Monday, 14 November 2016
Karma ;
Thought of the Day
karma ; No need for revenge. Just sit back and wait .Those who hurt you will screw up themselves and if you are lucky . God will let you watch .
🔸🔹🔸🔹🔸🔹🔸🔹🔸
Always ask God what you deserve … And not what you desire….
Because your desires may be few ….
But you deserve a lot more …….
Thought of the Day
karma ; No need for revenge. Just sit back and wait .Those who hurt you will screw up themselves and if you are lucky . God will let you watch .
🔸🔹🔸🔹🔸🔹🔸🔹🔸
Always ask God what you deserve … And not what you desire….
Because your desires may be few ….
But you deserve a lot more …….
ನಾವೇಕೆ ಹೀಗೆ ... ?
☘ನಾವೇಕೆ ಹೀಗೆ ... ?☘
ಮನುಷ್ಯನ ಮನಸ್ಸು ಎಂಬುದು ಅತೀ ಸೂಕ್ಷ್ಮ. ನಾವು ಮಾನಸಿಕವಾಗಿ ಸದೃಡವಾಗಿದ್ದೇವೆ ಎಂದು ಏನೇ ಹೇಳಿಕೊಂಡು ಓಡಾಡಬಹುದು. ಆದರೆ ಜೀವನದಲ್ಲಿ ಬರುವ ಘಟನೆಗಳು, ವ್ಯಕ್ತಿಗಳು, ಸಂಧರ್ಭಗಳು ನಮ್ಮ ಮನೋಸ್ಥೈರ್ಯವನ್ನು ನಿರ್ಧರಿಸುತ್ತದೆ. ಅದಾವುದೋ ಒಂದು ಸಂಧರ್ಭದಲ್ಲಿ ಮಾನಸಿಕವಾಗಿ ನಾವು ಕುಗ್ಗಬಹುದು ಅಥವಾ ಹಿಗ್ಗಿ ಮಹತ್ವವಾದದ್ದನ್ನು ಸಾಧಿಸಬಹುದು.
ನಾನಿಲ್ಲಿ ಹೇಳಲು ಹೊರಟಿರುವ ವಸ್ತುವೆಂದರೇ ನಮ್ಮ ಈ ಎರಡು ರೀತಿಯ ಬದಲಾವಣೆ ಜೊತೆಗೆ ಬದಲಾಗುವ ಸಮಾಜದ ಪ್ರತಿಕ್ರಿಯೆ.
ವ್ಯಕ್ತಿಯೊಬ್ಬ ಮಹತ್ವವಾದದನ್ನು ಸಾಧಿಸಿ ಪ್ರಸಿದ್ದಿಹೊಂದಿದಾಗ ಸಮಾಜ ಆ ವ್ಯಕ್ತಿಯೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡುತ್ತದೆ. ವ್ಯಕ್ತಿಯ ಹೆಸರನ್ನು ಉಪಯೋಗಿಸಿಕೊಂಡು ಲಾಭಹೊಂದುವವರೂ ಇದ್ದಾರೆ. ಅದೇ ಅಮಲಿನಲ್ಲಿ ತನ್ನ ಹಿನ್ನಲೆಯಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ಗಮನಿಸದಿದ್ದರೆ ಅವನು ಮತ್ತೆ ಅಧಃಪತನಕ್ಕೆ ಇಳಿಯುತ್ತಾನೆ. ಆ ಸಂಧರ್ಭದಲ್ಲಿ ಇದೇ ಸಮಾಜ ಆ ವ್ಯಕ್ತಿಯನ್ನು ಧೂಷಿಸುತ್ತದೆ.
ಅದೇ ವ್ಯಕ್ತಿ ಮಾನಸಿಕವಾಗಿ ಕುಗ್ಗಿದಾಗ, ಅವನೊಂದಿಗೆ ಯಾರು ಬರುವುದಿಲ್ಲ, ಅವನಾಗೆ ತಿಳಿದುಕೊಂಡು ಮನಸ್ಸನ್ನು ಕಲ್ಲಾಗಿಸಿಕೊಂಡು ಒಬಂಟಿಗನಾಗಿ ಹೊರಬಂದರೆ ಅವನಿಗೆ ಸಮಾಜದಲ್ಲಿ ಗೌರವ. ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು, ಪರಸ್ಪರ ಸಹಾಯಕವಾಗಿ ಮುಂದೆಬರಲು ನಾವೇಕೆ ಒಪ್ಪಿಕೊಳ್ಳುವುದಿಲ್ಲ ?
ನಮ್ಮ ಮನಸ್ಸು ಬಯಸುವಂತೆ, ನಾವು ಯರನ್ನಾದರೂ ಅರ್ಥಮಾಡಿಕೊಳ್ಳುವುದರಲ್ಲಾಗಲಿ, ನಮ್ಮನ್ನು ಅರ್ಥಮಾಡಿಕೊಳ್ಳಬೇಕು ಎಂದು ಬಯಸುವುದರಲ್ಲಿ ಎನು ತಪ್ಪಿದೆ ? ನಾನು, ನನ್ನಿಂದ ಎನುವುದಕ್ಕಿಂತ ನಾವು, ನಮ್ಮಿಂದ, ನಮ್ಮೊಟ್ಟಿಗೆ ಎಂದು ಹೇಳಿಕೊಳ್ಳುವುದರಲ್ಲಿರುವ ಸುಖ ನಮಗೆ ಯಾಕೆ ಅರ್ಥವಾಗುತ್ತಿಲ್ಲ ?
ಮನೋರೋಗಿಯ ಸ್ಥಿತಿ ಸಹಜವಾಗಲು ಹಲವು ಕಾರಣವಿರುತ್ತದೆ. ಅವರು ಇರುವ ಪರಿಸರ, ಅವರನ್ನು ನೋಡಿಕೊಳ್ಳುವ ರೀತಿ, ಅವರ ಸುತ್ತ ನಡೆಯುವ ಘಟನೆಗಳು, ಹೀಗೆ ವಿವರಿಸಬಹುದು. ಹುಷಾರಾಗಿ ಬಂದ ವ್ಯಕ್ತಿಗೆ ತಾನು ಹುಷಾರಾಗಲು ಪ್ರಭಾವ ಬೀರಿದ ಕೊನೆಯ ವ್ಯಕ್ತಿ ಅಥವ ಘಟನೆ ಮಾತ್ರವೇ ಮನಸ್ಸಿನಲ್ಲಿ ನಿಲ್ಲುತ್ತದೆ. ಆ ವ್ಯಕ್ತಿ / ಘಟನೆಯನ್ನು ಪದೇ, ಪದೇ ಮೆಲಕುಹಾಕಬಹುದು. ಅದರ ಬಗ್ಗೆಯೇ ಹೆಚ್ಚು ಮಾತಾಡಲೂಬಹುದು. ಅದು ತಪ್ಪಾ ?
ಆದರೆ ಯಾವುದಾದರು ಕಾರಣದಿಂದ ಆತ ಸರಿಹೋದ ಎಂದು ಯೋಚಿಸಿ ಸಂತೋಷಪಡುವ ಬದಲು, ನನ್ನ ಕಾರಣದಿಂದ ಯಾಕೆ ಸರಿಹೋಗಲಿಲ್ಲ ಎಂದು ಯೋಚಿಸುತ್ತಾರಲ್ಲ ಯಾಕೆ ?
ಸಮಾಜಕ್ಕೆ ವ್ಯಕ್ತಿಯೊಬ್ಬ ಸರಿಹೋಗುವುದು ಮುಖ್ಯವೋ ಅಥವ ತಮ್ಮ ದೆಸೆಯಿಂದ ಎಂಬ ಪ್ರತಿಷ್ಟೆ ಮುಖ್ಯವೋ ತಿಳಿಯುತ್ತಿಲ್ಲ. ನಾನು, ನನ್ನಿಂದ ಎಂಬುದು ಸ್ವಾರ್ಥ ಭಾವ ಎಂದು ಈ ಸಮಾಜಕ್ಕೆ ಯಾಕೆ ಅರ್ಥವಾಗುತ್ತಿಲ್ಲ ?
ಇಂತಹ ಸ್ವಾರ್ಥ ಭಾವ ನನ್ನಲ್ಲಿ ಬೆಳೆಯಕೂಡದು ಎಂದೆನ್ನಿಸಿ "ಎಲ್ಲರೊಳಗೊಂದಾಗು ಮಂಕುತಿಮ್ಮ" ಅಂತಲ್ಲದಿದ್ದರೂ ಕಡೇ ಪಕ್ಷ ಯಾರಾದರು ಒಬ್ಬರಿಗೆ ನನನ್ನು ನಾನು ಅರ್ಪಿಸಿಕೊಳ್ಳೋಣವೆಂದರೇ ಸಮಾಜ ನನ್ನನ್ನು ಯಾಕೆ ಒಪ್ಪಿಕೊಳ್ಳುತ್ತಿಲ್ಲ ?
ಬಹುದಿನಗಳಿಂದ ನನ್ನನ್ನು ಕಾಡುತ್ತಿರುವ ಪ್ರಶ್ನೆ ನಾವ್ಯಾಕೆ ಹೀಗೆ ?
Karthik Kashyap
💫💫💫💫💫💫💫💫💫
ಮನುಷ್ಯನ ಮನಸ್ಸು ಎಂಬುದು ಅತೀ ಸೂಕ್ಷ್ಮ. ನಾವು ಮಾನಸಿಕವಾಗಿ ಸದೃಡವಾಗಿದ್ದೇವೆ ಎಂದು ಏನೇ ಹೇಳಿಕೊಂಡು ಓಡಾಡಬಹುದು. ಆದರೆ ಜೀವನದಲ್ಲಿ ಬರುವ ಘಟನೆಗಳು, ವ್ಯಕ್ತಿಗಳು, ಸಂಧರ್ಭಗಳು ನಮ್ಮ ಮನೋಸ್ಥೈರ್ಯವನ್ನು ನಿರ್ಧರಿಸುತ್ತದೆ. ಅದಾವುದೋ ಒಂದು ಸಂಧರ್ಭದಲ್ಲಿ ಮಾನಸಿಕವಾಗಿ ನಾವು ಕುಗ್ಗಬಹುದು ಅಥವಾ ಹಿಗ್ಗಿ ಮಹತ್ವವಾದದ್ದನ್ನು ಸಾಧಿಸಬಹುದು.
ನಾನಿಲ್ಲಿ ಹೇಳಲು ಹೊರಟಿರುವ ವಸ್ತುವೆಂದರೇ ನಮ್ಮ ಈ ಎರಡು ರೀತಿಯ ಬದಲಾವಣೆ ಜೊತೆಗೆ ಬದಲಾಗುವ ಸಮಾಜದ ಪ್ರತಿಕ್ರಿಯೆ.
ವ್ಯಕ್ತಿಯೊಬ್ಬ ಮಹತ್ವವಾದದನ್ನು ಸಾಧಿಸಿ ಪ್ರಸಿದ್ದಿಹೊಂದಿದಾಗ ಸಮಾಜ ಆ ವ್ಯಕ್ತಿಯೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡುತ್ತದೆ. ವ್ಯಕ್ತಿಯ ಹೆಸರನ್ನು ಉಪಯೋಗಿಸಿಕೊಂಡು ಲಾಭಹೊಂದುವವರೂ ಇದ್ದಾರೆ. ಅದೇ ಅಮಲಿನಲ್ಲಿ ತನ್ನ ಹಿನ್ನಲೆಯಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ಗಮನಿಸದಿದ್ದರೆ ಅವನು ಮತ್ತೆ ಅಧಃಪತನಕ್ಕೆ ಇಳಿಯುತ್ತಾನೆ. ಆ ಸಂಧರ್ಭದಲ್ಲಿ ಇದೇ ಸಮಾಜ ಆ ವ್ಯಕ್ತಿಯನ್ನು ಧೂಷಿಸುತ್ತದೆ.
ಅದೇ ವ್ಯಕ್ತಿ ಮಾನಸಿಕವಾಗಿ ಕುಗ್ಗಿದಾಗ, ಅವನೊಂದಿಗೆ ಯಾರು ಬರುವುದಿಲ್ಲ, ಅವನಾಗೆ ತಿಳಿದುಕೊಂಡು ಮನಸ್ಸನ್ನು ಕಲ್ಲಾಗಿಸಿಕೊಂಡು ಒಬಂಟಿಗನಾಗಿ ಹೊರಬಂದರೆ ಅವನಿಗೆ ಸಮಾಜದಲ್ಲಿ ಗೌರವ. ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು, ಪರಸ್ಪರ ಸಹಾಯಕವಾಗಿ ಮುಂದೆಬರಲು ನಾವೇಕೆ ಒಪ್ಪಿಕೊಳ್ಳುವುದಿಲ್ಲ ?
ನಮ್ಮ ಮನಸ್ಸು ಬಯಸುವಂತೆ, ನಾವು ಯರನ್ನಾದರೂ ಅರ್ಥಮಾಡಿಕೊಳ್ಳುವುದರಲ್ಲಾಗಲಿ, ನಮ್ಮನ್ನು ಅರ್ಥಮಾಡಿಕೊಳ್ಳಬೇಕು ಎಂದು ಬಯಸುವುದರಲ್ಲಿ ಎನು ತಪ್ಪಿದೆ ? ನಾನು, ನನ್ನಿಂದ ಎನುವುದಕ್ಕಿಂತ ನಾವು, ನಮ್ಮಿಂದ, ನಮ್ಮೊಟ್ಟಿಗೆ ಎಂದು ಹೇಳಿಕೊಳ್ಳುವುದರಲ್ಲಿರುವ ಸುಖ ನಮಗೆ ಯಾಕೆ ಅರ್ಥವಾಗುತ್ತಿಲ್ಲ ?
ಮನೋರೋಗಿಯ ಸ್ಥಿತಿ ಸಹಜವಾಗಲು ಹಲವು ಕಾರಣವಿರುತ್ತದೆ. ಅವರು ಇರುವ ಪರಿಸರ, ಅವರನ್ನು ನೋಡಿಕೊಳ್ಳುವ ರೀತಿ, ಅವರ ಸುತ್ತ ನಡೆಯುವ ಘಟನೆಗಳು, ಹೀಗೆ ವಿವರಿಸಬಹುದು. ಹುಷಾರಾಗಿ ಬಂದ ವ್ಯಕ್ತಿಗೆ ತಾನು ಹುಷಾರಾಗಲು ಪ್ರಭಾವ ಬೀರಿದ ಕೊನೆಯ ವ್ಯಕ್ತಿ ಅಥವ ಘಟನೆ ಮಾತ್ರವೇ ಮನಸ್ಸಿನಲ್ಲಿ ನಿಲ್ಲುತ್ತದೆ. ಆ ವ್ಯಕ್ತಿ / ಘಟನೆಯನ್ನು ಪದೇ, ಪದೇ ಮೆಲಕುಹಾಕಬಹುದು. ಅದರ ಬಗ್ಗೆಯೇ ಹೆಚ್ಚು ಮಾತಾಡಲೂಬಹುದು. ಅದು ತಪ್ಪಾ ?
ಆದರೆ ಯಾವುದಾದರು ಕಾರಣದಿಂದ ಆತ ಸರಿಹೋದ ಎಂದು ಯೋಚಿಸಿ ಸಂತೋಷಪಡುವ ಬದಲು, ನನ್ನ ಕಾರಣದಿಂದ ಯಾಕೆ ಸರಿಹೋಗಲಿಲ್ಲ ಎಂದು ಯೋಚಿಸುತ್ತಾರಲ್ಲ ಯಾಕೆ ?
ಸಮಾಜಕ್ಕೆ ವ್ಯಕ್ತಿಯೊಬ್ಬ ಸರಿಹೋಗುವುದು ಮುಖ್ಯವೋ ಅಥವ ತಮ್ಮ ದೆಸೆಯಿಂದ ಎಂಬ ಪ್ರತಿಷ್ಟೆ ಮುಖ್ಯವೋ ತಿಳಿಯುತ್ತಿಲ್ಲ. ನಾನು, ನನ್ನಿಂದ ಎಂಬುದು ಸ್ವಾರ್ಥ ಭಾವ ಎಂದು ಈ ಸಮಾಜಕ್ಕೆ ಯಾಕೆ ಅರ್ಥವಾಗುತ್ತಿಲ್ಲ ?
ಇಂತಹ ಸ್ವಾರ್ಥ ಭಾವ ನನ್ನಲ್ಲಿ ಬೆಳೆಯಕೂಡದು ಎಂದೆನ್ನಿಸಿ "ಎಲ್ಲರೊಳಗೊಂದಾಗು ಮಂಕುತಿಮ್ಮ" ಅಂತಲ್ಲದಿದ್ದರೂ ಕಡೇ ಪಕ್ಷ ಯಾರಾದರು ಒಬ್ಬರಿಗೆ ನನನ್ನು ನಾನು ಅರ್ಪಿಸಿಕೊಳ್ಳೋಣವೆಂದರೇ ಸಮಾಜ ನನ್ನನ್ನು ಯಾಕೆ ಒಪ್ಪಿಕೊಳ್ಳುತ್ತಿಲ್ಲ ?
ಬಹುದಿನಗಳಿಂದ ನನ್ನನ್ನು ಕಾಡುತ್ತಿರುವ ಪ್ರಶ್ನೆ ನಾವ್ಯಾಕೆ ಹೀಗೆ ?
Karthik Kashyap
💫💫💫💫💫💫💫💫💫
ಶ್ರೀ ಕನಕ ದಾಸರು
ಶ್ರೀ ಕನಕ ದಾಸರು
ಶ್ರೀ ಕನಕದಾಸರು[ತಿಮ್ಮಪ್ಪನಾಯಕ] (1509-1609) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರು ದಂಡನಾಯಕರಾಗಿದ್ದು ಯುದ್ದವೊಂದರಲ್ಲಿ ಸೋತ ಅವರಿಗೆ ಉಪರತಿ/ವೈರಾಗ್ಯ ಉಂಟಾಗಿ, ಹರಿಭಕ್ತರಾದರಂತೆ.
ಜೀವನ
ಜನನ
ಕನಕದಾಸರು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ 1487ರಲ್ಲಿ ಕುರುಬ ಗೌಡ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು.
ಸಾಧನೆ
ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಯದಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಇವರ ಕೀರ್ತನೆಗಳ ಅಂಕಿತ ಕಾಗಿನೆಲೆಯ ಆದಿಕೇಶವರಾಯ. ===ಕನಕನ ಕಿಂಡಿ
ಅನೇಕರ ನಂಬಿಕೆಯಂತೆ ಉಡುಪಿಯ ದೇವಸ್ಥಾನದಲ್ಲಿ ಅವರಿಗೆ ಪ್ರವೇಶ ದೊರೆಯದೆ ಹೋದಾಗ ದೇವಸ್ಥಾನದ ಹಿಂದೆ ನಿಂತು ಹಾಡತೊಡಗಿದರಂತೆ ("ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ"). ಆಗ ಹಿಂಭಾಗದ ಗೋಡೆ ಒಡೆದು ಕೃಷ್ಣನ ವಿಗ್ರಹ ಹಿಮ್ಮುಖವಾಗಿ ತಿರುಗಿತಂತೆ. (ಈಗಲೂ ಉಡುಪಿ ಕೃಷ್ಣನ ದೇವಸ್ಥಾನದ ಹಿಂದುಗಡೆಯ ಗೋಡೆಯಲ್ಲಿರುವ ಬಿರುಕಿನಲ್ಲಿ ಶ್ರೀಕೃಷ್ಣನ ಕಾಣಬಹುದು. ಇಲ್ಲಿ ಒಂದು ಕಿಟಕಿಯನ್ನು ನಿರ್ಮಿಸಿ ಅದನ್ನು 'ಕನಕನ ಕಿಂಡಿ' ಎಂದು ಕರೆಯಲಾಗಿದೆ).
ಉಡುಪಿಯ ಕನಕನ ಕಿಂಡಿಯ ಬಗ್ಗೆ ಸ್ವತಃ ಕನಕದಾಸರ ಕೃತಿಗಳಲ್ಲಾಗಲೀ ಇತರೆ ಕೃತಿಗಳಲ್ಲಾಗಲೀ ಮಠದ ದಾಖಲೆಗಳಲ್ಲಾಗಲೀ ಚರಿತ್ರೆಯ ಪುಟಗಳಲ್ಲಾಗಲೀ ಶಾಸನಗಳಲ್ಲಾಗಲೀ ಎಲ್ಲಿಯೂ ಪ್ರಸ್ತಾಪವಾಗಿಲ್ಲ.ಇನ್ನು ಉಡುಪಿಯ ಆ ದೇವಾಲಯವಾದರೋ ಆಗಮಾದಿಗಳಲ್ಲಿ ಹೇಳಿರುವ ವಾಸ್ತುವಿನ್ಯಾಸದನ್ವಯ ಕಟ್ಟಿಯೂ ಇಲ್ಲ. ಅಲ್ಲಿ ಬಲಿಕಲ್ಲು, ಧ್ವಜಸ್ತಂಭ, ಅಂತರಾಳ, ಅರ್ಧಮಂಟಪ, ಪ್ರದಕ್ಷಿಣಾಪಥಗಳೂ ಇಲ್ಲ. ಇನ್ನು ಪ್ರಾಣದೇವರ ಪ್ರತಿಷ್ಠಾಪನೆಯೂ ವಿಭಿನ್ನವೇ.ಉಡುಪಿಯ ಶ್ರೀಕೃಷ್ಣ ವಿಗ್ರಹವನ್ನು ಮಧ್ವಾಚಾರ್ಯರು ಕ್ರಿಸ್ತ ಶಕ ೧೨೩೮ (ಶಕವರ್ಷ ೧೧೬೦ ಹೇವಿಳಂಬಿ ಸಂವತ್ಸರ ಮಾಘ ಶುದ್ಧ ತದಿಗೆ) ನೇ ವರ್ಷದಲ್ಲಿ ಪಶ್ಚಿಮಾಭಿಮುಖಿಯಾಗಿ ಪ್ರತಿಷ್ಠೆ ಮಾಡಿದ್ದರಾಗಲೀ ಪೂರ್ವಾಭಿಮುಖವಾಗಿ ಅಲ್ಲ. ತಮಗೆ ಪಶ್ಚಿಮ ಸಮುದ್ರದಿಂದ ಲಭ್ಯವಾದ ಆ ಮೂರ್ತಿಯನ್ನು ಪಶ್ಚಿಮಕ್ಕೇ ಮುಖ ಮಾಡಿ ಪ್ರತಿಷ್ಠಾಪಿಸಿ ಪಶ್ಚಿಮ ಸಮುದ್ರಾಧೀಶ್ವರನನ್ನಾಗಿ ಕರೆದರೆನ್ನುವುದೇ ಸತ್ಯಸ್ಯ ಸತ್ಯ. ಇದಕ್ಕೆ ದಾಖಲೆಯಾಗಿ ಕನಕದಾಸರ ಸಮಕಾಲೀನರಾದ ಸುರೋತ್ತಮ ತೀರ್ಥರ ಹೇಳಿಕೆ.ಅದರ ತಾತ್ಪರ್ಯ ಹೀಗಿದೆ: 'ದೇವತಾ ವಿಗ್ರಹಗಳನ್ನು ಪೂರ್ವಾಭಿಮುಖಿಯಾಗಿಯೇ ಸ್ಥಾಪಿಸಬೇಕೆಂಬ ನಿಯಮ ಏನೂ ಇಲ್ಲ. ಆದ್ದರಿಂದಲೇ ಮಧ್ವರು ಈ ಕೃಷ್ಣನ ಪ್ರತಿಮೆಯನ್ನು ಪಶ್ಚಿಮಾಭಿಮುಖಿಯಾಗಿ ಸ್ಥಾಪಿಸಿದ್ದಾರೆ". ಮಧ್ವರು ಶ್ರೀಕೃಷ್ಣಪಾದಾಂಬುಜಾರ್ಚಕರಾಗಿ ತಮ್ಮ ಮತ್ತು ತಮ್ಮ ಎಂಟು ಮಂದಿ ಶಿಷ್ಯರು ಮತ್ತು ಅವರ ಪರಂಪರೆಯವರ ನಿತ್ಯಾರ್ಚನೆಗಾಗಿ ಸ್ಥಾಪಿಸಿದ ಮೂರ್ತಿ ಇದು. ಈ ಮೂರ್ತಿ ಮತ್ತು ಅದರ ಅರ್ಚನೆ ಮಠದ ಖಾಸಗಿ ಕ್ರಿಯೆಗಳಾಗಿದ್ದು ಸಾರ್ವಜನಿಕರಿಗೆ ತೆರೆದಿಟ್ಟದ್ದಲ್ಲ.ವಾದಿರಾಜರು, ಪುರಂದರದಾಸರು, ಕನಕದಾಸರು ತ್ರಿವೇಣೀ ಸಂಗಮದಂತೆ. ಅವರು ಮೂರು ಮಂದಿಯೂ ಒಂದೇ ಓರಗೆಯವರು, ಒಂದೇ ಮನಸ್ಸಿನವರು, ಸಮಕಾಲೀನರು, ಪರಸ್ಪರ ಗೌರವಾದರಗಳನ್ನು ಹೊಂದಿದ್ದವರು. ಪ್ರತಿಯೊಬ್ಬರಿಗೂ ಇನ್ನಿಬ್ಬರ ಪ್ರೌಢಿಮೆ ಔನ್ನತ್ಯಗಳ ಅರಿವಿ ತ್ತು. ೧೨೦ ವರ್ಷಗಳ ಕಾಲ ಬದುಕಿದ್ದ ವಾದಿರಾಜ(೧೪೮೦-೧೬೦೦)ರಿಗೆ ತಮ್ಮ ಮಠದಲ್ಲಿ ಸರ್ವಾಂಗೀಣ ಸುಧಾರಣೆ ತರುವ ತವಕ ಇತ್ತಾದರೂ ಅಲ್ಲಿ ಭದ್ರವಾಗಿ ಬೇರೂರಿದ್ದ ಮಡಿವಂತಿಕೆಯನ್ನು ಹೋಗಲಾಡಿಸಲು ಅವರಿಂದಾಗಿರಲಿಲ್ಲ. ವಾದಿರಾಜರೊಂದಿಗೆ ತಮಗಿದ್ದ ಸ್ನೇಹವನ್ನು ದುರುಪಯೋಗ ಪಡಿಸಿಕೊಂಡು ಮಠದಲ್ಲಿ ಪ್ರವೇಶ ಪಡೆಯುವ ಧಾರ್ಷ್ಟ್ಯವೂ ಕನಕರಿಗಿರಲಿಲ್ಲ.ಹೀಗೆ ಕನಕದಾಸರ ಸಾಹಿತ್ಯಕೃತಿಗಳು, ಅವರ ಬಗೆಗಿನ ಐತಿಹ್ಯಗಳು, ಅವರ ಕುರಿತು ಇತರೇ ಸಾಹಿತ್ಯಗಳಲ್ಲಿ ಅಥವಾ ಶಾಸನಗಳಲ್ಲಿನ ಮಾಹಿತಿಗಳನ್ನು ಕ್ರೋಢೀಕರಿಸಿ ಕನಕದಾಸರ ಸ್ಥೂಲ ಜೀವನ ಚಿತ್ರಣವನ್ನು ರಚಿಸಬಹುದಲ್ಲದೆ ಪರಿಪೂರ್ಣ ಜೀವನಚರಿತ್ರೆಯ ನಿರೂಪಣೆ ಸಾಧ್ಯವಿಲ್ಲದ ಮಾತು. ಆದರೆ ವಿದ್ವತ್ ನೆಲೆಯಲ್ಲಿ ವಿದ್ವತ್ಸಂಪನ್ನ ಕನಕದಾಸರು ಕುಲಾತೀತರಾಗಿ ಕಾಲಾತೀತರಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಅದ್ವೀತಿಯ ಸ್ಥಾನಗಳಿಸಿ, ಚಿರಸ್ಮರಣೀಯರಾಗಿದ್ದಾರೆ.
ಸಾಹಿತ್ಯ ರಚನೆ
ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ. ಅವರ ಐದು ಮುಖ್ಯ ಕಾವ್ಯಕೃತಿಗಳು ಇಂತಿವೆ:
ಮೋಹನತರಂಗಿಣಿನಳಚರಿತ್ರೆರಾಮಧಾನ್ಯ ಚರಿತೆಹರಿಭಕ್ತಿಸಾರನೃಸಿಂಹಸ್ತವ (ಉಪಲಬ್ದವಿಲ್ಲ)
ಮೋಹನತರಂಗಿಣಿ
ಮೋಹನತರಂಗಿಣಿಯು 42 ಸಂಧಿಗಳಿಂದ ಕೂಡಿದ್ದು ಸಾಂಗತ್ಯದಲ್ಲಿ ರಚಿತವಾಗಿರುವ 2700 ಪದ್ಯಗಳಿವೆ. ಮೋಹನತರಂಗಿಣಿಯಲ್ಲಿ ಕನಕದಾಸರು ಕೃಷ್ಣಚರಿತ್ರೆಯನ್ನು ಹೇಳುತ್ತಾ ತಮ್ಮ ಅಧಿರಾಜ ಕೃಷ್ಣದೇವರಾಯನನ್ನೇ ಕೃಷ್ಣನಿಗೆ ಹೋಲಿಸುತ್ತಾರೆ. ಅವರ ದ್ವಾರಕಾಪುರಿ ಸ್ವಯಂ ವಿಜಯನಗರವೇ ಆಗಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಮೋಹನತರಂಗಿಣಿ ಅಥವಾ ಕೃಷ್ಣಚರಿತೆ ಎಂಬ ಈ ಕಾವ್ಯದಲ್ಲಿ ಕನಕದಾಸರ ಸಮಕಾಲೀನ ಜೀವನ ಚಿತ್ರಗಳು ಹಾಗೂ ಪೌರಾಣಿಕ ಕಥೆಗಳು ಅಚ್ಚಗನ್ನಡದಲ್ಲಿ ನಿರೂಪಿತವಾಗಿವೆ. ದಣ್ಣಾಯಕನಾಗಿ ಕನಕ ಆಗಾಗ್ಗೆ ರಾಜಧಾನಿ ವಿಜಯನಗರಕ್ಕೆ ಹೋಗಬೇಕಾಗಿತ್ತು. ವಿಜಯನಗರ ಸಾಮ್ರಾಜ್ಯದ ರಾಜವೈಭವ, ರಾಜಸಭೆ, ರಾಜಪರಿವಾರದ ಸರಸ ಸುಮ್ಮಾನ, ಶೃಂಗಾರ ಜೀವನ, ಜಲಕ್ರೀಡೆ, ಓಕುಳಿಯಾಟ, ನವರಾತ್ರಿ, ವಿಜಯನಗರದ ಪುರರಚನೆ, ಉದ್ಯಾನವನ, ಪ್ರಜೆಗಳ ವೇಷಭೂಷಣ, ರಾಜ್ಯದ ಯುದ್ಧ ವಿಧಾನ ಇತ್ಯಾದಿಗಳು ಅವನ ಮನಸೂರೆಗೊಂಡಿದ್ದವು. ಕವಿ ಮನಸಿನ ಕನಕ ತನ್ನ ಅನುಭವವನ್ನೆಲ್ಲ ಬರಹ ರೂಪಕ್ಕೆ ತಂದ. ಆ ಬರಹವೇ ಇಂದು ನಮಗೆ ಲಭ್ಯವಿರುವ ಮೋಹನತರಂಗಿಣಿ. ಕನಕನ ಯೌವನ ಕಾಲದಲ್ಲಿ ರಚಿತವಾದ ತರಂಗಿಣಿಯ ಒಡಲಲ್ಲಿ ಯುದ್ಧದ ವರ್ಣನೆಗಳು ಹೆಚ್ಚೆನ್ನಬಹುದು. ಏಕೆಂದರೆ ಕನಕ ಸ್ವತಃ ಕಲಿಯಾಗಿದ್ದವನೇ ತಾನೇ? ಶಂಬರಾಸುರ ವಧೆ, ಬಾಣಾಸುರ ವಧೆ, ಹರಿಹರ ಯುದ್ಧ ಹೀಗೆ ವೀರರಸ, ರೌದ್ರರಸ ಕಾವ್ಯದಲ್ಲಿ ಮೇಳೈಸಿವೆ.
ಸೋಮಸೂರಿಯ ವೀಥಿಯ ಇಕ್ಕೆಗಳಲಿಹೇಮ ನಿರ್ಮಿತ ಸೌಧದೋಳಿರಮಣೀಯತೆವೆತ್ತ ಕಳಸದಂಗಡಿಯಿರ್ದುಂವಾ ಮಹಾ ದ್ವಾರಕಾಪುರದೇಓರಂತೆ ಮರಕಾಲರು ಹಡಗಿನ ವ್ಯವಹಾರದಿ ಗಳಿಸಿದ ಹಣವಭಾರ ಸಂಖ್ಯೆಯಲಿ ತೂಗುವರು ಬೇಡಿದರೆ ಕುಬೇರಂಗೆ ಕಡವ ಕೊಡುವರು
ಕೀರ್ತನೆಗಳು
ಕನಕದಾಸರು 316 ಕೀರ್ತನೆಗಳನ್ನು ರಚಿಸಿದ್ದಾರೆ. ಕನಕದಾಸರ ಭಕ್ತಿ ಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಶ್ರೀಹರಿಯನ್ನು ತಮ್ಮ ಧಣಿಯಾಗಿ, ಇನಿಯನಾಗಿ, ಅಣೋರಣೀಯನಾಗಿ, ಮಹತೋಮಹೀಮನಾಗಿ ಅವರು ಕಂಡಿದ್ದಾರೆ. 'ಬಾ ರಂಗ ಎನ್ನ ಮನಕೆ ಎಂದು ಹೃದಯ ಸದನಕ್ಕೆ 'ಎಂದು ಕರೆದು ನೆಲೆ ನಿಲ್ಲಿಸಿಕೊಂಡ ಅನುಭಾವ ಅವರದು. ಒಳಗಣ್ಣಿನಿಂದ ಅವನ ಕಂಡು- 'ಕಂಡೆ ನಾ ತಂಡ ತಂಡ ಹಿಂಡು ದೈವ ಪ್ರಚಂಡ ರಿಪು ಗಂಡ ಉದ್ಧಂಡ ನರಸಿಂಹನ' ಎಂದು ಸಂತೋಷಪಟ್ಟಿದ್ದಾರೆ. 'ಎಲ್ಲಿ ನೋಡಿದರಲ್ಲಿ ರಾಮ' ಎಂಬ ಅನುಭೂತಿಯಲ್ಲಿ ಹರಿಯನ್ನು ಕಂಡ ಬಳಿಕ 'ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು' ಎಂಬ ಧನ್ಯತಾಭಾವ. 'ದಾಸದಾಸರ ಮನೆಯ ದಾಸಿಯರ ಮಗ ಮಂಕುದಾಸ ಮರುಳುದಾಸ ನರಜನ್ಮಹುಳು ಪರಮಪಾಪಿ' ಎಂದು ಕರೆದುಕೊಂಡಿದ್ದ ಅವರು ಜೀವ ಮಾಗಿ ಹಣ್ಣಾದಂತೆ ಪರಮಾತ್ಮನ ಸಾಕ್ಷಾತ್ಕಾರವಾದಂತೆ 'ಆತನೊಲಿದ ಮೇಲೆ ಇನ್ಯಾತರ ಕುಲವಯ್ಯಾ' ಎಂದುಕೊಳ್ಳುತ್ತಾರೆ.
ಜೈನ, ವೀರಶೈವರ ಕಿತ್ತಾಟ, ಮುಸಲ್ಮಾನ ಪ್ರಾಬಲ್ಯ ಇವುಗಳಿಂದ ಸೊರಗಿ ಹೋಗಿದ್ದ ವೈದಿಕ ಧರ್ಮಕ್ಕೆ ಪುನಶ್ಚೇತನ ನೀಡಲು ವ್ಯಾಸರಾಯರಂಥವರು ಶ್ರಮಿಸುತ್ತಿದ್ದ ಕಾಲವದು. ವೈದಿಕ ಸಂಸ್ಕೃತಿಯ ಉತ್ಥಾನಕ್ಕೆಂದು ಹುಟ್ಟು ಹಾಕಲಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಅಳಿವಿನ ನಂತರ ಪತನದ ಹಾದಿ ಹಿಡಿದಿತ್ತು. ಇಂಥಲ್ಲಿ ಕನಕದಾಸರಂಥವರ ಕಾವ್ಯಕೃಷಿ ಹಾಗೂ ಸಾರ್ವಜನಿಕ ಜೀವನ ವ್ಯಾಸರಾಯರಿಗೆ ಬೆಂಬಲದ ಶ್ರೀರಕ್ಷೆಯಾಗಿದ್ದವು.
'ನಾವು ಕುರುಬರು ನಮ್ಮ ದೇವರು ಬೀರಯ್ಯ ಕಾವ ನಮ್ಮಜ್ಜ ನರಕುರಿ ಹಿಂಡುಗಳ' ಎಂದು ವಿನೀತ ಜಾತಿ ಭಾವನೆ ತೋರಿದ್ದ ಕನಕದಾಸರು ವ್ಯಾಸರಾಯರ ಸಂಪರ್ಕದ ನಂತರ 'ಕುಲಕುಲಕುಲವೆಂದು ಹೊಡೆದಾಡದಿರಿ' ಎಂದು ಜಂಕಿಸಿ ಕೇಳುವ ಹಾಗಾದರು.
ಇಂಥ ನಡವಳಿಕೆಗಳಿಂದ ವೈದಿಕ ಧರ್ಮದ ಗುತ್ತಿಗೆ ತಮ್ಮದು ಎಂದು ಭಾವಿಸಿದ್ದ ಬ್ರಾಹ್ಮಣರಿಗೆ ಕನಕದಾಸರು ಬಿಸಿ ತುಪ್ಪವಾದರು. ಹಿಂದೂ ಸಮಾಜದಲ್ಲಿ ಈ ಬ್ರಾಹ್ಮಣಬ್ರಾಹ್ಮಣೇತರ ಕಂದರ/ಕ ದೊಡ್ಡದಾಗುತ್ತಾ ಹೋದಂತೆ ವ್ಯಾಸಪೀಠದ ಜೊತೆಗೆ ದಾಸಕೂಟದ ರಚನೆಯೂ ಆಗಬೇಕಾದಂತಹ ಅನಿವಾರ್ಯತೆ ಮೂಡಿತು. ಉಚ್ಚಕುಲದ ಮಾಧ್ವ ಬ್ರಾಹ್ಮಣರು ಶಾಸ್ತ್ರಾಧ್ಯಯನ-ತರ್ಕ-ವ್ಯಾಕರಣಾದಿ ವಿಶಿಷ್ಟ ಜ್ಞಾನಸಂಪನ್ನರಾಗಿ ಶಬ್ದ ಶಬ್ದಗಳನ್ನು ತಿಕ್ಕಿ ತೀಡಿ ನಿಷ್ಪತ್ತಿ ಹಿಡಿದು ಸಿದ್ಧಾಂತ ಪ್ರಮೇಯಗಳನ್ನು ಮಂಡಿಸುವುದೇ ಮುಂತಾದ ಪ್ರಕ್ರಿಯೆಗಳನ್ನು ವ್ಯಾಸಪೀಠದಲ್ಲಿ ನಡೆಯಿಸುತ್ತಿದ್ದರು. ಪುರಂದರದಾಸ, ಕನಕದಾಸ, ಜಗನ್ನಾಥದಾಸ ಮೊದಲಾದವರ ಪ್ರಾತಿನಿಧಿಕ ಸಂಘಟನೆಯೇ ದಾಸಕೂಟ. ಇವರೂ ಮಾಧ್ವ ಮತ ಪ್ರಮೇಯಗಳನ್ನೇ ಪಸರಿಸುತ್ತಾ ಆಚರಿಸುತ್ತಿದ್ದರಾದರೂ ಅವುಗಳನ್ನು ಅರಿಯಲು ಸಂಸ್ಕೃತ ಜ್ಞಾನದ ಅನಿವಾರ್ಯತೆಯನ್ನು ನಿರಾಕರಿಸಿ, ಜಾತಿ ಮತಗಳ ಕಟ್ಟು ಪಾಡಿಲ್ಲದ ಇವರು ಶಾಸ್ತ್ರಾಧ್ಯಯನದ ಅನಿವಾರ್ಯತೆ ಇಲ್ಲದೆ ತಮ್ಮ ಅನುಭಾವದಿಂದ ಹೊರಹೊಮ್ಮುವ ಭಕ್ತಿಭಾವನೆಗಳನ್ನು ತಮ್ಮ ತಾಯ್ನುಡಿಯಲ್ಲಿ ಹಾಡಿ ಲೋಕಪಾವನವನ್ನೂ ಆತ್ಮೋದ್ಧಾರವನ್ನೂ ಮಾಡ ಬೇಕೆನ್ನುವವರು. ಇಂಥಾ ದಾಸಕೂಟವನ್ನು ಹುಟ್ಟುಹಾಕಿ ಪೋಷಿಸಿ ಬೆಳೆಸಿದವರು ವ್ಯಾಸರಾಯರು ಹಾಗೂ ವಾದಿರಾಜರು. ಇಷ್ಟಿದ್ದರೂ ದಾಸಕೂಟ ವ್ಯಾಸಪೀಠಗಳ ನಡುವೆ ಆಗಿಂದಾಗ್ಗೆ ಘರ್ಷಣೆಗಳು ನಡೆದೇ ಇದ್ದವು. ಈ ಕುರಿತು ಕನಕ ಪುರಂದರರ ಕೀರ್ತನೆಗಳೇ ನಮಗೆ ಸೂಚ್ಯವಾಗಿ ಹೇಳುತ್ತವೆ.
ಕುಲಕುಲವೆನ್ನುತಿಹರು ಕುಲವಾವುದು ಸತ್ಯ ಸುಖವುಳ್ಳ ಜನರಿಗೆ .ತೀರ್ಥವನು ಪಿಡಿದವರು ತಿರುನಾಮಧಾರಿಗಳೇಜನ್ಮ ಸಾರ್ಥಕವಿರದವರು ಭಾಗವತರಹುದೇಆವ ಕುಲವಾದರೇನು ಆವನಾದರೇನು ಆತ್ಮಭಾವವರಿತ ಮೇಲೆ .
ಅವರ ಕೀರ್ತನೆಗಳಲ್ಲಿ ಅವರ ಸಂದೇಶ ನೇರ ಮತ್ತು ಖಚಿತ. ಹಾಗೆಯೇ ಅಮೂರ್ತವಾದ ಪ್ರತಿಮಾ ನಿರೂಪಣೆಯಲ್ಲಿ ಪರಿಣತಿ, ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತ ಸಾಹಿತ್ಯಗಳ ಪರಿಚಯವನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು.
ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ
ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊನೀ ದೇಹದೊಳಗೊ, ನಿನ್ನೊಳು ದೇಹವೂಬಯಲು ಆಲಯದೊಳಗೊ, ಆಲಯವು ಬಯಲೊಳಗೊಬಯಲು ಆಲಯವೆರಡು ನಯನದೊಳಗೊನಯನ ಬುದ್ಧಿಯೊಳಗೊ, ಬುದ್ಧಿ ನಯನದೊಳಗೊನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆಸವಿಯು ಸಕ್ಕರೆಯೊಳಗೊ, ಸಕ್ಕರೆಯು ಸವಿಯೊಳಗೊಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊಜಿಹ್ವೆ ಮನಸಿನೊಳಗೊ, ಮನಸು ಜಿಹ್ವೆಯೊಳಗೊಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆಕುಸುಮದೊಳು ಗಂಧವೊ, ಗಂಧದೊಳು ಕುಸುಮವೊಕುಸುಮ ಗಂಧಗಳೆರಡು ಘ್ರಾಣದೊಳಗೊಅಸಮಭವ ಕಾಗಿನೆಲೆಯಾದಿಕೇಶವರಾಯಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೆ
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ
ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ
ಒಡಲು ಹಸಿಯಲು ಅನ್ನವಿಲ್ಲದಲೇ ಇರಬಹುದು
ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು
ಮಡದಿ ಮಕ್ಕಳನೆಲ್ಲಾ ತೊಲಗಿಸಿ ಬಿಡಬಹುದು
ಕಡಲೊಡೆಯ ನಿನ್ನ ಅರೆಘಳಿಗೆ ಬಿಡಲಾಗದು /೧/
ತಾಯಿ ತಂದೆಯ ಬಿಟ್ಟು ತಪವ ಮಾಡಲೂ ಬಹುದು
ದಾಯಾದಿ ಬಂಧುಗಳ ಬಿಡಲೂ ಬಹುದು
ರಾಯ ತಾ ಮುನಿದರೆ ರಾಜ್ಯವನೇ ಬಿಡಬಹುದು
ಕಾಯಜ ಪಿತ ನಿನ್ನ ಅರೆಘಳಿಗೆ ಬಿಡಲಾಗದು /೨/
ಪ್ರಾಣವ ಪರರು ಬೇಡಿದರೆತ್ತಿ ಕೊಡಬಹುದು
ಮಾನದಲಿ ಮನವ ತಗ್ಗಿಸಬಹುದು
ಜಾಣ ನಾಯಕನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣಾ ನಿನ್ನ ಅರೆಘಳಿಗೆ ಬಿಡಲಾಗದು /೩/
ಶ್ರೀ ಕನಕದಾಸರು[ತಿಮ್ಮಪ್ಪನಾಯಕ] (1509-1609) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರು ದಂಡನಾಯಕರಾಗಿದ್ದು ಯುದ್ದವೊಂದರಲ್ಲಿ ಸೋತ ಅವರಿಗೆ ಉಪರತಿ/ವೈರಾಗ್ಯ ಉಂಟಾಗಿ, ಹರಿಭಕ್ತರಾದರಂತೆ.
ಜೀವನ
ಜನನ
ಕನಕದಾಸರು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ 1487ರಲ್ಲಿ ಕುರುಬ ಗೌಡ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು.
ಸಾಧನೆ
ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಯದಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಇವರ ಕೀರ್ತನೆಗಳ ಅಂಕಿತ ಕಾಗಿನೆಲೆಯ ಆದಿಕೇಶವರಾಯ. ===ಕನಕನ ಕಿಂಡಿ
ಅನೇಕರ ನಂಬಿಕೆಯಂತೆ ಉಡುಪಿಯ ದೇವಸ್ಥಾನದಲ್ಲಿ ಅವರಿಗೆ ಪ್ರವೇಶ ದೊರೆಯದೆ ಹೋದಾಗ ದೇವಸ್ಥಾನದ ಹಿಂದೆ ನಿಂತು ಹಾಡತೊಡಗಿದರಂತೆ ("ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ"). ಆಗ ಹಿಂಭಾಗದ ಗೋಡೆ ಒಡೆದು ಕೃಷ್ಣನ ವಿಗ್ರಹ ಹಿಮ್ಮುಖವಾಗಿ ತಿರುಗಿತಂತೆ. (ಈಗಲೂ ಉಡುಪಿ ಕೃಷ್ಣನ ದೇವಸ್ಥಾನದ ಹಿಂದುಗಡೆಯ ಗೋಡೆಯಲ್ಲಿರುವ ಬಿರುಕಿನಲ್ಲಿ ಶ್ರೀಕೃಷ್ಣನ ಕಾಣಬಹುದು. ಇಲ್ಲಿ ಒಂದು ಕಿಟಕಿಯನ್ನು ನಿರ್ಮಿಸಿ ಅದನ್ನು 'ಕನಕನ ಕಿಂಡಿ' ಎಂದು ಕರೆಯಲಾಗಿದೆ).
ಉಡುಪಿಯ ಕನಕನ ಕಿಂಡಿಯ ಬಗ್ಗೆ ಸ್ವತಃ ಕನಕದಾಸರ ಕೃತಿಗಳಲ್ಲಾಗಲೀ ಇತರೆ ಕೃತಿಗಳಲ್ಲಾಗಲೀ ಮಠದ ದಾಖಲೆಗಳಲ್ಲಾಗಲೀ ಚರಿತ್ರೆಯ ಪುಟಗಳಲ್ಲಾಗಲೀ ಶಾಸನಗಳಲ್ಲಾಗಲೀ ಎಲ್ಲಿಯೂ ಪ್ರಸ್ತಾಪವಾಗಿಲ್ಲ.ಇನ್ನು ಉಡುಪಿಯ ಆ ದೇವಾಲಯವಾದರೋ ಆಗಮಾದಿಗಳಲ್ಲಿ ಹೇಳಿರುವ ವಾಸ್ತುವಿನ್ಯಾಸದನ್ವಯ ಕಟ್ಟಿಯೂ ಇಲ್ಲ. ಅಲ್ಲಿ ಬಲಿಕಲ್ಲು, ಧ್ವಜಸ್ತಂಭ, ಅಂತರಾಳ, ಅರ್ಧಮಂಟಪ, ಪ್ರದಕ್ಷಿಣಾಪಥಗಳೂ ಇಲ್ಲ. ಇನ್ನು ಪ್ರಾಣದೇವರ ಪ್ರತಿಷ್ಠಾಪನೆಯೂ ವಿಭಿನ್ನವೇ.ಉಡುಪಿಯ ಶ್ರೀಕೃಷ್ಣ ವಿಗ್ರಹವನ್ನು ಮಧ್ವಾಚಾರ್ಯರು ಕ್ರಿಸ್ತ ಶಕ ೧೨೩೮ (ಶಕವರ್ಷ ೧೧೬೦ ಹೇವಿಳಂಬಿ ಸಂವತ್ಸರ ಮಾಘ ಶುದ್ಧ ತದಿಗೆ) ನೇ ವರ್ಷದಲ್ಲಿ ಪಶ್ಚಿಮಾಭಿಮುಖಿಯಾಗಿ ಪ್ರತಿಷ್ಠೆ ಮಾಡಿದ್ದರಾಗಲೀ ಪೂರ್ವಾಭಿಮುಖವಾಗಿ ಅಲ್ಲ. ತಮಗೆ ಪಶ್ಚಿಮ ಸಮುದ್ರದಿಂದ ಲಭ್ಯವಾದ ಆ ಮೂರ್ತಿಯನ್ನು ಪಶ್ಚಿಮಕ್ಕೇ ಮುಖ ಮಾಡಿ ಪ್ರತಿಷ್ಠಾಪಿಸಿ ಪಶ್ಚಿಮ ಸಮುದ್ರಾಧೀಶ್ವರನನ್ನಾಗಿ ಕರೆದರೆನ್ನುವುದೇ ಸತ್ಯಸ್ಯ ಸತ್ಯ. ಇದಕ್ಕೆ ದಾಖಲೆಯಾಗಿ ಕನಕದಾಸರ ಸಮಕಾಲೀನರಾದ ಸುರೋತ್ತಮ ತೀರ್ಥರ ಹೇಳಿಕೆ.ಅದರ ತಾತ್ಪರ್ಯ ಹೀಗಿದೆ: 'ದೇವತಾ ವಿಗ್ರಹಗಳನ್ನು ಪೂರ್ವಾಭಿಮುಖಿಯಾಗಿಯೇ ಸ್ಥಾಪಿಸಬೇಕೆಂಬ ನಿಯಮ ಏನೂ ಇಲ್ಲ. ಆದ್ದರಿಂದಲೇ ಮಧ್ವರು ಈ ಕೃಷ್ಣನ ಪ್ರತಿಮೆಯನ್ನು ಪಶ್ಚಿಮಾಭಿಮುಖಿಯಾಗಿ ಸ್ಥಾಪಿಸಿದ್ದಾರೆ". ಮಧ್ವರು ಶ್ರೀಕೃಷ್ಣಪಾದಾಂಬುಜಾರ್ಚಕರಾಗಿ ತಮ್ಮ ಮತ್ತು ತಮ್ಮ ಎಂಟು ಮಂದಿ ಶಿಷ್ಯರು ಮತ್ತು ಅವರ ಪರಂಪರೆಯವರ ನಿತ್ಯಾರ್ಚನೆಗಾಗಿ ಸ್ಥಾಪಿಸಿದ ಮೂರ್ತಿ ಇದು. ಈ ಮೂರ್ತಿ ಮತ್ತು ಅದರ ಅರ್ಚನೆ ಮಠದ ಖಾಸಗಿ ಕ್ರಿಯೆಗಳಾಗಿದ್ದು ಸಾರ್ವಜನಿಕರಿಗೆ ತೆರೆದಿಟ್ಟದ್ದಲ್ಲ.ವಾದಿರಾಜರು, ಪುರಂದರದಾಸರು, ಕನಕದಾಸರು ತ್ರಿವೇಣೀ ಸಂಗಮದಂತೆ. ಅವರು ಮೂರು ಮಂದಿಯೂ ಒಂದೇ ಓರಗೆಯವರು, ಒಂದೇ ಮನಸ್ಸಿನವರು, ಸಮಕಾಲೀನರು, ಪರಸ್ಪರ ಗೌರವಾದರಗಳನ್ನು ಹೊಂದಿದ್ದವರು. ಪ್ರತಿಯೊಬ್ಬರಿಗೂ ಇನ್ನಿಬ್ಬರ ಪ್ರೌಢಿಮೆ ಔನ್ನತ್ಯಗಳ ಅರಿವಿ ತ್ತು. ೧೨೦ ವರ್ಷಗಳ ಕಾಲ ಬದುಕಿದ್ದ ವಾದಿರಾಜ(೧೪೮೦-೧೬೦೦)ರಿಗೆ ತಮ್ಮ ಮಠದಲ್ಲಿ ಸರ್ವಾಂಗೀಣ ಸುಧಾರಣೆ ತರುವ ತವಕ ಇತ್ತಾದರೂ ಅಲ್ಲಿ ಭದ್ರವಾಗಿ ಬೇರೂರಿದ್ದ ಮಡಿವಂತಿಕೆಯನ್ನು ಹೋಗಲಾಡಿಸಲು ಅವರಿಂದಾಗಿರಲಿಲ್ಲ. ವಾದಿರಾಜರೊಂದಿಗೆ ತಮಗಿದ್ದ ಸ್ನೇಹವನ್ನು ದುರುಪಯೋಗ ಪಡಿಸಿಕೊಂಡು ಮಠದಲ್ಲಿ ಪ್ರವೇಶ ಪಡೆಯುವ ಧಾರ್ಷ್ಟ್ಯವೂ ಕನಕರಿಗಿರಲಿಲ್ಲ.ಹೀಗೆ ಕನಕದಾಸರ ಸಾಹಿತ್ಯಕೃತಿಗಳು, ಅವರ ಬಗೆಗಿನ ಐತಿಹ್ಯಗಳು, ಅವರ ಕುರಿತು ಇತರೇ ಸಾಹಿತ್ಯಗಳಲ್ಲಿ ಅಥವಾ ಶಾಸನಗಳಲ್ಲಿನ ಮಾಹಿತಿಗಳನ್ನು ಕ್ರೋಢೀಕರಿಸಿ ಕನಕದಾಸರ ಸ್ಥೂಲ ಜೀವನ ಚಿತ್ರಣವನ್ನು ರಚಿಸಬಹುದಲ್ಲದೆ ಪರಿಪೂರ್ಣ ಜೀವನಚರಿತ್ರೆಯ ನಿರೂಪಣೆ ಸಾಧ್ಯವಿಲ್ಲದ ಮಾತು. ಆದರೆ ವಿದ್ವತ್ ನೆಲೆಯಲ್ಲಿ ವಿದ್ವತ್ಸಂಪನ್ನ ಕನಕದಾಸರು ಕುಲಾತೀತರಾಗಿ ಕಾಲಾತೀತರಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಅದ್ವೀತಿಯ ಸ್ಥಾನಗಳಿಸಿ, ಚಿರಸ್ಮರಣೀಯರಾಗಿದ್ದಾರೆ.
ಸಾಹಿತ್ಯ ರಚನೆ
ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ. ಅವರ ಐದು ಮುಖ್ಯ ಕಾವ್ಯಕೃತಿಗಳು ಇಂತಿವೆ:
ಮೋಹನತರಂಗಿಣಿನಳಚರಿತ್ರೆರಾಮಧಾನ್ಯ ಚರಿತೆಹರಿಭಕ್ತಿಸಾರನೃಸಿಂಹಸ್ತವ (ಉಪಲಬ್ದವಿಲ್ಲ)
ಮೋಹನತರಂಗಿಣಿ
ಮೋಹನತರಂಗಿಣಿಯು 42 ಸಂಧಿಗಳಿಂದ ಕೂಡಿದ್ದು ಸಾಂಗತ್ಯದಲ್ಲಿ ರಚಿತವಾಗಿರುವ 2700 ಪದ್ಯಗಳಿವೆ. ಮೋಹನತರಂಗಿಣಿಯಲ್ಲಿ ಕನಕದಾಸರು ಕೃಷ್ಣಚರಿತ್ರೆಯನ್ನು ಹೇಳುತ್ತಾ ತಮ್ಮ ಅಧಿರಾಜ ಕೃಷ್ಣದೇವರಾಯನನ್ನೇ ಕೃಷ್ಣನಿಗೆ ಹೋಲಿಸುತ್ತಾರೆ. ಅವರ ದ್ವಾರಕಾಪುರಿ ಸ್ವಯಂ ವಿಜಯನಗರವೇ ಆಗಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಮೋಹನತರಂಗಿಣಿ ಅಥವಾ ಕೃಷ್ಣಚರಿತೆ ಎಂಬ ಈ ಕಾವ್ಯದಲ್ಲಿ ಕನಕದಾಸರ ಸಮಕಾಲೀನ ಜೀವನ ಚಿತ್ರಗಳು ಹಾಗೂ ಪೌರಾಣಿಕ ಕಥೆಗಳು ಅಚ್ಚಗನ್ನಡದಲ್ಲಿ ನಿರೂಪಿತವಾಗಿವೆ. ದಣ್ಣಾಯಕನಾಗಿ ಕನಕ ಆಗಾಗ್ಗೆ ರಾಜಧಾನಿ ವಿಜಯನಗರಕ್ಕೆ ಹೋಗಬೇಕಾಗಿತ್ತು. ವಿಜಯನಗರ ಸಾಮ್ರಾಜ್ಯದ ರಾಜವೈಭವ, ರಾಜಸಭೆ, ರಾಜಪರಿವಾರದ ಸರಸ ಸುಮ್ಮಾನ, ಶೃಂಗಾರ ಜೀವನ, ಜಲಕ್ರೀಡೆ, ಓಕುಳಿಯಾಟ, ನವರಾತ್ರಿ, ವಿಜಯನಗರದ ಪುರರಚನೆ, ಉದ್ಯಾನವನ, ಪ್ರಜೆಗಳ ವೇಷಭೂಷಣ, ರಾಜ್ಯದ ಯುದ್ಧ ವಿಧಾನ ಇತ್ಯಾದಿಗಳು ಅವನ ಮನಸೂರೆಗೊಂಡಿದ್ದವು. ಕವಿ ಮನಸಿನ ಕನಕ ತನ್ನ ಅನುಭವವನ್ನೆಲ್ಲ ಬರಹ ರೂಪಕ್ಕೆ ತಂದ. ಆ ಬರಹವೇ ಇಂದು ನಮಗೆ ಲಭ್ಯವಿರುವ ಮೋಹನತರಂಗಿಣಿ. ಕನಕನ ಯೌವನ ಕಾಲದಲ್ಲಿ ರಚಿತವಾದ ತರಂಗಿಣಿಯ ಒಡಲಲ್ಲಿ ಯುದ್ಧದ ವರ್ಣನೆಗಳು ಹೆಚ್ಚೆನ್ನಬಹುದು. ಏಕೆಂದರೆ ಕನಕ ಸ್ವತಃ ಕಲಿಯಾಗಿದ್ದವನೇ ತಾನೇ? ಶಂಬರಾಸುರ ವಧೆ, ಬಾಣಾಸುರ ವಧೆ, ಹರಿಹರ ಯುದ್ಧ ಹೀಗೆ ವೀರರಸ, ರೌದ್ರರಸ ಕಾವ್ಯದಲ್ಲಿ ಮೇಳೈಸಿವೆ.
ಸೋಮಸೂರಿಯ ವೀಥಿಯ ಇಕ್ಕೆಗಳಲಿಹೇಮ ನಿರ್ಮಿತ ಸೌಧದೋಳಿರಮಣೀಯತೆವೆತ್ತ ಕಳಸದಂಗಡಿಯಿರ್ದುಂವಾ ಮಹಾ ದ್ವಾರಕಾಪುರದೇಓರಂತೆ ಮರಕಾಲರು ಹಡಗಿನ ವ್ಯವಹಾರದಿ ಗಳಿಸಿದ ಹಣವಭಾರ ಸಂಖ್ಯೆಯಲಿ ತೂಗುವರು ಬೇಡಿದರೆ ಕುಬೇರಂಗೆ ಕಡವ ಕೊಡುವರು
ಕೀರ್ತನೆಗಳು
ಕನಕದಾಸರು 316 ಕೀರ್ತನೆಗಳನ್ನು ರಚಿಸಿದ್ದಾರೆ. ಕನಕದಾಸರ ಭಕ್ತಿ ಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಶ್ರೀಹರಿಯನ್ನು ತಮ್ಮ ಧಣಿಯಾಗಿ, ಇನಿಯನಾಗಿ, ಅಣೋರಣೀಯನಾಗಿ, ಮಹತೋಮಹೀಮನಾಗಿ ಅವರು ಕಂಡಿದ್ದಾರೆ. 'ಬಾ ರಂಗ ಎನ್ನ ಮನಕೆ ಎಂದು ಹೃದಯ ಸದನಕ್ಕೆ 'ಎಂದು ಕರೆದು ನೆಲೆ ನಿಲ್ಲಿಸಿಕೊಂಡ ಅನುಭಾವ ಅವರದು. ಒಳಗಣ್ಣಿನಿಂದ ಅವನ ಕಂಡು- 'ಕಂಡೆ ನಾ ತಂಡ ತಂಡ ಹಿಂಡು ದೈವ ಪ್ರಚಂಡ ರಿಪು ಗಂಡ ಉದ್ಧಂಡ ನರಸಿಂಹನ' ಎಂದು ಸಂತೋಷಪಟ್ಟಿದ್ದಾರೆ. 'ಎಲ್ಲಿ ನೋಡಿದರಲ್ಲಿ ರಾಮ' ಎಂಬ ಅನುಭೂತಿಯಲ್ಲಿ ಹರಿಯನ್ನು ಕಂಡ ಬಳಿಕ 'ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು' ಎಂಬ ಧನ್ಯತಾಭಾವ. 'ದಾಸದಾಸರ ಮನೆಯ ದಾಸಿಯರ ಮಗ ಮಂಕುದಾಸ ಮರುಳುದಾಸ ನರಜನ್ಮಹುಳು ಪರಮಪಾಪಿ' ಎಂದು ಕರೆದುಕೊಂಡಿದ್ದ ಅವರು ಜೀವ ಮಾಗಿ ಹಣ್ಣಾದಂತೆ ಪರಮಾತ್ಮನ ಸಾಕ್ಷಾತ್ಕಾರವಾದಂತೆ 'ಆತನೊಲಿದ ಮೇಲೆ ಇನ್ಯಾತರ ಕುಲವಯ್ಯಾ' ಎಂದುಕೊಳ್ಳುತ್ತಾರೆ.
ಜೈನ, ವೀರಶೈವರ ಕಿತ್ತಾಟ, ಮುಸಲ್ಮಾನ ಪ್ರಾಬಲ್ಯ ಇವುಗಳಿಂದ ಸೊರಗಿ ಹೋಗಿದ್ದ ವೈದಿಕ ಧರ್ಮಕ್ಕೆ ಪುನಶ್ಚೇತನ ನೀಡಲು ವ್ಯಾಸರಾಯರಂಥವರು ಶ್ರಮಿಸುತ್ತಿದ್ದ ಕಾಲವದು. ವೈದಿಕ ಸಂಸ್ಕೃತಿಯ ಉತ್ಥಾನಕ್ಕೆಂದು ಹುಟ್ಟು ಹಾಕಲಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಅಳಿವಿನ ನಂತರ ಪತನದ ಹಾದಿ ಹಿಡಿದಿತ್ತು. ಇಂಥಲ್ಲಿ ಕನಕದಾಸರಂಥವರ ಕಾವ್ಯಕೃಷಿ ಹಾಗೂ ಸಾರ್ವಜನಿಕ ಜೀವನ ವ್ಯಾಸರಾಯರಿಗೆ ಬೆಂಬಲದ ಶ್ರೀರಕ್ಷೆಯಾಗಿದ್ದವು.
'ನಾವು ಕುರುಬರು ನಮ್ಮ ದೇವರು ಬೀರಯ್ಯ ಕಾವ ನಮ್ಮಜ್ಜ ನರಕುರಿ ಹಿಂಡುಗಳ' ಎಂದು ವಿನೀತ ಜಾತಿ ಭಾವನೆ ತೋರಿದ್ದ ಕನಕದಾಸರು ವ್ಯಾಸರಾಯರ ಸಂಪರ್ಕದ ನಂತರ 'ಕುಲಕುಲಕುಲವೆಂದು ಹೊಡೆದಾಡದಿರಿ' ಎಂದು ಜಂಕಿಸಿ ಕೇಳುವ ಹಾಗಾದರು.
ಇಂಥ ನಡವಳಿಕೆಗಳಿಂದ ವೈದಿಕ ಧರ್ಮದ ಗುತ್ತಿಗೆ ತಮ್ಮದು ಎಂದು ಭಾವಿಸಿದ್ದ ಬ್ರಾಹ್ಮಣರಿಗೆ ಕನಕದಾಸರು ಬಿಸಿ ತುಪ್ಪವಾದರು. ಹಿಂದೂ ಸಮಾಜದಲ್ಲಿ ಈ ಬ್ರಾಹ್ಮಣಬ್ರಾಹ್ಮಣೇತರ ಕಂದರ/ಕ ದೊಡ್ಡದಾಗುತ್ತಾ ಹೋದಂತೆ ವ್ಯಾಸಪೀಠದ ಜೊತೆಗೆ ದಾಸಕೂಟದ ರಚನೆಯೂ ಆಗಬೇಕಾದಂತಹ ಅನಿವಾರ್ಯತೆ ಮೂಡಿತು. ಉಚ್ಚಕುಲದ ಮಾಧ್ವ ಬ್ರಾಹ್ಮಣರು ಶಾಸ್ತ್ರಾಧ್ಯಯನ-ತರ್ಕ-ವ್ಯಾಕರಣಾದಿ ವಿಶಿಷ್ಟ ಜ್ಞಾನಸಂಪನ್ನರಾಗಿ ಶಬ್ದ ಶಬ್ದಗಳನ್ನು ತಿಕ್ಕಿ ತೀಡಿ ನಿಷ್ಪತ್ತಿ ಹಿಡಿದು ಸಿದ್ಧಾಂತ ಪ್ರಮೇಯಗಳನ್ನು ಮಂಡಿಸುವುದೇ ಮುಂತಾದ ಪ್ರಕ್ರಿಯೆಗಳನ್ನು ವ್ಯಾಸಪೀಠದಲ್ಲಿ ನಡೆಯಿಸುತ್ತಿದ್ದರು. ಪುರಂದರದಾಸ, ಕನಕದಾಸ, ಜಗನ್ನಾಥದಾಸ ಮೊದಲಾದವರ ಪ್ರಾತಿನಿಧಿಕ ಸಂಘಟನೆಯೇ ದಾಸಕೂಟ. ಇವರೂ ಮಾಧ್ವ ಮತ ಪ್ರಮೇಯಗಳನ್ನೇ ಪಸರಿಸುತ್ತಾ ಆಚರಿಸುತ್ತಿದ್ದರಾದರೂ ಅವುಗಳನ್ನು ಅರಿಯಲು ಸಂಸ್ಕೃತ ಜ್ಞಾನದ ಅನಿವಾರ್ಯತೆಯನ್ನು ನಿರಾಕರಿಸಿ, ಜಾತಿ ಮತಗಳ ಕಟ್ಟು ಪಾಡಿಲ್ಲದ ಇವರು ಶಾಸ್ತ್ರಾಧ್ಯಯನದ ಅನಿವಾರ್ಯತೆ ಇಲ್ಲದೆ ತಮ್ಮ ಅನುಭಾವದಿಂದ ಹೊರಹೊಮ್ಮುವ ಭಕ್ತಿಭಾವನೆಗಳನ್ನು ತಮ್ಮ ತಾಯ್ನುಡಿಯಲ್ಲಿ ಹಾಡಿ ಲೋಕಪಾವನವನ್ನೂ ಆತ್ಮೋದ್ಧಾರವನ್ನೂ ಮಾಡ ಬೇಕೆನ್ನುವವರು. ಇಂಥಾ ದಾಸಕೂಟವನ್ನು ಹುಟ್ಟುಹಾಕಿ ಪೋಷಿಸಿ ಬೆಳೆಸಿದವರು ವ್ಯಾಸರಾಯರು ಹಾಗೂ ವಾದಿರಾಜರು. ಇಷ್ಟಿದ್ದರೂ ದಾಸಕೂಟ ವ್ಯಾಸಪೀಠಗಳ ನಡುವೆ ಆಗಿಂದಾಗ್ಗೆ ಘರ್ಷಣೆಗಳು ನಡೆದೇ ಇದ್ದವು. ಈ ಕುರಿತು ಕನಕ ಪುರಂದರರ ಕೀರ್ತನೆಗಳೇ ನಮಗೆ ಸೂಚ್ಯವಾಗಿ ಹೇಳುತ್ತವೆ.
ಕುಲಕುಲವೆನ್ನುತಿಹರು ಕುಲವಾವುದು ಸತ್ಯ ಸುಖವುಳ್ಳ ಜನರಿಗೆ .ತೀರ್ಥವನು ಪಿಡಿದವರು ತಿರುನಾಮಧಾರಿಗಳೇಜನ್ಮ ಸಾರ್ಥಕವಿರದವರು ಭಾಗವತರಹುದೇಆವ ಕುಲವಾದರೇನು ಆವನಾದರೇನು ಆತ್ಮಭಾವವರಿತ ಮೇಲೆ .
ಅವರ ಕೀರ್ತನೆಗಳಲ್ಲಿ ಅವರ ಸಂದೇಶ ನೇರ ಮತ್ತು ಖಚಿತ. ಹಾಗೆಯೇ ಅಮೂರ್ತವಾದ ಪ್ರತಿಮಾ ನಿರೂಪಣೆಯಲ್ಲಿ ಪರಿಣತಿ, ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತ ಸಾಹಿತ್ಯಗಳ ಪರಿಚಯವನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು.
ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ
ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊನೀ ದೇಹದೊಳಗೊ, ನಿನ್ನೊಳು ದೇಹವೂಬಯಲು ಆಲಯದೊಳಗೊ, ಆಲಯವು ಬಯಲೊಳಗೊಬಯಲು ಆಲಯವೆರಡು ನಯನದೊಳಗೊನಯನ ಬುದ್ಧಿಯೊಳಗೊ, ಬುದ್ಧಿ ನಯನದೊಳಗೊನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆಸವಿಯು ಸಕ್ಕರೆಯೊಳಗೊ, ಸಕ್ಕರೆಯು ಸವಿಯೊಳಗೊಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊಜಿಹ್ವೆ ಮನಸಿನೊಳಗೊ, ಮನಸು ಜಿಹ್ವೆಯೊಳಗೊಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆಕುಸುಮದೊಳು ಗಂಧವೊ, ಗಂಧದೊಳು ಕುಸುಮವೊಕುಸುಮ ಗಂಧಗಳೆರಡು ಘ್ರಾಣದೊಳಗೊಅಸಮಭವ ಕಾಗಿನೆಲೆಯಾದಿಕೇಶವರಾಯಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೆ
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ
ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ
ಒಡಲು ಹಸಿಯಲು ಅನ್ನವಿಲ್ಲದಲೇ ಇರಬಹುದು
ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು
ಮಡದಿ ಮಕ್ಕಳನೆಲ್ಲಾ ತೊಲಗಿಸಿ ಬಿಡಬಹುದು
ಕಡಲೊಡೆಯ ನಿನ್ನ ಅರೆಘಳಿಗೆ ಬಿಡಲಾಗದು /೧/
ತಾಯಿ ತಂದೆಯ ಬಿಟ್ಟು ತಪವ ಮಾಡಲೂ ಬಹುದು
ದಾಯಾದಿ ಬಂಧುಗಳ ಬಿಡಲೂ ಬಹುದು
ರಾಯ ತಾ ಮುನಿದರೆ ರಾಜ್ಯವನೇ ಬಿಡಬಹುದು
ಕಾಯಜ ಪಿತ ನಿನ್ನ ಅರೆಘಳಿಗೆ ಬಿಡಲಾಗದು /೨/
ಪ್ರಾಣವ ಪರರು ಬೇಡಿದರೆತ್ತಿ ಕೊಡಬಹುದು
ಮಾನದಲಿ ಮನವ ತಗ್ಗಿಸಬಹುದು
ಜಾಣ ನಾಯಕನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣಾ ನಿನ್ನ ಅರೆಘಳಿಗೆ ಬಿಡಲಾಗದು /೩/
ರಾಷ್ಟ್ರೀಯ ಶಿಕ್ಷಣ ದಿನಾಚರಣೆ
*ರಾಷ್ಟ್ರೀಯ ಶಿಕ್ಷಣ ದಿನಾಚರಣೆ* ೧೧-೧೧-೨೦೧೬
*TeachersTent*
– ಅಬುಲ್ ಕಲಾಂ ಆಜಾದ್ ರ ಜನ್ಮದಿನವನ್ನು ರಾಷ್ಟ್ರಾದ್ಯಂತ ಇಂದು ರಾಷ್ಟ್ರೀಯ ಶಿಕ್ಷಣ ದಿನ ಎಂದು ಆಚರಿಸಲಾಗುತ್ತಿದೆ.
-: *ಮೌಲಾನಾ ಅಬುಲ್ ಕಲಾಂ ಆಝಾದ್ :*-
ಯುವಕ ಆಝಾದ್ರ ಪ್ರತಿಭೆ ಸಾಧನೆಗಳನ್ನು ಗಮನಿಸಿ ಹುಟ್ಟಿದ ದಿನದಂದೇ ಆಝಾದ್ರಿಗೆ ಐವತ್ತು ವರ್ಷ ವಯಸ್ಸು ಆಗಿತ್ತು ಎಂದು ಸರೋಜಿನಿ ನಾಯ್ಡು ಹೇಳಿದ್ದರು. ಆಝಾದ್ರ ಕುಟುಂಬ ಭಾರತೀಯ ಮೂಲದ್ದೇ ಆದರೂ ತಂದೆ ಅರೇಬಿಯಾಕ್ಕೆ ಹೋಗಿ ಅಲ್ಲಿಂದಲೇ ಮದುವೆಯಾದ್ದರಿಂದ ಆಝಾದ್ರ ಹುಟ್ಟು ಅಲ್ಲೇ ಆಯಿತು. ಭಾರತೀಯ ಖೈರುದ್ದೀನ್ ಹಾಗೂ ಅರೇಬಿಯನ್ ಮಹಿಳೆ ಆಲಿಯಾರ ಪುತ್ರನಾಗಿ ೧೮೮೮ರ ನವೆಂಬರ್ ಮೋಹಿದ್ದೀನ್ ಅಹ್ಮದ್ ಮುಂದೆ ಧಾರ್ಮಿಕ ವಿದ್ವತ್ತಿನಿಂದಾಗಿ ’ಮೌಲಾನಾ’ ಎಂಬುದಾಗಿ ಬಹುಭಾಷೆಗಳ ಪರಿಣಿತಿಯಿಂದಾಗಿ ’ಅಬುಲ್ ಕಲಾಂ’ (ಭಾಷೆಗಳ ಪಿತ) ಎಂಬುದಾಗಿ ತೀವ್ರ ಸ್ವಾತಂತ್ರ್ಯ ವಾಂಛೆಯಿಂದ ’ಆಝಾದ್’ ಎಂಬುದು ಸೇರಿಕೊಂಡು ’ಮೌಲಾನಾ ಅಬುಲ್ ಕಲಾಂ ಆಝಾದ್’ ಎಂದು ಖ್ಯಾತಿವೆತ್ತರು.
ಆಝಾದ್ಗೆ ಹತ್ತು ವರ್ಷವಾದಾಗಲೇ ಕುಟುಂಬ ಕಲ್ಕತ್ತೆಗೆ ಬಂತು. ಚಿಕ್ಕಂದಿನಿಂದಲೇ ಧಾರ್ಮಿಕ ಜ್ಞಾನವನ್ನು ಪಡೆದರು. ಅರಬ್ಬೀ, ಉರ್ದು, ಪರ್ಷಿಯನ್, ಇಂಗ್ಲೀಷ್ ಭಾಷೆಗಳನ್ನು ಗಣಿತ, ಸಾಹಿತ್ಯ, ಯುನಾನಿ ವೈದ್ಯ ವಿಜ್ಞಾನಗಳನ್ನು ಕರಗತ ಮಾಡಿಕೊಂಡು ಬಹುಶ್ರುತರಾಗಿದ್ದರು. ಅದ್ಭುತ ಪ್ರತಿಭೆಯಾಗಿ ಬೆಳೆದ ಅವರು ಬರೀ ೧೬ನೇ ವಯಸ್ಸಿನಲ್ಲೇ ಪ್ರಚಂಡ ವಾಗ್ಮಿಯೂ, ಪ್ರಸಿದ್ಧ ಬರಹಗಾರರೂ ಆದರು. ಉರ್ದು ವಿದ್ವಾಂಸರ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ, ಬೇಟಿ ತೆಗೆದು ಸಿಕ್ಕಿದ (ಆಶುಭಾಷಣ/ Piಛಿಞ ಚಿಟಿಜ Sಠಿeeಛಿh) ವಿಷಯದಲ್ಲಿ ಎರಡೂ ಗಂಟೆಗೂ ಹೆಚ್ಚು ಕಾಲ ನಿರರ್ಗಳವಾಗಿ ಮಾತನಾಡಿ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದಾಗಲೂ ’ಲಿಸಾನುಸ್ಸಿದ್ಖ್’ ಬರಹಗಳ ಮೂಲಕ ಬ್ರಿಟೀಷರನ್ನು ನಡುಗಿಸುವಾಗಲೂ ಆಝಾದರ ವಯಸ್ಸು ೧೬ ಮಾತ್ರ !
೧೯೦೮ರಲ್ಲಿ ಅವರ ರಾಜಕೀಯ ವಿಚಾರಧಾರೆ ಕ್ರಾಂತಿಕಾರಿ ಚಟುವಟಿಕೆಗಳ ಕಡೆಗೆ ತಿರುಗಿತು. ಇರಾಕ್, ಸಿರಿಯಾ, ಈಜಿಪ್ಟ, ಮತ್ತು ತುರ್ಕಿ ದೇಶಗಳನ್ನು ಸಂದರ್ಶಿಸಿದರು. ದೇಶದ ರಾಜಕೀಯ ವಿಮೋಚನೆಯಲ್ಲಿ ಮುಸ್ಲಿಮರು ಸಕ್ರೀಯ ಪಾತ್ರ ವಹಿಸಬೇಕು ಎಂಬ ಚಿಂತನೆ ಬಲಗೊಂಡಿತು. ಈ ಚಿಂತನೆಯೇ ಉತ್ಕೃಷ್ಟವಾದ ನವೀನ ಶೈಲಿಯ, ಮನಸೂರೆಗೊಳ್ಳುವಂತಹ ಪತ್ರಿಕೆ ’ಅಲ್-ಹಿಲಾಲ್’ ಪ್ರಕಟಣೆಗೆ ಕಾರಣವಾಯಿತೆಂದು ಡಬ್ಲ್ಯೂ.ಸಿ.ಸ್ಮಿತ್(W.ಅ.Smiಣh) ಹೇಳುತ್ತಾರೆ. ’ಅಲ್-ಹಿಲಾಲ್’ ಇಸ್ಲಾಮಿನ ಬೋಧನೆಗಳನ್ನು ಮತ್ತು ದೇಶದ ಸ್ವಾತಂತ್ರ್ಯವನ್ನು ಏಕಕಾಲದಲ್ಲಿ ಪ್ರಚುರಗೊಳಿಸುತ್ತಿತ್ತು. ಆಝಾದ್ರಿಗೆ ಇವೆರಡರಲ್ಲಿ ಯಾವ ವಿರೋಧಭಾಸವೂ ಕಾಣಲಿಲ್ಲ. ಗುಲಾಮತನ್ದ ವಿರಿದ್ಧ ಹೋರಾಟಕ್ಕೆ ಮತ್ತು ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ’ಕುರ್ಆನ್’ ಆಜ್ಞಾಪಿಸುತ್ತದೆ ಎಂದರು. ಪ್ರಕಟಣೆಯ ಮೂರು ತಿಂಗಳುಗಳಲ್ಲಿಯೇ ಈ ಪತ್ರಿಕೆಯ ಸಂಚಿಕೆಗಳನ್ನು ಪುನಃ ಮುದ್ರಣಗೊಳಿಸಬೇಕಾಯಿತು. ಏಕೆಂದರೆ ಪ್ರತಿ ಹೊಸ ಓದುಗ ಪತ್ರಿಕೆಯ ಎಲ್ಲಾ ಪ್ರತಿಗಳನ್ನು ಓದ ಬಯಸುತ್ತಿದ್ದ. ಪ್ರಕಟಣೆಯ ಎರಡು ವರ್ಷಗಳಲ್ಲಿಯೇ ೨೬೦೦೦ ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗುತ್ತಿದ್ದವು.
೧೯೧೨ರಲ್ಲಿ ಆರಂಭವಾದ ’ಆಲ್-ಲಾಲ್’ ಪತ್ರಿಕೆ ತನ್ನ ಕ್ರಾಂತಿಕಾರಕ ಬರಹಗಳಿಂದ ಬ್ರಿಟೀಷರ ಕೆಂಗೆಣ್ಣಿಗೆ ಗುರಿಯಾಯಿತು. ಸರಕಾರದ ಆದೇಶದ ಮೇರೆಗೆ ಒಮ್ಮೆ ರೂ.೨೦೦೦/- ಮತ್ತೊಮ್ಮೆ ರೂ.೧೦೦೦೦/- ಠೇವಣಿ ಕಟ್ಟಬೇಕಾಯಿತು. ಎರಡೂ ಸಲ ಈ ಮೊತ್ತವನ್ನು ಮುಟ್ಟುಗೋಲು ಹಾಕಲಾಯಿತು. ೧೯೧೪ರಲ್ಲಿ ಪತ್ರಿಕೆ ಮುಚ್ಚಿಹೋಯಿತು. ಪತ್ರಿಕೆ ನಿಷೇಧಿಸಿದಾಗ ಜಗ್ಗದ ಆಝಾದ್ ೧೯೧೫ರಲ್ಲಿ ’ಅಲ್ಬಲಾಗ್’ ಪತ್ರಿಕೆ ಆರಂಭಿಸಿದರು. ಆದರೆ, ’ಡಿಫೆನ್ಸ್ ಆಫ್ ಇಂಡಿಯಾ ರೂಲ್ಸ್’ ಆಡಿಯಲ್ಲಿ ಆಝಾದ್ರನ್ನು ಕಲ್ಕತ್ತಾದಿಂದ ಹೊರಹಾಕಲಾದಾಗ ಈ ಪತ್ರಿಕೆಯನ್ನು ನಿಷೇಧಿಸಲಾಯಿತು. ಜೊತೆಗೆ ಇವರನ್ನು ಬಿಹಾರದ ರಾಂಚಿಯ ಜೈಲಿನಲ್ಲಿ ನಾಲ್ಕು ವರ್ಷಗಳ ಕಾಲ ಬಂಧಿಸಿಡಲಾಯಿತು.
ಗಾಂಧೀಜಿಯವರು ಅಹಿಂಸೆ ಮತ್ತು ಅಸಹಕಾರವನ್ನು ಬ್ರಿಟೀಷರ ವಿರುದ್ಧ ಅಸ್ತ್ರವನ್ನಾಗಿ ಪ್ರಯೋಗಿಸಿದಾಗ, ಆಝಾದ್ ಇದರಿಂದ ಪ್ರಭಾವಿತರಾಗಿ ತಮ್ಮನ್ನು ಗಾಂಧೀಜಿಯವರೊಡನೆ ಗುರುತಿಸಿಕೊಂಡರು. ಹಿಂದೂ-ಮುಸ್ಲಿಂ ಮೈತ್ರಿ ನಿರ್ಮಾಣ ಕಾರ್ಯದಲ್ಲಿ ತೀವ್ರವಾಗಿ ಗಿರಿತಿಸಿಕೊಂಡ ಆಝಾದ್ ತಮ್ಮ ೩೫ನೇ ವಯಸ್ಸಿನಲ್ಲೇ ಪ್ರತಿಷ್ಠಾಪಿತ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷತೆಯನ್ನು ಅಲಂಕರಿಸಿದರು. ಆವೇಶ ಪೂರ್ಣ ಬರಹಗಳು ಮತ್ತು ರೋಮಾಂಚನಕಾರಿ ಭಾಷಣಗಳ ಮೂಲಕ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯನ್ನು, ಕೋಮು ಸೌಹಾರ್ದತೆ, ರಾಷ್ಟ್ರೀಯ ಭಾವೈಕ್ಯತೆಗಳ ಅನಿವಾರ್ಯತೆಯನ್ನು ಜನ-ಮನಸ್ಸುಗಳಿಗೆ ತಲುಪಿಸಿದರು.
೧೯೩೯ರಲ್ಲಿ ಮತ್ತೊಮ್ಮೆ ಕಾಂಗ್ರೆಸ್ಸಿನ ಅಧ್ಯಕ್ಷರಾಗುವ ಮೂಲಕ ಎರಡನೇ ಬಾರಿ ಈ ಘನ ಹುದ್ದೆ ನಿರ್ವಹಿಸಿ ತಮ್ಮ ನಾಯಕತ್ವ ಸಾಮಾರ್ಥ್ಯವನ್ನು ಮೆರೆದ ಆಝಾದ್ ೧೯೩೯-೪೫ರ ನಿರ್ಣಾಯಕ ಅವಧಿಯನ್ನು ಸಮರ್ಥವಾಗಿ ನಿರ್ವಹಿಸಿದರು. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ’ಮೌಲಾನಾ ಅಬುಲ್ ಕಲಾಂ ಆಝಾದ್’ ೧೯೪೨ರ ಆಗಷ್ಟ್ ೯ರ ’ಕ್ವಿಟ್ ಇಂಡಿಯಾ’ (ಬ್ರಿಟೀಷರೇ ಭಾರತ ಬಿಟ್ಟು ತೊಲಗಿ) ಚಳವಳಿಗೆ ನಾಯಕತ್ವ ನೀಡಿ ಅಹ್ಮದ್ನಗರ ಕೋಟೆ ಜೈಲಿನಲ್ಲಿ ಬಂಧಿತರಾದರು. ಆಝಾದರ ಬಿಡುವಿಲ್ಲದ ರಾಜಕೀಯ ಕಾರ್ಯಕ್ರಮಗಳು, ದೀರ್ಘ ಸೆರೆಮನೆವಾಸದ ಕಾರಣಗಳಿಂದ ಅವರ ಪತ್ನಿ ಝಲೇಖ ಬೇಗಂರೊಂದಿಗೆ ಇರಲು ಸಾಧ್ಯವಾಗಲಿಲ್ಲ. ಇವರ ಏಕೈಕ ಮಗು ನಾಲ್ಕನೇಯ ವರ್ಷದಲ್ಲಿಯೇ ನಿಧನ ಹೊಂದಿತ್ತು. ೧೯೪೪ರಲ್ಲಿ ಆಝಾದ್ ಪುನಃ ಜೈಲಿನಲ್ಲಿದ್ದರು. ಅವರ ಪತ್ನಿ ೧೫೦೦ ಕಿ.ಮೀ. ದೂರದಲ್ಲಿದ್ದರು. ’ಗುಆರ್-ಏ-ಖಾತಿರ್’ ಕೃತಿಯಲ್ಲಿ ಆಝಾದ್ ಈ ರೀತಿ ಬರೆದಿದ್ದಾರೆ.
ಮಾರ್ಚ್ ೨೩ ರಂದು ಟೆಲಿಗ್ರಾಮ್ ಮುಖಾಂತರ ಅವಳು ತೀವ್ರ ಅಸ್ವಸ್ಥಳಾಗಿರುವುದು ತಿಳಿಯಿತು. ಪತ್ರಿಕೆಗಳಲ್ಲೂ ಅದೇ ವಿಷಯವಿತ್ತು. ಈ ಸಂಬಂಧ ಸರ್ಕಾರಕ್ಕೆ ಏನಾದರೂ ಮನವಿ ಮಾಡ ಬಯಸಿದ್ದರೆ, ಅದನ್ನು ಬಾಂಬೆಗೆ ಕಳುಹಿಸಿ ಕೊಡುವುದಾಗಿ ಜೇಲ್ ಸೂಪರಿಂಟೆಂಡೆಂಟ್ ತಿಳಿಸಿದರು. ನಾನು ಸರ್ಕಾರಕ್ಕೆ ಯಾವುದೇ ಮನವಿ ಮಾಡುವುದಿಲ್ಲವೆಂದು ಅವನಿಗೆ ದೃಢವಾಗಿ ತಿಳಿಸಿದೆ.
ಕೊನೆಗೂ ನನ್ನ ಕಷ್ಟಗಳ ಬಟ್ಟಲು ತುಂಬಿತು. ಏಪ್ರಿಲ್ ೯ರಂದು ಸೂಪರಿಂಟೆಂಡೆಂಟ್ ದುಃಖದ ವಾರ್ತೆ ಇರುವ ಟಿಲಿಗ್ರಾಮ್ ನನ್ನ ಕೈಗೆ ಕೊಟ್ಟ. ಈ ರೀತಿ ೩೬ವರ್ಷಗಳ ನಮ್ಮ ವೈವಾಹಿಕ ಜೀವನ ಕೊನೆಗೊಂಡಿತು. ನನ್ನ ಆತ್ಮವಿಶ್ವಾಸ ಕೈ ಕೊಡದಿದ್ದರೂ ಕಾಲ ಕೆಳಗಿನ ಭೂಮಿ ಕುಸಿದಂತಾಯಿತು.
“ಆಝಾದ್ರ ದೇಶನಿಷ್ಠೆ ಅವರ ಧರ್ಮನಿಷ್ಠೆಯಷ್ಟೇ ಅಚಲ ಎಂದಿದ್ದರೂ ಗಾಂಧೀಜಿ.” ೧೯೪೭ ಮಾರ್ಚ್ ವೇಳೆಗೆ ಸರ್ದಾರ್ ಮತ್ತು ನೆಹರೂ ದೇಶ ವಿಭಜನೆಯನ್ನು ಒಪ್ಪಿಕೊಂಡಿದ್ದರು. ’ನಾವು ಇಷ್ಟಪಟ್ಟರೂ, ಪಡದಿದ್ದರೂ ಭಾರತದಲ್ಲಿ ಎರಡು ರಾಷ್ಟ್ರಗಳಿವೆ’ ಎಂದು ಪಟೇಲರು ನುಡಿದಾಗ ಆಝಾದ್ ಬಹಳ ನೊಂದುಕೊಂಡಿದ್ದರು. ವಿಭಜನೆಗೆ ನಿಮ್ಮ ವಿರೋದವನ್ನು ತ್ಯಜಿಸಿ ಎಂದು ಕೇಳಿಕೊಂಡಿದ್ದರು. ೩೧ಮಾರ್ಚ್ ಆಝಾದ್ ಗಾಂಧೀಜಿಯನ್ನು ಭೇಟಿಮಾಡಿದರು. ಆಝಾದ್ರ ಹೇಳಿಕೆಯ ಪ್ರಕಾರ, ಗಾಂಧೀಜಿ ಅವರಿಗೆ ಈ ರೀತಿ ಹೇಳಿದರು: “ದೇಶದ ವಿಭಜನೆ ಈಗ ಒಂದು ದೊಡ್ಡ ಬೆದರಿಕೆಯಾಗಿದೆ. ವಲ್ಲಭಭಾಯಿ ಮತ್ತು ನೆಹರೂ ಶರಣಾಗತರಾಗಿದ್ದಾರೆಂದು ಹೇಳಲಾಗುತ್ತಿದೆ. ನೀವು ನನ್ನೊಡನೆ ಇರುವಿರಾ ಅಥವಾ ನೀವೂ ಬದಲಾಗುವಿರಾ?”
ಆಝಾದ್ ಉತ್ತರಿಸಿದರು, “ದೇಶ ವಿಭಜನೆಗೆ ನನ್ನ ವಿರೋಧ ಇಂದು ಇರುವಷ್ಟು ಎಂದೂ ಉಗ್ರವಾಗಿರಲಿಲ್ಲ… ನನ್ನ ಭರವಸೆ ಈಗ ಉಳಿದಿರುವುದು ನಿಮ್ಮಲ್ಲೇ ನೀವೂ ದೇಶ ವಿಭಜನೆಯನ್ನು ಒಪ್ಪಿಕೊಂಡರೆ, ದೇಶ ಕೈ ಬಿಟ್ಟು ಹೋದಂತೆಯೆ.” ಇದಕ್ಕೆ ಗಾಂಧೀಜಿ ಉತ್ತರಿಸಿದರು: “ಎಂತಹ ಪ್ರಶ್ನೆಯನ್ನು ಕೇಳುತಿದ್ದೀರಿ! ಕಾಂಗ್ರೆಸ್ ದೇಶ ವಿಭಜನೆಯನ್ನು ಒಪ್ಪ ಬಯಸಿದರೆ ಅದು ನನ್ನ ಮೃತದೇಹದ ಮೇಲಷ್ಟೇ ಆದರೆ ಕೇವಲ ಎರಡು ತಿಂಗಳ ಅವಧಿಯಲ್ಲಿ ಗಾಂಧೀಜಿ ನಿಲುವನ್ನು ಬದಲಾಯಿಸಿದ್ದರು. ’ ದೇಶ ಇಬ್ಭಾಗವಾಗದೇ ಈಗ ಗತ್ಯಂತರವಿಲ್ಲ’ ಎಂದು ಹೇಳಿ ಆಝಾದ್ರನ್ನು ಸ್ಥಂಬಿಭೂತಗೊಳಿಸಿದ್ದರು.
ಮಲ್ಲಿಕಾರ್ಜುನ ಹುಲಸೂರ
ಸ್ವಾತಂತ್ರ್ಯ ವ್ಯಾಪ್ತಿಯ ಜೊತೆ ದೇಶವಿಭಜನೆಯ ಆಘಾತವೆರಗಿದಾಗ ತಮ್ಮ ನೋವನ್ನು ಕೆಲವು ನಾಯಕರ ಕುರಿತ ಟೀಕೆಯನ್ನು ಆತ್ಮಚರಿತ್ರೆ ’India Wins Freedom’’ ನಲ್ಲಿ ದಾಖಲಿಸಿದ್ದಾರೆ. ಉರ್ದು ಭಾಷೆಯಲ್ಲೂ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ.
ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವರಾಗಿ ಶಾಲಾ ಕಾಲೇಜುಗಳ ಸ್ಥಾಪನೆಯಲ್ಲಿ ತೊಡಗಿಸಿಕೊಂಡ ಅವರು ’ಆಧುನಿಕ ಭಾರತದ ಶಿಕ್ಷಣ ಶಿಲ್ಪಿ’ ಎಂದು ಗುರುತಿಸಲ್ಪಟ್ಟಿದ್ದಾರೆ.
೧೯೫೮ರ ಫೆಬ್ರವರಿ ೨೨ರಂದು ತಮ್ಮ ೭೦ನೇ ಪ್ರಾಯದಲ್ಲಿ ಆಝಾದ್ ಕೊನೆಯುಸಿರೆಳೆದರು. ಆ ಬಳಿಕ ಮೂರುವರೆ ದಶಕ ತಡವಾಗಿಯಾದರೂ ೧೯೯೨ರಲ್ಲಿ ಅವರಿಗೆ ಮರಣೋತ್ತರ ’ಭಾರತರತ್ನ’ ಪ್ರಶಸ್ತಿಯಿತ್ತು ಗೌರವಿಸಲಾಯಿತು.
*TeachersTent*
– ಅಬುಲ್ ಕಲಾಂ ಆಜಾದ್ ರ ಜನ್ಮದಿನವನ್ನು ರಾಷ್ಟ್ರಾದ್ಯಂತ ಇಂದು ರಾಷ್ಟ್ರೀಯ ಶಿಕ್ಷಣ ದಿನ ಎಂದು ಆಚರಿಸಲಾಗುತ್ತಿದೆ.
-: *ಮೌಲಾನಾ ಅಬುಲ್ ಕಲಾಂ ಆಝಾದ್ :*-
ಯುವಕ ಆಝಾದ್ರ ಪ್ರತಿಭೆ ಸಾಧನೆಗಳನ್ನು ಗಮನಿಸಿ ಹುಟ್ಟಿದ ದಿನದಂದೇ ಆಝಾದ್ರಿಗೆ ಐವತ್ತು ವರ್ಷ ವಯಸ್ಸು ಆಗಿತ್ತು ಎಂದು ಸರೋಜಿನಿ ನಾಯ್ಡು ಹೇಳಿದ್ದರು. ಆಝಾದ್ರ ಕುಟುಂಬ ಭಾರತೀಯ ಮೂಲದ್ದೇ ಆದರೂ ತಂದೆ ಅರೇಬಿಯಾಕ್ಕೆ ಹೋಗಿ ಅಲ್ಲಿಂದಲೇ ಮದುವೆಯಾದ್ದರಿಂದ ಆಝಾದ್ರ ಹುಟ್ಟು ಅಲ್ಲೇ ಆಯಿತು. ಭಾರತೀಯ ಖೈರುದ್ದೀನ್ ಹಾಗೂ ಅರೇಬಿಯನ್ ಮಹಿಳೆ ಆಲಿಯಾರ ಪುತ್ರನಾಗಿ ೧೮೮೮ರ ನವೆಂಬರ್ ಮೋಹಿದ್ದೀನ್ ಅಹ್ಮದ್ ಮುಂದೆ ಧಾರ್ಮಿಕ ವಿದ್ವತ್ತಿನಿಂದಾಗಿ ’ಮೌಲಾನಾ’ ಎಂಬುದಾಗಿ ಬಹುಭಾಷೆಗಳ ಪರಿಣಿತಿಯಿಂದಾಗಿ ’ಅಬುಲ್ ಕಲಾಂ’ (ಭಾಷೆಗಳ ಪಿತ) ಎಂಬುದಾಗಿ ತೀವ್ರ ಸ್ವಾತಂತ್ರ್ಯ ವಾಂಛೆಯಿಂದ ’ಆಝಾದ್’ ಎಂಬುದು ಸೇರಿಕೊಂಡು ’ಮೌಲಾನಾ ಅಬುಲ್ ಕಲಾಂ ಆಝಾದ್’ ಎಂದು ಖ್ಯಾತಿವೆತ್ತರು.
ಆಝಾದ್ಗೆ ಹತ್ತು ವರ್ಷವಾದಾಗಲೇ ಕುಟುಂಬ ಕಲ್ಕತ್ತೆಗೆ ಬಂತು. ಚಿಕ್ಕಂದಿನಿಂದಲೇ ಧಾರ್ಮಿಕ ಜ್ಞಾನವನ್ನು ಪಡೆದರು. ಅರಬ್ಬೀ, ಉರ್ದು, ಪರ್ಷಿಯನ್, ಇಂಗ್ಲೀಷ್ ಭಾಷೆಗಳನ್ನು ಗಣಿತ, ಸಾಹಿತ್ಯ, ಯುನಾನಿ ವೈದ್ಯ ವಿಜ್ಞಾನಗಳನ್ನು ಕರಗತ ಮಾಡಿಕೊಂಡು ಬಹುಶ್ರುತರಾಗಿದ್ದರು. ಅದ್ಭುತ ಪ್ರತಿಭೆಯಾಗಿ ಬೆಳೆದ ಅವರು ಬರೀ ೧೬ನೇ ವಯಸ್ಸಿನಲ್ಲೇ ಪ್ರಚಂಡ ವಾಗ್ಮಿಯೂ, ಪ್ರಸಿದ್ಧ ಬರಹಗಾರರೂ ಆದರು. ಉರ್ದು ವಿದ್ವಾಂಸರ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ, ಬೇಟಿ ತೆಗೆದು ಸಿಕ್ಕಿದ (ಆಶುಭಾಷಣ/ Piಛಿಞ ಚಿಟಿಜ Sಠಿeeಛಿh) ವಿಷಯದಲ್ಲಿ ಎರಡೂ ಗಂಟೆಗೂ ಹೆಚ್ಚು ಕಾಲ ನಿರರ್ಗಳವಾಗಿ ಮಾತನಾಡಿ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದಾಗಲೂ ’ಲಿಸಾನುಸ್ಸಿದ್ಖ್’ ಬರಹಗಳ ಮೂಲಕ ಬ್ರಿಟೀಷರನ್ನು ನಡುಗಿಸುವಾಗಲೂ ಆಝಾದರ ವಯಸ್ಸು ೧೬ ಮಾತ್ರ !
೧೯೦೮ರಲ್ಲಿ ಅವರ ರಾಜಕೀಯ ವಿಚಾರಧಾರೆ ಕ್ರಾಂತಿಕಾರಿ ಚಟುವಟಿಕೆಗಳ ಕಡೆಗೆ ತಿರುಗಿತು. ಇರಾಕ್, ಸಿರಿಯಾ, ಈಜಿಪ್ಟ, ಮತ್ತು ತುರ್ಕಿ ದೇಶಗಳನ್ನು ಸಂದರ್ಶಿಸಿದರು. ದೇಶದ ರಾಜಕೀಯ ವಿಮೋಚನೆಯಲ್ಲಿ ಮುಸ್ಲಿಮರು ಸಕ್ರೀಯ ಪಾತ್ರ ವಹಿಸಬೇಕು ಎಂಬ ಚಿಂತನೆ ಬಲಗೊಂಡಿತು. ಈ ಚಿಂತನೆಯೇ ಉತ್ಕೃಷ್ಟವಾದ ನವೀನ ಶೈಲಿಯ, ಮನಸೂರೆಗೊಳ್ಳುವಂತಹ ಪತ್ರಿಕೆ ’ಅಲ್-ಹಿಲಾಲ್’ ಪ್ರಕಟಣೆಗೆ ಕಾರಣವಾಯಿತೆಂದು ಡಬ್ಲ್ಯೂ.ಸಿ.ಸ್ಮಿತ್(W.ಅ.Smiಣh) ಹೇಳುತ್ತಾರೆ. ’ಅಲ್-ಹಿಲಾಲ್’ ಇಸ್ಲಾಮಿನ ಬೋಧನೆಗಳನ್ನು ಮತ್ತು ದೇಶದ ಸ್ವಾತಂತ್ರ್ಯವನ್ನು ಏಕಕಾಲದಲ್ಲಿ ಪ್ರಚುರಗೊಳಿಸುತ್ತಿತ್ತು. ಆಝಾದ್ರಿಗೆ ಇವೆರಡರಲ್ಲಿ ಯಾವ ವಿರೋಧಭಾಸವೂ ಕಾಣಲಿಲ್ಲ. ಗುಲಾಮತನ್ದ ವಿರಿದ್ಧ ಹೋರಾಟಕ್ಕೆ ಮತ್ತು ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ’ಕುರ್ಆನ್’ ಆಜ್ಞಾಪಿಸುತ್ತದೆ ಎಂದರು. ಪ್ರಕಟಣೆಯ ಮೂರು ತಿಂಗಳುಗಳಲ್ಲಿಯೇ ಈ ಪತ್ರಿಕೆಯ ಸಂಚಿಕೆಗಳನ್ನು ಪುನಃ ಮುದ್ರಣಗೊಳಿಸಬೇಕಾಯಿತು. ಏಕೆಂದರೆ ಪ್ರತಿ ಹೊಸ ಓದುಗ ಪತ್ರಿಕೆಯ ಎಲ್ಲಾ ಪ್ರತಿಗಳನ್ನು ಓದ ಬಯಸುತ್ತಿದ್ದ. ಪ್ರಕಟಣೆಯ ಎರಡು ವರ್ಷಗಳಲ್ಲಿಯೇ ೨೬೦೦೦ ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗುತ್ತಿದ್ದವು.
೧೯೧೨ರಲ್ಲಿ ಆರಂಭವಾದ ’ಆಲ್-ಲಾಲ್’ ಪತ್ರಿಕೆ ತನ್ನ ಕ್ರಾಂತಿಕಾರಕ ಬರಹಗಳಿಂದ ಬ್ರಿಟೀಷರ ಕೆಂಗೆಣ್ಣಿಗೆ ಗುರಿಯಾಯಿತು. ಸರಕಾರದ ಆದೇಶದ ಮೇರೆಗೆ ಒಮ್ಮೆ ರೂ.೨೦೦೦/- ಮತ್ತೊಮ್ಮೆ ರೂ.೧೦೦೦೦/- ಠೇವಣಿ ಕಟ್ಟಬೇಕಾಯಿತು. ಎರಡೂ ಸಲ ಈ ಮೊತ್ತವನ್ನು ಮುಟ್ಟುಗೋಲು ಹಾಕಲಾಯಿತು. ೧೯೧೪ರಲ್ಲಿ ಪತ್ರಿಕೆ ಮುಚ್ಚಿಹೋಯಿತು. ಪತ್ರಿಕೆ ನಿಷೇಧಿಸಿದಾಗ ಜಗ್ಗದ ಆಝಾದ್ ೧೯೧೫ರಲ್ಲಿ ’ಅಲ್ಬಲಾಗ್’ ಪತ್ರಿಕೆ ಆರಂಭಿಸಿದರು. ಆದರೆ, ’ಡಿಫೆನ್ಸ್ ಆಫ್ ಇಂಡಿಯಾ ರೂಲ್ಸ್’ ಆಡಿಯಲ್ಲಿ ಆಝಾದ್ರನ್ನು ಕಲ್ಕತ್ತಾದಿಂದ ಹೊರಹಾಕಲಾದಾಗ ಈ ಪತ್ರಿಕೆಯನ್ನು ನಿಷೇಧಿಸಲಾಯಿತು. ಜೊತೆಗೆ ಇವರನ್ನು ಬಿಹಾರದ ರಾಂಚಿಯ ಜೈಲಿನಲ್ಲಿ ನಾಲ್ಕು ವರ್ಷಗಳ ಕಾಲ ಬಂಧಿಸಿಡಲಾಯಿತು.
ಗಾಂಧೀಜಿಯವರು ಅಹಿಂಸೆ ಮತ್ತು ಅಸಹಕಾರವನ್ನು ಬ್ರಿಟೀಷರ ವಿರುದ್ಧ ಅಸ್ತ್ರವನ್ನಾಗಿ ಪ್ರಯೋಗಿಸಿದಾಗ, ಆಝಾದ್ ಇದರಿಂದ ಪ್ರಭಾವಿತರಾಗಿ ತಮ್ಮನ್ನು ಗಾಂಧೀಜಿಯವರೊಡನೆ ಗುರುತಿಸಿಕೊಂಡರು. ಹಿಂದೂ-ಮುಸ್ಲಿಂ ಮೈತ್ರಿ ನಿರ್ಮಾಣ ಕಾರ್ಯದಲ್ಲಿ ತೀವ್ರವಾಗಿ ಗಿರಿತಿಸಿಕೊಂಡ ಆಝಾದ್ ತಮ್ಮ ೩೫ನೇ ವಯಸ್ಸಿನಲ್ಲೇ ಪ್ರತಿಷ್ಠಾಪಿತ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷತೆಯನ್ನು ಅಲಂಕರಿಸಿದರು. ಆವೇಶ ಪೂರ್ಣ ಬರಹಗಳು ಮತ್ತು ರೋಮಾಂಚನಕಾರಿ ಭಾಷಣಗಳ ಮೂಲಕ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯನ್ನು, ಕೋಮು ಸೌಹಾರ್ದತೆ, ರಾಷ್ಟ್ರೀಯ ಭಾವೈಕ್ಯತೆಗಳ ಅನಿವಾರ್ಯತೆಯನ್ನು ಜನ-ಮನಸ್ಸುಗಳಿಗೆ ತಲುಪಿಸಿದರು.
೧೯೩೯ರಲ್ಲಿ ಮತ್ತೊಮ್ಮೆ ಕಾಂಗ್ರೆಸ್ಸಿನ ಅಧ್ಯಕ್ಷರಾಗುವ ಮೂಲಕ ಎರಡನೇ ಬಾರಿ ಈ ಘನ ಹುದ್ದೆ ನಿರ್ವಹಿಸಿ ತಮ್ಮ ನಾಯಕತ್ವ ಸಾಮಾರ್ಥ್ಯವನ್ನು ಮೆರೆದ ಆಝಾದ್ ೧೯೩೯-೪೫ರ ನಿರ್ಣಾಯಕ ಅವಧಿಯನ್ನು ಸಮರ್ಥವಾಗಿ ನಿರ್ವಹಿಸಿದರು. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ’ಮೌಲಾನಾ ಅಬುಲ್ ಕಲಾಂ ಆಝಾದ್’ ೧೯೪೨ರ ಆಗಷ್ಟ್ ೯ರ ’ಕ್ವಿಟ್ ಇಂಡಿಯಾ’ (ಬ್ರಿಟೀಷರೇ ಭಾರತ ಬಿಟ್ಟು ತೊಲಗಿ) ಚಳವಳಿಗೆ ನಾಯಕತ್ವ ನೀಡಿ ಅಹ್ಮದ್ನಗರ ಕೋಟೆ ಜೈಲಿನಲ್ಲಿ ಬಂಧಿತರಾದರು. ಆಝಾದರ ಬಿಡುವಿಲ್ಲದ ರಾಜಕೀಯ ಕಾರ್ಯಕ್ರಮಗಳು, ದೀರ್ಘ ಸೆರೆಮನೆವಾಸದ ಕಾರಣಗಳಿಂದ ಅವರ ಪತ್ನಿ ಝಲೇಖ ಬೇಗಂರೊಂದಿಗೆ ಇರಲು ಸಾಧ್ಯವಾಗಲಿಲ್ಲ. ಇವರ ಏಕೈಕ ಮಗು ನಾಲ್ಕನೇಯ ವರ್ಷದಲ್ಲಿಯೇ ನಿಧನ ಹೊಂದಿತ್ತು. ೧೯೪೪ರಲ್ಲಿ ಆಝಾದ್ ಪುನಃ ಜೈಲಿನಲ್ಲಿದ್ದರು. ಅವರ ಪತ್ನಿ ೧೫೦೦ ಕಿ.ಮೀ. ದೂರದಲ್ಲಿದ್ದರು. ’ಗುಆರ್-ಏ-ಖಾತಿರ್’ ಕೃತಿಯಲ್ಲಿ ಆಝಾದ್ ಈ ರೀತಿ ಬರೆದಿದ್ದಾರೆ.
ಮಾರ್ಚ್ ೨೩ ರಂದು ಟೆಲಿಗ್ರಾಮ್ ಮುಖಾಂತರ ಅವಳು ತೀವ್ರ ಅಸ್ವಸ್ಥಳಾಗಿರುವುದು ತಿಳಿಯಿತು. ಪತ್ರಿಕೆಗಳಲ್ಲೂ ಅದೇ ವಿಷಯವಿತ್ತು. ಈ ಸಂಬಂಧ ಸರ್ಕಾರಕ್ಕೆ ಏನಾದರೂ ಮನವಿ ಮಾಡ ಬಯಸಿದ್ದರೆ, ಅದನ್ನು ಬಾಂಬೆಗೆ ಕಳುಹಿಸಿ ಕೊಡುವುದಾಗಿ ಜೇಲ್ ಸೂಪರಿಂಟೆಂಡೆಂಟ್ ತಿಳಿಸಿದರು. ನಾನು ಸರ್ಕಾರಕ್ಕೆ ಯಾವುದೇ ಮನವಿ ಮಾಡುವುದಿಲ್ಲವೆಂದು ಅವನಿಗೆ ದೃಢವಾಗಿ ತಿಳಿಸಿದೆ.
ಕೊನೆಗೂ ನನ್ನ ಕಷ್ಟಗಳ ಬಟ್ಟಲು ತುಂಬಿತು. ಏಪ್ರಿಲ್ ೯ರಂದು ಸೂಪರಿಂಟೆಂಡೆಂಟ್ ದುಃಖದ ವಾರ್ತೆ ಇರುವ ಟಿಲಿಗ್ರಾಮ್ ನನ್ನ ಕೈಗೆ ಕೊಟ್ಟ. ಈ ರೀತಿ ೩೬ವರ್ಷಗಳ ನಮ್ಮ ವೈವಾಹಿಕ ಜೀವನ ಕೊನೆಗೊಂಡಿತು. ನನ್ನ ಆತ್ಮವಿಶ್ವಾಸ ಕೈ ಕೊಡದಿದ್ದರೂ ಕಾಲ ಕೆಳಗಿನ ಭೂಮಿ ಕುಸಿದಂತಾಯಿತು.
“ಆಝಾದ್ರ ದೇಶನಿಷ್ಠೆ ಅವರ ಧರ್ಮನಿಷ್ಠೆಯಷ್ಟೇ ಅಚಲ ಎಂದಿದ್ದರೂ ಗಾಂಧೀಜಿ.” ೧೯೪೭ ಮಾರ್ಚ್ ವೇಳೆಗೆ ಸರ್ದಾರ್ ಮತ್ತು ನೆಹರೂ ದೇಶ ವಿಭಜನೆಯನ್ನು ಒಪ್ಪಿಕೊಂಡಿದ್ದರು. ’ನಾವು ಇಷ್ಟಪಟ್ಟರೂ, ಪಡದಿದ್ದರೂ ಭಾರತದಲ್ಲಿ ಎರಡು ರಾಷ್ಟ್ರಗಳಿವೆ’ ಎಂದು ಪಟೇಲರು ನುಡಿದಾಗ ಆಝಾದ್ ಬಹಳ ನೊಂದುಕೊಂಡಿದ್ದರು. ವಿಭಜನೆಗೆ ನಿಮ್ಮ ವಿರೋದವನ್ನು ತ್ಯಜಿಸಿ ಎಂದು ಕೇಳಿಕೊಂಡಿದ್ದರು. ೩೧ಮಾರ್ಚ್ ಆಝಾದ್ ಗಾಂಧೀಜಿಯನ್ನು ಭೇಟಿಮಾಡಿದರು. ಆಝಾದ್ರ ಹೇಳಿಕೆಯ ಪ್ರಕಾರ, ಗಾಂಧೀಜಿ ಅವರಿಗೆ ಈ ರೀತಿ ಹೇಳಿದರು: “ದೇಶದ ವಿಭಜನೆ ಈಗ ಒಂದು ದೊಡ್ಡ ಬೆದರಿಕೆಯಾಗಿದೆ. ವಲ್ಲಭಭಾಯಿ ಮತ್ತು ನೆಹರೂ ಶರಣಾಗತರಾಗಿದ್ದಾರೆಂದು ಹೇಳಲಾಗುತ್ತಿದೆ. ನೀವು ನನ್ನೊಡನೆ ಇರುವಿರಾ ಅಥವಾ ನೀವೂ ಬದಲಾಗುವಿರಾ?”
ಆಝಾದ್ ಉತ್ತರಿಸಿದರು, “ದೇಶ ವಿಭಜನೆಗೆ ನನ್ನ ವಿರೋಧ ಇಂದು ಇರುವಷ್ಟು ಎಂದೂ ಉಗ್ರವಾಗಿರಲಿಲ್ಲ… ನನ್ನ ಭರವಸೆ ಈಗ ಉಳಿದಿರುವುದು ನಿಮ್ಮಲ್ಲೇ ನೀವೂ ದೇಶ ವಿಭಜನೆಯನ್ನು ಒಪ್ಪಿಕೊಂಡರೆ, ದೇಶ ಕೈ ಬಿಟ್ಟು ಹೋದಂತೆಯೆ.” ಇದಕ್ಕೆ ಗಾಂಧೀಜಿ ಉತ್ತರಿಸಿದರು: “ಎಂತಹ ಪ್ರಶ್ನೆಯನ್ನು ಕೇಳುತಿದ್ದೀರಿ! ಕಾಂಗ್ರೆಸ್ ದೇಶ ವಿಭಜನೆಯನ್ನು ಒಪ್ಪ ಬಯಸಿದರೆ ಅದು ನನ್ನ ಮೃತದೇಹದ ಮೇಲಷ್ಟೇ ಆದರೆ ಕೇವಲ ಎರಡು ತಿಂಗಳ ಅವಧಿಯಲ್ಲಿ ಗಾಂಧೀಜಿ ನಿಲುವನ್ನು ಬದಲಾಯಿಸಿದ್ದರು. ’ ದೇಶ ಇಬ್ಭಾಗವಾಗದೇ ಈಗ ಗತ್ಯಂತರವಿಲ್ಲ’ ಎಂದು ಹೇಳಿ ಆಝಾದ್ರನ್ನು ಸ್ಥಂಬಿಭೂತಗೊಳಿಸಿದ್ದರು.
ಮಲ್ಲಿಕಾರ್ಜುನ ಹುಲಸೂರ
ಸ್ವಾತಂತ್ರ್ಯ ವ್ಯಾಪ್ತಿಯ ಜೊತೆ ದೇಶವಿಭಜನೆಯ ಆಘಾತವೆರಗಿದಾಗ ತಮ್ಮ ನೋವನ್ನು ಕೆಲವು ನಾಯಕರ ಕುರಿತ ಟೀಕೆಯನ್ನು ಆತ್ಮಚರಿತ್ರೆ ’India Wins Freedom’’ ನಲ್ಲಿ ದಾಖಲಿಸಿದ್ದಾರೆ. ಉರ್ದು ಭಾಷೆಯಲ್ಲೂ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ.
ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವರಾಗಿ ಶಾಲಾ ಕಾಲೇಜುಗಳ ಸ್ಥಾಪನೆಯಲ್ಲಿ ತೊಡಗಿಸಿಕೊಂಡ ಅವರು ’ಆಧುನಿಕ ಭಾರತದ ಶಿಕ್ಷಣ ಶಿಲ್ಪಿ’ ಎಂದು ಗುರುತಿಸಲ್ಪಟ್ಟಿದ್ದಾರೆ.
೧೯೫೮ರ ಫೆಬ್ರವರಿ ೨೨ರಂದು ತಮ್ಮ ೭೦ನೇ ಪ್ರಾಯದಲ್ಲಿ ಆಝಾದ್ ಕೊನೆಯುಸಿರೆಳೆದರು. ಆ ಬಳಿಕ ಮೂರುವರೆ ದಶಕ ತಡವಾಗಿಯಾದರೂ ೧೯೯೨ರಲ್ಲಿ ಅವರಿಗೆ ಮರಣೋತ್ತರ ’ಭಾರತರತ್ನ’ ಪ್ರಶಸ್ತಿಯಿತ್ತು ಗೌರವಿಸಲಾಯಿತು.
ಆಚರಣೆ ಮತ್ತು ಜ್ಞಾನ
🌿ಆಚರಣೆ ಮತ್ತು ಜ್ಞಾನ🌿
ಆಚರಣೆಗಳನ್ನು ಪಾಲಿಸುವುದು ಮುಖ್ಯವಾಗಿರುವುದಿಲ್ಲ. ಜ್ಞಾನವನ್ನು ಹೊಂದುವುದು ಮುಖ್ಯವಾಗಿದೆ. ಯಾರು ಆಚರಣೆಯ ಮಾರ್ಗದಿಂದ ಆರಂಭಿಸುವರೋ ಅವರು ತಪ್ಪುಮಾರ್ಗದಿಂದ ಆರಂಭಿಸುವರು. ಅವರು ಒಂದು ತುದಿಯಿಂದ ಆರಂಭಿಸುತ್ತಿರುವರು. ಅಜ್ಞಾನದ ಕಾರಣದಿಂದಾಗಿಯೇ ಆಚರಣೆಗಳು ಸಹಜವಾಗಿರುವವು. ಅಜ್ಞಾನದಲ್ಲಿ ಕ್ರೋಧವನ್ನು ಹತ್ತಿಕ್ಕಿ ಕ್ಷ ಮಾಗುಣವನ್ನು ತೋರಿಸಬೇಕಾಗುವುದು. ಆದರೆ ಜ್ಞಾನದಲ್ಲಿ ಕ್ರೋಧ ಉತ್ಪನ್ನವಾಗುವುದೇ ಇಲ್ಲ.
ಯಾರು ಮಹಾವೀರನ ಕುರಿತಾಗಿ ಆತ ದಯಾಶೀಲನೂ, ಕ್ಷ ಮಾಗುಣವುಳ್ಳವನೂ ಆಗಿದ್ದನೆಂದು ಹೇಳುತ್ತಿರುವರೋ ಅವರು ಖಂಡಿತವಾಗಿಯೂ ಅಸತ್ಯವನ್ನಾಡುತ್ತಿರುವರು. ಮಹಾವೀರ ಕ್ಷ ಮಾಗುಣ ಉಳ್ಳವನಾಗಿದ್ದ ಎಂದು ಹೇಳುವುದರ ಅರ್ಥ ಆತನಲ್ಲಿ ಕ್ರೋಧ ಉತ್ಪನ್ನವಾಗುತ್ತಿತ್ತು ಎಂದಾಗುತ್ತದೆ. ಮಹಾವೀರ ಕ್ಷ ಮಾಗುಣ ಉಳ್ಳವನಾಗಿರಲಿಲ್ಲ. ಬದಲಿಗೆ ಆತನಲ್ಲಿ ಕ್ರೋಧವೇ ಉತ್ಪನ್ನವಾಗುತ್ತಿರಲಿಲ್ಲ. ಯಾರಲ್ಲಿ ಕ್ರೋಧವೇ ಇರುವುದಿಲ್ಲವೊ ಅವರಲ್ಲಿ ಕ್ಷ ಮೆ ಅಥವಾ ಕ್ಷ ಮಿಸದೇ ಇರುವುದರ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕ್ಷ ಮಾವಂತ ಆಗಿರುವವನು ಕ್ರೋಧಿ ಆಗಿರುವ ಸಾಧ್ಯತೆ ಇರುತ್ತದೆ. ಯಾರಲ್ಲಿ ಕ್ರೋಧವೇ ಹುಟ್ಟುವುದಿಲ್ಲವೊ ಅವರಲ್ಲಿ ಕ್ಷ ಮಾಗುಣದ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಮನಸ್ಸಿನ ಒಳಗೆ ಸ್ವಯಂನ ಸಾಕ್ಷಾತ್ಕಾರ ಆಗುವುದರೊಂದಿಗೆ ಯಾವ ಜ್ಞಾನ ಉತ್ಪನ್ನವಾಗುವುದೋ ಅದು ಅತ್ಯಂತ ಆಶ್ಚರ್ಯ ಜನಕವಾದುದು ಹಾಗೂ ಅತ್ಯಂತಿಕ ಹೊಳಪುಳ್ಳದ್ದೊ ಆಗಿರುವುದು.
ಜೀವನದಲ್ಲಿ ಮುಕ್ತಿಯ ಮಾರ್ಗ ಆಚರಣೆಯಿಂದ ದೊರೆಯುವುದಿಲ್ಲ. ಅದು ನಮ್ಮೊಳಗೆ ಪ್ರಜ್ಞೆ ಜಾಗರಣವಾಗುವುದರೊಂದಿಗೆ ಆರಂಭವಾಗುವುದು.
ಈ ರೀತಿ ಪ್ರಜ್ಞೆಯ ಜಾಗರಣೆ ಮತ್ತು ಸ್ವಯಂನ ಸಾಕ್ಷಾತ್ಕಾರ ಆಗುವುದಾದರೂ ಹೇಗೆ? ಯಾವ ವಿಧಿ ವಿಧಾನಗಳ ಮೂಲಕ ನಾನು ನನ್ನ ಅಂತರ್ಯದಲ್ಲಿ ಪ್ರವೇಶಿಸಲು ಸಾಧ್ಯವಾಗುವುದು? ಯಾವ ವಿಧಿ ವಿಧಾನಗಳ ಮೂಲಕ ಸ್ವಯಂನ ಮುಖಾಮಖಿ ಸಾಧ್ಯ? ಯಾವುದು ಎಲ್ಲವನ್ನೂ ನೋಡುತ್ತಿರುವುದೋ ಆ ಆಸ್ತಿತ್ವದೊಂದಿಗೆ ನಾನು ಒಂದಾಗುವುದು ಯಾವ ವಿಧಾನದಿಂದ ಸಾಧ್ಯವಾಗುವುದು?
ಆ ವಿಧಿಯನ್ನು ತಿಳಿಯುವ ಮೊದಲು ಯಾವ ರೀತಿಯಿಂದ ನಾನು ನನ್ನಿಂದ ಹೊರಗೆ ಹೋಗಿರುವೆ ಎಂಬುದನ್ನು ಅರಿಯುವುದು ಅತ್ಯಂತ ಅವಶ್ಯಕ. ಹೀಗೆ ನಾನು ಯಾವ ವಿಧಿ ವಿಧಾನಗಳಿಂದ, ಯಾವ ಮಾರ್ಗದಿಂದ ಹೊರಗೆ ಹೋಗಿರುವೆ ಎಂಬುದನ್ನು ಅರಿಯುವುದು ಸಾಧ್ಯವಾದರೆ, ಆಗ ಅದೇ ಮಾರ್ಗದಲ್ಲಿ ಹಿಂತಿರುಗಿ ಬರುವ ಮೂಲಕ ನಾನು ಸ್ವಯಂ ಅನ್ನು ತಲುಪಬಹುದು. ಯಾವ ಮಾರ್ಗ ನನ್ನನ್ನು ಹೊರಗೆ ಕರೆದುಕೊಂಡು ಹೋಗಿರುವುದೋ ಅದೇ ಮಾರ್ಗ ನನಗೆ ಒಳಗೆ ಪ್ರವೇಶಿಸುವ ಅವಕಾಶವನ್ನೂ ಕೊಡಲೇಬೇಕು. ವಿರುದ್ಧ ದಿಕ್ಕಿನಲ್ಲಿ ಸಂಚರಿಸಬೇಕಾಗಬಹುದು. ಯಾವ ಮಾರ್ಗ ನನ್ನನ್ನು ಬಂಧನದ ಕಡೆಗೆ ಕರೆದುಕೊಂಡು ಹೋಗಿರುವುದೋ ಅದೇ ಮಾರ್ಗ ನನ್ನನ್ನು ಮುಕ್ತಿಯ ಕಡೆಗೂ ಕರೆದುಕೊಂಡು ಹೋಗಬಲ್ಲದು. ವಿರುದ್ಧವಾಗಿ ಸಂಚರಿಸಬೇಕು ಅಷ್ಟೇ. ಯಾವ ಮಾರ್ಗ ನನ್ನನ್ನು ಸಂಸಾರದೊಂದಿಗೆ ಜೋಡಿಸಿರುವುದೊ, ಅದೇ ಮಾರ್ಗ ನನ್ನನ್ನು ಪರಮಾತ್ಮನೊಂದಿಗೆ ಜೋಡಿಸಬಲ್ಲದು. ವಿರುದ್ಧವಾಗಿ ಚಲಿಸಬೇಕಷ್ಟೆ.
ನಮ್ಮ ಈ ಮನಸ್ಸು ನಮ್ಮ ವಿಚಾರಗಳೇ ನಮ್ಮನ್ನು ಈ ಜಗತ್ತಿನೊಂದಿಗೆ ಜೋಡಿಸುತ್ತದೆ. ಈಗ ಒಂದು ಕ್ಷ ಣ ನಿಮ್ಮ ಮನಸ್ಸಿನಲ್ಲಿ ಯಾವುದೇ ವಿಚಾರದ ತರಂಗಗಳು ಇಲ್ಲವಾದರೆ, ತರಂಗಗಳಿರದೆ ಮನಸ್ಸು ಶೂನ್ಯವಾಗಿದ್ದರೆ, ವಿಚಾರಗಳಿಂದ ಕ್ಷ ಣ ಕಾಲ ಮನಸ್ಸು ಮುಕ್ತವಾಗಿದ್ದರೆ, ಆ ಕ್ಷ ಣ ನೀವು ಈ ಜಗತ್ತಿನೊಂದಿಗೆ ಯಾವ ರೀತಿಯಲ್ಲಿ ಸಂಬಂಧ ಹೊಂದಿರುವಿರಿ? ಆ ಕ್ಷ ಣ ನಿಮಗೆ ಈ ಜಗತ್ತಿನೊಂದಿಗೆ ಯಾವುದಾದರೂ ಸಂಬಂಧ ಉಳಿದಿರುವುದೇ. ಆ ಕ್ಷ ಣ ಯಾರು ಹೊರಗೆ ಬದುಕುತ್ತಿರುವರೋ ಅವರೊಂದಿಗೆ ಯಾವುದೇ ರೀತಿಯ ಸಂಬಂಧ, ನೆಂಟಸ್ತಿಕೆ ಉಳಿದಿರುವುದೇ? ಯಾವುದೇ ರೀತಿಯ ಬಂಧನ ಉಳಿದಿರುವುದೇ?
* ಓಶೋ
🌴🌴🌴🌴🌴🌴🌴🌴
ಆಚರಣೆಗಳನ್ನು ಪಾಲಿಸುವುದು ಮುಖ್ಯವಾಗಿರುವುದಿಲ್ಲ. ಜ್ಞಾನವನ್ನು ಹೊಂದುವುದು ಮುಖ್ಯವಾಗಿದೆ. ಯಾರು ಆಚರಣೆಯ ಮಾರ್ಗದಿಂದ ಆರಂಭಿಸುವರೋ ಅವರು ತಪ್ಪುಮಾರ್ಗದಿಂದ ಆರಂಭಿಸುವರು. ಅವರು ಒಂದು ತುದಿಯಿಂದ ಆರಂಭಿಸುತ್ತಿರುವರು. ಅಜ್ಞಾನದ ಕಾರಣದಿಂದಾಗಿಯೇ ಆಚರಣೆಗಳು ಸಹಜವಾಗಿರುವವು. ಅಜ್ಞಾನದಲ್ಲಿ ಕ್ರೋಧವನ್ನು ಹತ್ತಿಕ್ಕಿ ಕ್ಷ ಮಾಗುಣವನ್ನು ತೋರಿಸಬೇಕಾಗುವುದು. ಆದರೆ ಜ್ಞಾನದಲ್ಲಿ ಕ್ರೋಧ ಉತ್ಪನ್ನವಾಗುವುದೇ ಇಲ್ಲ.
ಯಾರು ಮಹಾವೀರನ ಕುರಿತಾಗಿ ಆತ ದಯಾಶೀಲನೂ, ಕ್ಷ ಮಾಗುಣವುಳ್ಳವನೂ ಆಗಿದ್ದನೆಂದು ಹೇಳುತ್ತಿರುವರೋ ಅವರು ಖಂಡಿತವಾಗಿಯೂ ಅಸತ್ಯವನ್ನಾಡುತ್ತಿರುವರು. ಮಹಾವೀರ ಕ್ಷ ಮಾಗುಣ ಉಳ್ಳವನಾಗಿದ್ದ ಎಂದು ಹೇಳುವುದರ ಅರ್ಥ ಆತನಲ್ಲಿ ಕ್ರೋಧ ಉತ್ಪನ್ನವಾಗುತ್ತಿತ್ತು ಎಂದಾಗುತ್ತದೆ. ಮಹಾವೀರ ಕ್ಷ ಮಾಗುಣ ಉಳ್ಳವನಾಗಿರಲಿಲ್ಲ. ಬದಲಿಗೆ ಆತನಲ್ಲಿ ಕ್ರೋಧವೇ ಉತ್ಪನ್ನವಾಗುತ್ತಿರಲಿಲ್ಲ. ಯಾರಲ್ಲಿ ಕ್ರೋಧವೇ ಇರುವುದಿಲ್ಲವೊ ಅವರಲ್ಲಿ ಕ್ಷ ಮೆ ಅಥವಾ ಕ್ಷ ಮಿಸದೇ ಇರುವುದರ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕ್ಷ ಮಾವಂತ ಆಗಿರುವವನು ಕ್ರೋಧಿ ಆಗಿರುವ ಸಾಧ್ಯತೆ ಇರುತ್ತದೆ. ಯಾರಲ್ಲಿ ಕ್ರೋಧವೇ ಹುಟ್ಟುವುದಿಲ್ಲವೊ ಅವರಲ್ಲಿ ಕ್ಷ ಮಾಗುಣದ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಮನಸ್ಸಿನ ಒಳಗೆ ಸ್ವಯಂನ ಸಾಕ್ಷಾತ್ಕಾರ ಆಗುವುದರೊಂದಿಗೆ ಯಾವ ಜ್ಞಾನ ಉತ್ಪನ್ನವಾಗುವುದೋ ಅದು ಅತ್ಯಂತ ಆಶ್ಚರ್ಯ ಜನಕವಾದುದು ಹಾಗೂ ಅತ್ಯಂತಿಕ ಹೊಳಪುಳ್ಳದ್ದೊ ಆಗಿರುವುದು.
ಜೀವನದಲ್ಲಿ ಮುಕ್ತಿಯ ಮಾರ್ಗ ಆಚರಣೆಯಿಂದ ದೊರೆಯುವುದಿಲ್ಲ. ಅದು ನಮ್ಮೊಳಗೆ ಪ್ರಜ್ಞೆ ಜಾಗರಣವಾಗುವುದರೊಂದಿಗೆ ಆರಂಭವಾಗುವುದು.
ಈ ರೀತಿ ಪ್ರಜ್ಞೆಯ ಜಾಗರಣೆ ಮತ್ತು ಸ್ವಯಂನ ಸಾಕ್ಷಾತ್ಕಾರ ಆಗುವುದಾದರೂ ಹೇಗೆ? ಯಾವ ವಿಧಿ ವಿಧಾನಗಳ ಮೂಲಕ ನಾನು ನನ್ನ ಅಂತರ್ಯದಲ್ಲಿ ಪ್ರವೇಶಿಸಲು ಸಾಧ್ಯವಾಗುವುದು? ಯಾವ ವಿಧಿ ವಿಧಾನಗಳ ಮೂಲಕ ಸ್ವಯಂನ ಮುಖಾಮಖಿ ಸಾಧ್ಯ? ಯಾವುದು ಎಲ್ಲವನ್ನೂ ನೋಡುತ್ತಿರುವುದೋ ಆ ಆಸ್ತಿತ್ವದೊಂದಿಗೆ ನಾನು ಒಂದಾಗುವುದು ಯಾವ ವಿಧಾನದಿಂದ ಸಾಧ್ಯವಾಗುವುದು?
ಆ ವಿಧಿಯನ್ನು ತಿಳಿಯುವ ಮೊದಲು ಯಾವ ರೀತಿಯಿಂದ ನಾನು ನನ್ನಿಂದ ಹೊರಗೆ ಹೋಗಿರುವೆ ಎಂಬುದನ್ನು ಅರಿಯುವುದು ಅತ್ಯಂತ ಅವಶ್ಯಕ. ಹೀಗೆ ನಾನು ಯಾವ ವಿಧಿ ವಿಧಾನಗಳಿಂದ, ಯಾವ ಮಾರ್ಗದಿಂದ ಹೊರಗೆ ಹೋಗಿರುವೆ ಎಂಬುದನ್ನು ಅರಿಯುವುದು ಸಾಧ್ಯವಾದರೆ, ಆಗ ಅದೇ ಮಾರ್ಗದಲ್ಲಿ ಹಿಂತಿರುಗಿ ಬರುವ ಮೂಲಕ ನಾನು ಸ್ವಯಂ ಅನ್ನು ತಲುಪಬಹುದು. ಯಾವ ಮಾರ್ಗ ನನ್ನನ್ನು ಹೊರಗೆ ಕರೆದುಕೊಂಡು ಹೋಗಿರುವುದೋ ಅದೇ ಮಾರ್ಗ ನನಗೆ ಒಳಗೆ ಪ್ರವೇಶಿಸುವ ಅವಕಾಶವನ್ನೂ ಕೊಡಲೇಬೇಕು. ವಿರುದ್ಧ ದಿಕ್ಕಿನಲ್ಲಿ ಸಂಚರಿಸಬೇಕಾಗಬಹುದು. ಯಾವ ಮಾರ್ಗ ನನ್ನನ್ನು ಬಂಧನದ ಕಡೆಗೆ ಕರೆದುಕೊಂಡು ಹೋಗಿರುವುದೋ ಅದೇ ಮಾರ್ಗ ನನ್ನನ್ನು ಮುಕ್ತಿಯ ಕಡೆಗೂ ಕರೆದುಕೊಂಡು ಹೋಗಬಲ್ಲದು. ವಿರುದ್ಧವಾಗಿ ಸಂಚರಿಸಬೇಕು ಅಷ್ಟೇ. ಯಾವ ಮಾರ್ಗ ನನ್ನನ್ನು ಸಂಸಾರದೊಂದಿಗೆ ಜೋಡಿಸಿರುವುದೊ, ಅದೇ ಮಾರ್ಗ ನನ್ನನ್ನು ಪರಮಾತ್ಮನೊಂದಿಗೆ ಜೋಡಿಸಬಲ್ಲದು. ವಿರುದ್ಧವಾಗಿ ಚಲಿಸಬೇಕಷ್ಟೆ.
ನಮ್ಮ ಈ ಮನಸ್ಸು ನಮ್ಮ ವಿಚಾರಗಳೇ ನಮ್ಮನ್ನು ಈ ಜಗತ್ತಿನೊಂದಿಗೆ ಜೋಡಿಸುತ್ತದೆ. ಈಗ ಒಂದು ಕ್ಷ ಣ ನಿಮ್ಮ ಮನಸ್ಸಿನಲ್ಲಿ ಯಾವುದೇ ವಿಚಾರದ ತರಂಗಗಳು ಇಲ್ಲವಾದರೆ, ತರಂಗಗಳಿರದೆ ಮನಸ್ಸು ಶೂನ್ಯವಾಗಿದ್ದರೆ, ವಿಚಾರಗಳಿಂದ ಕ್ಷ ಣ ಕಾಲ ಮನಸ್ಸು ಮುಕ್ತವಾಗಿದ್ದರೆ, ಆ ಕ್ಷ ಣ ನೀವು ಈ ಜಗತ್ತಿನೊಂದಿಗೆ ಯಾವ ರೀತಿಯಲ್ಲಿ ಸಂಬಂಧ ಹೊಂದಿರುವಿರಿ? ಆ ಕ್ಷ ಣ ನಿಮಗೆ ಈ ಜಗತ್ತಿನೊಂದಿಗೆ ಯಾವುದಾದರೂ ಸಂಬಂಧ ಉಳಿದಿರುವುದೇ. ಆ ಕ್ಷ ಣ ಯಾರು ಹೊರಗೆ ಬದುಕುತ್ತಿರುವರೋ ಅವರೊಂದಿಗೆ ಯಾವುದೇ ರೀತಿಯ ಸಂಬಂಧ, ನೆಂಟಸ್ತಿಕೆ ಉಳಿದಿರುವುದೇ? ಯಾವುದೇ ರೀತಿಯ ಬಂಧನ ಉಳಿದಿರುವುದೇ?
* ಓಶೋ
🌴🌴🌴🌴🌴🌴🌴🌴
ಬದುಕುವ ರೀತಿ
🍁ಬದುಕುವ ರೀತಿ🍁
ಯಾವ ನದಿಯೂ ನೇರವಾಗಿ ಹರಿದು
ಸಾಗರವನ್ನು ಸೇರುವುದಿಲ್ಲ. ತಗ್ಗು-ದಿನ್ನಿ ಹಳ್ಳ
ಕೊಳ್ಳಗಳನ್ನು ದಾಟಿ ಹತ್ತಾರು ಸಲ
ದಿಕ್ಕುಗಳನ್ನು ಬದಲಿಸುತ್ತ, ಪಾತ್ರವನ್ನು ಹಿರಿದು-
ಕಿರಿದು ಮಾಡಿ ಕೊನೆಗೆ ಸಾಗರ ಸೇರುತ್ತದೆ. ಅದೇ
ರೀತಿ ನಮ್ಮ ಜೀವನ ನದಿಯಲ್ಲಿಯೂ ಏರಿಳಿತಗಳು
ಇರುವುದು ಸ್ವಾಭಾವಿಕ. ಮಾನವರು-
ದೇವಮಾನವರು, ರಾಜ-ಮಹಾರಾಜರು ಯಾರೇ
ಇರಲಿ ಎಲ್ಲರ ಜೀವನದಲ್ಲಿಯೂ
ಏರುಪೇರುಗಳಿರುವುದು ಸಹಜ. ದಶರಥ
ಮಹಾರಾಜನು ಸಾಮಾನ್ಯನಲ್ಲ. ಶೂರ-ಧೀರ,
ವೀರ, ಸಾಹಸಿಗ, ಶಕ್ತಿವಂತ! ಆದರೇನು ತನ್ನ ಮಗ
ಶ್ರೀರಾಮನು ಸಿಂಹಾಸನ ಏರಿ
ರಾಜ್ಯವನ್ನಾಳುವುದನ್ನು ನೋಡಲಿಲ್ಲ.
ಸಿಂಹಾಸನ ಏರುವ ಸುವರ್ಣಕ್ಷಣದಲ್ಲೇ
ಶ್ರೀರಾಮನ ಜೀವನ ಪ್ರವಾಹ ಅರಣ್ಯದತ್ತ
ತಿರುಗಿತು. ಸೀತಾದೇವಿ, ಶ್ರೀರಾಮ, ಲಕ್ಷ್ಮಣ
ಎಲ್ಲರೂ ಬರಿಗೈ, ಬರಿಗಾಲಿನಿಂದಲೇ ಅರಣ್ಯದತ್ತ
ಹೆಜ್ಜೆ ಹಾಕಿದರು. ಅರಮನೆ ಸುಖದ
ಸುಪ್ಪತ್ತಿಗೆಯಲ್ಲಿದ್ದವರು ಅರಣ್ಯದ ಗುಡ್ಡು
ಗಾಡಿನಲ್ಲಿ ಗಡ್ಡೆ ಗೆಣಸುಗಳ ಮೇಲಿದ್ದು ಕಾಲ
ಕಳೆಯಬೇಕಾಯಿತು. ಇದು ಕೇವಲ ಶ್ರೀರಾಮನ
ಕಥೆಯಲ್ಲ, ಎಲ್ಲರ ಬದುಕಿನ ರೀತಿ!
✨✨✨✨✨✨✨✨✨
ಯಾವ ನದಿಯೂ ನೇರವಾಗಿ ಹರಿದು
ಸಾಗರವನ್ನು ಸೇರುವುದಿಲ್ಲ. ತಗ್ಗು-ದಿನ್ನಿ ಹಳ್ಳ
ಕೊಳ್ಳಗಳನ್ನು ದಾಟಿ ಹತ್ತಾರು ಸಲ
ದಿಕ್ಕುಗಳನ್ನು ಬದಲಿಸುತ್ತ, ಪಾತ್ರವನ್ನು ಹಿರಿದು-
ಕಿರಿದು ಮಾಡಿ ಕೊನೆಗೆ ಸಾಗರ ಸೇರುತ್ತದೆ. ಅದೇ
ರೀತಿ ನಮ್ಮ ಜೀವನ ನದಿಯಲ್ಲಿಯೂ ಏರಿಳಿತಗಳು
ಇರುವುದು ಸ್ವಾಭಾವಿಕ. ಮಾನವರು-
ದೇವಮಾನವರು, ರಾಜ-ಮಹಾರಾಜರು ಯಾರೇ
ಇರಲಿ ಎಲ್ಲರ ಜೀವನದಲ್ಲಿಯೂ
ಏರುಪೇರುಗಳಿರುವುದು ಸಹಜ. ದಶರಥ
ಮಹಾರಾಜನು ಸಾಮಾನ್ಯನಲ್ಲ. ಶೂರ-ಧೀರ,
ವೀರ, ಸಾಹಸಿಗ, ಶಕ್ತಿವಂತ! ಆದರೇನು ತನ್ನ ಮಗ
ಶ್ರೀರಾಮನು ಸಿಂಹಾಸನ ಏರಿ
ರಾಜ್ಯವನ್ನಾಳುವುದನ್ನು ನೋಡಲಿಲ್ಲ.
ಸಿಂಹಾಸನ ಏರುವ ಸುವರ್ಣಕ್ಷಣದಲ್ಲೇ
ಶ್ರೀರಾಮನ ಜೀವನ ಪ್ರವಾಹ ಅರಣ್ಯದತ್ತ
ತಿರುಗಿತು. ಸೀತಾದೇವಿ, ಶ್ರೀರಾಮ, ಲಕ್ಷ್ಮಣ
ಎಲ್ಲರೂ ಬರಿಗೈ, ಬರಿಗಾಲಿನಿಂದಲೇ ಅರಣ್ಯದತ್ತ
ಹೆಜ್ಜೆ ಹಾಕಿದರು. ಅರಮನೆ ಸುಖದ
ಸುಪ್ಪತ್ತಿಗೆಯಲ್ಲಿದ್ದವರು ಅರಣ್ಯದ ಗುಡ್ಡು
ಗಾಡಿನಲ್ಲಿ ಗಡ್ಡೆ ಗೆಣಸುಗಳ ಮೇಲಿದ್ದು ಕಾಲ
ಕಳೆಯಬೇಕಾಯಿತು. ಇದು ಕೇವಲ ಶ್ರೀರಾಮನ
ಕಥೆಯಲ್ಲ, ಎಲ್ಲರ ಬದುಕಿನ ರೀತಿ!
✨✨✨✨✨✨✨✨✨
ಮನುಷ್ಯನಲ್ಲಿ ಇರಬೇಕಾದ ಗುಣಗಳು
🔶ಮನುಷ್ಯನಲ್ಲಿ ಇರಬೇಕಾದ
ಗುಣಗಳು🔶
ಜೀವನದಲ್ಲಿ ಶಿಷ್ಟಾಚಾರವೂ ಒಂದು ಕಲೆ.
ಸ್ವರದಲ್ಲಿ ಮಾಧುರ್ಯ, ವಾಣಿಯಲ್ಲಿ ನಮ್ರತೆ.
ಕಾರ್ಯದಲ್ಲಿ ಸ್ವಚತೆ, ವ್ಯವಹಾರದಲ್ಲಿ ಸತ್ಯ
ಸಂದತೆ, ಆಚರಣೆಯಲ್ಲಿ ಉದಾರತೆ.
ಇವೆಲ್ಲಾ ಮನುಷ್ಯನ ಗುಣಗಳು.
ಯಾರೇ ಆದರೂ ಈ ಗುಣಗಳಿಗೆ ಆಕರ್ಷಿಸುತ್ತಾರೆ.
ಪುಷ್ಪಗಳು,ಮೊಗ್ಗು
ಗಳು ಮತ್ತು ದಾನ್ಯವನ್ನು ವಿಕಸಿತಗೊಲಿಸುವ
ಸಾಮರ್ಥ್ಯವಿರುವ ವಸಂತಕ್ಕೆ,
ಮರಗಳನ್ನು ಕಿತ್ತೆಸೆಯುವ,ಮನೆಯನ್ನು ನೆಲಸಮ
ಮಾಡುವ ಬಿರುಗಾಲಿಯನ್ನೆದು
ರಿಸಲು ಸಾದ್ಯವೇ ?
ಪ್ರಾತ;ಕಾಲದ ವಸಂತದ ಬಿಸಿಲನ್ನು ಗ್ರೀಷ್ಮ
ಕಾಲದ ಪ್ರಚಂಡ ಸೂರ್ಯನೊಡನೆ
ಹೋಲಿಸಲು ಸಾದ್ಯವಿಲ್ಲ.
ವ್ಯಕ್ತಿ ಕೂರುವುದು,ಏಳುವುದ
ು,ಮಾತನಾಡುವುದು ದೊಡ್ಡವರನ್ನು ಗೌರವಿಸುವುದು,
ಚಿಕ್ಕವರೊಂದಿಗೆ
ಪ್ರೀತಿಯಿಂದ ವ್ಯವಹರಿಸುವುದು.
ಗುರುಗಳನ್ನು ಆದರಿಸುವುದು. ತನ್ನ
ತಪ್ಪನ್ನು ಒಪ್ಪಿಕೊಳ್ಳುವುದು.
ನಿಜ ಹೇಳುವುದು,ನಮ್ರತೆಯಿಂದ
ನುಡಿಯುವುದು.ಇತ್ಯಾದಿ ಶಿಷ್ಟಾಚಾರದ
ಅಂಗಗಳು.
ಇವು ಚರಿತ್ರೆಯ ಬಾಹ್ಯ
ಅಂಗಗಳಾದರು ಇವುಗಳಿಂದ ವ್ಯಕ್ತಿಯ ಆಂತರಿಕ
ಜೀವನದ ಪರಿಚಯ
ದೊರೆಯುತ್ತದೆ.ಅಸು
ಂದರತೆಯನ್ನು ಸುಂದರಗೊಳಿಸುವುದು,
ಸೌಂದರ್ಯದಲ್ಲಿ ಸುಗಂಧ
ತುಂಬುವುದೇ ಶಿಷ್ಟಾಚಾರದ ಜೀವನದ ಕಲೆ.
ನಮ್ಮ ಮುಖದ ಮೇಲೆ ಸಂತೋಷವಿದ್ದರೆ ನಮ್ಮ
ಮನಸ್ಸು ಮಾತ್ರವಲ್ಲದೆ,
ಮತ್ತೊಬ್ಬರ ಮನಸ್ಸು ಸಂತೋಷಗೊಳ್ಳುತ್ತದೆ.
Posted from WordPress
🌿🌱🌿🌱🌿🌱🌿🌱🌿
ಗುಣಗಳು🔶
ಜೀವನದಲ್ಲಿ ಶಿಷ್ಟಾಚಾರವೂ ಒಂದು ಕಲೆ.
ಸ್ವರದಲ್ಲಿ ಮಾಧುರ್ಯ, ವಾಣಿಯಲ್ಲಿ ನಮ್ರತೆ.
ಕಾರ್ಯದಲ್ಲಿ ಸ್ವಚತೆ, ವ್ಯವಹಾರದಲ್ಲಿ ಸತ್ಯ
ಸಂದತೆ, ಆಚರಣೆಯಲ್ಲಿ ಉದಾರತೆ.
ಇವೆಲ್ಲಾ ಮನುಷ್ಯನ ಗುಣಗಳು.
ಯಾರೇ ಆದರೂ ಈ ಗುಣಗಳಿಗೆ ಆಕರ್ಷಿಸುತ್ತಾರೆ.
ಪುಷ್ಪಗಳು,ಮೊಗ್ಗು
ಗಳು ಮತ್ತು ದಾನ್ಯವನ್ನು ವಿಕಸಿತಗೊಲಿಸುವ
ಸಾಮರ್ಥ್ಯವಿರುವ ವಸಂತಕ್ಕೆ,
ಮರಗಳನ್ನು ಕಿತ್ತೆಸೆಯುವ,ಮನೆಯನ್ನು ನೆಲಸಮ
ಮಾಡುವ ಬಿರುಗಾಲಿಯನ್ನೆದು
ರಿಸಲು ಸಾದ್ಯವೇ ?
ಪ್ರಾತ;ಕಾಲದ ವಸಂತದ ಬಿಸಿಲನ್ನು ಗ್ರೀಷ್ಮ
ಕಾಲದ ಪ್ರಚಂಡ ಸೂರ್ಯನೊಡನೆ
ಹೋಲಿಸಲು ಸಾದ್ಯವಿಲ್ಲ.
ವ್ಯಕ್ತಿ ಕೂರುವುದು,ಏಳುವುದ
ು,ಮಾತನಾಡುವುದು ದೊಡ್ಡವರನ್ನು ಗೌರವಿಸುವುದು,
ಚಿಕ್ಕವರೊಂದಿಗೆ
ಪ್ರೀತಿಯಿಂದ ವ್ಯವಹರಿಸುವುದು.
ಗುರುಗಳನ್ನು ಆದರಿಸುವುದು. ತನ್ನ
ತಪ್ಪನ್ನು ಒಪ್ಪಿಕೊಳ್ಳುವುದು.
ನಿಜ ಹೇಳುವುದು,ನಮ್ರತೆಯಿಂದ
ನುಡಿಯುವುದು.ಇತ್ಯಾದಿ ಶಿಷ್ಟಾಚಾರದ
ಅಂಗಗಳು.
ಇವು ಚರಿತ್ರೆಯ ಬಾಹ್ಯ
ಅಂಗಗಳಾದರು ಇವುಗಳಿಂದ ವ್ಯಕ್ತಿಯ ಆಂತರಿಕ
ಜೀವನದ ಪರಿಚಯ
ದೊರೆಯುತ್ತದೆ.ಅಸು
ಂದರತೆಯನ್ನು ಸುಂದರಗೊಳಿಸುವುದು,
ಸೌಂದರ್ಯದಲ್ಲಿ ಸುಗಂಧ
ತುಂಬುವುದೇ ಶಿಷ್ಟಾಚಾರದ ಜೀವನದ ಕಲೆ.
ನಮ್ಮ ಮುಖದ ಮೇಲೆ ಸಂತೋಷವಿದ್ದರೆ ನಮ್ಮ
ಮನಸ್ಸು ಮಾತ್ರವಲ್ಲದೆ,
ಮತ್ತೊಬ್ಬರ ಮನಸ್ಸು ಸಂತೋಷಗೊಳ್ಳುತ್ತದೆ.
Posted from WordPress
🌿🌱🌿🌱🌿🌱🌿🌱🌿
ಮಕ್ಕಳ ದಿನಾಚರಣೆ
ಮಕ್ಕಳ ದಿನಾಚರಣೆ
●●●ಮಕ್ಕಳ ದಿನಾಚರಣೆ●●●
ಮಕ್ಕಳ ದಿನಾಚರಣೆ ಜವಾಹರ್ಲಾಲ್ ನೆಹರುರವರ ಹುಟ್ಟುಹಬ್ಬದಂದು (ನವೆಂಬರ್ ೧೪ರಂದು) ಆಚರಿಸಲಾಗುತ್ತದೆ.
●ಹಿನ್ನೆಲೆ
ಜವಹಾರ್ಲಾಲ್ ನೆಹೆರುವರಿಗೆ ಮಕ್ಕಳೆಂದರೆ ಬಹಳ ಇಷ್ಟವಂತೆ.ಅವರು ಅನಾಥ ಮಕ್ಕಳು ಕೊಟ್ಟ ಗುಲಾಬಿಯನ್ನು ತಮ್ಮ ಕೋಟಿನ ಜೇಬಿಗೆ ಅಂಟಿಸಿ ಸಂತೋಷ ಪಡುತ್ತಿದ್ದರಂತೆ. ಮಕ್ಕಳ ಮೇಲಿದ್ದ ಇವರ ಅಕ್ಕರೆ, ಪ್ರೀತಿಯ ಸಂಕೇತವಾಗಿ ದೇಶದಾದ್ಯಂತ ಈ ದಿನದಂದು ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ. ಇವರು ಪ್ರಧಾನಿಯಾಗಿದ್ದ ಸಮಯದಲ್ಲಿ ಮಕ್ಕಳ ಅಭಿವೃದ್ಧಿಗೆ ಬಹಳಷ್ಟು ಶ್ರಮಿಸಿದ್ದರಂತೆ. ಇಂದಿನ ಮಕ್ಕಳೇ ಮುಂದಿನ ಜನಾಂಗ.
●ಆಚರಣೆ
ಸಾಧಾರಣವಾಗಿ ಹಾಡು, ಆಟಗಳನ್ನು ಕೂಡಿದ ಈ ದಿನ . ಮಕ್ಕಳ ದಿನಾಚರಣೆಯಂದು ವಿವಿಧೆಡೆ ಕಲಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
●●ಪಂ. ಜವಾಹರಲಾಲ್ ನೆಹರು●●
ಜನನ: ನವೆಂಬರ್ ೧೪, ೧೮೮೯
ಮರಣ: ಮೇ ೨೭, ೧೯೬೪
ಹುಟ್ಟಿದೂರು: ಅಲಹಾಬಾದ್, ಉತ್ತರ ಪ್ರದೇಶ
●●ಭಾರತದ ಪ್ರಧಾನ ಮಂತ್ರಿ
ಅಧಿಕಾರ ಅವಧಿ: ಮೊಟ್ಟ ಮೊದಲ ಪ್ರಧಾನ ಮಂತ್ರಿ
ರಾಜಕೀಯ ಪಕ್ಷ: ಭಾರತ ರಾಷ್ಟ್ರೀಯ ಕಾಂಗ್ರೆಸ್
ಅಧಿಕಾರ ವಹಿಸಿಕೊಂಡಿದ್ದು: ಆಗಸ್ಟ್ ೧೫, ೧೯೪೭
ಅಧಿಕಾರ ಬಿಟ್ಟುಕೊಟ್ಟಿದ್ದು: ಮೇ ೨೭, ೧೯೬೪
ಇವರ ಉತ್ತರಾಧಿಕಾರಿ: ಗುಲ್ಜಾರಿಲಾಲ್ ನಂದ
●'ಮಹಾತ್ಮಗಾಂಧಿಯೊಂದಿಗೆ ನೆಹರು'
'ರಾಷ್ಟ್ರಕ್ಕೆ ಸಮರ್ಪಿಸಿದ ನೆಹರೂ ವಂಶದ ಮನೆ'
ಜವಾಹರಲಾಲ್ ನೆಹರು (ನವೆಂಬರ್ ೧೪, ೧೮೮೯ - ಮೇ ೨೭, ೧೯೬೪) - ಭಾರತದ ಮೊದಲ ಪ್ರಧಾನ ಮಂತ್ರಿ, ಸ್ವಾತಂತ್ರ್ಯ ಹೋರಾಟಗಾರರು. ಆಗಸ್ಟ್ ೧೫, ೧೯೪೭ ರಿಂದ ಪ್ರಾರಂಭಿಸಿ ಇವರು ಮರಣಕಾಲದವರೆಗೂ ಭಾರತದ ಪ್ರಧಾನಿಯಾಗಿದ್ದರು.
●ನೆಹರುರವರ ಸಾರ್ವಜನಿಕ ಜೀವನ೧೮೮೯-೧೯೧೮
ಪಂ, ಜವಹರಲಾಲ್ ನೆಹರು, ಆಗಿನ ಕಾಲದ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದ ಮೋತಿಲಾಲ್ ನೆಹರು ಅವರ ಮಗ. ನೆಹರೂ ಇಂಗ್ಲೆಂಡ್ನ ಹ್ಯಾರ್ರೊ ಸ್ಕೂಲ್ ಹಾಗು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಓದು ಮುಗಿಸಿ, ತಂದೆಯೊಂದಿಗೆ ರಾಜಕೀಯದಲ್ಲಿ ಸಕ್ರಿಯರಾದರು.
ಇಂಗ್ಲೆಂಡ್ನಲ್ಲಿದ್ದಾಗ ನೆಹರು ಅವರು ಫೇಬಿಯನ್ ಸಾಮಾಜಿಕ ವಿಧಾನಗಳನ್ನು ಬಹುವಾಗಿ ಮೆಚ್ಚಿದ್ದರು. ೧೯೧೬ರ ವಸಂತ ಪಂಚಮಿಯ ದಿನದಂದು ನೆಹರು ಅವರು ಕಮಲಾ ಕೌಲ್ರವರನ್ನು ಮದುವೆಯಾದರು.
●ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷ ೧೯೧೮-೧೯೩೭
೧೯೧೯ ರಲ್ಲಿ ಮಗಳು ಇಂದಿರಾ ಪ್ರಿಯದರ್ಶಿನಿ ಜನಿಸಿದಳು. ರಾಜಕೀಯದಲ್ಲಿ, ಮಹಾತ್ಮ ಗಾಂಧಿಯವರ ಶಿಷ್ಯನಾದ ಇವರು, ಮೊದಲ ಬಾರಿಗೆ ೧೯೨೯ ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷರಾಗಿ ಮೇಲೇರಿದರು. ಈ ದಿನಗಳನ್ನು ಇವರು ಬಹುವಾಗಿ ಕಾರಾಗೃಹವಾಸ ದಲ್ಲಿ ಪುಸ್ತಕಗಳು, ಪತ್ರಗಳನ್ನು ಬರೆಯುತ್ತಾ ಕಳೆದರು.
●ಕ್ವಿಟ್ ಇಂಡಿಯ ಆಂದೋಲನದಲ್ಲಿ ೧೯೩೭-೧೯೪೭
'ಭಾರತವನ್ನು ಬಿಟ್ಟು ತೊಲಗಿ' (Quit India Movement) ಪರ್ಯಾಯ ೧೯೪೨ರಲ್ಲಿ ೩೨ ತಿಂಗಳಿಗೆ ಕಾರಾಗೃಹವಾಸ ಅನುಭವಿಸಿದ ಇವರು, ಭಾರತದ ಮೊದಲ ಸರಕಾರವನ್ನು ೧೯೪೬ರಲ್ಲಿ ರಚಿಸಿದರು.
●ಭಾರತದ ಮೊಟ್ಟ ಮೊದಲ ಪ್ರಧಾನಿಯಾಗಿ ೧೯೪೭-೧೯೬೪.
ನೆಹರೂರವರು ೧೮ ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿದ್ದರು. ಇವರು ೧೯೬೪ರ ಮೇ ೨೭ ರಂದು ನಿಧನರಾದರು. ಪಂಡಿತ ಜವಹರಲಾಲ್ ನೆಹರೂರವರು ಆಗಸ್ಟ್ ೧೪ ರ ಮಧ್ಯರಾತ್ರಿ, ಸಂಸತ್ತನ್ನುದ್ದೇಶಿಸಿ ಮಾಡಿದ 'ಎ ಟ್ರಿಸ್ಟ್ ವಿಥ್ ಡೆಸ್ಟಿನಿ ಭಾಷಣದ ಕನ್ನದ ಅನುವಾದ' : "ಹಿಂದೊಮ್ಮೆ ನಾವು ವಿಧಿಗೊಂದು ಮಾತಿತ್ತಿದ್ದೆವು. ಅ ಭಾಷೆಯನ್ನು ಕೇವಲ ಸಂಪೂರ್ಣವಾಗಿಯಲ್ಲದೇ ಮಹತ್ತರವಾಗಿ ಕಾರ್ಯಗತಗೊಳಿಸುವ ಸಮಯವಿಂದೊದಗಿದೆ. ಈ ನಡು ರಾತ್ರಿಯ ವಿಶೇಷ ಘಳಿಗೆಯಲ್ಲಿ, ಇಡೀ ವಿಶ್ವ ನಿದ್ರಿಸುತ್ತಿರುವಾಗ, ಭಾರತ ಸ್ವಾತಂತ್ರ್ಯವನ್ನು ಮೈದಳೆದು ಮೇಲೇಳಲಿದೆ. ಹಳೆತೆಲ್ಲವನ್ನೊದರಿ ಹೊಸತನಕ್ಕೆ ಕಾಲಿಡುವ ಮತ್ತು ಶತಮಾನಗಳಿಂದ ಶೋಷಿಸಲ್ಪಟ್ಟ ನಾಡಿನಾತ್ಮ ಧ್ವನಿದಳೆವ ಈ ಘಳಿಗೆ, ಇತಿಹಾಸದ ಅಪರೂಪದ ಮುಹೂರ್ತಗಳಲ್ಲೊಂದು. ಈ ಶುದ್ಧ ಸಮಯದಲ್ಲಿ ಭಾರತದ ಮತ್ತು ಭಾರತಾಂಬೆ ಯ ಸತ್ಪ್ರಜೆಗಳ ಸೇವೆಗಾಗಿ, ಹೆಚ್ಚೇನು ವಿಶ್ವದೊಳಿತಿಗಾಗಿ ನಮ್ಮದೆಲ್ಲವನ್ನು ಮುಡಿಪಿಡುವುದಾಗಿ ಮಾಡುವ ಪ್ರತಿಜ್ಞೆ ಅತೀ ಸಮರ್ಪಕವೆನಿಸುತ್ತದೆ."
●ನೆಹರೂ ಅವರ ಅಂತಿಮ ಕವನ/ಬಯಕೆ
ಜವಾಹರಲಾಲ್ ನೆಹರೂ ಮೃತರಾದಾಗ ಅವರ ಪಕ್ಕದಲ್ಲಿ ಈ ಕವನದ ಸಾಲುಗಳನ್ನು ಗೀಚಿದ ಕಾಗದದ ತುಣುಕು ದೊರಕಿತ್ತು.
ಕಾನು ಸುಂದರವಾಗಿದೆ, ದಟ್ಟ ಕತ್ತಲೆಯಿಂದ ಕೂಡಿದೆ.
ಆದರೆ, ನಾನು ಮಾತುಗಳನ್ನು ಉಳಿಸಿಕೊಳ್ಳ ಬೇಕಿದೆ.
●●●ಮಕ್ಕಳ ದಿನಾಚರಣೆ●●●
ಮಕ್ಕಳ ದಿನಾಚರಣೆ ಜವಾಹರ್ಲಾಲ್ ನೆಹರುರವರ ಹುಟ್ಟುಹಬ್ಬದಂದು (ನವೆಂಬರ್ ೧೪ರಂದು) ಆಚರಿಸಲಾಗುತ್ತದೆ.
●ಹಿನ್ನೆಲೆ
ಜವಹಾರ್ಲಾಲ್ ನೆಹೆರುವರಿಗೆ ಮಕ್ಕಳೆಂದರೆ ಬಹಳ ಇಷ್ಟವಂತೆ.ಅವರು ಅನಾಥ ಮಕ್ಕಳು ಕೊಟ್ಟ ಗುಲಾಬಿಯನ್ನು ತಮ್ಮ ಕೋಟಿನ ಜೇಬಿಗೆ ಅಂಟಿಸಿ ಸಂತೋಷ ಪಡುತ್ತಿದ್ದರಂತೆ. ಮಕ್ಕಳ ಮೇಲಿದ್ದ ಇವರ ಅಕ್ಕರೆ, ಪ್ರೀತಿಯ ಸಂಕೇತವಾಗಿ ದೇಶದಾದ್ಯಂತ ಈ ದಿನದಂದು ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ. ಇವರು ಪ್ರಧಾನಿಯಾಗಿದ್ದ ಸಮಯದಲ್ಲಿ ಮಕ್ಕಳ ಅಭಿವೃದ್ಧಿಗೆ ಬಹಳಷ್ಟು ಶ್ರಮಿಸಿದ್ದರಂತೆ. ಇಂದಿನ ಮಕ್ಕಳೇ ಮುಂದಿನ ಜನಾಂಗ.
●ಆಚರಣೆ
ಸಾಧಾರಣವಾಗಿ ಹಾಡು, ಆಟಗಳನ್ನು ಕೂಡಿದ ಈ ದಿನ . ಮಕ್ಕಳ ದಿನಾಚರಣೆಯಂದು ವಿವಿಧೆಡೆ ಕಲಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
●●ಪಂ. ಜವಾಹರಲಾಲ್ ನೆಹರು●●
ಜನನ: ನವೆಂಬರ್ ೧೪, ೧೮೮೯
ಮರಣ: ಮೇ ೨೭, ೧೯೬೪
ಹುಟ್ಟಿದೂರು: ಅಲಹಾಬಾದ್, ಉತ್ತರ ಪ್ರದೇಶ
●●ಭಾರತದ ಪ್ರಧಾನ ಮಂತ್ರಿ
ಅಧಿಕಾರ ಅವಧಿ: ಮೊಟ್ಟ ಮೊದಲ ಪ್ರಧಾನ ಮಂತ್ರಿ
ರಾಜಕೀಯ ಪಕ್ಷ: ಭಾರತ ರಾಷ್ಟ್ರೀಯ ಕಾಂಗ್ರೆಸ್
ಅಧಿಕಾರ ವಹಿಸಿಕೊಂಡಿದ್ದು: ಆಗಸ್ಟ್ ೧೫, ೧೯೪೭
ಅಧಿಕಾರ ಬಿಟ್ಟುಕೊಟ್ಟಿದ್ದು: ಮೇ ೨೭, ೧೯೬೪
ಇವರ ಉತ್ತರಾಧಿಕಾರಿ: ಗುಲ್ಜಾರಿಲಾಲ್ ನಂದ
●'ಮಹಾತ್ಮಗಾಂಧಿಯೊಂದಿಗೆ ನೆಹರು'
'ರಾಷ್ಟ್ರಕ್ಕೆ ಸಮರ್ಪಿಸಿದ ನೆಹರೂ ವಂಶದ ಮನೆ'
ಜವಾಹರಲಾಲ್ ನೆಹರು (ನವೆಂಬರ್ ೧೪, ೧೮೮೯ - ಮೇ ೨೭, ೧೯೬೪) - ಭಾರತದ ಮೊದಲ ಪ್ರಧಾನ ಮಂತ್ರಿ, ಸ್ವಾತಂತ್ರ್ಯ ಹೋರಾಟಗಾರರು. ಆಗಸ್ಟ್ ೧೫, ೧೯೪೭ ರಿಂದ ಪ್ರಾರಂಭಿಸಿ ಇವರು ಮರಣಕಾಲದವರೆಗೂ ಭಾರತದ ಪ್ರಧಾನಿಯಾಗಿದ್ದರು.
●ನೆಹರುರವರ ಸಾರ್ವಜನಿಕ ಜೀವನ೧೮೮೯-೧೯೧೮
ಪಂ, ಜವಹರಲಾಲ್ ನೆಹರು, ಆಗಿನ ಕಾಲದ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದ ಮೋತಿಲಾಲ್ ನೆಹರು ಅವರ ಮಗ. ನೆಹರೂ ಇಂಗ್ಲೆಂಡ್ನ ಹ್ಯಾರ್ರೊ ಸ್ಕೂಲ್ ಹಾಗು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಓದು ಮುಗಿಸಿ, ತಂದೆಯೊಂದಿಗೆ ರಾಜಕೀಯದಲ್ಲಿ ಸಕ್ರಿಯರಾದರು.
ಇಂಗ್ಲೆಂಡ್ನಲ್ಲಿದ್ದಾಗ ನೆಹರು ಅವರು ಫೇಬಿಯನ್ ಸಾಮಾಜಿಕ ವಿಧಾನಗಳನ್ನು ಬಹುವಾಗಿ ಮೆಚ್ಚಿದ್ದರು. ೧೯೧೬ರ ವಸಂತ ಪಂಚಮಿಯ ದಿನದಂದು ನೆಹರು ಅವರು ಕಮಲಾ ಕೌಲ್ರವರನ್ನು ಮದುವೆಯಾದರು.
●ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷ ೧೯೧೮-೧೯೩೭
೧೯೧೯ ರಲ್ಲಿ ಮಗಳು ಇಂದಿರಾ ಪ್ರಿಯದರ್ಶಿನಿ ಜನಿಸಿದಳು. ರಾಜಕೀಯದಲ್ಲಿ, ಮಹಾತ್ಮ ಗಾಂಧಿಯವರ ಶಿಷ್ಯನಾದ ಇವರು, ಮೊದಲ ಬಾರಿಗೆ ೧೯೨೯ ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷರಾಗಿ ಮೇಲೇರಿದರು. ಈ ದಿನಗಳನ್ನು ಇವರು ಬಹುವಾಗಿ ಕಾರಾಗೃಹವಾಸ ದಲ್ಲಿ ಪುಸ್ತಕಗಳು, ಪತ್ರಗಳನ್ನು ಬರೆಯುತ್ತಾ ಕಳೆದರು.
●ಕ್ವಿಟ್ ಇಂಡಿಯ ಆಂದೋಲನದಲ್ಲಿ ೧೯೩೭-೧೯೪೭
'ಭಾರತವನ್ನು ಬಿಟ್ಟು ತೊಲಗಿ' (Quit India Movement) ಪರ್ಯಾಯ ೧೯೪೨ರಲ್ಲಿ ೩೨ ತಿಂಗಳಿಗೆ ಕಾರಾಗೃಹವಾಸ ಅನುಭವಿಸಿದ ಇವರು, ಭಾರತದ ಮೊದಲ ಸರಕಾರವನ್ನು ೧೯೪೬ರಲ್ಲಿ ರಚಿಸಿದರು.
●ಭಾರತದ ಮೊಟ್ಟ ಮೊದಲ ಪ್ರಧಾನಿಯಾಗಿ ೧೯೪೭-೧೯೬೪.
ನೆಹರೂರವರು ೧೮ ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿದ್ದರು. ಇವರು ೧೯೬೪ರ ಮೇ ೨೭ ರಂದು ನಿಧನರಾದರು. ಪಂಡಿತ ಜವಹರಲಾಲ್ ನೆಹರೂರವರು ಆಗಸ್ಟ್ ೧೪ ರ ಮಧ್ಯರಾತ್ರಿ, ಸಂಸತ್ತನ್ನುದ್ದೇಶಿಸಿ ಮಾಡಿದ 'ಎ ಟ್ರಿಸ್ಟ್ ವಿಥ್ ಡೆಸ್ಟಿನಿ ಭಾಷಣದ ಕನ್ನದ ಅನುವಾದ' : "ಹಿಂದೊಮ್ಮೆ ನಾವು ವಿಧಿಗೊಂದು ಮಾತಿತ್ತಿದ್ದೆವು. ಅ ಭಾಷೆಯನ್ನು ಕೇವಲ ಸಂಪೂರ್ಣವಾಗಿಯಲ್ಲದೇ ಮಹತ್ತರವಾಗಿ ಕಾರ್ಯಗತಗೊಳಿಸುವ ಸಮಯವಿಂದೊದಗಿದೆ. ಈ ನಡು ರಾತ್ರಿಯ ವಿಶೇಷ ಘಳಿಗೆಯಲ್ಲಿ, ಇಡೀ ವಿಶ್ವ ನಿದ್ರಿಸುತ್ತಿರುವಾಗ, ಭಾರತ ಸ್ವಾತಂತ್ರ್ಯವನ್ನು ಮೈದಳೆದು ಮೇಲೇಳಲಿದೆ. ಹಳೆತೆಲ್ಲವನ್ನೊದರಿ ಹೊಸತನಕ್ಕೆ ಕಾಲಿಡುವ ಮತ್ತು ಶತಮಾನಗಳಿಂದ ಶೋಷಿಸಲ್ಪಟ್ಟ ನಾಡಿನಾತ್ಮ ಧ್ವನಿದಳೆವ ಈ ಘಳಿಗೆ, ಇತಿಹಾಸದ ಅಪರೂಪದ ಮುಹೂರ್ತಗಳಲ್ಲೊಂದು. ಈ ಶುದ್ಧ ಸಮಯದಲ್ಲಿ ಭಾರತದ ಮತ್ತು ಭಾರತಾಂಬೆ ಯ ಸತ್ಪ್ರಜೆಗಳ ಸೇವೆಗಾಗಿ, ಹೆಚ್ಚೇನು ವಿಶ್ವದೊಳಿತಿಗಾಗಿ ನಮ್ಮದೆಲ್ಲವನ್ನು ಮುಡಿಪಿಡುವುದಾಗಿ ಮಾಡುವ ಪ್ರತಿಜ್ಞೆ ಅತೀ ಸಮರ್ಪಕವೆನಿಸುತ್ತದೆ."
●ನೆಹರೂ ಅವರ ಅಂತಿಮ ಕವನ/ಬಯಕೆ
ಜವಾಹರಲಾಲ್ ನೆಹರೂ ಮೃತರಾದಾಗ ಅವರ ಪಕ್ಕದಲ್ಲಿ ಈ ಕವನದ ಸಾಲುಗಳನ್ನು ಗೀಚಿದ ಕಾಗದದ ತುಣುಕು ದೊರಕಿತ್ತು.
ಕಾನು ಸುಂದರವಾಗಿದೆ, ದಟ್ಟ ಕತ್ತಲೆಯಿಂದ ಕೂಡಿದೆ.
ಆದರೆ, ನಾನು ಮಾತುಗಳನ್ನು ಉಳಿಸಿಕೊಳ್ಳ ಬೇಕಿದೆ.
ತಾಮ್ರದ ಪಾತ್ರೆಯಲ್ಲಿನ ನೀರು ಸದೃಢ ಆರೋಗ್ಯಕ್ಕೆ ಸಹಕಾರಿ
🍁ತಾಮ್ರದ ಪಾತ್ರೆಯಲ್ಲಿನ ನೀರು ಸದೃಢ ಆರೋಗ್ಯಕ್ಕೆ ಸಹಕಾರಿ🍁
ಆಹಾರ, ಗಾಳಿಯಂತೆ, ನೀರೂ ಸಹ ನಮ್ಮೆಲ್ಲರ ಬದುಕಿಗೆ ಆಧಾರಸ್ಥಂಭವಾಗಿದೆ. ದಿನದ ಆರಂಭ ಮತ್ತು ಅಂತ್ಯ ನೀರಿನ ಸೇವನೆಯಿಂದಾಗುತ್ತಿದೆ. ಜೀವಜಲ ಎಂದೇ ನಾವೆಲ್ಲ ನಂಬಿದ್ದು, ಸಾಕಷ್ಟು ಪ್ರಮಾಣದಲ್ಲಿ ಶುದ್ಧ ನೀರು ಕುಡಿಯುವುದರಿಂದ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಬಹುದಾಗಿದೆ.
ಶುದ್ಧ ನೀರು ಎಂದಾಕ್ಷಣ, ಅಕ್ವಾಗಾರ್ಡ್, ಫಿಲ್ಟರ್, ಬಾಟಲಿ ನೀರು ಜ್ಞಾಪಕಕ್ಕೆ ಬರುವುದು ಸಹಜ. ಆದರೆ ಹಿಂದೆಲ್ಲಾ ಮಣ್ಣಿನ ಪಾತ್ರೆಗಳಲ್ಲಿ ನೀರು ತುಂಬಿಟ್ಟುಕೊಂಡು ಕುಡಿಯುತ್ತಿದ್ದರು. ಅದು ಆರೋಗ್ಯಕ್ಕೆ ಪೂರಕವಾಗಿರುತ್ತದೆ ಎಂದು ಹಿರಿಯರು ನಂಬಿದ್ದರು. ಈಗ ಅವು ನೇಪಥ್ಯಕ್ಕೆ ಸಂದಿವೆ.
ಅಲ್ಲದೆ, ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿಟ್ಟು ಕುಡಿಯುವ ಪದ್ಧತಿಯೂ ಜಾರಿಯಲ್ಲಿತ್ತು, ಎಲ್ಲರ ಮನೆಗಳಲ್ಲೂ ಇಂತಹ ವ್ಯವಸ್ಥೆ ಇರುವುದಿಲ್ಲ, ಇದ್ದರೆ ಒಳ್ಳೆಯದು.
ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿಡುವ ನೀರನ್ನು ಕುಡಿದರೆ, ಕಫ, ಪಿತ್ತ ಮತ್ತು ವಾತವನ್ನು ಸಮತೋಲನದಲ್ಲಿಡಲಿದೆ ಎಂಬುದನ್ನು ವಿಜ್ಞಾನ ಲೋಕವೇ ಹೇಳಿದೆ.
ಮಾತ್ರವಲ್ಲದೆ, ದೇಹದ ಆರೋಗ್ಯಕ್ಕೆ ಮಾರಕವಾಗುವಂತ ಅಂಶಗಳನ್ನು ನಿಯಂತ್ರಣದಲ್ಲಿಡಲಿದೆ. ತಾಮ್ರದಲ್ಲಿರುವ ಎಲೆಕ್ಟ್ರೋಲೈಟ್ಗಳು ನೀರು ಹಾಳಾಗುವುದನ್ನು ತಡೆಗಟ್ಟುತ್ತವೆ. ತಾಮ್ರದ ಪಾತ್ರೆಯಲ್ಲಿನ ನೀರಿನಲ್ಲಿ ತಾಜಾತನವಿರುತ್ತದೆ. ಈ ನೀರು ದೇಹಕ್ಕೆ ದಿವ್ಯಾಮೃತ ಎಂದು ಭಾವಿಸಲಾಗಿದೆ.
ನೀರನ್ನು ಶುದ್ಧೀಕರಿಸುವ ಗುಣಗಳನ್ನು ಹೊಂದಿರುವ ತಾಮ್ರ, ಬ್ಯಾಕ್ಟೀರಿಯಾಗಳ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದ್ದರಿಂದ ತಾಮ್ರದ ಪಾತ್ರೆಯಲ್ಲಿನ ನೀರು ನೈಸರ್ಗಿಕವಾಗಿ ಶುದ್ಧವಾಗಿರುತ್ತದೆ. ಅಲ್ಲದೆ, ಬ್ಯಾಕ್ಟೀರಿಯಾಗಳಿಂದಲೂ ಮುಕ್ತವಾಗಿರುತ್ತದೆ.
ಥೈರಾಯ್ಡ್ ಕಾರ್ಯ ವೈಖರಿಯನ್ನು ಸುಗಮಗೊಳಿಸುವ ಸಾಮರ್ಥ್ಯ ಹೊಂದಿರುವ ತಾಮ್ರವು ಥೈರಾಯ್ಡ್ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲಿದೆ.
ದಿನನಿತ್ಯ ತಾಮ್ರದ ಪಾತ್ರೆಯಲ್ಲಿನ ನೀರು ಕುಡಿಯುವುದರಿಂದ ಅರ್ಥರಿಟೀಸ್ ನೋವನ್ನು ಪರಿಹರಿಸಿ ಉರಿಯೂತದಂತಹ ಸಮಸ್ಯೆಗಳನ್ನು ದೂರ ಮಾಡುವ ಸಾಮರ್ಥ್ಯ ಹೊಂದಿರುತ್ತದೆ.
ತಾಮ್ರದಲ್ಲಿ ಆಂಟಿ ವೈರಲ್ ಮತ್ತು ಆಂಟಿ ಬ್ಯಾಕ್ಟೀರಿಯಾ ಗುಣಗಳಿದ್ದು, ಸೋಂಕು ಉಂಟಾಗದಂತೆ ತಡೆಯುತ್ತವೆ. ಹೊಸ ಜೀವಕೋಶಗಳನ್ನು ಬೆಳೆಯಲು ಮತ್ತು ಗಾಯಗಳಾಗಿದ್ದರೆ ಅವುಗಳನ್ನು ಶೀಘ್ರ ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ.
ಜೀರ್ಣಕ್ರಿಯೆಯನ್ನು ಉತ್ತಮಪಡಿಸಲು ತಾಮ್ರದ ಪಾತ್ರೆ ನೀರು ಸಹಕಾರಿಯಾಗಿದೆ. ದೇಹದಲ್ಲಿ ಕೆಂಪು ರಕ್ತಕಣಗಳನ್ನು ಉತ್ಪಾದಿಸಲು ನೆರವಾಗುತ್ತದೆ.
ಆಯುರ್ವೇದ ತಜ್ಞರ ಅಭಿಪ್ರಾಯದಂತೆ ತಾಮ್ರದ ಪಾತ್ರೆಯಲ್ಲಿ ತುಂಬಿಡುವ ನೀರನ್ನು ನಿಯಮಿತವಾಗಿ ಬೆಳಗಿನ ಜಾವ ಕುಡಿಯುವುದರಿಂದ ಮೊಡವೆ ಮುಕ್ತ ಮತ್ತು ಸುಂದರ ತ್ವಚೆಯನ್ನು ಪಡೆಯಬಹುದಾಗಿದೆ.
ತಾಮ್ರದ ಪಾತ್ರೆಯಲ್ಲಿನ ನೀರಿನ ಸೇವನೆಯಿಂದ ರಕ್ತಹೀನತೆ ಉಂಟಾಗುವುದನ್ನು ತಡೆಯಬಹುದಾಗಿದೆ. ತಾಮ್ರದಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ಮುಖದ ಮೇಲೆ ಕಾಣುವ ಸುಕ್ಕುಗಳು, ಗೆರೆಗಳು ಮತ್ತು ಕಲೆಗಳನ್ನು ನಿವಾರಿಸುತ್ತದೆ.
🍁✨🍁✨🍁✨🍁✨🍁
ಆಹಾರ, ಗಾಳಿಯಂತೆ, ನೀರೂ ಸಹ ನಮ್ಮೆಲ್ಲರ ಬದುಕಿಗೆ ಆಧಾರಸ್ಥಂಭವಾಗಿದೆ. ದಿನದ ಆರಂಭ ಮತ್ತು ಅಂತ್ಯ ನೀರಿನ ಸೇವನೆಯಿಂದಾಗುತ್ತಿದೆ. ಜೀವಜಲ ಎಂದೇ ನಾವೆಲ್ಲ ನಂಬಿದ್ದು, ಸಾಕಷ್ಟು ಪ್ರಮಾಣದಲ್ಲಿ ಶುದ್ಧ ನೀರು ಕುಡಿಯುವುದರಿಂದ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಬಹುದಾಗಿದೆ.
ಶುದ್ಧ ನೀರು ಎಂದಾಕ್ಷಣ, ಅಕ್ವಾಗಾರ್ಡ್, ಫಿಲ್ಟರ್, ಬಾಟಲಿ ನೀರು ಜ್ಞಾಪಕಕ್ಕೆ ಬರುವುದು ಸಹಜ. ಆದರೆ ಹಿಂದೆಲ್ಲಾ ಮಣ್ಣಿನ ಪಾತ್ರೆಗಳಲ್ಲಿ ನೀರು ತುಂಬಿಟ್ಟುಕೊಂಡು ಕುಡಿಯುತ್ತಿದ್ದರು. ಅದು ಆರೋಗ್ಯಕ್ಕೆ ಪೂರಕವಾಗಿರುತ್ತದೆ ಎಂದು ಹಿರಿಯರು ನಂಬಿದ್ದರು. ಈಗ ಅವು ನೇಪಥ್ಯಕ್ಕೆ ಸಂದಿವೆ.
ಅಲ್ಲದೆ, ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿಟ್ಟು ಕುಡಿಯುವ ಪದ್ಧತಿಯೂ ಜಾರಿಯಲ್ಲಿತ್ತು, ಎಲ್ಲರ ಮನೆಗಳಲ್ಲೂ ಇಂತಹ ವ್ಯವಸ್ಥೆ ಇರುವುದಿಲ್ಲ, ಇದ್ದರೆ ಒಳ್ಳೆಯದು.
ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿಡುವ ನೀರನ್ನು ಕುಡಿದರೆ, ಕಫ, ಪಿತ್ತ ಮತ್ತು ವಾತವನ್ನು ಸಮತೋಲನದಲ್ಲಿಡಲಿದೆ ಎಂಬುದನ್ನು ವಿಜ್ಞಾನ ಲೋಕವೇ ಹೇಳಿದೆ.
ಮಾತ್ರವಲ್ಲದೆ, ದೇಹದ ಆರೋಗ್ಯಕ್ಕೆ ಮಾರಕವಾಗುವಂತ ಅಂಶಗಳನ್ನು ನಿಯಂತ್ರಣದಲ್ಲಿಡಲಿದೆ. ತಾಮ್ರದಲ್ಲಿರುವ ಎಲೆಕ್ಟ್ರೋಲೈಟ್ಗಳು ನೀರು ಹಾಳಾಗುವುದನ್ನು ತಡೆಗಟ್ಟುತ್ತವೆ. ತಾಮ್ರದ ಪಾತ್ರೆಯಲ್ಲಿನ ನೀರಿನಲ್ಲಿ ತಾಜಾತನವಿರುತ್ತದೆ. ಈ ನೀರು ದೇಹಕ್ಕೆ ದಿವ್ಯಾಮೃತ ಎಂದು ಭಾವಿಸಲಾಗಿದೆ.
ನೀರನ್ನು ಶುದ್ಧೀಕರಿಸುವ ಗುಣಗಳನ್ನು ಹೊಂದಿರುವ ತಾಮ್ರ, ಬ್ಯಾಕ್ಟೀರಿಯಾಗಳ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದ್ದರಿಂದ ತಾಮ್ರದ ಪಾತ್ರೆಯಲ್ಲಿನ ನೀರು ನೈಸರ್ಗಿಕವಾಗಿ ಶುದ್ಧವಾಗಿರುತ್ತದೆ. ಅಲ್ಲದೆ, ಬ್ಯಾಕ್ಟೀರಿಯಾಗಳಿಂದಲೂ ಮುಕ್ತವಾಗಿರುತ್ತದೆ.
ಥೈರಾಯ್ಡ್ ಕಾರ್ಯ ವೈಖರಿಯನ್ನು ಸುಗಮಗೊಳಿಸುವ ಸಾಮರ್ಥ್ಯ ಹೊಂದಿರುವ ತಾಮ್ರವು ಥೈರಾಯ್ಡ್ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲಿದೆ.
ದಿನನಿತ್ಯ ತಾಮ್ರದ ಪಾತ್ರೆಯಲ್ಲಿನ ನೀರು ಕುಡಿಯುವುದರಿಂದ ಅರ್ಥರಿಟೀಸ್ ನೋವನ್ನು ಪರಿಹರಿಸಿ ಉರಿಯೂತದಂತಹ ಸಮಸ್ಯೆಗಳನ್ನು ದೂರ ಮಾಡುವ ಸಾಮರ್ಥ್ಯ ಹೊಂದಿರುತ್ತದೆ.
ತಾಮ್ರದಲ್ಲಿ ಆಂಟಿ ವೈರಲ್ ಮತ್ತು ಆಂಟಿ ಬ್ಯಾಕ್ಟೀರಿಯಾ ಗುಣಗಳಿದ್ದು, ಸೋಂಕು ಉಂಟಾಗದಂತೆ ತಡೆಯುತ್ತವೆ. ಹೊಸ ಜೀವಕೋಶಗಳನ್ನು ಬೆಳೆಯಲು ಮತ್ತು ಗಾಯಗಳಾಗಿದ್ದರೆ ಅವುಗಳನ್ನು ಶೀಘ್ರ ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ.
ಜೀರ್ಣಕ್ರಿಯೆಯನ್ನು ಉತ್ತಮಪಡಿಸಲು ತಾಮ್ರದ ಪಾತ್ರೆ ನೀರು ಸಹಕಾರಿಯಾಗಿದೆ. ದೇಹದಲ್ಲಿ ಕೆಂಪು ರಕ್ತಕಣಗಳನ್ನು ಉತ್ಪಾದಿಸಲು ನೆರವಾಗುತ್ತದೆ.
ಆಯುರ್ವೇದ ತಜ್ಞರ ಅಭಿಪ್ರಾಯದಂತೆ ತಾಮ್ರದ ಪಾತ್ರೆಯಲ್ಲಿ ತುಂಬಿಡುವ ನೀರನ್ನು ನಿಯಮಿತವಾಗಿ ಬೆಳಗಿನ ಜಾವ ಕುಡಿಯುವುದರಿಂದ ಮೊಡವೆ ಮುಕ್ತ ಮತ್ತು ಸುಂದರ ತ್ವಚೆಯನ್ನು ಪಡೆಯಬಹುದಾಗಿದೆ.
ತಾಮ್ರದ ಪಾತ್ರೆಯಲ್ಲಿನ ನೀರಿನ ಸೇವನೆಯಿಂದ ರಕ್ತಹೀನತೆ ಉಂಟಾಗುವುದನ್ನು ತಡೆಯಬಹುದಾಗಿದೆ. ತಾಮ್ರದಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ಮುಖದ ಮೇಲೆ ಕಾಣುವ ಸುಕ್ಕುಗಳು, ಗೆರೆಗಳು ಮತ್ತು ಕಲೆಗಳನ್ನು ನಿವಾರಿಸುತ್ತದೆ.
🍁✨🍁✨🍁✨🍁✨🍁
Subscribe to:
Posts (Atom)