☘ನಾವೇಕೆ ಹೀಗೆ ... ?☘
ಮನುಷ್ಯನ ಮನಸ್ಸು ಎಂಬುದು ಅತೀ ಸೂಕ್ಷ್ಮ. ನಾವು ಮಾನಸಿಕವಾಗಿ ಸದೃಡವಾಗಿದ್ದೇವೆ ಎಂದು ಏನೇ ಹೇಳಿಕೊಂಡು ಓಡಾಡಬಹುದು. ಆದರೆ ಜೀವನದಲ್ಲಿ ಬರುವ ಘಟನೆಗಳು, ವ್ಯಕ್ತಿಗಳು, ಸಂಧರ್ಭಗಳು ನಮ್ಮ ಮನೋಸ್ಥೈರ್ಯವನ್ನು ನಿರ್ಧರಿಸುತ್ತದೆ. ಅದಾವುದೋ ಒಂದು ಸಂಧರ್ಭದಲ್ಲಿ ಮಾನಸಿಕವಾಗಿ ನಾವು ಕುಗ್ಗಬಹುದು ಅಥವಾ ಹಿಗ್ಗಿ ಮಹತ್ವವಾದದ್ದನ್ನು ಸಾಧಿಸಬಹುದು.
ನಾನಿಲ್ಲಿ ಹೇಳಲು ಹೊರಟಿರುವ ವಸ್ತುವೆಂದರೇ ನಮ್ಮ ಈ ಎರಡು ರೀತಿಯ ಬದಲಾವಣೆ ಜೊತೆಗೆ ಬದಲಾಗುವ ಸಮಾಜದ ಪ್ರತಿಕ್ರಿಯೆ.
ವ್ಯಕ್ತಿಯೊಬ್ಬ ಮಹತ್ವವಾದದನ್ನು ಸಾಧಿಸಿ ಪ್ರಸಿದ್ದಿಹೊಂದಿದಾಗ ಸಮಾಜ ಆ ವ್ಯಕ್ತಿಯೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡುತ್ತದೆ. ವ್ಯಕ್ತಿಯ ಹೆಸರನ್ನು ಉಪಯೋಗಿಸಿಕೊಂಡು ಲಾಭಹೊಂದುವವರೂ ಇದ್ದಾರೆ. ಅದೇ ಅಮಲಿನಲ್ಲಿ ತನ್ನ ಹಿನ್ನಲೆಯಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ಗಮನಿಸದಿದ್ದರೆ ಅವನು ಮತ್ತೆ ಅಧಃಪತನಕ್ಕೆ ಇಳಿಯುತ್ತಾನೆ. ಆ ಸಂಧರ್ಭದಲ್ಲಿ ಇದೇ ಸಮಾಜ ಆ ವ್ಯಕ್ತಿಯನ್ನು ಧೂಷಿಸುತ್ತದೆ.
ಅದೇ ವ್ಯಕ್ತಿ ಮಾನಸಿಕವಾಗಿ ಕುಗ್ಗಿದಾಗ, ಅವನೊಂದಿಗೆ ಯಾರು ಬರುವುದಿಲ್ಲ, ಅವನಾಗೆ ತಿಳಿದುಕೊಂಡು ಮನಸ್ಸನ್ನು ಕಲ್ಲಾಗಿಸಿಕೊಂಡು ಒಬಂಟಿಗನಾಗಿ ಹೊರಬಂದರೆ ಅವನಿಗೆ ಸಮಾಜದಲ್ಲಿ ಗೌರವ. ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು, ಪರಸ್ಪರ ಸಹಾಯಕವಾಗಿ ಮುಂದೆಬರಲು ನಾವೇಕೆ ಒಪ್ಪಿಕೊಳ್ಳುವುದಿಲ್ಲ ?
ನಮ್ಮ ಮನಸ್ಸು ಬಯಸುವಂತೆ, ನಾವು ಯರನ್ನಾದರೂ ಅರ್ಥಮಾಡಿಕೊಳ್ಳುವುದರಲ್ಲಾಗಲಿ, ನಮ್ಮನ್ನು ಅರ್ಥಮಾಡಿಕೊಳ್ಳಬೇಕು ಎಂದು ಬಯಸುವುದರಲ್ಲಿ ಎನು ತಪ್ಪಿದೆ ? ನಾನು, ನನ್ನಿಂದ ಎನುವುದಕ್ಕಿಂತ ನಾವು, ನಮ್ಮಿಂದ, ನಮ್ಮೊಟ್ಟಿಗೆ ಎಂದು ಹೇಳಿಕೊಳ್ಳುವುದರಲ್ಲಿರುವ ಸುಖ ನಮಗೆ ಯಾಕೆ ಅರ್ಥವಾಗುತ್ತಿಲ್ಲ ?
ಮನೋರೋಗಿಯ ಸ್ಥಿತಿ ಸಹಜವಾಗಲು ಹಲವು ಕಾರಣವಿರುತ್ತದೆ. ಅವರು ಇರುವ ಪರಿಸರ, ಅವರನ್ನು ನೋಡಿಕೊಳ್ಳುವ ರೀತಿ, ಅವರ ಸುತ್ತ ನಡೆಯುವ ಘಟನೆಗಳು, ಹೀಗೆ ವಿವರಿಸಬಹುದು. ಹುಷಾರಾಗಿ ಬಂದ ವ್ಯಕ್ತಿಗೆ ತಾನು ಹುಷಾರಾಗಲು ಪ್ರಭಾವ ಬೀರಿದ ಕೊನೆಯ ವ್ಯಕ್ತಿ ಅಥವ ಘಟನೆ ಮಾತ್ರವೇ ಮನಸ್ಸಿನಲ್ಲಿ ನಿಲ್ಲುತ್ತದೆ. ಆ ವ್ಯಕ್ತಿ / ಘಟನೆಯನ್ನು ಪದೇ, ಪದೇ ಮೆಲಕುಹಾಕಬಹುದು. ಅದರ ಬಗ್ಗೆಯೇ ಹೆಚ್ಚು ಮಾತಾಡಲೂಬಹುದು. ಅದು ತಪ್ಪಾ ?
ಆದರೆ ಯಾವುದಾದರು ಕಾರಣದಿಂದ ಆತ ಸರಿಹೋದ ಎಂದು ಯೋಚಿಸಿ ಸಂತೋಷಪಡುವ ಬದಲು, ನನ್ನ ಕಾರಣದಿಂದ ಯಾಕೆ ಸರಿಹೋಗಲಿಲ್ಲ ಎಂದು ಯೋಚಿಸುತ್ತಾರಲ್ಲ ಯಾಕೆ ?
ಸಮಾಜಕ್ಕೆ ವ್ಯಕ್ತಿಯೊಬ್ಬ ಸರಿಹೋಗುವುದು ಮುಖ್ಯವೋ ಅಥವ ತಮ್ಮ ದೆಸೆಯಿಂದ ಎಂಬ ಪ್ರತಿಷ್ಟೆ ಮುಖ್ಯವೋ ತಿಳಿಯುತ್ತಿಲ್ಲ. ನಾನು, ನನ್ನಿಂದ ಎಂಬುದು ಸ್ವಾರ್ಥ ಭಾವ ಎಂದು ಈ ಸಮಾಜಕ್ಕೆ ಯಾಕೆ ಅರ್ಥವಾಗುತ್ತಿಲ್ಲ ?
ಇಂತಹ ಸ್ವಾರ್ಥ ಭಾವ ನನ್ನಲ್ಲಿ ಬೆಳೆಯಕೂಡದು ಎಂದೆನ್ನಿಸಿ "ಎಲ್ಲರೊಳಗೊಂದಾಗು ಮಂಕುತಿಮ್ಮ" ಅಂತಲ್ಲದಿದ್ದರೂ ಕಡೇ ಪಕ್ಷ ಯಾರಾದರು ಒಬ್ಬರಿಗೆ ನನನ್ನು ನಾನು ಅರ್ಪಿಸಿಕೊಳ್ಳೋಣವೆಂದರೇ ಸಮಾಜ ನನ್ನನ್ನು ಯಾಕೆ ಒಪ್ಪಿಕೊಳ್ಳುತ್ತಿಲ್ಲ ?
ಬಹುದಿನಗಳಿಂದ ನನ್ನನ್ನು ಕಾಡುತ್ತಿರುವ ಪ್ರಶ್ನೆ ನಾವ್ಯಾಕೆ ಹೀಗೆ ?
Karthik Kashyap
💫💫💫💫💫💫💫💫💫
ಮನುಷ್ಯನ ಮನಸ್ಸು ಎಂಬುದು ಅತೀ ಸೂಕ್ಷ್ಮ. ನಾವು ಮಾನಸಿಕವಾಗಿ ಸದೃಡವಾಗಿದ್ದೇವೆ ಎಂದು ಏನೇ ಹೇಳಿಕೊಂಡು ಓಡಾಡಬಹುದು. ಆದರೆ ಜೀವನದಲ್ಲಿ ಬರುವ ಘಟನೆಗಳು, ವ್ಯಕ್ತಿಗಳು, ಸಂಧರ್ಭಗಳು ನಮ್ಮ ಮನೋಸ್ಥೈರ್ಯವನ್ನು ನಿರ್ಧರಿಸುತ್ತದೆ. ಅದಾವುದೋ ಒಂದು ಸಂಧರ್ಭದಲ್ಲಿ ಮಾನಸಿಕವಾಗಿ ನಾವು ಕುಗ್ಗಬಹುದು ಅಥವಾ ಹಿಗ್ಗಿ ಮಹತ್ವವಾದದ್ದನ್ನು ಸಾಧಿಸಬಹುದು.
ನಾನಿಲ್ಲಿ ಹೇಳಲು ಹೊರಟಿರುವ ವಸ್ತುವೆಂದರೇ ನಮ್ಮ ಈ ಎರಡು ರೀತಿಯ ಬದಲಾವಣೆ ಜೊತೆಗೆ ಬದಲಾಗುವ ಸಮಾಜದ ಪ್ರತಿಕ್ರಿಯೆ.
ವ್ಯಕ್ತಿಯೊಬ್ಬ ಮಹತ್ವವಾದದನ್ನು ಸಾಧಿಸಿ ಪ್ರಸಿದ್ದಿಹೊಂದಿದಾಗ ಸಮಾಜ ಆ ವ್ಯಕ್ತಿಯೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡುತ್ತದೆ. ವ್ಯಕ್ತಿಯ ಹೆಸರನ್ನು ಉಪಯೋಗಿಸಿಕೊಂಡು ಲಾಭಹೊಂದುವವರೂ ಇದ್ದಾರೆ. ಅದೇ ಅಮಲಿನಲ್ಲಿ ತನ್ನ ಹಿನ್ನಲೆಯಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ಗಮನಿಸದಿದ್ದರೆ ಅವನು ಮತ್ತೆ ಅಧಃಪತನಕ್ಕೆ ಇಳಿಯುತ್ತಾನೆ. ಆ ಸಂಧರ್ಭದಲ್ಲಿ ಇದೇ ಸಮಾಜ ಆ ವ್ಯಕ್ತಿಯನ್ನು ಧೂಷಿಸುತ್ತದೆ.
ಅದೇ ವ್ಯಕ್ತಿ ಮಾನಸಿಕವಾಗಿ ಕುಗ್ಗಿದಾಗ, ಅವನೊಂದಿಗೆ ಯಾರು ಬರುವುದಿಲ್ಲ, ಅವನಾಗೆ ತಿಳಿದುಕೊಂಡು ಮನಸ್ಸನ್ನು ಕಲ್ಲಾಗಿಸಿಕೊಂಡು ಒಬಂಟಿಗನಾಗಿ ಹೊರಬಂದರೆ ಅವನಿಗೆ ಸಮಾಜದಲ್ಲಿ ಗೌರವ. ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು, ಪರಸ್ಪರ ಸಹಾಯಕವಾಗಿ ಮುಂದೆಬರಲು ನಾವೇಕೆ ಒಪ್ಪಿಕೊಳ್ಳುವುದಿಲ್ಲ ?
ನಮ್ಮ ಮನಸ್ಸು ಬಯಸುವಂತೆ, ನಾವು ಯರನ್ನಾದರೂ ಅರ್ಥಮಾಡಿಕೊಳ್ಳುವುದರಲ್ಲಾಗಲಿ, ನಮ್ಮನ್ನು ಅರ್ಥಮಾಡಿಕೊಳ್ಳಬೇಕು ಎಂದು ಬಯಸುವುದರಲ್ಲಿ ಎನು ತಪ್ಪಿದೆ ? ನಾನು, ನನ್ನಿಂದ ಎನುವುದಕ್ಕಿಂತ ನಾವು, ನಮ್ಮಿಂದ, ನಮ್ಮೊಟ್ಟಿಗೆ ಎಂದು ಹೇಳಿಕೊಳ್ಳುವುದರಲ್ಲಿರುವ ಸುಖ ನಮಗೆ ಯಾಕೆ ಅರ್ಥವಾಗುತ್ತಿಲ್ಲ ?
ಮನೋರೋಗಿಯ ಸ್ಥಿತಿ ಸಹಜವಾಗಲು ಹಲವು ಕಾರಣವಿರುತ್ತದೆ. ಅವರು ಇರುವ ಪರಿಸರ, ಅವರನ್ನು ನೋಡಿಕೊಳ್ಳುವ ರೀತಿ, ಅವರ ಸುತ್ತ ನಡೆಯುವ ಘಟನೆಗಳು, ಹೀಗೆ ವಿವರಿಸಬಹುದು. ಹುಷಾರಾಗಿ ಬಂದ ವ್ಯಕ್ತಿಗೆ ತಾನು ಹುಷಾರಾಗಲು ಪ್ರಭಾವ ಬೀರಿದ ಕೊನೆಯ ವ್ಯಕ್ತಿ ಅಥವ ಘಟನೆ ಮಾತ್ರವೇ ಮನಸ್ಸಿನಲ್ಲಿ ನಿಲ್ಲುತ್ತದೆ. ಆ ವ್ಯಕ್ತಿ / ಘಟನೆಯನ್ನು ಪದೇ, ಪದೇ ಮೆಲಕುಹಾಕಬಹುದು. ಅದರ ಬಗ್ಗೆಯೇ ಹೆಚ್ಚು ಮಾತಾಡಲೂಬಹುದು. ಅದು ತಪ್ಪಾ ?
ಆದರೆ ಯಾವುದಾದರು ಕಾರಣದಿಂದ ಆತ ಸರಿಹೋದ ಎಂದು ಯೋಚಿಸಿ ಸಂತೋಷಪಡುವ ಬದಲು, ನನ್ನ ಕಾರಣದಿಂದ ಯಾಕೆ ಸರಿಹೋಗಲಿಲ್ಲ ಎಂದು ಯೋಚಿಸುತ್ತಾರಲ್ಲ ಯಾಕೆ ?
ಸಮಾಜಕ್ಕೆ ವ್ಯಕ್ತಿಯೊಬ್ಬ ಸರಿಹೋಗುವುದು ಮುಖ್ಯವೋ ಅಥವ ತಮ್ಮ ದೆಸೆಯಿಂದ ಎಂಬ ಪ್ರತಿಷ್ಟೆ ಮುಖ್ಯವೋ ತಿಳಿಯುತ್ತಿಲ್ಲ. ನಾನು, ನನ್ನಿಂದ ಎಂಬುದು ಸ್ವಾರ್ಥ ಭಾವ ಎಂದು ಈ ಸಮಾಜಕ್ಕೆ ಯಾಕೆ ಅರ್ಥವಾಗುತ್ತಿಲ್ಲ ?
ಇಂತಹ ಸ್ವಾರ್ಥ ಭಾವ ನನ್ನಲ್ಲಿ ಬೆಳೆಯಕೂಡದು ಎಂದೆನ್ನಿಸಿ "ಎಲ್ಲರೊಳಗೊಂದಾಗು ಮಂಕುತಿಮ್ಮ" ಅಂತಲ್ಲದಿದ್ದರೂ ಕಡೇ ಪಕ್ಷ ಯಾರಾದರು ಒಬ್ಬರಿಗೆ ನನನ್ನು ನಾನು ಅರ್ಪಿಸಿಕೊಳ್ಳೋಣವೆಂದರೇ ಸಮಾಜ ನನ್ನನ್ನು ಯಾಕೆ ಒಪ್ಪಿಕೊಳ್ಳುತ್ತಿಲ್ಲ ?
ಬಹುದಿನಗಳಿಂದ ನನ್ನನ್ನು ಕಾಡುತ್ತಿರುವ ಪ್ರಶ್ನೆ ನಾವ್ಯಾಕೆ ಹೀಗೆ ?
Karthik Kashyap
💫💫💫💫💫💫💫💫💫
No comments:
Post a Comment