇತಿಹಾಸದ ಪುಟಗಳೇ ಸಾಕ್ಷಿ. ಮಹಾಭಾರತದಲ್ಲಿ ಬರುವ ಕೌರವ ಪಾಂಡವರು ಸಹೋದರರು. ರಾಜಮಹಾರಾಜರಾದ ಅವರಿಗೇನು ಕೊರತೆ ಇತ್ತು? ಸಿರಿ-ಸಂಪದ, ಧನ-ಕನಕ, ಮಾನ-ಮರ್ಯಾದೆ ಸಕಲ ಭೋಗಭಾಗ್ಯವಿತ್ತು. ಆದರೂ ಈ ಜಗತ್ತು ಅವರನ್ನು ನೆಮ್ಮದಿಯಿಂದ ಇರಲು ಬಿಡಲಿಲ್ಲ. ಇಬ್ಬರ ಮಧ್ಯದಲ್ಲಿ ಘನಘೋರ ಯುದ್ಧವಾಯಿತು. ಹದಿನೆಂಟು ಅಕ್ಷೋಹಿಣಿ ಸೈನ್ಯ ನೆಲಕ್ಕುರುಳಿತು. ರಥಕ್ಕೆ ಬಳಸಿದ ಅಸಂಖ್ಯ ಪಶುಗಳು ಪ್ರಾಣ ಕಳೆದುಕೊಂಡವು. ಇನ್ನುಳಿದ ಗಾಯಾಳುಗಳ ಆಕ್ರಂದನ ಮುಗಿಲು ಮುಟ್ಟಿತು. ಪಾಂಡವರು ಜಯಶೀಲರಾಗಿ ಸಿಂಹಾಸನವನ್ನೇರಿ ಅರಮನೆಯಲ್ಲಿ ವಿಜಯೋತ್ಸವ ಆಚರಿಸುತ್ತಿದ್ದರು. ಅಲ್ಲಿಗೆ ಓರ್ವ ವೃದ್ಧ ಹೆಣ್ಣು ಮಗಳು ಬಂದು ಧರ್ಮರಾಜನಿಗೆ ಕೇಳುತ್ತಾಳೆ 'ಯುದ್ಧದಲ್ಲಿ ಗೆದ್ದು ಬಂದವರು ನೀವೀಗ ಸಿಂಹಾಸನವನ್ನೇರಿ ರಾಜ್ಯವನ್ನಾಳಲು ಉತ್ಸುಕರಾಗಿದ್ದೀರಿ. ಆದರೆ ನಿಮ್ಮ ರಾಜ್ಯದಲ್ಲಿ ಯಾರಿದ್ದಾರೆ ? ಯುವಕರೆಲ್ಲ ನಿಮ್ಮ ರಾಜ್ಯದಾಹಕ್ಕೆ ಆಹುತಿಯಾಗಿದ್ದಾರೆ. ಈಗ ಉಳಿದಿರುವವರೆಲ್ಲರೂ ವಿಧವೆಯರು, ವೃದ್ಧರು, ಅನಾಥ ಮಕ್ಕಳು, ದರಿದ್ರರು, ರೋಗಿಗಳು, ನಿರ್ಗತಿಕರು. 'ವೃದ್ಧೆಯ ಅಳಲನ್ನು ಕೇಳಿದಾಗ ಧರ್ಮರಾಜನ ಕಣ್ಣು ತೆರೆದಿತ್ತು. ಆದರೆ ಕಾಲ ಮಿಂಚಿ ಹೋಗಿತ್ತು. ಬದುಕಿನ ಬೆಲೆಯನ್ನು ಅರಿಯದವರಿಗೆ ಆಗುವ ದುರ್ಗತಿ ಇಷ್ಟೇ. ಒಮ್ಮೆ ನಾಡನಲೆಗಾರನೊಬ್ಬನು ಜೀವನವೆಂದರೇನೆಂದು ಅರಿಯಲು ನಿಸರ್ಗದ ಮಡಿಲಿಗೆ ಹೋದ. ಅಲ್ಲಿರುವ ಪಶು-ಪಕ್ಷಿ, ಗಿಡ-ಮರ, ಮೊದಲಾದವುಗಳಿಗೆ 'ಜೀವನವೆಂದರೇನು' ಎಂದು ಕೇಳಿದ. 'ಸತ್ಯಂ ಶಿವಂ ಸುಂದರಂ ಸೃಷ್ಟಿಯನ್ನು ಕಂಡು ಎದೆ ತುಂಬಿ ಬಂದಾಗ ಹಾಡಿನ ಮಳೆಗರೆಯುವುದೇ ಜೀವನವೆಂದು' ಕೋಗಿಲೆ ಹೇಳಿತು. 'ಸವಿಯಾದ ಹಣ್ಣುಗಳನ್ನು ತಿಂದು ಸವಿ ನುಡಿಯುವುದೇ ಜೀವನ.' ಎಂದು ಗಿಳಿ ಹೇಳಿತು. 'ಮಕರಂದವನ್ನು ಹೀರುವುದಕ್ಕಾಗಿ ಹೂಬನವನ್ನು ಹುಡುಕುತ್ತಾ ಹೋಗುವುದೇ ಜೀವನ' ಎಂದು ಪತಂಗ ಹೇಳಿತು. 'ಈಸಬೇಕು ಇದ್ದು ಜುಸಬೇಕು'ಎಂದು ಮೀನು ಹೇಳಿತು. 'ಬದುಕಿನಲ್ಲಿ ಆನಂದದ ಸೆಲೆಯೊಡೆದಾಗ ಕುಣಿ-ಕುಣಿದು ತಣಿಯುವುದೇ ಜೀವನ' ಎಂದು ನವಿಲು ಹೇಳಿತು. ಯಾವ ಧರ್ಮಶಾಸ್ತ್ರವನ್ನೂ ಅರಿಯದ ಪಶು ಪಕ್ಷಿಗಳೇ ಇಷ್ಟೊಂದು ನೆಮ್ಮದಿಯಿಂದಿರುವಾಗ ಎಲ್ಲವನ್ನರಿತಿರುವ ಮನುಷ್ಯರೆæೕಕೆ ನೆಮ್ಮದಿಯಿಂದ ಬದುಕಬಾರದೆಂದು ಚಿಂತಿಸುತ್ತ ನಾಡನಲೆಗಾರನು ನಾಡಿನತ್ತ ಹೆಜ್ಜೆ ಹಾಕಿದ. ವಿದ್ಯಾಲಯದ ಕಟ್ಟೆಯನ್ನೇರಿದ ಮನುಷ್ಯ ವೈದ್ಯನಾಗಿ ಮಾರಕ ರೋಗಗಳಿಗೆ ಮದ್ದನ್ನು ಕಂಡು ಹಿಡಿದ, ವಕೀಲನಾಗಿ ಅನ್ಯಾಯದ ವಿರುದ್ಧ ಹೋರಾಡಿದ, ತಂತ್ರಜ್ಞಾನಿಯಾಗಿ ಗಗನಚುಂಬಿ ಕಟ್ಟಡವನ್ನು ನಿರ್ಮಿಸಿದ, ಪ್ರಗತಿಪರ ರೈತನಾಗಿ ಹಿಂದೆಂದೂ ಬೆಳೆಯದಷ್ಟು ದವಸಧಾನ್ಯಗಳನ್ನು ಬೆಳೆದ. ಇನ್ನೂ ಏನೇನೋ ಕಲಿತು ಪ್ರಪಂಚವೇ ಬೆರಗುಗೊಳ್ಳುವಂಥ ಸಂಶೋಧನೆಗಳನ್ನು ಮಾಡಿದ. ಆದರೆ ನೆಮ್ಮದಿಯಿಂದ ಬದುಕುವುದನ್ನೇ ಮರೆತ!

ಆಧಾರ : ಕೈವಲ್ಯ ಕುಸುಮ
ಶ್ರೀ ಶ್ರೀ ಸಿದ್ದೇಶ್ವರ ಸ್ವಾಮೀಜಿ

Take It Easy: few Ways to Kill Stress Before Stress Kills You!

Take It Easy: few Ways to Kill Stress Before Stress Kills You!


1.Make quiet time: Whether you meditate daily, go to the gym three times a week, practiceyoga, go hiking on the weekends, or just spend an hour a night with a book, you need to create a space where you can clear your mind of everything that’s dragging at you.



2.Stop procrastinating: You can put off important tasks, but you can’t put off worrying about them — and the stress that causes.

3.Write everything down: If forgetting something would cause you stress, make sure you’ve got it written down in a trusted system so you know you won’t forget.


4. Eat better: A good diet can help your body better deal with the effects of stress. A healthy diet isn’t all that complicated; as Michael Pollan, author of The Omnivore’s Dilemma, puts it, Eat food. Not too much. Mostly plants. As a general rule, eat as much as you can from the "edges" of your supermarket — produce, bakery, butcher counter, dairy case — and save the stuff in the "middle" for once-in-a-while — Twinkies, Pop Tarts, potato chips, canned foods, instant meals, etc.



5.Make family time: Try to eat at least one meal a day with your family (or with friends if you’re single). Better yet, eat at least one homecooked meal a day with your family/friends.
6.Talk it out: Bottling up your frustrations, even the little ones, leads to stress. Learn to express dissatisfaction (in a constructive, non-hurtful way) and to voice your worries and fears to someone close to you.


7. Prioritize: Figure out what in your life actually needs attention and what doesn’t. Know what you can easily let slide — and what you can drop entirely — and focus your energy on things that will actually make a difference in your life.


8. Have routines: Having a set routine means you don’t have to worry about what comes next; after a while, it becomes second nature.


9.Accept interruptions gracefully: Don’t let your rituals become so rigid that you can’t function if they’re interrupted. Leave yourself enough wiggle room to adapt to changing conditions.

ಹೋಗಲಿರುವ ಜೀವಕ್ಕೆ ಅದೆಷ್ಟು ಆಸೆಗಳೋ..........

ಹೋಗಲಿರುವ ಜೀವಕ್ಕೆ ಅದೆಷ್ಟು ಆಸೆಗಳೋ..........




       ನಮ್ಮ ಜೀವನ ಪ್ರಾರಂಭ ಅಗೋದೇ ಬಹುಶ ಆಸೆಗಳಿಂದ ಅನ್ಸುತ್ತೆ , ಎಲ್ರಿಗೂ ಅವರದ್ದೇ ಆದ ಅನೇಕ ಆಸೆ ಗಳಿರುತ್ತೆ . ತಮ್ಮ ಜೀವಕ್ಕಿಂತ ಹೆಚ್ಚಿನ ಆಸೆಗಳಿರೊ ಅಂತ ಅನೇಕರನ್ನ ನಾವ್ ನೋಡಬೋದು ... ಮರೆಯಾಗಿ ಹೋಗುವ ಈ ಜೀವಕ್ಕೆ ಅದೆಷ್ಟು ಆಸೆಗಳಿರುತ್ತೆ ಅಲ್ವಾ ...???
ನಾವು ಚಿಕ್ಕವರಾಗಿದ್ದಾಗ ಚಾಕೊಲೇಟ್ , ಗೊಂಬೆ ಗಳನ್ನೆಲ್ಲ ನೋಡ್ದಾಗ ಅದು ಬೇಕೇ ಬೇಕು ಅನ್ನೋ ಹಠ ,ಆಸೆ ಇರ್ತಿತ್ತು . ದೊಡ್ದವರಾಗ್ತಾ ಬಂದ್ ಹಾಗೆ ನಮ್ಮ ಆಸೆಗಳ ಲೋಕವೇ ಬದಲಾಗ್ತಾ ಹೋಗತ್ತೆ ... ನಮ್ಮ ಆಸೆ ಆಕಾಂಕ್ಷೆ ಗಳಿಗೆ ಮಿತಿನೇ ಇಲ್ವೇನೋ ಅನ್ಸತ್ತೆ . ನನಗು ಸಹ ತುಂಬಾ ಆಸೆಗಳಿದ್ವು ,ಬೆಟ್ಟದಷ್ಟು  ಆದ್ರೆ ಇವಾಗ ಅದೆಲ್ಲ ಬರಿ ಕನಸು ಅನ್ನಿಸ್ತಾ ಇದೆ.... :(
 ನಾನು ಅನೇಕರನ್ನ ನೋಡಿದೀನಿ ಅವರ ಜೀವನ ಶೈಲಿ , ಆಸೆಗಳನ್ನೆಲ್ಲ ನೋಡಿದ್ರೆ ನಗಬೇಕೋ , ಅಳಬೇಕೋ ಒಂದೂ ಗೊತ್ತಾಗಲ್ಲ ....  ತುಂಬಾ ವಿಷಯಗಳಿದೆ ಆದ್ರೆ ನನಗೆ ಗೊತ್ತಿರೋ ಸ್ವಲ್ಪ ವಿಷಯಗಳನ್ನ ನಾನ್ ನಿಮ್ ಜೊತೆ ಶೇರ್ ಮಾಡ್ಕೋತಾ ಇದೀನಿ.....

 ವಿದ್ಯಾರ್ಥಿ ಜೀವನದಲ್ಲಿ ಅನೇಕ ಆಸೆಗಳಿರುತ್ತೆ , ಎಲ್ರಿಗಿಂತ ಜಾಸ್ತಿ ಮಾರ್ಕ್ಸ್ ತಗೋಬೇಕು,ಕ್ಲಾಸ್ ನಲ್ಲಿ ಫಸ್ಟ್ ಬರಬೇಕು ಹೀಗೆ ಹಲವು ಆಸೆಗಳಿರುತ್ತೆ... ಅಯ್ಯೋ ಪರೀಕ್ಷೆ ಲಿ ಪಾಸ್ ಆದ್ರೆ ಸಾಕು ಅನ್ನೋ ನಮ್ ತರದವರೂ ಇದಾರೆ... ಪರೀಕ್ಷೇಲಿ ತುಂಬಾ ಕಡಿಮೆ ಮಾರ್ಕ್ಸ್ ಬಂತು , ಫೇಲ್ ಅದೆ ಅಂತ ಅದೆಷ್ಟೋ ಜನ ಆತ್ಮಹತ್ಯೆ ಮಾಡ್ಕೊಂಡಿರೋ ಹಾಸ್ಯದ ಸಂಗತಿಗಳೂ ಇದೆ.  ಜೀವನವೇ ಒಂದು ಪರೀಕ್ಷೆ ಅಂತ ಅವರೆಲ್ಲ ತಿಳ್ಕೊಂಡಿದ್ದಿದ್ರೆ ಅವರೆಲ್ಲ ಈ ರೀತಿ ಮಾಡ್ಕೋತಾ ಇರ್ಲಿಲ್ಲ....ನಮ್ಮ ಜೀವಿತಾವದಿಯಲ್ಲಿ ನಮಗೆ ಅದೆಷ್ಟೋ ಸಮಯವಿದೆ , ಏನ್ ಬೇಕಾದ್ರು ಸಾದಿಸ್ಬೋದು ಅಲ್ವಾ ?? ಇಷ್ಟು ಸಣ್ಣ ವಿಷಯಕ್ಕೆಲ್ಲ ಜೀವಾ ನೆ ನಾಶ ಮಾಡ್ಕೊಬೇಕಾ..?? ಒಂದ್ ಕ್ಷೇತ್ರದಲ್ಲಿ ಆಗ್ಲಿಲ್ಲ ಅಂದ್ರೆ ಇನ್ನೊಂದ್ ಕ್ಷೇತ್ರದಲ್ಲಿ ಸಾದನೆ ಮಾಡ್ಬೋದು , ಅದು ಬಿಟ್ಟು ನಮ್ಮನ್ನೇ ನಂಬಿಕೊಂಡಿರುವ ಜೀವಗಳಿಗೆ ನಾವ್ ಮೋಸ ಮಾಡಬಾರದು .....

      ಆರೋಗ್ಯ ದ ಮೇಲೆ ಹೆಚ್ಚು  ಕಾಳಜಿ ವಹಿಸೋ ಜನ ತುಂಬಾ ಇದಾರೆ. ಮಳೇಲಿ ನೆನೆದರೆ ಜ್ವರ ಬರುತ್ತೆ,ಶೀತ ಆಗುತ್ತೆ  ಅಂತಾ ತುಂಬಾ ಕಾಳಜಿ ತಗೊಳೋರು ದಿನಕ್ಕೆ ಐದು ಆರು ಸಿಗರೇಟ್ ಕಾಲಿ ಮಾಡ್ತಾ ಇರ್ತಾರೆ, ಯಾರಾದ್ರೂ ಸ್ಮೋಕ್ ಮಾಡ್ತಾ ಇರೋವಾಗ ತಮ್ಮ ಮೂಗುಗಳನ್ನು ಭದ್ರವಾಗಿ ಮುಚ್ಚಿಕೊಂಡು ಓಡಾಡುವವರೂ ಅನೇಕ !!!

 ಮುಂದೆ ನಮ್ಮ ಜೀವನಕ್ಕೆ ಬೇಕು ಅಂತ ,ಇವತ್ತಿನ ಜೀವನದ ಬಗ್ಗೆ ಯೋಚಿಸದೆ ಹಣ ಕೂಡಿಡುವ ಅದೆಷ್ಟೋ ಜನ ಇದ್ದಾರೆ, ಇವತ್ತು ಒಂದು ರೂಪಾಯಿ ಖರ್ಚು ಮಾಡಲು ಚಿಂತಿಸುವವರು ಮುಂದಿನ ಜೀವನದ ಬಗ್ಗೆ ಯೋಚಿಸುವುದು ಅದೆಷ್ಟು ಸರಿ ..???  ನಾನು ಒಂದು ವರ್ಷದ ಹಿಂದೆ  ಶಿವಮೊಗ್ಗ ದಿಂದ ಹಾಸನ ಕ್ಕೆ ರೈಲಿನಲ್ಲಿ ಹೋಗುವಾಗ ಕೇಳಿದ  ಒಂದು ನೈಜಗಟನೆ -
  " ತುಂಬಾ ಸಂತಸದ ಫ್ಯಾಮಿಲಿ, ಅಪ್ಪ ಅಮ್ಮ ಮಗ ಮಗಳು  ಕೇವಲ ನಾಲ್ಕು ಜನರ ಪುಟ್ಟ ಫ್ಯಾಮಿಲಿ , ಅತ್ಯಂತ ಸಂತೋಷದಿಂದಲೇ ಜೀವನ ನಡೀತಾ ಇತ್ತು.... ತಮ್ಮ ಮಗನ ವಿದ್ಯಾಭ್ಯಾಸಕ್ಕೆ ಅಪ್ಪ ತುಂಬಾ ಕಷ್ಟ ಪಟ್ಟು ಹಣ ಸಂಪಾದಿಸಿದ್ರಂತೆ , ಹಾಗೆ  ಅವನ ವಿದ್ಯಾಭ್ಯಸಾನೂ ನಡೀತಾ ಇತ್ತು. ಬೇರೆ ವಿಷಯಗಳಿಗೆ ಹಣ ಖರ್ಚು ಮಾಡೋಕೆ ಮೊದ್ಲು ಆತ ತುಂಬಾ ಯೋಚಿಸ್ತಾ ಇದ್ರು, ಮಗಳ ಮದುವೆಗೆ ಅಂತ ಸಹ ಹಣ ಕೂಡಿಟ್ಟಿದ್ರು. ಜನ ಅವರನ್ನ ಜಿಪುಣ ಅಂತ ಕರಿತಾ ಇದ್ರು..ಮುಂದಿನ ಜೀವನದ ಬಗ್ಗೆ ತುಂಬಾ ಯೋಚನೆಗಳಿದ್ದಿದ್ರಿಂದ ಅವ್ರು ಜಿಪುಣ ಆಗಿದ್ರು ಅನ್ಸತ್ತೆ. ಹೀಗೆ ಜೀವನ ನಡೀತಾ ಇತ್ತು , ಮಗಳು ಪಿ.ಯೂ.ಸಿ ಗೆ ವಿಧ್ಯಾಭ್ಯಾಸ ಮುಗ್ಸಿದ್ಲು , ನಂತರ ಎರಡು ವರ್ಷಗಳಲ್ಲಿ ಅವಳ ಮದುವೆನೂ ಆಯ್ತು.... ದುರದೃಷ್ಟ ಅಂದ್ರೆ ಮದುವೆ ಆಗಿ ಒಂದು ವರ್ಷದೊಳಗೆ ಭೀಕರ ರಸ್ತೆ ಅಪಘಾತದಲ್ಲಿ ಮಗಳು ಅಳಿಯ ಇಬ್ರೂ ವಿಧಿವಶರಾದರು... ಇತ್ತ ಮಗನ ವಿದ್ಯಾಭ್ಯಾಸನೂ ಮುಗಿತಾ ಬಂದಿತ್ತು .. ಮಗಳ ನೆನಪು ಮಾಸುತ್ತಾ ದಿನಗಳು ಉರುಳುತ್ತಿತ್ತು ..ಇವರ ಜೀವನದ ಅತ್ತ್ಯಂತ ಅಹಿತಕರ ಘಟನೆ ಅಂದ್ರೆ .. ಮಗ  ಎಂ.ಎ  ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾಗ ಅದೇನೋ ಜ್ವರ ಅಂತ ಬಂದು ಮೂರೇ ದಿನದಲ್ಲಿ ಇಹಲೋಕ ತ್ಯಜಿಸಿದ್ದು.... ನೋವಿನ ಮೇಲೆ ನೋವು ಅನುಭವಿಸುತ್ತ ಎರಡು ಜೀವಗಳು ಅದೆಷ್ಟು ದಿನ
ಬದುಕಿರಬಹುದು..... ಚಿಂತೆಯಲ್ಲೇ ಜೀವನ ಸಾಗುತ್ತಿದೆ ... ಕೂಡಿಟ್ಟ ಅಷ್ಟೊಂದು ಹಣ,ಆಸ್ತಿ ಪಾಸ್ತಿ ಯಾರ ಪಾಲಿಗೆ...?? ಅವರ ಕಡೆಯವರು ಅಂತ ಅವರಿಗೆ ಯಾರೂ ಇಲ್ವಂತೆ.. ಅವರ ಮುಂದಿನ ಗತಿ....?????? "
    ನೋಡಿದ್ರಾ ಆಸೆಗಳು  ಎಷ್ಟೊಂದು ಅಲ್ವಾ....???

         ಮತ್ತೊಂದು ಸಂಗತಿ ಅಂದ್ರೆ ಅನೇಕರು ನಮ್ ಫ್ರೆಂಡ್ಸ್ ನಮ್ ಜೊತೆ ನಾವ್ ಅಂದ್ಕೊಂಡಿರೋ ಹಾಗೆ ಇರ್ಬೇಕು ಅನ್ನೋ ಆಸೆ ಇಟ್ಕೊಂಡಿರ್ತಾರೆ ,ಅವರ ಜೀವನ ಶೈಲಿ ಇವರಿಗೋಸ್ಕರ ಬದಲಾಗಬೇಕೆ...?? ಇವರ ಆಸೆ ಆಕಾಂಕ್ಷೆ ಗಳಂತೆ ಅವರಿಗೂ ಇರುತ್ತೆ ಅನ್ನೋದನ್ನ ಮರೆತು  ಅವರ ಸ್ನೇಹವನ್ನೇ ದೂರ ಮಾಡಿಬಿಡ್ತಾರೆ ... ಸ್ನೇಹಿತರು ಒಬ್ರಿಗೊಬ್ರು ಅರ್ತ ಮಾಡ್ಕೊಂಡು , ಹೊಂದ್ಕೊಂಡು ತಮ್ಮ ಸ್ನೇಹನಾ ಶಾಶ್ವತವಾಗ್ ಇರೋಹಾಗ್ ಮಾಡ್ಕೋಬೇಕು , ಕೇವಲ ಆಸೆಗಲಿಗೋಸ್ಕರ ಸ್ನೇಹವನ್ನು ಬಲಿ ಕೊಡಬಾರದು... ಸ್ನೇಹ ಅತ್ಯಂತ  ಅಮೂಲ್ಯವಾದದ್ದು.. ಎಲ್ರಿಗೂ ಅಂತಹ ಅಮೂಲ್ಯ ವಾದ ಸ್ನೇಹ ಸಿಗೋದಿಲ್ಲ .... ಸೀಕ್ಕಿದ್ದನ್ನ ಹಾಳ್ಮಾಡ್ಕೋಬೇಡಿ ......

         ಪ್ರೀತಿ ವಿಷಯಕ್ಕೆ ಬಂದ್ರೆ ಅಲ್ಲೂ ಸಹ ಇಂತಹ ಹಲವು ಆಸೆಗಳಿಂದ ಆಗುವ ದುಷ್ಪರಿಣಾಮಗಳು ಅನೇಕ... ನಾನು ಪ್ರೀತಿಸಿದ ಹುಡುಗ/ಹುಡುಗಿ ಸಿಗ್ಲಿಲ್ಲ ಅಂತ ಅದೆಷ್ಟೋ ಜನ ಆತ್ಮಹತ್ಯೆ ಮಾಡ್ಕೊಂಡಿರೋ ಸಂಗತಿಗಳು ಹಲವಾರು...  ತಮ್ಮ ತಂದೆ ತಾಯಿ ಬಂಧು ಬಳಗ ದವರ ಯೋಚನೆ ಇಲ್ಲದೆ ಕೇವಲ ಕೆಲವು ಕೆಲವು ದಿನಗಳ ಹಿಂದೆ ಹುಟ್ಟಿಕೊಂಡ ಪ್ರೀತಿ ಸಿಗಲಿಲ್ಲ ವೆಂದು , ಜನ್ಮತಃ ವಾಗಿ ಸಿಕ್ಕ ಪ್ರೀತಿಯನ್ನೇ ದಿಕ್ಕರಿಸಿ ಆತ್ಮಹತ್ಯೆ ಮಾಡಿಕೊಳ್ಳುವುದು ಅದೆಷ್ಟು ಸರಿ..??? ನನ್ನ ಗೆಳೆಯನೂ ಸಹ ಇಂತಹ ಒಂದು ಹೀನ ಕೃತ್ಯಕ್ಕೆ ಸಾಕ್ಷಿ ಯಾಗಿದ್ದಾನೆ ಎಂದು ಹೇಳಿಕೊಳ್ಳುವುದಕ್ಕೆ ನನಗೆ ಬೇಸರ..... ಅವನ ಅಗಲಿಕೆಗಿಂತ ಅವನ ಪೋಷಕರ ಕಣ್ಣೀರಿನ ನೋವಿನ ದಿನಗಳು ನೆನೆಸಿಕೊಳ್ಳುವುದೇ ಕಷ್ಟದ ಸಂಗತಿ.......

                      ಹೀಗೆ ಹಲವು ಆಸೆಗಳ ನಡುವೆ ನಮ್ಮ ಜೀವನ ಸಾಗುತ್ತಿದೆ . ನಮ್ಮ ಆಸೆಗಳು ನಮ್ಮ ಜೀವನ ಏಳಿಗೆಗೆ ಕಾರಣವಾಗಬೇಕೇ ಹೊರತು ನಮ್ಮ , ಅವನತಿ ಗೆ ಕಾರಣವಾಗಬಾರದು ....  ನಮ್ಮನ್ನು ನಂಬಿಕೊಂಡಿರುವ ಅನೇಕ ಜೀವಗಳಿಗೆ ನಿರಾಸೆಯಾಗುವಂತಿರಬಾರದು ....

ಮರೆಯಾಗಲಿರುವ ಈ ಜೀವನದ ಆಸೆಗಳು ಮಿತಿಯಲ್ಲಿದ್ದರೆ  ಒಳಿತಲ್ಲವೇ......?????

ಸುದೀಪ್ ಎಸ್ 

ವ್ಯಕ್ತಿಪ್ರೀತಿ-ಲೋಕ ಪ್ರೀತಿ

✨ವ್ಯಕ್ತಿಪ್ರೀತಿ-ಲೋಕ ಪ್ರೀತಿ✨




ಪ್ರೇಮವು ಬದುಕನ್ನು ಬದಲಿಸುವ ಅತ್ಯಂತ ದೊಡ್ಡ ರಸವಿದ್ಯೆ. ಪ್ರೇಮ ಜೀವನವು ಅತಿದೊಡ್ಡ ಪಥ. ಪ್ರೇಮ ಜೀವನದ ದೊಡ್ಡ ಉತ್ತೇಜನ. ನೀವು ಒಂದು ವೇಳೆ ಪ್ರೇಮಿಯಾಗಿದ್ದರೆ, ರಸ್ತೆಯಲ್ಲಿ ಬಿದ್ದ ಯಾರನ್ನೋ ಎತ್ತಿಕೊಂಡು ಸೂಕ್ಷ ್ಮ ಶುಶ್ರೂಷೆಗೆ ವ್ಯವಸ್ಥೆ ಮಾಡುತ್ತೀರಿ. ನೀವು ಪ್ರೇಮಿಯಾಗಿದ್ದರೆ ನಿಮ್ಮೊಳಗಿನ ದನಿಗೆ ಅಂತ್ಯವೇ ಇರುವುದಿಲ್ಲ. ಆದ್ದರಿಂದ ಪ್ರೇಮದ ಕೃತ್ಯ ಎಂದಿಗೂ ಕೊನೆಯೇ ಆಗುವುದಿಲ್ಲ. ಅದು ಎಂದಿಗೂ ಅಪೂರ್ಣವಾಗಿಯೇ ಇರುತ್ತದೆ. ಪ್ರೇಮಿ ಯಾವಾಗಲೂ ನಾನು ಎಷ್ಟು ಮಾಡಬೇಕಿತ್ತೋ ಅಷ್ಟು ಮಾಡಲಾಗಿಲ್ಲ ಎಂದು ವೇದನೆ ಅನುಭವಿಸುತ್ತಲೇ ಇರುತ್ತಾನೆ. ನಾನು ಮಾಡಿರುವುದು ಅತ್ಯಲ್ಪ ಎಂಬ ಭಾವವೇ ಅವನನ್ನು ಲೋಕದ ಜತೆ ಹೆಚ್ಚು ಹೆಚ್ಚು ಆಪ್ತಗೊಳಿಸುತ್ತದೆ. ಪ್ರೇಮ ಎಂಬುದು ಸೀಮಿತ ಅರ್ಥದಲ್ಲಿ ತೆಗೆದುಕೊಂಡರೆ ಏನಾಗುತ್ತದೆ? ಪ್ರೇಮಿ ಮತ್ತು ಪ್ರೇಮಕ್ಕೆ ಒಳಪಟ್ಟವರ ಜಗತ್ತಿಗೆ ಮಾತ್ರ ಈ ಭಾವ ಸೀಮಿತಗೊಳ್ಳುತ್ತದೆ. ನಾವು ಯಾರನ್ನು ಪ್ರೇಮಿಸುತ್ತಿರುತ್ತೇವೆಯೋ ಅವರಿಗೆ ಏನಾಯ್ತು ಎಂದು ಆತಂಕಗೊಳ್ಳುತ್ತೇವೆ. ಅವರನ್ನು ಬಿಟ್ಟರೆ ನಮಗೆ ಬೇರೆ ಲೋಕ ಕಾಣಿಸುವುದಿಲ್ಲ ಇದನ್ನು ನಾನು ಅಪೂರ್ಣ ಪ್ರೇಮ ಎಂದೇ ಕರೆಯುವೆ. ಪರಿಪೂರ್ಣ ಪ್ರೇಮದಲ್ಲಿ ನಾನು, ನನ್ನದು ಎಂಬ ಅಹಂಕಾರ ಶೂನ್ಯವಾಗುತ್ತ ಹೋಗುತ್ತದೆ. ನಾನು ಇದ್ದೇನೆ ಎಂಬ ಅರಿವೂ ಹೊರಟು ಹೋಗುತ್ತದೆ. ಸರ್ವಪ್ರೇಮ, ಸರ್ವಮಂಗಳ, ಸರ್ವ ಕರುಣಾ ಭಾವ ಮೂಡುತ್ತದೆ. ಎಲ್ಲರೂ ಚೆನ್ನಾಗಿರಲಿ, ಎಲ್ಲರೂ ಆನಂದವಾಗಿರಲಿ, ಅನಂತದ ಕುರಿತು ಪ್ರೇಮಭಾವ ಮೂಡಿದ ಕೂಡಲೇ ಆಗ ಆ ವ್ಯಕ್ತಿ ಶೂನ್ಯವಾಗಿ ತಾನು ಇಲ್ಲವೇ ಇಲ್ಲ ಎಂದು ಕಂಡುಕೊಳ್ಳುತ್ತಾನೆ. ಏಕೆಂದರೆ ಪ್ರೇಮದಲ್ಲಿರುವಾಗ ಸ್ವಯಂ ಕುರಿತು ಸ್ಮರಣೆ ಮಾಡಲಾದರೂ ಪುರುಸೊತ್ತು ಎಲ್ಲಿರುತ್ತದೆ? ಅದಕ್ಕೆ ಅವಕಾಶ ಎಲ್ಲಿರುತ್ತದೆ? ಯಾರು ಪ್ರೇಮದಲ್ಲಿ ಇಲ್ಲವೋ ಅವರು ಮಾತ್ರವೇ ಸ್ವಯಂ ಕುರಿತು ಸ್ಮರಿಸಿಕೊಳ್ಳಲು ಸಾಧ್ಯ. ಸ್ವಲ್ಪ ಗಮನಿಸಿ. ನೀವು ಪ್ರೇಮದಲ್ಲಿರುವಾಗ ಅದೊಂದು ವ್ಯಕ್ತಿಯೊಡನಿರುವ ಸಾಧಾರಣವಾದ ಸಣ್ಣ ಪ್ರೇಮವೇ ಇರಬಹುದು. ಆದರೆ ನೀವು ಆ ಪ್ರೇಮದಲ್ಲಿರುವಾಗ, ಎಷ್ಟು ಹೊತ್ತಿನವರೆಗೆ ಪ್ರೇಮ ನಿಮ್ಮ ಪ್ರಾಣದಲ್ಲಿ ಮಿಲನವಾಗುತ್ತಿರುವುದೋ ಅಷ್ಟು ಹೊತ್ತಿನವರೆಗೂ ನಿಮ್ಮ ಇರುವಿಕೆ ನಿಮ್ಮ ಅರಿವಿಗೆ ಬಂದಿತ್ತೆ ಎಂಬುದನ್ನು ಗಮನಿಸಿರುವಿರಾ? ಆಗ ನೀವು ಇರುವುದಿಲ್ಲ. ಪ್ರೇಮಿ ಇರುತ್ತಾನೆ. ಆದರೆ ನೀವು ಇರುವುದಿಲ್ಲ. ನೀವು ಸಮಾಪ್ತರಾಗಿರುವಿರಿ. ಯಾರ ಕುರಿತು ನಿಮ್ಮ ಪ್ರೇಮ ಹರಿಯುತ್ತಿರುವುದೋ ಅವರು ಮಾತ್ರವೇ ಇರುವರು. ಯಾರ ಪ್ರೇಮ ಎಲ್ಲರೆಡೆಗೆ ಹರಿಯುತ್ತಿರುವುದೋ ಅವರು ಕಳೆದೇ ಹೋಗುತ್ತಾರೆ. ಇಲ್ಲವಾಗುತ್ತಾರೆ. ಶೂನ್ಯವಾಗುತ್ತಾರೆ. ಅವರ ಅಹಂಕಾರ ಸಮಾಪ್ತಿಯಾಗುತ್ತದೆ. ಪ್ರೇಮ ಅಹಂಕಾರದ ಮೃತ್ಯು. ಸ್ವಾರ್ಥಕ್ಕೆ ಕಂಟಕ. ಪ್ರೇಮಿ ಇವುಗಳನ್ನು ಕಳೆದುಕೊಳ್ಳುತ್ತಾನೆ. ಅವನು ವಿಲೀನವಾಗಿ ಹೋಗುತ್ತಾನೆ. ಪ್ರೇಮದಲ್ಲಿ ವಿಲೀನನಾಗುತ್ತಾನೆ. ಅದರಲ್ಲಿ ತೊರೆಯುವ, ಕಳೆದುಕೊಳ್ಳುವ ಭಾವ ಇರುವುದಿಲ್ಲ. ಅಹಿಂಸೆಯಲ್ಲಿ ಇಂಥ ವಿಲೀನತೆಯನ್ನು ಸಾಧಿಸುವುದು ಕಡು ಕಷ್ಟ. ನಾನು ಬೇರೆಯವರಿಗೆ ದುಃಖ ನೀಡಿದರೆ ಹಿಂಸೆ ಮಾಡಿದರೆ, ಹತ್ಯೆ ಮಾಡಿದರೆ, ನಾನು ನರಕಕ್ಕೆ ಹೋಗಬೇಕಾಗುತ್ತದೆ ಎಂಬ ಭಾವ ಮುಖ್ಯವಾದಾಗ ಏನಾಗುತ್ತದೆ? ಅಲ್ಲಿ ನಾನು ಎಂಬುದು ತಾನೇ ಮುಖ್ಯ. ಈ ನಾನು ಎಂಬುದನ್ನು ಪ್ರೇಮ ಭಾವದಲ್ಲಿ ಮಾತ್ರ ಕಳೆದುಕೊಳ್ಳುವುದಕ್ಕೆ ಸಾಧ್ಯ. ನಾನು ಎಂಬುದನ್ನು ಬಿಡಿಸಿಕೊಳ್ಳಲು ಆಗದಿದ್ದರೆ ಕ್ಷ ುದ್ರತೆಯನ್ನು ಗೆಲ್ಲಲು, ತಮವನ್ನು ಗೆಲ್ಲಲು ಆಗುವುದಿಲ್ಲ.


ಓಶೋ
☘🌿🍃☘🌿🍃☘🌿🍃